ನವೆಂಬರ್ 4ರಂದು ಕನ್ನಡದಲ್ಲಿ ಹೊಸ ನಾಯಕರೊಬ್ಬರ ಸಿನಿಮಾ ರಿಲೀಸ್ ಆಗಿದೆ. ತಿಲಕರಾಜ್ ಬಲ್ಲಾಳ್ ಎನ್ನುವವರ ನಿರ್ಮಾಣದಲ್ಲಿ ಬೆಲ್ ಬಾಟಮ್ ಖ್ಯಾತಿಯ ಡೈರೆಕ್ಟರ್ ಜಯತೀರ್ಥ ಅವರ ನಿರ್ದೇಶನದಲ್ಲಿ ಬನಾರಸ್ ಎನ್ನುವ ಕನ್ನಡ ಸಿನಿಮಾವು ಅದ್ಭುತವಾಗಿ ಮೂಡಿ ಬಂದಿದ್ದು ಶಾಸಕ ಜಮೀರ್ ಅಹ್ಮದ್ ಅವರ ಪುತ್ರ ಝೈಂದ್ ಖಾನ್ ಈ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದಾರೆ.
ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164
ದೇವರಾಜ್, ಅಚ್ಯುತ್ ಕುಮಾರ್, ಸೋನಾಲ್ ಮೆಂಟರಿಯೋ ಮುಂತಾದವರು ಸಿನಿಮಾದಲ್ಲಿ ಝೈಂದ್ ಖಾನ್ ಅವರಿಗೆ ಸಾತ್ ನೀಡಿದ್ದು ಅಭಿನಯಿಸಿದ ಮೊದಲ ಸಿನಿಮಾದಲ್ಲಿಯೇ ನಟನೆಯಲ್ಲಿ ಸೈ ಎನಿಸಿಕೊಂಡು ಕನ್ನಡಕ್ಕೆ ಒಬ್ಬ ಭರವಸೆ ನಾಯಕ ಆಗಿದ್ದಾರೆ ಝೈಂದ್ ಖಾನ್. ಈ ಜೊತೆಗೆ ಸಿನಿಮಾ ಗೆದ್ದ ಖುಷಿಯಲ್ಲಿ ಸಂದರ್ಶನ ಒಂದರಲ್ಲಿ ಭಾಗಿಯಾದ ಇವರು ಸಿನಿಮಾ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮಾಧ್ಯಮದವರು ನಡೆಸಿದ ಸಂದರ್ಶನದಲ್ಲಿ ಭಾಗಿಯಾದ ಇವರು ಕನ್ನಡ ಸಿನಿಮಾ ಇಂಡಸ್ಟ್ರಿ ಅಲ್ಲಿ ಇವರಿಗೆ ಯಾರ್ಯಾರು ಸಿನಿಮಾ ಬಗ್ಗೆ ಸಪೋರ್ಟ್ ಮಾಡಿದರು, ಮೊದಲ ನಾಯಕನಾಗಿ ಲಾಂಚ್ ಆಗುತ್ತಿರುವ ಇವರ ಸಿನಿಮಾ ಕಥೆ ಬಗ್ಗೆ ಯಾರ್ಯಾರು ಏನೇನು ಹೇಳಿದರು ಹಾಗೂ ಸಿನಿಮಾ ಮುನ್ನ ಏನೇನು ಸಲಹೆ ಕೊಟ್ಟಿದ್ದರು ಎನ್ನುವ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಯಶ್ ಅವರನ್ನು ನೆನೆಸಿಕೊಂಡ ಇವರು ಯಶ್ ಅವರನ್ನು ಮೊದಲು ಭೇಟಿ ಆಗಿ ಸಿನಿಮಾ ಬಗ್ಗೆ ತಿಳಿಸಿದಾಗ ಅವರು ಉತ್ತಮ ಸಲಹೆಗಳನ್ನು ಕೊಟ್ಟರು. ಸಿನಿಮಾ ಅನ್ನೋದು ಆಟ ಅಲ್ಲ ನಿನ್ನ ಕಂಫರ್ಟ್ ಇಂದ ಆಚೆ ಬಂದು ಕಷ್ಟಪಡಬೇಕು. ಆಗಿದ್ದಾಗ ಮಾತ್ರ ಕನ್ನಡಿಗರ ಮನಸನ್ನು ತಟ್ಟುತೀಯ ಎಂದಿದ್ದರು. ಅದನ್ನು ಸೀರಿಯಸ್ ಆಗಿ ತೆಗೆದುಕೊಂಡ ನಾನು ತರಬೇತಿ ಸೇರಿಕೊಂಡು ಈಗ ಕನ್ನಡದಲ್ಲಿ ಬಹಳ ಸುಧಾರಿಸಿದ್ದೇನೆ ಎಂದು ಹೇಳಿಕೊಂಡರು.
ಸಿನಿಮಾ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ಪುನೀತ್ ಅವರ ಕೈಯಲ್ಲೇ ಮಾಡಿಸಬೇಕಿತ್ತು ಎನ್ನುವುದು ನನ್ನ ಆಸೆ ಆಗಿತ್ತು ಈ ಬಗ್ಗೆ ನಾನು ಪುನೀತ್ ಅವರ ಜೊತೆ ಕೂಡ ಮಾತನಾಡಿದ್ದೆ ಪುನೀತ್ ಅವರು ಕೂಡ ಇದಕ್ಕೆ ಒಪ್ಪಿದ್ದರು ಆದರೆ ನಮ್ಮ ಮಾತುಕತೆ ಆದ ಮರುದಿನವೇ ಅವರು ಇಹಲೋಕ ತ್ಯಜಿಸಿದರು ಹಾಗಾಗಿ ನಾನು ಅಪ್ಪು ಅವರ ಸಮಾಧಿ ಮುಂದೆ ಬನಾರಸ್ ಟೈಟಲ್ ಲಾಂಚ್ ಮಾಡಿದೆ.
ಆ ಸಮಯದಲ್ಲಿ ಹಲವಾರು ಜನರು ಈ ರೀತಿ ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡುವುದು ಶುಭವಲ್ಲ ಎನ್ನುವ ನುಡಿಗಳನ್ನು ಹೇಳಿದರು ಆದರೆ ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ಅಪ್ಪು ಅವರ ಸಮಾಧಿ ಬಳಿ ಬಂದು ಅನೇಕರು ಮದುವೆ ಮತ್ತು ನಾಮಕರಣ ಮುಂತಾದ ಶುಭ ಕಾರ್ಯಗಳನ್ನು ಮಾಡುತ್ತಾರೆ. ಹಾಗಾಗಿ ನನ್ನ ಸಿನಿಮಾ ಟೈಟಲ್ ಲಾಂಚ್ ಮಾಡುವುದು ತಪ್ಪೇನಿಲ್ಲ ನನಗೆ ಅವರ ಕೈಯಿಂದ ಮಾಡುತ್ತಿದ್ದೇನೆ ಎಂದು ಹೇಳಿದ್ದೆ ಅದು ನಡೆಯಲಿಲ್ಲ ನನ್ನ ಸಮಾಧಾನಕ್ಕಾಗಿ ಈ ರೀತಿ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಜೊತೆಗೆ ಶಿವಣ್ಣ ಕೂಡ ಸಿನಿಮಾ ಟ್ರೈಲರ್ ರಿಲೀಸ್ ಆದಾಗ ಕರೆ ಮಾಡಿ ನಾವು ನೀನು ಮಚ್ಚು ಹಿಡಿದುಕೊಂಡು ಬರುತ್ತೀಯ ಎಂದು ನಿರೀಕ್ಷೆ ಮಾಡಿದ್ದೆವು ಒಂದೊಳ್ಳೆ ಸಬ್ಜೆಕ್ಟ್ ಅನ್ನು ಆಯ್ದುಕೊಂಡಿದ್ದೀಯಾ, ಕಥೆ ತುಂಬಾ ಪ್ರಯೋಗಾತ್ಮಕವಾಗಿದೆ ಸಿನಿಮಾ ಗೆಲ್ಲುತ್ತದೆ ಎಂದು ಭರವಸೆಯ ಮಾತುಗಳನ್ನು ಆಡಿದ್ದರು ಎಂದು ಹೇಳಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ