Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಬಹು ಮಹಡಿ ಕಟ್ಟಡಗಳಲ್ಲಿ ಇರುವುದು ಡೇಂಜರಾ ಕಷ್ಟ-ಕಾಯಿಲೆಗಳು ಬರುತ್ತವಾ.? ಮನೆ ವಾಸ್ತು ಎನ್ನುವ ವಿಷಯದ ಬಗ್ಗೆ ವಿಜ್ಞಾನ ಹೇಳುವುದೇನು ಅಪಾರ್ಟ್ಮೆಂಟ್ ಗಳಲ್ಲಿ ವಾಸ ಮಾಡೋರು ನೋಡಿ

Posted on September 7, 2023 By Kannada Trend News No Comments on ಬಹು ಮಹಡಿ ಕಟ್ಟಡಗಳಲ್ಲಿ ಇರುವುದು ಡೇಂಜರಾ ಕಷ್ಟ-ಕಾಯಿಲೆಗಳು ಬರುತ್ತವಾ.? ಮನೆ ವಾಸ್ತು ಎನ್ನುವ ವಿಷಯದ ಬಗ್ಗೆ ವಿಜ್ಞಾನ ಹೇಳುವುದೇನು ಅಪಾರ್ಟ್ಮೆಂಟ್ ಗಳಲ್ಲಿ ವಾಸ ಮಾಡೋರು ನೋಡಿ

ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅದರಲ್ಲೂ ಕೂಡ ನಗರ ಪ್ರದೇಶಗಳಿಗೆ ಬಂದು ನೆಲೆಸುವವರ ಸಂಖ್ಯೆ ಹೆಚ್ಚಾದಂತೆ ಮನೆಗಳ ಮೇಲೆ ಮನೆ ಕಟ್ಟುವ ಬಹುಮಹಡಿ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ರೀತಿ ಮಾಡಿ ಕಟ್ಟಡಗಳಲ್ಲಿ ವಾಸಿಸುವುದರಿಂದ ಹೆಚ್ಚು ಎತ್ತರದ ಅಂತಸ್ತುಗಳಿಗೆ ಹೋಗುತ್ತಿದ್ದಂತೆ ಮನುಷ್ಯನಿಗೆ ಕಾಯಿಲೆ ಹಾಗೂ ಕ’ಷ್ಟಗಳು ಕೂಡ ಹೆಚ್ಚಾಗುತ್ತವೆ ಎನ್ನುವ ವಾದವಿದೆ.

ಇತ್ತೀಚೆಗೆ ನಡೆದಿರುವ ಸಂಶೋಧನೆಗಳ ಪ್ರಕಾರ ಇದು ಸತ್ಯ ಎನ್ನುವುದು ಕೂಡ ಸಾಬೀತಾಗಿದೆ. ಮನೆಯೆಂದರೆ ಹೇಗಿರಬೇಕು ವಾಸ್ತು ಎನ್ನುವುದು ಎಷ್ಟು ಸತ್ಯ? ವಾಸ್ತು ಪ್ರಕಾರ ಇರುವುದಾದರೆ ಮನೆ ಯಾವ ರೀತಿ ಇರಬೇಕು? ಹಿರಿಯರು ಈ ರೀತಿ ಮಾಡಿದ ಪದ್ಧತಿ ಹಿಂದಿನ ಕಾರಣ ಏನಿತ್ತು ಎನ್ನುವುದರ ಬಗ್ಗೆ ಮತ್ತು ಅದಕ್ಕೆ ವಿಜ್ಞಾನ ಎಷ್ಟು ಪುಷ್ಠಿ ಕೊಡುತ್ತದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

ಸಾಲದ ಸುಳಿಯಿಂದ ಪಾರಾಗಲು ಪರಿಹಾರಗಳನ್ನು ಮಾಡಿ, ನೂರಕ್ಕೆ ನೂರು ರಷ್ಟು ಫಲಿತಾಂಶ ಸಿಗುತ್ತದೆ.!

ನಾವು ಇತಿಹಾಸವನ್ನು ಒಮ್ಮೆ ತೆರೆದು ನೋಡುವುದಾದರೆ ನಮ್ಮ ದೇಶದಲ್ಲಿ ನಿರ್ಮಿತವಾಗಿರುವ ತಂಜಾವೂರಿನ ಬೃಹದೀಶ್ವರ ದೇವಾಲಯ, ಕೊನಾರ್ಕ್ ನ ಸೂರ್ಯ ದೇವಾಲಯ, ಪೂರಿ ಜಗನ್ನಾಥ ದೇವಾಲಯ ಇವುಗಳ ವಾಸ್ತುಶಿಲ್ಪಕ್ಕೆ ಇಂದಿಗೂ ಕೂಡ ಸರಿಸಾಟಿ ಇಲ್ಲವೇ ಇಲ್ಲ. ಅವುಗಳ ಆರ್ಕಿಟೆಕ್ಟ್ ಯಿಂದ ಹಿಡಿದು ಅವುಗಳಿಗೆ ಬಳಸಿರುವಂತಹ ವಿಶೇಷವಾದ ಕಲ್ಲುಗಳು ಹಾಗೂ ಅವುಗಳನ್ನು ಕಟ್ಟಿರುವ ಎತ್ತರ ಅದನ್ನು ವ್ಯವಸ್ಥಿತವಾಗಿ ಪ್ಲಾನ್ ಮಾಡಿರುವುದು ಇದನ್ನೆಲ್ಲಾ ಈಗಿನ ಕಾಲದ ಕಂಪ್ಯೂಟರ್ ಸೈನ್ಸ್ ಜೊತೆ ಕಂಪೇರ್ ಮಾಡಲು ಅಸಾಧ್ಯ.

ಆದರೆ ಅಂತಹ ಕಾಲದಲ್ಲೂ ನಮ್ಮ ದೇಶದಲ್ಲಿ ಜನರು ವಾಸ ಮಾಡಲು ಎತ್ತರದ ಮನೆಗಳನ್ನು ಕಟ್ಟುತ್ತಿರಲಿಲ್ಲ. ಒಂದು ಸಣ್ಣ ಹಳ್ಳಿಯಾದರು ಕೂಡ ಆ ಹಳ್ಳಿಗಳಲ್ಲಿ ಅತಿ ಎತ್ತರದಲ್ಲಿ ಇರುತ್ತಿದ್ದದ್ದು ಆ ಹಳ್ಳಿಯ ದೇವಾಲಯ ಮಾತ್ರ. ದೇವಸ್ಥಾನದ ಗೋಪುರಕ್ಕಿಂತ ಎತ್ತರವಾಗಿ ಯಾರು ಕೂಡ ಮನೆಗಳನ್ನು ಕಟ್ಟುತ್ತಿರಲಿಲ್ಲ, ಯಾಕೆಂದರೆ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು ಹೆಚ್ಚು ಎತ್ತರಕ್ಕೆ ಹೋದಷ್ಟು ಬದುಕುವುದು ಬಹಳ ಕ’ಷ್ಟ ಎಂದು.

ಗೃಹಿಣಿಯರಿಗೆ ಉತ್ತಮವಾದ ಅಡುಗೆ ಟಿಪ್ಸ್ ಗಳು ಇವು.!

ಯಾಕೆಂದರೆ, ಎತ್ತರಕ್ಕೆ ಹೋಗುತ್ತಿದ್ದಂತೆ ನಾವು ಗುರುತ್ವಾಕರ್ಷಣೀಯ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿರುತ್ತೇವೆ. ಹೀಗಾಗಿ ನಮ್ಮ ಹೃದಯ ಹೆಚ್ಚು ಕೆಲಸ ಮಾಡಬೇಕು ನಮ್ಮ ದೇಹದ ಮೇಲೂ ಒತ್ತಡ ಹೆಚ್ಚು ಬೀಳುತ್ತದೆ ಮತ್ತು ನಾವು ಸಾಮಾನ್ಯವಾಗಿ ಭೂಮಿಯ ಮೇಲೆ ಇರುವಾಗ ಉಸಿರಾಡುವಷ್ಟು ಸಲೀಸಾಗಿ ಎತ್ತರದ ಮೇಲಿರುವಾಗ ಉಸಿರಾಡಲು ಆಗುವುದಿಲ್ಲ. ಹೀಗಾಗಿ ಇದೆಲ್ಲಾ ನಮ್ಮ ಉಸಿರಾಟ, ಜೀರ್ಣಕ್ರಿಯೆ, ನಿದ್ರೆ ಎಲ್ಲದರ ಮೇಲು ಕೂಡ ಗಂಭೀರ ಪರಿಣಾಮ ಬೀರುತ್ತದೆ.

ಇದನ್ನು ನಮ್ಮ ಹಿರಿಯರು ಅರಿತ್ತಿದ್ದ ಕಾರಣವಾಗಿ ಬಹಳ ಸರಳ ರೀತಿಯಲ್ಲಿ ವಾಸ್ತು ಪ್ರಕಾರ ಮನೆ ಕಟ್ಟಿಕೊಳ್ಳುತ್ತಿದ್ದರು. ವಾಸ್ತು ಹಾಗೂ ವಿಜ್ಞಾನಕ್ಕೆ ಹೋಲಿಕೆ ಮಾಡಿ ನೋಡುವುದಾದರೆ ಸಾಮಾನ್ಯವಾಗಿ ಪೂರ್ವ ದಿಕ್ಕಿನ ಎಡ ಹಾಗೂ ಬಲಭಾಗದಲ್ಲಿ ಈಶಾನ್ಯ ಮತ್ತು ಆಗ್ನೇಯ ದಿಕ್ಕು ಇರುತ್ತದೆ. ಸೂರ್ಯ ಹುಟ್ಟುತ್ತಿದ್ದಂತೆ ನಾವು ದೇವರ ಕೋಣೆಯಲ್ಲಿ ಹಾಗೂ ಅಡುಗೆಮನೆಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ನಮಗೆ ವಿಟಮಿನ್ ಡಿ ನ್ಯಾಚುರಲ್ ಆಗಿ ಸಿಗುತ್ತದೆ.

ಆರೋಗ್ಯ ಸಮಸ್ಯೆಗಳಿಗೆ ಉಪಯುಕ್ತವಾಗುವ ಮನೆಮದ್ದುಗಳು.!

ಅಡುಗೆ ಪದಾರ್ಥದ ಮೇಲೆ ಸೂರ್ಯನ ಕಿರಣಗಳು ಬೀಳುವುದರಿಂದ ಯಾವುದೇ ರೀತಿಯ ಇನ್ಫೆಕ್ಷನ್ ಆಗುವುದಿಲ್ಲ ಹಾಗಾಗಿ ಈ ರೀತಿ ಮಾಡಲಾಗುತ್ತಿತ್ತು. ಇನ್ನು ಸೂರ್ಯ ಮುಳುಗುತ್ತಿದ್ದಂತೆ ನಮ್ಮ ಎನರ್ಜಿ ಕೂಡ ಕಡಿಮೆ ಆಗುವುದರಿಂದ ನಾವು ನಿದ್ರೆ ಮಾಡಲು ನೈರುತ್ಯ ದಿಕ್ಕು ಅಥವಾ ಓದಿಕೊಳ್ಳಲು ವಾಯುವ್ಯ ದಿಕ್ಕನ್ನು ಮಲಗಲು ಪಶ್ಚಿಮ ದಿಕ್ಕನ್ನು ನೋಡುತ್ತಿದ್ದೆವು.

ಈ ಸಮಯದಲ್ಲಿ ಸೂರ್ಯ ಪಶ್ಚಿಮಕ್ಕೆ ಬಂದಿರುವುದರಿಂದ ಆಗಲೂ ಸ್ವಲ್ಪವಾದರೂ ಸೂರ್ಯನ ಕಿರಣ ಸಿಗಲಿ ಎನ್ನುವುದು ಅದರ ಉದ್ದೇಶವಾಗಿತ್ತು. ಆದರೆ ಈಗ ಅದನ್ನೇ ಸ್ವಾರ್ಥಕ್ಕಾಗಿ ವಾಸ್ತುಶಾಸ್ತ್ರ ಎನ್ನುವ ಹೆಸರು ಕೊಟ್ಟು ಇದೇ ಬಣ್ಣ ಇರಬೇಕು, ಇದೇ ದಿಕ್ಕಿನಲ್ಲಿ ಇರಬೇಕು ಎಂದು ಭಯ ಬೀಳಿಸಲಾಗುತ್ತಿದೆ. ನಮ್ಮ ಹಿರಿಯರು ಇದನ್ನೆಲ್ಲಾ ಆಗಲೇ ತಿಳಿದಿದ್ದರು ಹಾಗೂ ಬಹಳ ಸರಳವಾಗಿ ಇದನ್ನು ಅನುಸರಿಸುತ್ತಿದ್ದರು ಎನ್ನುವುದನ್ನು ಒಪ್ಪಿಕೊಂಡು ನಾವು ಅದೇ ರೀತಿ ಬದುಕಲು ಪ್ರಯತ್ನಿಸಿದರೆ ನಾವು ಕೂಡ ಅವರಂತೆ ಆರೋಗ್ಯವಾಗಿ ಇರಬಹುದು.

Useful Information
WhatsApp Group Join Now
Telegram Group Join Now

Post navigation

Previous Post: ಸಾಲದ ಸುಳಿಯಿಂದ ಪಾರಾಗಲು ಪರಿಹಾರಗಳನ್ನು ಮಾಡಿ, ನೂರಕ್ಕೆ ನೂರು ರಷ್ಟು ಫಲಿತಾಂಶ ಸಿಗುತ್ತದೆ.!
Next Post: ತಕ್ಷಣಕ್ಕೆ ಹಣ ಬೇಕಿದ್ದರೆ ಈ ನಂಬರ್ ಹೇಳಿಕೊಳ್ಳಿ ಸಾಕು, ಜಾದು ನಡೆಯುತ್ತದೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore