Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

“ಪುನೀತ ಪರ್ವ” ಕಾರ್ಯಕ್ರಮಕ್ಕೆ ದರ್ಶನ್ ಬರದಿರಲು ನಿಜವಾದ ಕಾರಣವೇನು ಗೊತ್ತಾ.? ಡಿ-ಬಾಸ್ ಅನ್ನು ಬಯ್ಯುವ ಮುನ್ನ ಇದನ್ನೊಮ್ಮೆ ನೋಡಿ, ಸತ್ಯಾಂಶ ತಿಳಿಯುತ್ತೆ.!

Posted on October 26, 2022 By Kannada Trend News No Comments on “ಪುನೀತ ಪರ್ವ” ಕಾರ್ಯಕ್ರಮಕ್ಕೆ ದರ್ಶನ್ ಬರದಿರಲು ನಿಜವಾದ ಕಾರಣವೇನು ಗೊತ್ತಾ.? ಡಿ-ಬಾಸ್ ಅನ್ನು ಬಯ್ಯುವ ಮುನ್ನ ಇದನ್ನೊಮ್ಮೆ ನೋಡಿ, ಸತ್ಯಾಂಶ ತಿಳಿಯುತ್ತೆ.!

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಕ್ಟೋಬರ್ 21 ರಂದು ಬೆಂಗಳೂರಿನ ಅರಮನೆ ಮೈದಾನದ ಮುಂದೆ ಪುನೀತ ಪರ್ವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆ ಯೋಜನೆ ಮಾಡಲಾಗಿತ್ತು. ಈ ಒಂದು ಪುನೀತ ಪರ್ವ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್‌ ನಾ ಪ್ರತಿಯೊಬ್ಬ ಕಲಾವಿದರಿಗೂ ಕೂಡ ಆಹ್ವಾನವನ್ನು ನೀಡಲಾಗಿತ್ತು. ವಿಶೇಷ ಏನೆಂದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮನೆಗೆ ಭೇಟಿ ನೀಡಿ ಪುನೀತ ಪರ್ವ ಇನ್ವಿಟೇಶನ್ ಕಾರ್ಡ್ ಅನ್ನು ನೀಡಿ ಈ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಇದಿಷ್ಟು ಮಾತ್ರ ವಲ್ಲದೆ ಕಾರ್ಯಕ್ರಮದ ಹಿಂದಿನ ದಿನವೂ ಕೂಡ ಬಿಡುವು ಮಾಡಿಕೊಂಡು ಕರೆ ಮಾಡಿ ಎಲ್ಲರಿಗೂ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಹೇಳಿದರು‌.

ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಹೀಗೆ ದಕ್ಷಿಣ ಭಾರತದ ಸಾಕಷ್ಟು ಸ್ಟಾರ್ ಸೆಲೆಬ್ರೆಟಿಗಳನ್ನು ಕೂಡ ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಯಿತು. ವಿಶೇಷವಾಗಿ ದರ್ಶನ್ ಅವರಿಗೂ ಕೂಡ ಈ ಕಾರ್ಯಕ್ರಮಕ್ಕೆ ಬರುವಂತೆ ಅಶ್ವಿನಿ ಅವರು ಮನವಿ ಮಾಡಿಕೊಂಡಿದ್ದರು. ಅಶ್ವಿನಿ ಅವರು ಮನವಿ ಮಾಡಿಕೊಂಡಾಗ ದರ್ಶನ್ ಅವರು ಖಂಡಿತವಾಗಿಯೂ ನಾನು ಈ ಕಾರ್ಯಕ್ರಮಕ್ಕೆ ಬರುತ್ತೇನೆ ಅಂತ ಹೇಳಿದ್ದರು. ಇನ್ನು ದರ್ಶನ್ ಅವರು ಈ ಕಾರ್ಯಕ್ರಮಕ್ಕೆ ಬರುತ್ತಾರೆ ಅಂತ ಸಾಕಷ್ಟು ಫ್ಲೆಕ್ಸ್ ಬೋರ್ಡ್ ಗಳಲ್ಲಿಯೂ ಕೂಡ ಹಾಕಿಸಲಾಗಿತ್ತು.

ಅಷ್ಟೇ ಅಲ್ಲದೆ ಪುನೀತ ಪರ್ವ ಕಾರ್ಯಕ್ರಮದ ಉಸ್ತುವಾರಿಯ ವಹಿಸಿಕೊಂಡಿದ್ದಂತಹ ತಂಡವು ಕೂಡ ಈ ಕಾರ್ಯಕ್ರಮಕ್ಕೆ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಬಂದೇ ಬರುತ್ತಾರೆ ಅಂತ ಅಂದಿದ್ದರು. ಕೆಲವು ಮಾಹಿತಿಗಳ ಪ್ರಕಾರ ಪುನೀತ ಪರ್ವ ವೇದಿಕೆಯ ಮೇಲೆ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರನ್ನೂ ಕೂಡ ಒಂದು ಮಾಡಲಾಗುತ್ತದೆ ಅಂತ ಅಂದುಕೊಂಡಿದ್ದರು. ಅಭಿಮಾನಿಗಳು ಕೂಡ ಸಾಕಷ್ಟು ಕಾತುರದಿಂದ ಇವರಿಬ್ಬರ ಸಮ್ಮಿಲನಕ್ಕೆ ದಿನಗಣನೆಯನ್ನು ಲೆಕ್ಕ ಹಾಕುತ್ತಿದ್ದರು ಆದರೆ ಎಲ್ಲರ ನಿರೀಕ್ಷೆ ಹುಸಿಯಾಯಿತು ಅಂತಾನೆ ಹೇಳಬಹುದು.

ಒಂದು ಕಡೆ ಕಿಚ್ಚ ಸುದೀಪ್ ಅವರು ತಮ್ಮ ಪತ್ನಿಯ ಜೊತೆ ಪ್ಯಾರಿಸ್ ಪ್ರವಾಸಕ್ಕೆ ತೆರಳಿದರು ಪ್ರವಾಸ ಮುಗಿಸಿ ಆಸ್ಟ್ರೇಲಿಯಾಗಿ ಹೋಗಿ ಕ್ರಿಕೆಟ್ ಮ್ಯಾಚ್ ಅನ್ನು ವೀಕ್ಷಣೆ ಮಾಡಿದರು. ಮತ್ತೊಂದು ಕಡೆ ದರ್ಶನ್ ಅವರು ಕೂಡ ಈ ಕಾರ್ಯಕ್ರಮಕ್ಕೆ ಬರಲಿಲ್ಲ ಇದನ್ನು ನೋಡಿದಂತಹ ಅಭಿಮಾನಿಗಳು ಕಿಚ್ಚ ಸುದೀಪ್ ಮತ್ತು ದರ್ಶನ್ ಇಬ್ಬರನ್ನು ಕೂಡ ಬಾಯಿಗೆ ಬಂದ ಹಾಗೆ ಬೈದುಕೊಳ್ಳುತ್ತಾರೆ. ಆದರೆ ಕೆಲವು ಅಭಿಮಾನಿಗಳು ಕಿಚ್ಚ ಸುದೀಪ ಅವರು ವಿದೇಶದಲ್ಲಿದ್ದರು ಹಾಗಾಗಿ ಈ ಕಾರ್ಯಕ್ರಮಕ್ಕೆ ಬರಲಿಲ್ಲ ಒಂದು ವೇಳೆ ಅವರು ಕರ್ನಾಟಕದಲ್ಲಿ ಇದ್ದಿದ್ದರೆ ಖಂಡಿತವಾಗಿಯೂ ಕೂಡ ಈ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ ಬರುತ್ತಿದ್ದರು ಎಂದು ಹೇಳಿದರು.

ಇನ್ನು ಕೆಲವರು ದರ್ಶನವರು ಕರ್ನಾಟಕದಲ್ಲಿ ಇದ್ದರೂ ಕೂಡ ಈ ಕಾರ್ಯಕ್ರಮಕ್ಕೆ ಬರದೇ ಇದ್ದಿದ್ದು ನಿಜಕ್ಕೂ ಕೂಡ ಬೇಸರದ ಸಂಗತಿ ಎಂದು ಹೇಳಿದ್ದಾರೆ. ಆದರೆ ದರ್ಶನ್ ಅವರ ಒಳ ಮನಸು ಹಾಗೂ ಅವರು ಈ ಕಾರ್ಯಕ್ರಮಕ್ಕೆ ಬರದಿರಲು ಇರುವ ಮುಖ್ಯ ಉದ್ದೇಶ ಯಾರಿಗೂ ಕೂಡ ತಿಳಿದಿಲ್ಲ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಲಾಗಿದೆ ಈ ಕಾರಣಕ್ಕಾಗಿ ದರ್ಶನ್ ಅವರು ಪಾಲ್ಗೊಳ್ಳುವಂತಹ ಯಾವುದೇ ಕಾರ್ಯಕ್ರಮವನ್ನು ಕೂಡ ಟಿವಿಯಲ್ಲಿ ಟೆಲಿಕಾಸ್ಟ್ ಮಾಡಲಾಗುವುದಿಲ್ಲ. ಅದು ಸಿನಿಮಾಗೆ ಸಂಬಂಧಪಟ್ಟ ಕಾರ್ಯಕ್ರಮವಿರಲಿ ಅಥವಾ ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟ ಕಾರ್ಯಕ್ರಮವಿರಲಿ ಇದೊಂದೇ ಒಂದು ಕಾರಣಕ್ಕಾಗಿ ದರ್ಶನ್ ಅವರು ಪುನೀತ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ.

View this post on Instagram

A post shared by Namma Sandalwood🔹 (@namma.sandalwood)

ಒಂದು ವೇಳೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ನಾನು ಬಂದಿರುವ ಕಾರಣ ಈ ಪ್ರೋಗ್ರಾಮ್ ಅನ್ನು ಟಿವಿಯಲ್ಲಿ ಟೆಲಿಕಾಸ್ಟ್ ಮಾಡುವುದಿಲ್ಲ ಇದರಿಂದ ಅಭಿಮಾನಿಗಳು ಈ ಕಾರ್ಯಕ್ರಮ ನೋಡಲು ಸಾಧ್ಯವಾಗುವುದಿಲ್ಲ ಈ ಕಾರ್ಯಕ್ರಮದಿಂದ ವಂಚಿತರಾಗಿರುತ್ತಾರೆ. ಹಾಗಾಗಿ ನಾನೊಬ್ಬ ಇಲ್ಲದಿದ್ದರೂ ಪರವಾಗಿಲ್ಲ ಪುನೀತ ಪರ್ವ ಕಾರ್ಯಕ್ರಮವನ್ನು ಅಭಿಮಾನಿಗಳೆಲ್ಲರೂ ಕೂಡ ಕಣ್ತುಂಬಿಕೊಳ್ಳಬೇಕು ಎಂಬ ಒಂದೇ ಒಂದು ಕಾರಣಕ್ಕಾಗಿ ಪುನೀತ ಪರ್ವ ಕಾರ್ಯಕ್ರಮಕ್ಕೆ ದರ್ಶನ್ ಅವರು ಭಾಗಿಯಾಗಿಲ್ಲ.

ನಿಜಕ್ಕೂ ಇದು ಮೆಚ್ಚುವ ಕೆಲಸ ಆದರೆ ಕೆಲವು ಅಭಿಮಾನಿಗಳು ದರ್ಶನ್ ಅವರು ಪುನೀತ ಪರ್ವ ಕಾರ್ಯಕ್ರಮಕ್ಕೆ ಬರದಿರಲು ಇರುವ ಹಿಂದಿನ ಕಾರಣವನ್ನು ತಿಳಿಯದೆ ಬಾಯಿಗೆ ಬಂದ ಹಾಗೆ ಬೈದಿದ್ದು ನಿಜಕ್ಕೂ ಕೂಡ ಬೇಸರ ತಂದಿದೆ. ಅದೇನೆ ಆಗಲಿ ದರ್ಶನ್ ಅವರ ಈ ಒಳ್ಳೆಯ ಗುಣ ಅಂತ ಎಲ್ಲರೂ ಮೆಚ್ಚಿಕೊಂಡಿದ್ದಾರೆ ಈ ಕಾರಣದಿಂದಲೇ ದರ್ಶನ್ ಅವರು ಕರ್ನಾಟಕದಲ್ಲಿ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿದ್ದರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.

Entertainment Tags:Appu, D Boss, Darshan, Gandadagudi pre event, Puneeth, Puneetha Parva
WhatsApp Group Join Now
Telegram Group Join Now

Post navigation

Previous Post: ರವಿಚಂದ್ರನ್ ಗೆ ಸಂತ್ವಾನ ಹೇಳಲು ಮನೆಗೆ ಬಂದ ಅಶ್ವಿನಿ, ರವಿ ಸರ್ ಗೆ ಅಶ್ವಿನಿ ಮೇಡಂ ಕೊಟ್ಟ ಭರವಸೆ ಏನು ಗೊತ್ತ.? ಇನ್ಮುಂದೆ ರವಿಚಂದ್ರನ್ ಅವರ ಅದೃಷ್ಟವೇ ಬದಲಾಗುತ್ತೆ.
Next Post: ದೀಪಾವಳಿ ಹಬ್ಬದಂದು ದೇವತೆ ಹಾಗೆ ಕಂಗಳಿಸುತ್ತಿರುವ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಈ ಮಸ್ತ್ ಫೋಟೋಶೂಟ್ ಒಮ್ಮೆ ನೋಡಿ ನಿಜಕ್ಕೂ ಕಳೆದು ಹೋಗ್ತೀರಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore