ಕಲರ್ಸ್ ಕನ್ನಡ ವಾಹಿನಿಯಲ್ಲಿ ನಮ್ಮ ಸೂಪರ್ ಸ್ಟಾರ್ ಸೀಸನ್ 2 ಆರಂಭಗೊಂಡಿದೆ ಕಳೆದ ಸೀಸನ್ ಅಂತೆ ತಾರಾ ಅನುರಾಧ ಮತ್ತು ಸೃಜನ್ ಲೋಕೇಶ್ ಅವರು ಇದಕ್ಕೆ ಜಡ್ಜ್ ಆಗಿದ್ದಾರೆ. ನಿರಂಜನ್ ದೇಶಪಾಂಡೆ ಅವರ ಜೊತೆಗೆ ವಂಶಿಕ ಕೂಡ ಮೊದಲ ಎಪಿಸೋಡ್ ಅನ್ನು ನಿರೂಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈಗ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಸಾರವಾಗುತ್ತಿರುವ ಎಪಿಸೋಡ್ ಅಲ್ಲಿ ನಿವೇದಿತಾ ಗೌಡ ಅವರು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಇವರ ಜೊತೆ ಅವರ ಪತಿ ರಾಪರ್ ಚಂದನ್ ಶೆಟ್ಟಿ ಕೂಡ ವೇದಿಕೆ ಮೇಲೆ ಬಂದಿದ್ದಾರೆ.
ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339
ಸಾಮಾನ್ಯವಾಗಿ ಸೃಜನ್ ಲೋಕೇಶ್ ಅವರು ಎಲ್ಲರನ್ನು ಯಾವಾಗಲೂ ಕಾಲೆಳೆಯುತ್ತಿರುತ್ತಾರೆ. ಇನ್ನು ಕ್ಯೂಟ್ ಕ್ಯೂಟ್ ಆಗಿರುವ ನಿವೇದಿತಾ ಅವರನ್ನು ಬಿಡಲು ಸಾಧ್ಯವೇ ಇಲ್ಲ. ಚಂದನ್ ಹಾಗೂ ನಿವೇದಿತಾ ಅವರನ್ನು ಕಾಡಿದ ಅವರು ನಿವೇದಿತ ಅವರ ಮನೆಯ ವಿಚಾರವನ್ನು ಕೆಣಕಿದ್ದಾರೆ. ಆಗ ನಿವೇದಿತಾ ಅವರು ಅವರ ಮನೆಯ ಸಿಲಿಂಡರ್ ಕುರಿತು ವಿಚಾರವನ್ನು ಹೇಳಿಕೊಂಡಿದ್ದಾರೆ ಆ ಕ್ಲಿಪ್ಪಿಂಗ್ ಈಗ ಕಲರ್ಸ್ ಕನ್ನಡ ವಾಹಿನಿಯ ಪೇಜ್ ಗಳಲ್ಲಿ ಓಡಾಡುತ್ತಿದ್ದು ನೆಟ್ಟಿಗರು ಕಾಮೆಂಟ್ ಮಾಡಿ ಆ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಇಷ್ಟಕ್ಕೂ ನಿವೇದಿತ ಗೌಡ ಅವರು ಹೇಳಿದ್ದ ಆ ಸೀಕ್ರೆಟ್ ಏನು ಎಂದರೆ ನಿವೇದಿತ ಗೌಡ ಅವರು ಮನೆಗೆ ಶಿಫ್ಟ್ ಆಗಿ ಒಂದೂವರೆ ವರ್ಷ ಕಳೆದಿದೆ ಆದರೆ ಮೊದಲ ಬಾರಿಗೆ ಒಂದುವರೆ ವರ್ಷದ ಬಳಿಕ ಮೊದಲ ಸಿಲಿಂಡರ್ ಅನ್ನು ಖಾಲಿ ಮಾಡಿದ್ದಾರೆ. ಇದನ್ನು ಕೇಳಿದ ಕೂಡಲೇ ಎಲ್ಲರೂ ನಕ್ಕಿದ್ದಾರೆ ಮತ್ತು ನಿರಂಜನ್ ದೇಶಪಾಂಡೆ ಅವರು ಇದರಿಂದಲೇ ತಿಳಿಯುತ್ತದೆ ನೀನು ಮನೆಯಲ್ಲಿ ಅಡುಗೆ ಮಾಡಿಲ್ಲ ಎಂದು ಈ ಶತಮಾನದ ಮಾದರಿ ಹೆಣ್ಣು ನೀನೆ ನಿವೇದಿತಾ ಎಂದು ನಿವೇದಿತಾ ಅವರನ್ನು ತಮಾಷೆ ಮಾಡಿದ್ದಾರೆ.
ಅದಕ್ಕೆ ರಿಪ್ಲೈ ಕೊಟ್ಟ ನಿವೇದಿತಾ ದೇವರು ನನಗೆ ಸೈನ್ ಕೊಟ್ಟಿದ್ದಾರೆ ನೀನು ಅಡುಗೆ ಮಾಡಬೇಡ ಎಂದು ಅದಕ್ಕಾಗಿ ನಾನು ಅಡುಗೆ ಮಾಡಿಲ್ಲ. ಈ ಬಾರಿ ನನ್ನ ಅಮ್ಮ ಬಂದು ಅಡುಗೆ ಮಾಡಿ ಮಾಡಿ ಹೋಗಿದ್ದಾರೆ ಅದಕ್ಕಾಗಿ ಬೇಗ ಖಾಲಿಯಾಗಿದೆ, ಇಲ್ಲ ಎಂದರೆ ಇನ್ನಷ್ಟು ದಿನ ಬರುತ್ತಿತ್ತು ಎಂದು ಉತ್ತರ ಕೊಟ್ಟಿದ್ದಾರೆ. ಅದಕ್ಕೆ ಮರು ಉತ್ತರಿಸಿದ ಸೃಜನ್ ಲೋಕೇಶ್ ಅವರು ಹೌದು ದೇವರು ನಿನಗೆ ಕೊಡುವ ಸೈನ್ ಯಾವ ರೀತಿ ಇರುತ್ತದೆ ಎಂದರೆ ದಯವಿಟ್ಟು ನೀನು ಅಡುಗೆ ಮಾಡಬೇಡ ನೀನು ಮಾಡಿದ ಅಡುಗೆ ತಿಂದರೆ ಎಲ್ಲರೂ ನನ್ನ ಬಳಿ ಬರುತ್ತಾರೆ ಅದಕ್ಕೆ ಎಂದಿದ್ದಾರೆ.
ನಿವೇದಿತ ಗೌಡ ಅವರು ಚಂದನ್ ಶೆಟ್ಟಿ ಅವರ ಜೊತೆ ವಿವಾಹವಾಗಿ ವರ್ಷಗಳೇ ಕಳೆದಿವೆ ಅಂದಿನಿಂದ ಒಂದಲ್ಲ ಒಂದು ಕಾರ್ಯಕ್ರಮಗಳಲ್ಲಿ ಅಥವಾ ಒಂದಲ್ಲ ಒಂದು ಶೋಗೆ ನಿವೇದಿತಾ ಅವರು ರೆಡಿ ಆಗುತ್ತಲೇ ಇದ್ದಾರೆ ಸದ್ಯಕ್ಕೆ ತೆರೆ ಹಿಂದೆ ಹಿರಿತೆರೆ ಮೇಲೆ ಬರುವ ಸಲುವಾಗಿ ತಯಾರಿ ನಡೆದಿದೆ. ಇದು ಸಾಕಷ್ಟು ಅಭಿಮಾನಿಗಳಿಗೂ ಕೂಡ ತಿಳಿದಿದೆ ಹಾಗಾಗಿ ಕೆಲವರು ಸಮಯ ಇಲ್ಲದೆ ಅವರು ಅಡುಗೆ ಮಾಡಿಲ್ಲ ಎಂದುಕೊಂಡರೆ ಕೆಲವರು ಹೌದಾ ನೀವು ಯಾವ ಏಜೆನ್ಸಿಯಿಂದ ಸಿಲಿಂಡರ್ ತರಿಸಿಕೊಳ್ಳುತ್ತೀರ ನಮಗೂ ಹೇಳಿ ಎಂದು ಕಮೆಂಟ್ಗಳಲ್ಲಿ ಕೇಳಿ ಮತ್ತೊಮ್ಮೆ ಲೇವಡಿ ಮಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.