ಸರ್ಜಾ ಕುಟುಂಬವು ಈಗಾಗಲೇ ಅವರ ಕುಟುಂಬದ ಇಬ್ಬರ ಅಗಲಿಕೆಯ ನೋವಿನಲ್ಲಿ ಕುಂದು ಹೋಗಿದೆ. ಆದರೆ ಇದೀಗ ಅವರ ಮನೆಯಲ್ಲಿ ಹೊಸ ಅತಿಥಿ ಆಗಮನ ಅವರ ಹಳೆಯ ನೋವನ್ನು ಮರೆಸುವ ಹೊಸ ಚೈತನ್ಯ ತಂದಿದೆ. ಅಕ್ಟೋಬರ್ 2ರಂದು ಧ್ರುವ ಸರ್ಜಾ ಮತ್ತು ಪ್ರೇರಣ ದಂಪತಿಗೆ ಹೆಣ್ಣು ಮಗು ಜನಿಸಿದೆ. ಹಲವು ದಿನಗಳಿಂದ ಮಗುವಿನ ನಿರೀಕ್ಷೆಯಲ್ಲಿದ್ದ ಹಾಗೂ ಈಗಾಗಲೇ ಮಗುವಿನ ವಿಷಯಕ್ಕೆ ಬಹಳ ನೋವಿದ್ದ ದಂಪತಿ ಮೊಗದಲ್ಲಿ ಈಗ ಸಂತಸ ತುಂಬಿದೆ.
ಮಗು ಜನಿಸಿದ ಮೊದಲ ಪ್ರಶ್ನೆ ಧ್ರುವ ಸರ್ಜಾ ಅವರು ಸೆಲೆಬ್ರಿಟಿ ದಂಪತಿಗಳಿಗೆ ಮಗುವಿಗೆ ವಿಷಯಕ್ಕೆ ಆಗುವ ಸಮಸ್ಯೆಗಳ ಬಗ್ಗೆ ಮಾತನಾಡಿ ಜೊತೆಗೆ ಈಗಾಗಲೇ ಯಾರ್ಯಾರು ಮಗು ವಿಷಯಕ್ಕೆ ನಂಬಿಕೆ ಕಳೆದುಕೊಂಡಿದ್ದಾರೆ ಎಲ್ಲರಿಗೂ ಬದುಕಿನಲ್ಲಿ ಭರವಸೆ ಇಡಿ ನಂಬಿಕೆ ಇದ್ದರೆ ಖಂಡಿತ ಒಳ್ಳೆದಾಗಿದೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದ್ದರು ಇದರಲ್ಲೇ ಅವರಿಗೆ ಮಗುವಿನ ಬಗ್ಗೆ ಎಷ್ಟು ನಿರೀಕ್ಷೆ ಇತ್ತು ಎಂದು ತಿಳಿಯುತ್ತದೆ ಆ ದಿನವೇ ಮೇಘನಾ ರಾಜ್ ಅವರು ಆಸ್ಪತ್ರೆಗೆ ಆಗಮಿಸಿ ಮಗಳ ದರ್ಶನ ಪಡೆದರು.
ಆನಂತರ ಅನೇಕ ಸ್ನೇಹಿತರು ಸೆಲೆಬ್ರಿಟಿಗಳು ಕುಟುಂಬಸ್ಥರು ಮಗುವನ್ನು ನೋಡಲು ಆಗಮಿಸಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ನೇಹಜೀವಿ ಎಂದು ಕರೆಸಿ ಕೊಂಡಿರುವ ದರ್ಶನ್ ಅವರು ಕೂಡ ಸರ್ಜಾ ಕುಟುಂಬಕ್ಕೆ ಬಹಳ ಆತ್ಮೀಯರು ಧ್ರುವ ಸರ್ಜಾ ಹಾಗೂ ದರ್ಶನವರು ಮೊದಲಿನಿಂದಲೂ ಉತ್ತಮ ಸ್ನೇಹಿತರು ಹಲವಾರು ಕಾರ್ಯಕ್ರಮಗಳಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಮತ್ತು ಅರ್ಜುನ್ ಸರ್ಜಾ ಅವರ ಜೊತೆಗೂ ಕೂಡ ದರ್ಶನ್ ಅವರಿಗೆ ಒಳ್ಳೆಯ ಗೆಳೆತನ ಇದ್ದು ಕುರುಕ್ಷೇತ್ರ ಸಿನಿಮಾದಲ್ಲಿ ದುರ್ಯೋಧನರಾಗಿ ದರ್ಶನ್ ಕಾಣಿಸಿಕೊಂಡಿದ್ದರೆ.
ಕರ್ಣನಾಗಿ ಅರ್ಜುನ್ ಸರ್ಜಾ ಜೋಡಿ ಆಗಿದ್ದರು ಇದಾದ ಬಳಿಕ ಅರ್ಜುನ್ ಸರ್ಜಾ ಅವರ ನಿರ್ದೇಶನದ ಮತ್ತು ನಿರ್ಮಾಣದ ಅವರ ಮಗಳು ಐಶ್ವರ್ಯ ಸರ್ಜಾ ಅವರ ನಾಯಕಿ ಆಗಿದ್ದ ಪ್ರೇಮ ಬರಹ ಎನ್ನುವ ಕನ್ನಡ ಸಿನಿಮಾದ ಹಾಡೊಂದರದಲ್ಲಿ ಆಂಜನೇಯನ ಭಕ್ತರಾದ ಸರ್ಜಾ ಕುಟುಂಬದ ಧ್ರುವ ಸರ್ಜಾ ಚಿರಂಜೀವಿ ಸರ್ಜಾ ಅರ್ಜುನ್ ಸರ್ಜಾ ಮತ್ತು ಐಶ್ವರ್ಯ ಸರ್ಜಾ ಅವರು ಆಂಜನೇಯನ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು ಇವರಿಗೆ ಆ ಹಾಡಿನಲ್ಲಿ ದರ್ಶನ್ ಕೂಡ ಜೊತೆಯಾಗಿ ವಿಶೇಷತೆ ತಂದಿದ್ದರು.
ದರ್ಶನ್ ಅವರು ಅರ್ಜುನ್ ಸರ್ಜಾ ಅವರ ಕುಟುಂಬದ ಎಲ್ಲಾ ಭಾಗಿಯಾಗುತ್ತಾರೆ ಹಾಗೆಯೇ ಧ್ರುವ ಸರ್ಜಾ ಮತ್ತು ಪ್ರೇರಣ ದಂಪತಿಯ ಅವನು ನೋಡಲು ದರ್ಶನ್ ಅವರು ಹೋಗಿದ್ದಾರೆ ಮಗುವನ್ನು ನೋಡಿದ ಬಳಿಕ ಮಗಳು ತುಂಬಾ ಲಕ್ಷಣವಾಗಿ ಇದ್ದಾಳೆ ಮುದ್ದಾಗಿದ್ದಾಳೆ ಚುರುಕಾಗಿದ್ದಾಳೆ ಚೆನ್ನಾಗಿ ಆರೈಕೆ ಮಾಡಿ ಎಂದು ಸವಿನುಡಿಗಳನ್ನು ಆಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ದರ್ಶನ್ ಅವರು ಅಭಿಮಾನಿಗಳಿಗೆ ಆಗಲಿ ಸ್ನೇಹಿತರಿಗೆ ಆಗಲಿ ಉಡುಗೊರೆ ನೀಡುವುದಕ್ಕೆ ಎತ್ತಿದ ಕೈ.
ಈಗ ಧ್ರುವ ಸರ್ಜಾ ಹಾಗೂ ಪ್ರೇರಣ ದಂಪತಿಯ ಮಗಳಿಗೂ ಕೂಡ ಗಿಫ್ಟ್ ಒಂದನ್ನು ನೀಡಿದ್ದಾರೆ ಇವರು ಏನು ಗಿಫ್ಟ್ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಲು ದಚ್ಚು ಅಭಿಮಾನಿಗಳು ಬಹಳ ಕುತೂಹಲರಾಗಿದ್ದರು. ಮತ್ತು ಇವರು ಕೊಟ್ಟ ಗಿಫ್ಟ್ ನೋಡಿ ತಮ್ಮ ಬಾಸ್ ಸಹೃದಯ ಎಂತದ್ದು ಎಂದು ಕೊಂಡಾಡುತ್ತಿದ್ದಾರೆ. ಇತ್ತೀಚಿಗೆ ಬಂದ ನಿಖರ ಮಾಹಿತಿಗಳ ಪ್ರಕಾರ ದರ್ಶನ್ ಅವರು ಚಿನ್ನದ ಸರವನ್ನು ಮಗುವಿಗೆ ನೀಡಿದ್ದಾರೆ ಎನ್ನುವ ಮಾಹಿತಿಗಳು ಕೇಳಿ ಬರುತ್ತಿವೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ