ಮಾಸ್ಟರ್ ಮಂಜುನಾಥ್ ಕರ್ನಾಟಕ ಎಂದೂ ಮರೆಯದ ಬಾಲ ಕಲಾವಿದ. ನೋಡಿ ಸ್ವಾಮಿ ನಾವಿರೋದು ಸಿನಿಮಾದಲ್ಲಿ, ಮಾಲ್ಗುಡಿ ಡೇಸ್ ಅಂತಹ ಅದ್ಭುತ ಧಾರಾವಾಹಿಯಲ್ಲಿ ಶಂಕರ್ ನಾಗ್ ಜೊತೆ, ಮೃಗಾಲಯ ಸಿನಿಮಾದಲ್ಲಿ ಅಂಬರೀಶ್ ಜೊತೆ, ಕಿಂದರಜೋಗಿ ಮತ್ತು ರಣಧೀರ ಸಿನಿಮಾದಲ್ಲಿ ರವಿಚಂದ್ರನ್ ಅವರ ಜೊತೆ, ಲವ್ ಟ್ರೈನಿಂಗ್ ಸಿನಿಮಾದಲ್ಲಿ ಕಾಶಿನಾಥ್ ಅವರ ಜೊತೆ ಹೀಗೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೆ ಭರಪೂರ ಮನೋರಂಜನೆ ನೀಡಿದ ಪ್ರತಿಭೆ ಮಾಸ್ಟರ್ ಮಂಜುನಾಥ್.
ಮಾಸ್ಟರ್ ಮಂಜುನಾಥ್ ಅವರು ಬಾಲ ನಟನಾಗಿ ಬಹಳ ಬೇಡಿಕೆ ಇದ್ದ ಕಾಲದಲ್ಲಿಯೇ ಚಿತ್ರರಂಗ ತೆರೆದು ತಮ್ಮ ವಿದ್ಯಾಭ್ಯಾಸದ ಕಡೆ ಒತ್ತುಕೊಟ್ಟರು. ತುಂಬಾ ಚೆನ್ನಾಗಿ ಅಧ್ಯಯನ ತೊಡಗಿಸಿಕೊಂಡಿದ್ದ ಅವರು ಅಷ್ಟೇ ಬೇಗ ದಾಂಪತ್ಯ ಜೀವನಕ್ಕೆ ಕೂಡ ಕಾಲಿಟ್ಟರು. 16 ವರ್ಷಕ್ಕೆ ಪ್ರೀತಿಯಲ್ಲಿ ಬಿದ್ದ ಇವರು 23 ವರ್ಷಕ್ಕೆ ಮದುವೆಯಾಗಿ ಬಿಟ್ಟಿದ್ದರು.
ಇವರ ಪ್ರೇಮ ಕಥೆ ಯಾವ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ಇವರ ಪ್ರೀತಿ ಶುರು ಆಗಿದ್ದು ಹೇಗೆ ಎಂದರೆ ಮಾಸ್ಟರ್ ಮಂಜುನಾಥ್ ಅವರು ಆಗ ತಾನೇ ಸಿನಿಮಾರಂಗ ಕೈ ಬಿಟ್ಟು ಶಿಕ್ಷಣದ ಕಡೆಗೆ ಮನಸ್ಸು ಕೊಟ್ಟಿದ್ದರು. ಆದರೆ ಶಿಕ್ಷಣದ ಜೊತೆ ಮತ್ತೇನೋ ಕಲಿಬೇಕು ಎನ್ನುವುದು ತುಡಿತ ಅವರ ಮನಸ್ಸಿನಲ್ಲಿ ಇತ್ತು. ಅವರ ಕೊನೆಯ ಸಿನಿಮಾದ ಸ್ವಾತಿ ಕಿರಣ ಸಿನಿಮಾದಲ್ಲಿ ಅವರು ಮುಮ್ಮುಟಿ ಅವರ ಜೊತೆ ಗಾಯಕನಾಗಿ ಕಾಣಿಸಿಕೊಂಡಿದ್ದರು. ಅದೇ ಚಿತ್ರದಲ್ಲಿ ಭರತನಾಟ್ಯದ ನೃತ್ಯವನ್ನು ಕೂಡ ಮಾಡಿದ್ದರು.
ಹೀಗಾಗಿ ಆ ಸಮಯದಲ್ಲಿ ಅವರಿಗೆ ಭರತನಾಟ್ಯದ ಬಗ್ಗೆ ಆಕರ್ಷಣೆ ಉಂಟಾಯಿತು. ಚಿದಂಬರ ಅಲ್ಲಿ ನಟರಾಜನ ಮುಂದೆ ಪ್ರದರ್ಶನ ಮಾಡಬೇಕು ಎನ್ನುವುದು ಅವರ ಕನಸಾಗಿತ್ತು. ಇದಕ್ಕಾಗಿ ಅವರು ಭರತನಾಟ್ಯ ಕಲಿಸುವ ಶಾಲೆಗೆ ಸೇರಿಕೊಂಡರಂತೆ. ಅದೇ ಶಾಲೆಗೆ ಅವರ ಪತ್ನಿ ಆಗಿರುವ ಸ್ವರ್ಣ ಲೇಖ ಅವರು ಕೂಡ ಭರತನಾಟ್ಯ ಕಲಿಯಲು ಸೇರಿಕೊಂಡಿದರಂತೆ.
ಇವರಿಗಿಂತ ಒಂದು ವರ್ಷ ಕಿರಿಯರಾದ ಅವರು ಆ ಹೊತ್ತಿಗಾಗಲೇ ಸ್ಪೋರ್ಟ್ಸ್ ಅಲ್ಲಿ ತಮ್ಮನ್ನು ತೆಗೆಸಿಕೊಂಡು ರಾಷ್ಟ್ರಮಟ್ಟದವರೆಗೂ ಹೆಸರು ಮಾಡಿದ್ದರು. ಹೀಗಾಗಿ ಮಂಜುನಾಥ್ ಅವರು ತಾವು ಕೂಡ ದೇಹ ಕರಗಿಸಲು ಸಹಾಯ ಆಗುತ್ತದೆ ಎಂದು ರನ್ನಿಂಗ್ ಚಾಂಪಿಯನ್ ಸ್ನೇಹ ಮಾಡಿಕೊಡರಂತೆ. ನಂತರ ಸ್ನೇಹ ಪ್ರೀತಿಯಾಗಿ ಬದಲಾಗಿ ವಿಷಯ ಕುಟುಂಬದವರಿಗೆ ತಿಳಿದ ಬಳಿಕ ಹೆಚ್ಚು ಸಮಯ ತಡ ಮಾಡದೆ ಅವರು ಶೀಘ್ರವಾಗಿ ಇಬ್ಬರಿಗೂ ವಿವಾಹ ಮಾಡಿಬಿಟ್ಟರು.
ಅವರು ಮದುವೆಯಾದ ಸಂದರ್ಭದಲ್ಲಿ ಮಾಸ್ಟರ್ ಮಂಜುನಾಥ್ ಅವರು 23 ವರ್ಷದವರಾಗಿದ್ದರೆ, ಸ್ವರ್ಣ ಲೇಖ ಅವರು 22 ವರ್ಷದವರಾಗಿದ್ದರು. ಎಂಟು ವರ್ಷದ ಪ್ರೀತಿಯ ಬಳಿಕ ನವೆಂಬರ್ 10, 1999ರಂದು ಹಸೆಮೆಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ನವೆಂಬರ್ ಹತ್ತಕ್ಕೆ 23 ವರ್ಷಗಳ ವಿವಾಹ ಜೀವನವನ್ನು ಪೂರ್ಣಗೊಳಿಸಲಿದ್ದಾರೆ.
ಅಂದಿನಿಂದ ಒಬ್ಬರ ಆಸಕ್ತಿ ಗಳಿಗೆ ಇನ್ನೊಬ್ಬರ ಸಪೋರ್ಟ್ ಮಾಡುತ್ತಾ ಜೊತೆ ಜೊತೆಗೆ ಇಬ್ಬರು ಓಡುತ್ತಾ ಬಂದಿದ್ದಾರೆ. ಈ ಮುದ್ದಾದ ಜೋಡಿಗಳ ಸವಿ ದಾಂಪತ್ಯಕ್ಕೆ ಸಾಕ್ಷಿಯಾಗಿ ಒಬ್ಬ ಗಂಡು ಮಗ ಕೂಡ ಇದ್ದಾರೆ. ಸದ್ಯಕ್ಕೆ ಸಿನಿಮಾ ಇಂಡಸ್ಟ್ರಿಯಲ್ಲಿ ಎರಡನೇ ಇನ್ನಿಂಗ್ಸ್ ಶುರು ಮಾಡಲು ಪ್ಲಾನ್ ಮಾಡುತ್ತಿರುವ ಮಾಸ್ಟರ್ ಮಂಜುನಾಥ್ ಅವರು ಯಾವ ಉತ್ತಮ. ಕಥೆಯೊಂದಿಗೆ ಮರಳಿ ಬರುತ್ತಾರೆ ಎಂದು ತಿಳಿದಿಲ್ಲ ಆದರೆ ಕನ್ನಡ ಕಲಾಪ್ರೇಕ್ಷಕರು ಮಾತ್ರ ಮತ್ತೊಮ್ಮೆ ಇವರನ್ನು ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಮಾಸ್ಟರ್ ಮಂಜುನಾಥ್ ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.