ನಟಿ ಡೈಸಿ ಬೋಪಣ್ಣ (Daisy Bopanna) ಸ್ಯಾಂಡಲ್ ವುಡ್ ಇಂದ ಬಾಲಿವುಡ್ ತನಕ ಹೋಗಿ ಗೆದ್ದು ಬಂದವರು ಮೂಲತಃ ಕೊಡಗಿನ ಬೆಡಗಿ ಆಗಿರುವ ಡೈಸಿ ಬೋಪಣ್ಣ ಅವರು ಬೆಂಗಳೂರಿನಲ್ಲಿ ಫೈನ್ ಆರ್ಟ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಶಿಕ್ಷಣ ಮುಗಿದಿದ್ದಂತೆ ಆಕ್ಟಿಂಗ್ ಅನ್ನು ಕೆರಿಯರ್ ಆಗಿ ಮಾಡಿಕೊಂಡ ಇವರು ಮೊದಲು ಬಣ್ಣ ಹಚ್ಚಿದ್ದು ಕನ್ನಡ ಸಿನಿಮಾಗಳಿಗೆ. ಉಪೇಂದ್ರ, ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ದರ್ಶನ್, ಗಣೇಶ್ ಜೊತೆಗೆ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿ.
ನಂತರ ಬಾಲಿವುಡ್ ಅಲ್ಲಿ ಅಕ್ಷಯ್ ಕುಮಾರ್ ಹಾಗೂ ತಮಿಳುನಾಡು ಕಮಲ್ ಹಾಸನ್ ಮುಂತಾದವರ ಜೊತೆಗೂ ತೆರೆ ಹಂಚಿಕೊಂಡಿದ್ದ ಇವರ ರಾಮ ಭಾಮ ಶಾಮ ಸಿನಿಮಾದ ಪಾತ್ರ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಅಭಿನಯಿಸಿದ ಗಾಳಿಪಟ ಚಿತ್ರದ ಮನೋಜ್ಞ ಅಭಿನಯಶನ್ನು ಕನ್ನಡಿಗರು ಎಂದು ಸಹ ಮರೆಯಲು ಸಾಧ್ಯವಿಲ್ಲ.
ತವರಿನ ಸಿರಿ, ಐಶ್ವರ್ಯ, ಭಗವಾನ್, ಗಾಳಿಪಟ, ಸತ್ಯವಾನ್ ಸಾವಿತ್ರಿ, ರಾಮ ಶಾಮ ಭಾಮ ಈ ರೀತಿ ಪಟ್ಟಿ ಮಾಡಲು ಹೊರಟರೆ ಇವರು ಕನ್ನಡದಲ್ಲಿ ಮಾಡಿರುವ ಸಿನಿಮಾಗಳ ಹೆಸರು 20 ಕೂಡ ದಾಟುವುದಿಲ್ಲ. ಆದರೆ ಆಕೆ ಅಭಿನಯಿಸಿದ ಪಾತ್ರಗಳಿಂದ ಪಡೆದಿರುವ ಫೇಮ್ ಕೊನೆಯವರೆಗೂ ಹೋಗುವುದಿಲ್ಲ. ಅಷ್ಟರಮಟ್ಟಿಗೆ ಡೈಸಿ ಬೋಪಣ್ಣ ಅವರನ್ನು ಕನ್ನಡಿಗರು ಮೆಚ್ಚಿಕೊಂಡು ಹಚ್ಚಿಕೊಂಡಿದ್ದಾರೆ ಈಗಲೂ ಅವರು ಮತ್ತೆ ಸಿನಿಮಾ ಮಾಡುತ್ತಾರಾ ಎಂದು ಕಾಯುವವರು ಇದ್ದಾರೆ.
ಕನ್ನಡ ಚಲನಚಿತ್ರ ರಂಗ ಈಗಾಗಲೇ ಸಾವಿರಾರು ನಟಿಮಣಿಯರನ್ನು ಕಂಡಿದೆ ಅದರಲ್ಲಿ ಕೆಲವರು ಕೆಲವೇ ವರ್ಷಗಳಲ್ಲಿ ಮಿಂಚಿ ಮರೆಯಾಗಿ ಬಿಡುತ್ತಾರೆ. ಈ ರೀತಿ ಯಶಸ್ಸಿನ ಉತ್ತುಂಗದಲ್ಲಿ ಮೆರೆದಾಡುತ್ತಿದ್ದ ಡೈಸಿ ಬೋಪಣ್ಣ ಅವರು ಈಗ ಅವಕಾಶಗಳಿಲ್ಲದೆ ಚಿತ್ರರಂಗದಿಂದ ದೂರ ಉಳಿದಿದ್ದಾರೆ. 2011ರಲ್ಲಿ ಉದ್ಯಮಿ ಅಮಿತ್ ಜಾಜು (Amith jaju) ಅವರನ್ನು ವಿವಾಹ (Marriage) ಆದ ಬಳಿಕ ಸಿನಿಮ ರಂಗದಿಂದ ಕೊಂಚ ಬ್ರೇಕ್ ಪಡೆದುಕೊಂಡರು.
ಆನಂತರ ಇವರಿಗೆ ಅವಕಾಶಗಳೇ ತಪ್ಪಿ ಹೋಯಿತು ಮೊದಮೊದಲು ಇದರ ಬಗ್ಗೆ ತೀರ ತಲೆಕೆಡಿಸಿಕೊಂಡಿದ್ದ ಇವರು ನಂತರ ಈಗ ಒತ್ತಡದಿಂದ ಹೊರಬಂದು ಹೊಸ ಉದ್ಯಮವನ್ನೇ ಆರಂಭಿಸಿ ಅನೇಕರಿಗೆ ರೋಲ್ ಮಾಡೆಲ್ ಆಗಿದ್ದಾರೆ. ಮನಸು ಮಾಡಿದ್ದರೆ ಹೆಣ್ಣುಮಕ್ಕಳು ಏನು ಬೇಕಾದರೂ ಸಾಧಿಸಬಹುದು ಆಸಕ್ತಿ ಇದ್ದರೆ ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಿ ತೋರಿಸಬಹುದು ಎಂದು ಸಾಧಿಸಿ ತೋರಿಸಿದ್ದಾರೆ ಡೈಸಿ ಬೋಪಣ್ಣ.
ಮೊದಲಿಗೆ ಸುಮ್ಮನೆ ಫೋಟೋಗ್ರಫಿ (Photography) ಶುರು ಮಾಡಿದ ಇವರು ತಮ್ಮ ಕುಟುಂಬದವರ ಫೋಟೋಗ್ರಾಫ್ ಗಳನ್ನು ತೆಗೆಯುತ್ತಿದ್ದರು. ನಂತರ ಇದರ ಬಗ್ಗೆ ಇಂಟರೆಸ್ಟ್ ಬಂದು ಮುಂಬೈ (Mumbai) ಅಲ್ಲಿ ಕೆಲ ಮಾಡೆಲ್ ಗಳಿಗೆ ಫೋಟೋಶೂಟ್ ಮಾಡಲು ಶುರು ಮಾಡಿದರು. ನಂತರ ಅವರಿಗೆ ಅದರಲ್ಲಿ ಹೆಸರು ಬರುತ್ತಿದ್ದಂತೆ ಅವರಿಗೆ ಡ್ರೆಸ್ ಡಿಸೈನ್ (Dress disegn) ಮಾಡುವುದು ಮತ್ತು ಮೇಕಪ್ (Make up) ಮಾಡುವುದನ್ನು ಕೂಡ ಕಲಿತುಕೊಂಡು ಈಗ ಅದರಲ್ಲೇ ಎಕ್ಸ್ಪರ್ಟ್ ಆಗಿ ಅದನ್ನೇ ತಮ್ಮ ಉದ್ಯಮವಾಗಿಸಿಕೊಂಡಿದ್ದಾರೆ.
ಜೊತೆಗೆ ಅದರಿಂದ ಹಣ ಮತ್ತು ಹೆಸರು ಎರಡನ್ನು ಗಳಿಸುತ್ತಿದ್ದಾರೆ ನಿಜಕ್ಕೂ ಇದು ಕನ್ನಡದ ಹೆಣ್ಣು ಮಕ್ಕಳೆಲ್ಲಾ ಹೆಮ್ಮೆ ಪಡುವ ವಿಷಯ. ಯಾವುದಾದರೂ ಒಂದು ಯಶಸ್ಸು ಕೈತಪ್ಪಿ ಹೋದ ತಕ್ಷಣ ಬದುಕುವ ಉತ್ಸಾಹವನ್ನೇ ಕಳೆದುಕೊಳ್ಳುವ ಎಷ್ಟೋ ಯುವ ಪೀಳಿಗೆಯ ಜನರಿಗೆ ಡೈಸಿ ಬೋಪಣ್ಣ ಅವರ ಈ ಸ್ಟೋರಿ ಸ್ಪೂರ್ತಿ ನೀಡಲಿದೆ. ಈ ವಿಚಾರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ