ಯುಗಾದಿ ಹಬ್ಬದ ದಿನ ಈ ಮರ ಎಲ್ಲಿ ಸಿಕ್ಕರೂ ಬಿಡಬೇಡಿ, ಆಗದೆ ಇರುವ ಕೆಲಸವೂ ಆಗುತ್ತದೆ ಸಾಕಷ್ಟು ಹಣ ಗಳಿಸುತ್ತೀರಿ.!

 

ಯುಗಾದಿ ಹಬ್ಬ ಎಂದರೆ ಹಿಂದೂಗಳಿಗೆ ನಮ್ಮ ಪಂಚಾಂಗದ ಪ್ರಕಾರವಾಗಿ ಹೊಸ ವರ್ಷ ಆರಂಭ. ಈಗ ನಾವು ಏಪ್ರಿಲ್ 9, 2024ರಂದು ಕ್ರೋಧಿ ಸಂವತ್ಸರವನ್ನು ಆರಂಭಿಸುತ್ತಿದ್ದೇವೆ. ವಸಂತ ಋತು ಚೈತ್ರ ಮಾಸದ ಈ ದಿನ ಇಡೀ ಪ್ರಕೃತಿಯೇ ಹೊಸತನಕ್ಕೆ ತೆರೆದುಕೊಂಡಿರುತ್ತದೆ.

ಎಲ್ಲಾ ಕಡೆ ಹಚ್ಚ ಹಸಿರು ಸಮೃದ್ಧಿಯನ್ನು ಸೂಚಿಸುತ್ತಿರುತ್ತದೆ ಮತ್ತು ಶಿಶಿರ ಮಾಸ ಮುಗಿದು ವಸಂತ ಋತು ಆರಂಭ ಆಗಿರುವುದು ಜೀವನದಲ್ಲಿ ಹೊಸ ಚೈತನ್ಯ ಹೊಸ ಹುರಪು ಹಾಗೂ ಸ್ಪೂರ್ತಿಯನ್ನು ತುಂಬುತ್ತದೆ. ಈ ಶುಭ ಸಮಯದಲ್ಲಿ ನೀವು ಕೂಡ ನಿಮ್ಮ ಜೀವನದ ಕಷ್ಟಗಳನ್ನು ಕಳೆದು ಹೊಸ ರೀತಿ ಬದುಕು ಆರಂಭಿಸಬೇಕು ಹಿಂದಿನ ವರ್ಷಕ್ಕಿಂತ ಹೆಚ್ಚು ಹಣಕಾಸು ಸಂಪಾದಿಸಬೇಕು ಕೀರ್ತಿಗಳಿಸಬೇಕು ಯಶಸ್ವಿ ಆಗಬೇಕು ಎಂದರೆ ಈಗ ನಾವು ಹೇಳುವ ಈ ಸರಳ ಉಪಾಯವನ್ನು ಮಾಡಿ.

ಇದಕ್ಕಾಗಿ ಯುಗಾದಿ ಹಬ್ಬದ ದಿನದಂದು ನೀವು ಒಂದು ವಿಶೇಷವಾದ ವಸ್ತುವನ್ನು ಮನೆಗೆ ತರಬೇಕು. ಯುಗಾದಿ ಹಬ್ಬದ ದಿನದಂದು ಪ್ರತಿ ಮನೆಯಲ್ಲೂ ಮಾವು ಬೇವಿನಿಂದ ತಳಿರು ತೋರಣಗಳನ್ನು ಕಟ್ಟಿ ಸಂಭ್ರಮಾಚರಣೆಯಲ್ಲಿ ತೊಡಗಿರುತ್ತೇವೆ ಮತ್ತು ಬೇವುಬೆಲ್ಲ ಸೇವಿಸಲೇಬೇಕಾದ ಕಾರಣ ಪ್ರತಿ ಮನೆಯಲ್ಲೂ ಬೇವಿನ ಎಲೆ ಬೇವಿನ ಹೂವನ್ನು ತಂದಿರುತ್ತೇವೆ.

ಈ ಸುದ್ದಿ ಓದಿ:- ಹೆಬ್ಬೆರಳ ಉಗುರ ಮೇಲೆ ಅರ್ಧಚಂದ್ರಾಕೃತಿ ಕಂಡರೆ 30 ದಿನಗಳ ಒಳಗೆ ನಿಮ್ಮ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಎಂದರ್ಥ.

ಈ ಬೇವಿನ ಎಲೆಗೆ ಒಂದು ಸಂಸ್ಕಾರ ಕೊಡುವುದರಿಂದ ಅದು ನಿಮ್ಮ ಬದುಕಿನ ನಿಮ್ಮ ಮನೆಯ ನಿಮ್ಮ ವ್ಯಾಪಾರ ನಿಮ್ಮ ಉದ್ಯೋಗದಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎನ್ನುವ ಒಂದು ಸೀಕ್ರೆಟ್ ಬಹುತೇಕರಿಗೆ ತಿಳಿದಿಲ್ಲ. ಬೇವಿನ ಸೊಪ್ಪಿಗೆ ಎಷ್ಟು ಶಕ್ತಿ ಇದೆ ಎಂದರೆ ಬೇವಿನ ಮರದ ಸುತ್ತ ಸಕಾರಾತ್ಮಕ ವಾತಾವರಣವಿದೆ ಮತ್ತು ಬೇವಿನ ಎಲೆಗೆ ಆಯುರ್ವೇದದಲ್ಲಿ ಕೂಡ ಪೂಜ್ಯನಿಗೆ ಸ್ಥಾನ ನೀಡಲಾಗಿದೆ.

ಇದು ವಾತಾವರಣದಲ್ಲಿ ಆಮ್ಲಜನಕವನ್ನು ಶುದ್ಧೀಕರಿಸುತ್ತದೆ, ಚರ್ಮ ರೋಗಗಳಿಗೆ ಮುಕ್ತಿ ನೀಡುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ನಕಾರಾತ್ಮಕ ದೋಷಗಳನ್ನು ಹೀರಿ ಹೊರ ಹಾಕುತ್ತದೆ. ರುಚಿಯಲ್ಲಿ ಕಹಿ ಆಗಿದ್ದರು ಜೀವನಕ್ಕೆ ಇದು ಕೊಡುವ ಸಿಹಿಯು ಬೆಲೆ ಕಟ್ಟಲಾಗದ್ದು.

ನೀವು ಏನು ಮಾಡಬೇಕು ಎಂದರೆ ಅಳಿಲು ಓಡಾಡಿರುವ ಮರದಿಂದ ಬೇವಿನ ಸೊಪ್ಪು ತರಬೇಕು ಯಾಕೆಂದರೆ ಅಳಿಲಿನ ಮೇಲೆ ಮೂರು ಗೆರೆಯನ್ನು ಶ್ರೀರಾಮರು ಹಾಕಿ ಆಶೀರ್ವದಿಸಿದ್ದಾರೆ, ಇಂತಹ ಅಳಿಲು ಕೂಡ ಸಾಕಷ್ಟು ಸಕಾರಾತ್ಮಕತೆಯನ್ನು ಮತ್ತು ದೈವಿಕತೆಯನ್ನು ಹೊಂದಿರುತ್ತದೆ.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಅದು ಓಡಾಡಿರುವ ಬೇವಿನ ಎಲೆಗಳಲ್ಲಿ ಇನ್ನು ಆ ಶಕ್ತಿ ಹೇರಳವಾಗಿರುತ್ತದೆ ಒಂದು ವೇಳೆ ಸಿಗದೇ ಇದ್ದರೆ ಮಾರ್ಕೆಟ್ ನಲ್ಲಿ ಸಿಗುವ ಈ ಬೇವಿನ ಎಲೆ ತಂದು ಎರಡು ಕಡ್ಡಿ ಹಿಡಿದುಕೊಂಡು 11 ಬಾರಿ ಜಯರಾಮ್ ಶ್ರೀರಾಮ್ ಜಯ ಜಯ ಜೈ ರಾಮ ಎಂದು ಹೇಳಿ ನಿಮ್ಮ ಬೆರಳುಗಳಿಂದ 11 ಬಾರಿ ಸವರಿ.

ನಂತರ ಇದನ್ನು ದೇವರ ಕೋಣೆಯಲ್ಲಿಟ್ಟು ತಾಯಿ ಮಹಾಲಕ್ಷ್ಮಿ ಮಹಾವಿಷ್ಣು ನಿಮ್ಮ ಮನೆದೇವರು ಹಾಗೂ ಇಷ್ಟ ದೇವರನ್ನು ಪ್ರಾರ್ಥಿಸಿ, ಮುಖ್ಯದ್ವಾರದ ಬಳಿ ತೆಗೆದುಕೊಂಡು ಹೋಗಿ ಹೊಸ್ತಿಲಿಗೆ ಮತ್ತು ತೋರಣ ಕಟ್ಟುವ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಮೂರು ಬಾರಿ ಕುಟ್ಟಿ ಒಂದು ಕಡ್ಡಿಯನ್ನು ನೀವು ಹಣಕಾಸು ಇಡುವ ಬಿರುವಿಗೆ ಹಾಕಿ ಭದ್ರವಾಗಿ ಇಡಿ.

ಇನ್ನೊಂದು ಕಡ್ಡಿಯನ್ನು ನಿಮ್ಮ ವ್ಯಾಪಾರಸ್ಥಳದಲ್ಲಿ ಅಥವಾ ಉದ್ಯೋಗ ಮಾಡುವ ಜಾಗದಲ್ಲಿ ಇಡಿ. ಯಾವುದೇ ಕೆಟ್ಟ ದೃಷ್ಟಿ ದೋಷ ನಿಮಗೆ ತಾಗಿದ್ದರು ನಿವಾರಣೆ ಆಗುತ್ತದೆ ನಿಮ್ಮ ಶತ್ರು ನಾ’ಶವಾಗುತ್ತದೆ ಮತ್ತು ಹಣದ ಆಕರ್ಷಣೆ ಹೆಚ್ಚಾಗಿ ಮುಂದಿನ ಹೊಸ ಸಂವತ್ಸರ ಆರಂಭವಾಗುವುದರ ಒಳಗೆ ನೀವು ಬದುಕಿನಲ್ಲಿ ಬಹಳ ಉತ್ತಮ ಸ್ಥಾನವನ್ನು ತಲುಪಿರುತ್ತೀರಿ. ಬಹಳ ನಂಬಿಕೆ ಹಾಗೂ ಶ್ರದ್ಧೆಯಿಂದ ಇದನ್ನು ಪಾಲಿಸಿ ನಂತರ ನಡೆಯುವ ಚಮತ್ಕಾರವನ್ನು ನೀವೇ ನೋಡಿ.

Leave a Comment

WhatsApp Group Join Now
Telegram Group Join Now