ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ನಮ್ಮನ್ನು ಅಗಲಿ ಹೋಗಿ 11 ತಿಂಗಳು ಕಳೆದೆ ಹೋಗಿದೆ ಆದರೂ ಕೂಡ ಪ್ರತಿನಿತ್ಯವೂ ಅವರನ್ನು ಒಂದಲ್ಲ ಒಂದು ವಿಚಾರಕ್ಕಾಗಿ ನೆನಪು ಮಾಡಿಕೊಳ್ಳುತ್ತೇವೆ. ಸದ್ಯಕ್ಕೆ ಅಪ್ಪು ಅವರ ಗಂಧದ ಗುಡಿ ಟ್ರಲೈರ್ ಬಿಡುಗಡೆಯಾಗಿದೆ ಎಲ್ಲಾ ಕಡೆಯಲ್ಲೂ ಕೂಡ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಹಾಗಾಗಿ ಗಂಧದ ಗುಡಿಯ ಪ್ರೀ ಈವೆಂಟ್ ಕಾರ್ಯಕ್ರಮವನ್ನು ಅಕ್ಟೋಬರ್ 21ನೇ ತಾರೀಕು ಹಮ್ಮಿಕೊಳ್ಳಲಾಗಿದೆ. ಈ ಒಂದು ಪ್ರೀ ಇವೆಂಟ್ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನಾ ಸಾಕಷ್ಟು ನಟ ನಟಿಯರು ಪಾಲ್ಗೊಳ್ಳಲಿದ್ದಾರೆ. ವಿಶೇಷ ಏನೆಂದರೆ ಬಾಲಿವುಡ್ ನ ಅಮಿತಾ ಬಚ್ಚನ್ ನಿಂದ ಹಿಡಿದು ತಮಿಳುನಾಡಿನ ರಜನಿಕಾಂತ್ ತೆಲುಗುನಲ್ಲಿನ ಚಿರಂಜೀವಿ ಸರ್ಜಾ ಸೇರಿದಂತೆ ಇಡೀ ಸೌತ್ ಇಂಡಿಯಾದ ನಾಯಕ ನಟರು ಈ ಒಂದು ಪ್ರಿ ಇವೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ವಿಶೇಷ ಏನೆಂದರೆ ಅಪ್ಪು ಅವರ ಗಂಧದಗುಡಿ ಸಿನಿಮಾದ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಇಬ್ಬರೂ ಕೂಡ ಮುಖ ಮುಖಿಯಾಗಲಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಮತ್ತು ಕಿಚ್ಚ ಸುದೀಪ್ ನಡುವಿನ ಸಂಬಂಧ ಹಾಳಾಗಿ ನಾಲ್ಕೈದು ವರ್ಷಗಳೇ ಕಳೆದು ಹೋಗಿದೆ. ಇಬ್ಬರು ಕೂಡ ಒಬ್ಬರನ್ನು ಒಬ್ಬರು ಮುಖ ನೋಡುತ್ತಿಲ್ಲ ಅಷ್ಟೇ ಅಲ್ಲದೆ ಸುದೀಪ್ ಅವರು ಪಾಲ್ಗೊಳ್ಳುವಂತಹ ಕಾರ್ಯಕ್ರಮದಲ್ಲಿ ದರ್ಶನ್ ಅವರು ಭಾಗಿಯಾಗುವುದಿಲ್ಲ. ದರ್ಶನ್ ಅವರು ಪಾಲ್ಗೊಳ್ಳುವಂತಹ ಕಾರ್ಯಕ್ರಮದಲ್ಲಿ ಸುದೀಪ್ ಅವರು ಪಾಲ್ಗೊಳ್ಳುವುದಿಲ್ಲ ಆದರೆ ಇದೀಗ ಅಪ್ಪು ಅವರ ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಮಾತ್ರ ಇಬ್ಬರೂ ಎದುರುಬದುರು ಆಗುತ್ತಿದ್ದಾರೆ. ಅಷ್ಟೇ ಅಲ್ಲದೆ ಅಪ್ಪು ಅವರ ಕಾರ್ಯಕ್ರಮದ ಮೂಲಕ ಇಬ್ಬರೂ ದಿಗ್ಗಜರು ಕೂಡ ತಮ್ಮ ಮನಸ್ಸಿನಲ್ಲಿ ಇದ್ದಂತಹ ವೈಮನಸ್ಸನ್ನು ಬಿಟ್ಟು ಮತ್ತೆ ಒಂದಾಗಲಿದ್ದಾರೆ.
ಈ ವಿಚಾರವನ್ನು ಗಂಧದಗುಡಿ ಪ್ರೀತಿ ಇವೆಂಟ್ ಕಾರ್ಯಕ್ರಮವನ್ನು ಆಯೋಜಿಸುತ್ತಿರುವಂತಹ ಮೇಲ್ವಿಚಾರಕರು ಹಾಗೂ ಮುಖ್ಯಸ್ಥರೇ ಮಾಧ್ಯಮದವರೊಟ್ಟಿಗೆ ಹಂಚಿಕೊಂಡಿದ್ದಾರೆ ಹೌದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ಪುನೀತ್ ರಾಜಕುಮಾರ್ ಅವರ ಕನಸಿನ ಕೂಸು ಗಂಧದಗುಡಿ ಎಂಬ ಡಾಕ್ಯೂಮೆಂಟರಿ ಚಿತ್ರವನ್ನು ಕಳೆದ ವರ್ಷ ಚಿತ್ರೀಕರಣ ಮಾಡಲಾಗಿತ್ತು. ಅಷ್ಟೇ ಅಲ್ಲದೆ ನವಂಬರ್ ಒಂದನೇ ತಾರೀಕು ಈ ಒಂದು ಡಾಕ್ಯುಮೆಂಟರಿ ಸಿನಿಮಾವನ್ನು ಬಿಡುಗಡೆ ಮಾಡಬೇಕು ಅಂತ ಅಪ್ಪು ಅವರು ಅಂದುಕೊಂಡಿದ್ದರು. ಆದರೆ ಅದಕ್ಕೂ ಮೊದಲೇ ಅವರು ನಮ್ಮೆಲ್ಲರನ್ನು ಬಿಟ್ಟುಹೋದರು ಈ ಕಾರಣಕ್ಕಾಗಿ ಈ ಒಂದು ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾವನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ.
ಕರ್ನಾಟಕದ ನೆಲಾ ಜಲ ಹಾಗೂ ವನ್ಯಜೀವಿಗಳ ಬಗ್ಗೆ ವೈಭವೀಕರಿಸಿ ತೆಗೆದಂತಹ ಪ್ರಕೃತಿಯ ರಮಣೀಯ ಗಂಧದಗುಡಿಯನ್ನು ಕಣ್ತುಂಬಿಕೊಳ್ಳಲು ಹಾಗೂ ಈ ಒಂದು ಸಿನಿಮಾವನ್ನು ವೀಕ್ಷಣೆ ಮಾಡಲು ಇದೀಗ ಸದಾ ಅವಕಾಶ ಒದಗಿದೆ ಅಂತಾನೆ ಹೇಳಬಹುದು. ಹೌದು ಈಗಾಗಲೇ ಕಳೆದ ವಾರವಷ್ಟೇ ಗಂಧದಗುಡಿ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಯಿತು. ಅದೇ ರೀತಿ 21 ನೇ ತಾರೀಕು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಈ ಒಂದು ಕಾರ್ಯಕ್ರಮಕ್ಕೆ ಮುಖ್ಯಸ್ಥರಾಗಿ ರಾಜಕುಮಾರ್ ಕುಟುಂಬದ ಪರಿವಾರದ ಎಲ್ಲರೂ ಇರಲಿದ್ದಾರೆ. ಜೊತೆಗೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಕೂಡ ಭಾಗಿಯಾಗಲಿದ್ದಾರೆ.
ಇದು ನಿಜಕ್ಕೂ ಸಂತೋಷವಾದ ವಿಚಾರವೇ ಏಕೆಂದರೆ ಒಂದು ಕಡೆ ಅಪ್ಪು ಅವರ ಕೊನೆಯ ಸಿನಿಮಾವನ್ನು ಕಂಡುಕೊಳ್ಳುವಂತಹ ಅವಕಾಶ ಇನ್ನು ದರ್ಶನ್ ಮತ್ತು ಸುದೀಪ್ ಒಂದಾಗುತ್ತಿರುವಂತಹ ಈ ಒಂದು ಸುಂದರ ಕ್ಷಣವನ್ನು ನೋಡುವಂತಹ ಸದಾಾವಕಾಶ. ಇನ್ನು ಮುಂದೆಯಾದರೂ ದರ್ಶನ್ ಮತ್ತು ಕಿಚ್ಚ ಸುದೀಪ್ ನಡುವೆ ಇರುವಂತಹ ಫಾನ್ ವಾರ್ ಕಡಿಮೆಯಾಗುತ್ತದೆ ಎಂಬುದು ಕೆಲವು ಸೀನಿರಸಿಕರ ಅಭಿಪ್ರಾಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ..