Home Health Tips ಇವುಗಳನ್ನು ತಿಂದರೆ ಯಾವತ್ತು ನಿಮಿರುವಿಕೆ ಸಮಸ್ಯೆ ಬರುವುದಿಲ್ಲ…

ಇವುಗಳನ್ನು ತಿಂದರೆ ಯಾವತ್ತು ನಿಮಿರುವಿಕೆ ಸಮಸ್ಯೆ ಬರುವುದಿಲ್ಲ…

0
ಇವುಗಳನ್ನು ತಿಂದರೆ ಯಾವತ್ತು ನಿಮಿರುವಿಕೆ ಸಮಸ್ಯೆ ಬರುವುದಿಲ್ಲ…

 

ಕೆಲವರು ಈ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡುವುದಕ್ಕೆ ನಾಚಿಕೆ ಪಡುತ್ತಾರೆ. ಆದರೆ ಇದು ಬದುಕಿನ ಮೇಲೆ ಬಹಳ ಪರಿಣಾಮ ಬೀರುವಂತಹ ಸಮಸ್ಯೆ ಆಗಿದೆ. ಅನೇಕರು ಸಮಸ್ಯೆ ಇದ್ದರೂ ಇದನ್ನು ಮುಚ್ಚಿ ಇಟ್ಟು ಪರಿಹಾರ ಮಾಡಿಕೊಳ್ಳದೆ ಇನ್ನು ದೊಡ್ಡ ತೊಂದರೆ ಮಾಡಿಕೊಳ್ಳುತ್ತಿದ್ದಾರೆ ಈ ರೀತಿ ತಪ್ಪು ಮಾಡುವುದು ಬೇಡ.

ಇದು ಕೂಡ ಒಂದು ಸಾಮಾನ್ಯವಾದ ಆರೋಗ್ಯ ಸಮಸ್ಯೆ ರೀತಿಯೇ ಎಂದು ಭಾವಿಸಿ ಸೂಕ್ತ ವೈದ್ಯರ ಬಳಿ ಮುಕ್ತವಾಗಿ ಮಾತನಾಡಿ ಸಮಸ್ಯೆ ಹರಿಸಿಕೊಳ್ಳಿ. ಜೊತೆಗೆ ಈ ಅಂಕಣದಲ್ಲೂ ಕೂಡ ಈ ಸಮಸ್ಯೆಗೆ ನ್ಯಾಚುರಲ್ ಆಗಿ ಹೇಗೆ ಪರಿಹಾರ ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಸುತ್ತಿದ್ದೇವೆ. ಇವುಗಳನ್ನು ಪಾಲಿಸಿ ಫಲಿತಾಂಶ ನೋಡಿ.

ನಿಮಿರುವಿಕೆ ದೌರ್ಬಲ್ಯ 20-30 ವರ್ಷದ ಯುವಕರಿಗೆ ಇರುತ್ತದೆ. ಯಾಕೆಂದರೆ ಆ ಸಮಯದಲ್ಲಿ ಇವರು ಮಾನಸಿಕವಾಗಿ ಬಹಳ ಗೊಂದಲದಲ್ಲಿ ಇರುತ್ತಾರೆ ನಂತರ ಹಿರಿಯರ ಬಳಿ ಅಥವಾ ವೈದ್ಯರ ಬಳಿ ಸಮಸ್ಯೆ ಹೇಳಿಕೊಂಡಾಗ ಕೌನ್ಸಲಿಂಗ್ ಮಾಡಿ ಬಗೆಹರಿಸಿರುತ್ತಾರೆ.

SSLC ಪಾಸಾದವರಿಗೆ ಕರ್ನಾಟಕ ಸರ್ಕಾರಿ ಹುದ್ದೆಗಳು.!

ಆದರೆ 40ರ ನಂತರವೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುವುದು ಪುರುಷರ ಜನನಾಂಗಕ್ಕೆ ರಕ್ತ ಸಂಚಾರದ ಕೊರತೆ ಉಂಟಾಗಿರುವುದರಿಂದ, ಅಥವಾ ರಕ್ತನಾಳಗಳು ಬ್ಲಾಕೇಜ್ ಆಗಿ ಮತ್ತು BP, ಡಯಾಬಿಟೀಸ್, ಕೊಲೆಸ್ಟ್ರಾಲ್, ಒಬೆಸಿಟಿ ಸಮಸ್ಯೆ ಇದ್ದವರಿಗೂ ರಕ್ತ ಸಂಚಾರಕ್ಕೆ ಸಮಸ್ಯೆಗಳಾಗಿ ಪರಿಣಾಮ ಈ ದೌರ್ಬಲ್ಯ ಕಾಡುತ್ತಿರುತ್ತದೆ.

ಮಕ್ಕಳಾಗದಿರುವುದಕ್ಕೆ, ಲೈಂಗಿಕ ಅತೃಪ್ತಿಗೆ ಕಾರಣವಾಗಿ ಮಾನಸಿಕ ಒತ್ತಡ ಕೂಡ ಎದುರಿಸುತ್ತಾರೆ. ಕೇವಲ ಎರಡು ತಿಂಗಳಲ್ಲಿ ಹೇಗೆ ಇದನ್ನು ಗುಣಪಡಿಸಿಕೊಳ್ಳಬಹುದು ಎನ್ನುವುದಕ್ಕೆ ಪವರ್ ಡಯಟ್ ಎನ್ನುವ ಪುಸ್ತಕದಲ್ಲಿರುವ ಸಂಗತಿಗಳು ಅನುಕೂಲ ಮಾಡಿಕೊಡುತ್ತದೆ. ಈ ಸಮಸ್ಯೆ ಇರುವವರಿಗೆ ಪುಸ್ತಕದಲ್ಲಿ ಡಯಟ್ ಸೂಚಿಸಲಾಗಿದೆ ಅದನ್ನು ಪಾಲಿಸಿದರೆ ನಿಮಿರುವಿಕೆ ಸಮಸ್ಯೆ ಮತ್ತು ಈ ಮೇಲೆ ತಿಳಿಸಿದ ಸಮಸ್ಯೆಗಳು ಕಂಟ್ರೋಲ್ ಗೆ ಬರುತ್ತದೆ.

* ಈ ಸಮಸ್ಯೆ ಇರುವವರು ಬೆಳಗ್ಗೆ 7 ಗಂಟೆಗೆ ಮಜ್ಜಿಗೆ ಕುಡಿಯಬೇಕು. ಮಜ್ಜಿಗೆಗೆ ಶುಂಠಿ ಬೆಳ್ಳುಳ್ಳಿ ಕರಿಬೇವು ಪೇಸ್ಟ್ ಹಾಕಿ ಮಸಾಲೆ ಮಜ್ಜಿಗೆ ಮಾಡಿಕೊಂಡು ಕುಡಿಯಬೇಕು. ಇದನ್ನು ಕುಡಿಯಲು ಆಗದವರು ದಾಳಿಂಬೆ ಅಥವಾ ಕಪ್ಪು ದ್ರಾಕ್ಷಿ ಜ್ಯೂಸ್ ಕುಡಿಯಬಹುದು.

ಹೊಸ ಮನೆ ಕಟ್ಟಿಸಲು ಪ್ರಯತ್ನ ಪಡುತ್ತಿದ್ದೀರಾ ? ನಾಲ್ಕು ಮಂಗಳವಾರ ಈ ಕೆಲಸ ಮಾಡಿ ಶೀಘ್ರವಾಗಿ ಕನಸು ಕೈಗೂಡುತ್ತದೆ.!

* 9:00ಗೆ ಇವರ ಟಿಫನ್ ನಲ್ಲಿ ಒಂದು ಕಪ್ ದಾಳಿಂಬೆ, ಕರ್ಬೂಜಾ, ಪಪ್ಪಾಯ, ನೆಲ್ಲಿಕಾಯಿ, ಕಿತ್ತಳೆ ಮುಂತಾದ ಎಲ್ಲಾ ರೀತಿಯ ಹಣ್ಣುಗಳು ಇರಬೇಕು. 10 ನೆಲೆಸಿದ ಶೇಂಗಾ, 5 ನೆನೆಸಿದ ಬಾದಾಮಿ, 5 ನೆನೆಸಿದ ಗೋಡಂಬಿ, 2-3 ನೆನೆಸಿದ ವಾಲ್ ನೆಟ್, 1 ಚಮಚ ನೆನೆಸಿದ ಕುಂಬಳಕಾಯಿ ಬೀಜ ಇದು ಅವರ ಬ್ರೇಕ್ ಫಾಸ್ಟ್ ಆಗಿರಬೇಕು.

* 11:00ಗೆ ಬ್ರಾಹ್ಮಿ ಎಲೆ ಮತ್ತು ಬಿಲ್ವ ಪತ್ರೆ ಎಲೆ ಸೇರಿಸಿ ಮಾಡಿದ ಜ್ಯೂಸ್ ಕುಡಿಯಬೇಕು, ಸಕ್ಕರೆ ಕಾಯಿಲೆ ಇಲ್ಲದವರು ಸ್ವಲ್ಪ ಬೆಲ್ಲ ಮಿಕ್ಸ್ ಮಾಡಿ ಕುಡಿಯಬಹುದು.
* ಮಧ್ಯಾಹ್ನ 1:00 ಕ್ಕೆ ಬೇಯಿಸಿದ ತರಕಾರಿಗಳನ್ನು ಸೇವಿಸಬೇಕು ತರಕಾರಿ ಬೇಯಿಸುವಾಗ ತೆಂಗಿನಕಾಯಿ ಹಾಲು ಹಾಗೂ ತುಪ್ಪ ಹಾಕಿ ಬೇಯಿಸಬೇಕು ಇದರ ಜೊತೆಗೆ ಸಲಾಡ್ ಸೇವಿಸಬಹುದು ಸಲಾಡ್ ಗಳಿಗೆ ಆಲಿವ್ ಎಣ್ಣೆ ಮತ್ತು ಅಗಸೆ ಬೀಜದಪುಡಿಯಲ್ಲಿ ಹಾಕಬೇಕು.

ಪಪ್ಪಾಯ ಕರಬೂಜಾ ಹಾಗೂ ಸೇಬು ಈ ಹಣ್ಣುಗಳನ್ನು ಸೇವಿಸಬಹುದು, ನುಗ್ಗೆ ಸೊಪ್ಪಿನ ಪಲ್ಯ ಸೇವನೆ ಮಾಡಬಹುದು, ಇದು ಕೂಡ ರಕ್ತ ಸಂಚಾರಕ್ಕೆ ಇರುವ ಅಡೆತಡೆಗಳನ್ನು ನಿವಾರಣೆ ಮಾಡುತ್ತದೆ. ತಾಜಾ ತರಕಾರಿಗಳನ್ನು ಬೇಯಿಸಿ ಅದಕ್ಕೆ ತೆಂಗಿನ ಹಾಲು ಮತ್ತು ತುಪ್ಪವನ್ನು ಹಾಕಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸೂಪ್ ತಯಾರಿಸಿ ಕುಡಿಯಬಹುದು. ಮೊಸರು ಅಥವಾ ಮಜ್ಜಿಗೆಗೆ ಮೆಂತೆ ಪುಡಿ ಹಾಕಿ ಸೇರಿಸಬೇಕು. ಇದು ಮಧ್ಯಾಹ್ನದ ಊಟ ಇದರಲ್ಲೂ ಕೂಡ ಗೋಧಿ ಜೋಳ ರಾಗಿ, ಯಾವುದೇ ಕಾರ್ಬೊಹೈಡ್ರೇಟ್ ಇರುವುದಿಲ್ಲ.

ಬಾಯಿ ಬಿಟ್ಟರೆ ಬರೀ ಸುಳ್ಳು ಹೇಳುವ ರಾಶಿಗಳು ಇವು, ಯಾವ ರಾಶಿಗಳು ಎಂದು ಗೊತ್ತಾದರೆ ಶಾ’ಕ್ ಆಗುವುದು ಗ್ಯಾರಂಟಿ…

* ಸಂಜೆ 4:00 ಕ್ಕೆ ದಾಳಿಂಬೆ ಜ್ಯೂಸ್ ಅಥವಾ ನೆಲ್ಲಿಕಾಯಿ ಜ್ಯೂಸ್ ಸೇವಿಸಬಹುದು ಇದರ ಜೊತೆಗೆ ಐದು ಬಾದಾಮಿ ಹಾಗೂ ಗೋಡಂಬಿಯನ್ನು ಸೇವಿಸಬೇಕು ಎಂದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
* ರಾತ್ರಿ ಊಟ 7:00 ಒಳಗೆ ಮುಗಿಬೇಕು ಆದರೆ ಸಹ ಬೇಯಿಸಿದ ತರಕಾರಿಗಳ ಸೂಪ್, ಹಣ್ಣುಗಳು ಇವುಗಳನ್ನು ಸೇವಿಸಿ ಒಂದು ಚಪಾತಿ ಅಥವಾ ಸ್ವಲ್ಪ ಪ್ರಮಾಣದ ನೀವು ರೆಗ್ಯುಲರ್ ಆಗಿ ಸೇವಿಸುವ ಕಾರ್ಬೋಹೈಡ್ರೇಟ್ ಸೇವಿಸಬಹುದು.

* ರಾತ್ರಿ 9:00ಕ್ಕೆ ಮತ್ತೆ ದಾಳಿಂಬೆ ಜ್ಯೂಸ್ ಅಥವಾ ನೆಲ್ಲಿಕಾಯಿ ಜ್ಯೂಸ್ ಕುಡಿಯಬಹುದು.
* ಮಾಂಸಾಹಾರಿಗಳಾಗಿದ್ದರೆ ಇದರ ಜೊತೆಗೆ ಬೇಯಿಸಿದ ಮೊಟ್ಟೆ ಫಿಶ್ ಮುಂತಾದ ಮಾಂಸವನ್ನು ಕೂಡ ಸೇವಿಸಬಹುದು ಆದರೆ ಫ್ರೈ ಮಾಡಿದ ಮಾಂಸಗಳನ್ನು ಸೇವಿಸಬಾರದು.
* ಇವುಗಳ ಜೊತೆ ಆಯುರ್ವೇದದ ಮೆಡಿಕಲ್ ಶಾಪ್ ಗಳಲ್ಲಿ ಸಿಗುವ ಹರ್ಬಾಗ್ರ ವನ್ನು ಬೆಳಿಗ್ಗೆ ಮತ್ತು ರಾತ್ರಿ ಊಟ ಆದ ಬಳಿಕ ತೆಗೆದುಕೊಳ್ಳಬೇಕು.

LEAVE A REPLY

Please enter your comment!
Please enter your name here