Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನನಗೆ ಬಂದ ಪರಿಸ್ಥಿತಿ ಯಾರಿಗೂ ಬರದಿರಲಿ ಎಂದು ವೇದಿಕೆ ಮೇಲೆ ಕಣ್ಣಿರಿಟ್ಟ ನಟಿ ಸಮಂತಾ ಕಾರಣವೇನು ಗೊತ್ತ.? ಅಪ್ಸರೆಯಂತಿದ್ದ ನಟಿಯ ಈಗಿನ ಸ್ಥಿತಿ ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ.

Posted on January 11, 2023 By Kannada Trend News No Comments on ನನಗೆ ಬಂದ ಪರಿಸ್ಥಿತಿ ಯಾರಿಗೂ ಬರದಿರಲಿ ಎಂದು ವೇದಿಕೆ ಮೇಲೆ ಕಣ್ಣಿರಿಟ್ಟ ನಟಿ ಸಮಂತಾ ಕಾರಣವೇನು ಗೊತ್ತ.? ಅಪ್ಸರೆಯಂತಿದ್ದ ನಟಿಯ ಈಗಿನ ಸ್ಥಿತಿ ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ.

 

ಶಾಕುಂತಲ(Shakunthala Trailer) ಟ್ರೈಲರ್ ರಿಲೀಸ್ ವೇದಿಕೆ ಮೇಲೆ ಭಾವುಕರಾಗಿ ಕಣ್ಣೀರಿಟ್ಟ ನಟಿ ಸಮಂತ(Samantha Ruth Prabhu), ನನಗೆ ಬಂದ ಸ್ಥಿತಿ ಬೇರೆ ಯಾರಿಗೂ ಬರದಿರಲಿ ಎಂದು ಟ್ವೀಟ್ ಮಾಡಿದ್ದು ಯಾಕೆ ಗೊತ್ತಾ.? ನಟಿ ಸಮಂತ(Samantha) ಋತು ಪ್ರಭು ಅವರು ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಮೊದಲೆಲ್ಲಾ ಸಿನಿಮಾ ವಿಷಯ ಆಗಿ ಚರ್ಚೆ ಆಗುತ್ತಿದ್ದ ಇವರು ಈಗ ಟ್ರೋಲ್ ಕಂಟೆಂಟ್ ಆಗಿ ಬಿಟ್ಟಿದ್ದಾರೆ.

ಸಮಂತ ಅವರು ಮದುವೆ ಮುರಿದುಕೊಂಡ ವಿಷಯ ಇಟ್ಟುಕೊಂಡು ಅಂದಿನಿಂದ ಇವರನ್ನು ಟ್ರೋಲಿಗರು ಮನ ಬಂದಂತೆ ಟ್ರೋಲ್ ಮಾಡುತ್ತಲೇ ಇದ್ದಾರೆ. ಇದು ಸಮಂತ ಅವರಿಗೂ ತಲುಪಿದ್ದು ಕೆಲವು ಬಾರಿ ಅದಕ್ಕೆ ತಿರುಗೇಟು ಸಹ ನೀಡಿದ್ದಾರೆ. ಈಗ ಬಹು ದಿನಗಳ ನಂತರ ಸಮಂತ ಋತು ಪ್ರಭು ಅವರು ಶಾಕುಂತಲ ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಸಮಂತಾ ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವುದು, ಅದರ ಚಿಕಿತ್ಸೆಗಾಗಿ ವಿದೇಶದಲ್ಲಿ ಇದ್ದಿದ್ದು ಇನ್ನೂ ಸಹ ಅದರಿಂದ ಸಂಪೂರ್ಣವಾಗಿ ಹೊರಬರದೆ ಇರುವುದು ಎಲ್ಲರಿಗೂ ಗೊತ್ತಿರುವ ಸುದ್ದಿಯೇ ಇದರ ನಡುವಲ್ಲಿಯೇ ಅವರು ಅವರ ಯಶೋಧ ಸಿನಿಮಾದ ಶೂಟಿಂಗ್ ಮುಗಿಸಿ ಮತ್ತು ಪ್ರಚಾರ ಕೆಲಸಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದರು.

ಮತ್ತೆ ಅವರು ಈಗ ಶಾಕುಂತಲ ಸಿನಿಮಾಗಾಗಿ ಓಡಾಡುತ್ತಿದ್ದಾರೆ ತಮ್ಮ ಅನಾರೋಗ್ಯದ ಪರಿಸ್ಥಿತಿಯಲ್ಲೂ ಕೂಡ ಚಿತ್ರತಂಡದ ಜೊತೆಗಿದ್ದು ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇದನ್ನೇ ನೆನೆದು ಶಾಕುಂತಲಾ ಟ್ರೈಲರ್ ರಿಲೀಸ್ ಕಾರ್ಯಕ್ರಮದ ವೇದಿಕೆ ಮೇಲೆ ಈ ಚಿತ್ರದ ನಿರ್ದೇಶಕರಾದ ಗುಣ ಅವರು ಸಮಂತ ಅವರನ್ನು ಗುಣಗಾನ ಮಾಡಿ ಈ ಸಿನಿಮಾದಲ್ಲಿ ಹೀರೋ ಸಮಂತ ಅವರೇ, ಅವರಿಂದಲೇ ಈ ಸಿನಿಮಾಗೆ ಶಕ್ತಿ ಅಂದೆಲ್ಲಾ ಮಾತನಾಡಿದ್ದಾರೆ ಇದನ್ನು ಕೇಳಿದ ತಕ್ಷಣವೇ ಸಮಂತ ಅವರು ಭಾವುಕರಾಗಿ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ.

ಸಮಂತ ಅವರ ಮನದ ಒಳಗಿನ ನೋವು ಸಂಕಟ ಏನಿತ್ತು ಗೊತ್ತಿಲ್ಲ ಆದರೆ ಅಲ್ಲಿದ್ದವರೆಲ್ಲ ಸಮಂತ ಅವರನ್ನು ಗಟ್ಟಿಯಾಗಿರಬೇಕು ಎಂದು ಸಂತೈಸಿದ್ದಾರೆ. ಅವರು ಆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಫೋಟೋವನ್ನು ಇಟ್ಟುಕೊಂಡು ಟ್ರೋಲಿಗರು ಮೀಮ್ಸ್ ಮಾಡಿ ಹರಿ ಬಿಟ್ಟಿದ್ದಾರೆ. ಸಮಂತ ಅವರು ಮೊದಲ ಬ್ಯೂಟಿ ಮತ್ತು ಶೈನ್ ಅನ್ನು ಕಳೆದುಕೊಂಡಿದ್ದಾರೆ. ವಿ.ಚ್ಛೇ.ದ.ನ ಆದ ಬಳಿಕ ಅವರು ಅವರ ಕೆರಿಯರ್ ಅಲ್ಲಿ ಎಲ್ಲೋ ತಲುಪುತ್ತಾರೆ ಎಂದು ಅಂದುಕೊಂಡಿದ್ದೆವು.

ಆದರೆ ಮಯೋಸಿಟಿಸ್ ಕಾಯಿಲೆ ಅವರನ್ನು ಬೆಂಡಾಗಿಸುತ್ತಿದೆ ಎಂದು ಸೇರಿಸಿದ್ದಾರೆ. ಇದನ್ನು ಸಮಂತ ಅವರು ಮತ್ತೆ ಟ್ವೀಟ್ ಮಾಡಿ ನನ್ನ ರೀತಿ ವರ್ಷಗಟ್ಟಲೆ ಚಿಕಿತ್ಸೆಗೆ ಅಲೆಯುವ ಹಾಗೂ ಮೆಡಿಕೇಶನ್ ಅಲ್ಲಿ ಇರುವ ಪರಿಸ್ಥಿತಿ ಯಾರಿಗೂ ಬರದಿರಲಿ ಎಂದು ಟ್ಯಾಗ್ ಲೈನ್ ಬರೆದು ಹಂಚಿಕೊಂಡಿದ್ದಾರೆ. ಪರೋಕ್ಷವಾಗಿ ಸ್ಯಾಮ್ ತಮ್ಮನ್ನು ಟೀಕಿಸುತ್ತಿರುವವರಿಗೂ ಕೂಡ ಒಳ್ಳೆಯದನ್ನೇ ಬಯಸುತ್ತಿದ್ದಾರೆ ಎನ್ನಬಹುದು.

ಇದರಿಂದ ಅವರು ಒಳಗೆ ಎಷ್ಟು ಕುಗ್ಗಿ ಹೋಗಿದ್ದಾರೆ ಎನ್ನುವುದು ತಿಳಿಯುತ್ತದೆ. ಸಮಂತ ಹಾಗೂ ನಾಗಚೈತನ್ಯ ಅವರು ಇನ್ನು ಸಹ ಸಂಪರ್ಕದಲ್ಲಿದ್ದಾರೆ, ನಾಗಚೈತನ್ಯ ಮತ್ತು ಅವರ ತಂದೆ ಸಮಂತ ಆರೋಗ್ಯ ವಿಚಾರಿಸುತ್ತಾರೆ ಎಂದೆಲ್ಲಾ ಸುದ್ದಿಗಳು ಹರಿದಾಡಿದ್ದರೂ ಸಹ ಇದರ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

ಆದರೆ ಸಮಂತ ಮತ್ತು ನಾಗಚೈತನ್ಯ ಅಭಿಮಾನಿಗಳು ಮಾತ್ರ ನೀವಿಬ್ಬರು ಮತ್ತೆ ಒಂದಾಗಬೇಕು ಸಮಂತ ಅವರಿಗೆ ಈಗ ನಾಗಚೈತನ್ಯ ಪ್ರೀತಿಯ ಅವಶ್ಯಕತೆ ಇದೆ ಎಂದೆಲ್ಲಾ ರಿಕ್ವೆಸ್ಟ್ ಮಾಡುತ್ತಿದ್ದಾರೆ. ಮುಂದೆ ಆದರೂ ಇವರಿಬ್ಬರೂ ಒಂದಾಗಿ ಮೊದಲನಂತೆ ಸಂತಸದಿಂದ ಇರಲಿ ಸಮಂತ ಅವರು ತಮ್ಮ ಸಮಸ್ಯೆಯಿಂದ ಹೊರಬಂದು ಮತ್ತೆ ಬಣ್ಣದ ಲೋಕದಲ್ಲಿ ಮಿನುಗಲಿ ಎಂದು ಅಭಿಮಾನಿಗಳಾಗಿ ನಾವೆಲ್ಲಾ ಹಾರೈಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.

Entertainment Tags:Samanth Ruth Prabhu, Samantha, Shakuntala Trailor, Shakunthala Movie
WhatsApp Group Join Now
Telegram Group Join Now

Post navigation

Previous Post: ಮದುವೆಗೂ ಮುನ್ನವೇ ಮಗುವಿಗೆ ಅಪ್ಪ ಅಮ್ಮ ಆದ ಬಿಗ್ ಬಾಸ್ ಸ್ಪರ್ಧಿಗಳು.
Next Post: ಸನ್ಯಾಸತ್ವ ಸ್ವೀಕರಿಸಿದ ನಟಿ ಚಿತ್ಕಾಲ ಬಿರದಾರ್ ಕಾರಣವೇನು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore