ಕೇಂದ್ರ ಸರ್ಕಾರವು ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಹೊಸದೊಂದು ಯೋಜನೆಯ ಅಡಿಯಲ್ಲಿ ಕಾರ್ಮಿಕರಿಗೆ ಅಂದರೆ ಲೇಬರ್ ಕಾರ್ಡ್ ಹೊಂದಿದ ಕಾರ್ಮಿಕರಿಗಾಗಿ ಉಚಿತ ಮನೆಯನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದ ಶ್ರಮಿಕ್ ನಿವಾಸ್ ಎಂಬ ಯೋಜನೆಯ ಅಡಿಯಲ್ಲಿ ಉಚಿತ ಮನೆ ದೊರಕಲಿದೆ.
ನರೇಂದ್ರ ಮೋದಿ ಸರ್ಕಾರದ ಈ ಹೊಸ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಕುರಿತಾದ ಮಾಹಿತಿಯನ್ನು ಸಂಪೂರ್ಣವಾಗಿ ಈ ಬರಹವನ್ನು ಓದುವುದರ ಮುಖಾಂತರ ಪಡೆದುಕೊಳ್ಳಿ. ಕಾರ್ಮಿಕರ ಜೀವನ ಹೇಗಿರುತ್ತದೆ ಎಂಬುದನ್ನು ಹೊಸದಾಗಿ ವಿವರಿಸುವ ಅಗತ್ಯತೆ ಇಲ್ಲ. ಎಲ್ಲರಿಗೂ ತಿಳಿದ ವಿಷಯ ಇದಾಗಿದೆ. ಕೆಲಸವನ್ನು ಅರಸಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಆಗಾಗ ಹೋಗುತ್ತಲೇ ಇರಬೇಕಾಗುತ್ತದೆ.
ಒಂದೆಡೆ ಗಟ್ಟಿ ಮೇಲೆ ನಿಂತುಕೊಳ್ಳಲು ಕಷ್ಟ ಸಾಧ್ಯ. ಚಿಕ್ಕ ಪುಟ್ಟ ಮಕ್ಕಳು ಮಡದಿಯನ್ನುತ ಸಂಸಾರ ಸಮೇತವಾಗಿ ವಲಸೆ ಹೋದಾಗ ಸರಿಯಾದ ಸ್ಥಳದಲ್ಲಿ ಆಶ್ರಯ ಹುಡುಕುವುದು ಕಾರ್ಮಿಕರಿಗೆ ದೊಡ್ಡ ಸವಾಲಾಗಿ ಉಳಿದಿತ್ತು. ಆದರೆ ಇವರ ಆಶ್ರಯದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಶ್ರಮಿಕ್ ನಿವಾಸ್ ಎಂಬ ಯೋಜನೆಯ ಅಡಿಯಲ್ಲಿ ವಲಸೆ ಕಾರ್ಮಿಕರ ವಸತಿಗಾಗಿ ಅನುಕೂಲ ಮಾಡಿಕೊಟ್ಟಿದೆ.
ವಾಸಿಸಲು ಸ್ಥಳವನ್ನು ಹುಡುಕುತ್ತಾ ಪರದಾಡಬೇಕಾದ ಪರಿಸ್ಥಿತಿಯು ಬಂದೊದಗದಂತೆ ತಡೆಯಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಶ್ರಮಿಕ್ ನಿವಾಸ್ ಯೋಜನೆಯ ಉದಾಹರಣೆ ಎಂಬಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ವಸತಿಗಾಗಿ ಹೊಸ ಕಟ್ಟಡವನ್ನು ನಿರ್ಮಿಸಿದ್ದಾರೆ. ಉದ್ಘಾಟನೆಯು ನಡೆದು, ಉಳಿಯಲು ಅವಶ್ಯಕವಾದ ವ್ಯವಸ್ಥೆಯನ್ನು ಹೊಂದಿದ್ದು, ಕಾರ್ಮಿಕರಿಗಾಗಿ ಈ ಕಟ್ಟಡವು ಸಿದ್ಧವಾಗಿ ನಿಂತಿದೆ.
ಈಗಾಗಲೇ ಹಲವಾರು ಕಾರ್ಮಿಕರು ಕೇಂದ್ರ ಸರ್ಕಾರದ ಯೋಜನೆಗಳಿಂದ ಉಪಯೋಗವನ್ನು ಪಡೆಯುತ್ತಿದ್ದಾರೆ. ಶ್ರಮಿಕ್ ನಿವಾಸ್ ಯೋಜನೆಯ ಅಡಿಯಲ್ಲಿ ಉಚಿತ ಮನೆಯ ಸೌಲಭ್ಯವನ್ನು ಪಡೆಯಲು ನಿಗದಿಪಡಿಸಿದ ಅತಿ ಮುಖ್ಯ ಅಂಶವೆಂದರೆ ಕಾರ್ಮಿಕರು “ಲೇಬರ್ ಕಾರ್ಡ”ನ್ನು ಹೊಂದಿರಬೇಕು ಎಂಬುದು. ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಗುರುತಿನ ಚೀಟಿಯನ್ನು ಇವರಿಗೆ ಹೊಂದಿರದೆ ಇರುವ ಕಾರ್ಮಿಕರು, ಈ ಕೂಡಲೇ ಸಮೀಪದ ಸೇವಾ ಸಿಂಧು ಕಚೇರಿಗೆ ಭೇಟಿ ನೀಡಿ ಕಾರ್ಡನ್ನು ಮಾಡಿಸಿಕೊಳ್ಳುವುದು ಸೂಕ್ತ.
ಲೇಬರ್ ಕಾರ್ಡ್ ಹೊಂದಿದ್ದರೆ ಸರ್ಕಾರದಿಂದ ಅಥವಾ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ದೊರಕುವ ಅನೇಕ ಸೌಲಭ್ಯಗಳನ್ನು ಕಾರ್ಮಿಕರು ಪಡೆಯಬಹುದು. ಈ ರೀತಿಯಾದ ಯೋಜನೆಯಿಂದ ಕಾರ್ಮಿಕರು ಮುಂದಿನ ದಿನಗಳಲ್ಲಿ ತಮ್ಮ ಊರನ್ನು ಅಥವಾ ನೆಲೆ ನಿಂತ ಪ್ರದೇಶವನ್ನು ಬಿಟ್ಟು ಬೇರೆಡೆ ಕೆಲಸಕ್ಕಾಗಿ ಹೋದಾಗ ವಾಸಿಸಲು ಪರದಾಡುವ ಪರಿಸ್ಥಿತಿಯು ಬರುವುದಿಲ್ಲ.
ಚಿಕ್ಕಬಳ್ಳಾಪುರದಲ್ಲಿ ವಲಸೆ ಕಾರ್ಮಿಕರಿಗಂದೆ ಸ್ಥಾಪಿಸಲ್ಪಟ್ಟ ಕಟ್ಟಡದಂತೆಯೇ ದೇಶದ ಎಲ್ಲಾ ಭಾಗಗಳಲ್ಲಿಯೂ ಈ ರೀತಿಯ ಕಟ್ಟಡಗಳನ್ನು ನಿರ್ಮಿಸುವ ಯೋಜನೆಯನ್ನು ಸರ್ಕಾರವು ಹೊಂದಿದೆ. ಕಾರ್ಮಿಕರು ವಲಸೆ ಹೋಗುವಾಗ ಮರೆಯದೆ ಲೇಬರ್ ಕಾರ್ಡನ್ನು ಜೊತೆಯಲ್ಲಿಯೇ ಒಯ್ದಿದಿರಬೇಕು. ಈ ರೀತಿಯಾಗಿ ಸರ್ಕಾರವು ಕಾರ್ಮಿಕರ ಆಶ್ರಯಕ್ಕಾಗಿ ಆಹಾರ ನೀರು ಸೇರಿದಂತೆ ದಿನನಿತ್ಯದ ಕಾರ್ಯಕ್ಕೆ ಬೇಕಾದ ಅಗತ್ಯ ವಸ್ತುಗಳ ಪೂರೈಕೆಗಾಗಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಾರ್ಮಿಕರಿಗೆ ನೀಡುವ ಸಲುವಾಗಿ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಲೇ ಇರುತ್ತದೆ.
ಶ್ರಮಿಕ್ ನಿವಾಸ್ ಯೋಜನೆಯ ಅಡಿಯಲ್ಲಿ ಉಚಿತ ಮನೆಯನ್ನು ಪಡೆಯುವ ಕುರಿತಾದ ಅಧಿಕೃತ ಮಾಹಿತಿಯು ಬೇಕಾಗಿದ್ದಲ್ಲಿ ಅಥವಾ ನೀವು ಕಾರ್ಮಿಕರಾಗಿದ್ದಲ್ಲಿ, ‘155214’ ಈ ನಂಬರಿಗೆ ಕರೆ ಮಾಡಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು. ಈ ಮೇಲಿನ ಉಪಯುಕ್ತ ಮಾಹಿತಿಯನ್ನು ನಿಮ್ಮ ಆಪ್ತರೊಂದಿಗೆ ಅಥವಾ ನಿಮ್ಮ ಪರಿಚಿತ ಕಾರ್ಮಿಕರೊಂದಿಗೆ ಹಂಚಿಕೊಳ್ಳಿ.