Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಾನು ಡಬ್ಬ ಸಿನಿಮಾ ಮಾಡಿದ್ರು ನನ್ನ ಸೆಲೆಬ್ರಿಟಿಗಳು ನೋಡ್ತಾರೆ‌. ಕ್ರಾಂತಿ ಸಿನಿಮಾದ 4ನೇ ಹಾಡು ಬಿಡುಗಡೆ ಮಾಡುವಾಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್

Posted on January 16, 2023 By Kannada Trend News No Comments on ನಾನು ಡಬ್ಬ ಸಿನಿಮಾ ಮಾಡಿದ್ರು ನನ್ನ ಸೆಲೆಬ್ರಿಟಿಗಳು ನೋಡ್ತಾರೆ‌. ಕ್ರಾಂತಿ ಸಿನಿಮಾದ 4ನೇ ಹಾಡು ಬಿಡುಗಡೆ ಮಾಡುವಾಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್

 

ದರ್ಶನ್ ಅವರ ಯಾವ ಸಿನಿಮಾ ಕೂಡ ಕಳೆದ ವರ್ಷ ರಿಲೀಸ್ ಮಾಡಿಲ್ಲ. ಹೀಗಾಗಿ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಗ್ಗೆ ಎಲ್ಲೆದೆ ವ್ಯಾಪಕವಾಗಿ ಕುತೂಹಲ ವ್ಯಕ್ತವಾಗುತ್ತಿದೆ. ಜನವರಿ 26ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾದ ಪ್ರಚಾರ ಕಾರ್ಯ ಎರಡು ತಿಂಗಳ ಹಿಂದಿನಿಂದಲೇ ಶುರು ಆಗಿದೆ. ನಾಯಕಶನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಹ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದು ಹಲವಾರು ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡುತ್ತಿದ್ದಾರೆ.

ಮೀಡಿಯಾಗಳು ದರ್ಶನ್ ಅವರನ್ನು ಬ್ಯಾನ್ ಮಾಡಿರುವ ಕಾರಣ ದರ್ಶನ್ ಅವರ ಅಭಿಮಾನಿಗಳು ಸಹ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿಯೊಬ್ಬರೂ ಕೂಡ ತಮ್ಮ ಕೈಲಾದ ರೀತಿಯಲ್ಲಿ ವಿಶೇಷವಾಗಿ ವಿಭಿನ್ನವಾಗಿ ಪ್ರೀತಿಯಿಂದ ತಮ್ಮ ಡಿ ಬಾಸ್ ಸಿನಿಮಾಗೆ ಪ್ರಚಾರ ಕೊಡುತ್ತಿದ್ದಾರೆ. ಚಿತ್ರ ತಂಡ ಕೂಡ ನಾನಾ ರೀತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ತನ್ನ ಸಿನಿಮಾದ ಪ್ರಚಾರ ಮಾಡುತ್ತಿದೆ.

ಜನವರಿ 7ರಂದು ಟ್ರೈಲರ್ ಅನ್ನು ಥಿಯೇಟರ್ ಅಲ್ಲಿ ರಿಲೀಸ್ ಮಾಡಲಾಯಿತು. ಅದು ಕೂಡ ಪ್ರಚಾರದ ಒಂದು ಭಾಗವಾಗಿದ್ದು, ಈಗಾಗಲೇ ಟ್ರೈಲರ್ ನೋಡಿದ ಎಲ್ಲರೂ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಕನ್ನಡದಲ್ಲಿ ಶಿಕ್ಷಣದ ವಿಷಯ ಇಟ್ಟುಕೊಂಡು ಕ್ರಾಂತಿ ಮಾಡಲು ಬರುತ್ತಿರುವ ಸಿನಿಮಾ ಇದಾಗಿದ್ದು ಸಿನಿಮಾದ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಎಲ್ಲರ ಆಸಕ್ತಿ ಇಮ್ಮಡಿಗೊಳ್ಳುತ್ತಿದೆ. ಟ್ರೈಲರ್ ಇಂದಲೇ ಇಷ್ಟೊಂದು ಕ್ರೇಜ್ ಹುಟ್ಟು ಹಾಕಿರುವ ಸಿನಿಮಾ ಹಾಡುಗಳು ಕೂಡ ಚಿಂದಿ ಆಗಿವೆ.

ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆಯೊಂದಿಗೆ ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್ ಮುಂತಾದವರ ಬರಹ ಸಿನಿಮಾ ಹಾಡುಗಳಿಗಿದ್ದು ಹಾಡುಗಳ ರಿಲೀಸ್ ಕಾರ್ಯ ಕೂಡ ವಿಭಿನ್ನ ರೀತಿಯಾಗಿ ಚಿತ್ರತಂಡ ಮಾಡುತ್ತಿದೆ. ಕರ್ನಾಟಕದ ಪ್ರಮುಖ ನಗರಗಳಲ್ಲಿ ತಮ್ಮ ಸಿನಿಮಾದ ಒಂದೊಂದು ಹಾಡನ್ನು ರಿಲೀಸ್ ಮಾಡಲು ನಿರ್ಧರಿಸಿದ ಚಿತ್ರ ತಂಡ ಮೊದಲನೇ ಹಾಡಾದ ಧರಣಿ ಮಂಡಲ ಮಧ್ಯದೊಳಗೆ ಹಾಡನ್ನು ಮಂಡ್ಯದ ಕೆ ಆರ್ ಪೇಟೆ ಅಲ್ಲಿ ಬಿಡುಗಡೆ ಗೊಳಿಸಿತ್ತು.

ನಂತರ ಎರಡನೇ ಹಾಡಾದ ಬೊಂಬೆ ಬೊಂಬೆ ಹಾಡನ್ನು ಹೊಸಪೇಟೆಯಲ್ಲಿ ರಿಲೀಸ್ ಮಾಡಿತ್ತು. ಮತ್ತು ಮೂರನೇ ಹಾಳಾದ ಪುಷ್ಪವತಿ ಹಾಡನ್ನು ನವ ಜೋಡಿಗೆ ಕೈಯಿಂದ ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡಿಸಲಾಯಿತು. ಈಗ ನಾಲ್ಕನೇ ಹಾಡಿನ ಬಗ್ಗೆ ಎಲ್ಲೆಡೆ ಬಹಳ ನಿರೀಕ್ಷೆ ಇದೆ. ಚಿತ್ರತಂಡ ತಾನು ಹೇಳಿದ ರೀತಿಯಲ್ಲಿ ತುಮಕೂರಿನಲ್ಲಿ ನಾಲ್ಕನೇ ಹಾಡನ್ನು ರಿಲೀಸ್ ಮಾಡುವ ಕಾರ್ಯಕ್ರಮ ಏರ್ಪಡಿಸಿದೆ. ಈ ಕಾರ್ಯಕ್ರಮಕ್ಕೆ ದರ್ಶನ್ ಅವರು ಸಹ ಹೋಗಿದ್ದು ಬಸ್ ಮೇಲೆ ನಿಂತು ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ನಾಲ್ಕು ಮಾತುಗಳನ್ನು ಆಡಿದ್ದಾರೆ.

ದರ್ಶನ್ ಅವರು ಎಲ್ಲೇ ಹೋದರು ಅವರನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಸೇರುತ್ತಾರೆ ಈ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದು ಕರೆಯುವ ದರ್ಶನವರು ತಮ್ಮ ಸೆಲೆಬ್ರಿಟಿ ಕುರಿತು ಈ ರೀತಿ ಹೇಳಿದ್ದಾರೆ. ಮೊದಲಿಗೆ ಕಲ್ಪತರು ನಾಡು ತುಮಕೂರಿನ ನನ್ನ ಪ್ರೀತಿಯ ಎಲ್ಲಾ ಸೆಲೆಬ್ರೆಟಿಗಳಿಗೂ ಕೋಟಿ ಕೋಟಿ ಧನ್ಯವಾದಗಳು. ಹಿರಿಯರ ಸಮನಾದವರು ಹಾಗೂ ನಡೆದಾಡುವ ದೇವರಾದ ಶ್ರೀ ಸಿದ್ದಗಂಗಾ ಸ್ವಾಮಿಗಳ ಆಶೀರ್ವಾದದೊಂದಿಗೆ ಮಾತು ಆರಂಭಿಸುತ್ತೇನೆ.

ನನ್ನ ಅಭಿಮಾನಿಗಳ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ ನಾನು ಎಂತಹ ಡಬ್ಬ ಸಿನಿಮಾ ಮಾಡಿದರು ಕೂಡ ನನ್ನ ಸೆಲೆಬ್ರಿಟಿಗಳು ನನ್ನನ್ನು ಒಪ್ಪಿಕೊಂಡಿದ್ದಾರೆ, ಗೆಲ್ಲಿಸಿದ್ದಾರೆ. ಆದರೆ ಈ ಬಾರಿ ಕ್ರಾಂತಿ ಸಿನಿಮಾ ಅವರನ್ನು ನಿರಾಸೆಗೊಳಿಸುವುದಿಲ್ಲ ಎಂಬ ಮಾತುಗಳನ್ನು ಸಿನಿಮಾ ಬಗ್ಗೆ ಆಡಿದ್ದಾರೆ. ದರ್ಶನ್ ಅವರು ಹೇಳಿದ ಈ ಮಾತನ್ನು ಕೇಳಿ ದರ್ಶನ್ ವಿರೋಧಿಗಳು ಟ್ರೋಲ್ ಮಾಡುತ್ತಿದ್ದಾರೆ.

Entertainment Tags:Challenging star darshan, D Boss, Kranti
WhatsApp Group Join Now
Telegram Group Join Now

Post navigation

Previous Post: ನಾನು ಸೀಗರೇಟ್ ಸೇದೋದು ಅಭಿಮಾನಿಗಳು ನೋಡ್ಬಿಟ್ರೆ ಏನ್ ಮಾಡೋದು ಅಂತ ಅಣ್ಣಾವ್ರು ಎದುರುತ್ತಿದ್ರು. ಸತ್ಯ ಬಾಯ್ಬಿಟ್ಟ ಅಣ್ಣಾವ್ರ ಸಂಗಡಿಗ
Next Post: ಬಹಳ ಕಷ್ಟ ಪಟ್ಟು ಆ ಸಿನಿಮಾ ಹಕ್ಕು ತಂದಿದೆ ಸುದೀಪ್ ಕೊನೆ ಸಮಯದಲ್ಲಿ ಕೈಕೊಟ್ಟು ನನ್ಗೆ ಮೋಸ ಮಾಡ್ಬಿಟ್ರು ಎಂದು ಮಾಧ್ಯಮದ ಮುಂದೆ ಕಣ್ಣಿರಿಟ್ಟ ನಿರ್ದೇಶಕ ಯೋಗಿ ದ್ವಾರಕೀಶ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore