Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಶನಿ ಪ್ರವೇಶಕ್ಕೂ ಮುನ್ನ ಈ ಸೂಚನೆಗಳನ್ನು ಕೊಡುತ್ತಾರೆ. ಆಗಲೇ ತಿಳಿದುಕೊಂಡು ಎಚ್ಚೆತ್ತುಕೊಂಡರೆ ಸಮಸ್ಯೆ ಇರುವುದಿಲ್ಲ.!

Posted on January 7, 2024 By Kannada Trend News No Comments on ಶನಿ ಪ್ರವೇಶಕ್ಕೂ ಮುನ್ನ ಈ ಸೂಚನೆಗಳನ್ನು ಕೊಡುತ್ತಾರೆ. ಆಗಲೇ ತಿಳಿದುಕೊಂಡು ಎಚ್ಚೆತ್ತುಕೊಂಡರೆ ಸಮಸ್ಯೆ ಇರುವುದಿಲ್ಲ.!

ಶನಿ ಹೆಗಲೇರುವ ಮುನ್ನ ಕನಸಿನಲ್ಲಿ ಬಂದು ಒಮ್ಮೆ ಭಾರ ಹೇಳಿ ಹೋಗುತ್ತಾರೆ ಎನ್ನುವ ಮಾತಿದೆ. ಹಾಗೆ ಶನಿಯ ನಮ್ಮ ರಾಶಿಗೆ ಪ್ರವೇಶ ಮಾಡುವ ಮುನ್ನ ಕೆಲವೊಂದು ಲಕ್ಷಣಗಳ ಮೂಲಕ ನಮಗೆ ಸೂಚನೆ ಕೊಡುತ್ತಾರೆ ಆ ಸಮಯದಲ್ಲಿ ನಾವು ಎಚ್ಚೆತ್ತುಕೊಂಡು ಬದುಕಿದರೆ ಬಹಳ ಒಳ್ಳೆಯದು ಯಾಕೆಂದರೆ ಎಲ್ಲರಿಗೂ ಗೊತ್ತಿರುವಂತೆ ಶನಿ ಕರ್ಮಕಾರಕ.

ನಮ್ಮ ರಾಶಿಯಲ್ಲಿ ಶನಿ ಪ್ರವೇಶವಾಗುತ್ತಿದೆ ಅಥವಾ ಶನಿ ಪ್ರಭಾವ ಶನಿ ದೃಷ್ಟಿ ಬೀಳುತ್ತಿದೆ ಎಂದರೆ ಜನ್ಮ ಜಾಲಾಡಿ ಹೋಗುವುದು ಗ್ಯಾರಂಟಿ ಸಾ’ವು ತನ್ನ ಬಿಟ್ಟು ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದ್ರೆ ಶನಿ ಬಗ್ಗೆ ಹೆಚ್ಚಿನ ಜನರು ತಪ್ಪಾಗಿ ತಿಳಿದುಕೊಂಡಿದ್ದಾರೆ ಶನಿ ಪಾಪಗ್ರಹವೆನ್ನುತ್ತಾರೆ.

ಮುಂಜಾನೆ ಎದ್ದ ತಕ್ಷಣ ಈ ಮಂತ್ರ ಜಪಿಸಿ.! ನಿಂತು ಹೋದ ಕೆಲಸ ಪೂರ್ಣಗೊಳ್ಳುತ್ತದೆ.!

ಸತ್ಯಾಂಶವೇನೆಂದರೆ ಶನಿಯು ಬಹಳ ಪ್ರಾಮಾಣಿಕ. ಗ್ರಹಗಳಲ್ಲಿ ಶನಿ ನ್ಯಾಯಾಧೀಶನಿದ್ದಂತೆ ಅವರವರ ಕರ್ಮನುಸರವಾಗಿ ಫಲಗಳನ್ನು ಕೊಡುತ್ತಾರೆ ಅವರು ಮಾಡುವ ಪುಣ್ಯಕಾರ್ಯಗಳಿಗೆ ಪುಣ್ಯಫಲ ಹಾಗೂ ತಪ್ಪುಗಳಿಗೆ ಕೆಟ್ಟಫಲ ಅನುಭವಿಸಬೇಕಾಗುತ್ತದೆ. ಈ ರೀತಿ ಅವರವರ ಕರ್ಮಗಳನ್ನು ತಿಳಿಸಿಕೊಳ್ಳಲು ಅವಕಾಶ ಕೊಡುವುದಕ್ಕೆ ಶನಿ ರಾಶಿಗೆ ಬರುತ್ತಾರೆ.

‌‌ ಶನಿ ಪ್ರಭಾವ ಉಂಟಾಗುವ ಮುನ್ನ ಕೆಲವು ಸೂಚನೆಗಳು ಕೂಡ ಸಿಗುತ್ತವೆ. ಕೆಲವರಿಗೆ ಶನಿಪ್ರಭಾವ ತಲೆಯಿಂದ ಉಂಟಾದರೆ ಕೆಲವರಿಗೆ ಪಾದಗಳಿಂದ ಶುರುವಾಗುತ್ತದೆ. ಆ ಪ್ರಕಾರವಾಗಿ ಕೆಲವರಿಗೆ ಇದ್ದಕ್ಕಿದ್ದಂತೆ ವಿಪರೀತವಾದ ಹಿಮ್ಮಡಿ ನೋವು ಬರುತ್ತದೆ, ಕಾಲುಗಳಲ್ಲಿ ವಿಪರೀತವಾದ ನೋ’ವು ಕಾಡುತ್ತದೆ.

ನೀವು ಅಪಾಯದಲ್ಲಿದ್ದೀರಿ ಎಂದು ಹೇಳುವ 8 ಅಪಾಯಕಾರಿ ಮುನ್ಸೂಚನೆಗಳು ಇವು, ನಿಮಗೂ ಈ ರೀತಿ ಆಗುತ್ತಿದ್ದರೆ ಏನು ಅರ್ಥ ಗೊತ್ತಾ.?

ಕೆಲವರಿಗೆ ಕಾಲುಗಳ ಮೇಲೆ ಇದ್ದಕ್ಕಿದ್ದಂತೆ ಮಚ್ಚೆ ಬರುತ್ತದೆ ಇದು ಕಾಲಿನಲ್ಲಿ ಹಾಕಿಕೊಳ್ಳುವ ಕಾಲ್ಗೆಜ್ಜೆ ಒತ್ತಿ ಅಥವಾ ಇನ್ನೇನಾದರೂ ಅಲರ್ಜಿ ಆಗಿ ಬರುವುದಿಲ್ಲ. ಇದರಿಂದ ಯಾವುದೇ ರೀತಿಯ ತುರಿಕೆ ಆಗಲಿ ನೋ’ವಾಗಲಿ ಅದು ಕೂಡ ಇರುವುದಿಲ್ಲ. ಮಚ್ಚೆಗಳು ಬರುತ್ತವೆ ಹಾಗೆ ಹೊರಟು ಹೋಗುತ್ತವೆ.

ಕೆಲವರಿಗೆ ಮುಖದಲ್ಲಿ ಭಂಗು ಆಗುತ್ತದೆ ಇದು ಕೂಡ ಶನಿಪ್ರಭಾವದ ಮುನ್ಸೂಚನೆ. ಮನೆಗಳಲ್ಲಿ ಪದೇಪದೇ ಎಲೆಕ್ಟ್ರಿಕಲ್ ಐಟಂಗಳು ಒಂದಾದ ನಂತರ ಮತ್ತೊಂದು ರಿಪೇರಿಗೆ ಬರುತ್ತಿದ್ದರೆ, ಪದೇಪದೇ ಆಕ್ಸಿಡೆಂಟ್ ಆಗುವುದು, ಪದೇ ಪದೇ ಕಾಲು ಎಡಗುವುದು, ಜಾರುವುದು ಇದೇ ಪರಿಣಾಮ ಸೂಚಿಸುತ್ತದೆ. ಕಾಗೆಗಳು ಪದೇ ಪದೇ ನಮ್ಮ ಮೇಲೆ ಬಂದು ಹಿಚಿಗೆ ಹಾಕುತ್ತಿದ್ದರೆ ಅದು ಕೂಡ ಇದನ್ನೇ ಹೇಳುತ್ತದೆ.

ನಿಮ್ಮ ಮೊಬೈಲ್ ನಂಬರ್ ಕೊನೆಯಲ್ಲಿ ಈ ಸಂಖ್ಯೆ ಇದ್ದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕೋಟಿಗಟ್ಟಲೆಗೆ ಜಿಗಿಯುತ್ತದೆ.!

ಪದೇ ಪದೇ ಕೈಯಲ್ಲಿ ಇರುವ ವಸ್ತುಗಳು ಕೆಳಗೆ ಬಿಡುವುದು, ಪದೇಪದೇ ಕೈಯಿಂದ ನೀರು ಜಾರುವುದು, ಉಪ್ಪು ಚೆಲ್ಲುವುದು, ಎಣ್ಣೆ ಚೆಲ್ಲುವುದು ಇದು ಕೂಡ ಗ್ರಹಗತಿಗಳಲ್ಲಿ ಶನಿ ಪ್ರಭಾವ ಉಂಟಾಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಶನಿ ಮಂದಗತಿಯಲ್ಲಿ ಸಾಗುತ್ತಾರೆ ಎಂದು ಹೇಳುತ್ತಾರೆ ಹಾಗೆ ಶನಿ ಗ್ರಹದ ಪ್ರಭಾವ ಇರುವವರ ಬದುಕಿನಲ್ಲಿ ಕೂಡ ಎಲ್ಲವೂ ಮಂದಗತಿಯಲ್ಲಿ ಸಾಗುತ್ತದೆ ಮತ್ತು ಯಾವ ಕೆಲಸಕ್ಕೆ ಕೈ ಹಾಕಿದರು ಕೂಡ ಪೂರ್ತಿ ಆಗುವುದಿಲ್ಲ.

ಸಾಕಿದ ಗಿಡ ಮರಗಳು ಒಣಗುವುದು, ದವಸ ಧಾನ್ಯಗಳ ಕೆಟ್ಟು ಹೋಗುವುದು, ಆರೋಗ್ಯವಾಗಿದ್ದ ವ್ಯಕ್ತಿಗೆ ಗಂಭೀರ ಆರೋಗ್ಯ ಸಮಸ್ಯೆ ಬರುವುದು ಇನ್ನು ಮುಂತಾದ ಮುನ್ಸೂಚನೆಗಳು ಸಿಗುತ್ತವೆ. ಆದರೆ ತಪ್ಪಿಸಿಕೊಳ್ಳಲು ಮಾತ್ರ ಸಾಧ್ಯವಿಲ್ಲ, ಶನಿಪ್ರಭಾವ ಅನುಭವಿಸಲೇಬೇಕು.

ತಿರುಪತಿಗೆ ಹೋದ್ರು ನಿಮ್ಮ ಕಷ್ಟಗಳು ತೀರುತ್ತಿಲ್ವಾ.? ಇದಲ್ಲೆ ಕಾರಣ ನೀವು ಮಾಡುವ ಈ ನಾಲ್ಕು ಕೆಲಸಗಳೇ ಕಾರಣ.!

ಯಾವ ವ್ಯಕ್ತಿಗೆ ಯಾವುದರ ಮೇಲೆ ಅತಿಯಾದ ಆಸಕ್ತಿ ಇರುತ್ತದೆ ಅದರ ವ್ಯಾಮೋಹ ಹೊರಟು ಹೋಗುವುದು ಅಥವಾ ಯಾವ ವ್ಯಕ್ತಿ ಯಾವುದಕ್ಕೆ ಬೆಲೆ ಕೊಡುವುದಿಲ್ಲ ಅದರ ಬೆಲೆ ತಿಳಿಯುವುದು ಶನಿ ಪ್ರಭಾವದಿಂದಲೇ ಆದರೆ ಅದರ ನಂತರ ಬರುವ ಜೀವನ ಅತ್ಯುತ್ತಮವಾಗಿರುತ್ತದೆ.

ನಂತರದ ಜೀವನದಲ್ಲಿ ಪ್ರತಿ ವಸ್ತುವಿನ ಪ್ರತಿ ವ್ಯಕ್ತಿಯ ಪ್ರತಿ ಸಂಬಂಧದ ಹಾಗೂ ಜೀವನದ ಮೌಲ್ಯ ತಿಳಿಯುತ್ತದೆ ಹಾಗಾಗಿ ಶನಿಪ್ರಭಾವ ಉಂಟಾದರೆ ಭಯ ಪಡಬೇಡಿ ಈ ಲಕ್ಷಗಳನ್ನು ತಿಳಿದುಕೊಂಡು ಬರುವುದನ್ನು ಎದುರಿಸಿ. ಸಾಧ್ಯವಾದಷ್ಟು ಜೀವನದಲ್ಲಿ ಪ್ರಾಮಾಣಿಕವಾಗಿವೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ನಿಮ್ಮಿಂದ ಒಳ್ಳೆಯದು ಮಾಡಲು ಆಗದೆ ಇದ್ದರೆ ಯಾವುದೇ ಕಾರಣಕ್ಕೂ ಯಾರಿಗೂ ಕೆಟ್ಟದ್ದು ಬಯಸಬೇಡಿ.

ದೇವರ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ.

ಮತ್ತೊಂದು ಮುಖ್ಯವಾದ ವಿಚಾರ ಏನೆಂದರೆ ಎಲ್ಲರೂ ಕೂಡ ಶನಿವಾರದಂದು ಶನೇಶ್ವರ ದೇವಸ್ಥಾನಕ್ಕೆ ಹೋಗುತ್ತಾರೆ ಆದರೆ ಎಲ್ಲರೂ ಈ ರೀತಿ ಮಾಡುವ ಅವಶ್ಯಕತೆ ಇಲ್ಲ. ಅಷ್ಟಮ ಶನಿ, ಪಂಚಮ ಶನಿ, ಸಾಡೆ ಸಾತಿ, ಶನಿ ದೆಶೆ, ಶನಿ ಭುಕ್ತಿ ನಡೆಯುತ್ತಿರುವವರು ಮಾತ್ರ ಹೋಗಬೇಕು.

ಉಳಿದವರು ವರ್ಷಕ್ಕೆ ಒಮ್ಮೆ ಅಥವಾ ವರ್ಷದಲ್ಲಿ 9 ದಿನ ಅಪರೂಪಕೊಮ್ಮೆ ಹೋದರೆ ಸಾಕು ಶನಿಪ್ರಭಾವ ಇರುವವರು ಪ್ರತಿನಿತ್ಯವು ಮನೆಯಲ್ಲಿ ಹನುಮಾನ್ ಚಾಲೀಸಾ ಪಠಿಸಬೇಕು ಮತ್ತು ಆಂಜನೇಯನ ದರ್ಶನವನ್ನು ಪ್ರತಿನಿತ್ಯ ಮಾಡಬೇಕು.

ಈ ರೀತಿ ಭಯ, ಭಕ್ತಿ, ಶ್ರದ್ದೆ ನಂಬಿಕೆಯಿಂದ ಆಂಜನೇಯನ ಆರಾಧನೆ ಮಾಡುವವರಿಗೆ ನನ್ನಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಶನೇಶ್ವರ ವಚನ ನೀಡುವುದರಿಂದ ಶನಿಪ್ರಭಾವ ಕಡಿಮೆ ಮಾಡ್ಕೊಳಲು ಈ ರೀತಿ ಮಾಡಿ ಮತ್ತು ಅರಳಿ ಮರದ ಕೆಳಗಡೆ ಎಳ್ಳೆಣ್ಣೆಯಿಂದ ಜೋಡಿ ದೀಪ ಹಚ್ಚಿ ಪೂಜೆ ಮಾಡಿ ಒಳ್ಳೆಯದಾಗುತ್ತದೆ.

Useful Information

Post navigation

Previous Post: ಇಂತಹ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಹಾಕಿಕೊಳ್ಳಬೇಡಿ, ಧರಿಸಿದರೆ ದಾರಿದ್ರ್ಯ ತಪ್ಪುವುದಿಲ್ಲ ಎಚ್ಚರ.!
Next Post: ಸ್ವಂತ ಮನೆ ಕನಸು ಇದ್ದವರು ಈ ಕೆಲಸ ಮಾಡಿ ಸಾಕು.! ವರ್ಷದೊಳಗೆ ಮನೆ ಕಟ್ಟುತ್ತಿರಾ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore