Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಟಿ ಅಮೂಲ್ಯ ಮಕ್ಕಳಿಗೆ ನಾಮಕರಣ, ಗುರೂಜಿ ಮಕ್ಕಳಿಗೆ ಯಾವ ಹೆಸರು ಸೂಚಿಸಿದ್ದಾರೆ ಗೊತ್ತಾ.?

Posted on October 27, 2022 By Kannada Trend News No Comments on ನಟಿ ಅಮೂಲ್ಯ ಮಕ್ಕಳಿಗೆ ನಾಮಕರಣ, ಗುರೂಜಿ ಮಕ್ಕಳಿಗೆ ಯಾವ ಹೆಸರು ಸೂಚಿಸಿದ್ದಾರೆ ಗೊತ್ತಾ.?

ನಟಿ ಅಮೂಲ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ಬಾಲ್ಯದಲ್ಲಿಯೇ ಲಾಲಿ ಹಾಡು ಎಂಬ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ತದನಂತರ 2005ರಲ್ಲಿ ತೆರೆಕಂಡ ಚೆಲುವಿನ ಚಿತ್ತಾರ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ. ಈ ಸಿನಿಮಾದಲ್ಲಿ ನಟನೆ ಮಾಡುವಾಗ ನಟಿ ಅಮೂಲ್ಯ ಅವರಿಗೆ ಕೇವಲ 16 ವರ್ಷ ವಯಸ್ಸು ಆದರೂ ಕೂಡ ಅದ್ಭುತವಾಗಿ ನಟನೆ ಮಾಡುವುದರ ಮೂಲಕ ಈ ಸಿನಿಮಾವನ್ನು ವಿಜೇತಗೊಳಿಸಿದರು.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ತದನಂತರ ಅಮೂಲ್ಯ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಶ್ರಾವಣಿ ಮತ್ತು ಸುಬ್ರಹ್ಮಣ್ಯ ಸಿನಿಮಾದಲ್ಲಿ ನಟನೆ ಮಾಡಿದರು, ನಂತರ ದುನಿಯಾ ವಿಜಯ್ ಅವರ ಜೊತೆ ಮಾಸ್ತಿಗುಡಿ, ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಗಜಕೇಸರಿ, ಲವ್ಲಿ ಸ್ಟಾರ್ ಪ್ರೇಮ್ ಅವರ ಜೊತೆ ಮಳೆ ಹೀಗೆ ಸಾಕಷ್ಟು ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇರುವ ಸಮಯದಲ್ಲಿಯೇ ಇವರು ಜಗದೀಶ್ ಎಂಬುವವರನ್ನು ಮದುವೆಯಾಗುತ್ತಾರೆ.

ಜಗದೀಶ್ ಅವರು ಮೂಲತಃ ರಾಜಕೀಯ ಕುಟುಂಬಕ್ಕೆ ಸೇರಿದ ವ್ಯಕ್ತಿ ಬೆಂಗಳೂರಿನ ಸದಾಶಿವ ನಗರದಲ್ಲಿ ನೆಲೆಸಿದ್ದಾರೆ ಆಗರ್ಭ ಶ್ರೀಮಂತರು ಈ ಒಂದು ಸಂಬಂಧವನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಖುದ್ದಾಗಿ ನೋಡಿ ಇವರಿಬ್ಬರ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಾರೆ. ಮದುವೆಯಾದ ಎರಡೇ ವರ್ಷಕ್ಕೆ ನಟಿ ಅಮೂಲ್ಯ ಅವರು ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಅಮೂಲ್ಯ ಅವರ ಮಕ್ಕಳಿಗೆ ಈಗಾಗಲೇ ಮೂರು ತಿಂಗಳು ತುಂಬಿ ನಾಲ್ಕನೇ ತಿಂಗಳಿಗೆ ಕಾಲಿಟ್ಟಿದೆ.

ಹಾಗಾಗಿ ಕುಟುಂಬದಲ್ಲಿ ಇರುವಂತಹ ಸದಸ್ಯರೆಲ್ಲರೂ ಕೂಡ ಅವಳಿ ಮಕ್ಕಳಿಗೆ ನಾಮಕರಣ ಮಾಡುವ ಸಿದ್ಧತೆಯನ್ನು ಏರ್ಪಡಿಸಿದ್ದಾರೆ. ಇನ್ನು ನಟಿ ಅಮೂಲ್ಯ ಅವರು ಚಿತ್ರರಂಗದಲ್ಲಿ ಸಕ್ರಿಯ ರಾಗಿದ್ದರು ಕೂಡ ನಮ್ಮ ಧರ್ಮ ಹಾಗೂ ಸಾಂಪ್ರದಾಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಈ ಕಾರಣಕ್ಕಾಗಿಯೇ ಮಕ್ಕಳಿಗೆ ಯಾವ ಹೆಸರನ್ನು ಇಟ್ಟರೆ ಸೂಕ್ತ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಇದೀಗ ಗುರುಗಳನ್ನು ಭೇಟಿ ನೀಡಿದ್ದಾರೆ.

ಅಷ್ಟೇ ಅಲ್ಲದೆ ಯಾವ ದಿನದಂದು ನಾಮಕರಣ ಶಾಸ್ತ್ರವನ್ನು ಇಟ್ಟುಕೊಳ್ಳಬೇಕು ಎಂದು ಕೇಳಿದ್ದಾರೆ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿಗಳಿಗೆ ಗುರೂಜಿಯವರು ಸೂಕ್ತವಾದ ದಿನವೊಂದನ್ನು ತಿಳಿಸಿದ್ದಾರೆ. ಆದರೆ ಈ ವಿಚಾರವನ್ನು ಮಾತ್ರ ಜಗದೀಶ್ ಹಾಗೂ ಅಮೂಲ್ಯ ಅವರು ರಿವೀಲ್ ಮಾಡಿಲ್ಲ ಇದನ್ನು ಗೌಪ್ಯವಾಗಿಯೇ ಇಟ್ಟಿದ್ದಾರೆ. ನಾಮಕರಣ ಶಾಸ್ತ್ರವನ್ನು ಬಹಳ ಅದ್ದೂರಿಯಿಂದ ಮಾಡಬೇಕು ಎಂಬ ಯೋಚನೆಯಲ್ಲಿದ್ದಾರೆ.

ಹಾಗಾಗಿ ಅದಕ್ಕಿಂತ ಮೊದಲು ಗುರೂಜಿಯವರ ಬಳಿ ಹೋಗಿ ಅವರ ಸಲಹೆ ಸೂಚನೆಯನ್ನು ಪಡೆದುಕೊಂಡು ಬಂದ ನಂತರವಷ್ಟೇ ಈ ಕಾರ್ಯಕ್ರಮವನ್ನು ಏರ್ಪಡಿಸೋಣ ಎಂದು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಅದಕ್ಕೆ ಇಂದು ಗುರೂಜಿಯವರನ್ನು ಭೇಟಿ ಮಾಡಿ ನಾಮಕರಣ ಶಾಸ್ತ್ರಕ್ಕೆ ಸೂಕ್ತವಾದ ದಿನ ಹಾಗೂ ಮಕ್ಕಳಿಗೆ ಯಾವ ಹೆಸರನ್ನು ಇಟ್ಟರೆ ಅವರ ಭವಿಷ್ಯದಲ್ಲಿ ಒಳ್ಳೆಯದು ಆಗುತ್ತದೆ ಎಂಬ ಎಲ್ಲ ವಿಚಾರಗಳನ್ನು ಚರ್ಚೆ ಮಾಡಿಕೊಂಡು ಬಂದಿದ್ದಾರೆ.

ಸದ್ಯಕ್ಕೆ ಅಮೂಲ್ಯ ಹಾಗೂ ಜಗದೀಶ್ ಅವರು ಗುರೂಜಿಯವರನ್ನು ಭೇಟಿಯಾದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ನಟಿ ಅಮೂಲ್ಯ ಅವರ ಮಕ್ಕಳಿಗೆ ಯಾವ ಹೆಸರನ್ನು ಇಡಬಹುದು ಎಂಬ ಕುತೂಹಲವನ್ನು ಕೂಡ ಹೊರ ಹಾಕಿದ್ದಾರೆ. ಈ ಎಲ್ಲಾ ವಿಚಾರಗಳಿಗೂ ಈ ವಾರದಲ್ಲಿಯೇ ಉತ್ತರ ಸಿಗಲಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.

Entertainment Tags:Amulya, Amulya Jagadeesh
WhatsApp Group Join Now
Telegram Group Join Now

Post navigation

Previous Post: ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಮನೆಯಲ್ಲಿ ದೀಪಾವಳಿ ಸಡಗರ, ಪತ್ನಿಯ ಕೈಹಿಡಿದು ಪಟಾಕಿ ಒಡೆಸಿದ ಈ ದೃಶ್ಯ ನೋಡಲು ಎರಡು ಕಣ್ಣು ಸಾಲದು.
Next Post: ಬಿಗ್ ಬಾಸ್ ಮನೆಯಲ್ಲಿ ಚಪ್ಪಲಿ ಎಸೆತ ಹಿಂಸಾಚಾರಕ್ಕೆ ತಿರುಗಿದ ಮಾತು, ಸ್ಪರ್ಧಿಗಳ ಈ ಆಟ ನೋಡಿ ಆ-ಕ್ರೋ-ಶ ವ್ಯಕ್ತಪಡಿಸಿದ ಪ್ರೇಕ್ಷಕರು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore