ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲಾ ರೈತರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್. ಕೇಂದ್ರ ಹಾಗೂ ರಾಜ್ಯ ಸರ್ಕಾರವು ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಒಂದರ ಮೇಲಂತೆ ಹೊಸ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸುತ್ತಿದೆ ಅದರಲ್ಲೂ ಬಹಳ ಮುಖ್ಯವಾಗಿ ಪ್ರಮುಖವಾಗಿ ನೀರಾವರಿಗಾಗಿ ಸಾಕಷ್ಟು ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತದೆ.
ನಮ್ಮ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಕೃಷಿ ಇಲಾಖೆಗೆ ಭಾರಿ ಮಹತ್ವವನ್ನು ನೀಡಲಾಗಿದ್ದು ರೈತರ ಜಮೀನುಗಳಿಗೆ ಅವರ ನೀರಾವರಿ ವ್ಯವಸ್ಥೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದೇ ರೀತಿಯಾಗಿ ಈಗ ಮತ್ತೆ ರಾಜ್ಯದ ಎಲ್ಲಾ ರೈತರಿಗೆ ಹಾಗೂ ತಮ್ಮ ಜಮೀನುಗಳಿಗೆ ಸರ್ಕಾರದಿಂದ ಉಚಿತವಾಗಿ ಸ್ಪ್ರಿಂಕ್ಲರ್ ಸೆಟ್ ಗಳನ್ನು ಪಡೆದುಕೊಳ್ಳಲು ಮತ್ತೊಮ್ಮೆ ಸುವರ್ಣಾವಕಾಶವನ್ನು ನೀಡಲಾಗಿದ್ದು ಹೆಚ್ಚುವರಿಯಾಗಿ ನೀಡಲು ದೊಡ್ಡ ಕ್ರಮವನ್ನು ತೆಗೆದು ಕೊಂಡಿದ್ದಾರೆ.
ರೈತರು ಆರ್ಥಿಕವಾಗಿ ಸದೃಢವಾಗಬೇಕಾದರೆ ಕಡ್ಡಾಯ ವಾಗಿ ಅವರ ಜಮೀನಿನಲ್ಲಿ ನೀರಾವರಿ ಸೌಲಭ್ಯ ಇರಲೇ ಬೇಕು. ಆಗ ಮಾತ್ರ ಎಲ್ಲ ಬೆಳೆಗಳು ಕೂಡ ಸಮೃದ್ಧವಾಗಿ ಬೆಳೆದು ರೈತರ ಆರ್ಥಿಕ ವಾಗಿ ಪ್ರತಿಯೊಂದರಲ್ಲಿಯೂ ಕೂಡ ಸದೃಢರಾಗಿ ನಿಲ್ಲುತ್ತಾರೆ. ಅಂದರೆ ಅವರು ತಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವುದರ ಮೂಲಕ ತಮ್ಮ ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುವು ದರ ಮೂಲಕ ಎಲ್ಲರಂತೆ ಅವರು ಕೂಡ ಬಲಿಷ್ಠರಾಗಿ ನಿಲ್ಲುತ್ತಾರೆ.
ಈ ಸುದ್ದಿ ಓದಿ:- ಸೂರ್ಯೋದಯ ಯೋಜನೆ ಮೂಲಕ ಪ್ರತಿ ಮನೆಗೆ ಉಚಿತ ಸೋಲಾರ್ & 300 ಯೂನಿಟ್ ಫ್ರೀ ವಿದ್ಯುತ್ ಪಡೆಯಿರಿ.!
ಅದೇ ರೀತಿಯಾಗಿ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಜಮೀನುಗಳಲ್ಲಿ ಉಚಿತವಾಗಿ ಕೊಡುವಂತಹ ಸ್ಪ್ರಿಂಕ್ಲರ್ ಗಳನ್ನು ಅಳವಡಿಸಿಕೊಳ್ಳುವುದಕ್ಕೆ ಹೊಸ ಅರ್ಜಿಗಳನ್ನು ಕರೆಯಲಾಗಿದೆ. ಹಾಗಾಗಿ ಯಾರೆಲ್ಲಾ ನಿಮ್ಮ ಜಮೀನುಗಳಿಗೆ ಇನ್ನು ಸ್ಪ್ರಿಂಕ್ಲರ್ ವ್ಯವಸ್ಥೆಗಳನ್ನು ಮಾಡಿಸಿಕೊಂಡಿಲ್ಲವೋ ಯಾರು ಈ ಯೋಜನೆಯನ್ನು ಪಡೆದು ಕೊಳ್ಳಬೇಕು ಎಂದು ಬಯಸುತ್ತೀರೋ, ಅವರು ತಕ್ಷಣವೇ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ.
ಇದರಿಂದ ನೀವು ಅಭಿವೃದ್ಧಿಯಾಗುವುದರ ಜೊತೆಗೆ ನಿಮ್ಮ ಕೃಷಿಯನ್ನು ಕೂಡ ಅಭಿವೃದ್ಧಿಪಡಿಸಬೇಕು ಎನ್ನುವುದೇ ಈ ಒಂದು ಯೋಜನೆಯ ಬಹಳ ಪ್ರಮುಖವಾದ ಉದ್ದೇಶವಾಗಿದೆ. ಹಾಗಾದರೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಯಾರೆಲ್ಲ ಈ ಯೋಜನೆಗೆ ಅರ್ಹರು ಹಾಗೂ ಈ ಯೋಜನೆಗೆ ಅರ್ಜಿ ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಅಟಲ್ ಬೊಂಜಲ್ ಯೋಜನೆಯ ಸೂಕ್ಷ್ಮ ನೀರಾವರಿ ಕಾರ್ಯಕ್ರಮದ ಅಡಿ 2023 ಹಾಗೂ 2024ರ ಸಾಲಿಗೆ ಅರ್ಹ ರೈತ ಫಲಾನುಭವಿಗಳಿಗೆ ಈವರೆಗೆ ಒಂದು ಹೆಕ್ಟೇರ್ ಗೆ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯವನ್ನು ನೀಡಲಾಗು ತ್ತಿದ್ದು ಈ ಯೋಜನೆಯ ಮಾರ್ಗಸೂಚಿ ಅನ್ವಯ ಎರಡು ಹೆಕ್ಟೇರ್ ಗೂ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ ವಿಸ್ತರಣೆ ಮಾಡಲಾಗಿದೆ.
ಈ ಸುದ್ದಿ ಓದಿ:- ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ.? ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳುವ ಸಂಪೂರ್ಣ ವಿಧಾನ….||
ಈಗಾಗಲೇ ಒಂದು ಹೆಕ್ಟೇರ್ ಗೆ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯವನ್ನು ಪಡೆದುಕೊಂಡಿರುವಂತಹ ಅರ್ಹ ಫಲಾನುಭವಿಗಳು ಹೆಚ್ಚುವರಿಯಾಗಿ ಇನ್ನೂ ಒಂದು ಹೆಕ್ಟೇರ್ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ಇರುತ್ತದೆ. ಹಾಗಾಗಿ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳು ವುದಕ್ಕೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕಚೇರಿಯನ್ನು ಸಂಪರ್ಕಿಸಬಹುದು ಅಲ್ಲಿ ನಿಮಗೆ ಇದರ ಒಂದು ವಿಷಯವಾಗಿ ಸಂಬಂಧಿಸಿದ ಎಲ್ಲ ಮಾಹಿತಿ ಗಳನ್ನು ತಿಳಿಸಿಕೊಡುತ್ತಾರೆ.