Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

5 ವರ್ಷದ ಬಳಿಕ ಕಿಚ್ಚ ಸುದೀಪ್ ಗೆ ಮೆಸೇಜ್ ಮಾಡಿದ ದರ್ಶನ್. ಅಷ್ಟಕ್ಕೂ ಕಿಚ್ಚ ಸುದೀಪ್ ಗೆ ಡಿ ಬಾಸ್ ಹೇಳಿದ್ದೇನು ಗೊತ್ತ.?

Posted on December 22, 2022 By Kannada Trend News No Comments on 5 ವರ್ಷದ ಬಳಿಕ ಕಿಚ್ಚ ಸುದೀಪ್ ಗೆ ಮೆಸೇಜ್ ಮಾಡಿದ ದರ್ಶನ್. ಅಷ್ಟಕ್ಕೂ ಕಿಚ್ಚ ಸುದೀಪ್ ಗೆ ಡಿ ಬಾಸ್ ಹೇಳಿದ್ದೇನು ಗೊತ್ತ.?
ಐದು ವರ್ಷದ ಬಳಿಕ ಒಂದಾದ ಜೋಡಿ ಸ್ವತಃ ದರ್ಶನ್ ಅವರೆ ಕಿಚ್ಚ ಸುದೀಪ್ ಗೆ ಇಂದು ಮೆಸೇಜ್ ಮಾಡಿದ್ದಾರೆ ಏನೆಂದು ಗೊತ್ತಾ.?

ಕಳೆದ ಒಂದು ವಾರದಿಂದ ಎಲ್ಲೇ ನೋಡಿದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಚಾರಕ್ಕೆ ಸಂಬಂಧಪಟ್ಟಂತಹ ಸುದ್ದಿಗಳೇ ವೈರಲ್ ಆಗುತ್ತಿದೆ. ಅದರಲ್ಲಿಯೂ ಕೂಡ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಆದಂತಹ ಅಪಮಾನವನ್ನು ಯಾರಿಂದಲೂ ಕೂಡ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಸಂತೋಷದ ಸುದ್ದಿಯೊಙದು ಹೊರ ಬಿದ್ದಿದೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಸಿನಿಮಾರಂಗದಲ್ಲಿ ವಿಷ್ಣುವರ್ಧನ್ ಅಂಬರೀಶ್ ಅವರನ್ನು ಬಿಟ್ಟರೆ ಆ ಸ್ಥಾನವನ್ನು ತುಂಬಾ ಬಲ್ಲ ನಟರು ಅಂದರೆ ಕಿಚ್ಚ ಸುದೀಪ್ ಮತ್ತು ದರ್ಶನ್ ಅವರು ಅಂತ ಹೇಳುತ್ತಿದ್ದರು.

ಇವರಿಬ್ಬರೂ ಕೂಡ ಅಂಬಿ ಮತ್ತು ವಿಷ್ಣುವಿನ ಮಾದರಿಯಲ್ಲೇ ಆಪ್ತ ಸ್ನೇಹಿತರಾಗಿದ್ದರು ಆದರೆ ಅದು ಯಾರೋ ಕೆಟ್ಟ ದೃಷ್ಟಿ ಬಿತ್ತೋ ಏನೋ ಗೊತ್ತಿಲ್ಲ ಕೆಲವು ಕಾರಣಾಂತರಗಳಿಂದ ಇವರಿಬ್ಬರ ನಡುವೆ ವೈ ಮನಸು ಮೂಡುತ್ತದೆ. ತದನಂತರ ಇಬ್ಬರೂ ಕೂಡ ದೂರ ಆಗುತ್ತಾರೆ ಐದು ವರ್ಷದಿಂದ ಇವರು ಒಬ್ಬರನ್ನೊಬ್ಬರು ಭೇಟಿಯಾಗಿರಲಿಲ್ಲ, ಮಾತನಾಡಿಸಿರಲಿಲ್ಲ ಆದರೆ ಇದೀಗ ಇವರಿಬ್ಬರೂ ಮತ್ತೆ ಒಂದಾಗುವ ಎಲ್ಲಾ ಸೂಚನೆಗಳು ಸಿಕ್ಕಿದೆ. ಹೌದು, ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿಯನ್ನು ಎಸೆದ ಪ್ರಕರಣ ದಿನದಿಂದ ದಿನಕ್ಕೆ ಒಂದು ತಿರುವ ಪಡೆದುಕೊಳ್ಳುತ್ತಿದೆ.

ಅದರಲ್ಲಿಯೂ ಕೂಡ ಕಿಚ್ಚ ಸುದೀಪ್ ದರ್ಶನ ಅವರ ಬೆನ್ನೆಲುಬಿಗೆ ನಿಂತಿದ್ದು ಇದೀಗ ಎಲ್ಲರಲ್ಲಿಯೂ ಕೂಡ ಅಚ್ಚರಿಯನ್ನು ಮೂಡಿಸಿದೆ. ದರ್ಶನ್ ಅವರ ಮೇಲೆ ಇಂತಹ ಕೃತ್ಯ ಮಾಡಿದ್ದು ತಪ್ಪು ಎಂದು ಕಿಚ್ಚ ಸುದೀಪ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ದೀರ್ಘವಾದ ಸಾಲುಗಳನ್ನು ಬರೆದುಕೊಂಡಿದ್ದರು. ಇದನ್ನು ನೋಡಿದಂತಹ ಎಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಚಿತ್ರರಂಗದವರು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದರು. ಏಕೆಂದರೆ ಒಬ್ಬ ವ್ಯಕ್ತಿ ದೂರಾಗಿದ್ದಾರೆ ಅಂದಮೇಲೆ ನಾವು ಅವರ ಬಗ್ಗೆ ಚಿಂತೆ ಮಾಡುವುದಿಲ್ಲ ಅವರ ವಿಚಾರಗಳಿಗೆ ತಲೆ ಹಾಕುವುದಿಲ್ಲ.

ಆದರೆ ಕಿಚ್ಚ ಸುದೀಪ್ ಅವರು ಮಾತ್ರ ತಮ್ಮಲ್ಲಿರುವ ನೋವೆಲ್ಲ ಬಚ್ಚಿಟ್ಟು ಅವರಿಗೆ ಎಷ್ಟೇ ನೋವಾಗಿದ್ದರೂ ಅವಮಾನವಾಗಿದ್ದರೂ ಅಪಮಾನ ವಾಗಿದ್ದರು ಅವನ್ನೆಲ್ಲ ಬದಿಗಿಟ್ಟು ದರ್ಶನ್ ಅವರ ಬೆನ್ನಿಗೆ ನಿಂತಿದ್ದರು. ಎಲ್ಲ ನಟರನ್ನು ಗೌರವಿಸಿ ನಾನು ಮತ್ತು ದರ್ಶನ್ ಒಟ್ಟಾಗಿ ಇಲ್ಲದೆ ಇರಬಹುದು ನಮ್ಮಿಬ್ಬರ ನಡುವೆ ವೈ ಮನಸು ಇರಬಹುದು ಆದರೆ ಇಂತಹ ಸಮಯದಲ್ಲಿ ನಾನು ಅವರ ಬಗ್ಗೆ ಮಾತನಾಡದೆ ಇರುವುದಕ್ಕೆ ಸಾಧ್ಯವಿಲ್ಲ ದಯವಿಟ್ಟು ನಟರನ್ನು ಗೌರವಿಸಿ. ಅವರಿಗೆ ಆದ ಅವಮಾನ ಚಿತ್ರರಂಗಕ್ಕೆ ಆದ ಅವಮಾನ ಆ ವಿಡಿಯೋ ನೋಡಿದ ತಕ್ಷಣ ನನ್ನ ಮನಸ್ಸಿಗೆ ಘಾಸಿ ಉಂಟಾಯಿತು.

ಜೀವದ ಗೆಳೆಯನಿಗೆ ಈ ರೀತಿ ಆಗಿರುವುದು ನಿಜಕ್ಕೂ ಕೂಡ ಬೇಸರ ಉಂಟು ಮಾಡಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದನ್ನು ನೋಡಿದಂತಹ ದಾಸಾ ದರ್ಶನ್ ಅವರು ಮೊದಲ ಬಾರಿಗೆ ಐದು ವರ್ಷದ ಬಳಿಕೆಯ ಕಿಚ್ಚ ಸುದೀಪ್ ಅವರಿಗೆ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. “ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂದು ನಗುವ ಸಿಂಬಲ್ ಅನ್ನು ಕಳಿಸಿದ್ದಾರೆ” ನಿಜಕ್ಕೂ ಇದು ಆಶ್ಚರ್ಯ ಅಂತಾನೆ ಹೇಳಬಹುದು. ಏಕೆಂದರೆ ಸುದೀಪ್ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸಂದರ್ಶನದಲ್ಲಿ ದರ್ಶನ್ ಅವರ ಬಗ್ಗೆ ಮಾತನಾಡುತ್ತಿದ್ದರು.

ಆದರೆ ದರ್ಶನ್ ಅವರು ಮಾತ್ರ ಇದುವರೆಗೂ ಸುದೀಪ್ ಬಗ್ಗೆ ಎಲ್ಲಿಯೂ ಕೂಡ ಯಾವುದೇ ರೀತಿಯಾದಂತಹ ಹೇಳಿಕೆಯನ್ನು ನೀಡಿರಲಿಲ್ಲ. ಈಗ ಇದ್ದಕ್ಕಿದ್ದ ಹಾಗೆ ಕಿಚ್ಚ ಸುದೀಪ್ ಮೆಸೇಜ್ ಮಾಡಿರುವುದು ನಿಜಕ್ಕೂ ಸಂತೋಷದ ವಿಚಾರವೇ ಇನ್ನು ಮುಂದೆಯಾದರೂ ಇವರಿಬ್ಬರು ತಮ್ಮ ಮನಸ್ಸಿನಲ್ಲಿ ಇರುವಂತಹ ವೈಮನಸ್ಸನ್ನು ಬಿಟ್ಟು ಮೊದಲಿನಂತೆ ಒಂದಾಗಲಿ. ಜೀವದ ಗೆಳೆಯರು ಒಟ್ಟಾಗಿ ಇರುವುದನ್ನು ನೋಡುವುದಕ್ಕೆ ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ ಎಂಬ ವಿಚಾರವನ್ನು ಅರಿತುಕೊಳ್ಳಲಿ ಎಂಬುದಷ್ಟೇ ನಮ್ಮ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

 

Entertainment Tags:D Boss, Dacchu kiccha, Darshan, Kiccha sudeep, Kranti, Sudeep
WhatsApp Group Join Now
Telegram Group Join Now

Post navigation

Previous Post: ನಾಯಿ ಬಾಲ ಯಾವತ್ತಿದ್ರೂ ಡೊಂಕು ದರ್ಶನ್ ಪರವಾಗಿ ಮಾತನಾಡಿ ನಿಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳಬೇಡಿ ಎಂದು ಸುದೀಪ್ಗೆ ಎಚ್ಚರಿಕೆ ಕೊಟ್ಟ ಫ್ಯಾನ್ಸ್, ಇದಕ್ಕೆ ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ.?
Next Post: ಯಾರೋ ಮಾಡಿದ ತಪ್ಪನ್ನು ಅಪ್ಪು ಅಭಿಮಾನಿಗಳ ಮೇಲೆ ಹಾಕಿದ್ರೆ ಸುಳ್ಳು ಸತ್ಯವಾಗುವುದಿಲ್ಲ, ನನ್ನ ಚಿಕ್ಕಪ್ಪನ ಅಭಿಮಾನಿಗಳ ಬಗ್ಗೆ ಮಾತನಾಡಿದ್ರೆ ಸುಮ್ಮನಗಲ್ಲ ಎಂದು ಗುಡುಗಿಡ ಯುವರಾಜ್.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore