ನಮ್ಮ ದಕ್ಷಿಣ ಸಿನಿಮಾ ಇಂಡಸ್ಟ್ರಿ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ ಒಬ್ಬರ ಹಿಂದೆ ಒಬ್ಬರಂತೆ ಅನೇಕ ಯುವ ಪೀಳಿಗೆಯ ನಾಯಕರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಈಗಷ್ಟೇ ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಅವರಿಗಿಂತ ಸ್ವಲ್ಪ ಹಿಂದೆ ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್ ಇಂತಹ ಪ್ರತಿಭಾನ್ವಿತರನ್ನು ಕಳೆದುಕೊಂಡಿದ್ದೆವು. ಈಗ ಇದೇ ನೋವನ್ನು ತೆಲುಗು ಚಿತ್ರರಂಗ ನುಂಗುವಂತಾಗಿದೆ.
ಇಂದು ಟಾಲಿವುಡ್ ನ (Tollywood) ಉದಯೋನ್ಮುಖ ನಟ ನಂದಮೂರಿ ತಾರಕ ರತ್ನ (Nanaduri Tharaka rathna) ಅತಿ ಚಿಕ್ಕ ವಯಸ್ಸಿಗೆ ಇ-ಹ-ಲೋ-ಕ.ದ ಯಾತ್ರೆ ಮುಗಿಸಿದ್ದಾರೆ. ಯಾರು ಕೂಡ ಊಹೆ ಮಾಡಿರದ ರೀತಿಯಲ್ಲಿ ಕಣ್ಣ ಮುಂದೆ ಅವರ ಅಧ್ಯಾಯ ಮುಗಿದು ಹೋಗಿದೆ. 39ನೇ ವಯಸ್ಸಿಗೆ ಈ ರೀತಿ ನಟನ ಬದುಕು ದು-ರಂ-ತ ಅಂತ್ಯ ಕಂಡಿದೆ. ನಂದಮೂರಿ ತಾರಕ ರತ್ನ ಅವರು ಅಪಾರ ಅಭಿಮಾನಿ ಬಳಗ ಹಾಗೂ ಕುಟುಂಬದವರನ್ನು ಬಿಟ್ಟು ಅ-ಗ-ಲಿದ್ದಾರೆ.
ನಂದಮೂರಿ ತಾರಕರತ್ನ ಅವರು ಒಕ್ಕ ನಂಬರ್ ಗುರಾಡು ಸಿನಿಮಾ ಮೂಲಕ ನಾಯಕನಟನಾಗಿ ಇಂಡಸ್ಟ್ರಿ ಪ್ರವೇಶ ಮಾಡಿದರು. ಬಳಿಕ ರಾಜ ಚೇಯಿ ವೇಸ್ತೆ, ಅಮರಾವತಿ, ತಾರಕ್, ನೈನ್ ಹವರ್ಸ್, ಯವರತ್ನ, ನಂದೀಶ್ವರ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಈಗಷ್ಟೇ ಸಿನಿಮಾ ರಂಗದಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯ ಐಡೆಂಟಿಟಿ ಕ್ರಿಯೇಟ್ ಮಾಡಿದ್ದರು. ಗೆದ್ದು ಬೀಗಬೇಕಾದ ಸಮಯದಲ್ಲಿ ನಟ ದು.ರಂ.ತ ಅಂತ್ಯ ಕಂಡಿದ್ದಾರೆ.
1983ರ ಫೆಬ್ರವರಿ 22ರಂದು ನಂದಮೂರಿ ಮೋಹನ ಕೃಷ್ಣ ಅವರ ಮಗನಾಗಿ ಜನಿಸಿದ್ದ ತಾರಕ್ ರತ್ನ ನಂತರ ನಂದಮೂರಿ ತಾರಕ ರತ್ನ ಎಂದೇ ಹೆಸರಾದರು. ಸಿನಿಮಾ ಇಂಡಸ್ಟ್ರಿಯಲ್ಲಿ ಸ್ವಲ್ಪ ಹೆಸರು ಮಾಡುತ್ತಿದ್ದಂತೆ ವೈವಾಹಿಕ ಜೀವನದತ್ತ ಗಮನ ಹರಿಸಿದ ಇವರು 2012ರಲ್ಲಿ ಅಲೈಕ ರೆಡ್ಡಿ ಅನ್ನುವವರನ್ನು ವಿವಾಹವಾದರು. ಈ ಮುದ್ದಾದ ಜೋಡಿಗೆ ನಿಶ್ಚಿಕ ಎನ್ನುವ ಮಗಳು ಸಹ ಇದ್ದಳು.
ಕಾಸ್ಚೂಮ್ ಡಿಸೈನರ್ ಆಗಿದ್ದಾ, ಅಲೈಕ ರೆಡ್ಡಿ ಅವರನ್ನು ಕುಟುಂಬದವರ ವಿರುದ್ಧವಾಗಿ ಪ್ರೇಮ ವಿವಾಹ ಆದ ಕಾರಣ ತಂದೆ ತಾಯಿಯಿಂದ ದೂರವಾಗಿ ಜೀವನ ನಡೆಸುತ್ತಿದ್ದರು ಎನ್ನುವ ಮಾತುಗಳು ಇವೆ. ಏಕೆಂದರೆ ಅಲೈಕ ರೆಡ್ಡಿ ಅವರಿಗೆ ಇದು ಎರಡನೇ ವಿವಾಹವಾಗಿತ್ತು ಆದರೂ ಕೂಡ ದಂಪತಿಗಳು ಯಾವುದೇ ವಿವಾದ ಇಲ್ಲದೆ ಸಂತೋಷವಾಗಿ ಬದುಕುತ್ತಿದ್ದರು. ಆದರೆ ಇದೀಗ ಬರ ಸಿಡಲಿನಂತೆ ಆ ಕುಟುಂಬಕ್ಕೆ ತಾರಕರತ್ನ ಅವರ ಸಾವಿನ ಸುದ್ದಿ ಅಪ್ಪಳಿಸಿದೆ.
ಜನವರಿ 27ರಂದು ಹೈದರಾಬಾದ್ ಬಳಿಯ ಕುಪ್ಪಂ ಎನ್ನುವಲ್ಲಿ ರಾಜಕೀಯ ರ್ಯಾಲಿ ಒಂದರಲ್ಲಿ ಭಾಗವಹಿಸಿದ್ದ ತಾರಕ ರತ್ನ ಅವರು ದಿಢೀರ್ ಎಂದು ಅಲ್ಲೇ ಕುಸಿದಿದ್ದರು. ಹತ್ತಿರದ ಆಸ್ಪತ್ರೆಗೆ ಸಾಗಿಸಿ ಹೃ.ದ.ಯ.ಘಾ.ತ ಎಂದು ತಿಳಿದ ಮೇಲೆ ತಕ್ಷಣವೇ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಫೆಬ್ರವರಿ 18ರ ಸಂಜೆ ಆರೋಗ್ಯದಲ್ಲಿ ವಿಪರೀತವಾಗಿ ವ್ಯತ್ಯಾಸ ಕಂಡು ಬಂದು ಆಸ್ಪತ್ರೆಯಲ್ಲಿಯೇ ಕೊನೆಯ ಹೆಸರು ಎಳೆತ್ತಿದ್ದಾರೆ.
ನಂದಮೂರಿ ಕುಟುಂಬವು ಉಮಾ ಮಹೇಶ್ವರಿ ಅವರ ಅಕಾಲಿಕ ಸಾ.ವಿ.ನ ನೋವಿಂದ ಇನ್ನೂ ಹೊರ ಬಂದಿರಲಿಲ್ಲ. ಅಷ್ಟರಲ್ಲೇ ಕುಟುಂಬದಲ್ಲಿ ಮತ್ತೊಂದು ಕಹಿ ಘಟನೆ ಜರಗಿ ಹೋಗಿದೆ. ತೆಲುಗು ಚಿತ್ರರಂಗದ ಗಣ್ಯತಿ ಗಣ್ಯರೆಲ್ಲಾ ತಾರಕ ರತ್ನ ಅವರ ಸಾ.ವಿ.ನ ವಿಷಯ ಕೇಳಿ ಸೋಶಿಯಲ್ ಮೀಡಿಯಾದಲ್ಲಿ ಶಾ.ಕ್ ಆಗಿ ಪೋಸ್ಟ್ ಹಾಕುತ್ತಿದ್ದಾರೆ. ಅವರ ಆತ್ಮ ಸದ್ಗತಿ ಕಾಣಲಿ ಎಂದು ನಾವು ಕೇಳಿಕೊಳ್ಳೋಣ. ಇವರ ಆತ್ಮಕ್ಕೆ ಶಾಂತಿ ಸಿಗಲಿ ತಪ್ಪದೆ ಓಂ ಶಾಂತಿ ಎಂದು ಕಾಮೆಂಟ್ ಮಾಡಿ.