ಉಪ್ಪಿಗಿಂತ ರುಚಿಯಿಲ್ಲ ಎನ್ನುವ ಗಾದೆ ಮಾತು ರೂಢಿಯಲ್ಲಿದೆ. ಉಪ್ಪಿಲ್ಲದೆ ಆಹಾರ ಸೇವಿಸಿದರೆ ಇದರ ಅನುಭವ ಖಂಡಿತ ಆಗುತ್ತದೆ. ಯಾಕೆಂದರೆ, ಉಪ್ಪಿಗಿರುವ ಮೌಲ್ಯ ಅಂತಹದ್ದು. ಉಪ್ಪು ರುಚಿ ಮಾತ್ರ ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಉಪ್ಪು ಅನೇಕ ಮನೆಮದ್ದುಗಳಿಗೆ ಅದ್ಭುತ ಔಷಧಿ ಕೂಡ ಆಗಿದೆ ಇದು ಮಾತ್ರ ಅಲ್ಲದೆ ದೃಷ್ಟಿ ದೋಷ ನಿವಾರಣೆಗೂ ಕೂಡ ಉಪ್ಪನ್ನು ಬಳಸುತ್ತಾರೆ.
ಮನುಷ್ಯನಿಗೆ ಅನೇಕ ರೀತಿಯಲ್ಲಿ ಉಪ್ಪು ಉಪಯೋಗಕ್ಕೆ ಬರುತ್ತದೆ. ಆದರೆ ಉಪ್ಪಿನ ಅತಿಯಾದ ಸೇವನೆಯಿಂದ ಅಷ್ಟೇ ತೊಂದರೆಯೂ ಕೂಡ ಆಗುತ್ತದೆ. ಇದೆಲ್ಲದರ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಉಪ್ಪಿನ ಸಹಾಯದಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.
● ಒಂದು ಲೋಟ ಬಿಸಿನೀರಿಗೆ ಅಡುಗೆ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದು ಸ್ವಲ್ಪ ಆರಿದ ಬಳಿಕ ಬಾಯಿಯನ್ನು ಮುಕ್ಕಳಿಸಿದರೆ ಬಾಯಿಯಲ್ಲಿ ಆಗುವ ಹಣ್ಣುಗಳು ವಾಸಿ ಆಗುತ್ತವೆ.
● ಒಮ್ಮೊಮ್ಮೆ ಕಿವಿಗೆ ಇರುವೆಗಳು ಹೋಗುತ್ತವೆ. ಅಂತಹ ಸಮಯದಲ್ಲಿ ಬಿಸಿನೀರಿನ ದ್ರಾವಣವನ್ನು ಕಿವಿಗೆ ಹಾಕುವುದರಿಂದ ಅವು ಸಾಯುತ್ತವೆ.
● ಸಂಧಿವಾತ ಸಮಸ್ಯೆಯಿಂದ ಕೈ-ಕಾಲು ಊದಿಕೊಂಡಿದ್ದರೆ ಅದಕ್ಕೆ ಉಪ್ಪಿನ ಶಾಖ ಕೊಟ್ಟರೆ ನೋವು ಕಡಿಮೆ ಆಗುತ್ತದೆ ಮತ್ತು ಊತ ಕೂಡ ಕಡಿಮೆಯಾಗುತ್ತದೆ.
● ಸ್ವಲ್ಪ ಉಪ್ಪನ್ನು ಸ್ನಾನ ಮಾಡುವ ನೀರಿಗೆ ಹಾಕಿ ಆ ನೀರಿನಿಂದ ತಲೆ ಸ್ನಾನ ಮಾಡಿದರೆ ತಲೆ ಹೊಟ್ಟು ಸಮಸ್ಯೆ ನಿವಾರಣೆ ಆಗುತ್ತದೆ. ಮತ್ತು ತಲೆ ಕೂದಲು ಉದುರುವ ಸಮಸ್ಯೆ ಕೂಡ ನಿಲ್ಲುತ್ತದೆ.
ಜಿಲ್ಲಾ ನಾಯಾಲಯದಲ್ಲಿ ಉದ್ಯೋಗವಕಾಶ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ. PUC ಪಾಸ್ ಆಗಿದ್ರೆ ಸಾಕು.!
● ಉಪ್ಪಿನಿಂದ ಅಂಗಾಂಗಗಳನ್ನು ಒತ್ತಿ ಸ್ನಾನ ಮಾಡುವುದರಿಂದ ನೆಗಡಿ ಆಗಿದ್ದರೆ ಅದು ಶೀಘ್ರವಾಗಿ ಕಡಿಮೆ ಆಗುತ್ತದೆ. ರಕ್ತಚಲನೆ ವೃದ್ದಿಯಾಗಲು, BP ನಾರ್ಮಲ್ ಆಗಲು, ರೋಗ ನಿರೋಧಕ ಶಕ್ತಿ ಅಧಿಕವಾಗಲು, ಮನಸನ್ನು ನಿಯಂತ್ರಣಕ್ಕೆ ತಂದು ಶಾಂತಿಯಾಗಿರಲು ಇದನ್ನು ಮಾಡಬಹುದು.
● ಒಂದು ಅರಳು ಉಪ್ಪು ಹಾಗೂ ಒಂದು ಲವಂಗವನ್ನು ಬಾಯಲ್ಲಿ ಇಟ್ಟುಕೊಂಡು ಅದರ ನೀರನ್ನು ಕುಡಿಯುತ್ತಿದ್ದರೆ ಕೆಮ್ಮು ದಮ್ಮು ಮತ್ತು ಕಫದ ಸಮಸ್ಯೆ ನಿವಾರಣೆ ಆಗುತ್ತದೆ.
● ಬಿದ್ದ ಕಾಯಗಳು ಅಥವಾ ಹರಿತವಾದ ವಸ್ತುಗಳಿಂದ ಕುಯ್ದುಕೊಂಡಾಗ ಆಗುವ ಗಾಯಗಳು ಅಥವಾ ಇನ್ಯಾವುದೇ ರೀತಿ ಗಾಯಗಳಾಗಿದ್ದರು ಕೂಡ ಅದಕ್ಕೆ ಚಿಕಿತ್ಸೆ ಮಾಡುವ ಮೊದಲಿಗೆ ಹತ್ತಿಯಲ್ಲಿ ಉಪ್ಪಿನ ದ್ರಾವಣ ಹದ್ದಿ ಗಾಯವನ್ನು ಒರೆಸಿ ನಂತರ ಚಿಕಿತ್ಸೆ ಮಾಡುವುದು ಒಳ್ಳೆಯದು.
ಸುಲಭವಾಗಿ ಶನಿ ದೋಷ ಪರಿಹಾರ ಆಗಬೇಕು ಎಂದರೆ ಸ್ನಾನ ಮಾಡುವ ನೀರಿಗೆ ಇವುಗಳನ್ನು ಬೆರೆಸಿ ಸಾಕು.!
● ತುಳಸಿ ರಸದಲ್ಲಿ ಅಡುಗೆ ಉಪ್ಪನ್ನು ಸೇರಿಸಿ ಚೇಳು ಕಚ್ಚಿದ ಭಾಗಕ್ಕೆ ಲೇಪನ ಮಾಡುವುದರಿಂದ ಕಡಿತದ ನೋವು ಕಡಿಮೆ ಆಗುತ್ತದೆ.
● ಅತಿಯಾಗಿ ಉಪ್ಪನ್ನು ಸೇವಿಸಿದರೆ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಆದರೆ ಇದು ದೇಹದ ಆರೋಗ್ಯಕ್ಕೆ ಕೆಟ್ಟದು, ಇಂಥವರು ಮುಂದಿನ ದಿನಗಳಲ್ಲಿ ಮೂತ್ರಪಿಂಡದ ಸಮಸ್ಯೆಗೆ ಒಳಗಾಗಬೇಕಾಗುತ್ತದೆ.
● ಮನೆ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿ ದೋಷವನ್ನು ಮತ್ತು ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳ ಪ್ರಭಾವವನ್ನು ಹೊರಗೆ ಹಾಕಲು ಮನೆ ಒರೆಸುವಾಗ ಒಂದು ಹಿಡಿ, ಕಲ್ಲು ಉಪ್ಪನ್ನು ಹಾಕಿ ಮನೆ ಒರೆಸಿದರೆ ಪರಿಣಾಮಕಾರಿಯಾಗಿ ಇದು ಕೆಲಸ ಮಾಡುತ್ತದೆ.
● ಒಂದೆರಡು ಹರಳು ಉಪ್ಪಿನ ಜೊತೆ ಒಂದು ಒಣ ಮೆಣಸಿನಕಾಯಿ ಹಾಕಿ ನಿವಾಳಿಸುವುದರಿಂದ ಯಾರಿಗಾದರೂ ದೃಷ್ಟಿ ದೋಷ ಆಗಿದ್ದರೆ ಅದು ನಿವಾರಣೆ ಆಗುತ್ತದೆ.