ನಿಮ್ಮ ಮನೆಯಲ್ಲಿ ದೈವ ಶಕ್ತಿ ಇದ್ರೆ ಈ ಸೂಚನೆಗಳು ಕಾಣಿಸುತ್ತವೆ.!

ದೇವರನ್ನು ಇದುವರೆಗೂ ಕೂಡ ಕಣ್ಣಾರೆ ಕಂಡವರು ಯಾರು ಇಲ್ಲ ಆದರೆ ದೇವರು ಇರುವುದು ಸಾಕಷ್ಟು ಸಾಕ್ಷಿಗಳ ಮೂಲಕ ರುಜುವಾತಾಗಿದೆ. ದೇವರು ಇದ್ದಾನೆ ಎನ್ನುವುದನ್ನು ನಂಬುವವರು ಅವನ ಈ ಸಾಕ್ಷಾತ್ಕಾರದ ಅನುಭವವನ್ನು ಪಡೆಯುತ್ತಾರೆ. ನೀವು ನಿಷ್ಕಲ್ಮಶವಾಗಿ ಮನಸಾರೆ ದೇವರ ಮೇಲೆ ನಂಬಿಕೆ ಇಟ್ಟಾಗ ಆತ ಎಂದಿಗೂ ಕೂಡ ನಿಮ್ಮನ್ನು ಕೈಬಿಡುವುದಿಲ್ಲ.

ನಿಮ್ಮ ಆ ನಿಶ್ಚಲ ನಂಬಿಕೆ, ಅಸಹಾಯಕತೆ ಹಾಗೂ ಭಕ್ತಿಗೆ ಭಗವಂತ ಒಲಿಯದೇ ಇರಲು ಸಾಧ್ಯವಿಲ್ಲ. ಆದರೆ ಎಲ್ಲರಿಗೂ ಕೂಡ ದೇವರು ತಾನು ಇದ್ದಾನೆ ಎನ್ನುವುದನ್ನು ಪ್ರತ್ಯಕ್ಷವಾಗುವ ಮೂಲಕ ನಿರೂಪಿಸುವ ಅವಶ್ಯಕತೆ ಇಲ್ಲ ಆದರೆ ನೀವು ಸಂಪೂರ್ಣವಾಗಿ ಆತನಲ್ಲಿ ತಲ್ಲಿನರಾಗಿದ್ದಾಗ ಕೆಲ ಲಕ್ಷಣಗಳು ನಿಮಗೆ ದೇವರಿಲ್ಲಿದ್ದಾನೆ ಎನ್ನುವುದನ್ನು ನಿರೂಪಿಸುತ್ತದೆ. ಅದರಲ್ಲಿ ಕೆಲವುಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

ಗೃಹಿಣಿ ಈ ರೀತಿ ತಪ್ಪು ಮಾಡುವುದರಿಂದಲೇ ಗಂಡ ಹೆಂಡತಿಯರಲ್ಲಿ ಜಗಳ ಬರುವುದು ಮನೆಗೆ ದಾರಿದ್ರ್ಯ ಬರುವುದು.!

● ನೀವು ಭಕ್ತಿಯಿಂದ ನಿಮ್ಮ ಇಷ್ಟ ದೇವರಿಗೆ ಪೂಜೆ ಮಾಡಿ, ಪ್ರಾರ್ಥನೆ ಮಾಡಿಕೊಂಡ ಮೇಲೆ ತಕ್ಷಣವೇ ನಿಮ್ಮ ಮನೆ ಬಾಗಿಲ ಬಳಿ ಪಕ್ಷಿಗಳು, ಮೂಕ ಪ್ರಾಣಿಗಳು ಕಾಣಿಸಿಕೊಂಡರೆ ಅವುಗಳಿಗೆ ಆಹಾರವನ್ನು ಹಾಕಿ ಇದು ಭಗವಂತನಿಗೆ ನಿಮ್ಮ ಪೂಜೆ ಇಷ್ಟವಾಗಿದೆ ಎನ್ನುವುದನ್ನು ಸೂಚಿಸುವ ಅರ್ಥವಾಗಿದೆ.

● ನಿಮ್ಮ ಮನೆಯಲ್ಲಿ ಹಲ್ಲಿಗಳು ವಾಸ ಮಾಡುತ್ತಿದ್ದರೆ ಅದು ಕೂಡ ನಿಮ್ಮ ಮನೆಯಲ್ಲಿ ದೈವಶಕ್ತಿ ಇದೆ ಎನ್ನುವುದನ್ನು ಸೂಚಿಸುತ್ತದೆ, ಯಾಕೆಂದರೆ ನಮಗಿಂತಲೂ ಕೂಡ ಈ ಸೂಕ್ಷ್ಮಜೀವಿಗಳಿಗೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ಅನುಭವ ಬೇಗ ಹಾಗುತ್ತವೆ. ಪೋಸಿಟಿವ್ ವಾತಾವರಣಗಳು ಇಲ್ಲದ ಕಡೆ ಅವು ಎಂದಿಗೂ ಕೂಡ ನೆಲೆಸುವುದಿಲ್ಲ ನಿಮ್ಮ ಮನೆಯಲ್ಲಿ ಈ ರೀತಿ ದೈವ ಶಕ್ತಿ ಇದ್ದಾಗ ಮಾತ್ರ ಅವು ಕೂಡ ಅಲ್ಲಿ ವಾಸ ಮಾಡುತ್ತವೆ. ಹಲ್ಲಿ ಮಾತ್ರವಲ್ಲದೆ ಕಡಜ ಗೂಡು ಕಟ್ಟುವುದನ್ನು, ಇರುವೆಗಳು ಗೂಡು ಕಟ್ಟುವುದು ಕೂಡ ಇದಕ್ಕೆ ಉದಾಹರಣೆಯಾಗಿ ಕೊಡಬಹುದು.

ಯಾವ ರಾಶಿಯವರು, ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ ಗೊತ್ತಾ.? ಇಲ್ಲಿದೆ ನೋಡಿ 12 ರಾಶಿಗಳ ಯೋಗ.!

● ನಿಮ್ಮ ಮನೆಯ ದೇವರ ಕೋಣೆಯಲ್ಲಿ ನೀವು ಪೂಜೆ ಮಾಡುವ ಮುನ್ನವೇ ಸುಗಂಧ ದ್ರವ್ಯಗಳ ಸುವಾಸನೆ ಬರುತ್ತಿದ್ದರೆ ಅದು ಕೂಡ ಇದೇ ಅರ್ಥವನ್ನು ಕೊಡುತ್ತದೆ. ನೀವು ಪೂಜೆ ಮಾಡುವಾಗ ಯಾವುದೇ ಗಾಳಿ ಬೀಸದೆ ಇದ್ದರೂ ಕೂಡ ಎಲ್ಲಿಂದಲೋ ಹೂವಿನ ಸುವಾಸನೆ ಬರುತ್ತಿದ್ದರೆ ಅದು ಕೂಡ ದೈವಶಕ್ತಿ ಇರುವಿಕೆಗೆ ಸಾಕ್ಷಿ.

● ದೇವರಿಗೆ ಹಚ್ಚುವ ದೀಪದ ಮೂಲಕ ಕೂಡ ನಿಮ್ಮ ಮನೆಯಲ್ಲಿ ದೈವ ಶಕ್ತಿ ಇದೆ ಎನ್ನುವುದನ್ನು ಕಂಡುಕೊಳ್ಳಬಹುದು. ಯಾಕೆಂದರೆ, ನಿಮ್ಮ ದೇವರ ಕೊನೆಯಲ್ಲಿ ಹಚ್ಚಿರುವ ದೀಪವು ಹೂವಿನ ಆಕಾರದಲ್ಲಿ ಉರಿಯುತ್ತಿದ್ದರೆ ಜೊತೆಗೆ ಅದು ಶಾಂತ ರೀತಿಯಲ್ಲಿ ಸದಾ ಬೆಳಗುತ್ತಿದ್ದರೆ, ಎಣ್ಣೆ ಖಾಲಿ ಆಗಿದ್ದರೂ ಕೂಡ ಸುಮಾರು ಸಮಯ ಅದು ಹಾಗೆ ಉಳಿಯುತ್ತಿದ್ದರೆ ಜೊತೆಗೆ ನೀವು ಹಚ್ಚಿರುವ ದೀಪದ ಬತ್ತಿ ನಿಮ್ಮ ಪ್ರಾರ್ಥನೆ ಸಮಯ ಅಲಗಾಡುತ್ತಿದ್ದರೆ ಭಗವಂತ ಕೇಳುತ್ತಿದ್ದಾನೆ ಎನ್ನುವ ಅರ್ಥ.

ಮುತ್ತೈದೆ ಮಹಿಳೆಯರಿಗೆ ಕಿವಿ ಮಾತು, ನಿಮ್ಮ ಈ ಸ್ವಭಾವಗಳನ್ನು ಬದಲಾಯಿಸಿಕೊಂಡರೆ ಸುಖ ಶಾಂತಿ ನೆಮ್ಮದಿ ಜೊತೆ ಲಕ್ಷ್ಮಿ ಕೂಡ ನೆಲೆಸಿರುತ್ತಾಳೆ.!

● ನಿಮ್ಮ ಮನೆಯಲ್ಲಿ ಪದೇ ಪದೇ ಹಾಲು ಉಕ್ಕುತ್ತಿದ್ದರೆ ಬೇಸರಪಟ್ಟುಕೊಳ್ಳಬೇಡಿ, ಅದು ಕೂಡ ಸಕರಾತ್ಮಕ ಶಕ್ತಿ ನಿಮ್ಮ ಮನೆಯಲ್ಲಿದೆ ಎನ್ನುವ ಸೂಚನೆ ಆಗಿರುತ್ತದೆ.
● ನಿಮ್ಮ ಮನೆಯಲ್ಲಿ ನೀವು ಪೂಜೆ ಪ್ರಾರ್ಥನೆ ಮಾಡುವಾಗ ನಿಮ್ಮ ಪಕ್ಕದಲ್ಲಿಯೇ ಗಾಳಿ ಹಾದು ಹೋದರೆ ಅದರಲ್ಲಿ ಯಾರೋ ಹೋದಂತೆ ಅನುಭವ ಆದರೆ ಭಗವಂತನೇ ಇದನ್ನು ಮಾಡಿದ್ದಾನೆ ಎಂದು ಅರ್ಥ.
● ನೀವು ನಿಮ್ಮ ಮನೆಯಲ್ಲಿ ಅಥವಾ ಹೊರಗೆ ಯಾವುದೇ ಅಪಾಯದಿಂದ ಜಸ್ಟ್ ಮಿಸ್ ಆಗಿ ಬಚಾವ್ ಆಗುತ್ತಿದ್ದರೆ ಅದು ಕೂಡ ಭಗವಂತ ನಿಮ್ಮ ಜೊತೆ ಇದ್ದಾನೆ ಎನ್ನುವುದರ ಸಾಕ್ಷಿ ಎಂದೇ ಹೇಳಬಹುದು.

Leave a Comment

WhatsApp Group Join Now
Telegram Group Join Now