Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

9 ತಿಂಗಳ ತುಂಬು ಗರ್ಭಿಣಿ – ಹೆರಿಗೆಗೂ ಹಣವಿಲ್ಲದೆ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಕನ್ನಡದ ಈ ನಟಿಯ ಸ್ಥಿತಿ ಯಾವ ಹೆಣ್ಣಿಗೂ ಬರದಿರಲಿ.

Posted on March 19, 2023March 19, 2023 By Kannada Trend News No Comments on 9 ತಿಂಗಳ ತುಂಬು ಗರ್ಭಿಣಿ – ಹೆರಿಗೆಗೂ ಹಣವಿಲ್ಲದೆ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಕನ್ನಡದ ಈ ನಟಿಯ ಸ್ಥಿತಿ ಯಾವ ಹೆಣ್ಣಿಗೂ ಬರದಿರಲಿ.

 

ನೂರು ನಿಲ್ದಾಣಗಳಲ್ಲಿ ನಿಂತು ಸಾಗುವ, ಕೆಲವರು ಇಳಿದು ಕೆಲವರುಳಿದು ಮತ್ತೆ ಓಡುವ, ತಿರುವಿಕೊಂಡು ಅಚ್ಚರಿಯ ಬಿಚ್ಚಿ ತೋರುವ ಬದುಕು ಒಂದು ರೈಲು ಬಂಡಿಯೇ ಸರಿ. ಆದರೆ ಈ ಬದುಕಿನ ಪಯಣದಲ್ಲಿ ಮುಟ್ಟುವ ಗುರಿ ಬಗ್ಗೆ ಸ್ಪಷ್ಟನೆ ಇರಬೇಕು, ಆರಿಸಿಕೊಂಡ ಹಾದಿಯ ಬಗ್ಗೆ ಗೌರವ ಹೆಮ್ಮೆ ಇರಬೇಕು ಆಗ ಮಾತ್ರ ಅದೊಂದು ಅರ್ಥಪೂರ್ಣ ಹಾಗೂ ಆದರ್ಶಮಯ ಬದುಕಾಗುತ್ತದೆ. ಹುಚ್ಚು ಕೋಡಿ ಮನಸ್ಸಿನಲ್ಲಿ ಸ್ವೇಚ್ಛೇಯಿಂದ ಬದುಕಿನ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಬಿಟ್ಟರೆ ಬದುಕು ಮೂರಾಬಟ್ಟೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಅಂತಹದೇ ಒಂದು ತಪ್ಪು ನಿರ್ಧಾರದಿಂದ ಕನ್ನಡದಲ್ಲಿ ಟಾಪ್ ನಟಿ ಆಗಿದ್ದ ಈಕೆ ಇಂದು ಗರ್ಭಿಣಿಯಾಗಿದ್ದರು ಕೂಡ ಹಣದ ಕಾರಣಕ್ಕಾಗಿ ಶೂಟಿಂಗ್ ಅಲ್ಲಿ ಭಾಗಿಯಾಗುವ ರೀತಿ ಆಗಿದೆ. ದಿವ್ಯ ಶ್ರೀಧರ್ ಎನ್ನುವ ಈ ನಟಿ ಬಗ್ಗೆ ಕನ್ನಡಿಗರೆಲ್ಲ ತಿಳಿದೇ ಇದೆ. ಈಕೆ ಸಿನಿಮಾ ನಾಯಕಿ ಆಗಿ ಕಾಣಿಸಿಕೊಂಡಿದ್ದರು ಕೂಡ ಕಿರುತೆರೆಯ ಧಾರವಾಹಿಗಳಿಂದ ಹೆಚ್ಚು ಫೇಮಸ್. ಸುವರ್ಣ ವಾಹಿನಿಯ ಸೂಪರ್ ಹಿಟ್ ಸೀರಿಯಲ್ ಆಗಿದ್ದ ಆಕಾಶ ದೀಪ ಧಾರಾವಾಹಿಯಲ್ಲಿ ದೀಪ ಪಾತ್ರಧಾರಿ ಆಗಿದ್ದ ಈಕೆ ನಂತರ ಅಮ್ಮ ಎನ್ನುವ ಧಾರವಾಹಿಯಲ್ಲೂ ಕೂಡ ಮುಖ್ಯ ಪಾತ್ರದಲ್ಲಿದ್ದರು.

ನಂತರ ಈಕೆಯ ಅದೃಷ್ಟ ಬದಲಾಯಿಸಿದ್ದು ತಮಿಳು ಕಿರುತೆರೆ. ಸಾಲು ಸಾಲು ತಮಿಳಿನ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿ ತಮಿಳುನಾಡಿನಲ್ಲಿ ನೆಲೆ ಕಳೆದುಕೊಂಡಳು ನಿರ್ಧರಿಸಿದರು. ಮೂಲತಃ ಬೆಂಗಳೂರಿನವರೇ ಆದ ಈಕೆ ಬಣ್ಣದ ಪ್ರಪಂಚಕ್ಕೆ ಬರುವ ಮುನ್ನವೇ ಒಳ್ಳೆಯ ವಿದ್ಯಾಭ್ಯಾಸ ಪಡೆದು ಮಾಡಲಿಂಗ್ ಕ್ಷೇತ್ರದಲ್ಲೂ ಕೂಡ ಗುರುತು ಮೂಡಿಸಿ ಮದುವೆಯಾಗಿ ಮಗುವನ್ನು ಪಡೆದಿದ್ದರು. ಅದ್ಯಾವ ಕೆಟ್ಟ ಘಳಿಗೆಯಲ್ಲಿ ತಮಿಳಿನ ಚೆಲ್ಲಮ್ಮ ಧಾರವಾಹಿ ಒಪ್ಪಿಕೊಂಡಿರೋ ಆ ಧಾರಾವಾಹಿ ಇವರ ಬದುಕನ್ನೇ ಚೆಲಪಿಲ್ಲಿ ಮಾಡಿಬಿಟ್ಟಿತು.

ಚೆಲ್ಲಮ್ಮ ಧಾರವಾಹಿ ಈಕೆ ನಾಯಕ ನಟಿಯಾಗಿದ್ದಾಗ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಅರ್ನವ್ ಅಲಿಯಾಸ್ ಅನ್ಸಾ ಖಾನ್ ಜೊತೆ ಸಲಿಗೆ ಬೆಳೆಯುತ್ತದೆ. ಜೋಡಿ ಫೇಮಸ್ ಆಗುತ್ತಿದ್ದಂತೆ ಪರಸ್ಪರ ಪ್ರೀತಿಯಲ್ಲಿ ಬೀಳುತ್ತಾರೆ ಅವರನ್ನು ಮದುವೆಯಾಗುವ ಉದ್ದೇಶದಿಂದ ಮೊದಲ ಪತಿಯಿಂದ ಡೈ’ವೋ’ರ್ಸ್ ಪಡೆದುಕೊಂಡು ಮಗುವಿಂದಲೂ ದೂರ ಆಗುತ್ತಾರೆ ಇವರ ಎರಡನೇ ಮದುವೆ ಬಗ್ಗೆ ಬೇಸರಗೊಂಡ ತಂದೆ ತಾಯಿ ಕೂಡ ಇವರನ್ನು ದೂರ ಇಡುತ್ತಾರೆ.

ಮದುವೆಯಾದ ಆರಂಭ ದಿನಗಳಲ್ಲಿ ಎಲ್ಲವೂ ಚೆನ್ನಾಗಿರುತ್ತದೆ ನಂತರ ಅನರ್ವ್ ಅವರ ಅಸಲಿ ಮುಖ ಈಕೆಗೆ ಗೊತ್ತಾಗುತ್ತದೆ. ಕಳೆದ ವರ್ಷ ಇದ್ದಕ್ಕಿದ್ದಂತೆ ನಟಿ ಫೇಸ್ಬುಕ್ ಲೈವ್ ಬಂದು ಗಂಡನ ವಿರುದ್ಧ ಕಣ್ಣೀರಿಡುತ್ತಾ ಮಾತನಾಡಿ ತನ್ನ ಪರಿಸ್ಥಿತಿ ಹೇಗಾಗಿದೆ ಎಂದು ಹೇಳಿಕೊಂಡಿದ್ದು ತಮಿಳು ತೆಲುಗು ಮಲಯಾಳಂ ಹಾಗೂ ಕನ್ನಡದ ಸುದ್ದಿ ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಸಾರವಾಗಿತ್ತು. ಈಗ ಅನರ್ವ್ ಕಿರುಕಿರ ತಾಳಲಾರದೆ ದೂರವಾಗಿರುವ ಈಕೆ ಅಕ್ಷರಶಃ ಅನಾಥೆಯಾಗಿದ್ದಾರೆ.

ಈಕೆ ಮಾಡಿದ ತಪ್ಪು ನಿರ್ಧಾರದಿಂದಾಗಿ ಆತ್ಮೀಯರೆಲ್ಲರೂ ಕೈ ಬಿಟ್ಟಿದ್ದಾರೆ. ನಂಬಿಕೊಂಡಿದ್ದ ಪತಿ ದ್ರೋಹ ಬಗೆದು ಹೋಗಿದ್ದಾನೆ. ಹೊಟ್ಟೆ ಅಲ್ಲಿ 9 ತಿಂಗಳ ಮಗು ಇದೆ, ವೈದ್ಯರೇ ರೆಸ್ಟ್ ಮಾಡುವಂತೆ ಹೇಳಿದ್ದರೂ ಒಂದು ದಿನವೂ ಶೂಟಿಂಗ್ ಬಿಡಲಾಗದ ಪರಿಸ್ಥಿತಿಯಲ್ಲಿ ದಿವ್ಯ ಶ್ರೀಧರ್ ಇದ್ದಾರೆ. ಯಾಕೆಂದರೆ ಅಷ್ಟೊಂದು ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದಾರೆ ಸದ್ಯಕ್ಕೆ ತಮಿಳಿನ ಸೇವಂತಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಇವರಿಗೆ ನಿರ್ದೇಶಕರು ದೊಡ್ಡ ಮನಸ್ಸು ಮಾಡಿ ಕಥೆಯಲ್ಲೂ ಕೂಡ ಇವರ ಪಾತ್ರವು ಗರ್ಭಿಣಿ ಆಗಿರುವಂತೆ ಮಾರ್ಪಾಡು ಮಾಡಿ ಸಹಾಯ ಮಾಡಿ ಕೊಟ್ಟಿದ್ದಾರೆ.

ಇದೆಲ್ಲದರ ಬಗ್ಗೆ ಇತ್ತೀಚಿಗೆ ಮತ್ತೊಮ್ಮೆ ಸಂದರ್ಶನದಲ್ಲಿ ಕಾಣಿಸಿಕೊಂಡ ನಟಿ ತನ್ನ ಪರಿಸ್ಥಿತಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ತನ್ನಂತೆ ಇದ್ದ ಸುಂದರ ಬದುಕನ್ನು ಒಡೆದುಕೊಂಡು ಹೊರ ಹೋಗುವ ನಿರ್ಧಾರ ಮಾಡುವವರಿಗೆ ಪಾಠವಾಗಲಿ ಎಂದು ಎಲ್ಲವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ

Viral News Tags:Divya Shridhar, Divya Sridar
WhatsApp Group Join Now
Telegram Group Join Now

Post navigation

Previous Post: ಅಪ್ಪು ಸ್ಥಾನವನ್ನು ಯುವರಾಜಗೆ ದಯವಿಟ್ಟು ಕೊಡಬೇಡಿ, ಸ್ವಂತ ಪರಿಶ್ರಮದಿಂದ ಹಾಗು ವ್ಯಕ್ತಿತ್ವದಿಂದ ಅವರವರೇ ಜಾಗ ಮಾಡಿಕೊಳ್ಳಬೇಕು ಎಂದ ರಾಘವೇಂದ್ರ ರಾಜಕುಮಾರ್
Next Post: 830 ಅಡಿ ಎತ್ತರದ ಜೋಗ್ ಫಾಲ್ಸ್ ತುತ್ತ ತುದಿಯಲ್ಲಿ ಅಪ್ಪು ಪುಷ್ ಅಪ್ಸ್ ಮಾಡಿದ ವಿಡಿಯೋ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore