ರಾಧಿಕಾ ಕುಮಾರಸ್ವಾಮಿ
ಇಂದು ಹೆಚ್.ಡಿ ಕುಮಾರಸ್ವಾಮಿ ಅವರ 63ನೇ ವರ್ಷದ ಹುಟ್ಟುಹಬ್ಬ ಈ ಹುಟ್ಟುಹಬ್ಬವನ್ನು ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಮನೆಯಲ್ಲೇ ಸರಳವಾಗಿ ಆಚರಿಸಿಕೊಂಡಿದ್ದಾರೆ. ಹೌದು ರಾಮನಗರ ಸಮೀಪದಲ್ಲಿ ಇರುವಂತಹ ನಿವಾಸದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಮತ್ತು ಸೊಸೆ ರೇವತಿ ಹಾಗೂ ಮೊಮ್ಮಗ ಅವ್ಯಾನ್ ದೇವ್ ಅವರೊಟ್ಟಿಗೆ ಕೇಕ್ ಕತ್ತರಿಸುವ ಮೂಲಕ ಈ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ನಿಖಿಲ್ ಕುಮಾರ ಸ್ವಾಮಿಯವರು ಹೆಚ್.ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಕೆಲವೊಂದಷ್ಟು ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ಭಾವನಾತ್ಮಕ ಸಾಲುಗಳನ್ನು ಬರೆದು ಕೊಂಡಿದ್ದಾರೆ. ಹೌದು ನಿಖಿಲ್ ಕುಮಾರಸ್ವಾಮಿ ಅವರು ತಮ್ಮ instagram ಸೇರಿದಂತೆ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ತಂದೆಯ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದು.
ತಂದೆಗೆ ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯಗಳು ಕೋರಿದ್ದಾರೆ ನಿಖಿಲ್ ಬರೆದುಕೊಂಡಿರುವ ಸಾಲುಗಳಾದರೂ ಏನು ಎಂಬುದನ್ನು ನೋಡುವುದಾದರೆ nikhilgowda_jaguar ನನ್ನ ಆತ್ಮಶಕ್ತಿ , ನನ್ನ ಪಾಲಿನ ಸ್ಫೂರ್ತಿ ಮತ್ತು ಚೈತನ್ಯ ಸದಾ ನನ್ನನ್ನು ವಾತ್ಸಲ್ಯದಿಂದ ಪೊರೆಯುವ ವಾತ್ಸಲ್ಯಮಯಿ, ನನ್ನ ಪ್ರೀತಿಯ ಅಪ್ಪ ನಿಮಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆ ಭಗವಂತ ನಿಮಗೆ ಎಲ್ಲವನ್ನೂ ಒಳ್ಳೆಯದನ್ನೇ ಮಾಡಲಿ ಹಾಗೂ ಜನಸೇವೆ ಮಾಡಲು ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಂದೆಯ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.
ಮತ್ತೊಂದು ಕಡೆ ರಾಜ್ಯದಲ್ಲಿ ಕುಮಾರಣ್ಣ ಅವರ ಹಲವು ಅಭಿಮಾನಿಗಳು ಕುಮಾರಣ್ಣ ಅವರು ಮುಂದಿನ ವರ್ಷ ಮುಖ್ಯಮಂತ್ರಿ ಆಗಲಿ ಎಂದು ಬಯಸಿದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ಭಗವಂತ ಆಯಸ್ಸು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದು ಹಲವಾರು ದೇವಸ್ಥಾನದಲ್ಲಿ ಪೂಜೆ ಹವನ ಹೋಮಗಳನ್ನು ಮಾಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕರ್ನಾಟಕದಲ್ಲಿ ಸತತ ಮೂರು ಬಾರಿ ಮುಖ್ಯಮಂತ್ರಿಯ ಆದಂತಹ ಹೆಗ್ಗಳಿಕೆ ಕುಮಾರಣ್ಣ ಅವರಿಗೆ ಇದೆ.
ಆದರೆ ಎಲ್ಲವೂ ಕೂಡ ಸಮ್ಮಿಶ್ರ ಸರ್ಕಾರವಾಗಿದೆ ಈ ಬಾರಿಯಾದರೂ ಕೂಡ ಪೂರ್ಣ ಪ್ರಮಾಣದ ಮುಖ್ಯಮಂತ್ರಿ ಆಗಿ ಕುಮಾರಣ್ಣ ಅವರು ವಿಜೇತರಾಗಲಿ ಎಂಬುವುದು ಕುಮಾರಸ್ವಾಮಿಯವರ ಅಭಿಮಾನಿಗಳ ಆಸೆಯಾಗಿದೆ. ಮುಂದಿನ ಚುನಾವಣೆಗೆ ಭರ್ಜರಿ ಪ್ರಚಾರ ಮಾಡುತ್ತಿರುವ ಸಮಯದಲ್ಲಿಯೇ ಹುಟ್ಟು ಹಬ್ಬಕ್ಕೆ ಹಲವಾರು ಅಭಿಮಾನಿಗಳು ಶುಭಾಶಯ ಕೋರಿರುವುದು ನಿಜಕ್ಕೂ ಸಂತಸದ ವಿಚಾರವೇ.
ಇದು ಒಂದು ಕಡೆಯಾದರೆ ಮತ್ತೊಂದು ಕಡೆ ರಾಧಿಕಾ ಕುಮಾರಸ್ವಾಮಿ ಅವರು ಕೂಡ ತಮ್ಮ ಪತಿಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ ಅಷ್ಟೇ ಅಲ್ಲದೆ ಮನೆಯಲ್ಲಿ ಸರಳವಾಗಿ ಹುಟ್ಟು ಹಬ್ಬ ಮಾಡುವುದಕ್ಕೆ ಹಲವು ತಯಾರಿ ಮಾಡಿಕೊಂಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಕೂಡ ತಮ್ಮ ಪತಿಯ ರೀತಿಯಲ್ಲಿ ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ ಹೌದು,
ಹುಟ್ಟು ಹಬ್ಬದ ಪ್ರಯುಕ್ತ ಅನಾಥಾಶ್ರಮಕ್ಕೆ ತೆರಳಿ ಅಲ್ಲಿಗೆ ಬೇಕಾದಂತಹ ಕೆಲವು ಗೃಹ ಉಪಯೋಗಿ ವಸ್ತುಗಳನ್ನು ನೀಡಿದ್ದಾರೆ ದವಸ ಧಾನ್ಯ ನೀಡುವುದರ ಮೂಲಕ ಅಲ್ಲಿ ಇರುವಂತಹ ವಯಸ್ಸಾದ ನಾಗರಿಕರಿಗೆ ಮತ್ತು ಹಿರಿಯರಿಗೆ ತಾವೇ ಸ್ವತಃ ಊಟ ಬಡಿಸುವ ಮೂಲಕ ಸಿಹಿಯನ್ನು ಹಂಚುವ ಮೂಲಕ ಈ ಒಂದು ಹಬ್ಬಕ್ಕೆ ಚಾಲನೆಯನ್ನು ನೀಡಿದ್ದಾರೆ. ಈ ಅರ್ಥಪೂರ್ಣ ಹುಟ್ಟುಹಬ್ಬವನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರು ಮಾಡಿದಂತಹ ಕೆಲಸಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಅನಾಥಾಶ್ರಮಕ್ಕೆ ತೆರಳಿ ಅಲ್ಲಿ ಇರುವಂತಹ ಹಿರಿಯರಿಗೆ ಸಿಹಿ ತಿನಿಸು ತಿನಿಸುವಂತಹ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಶೇರ್ ಮಾಡಿ.