Home Blog Page 206

ಶಾಲೆಗೆ ಅಡ್ಮಿಷನ್ ಮಾಡಲು ಆಗದೆ ಆ.ತ್ಮ.ಹ.ತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿದೆ. ಆಗ ರಾಯರು ಮಾಡಿದ ಪವಾಡ ಇದು.! ಇಂದು ಎಲ್ಲಾ ಕಷ್ಟ ನಿವಾರಣೆಯಾಗಿದೆ.

ಆ.ತ್ಮಹ‌.ತ್ಯೆ ನಿರ್ಧಾರ ಮಾಡಿದವರ ಬದುಕಿನಲ್ಲಿ ರಾಯರು ಮಾಡಿದ ಪವಾಡ ಎಂತಹದ್ದು ಗೊತ್ತಾ? ಮುಡುಪು ಅನುಷ್ಟಾನಕ್ಕೆ ಇಷ್ಟೊಂದು ಶಕ್ತಿ ಇದೆಯಾ?. ಕಲಿಯುಗದ ದೇವರು ಭಕ್ತರಪಾಲಿನ ಕಾಮಧೇನು ಕಲ್ಪವೃಕ್ಷ ಆಗಿರುವ ಗುರುರಾಯರ ಕರುಣೆ ಕೃಪಾಕಟಾಕ್ಷ ಭಕ್ತರ ಮೇಲೆ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ರಾಯರಿದ್ದಾರೆ ಎನ್ನುವ ಒಂದೇ ಒಂದು ಪದವೇ ಸಾಕು ಶಕ್ತಿಯಂತೆ ನೊಂದವರ ಪಾಲಿಗೆ ಆಸರೆಯಾಗಿ ಕಾಪಾಡುತ್ತದೆ. ಜೀವನದಲ್ಲಿ ಯಾರು ಕೈ ಬಿಟ್ಟರೂ ಕೂಡ ರಾಯರು ಎಂದಿಗೂ ತಮ್ಮ ಭಕ್ತರನ್ನು ಕೈಬಿಡುವುದಿಲ್ಲ.

ಮನಸಾರೆ ರಾಯರನ್ನು ಪ್ರಾರ್ಥಿಸಿ, ನಂಬಿಕೆ ಇಟ್ಟು ಅವರ ಪ್ರಕಾರವಾಗಿ ನಡೆದುಕೊಂಡರೆ ಆ ಭಕ್ತರ ಬದುಕಿನಲ್ಲಿ ಎಂತಹದೇ ಸಂಕಷ್ಟ ಬಂದಿದ್ದರು ಕೂಡ ರಾಯರು ಅದನ್ನೆಲ್ಲ ಪರಿಹರಿಸಿ ಬೆನ್ನು ಹಿಂದೆ ನಿಂತು ಕಾಪಾಡುವುದರಲ್ಲಿ ಅನುಮಾನವೇ ಇಲ್ಲ. ಈ ರೀತಿ ಒಮ್ಮೆ ರಾಯರ ಕೃಪಾಕಟಾಕ್ಷಕ್ಕೆ ಪಾತ್ರರಾದರೆ ಜೀವನ ಪೂರ್ತಿ ರಾಯರ ಅನುಗ್ರಹ ಅಂತವರ ಮೇಲೆ ಇರುತ್ತದೆ.

ಇದನ್ನು ಉದಾಹರಣೆಯೊಂದಿಗೆ ಹೇಳುವುದಾದರೆ ಜೀವನದಲ್ಲಿ ಸಾಕಷ್ಟು ನೊಂದು ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ ಒಂದು ಕುಟುಂಬ ಕೂಡ ರಾಯರನ್ನು ನೆನೆದು ನಂಬಿಕೆ ಇಟ್ಟು ಮುಡುಪು ಅನುಷ್ಠಾನ ಶುರು ಮಾಡಿದ ನಾಲ್ಕೇ ದಿನಗಳಲ್ಲಿ ಪವಾಡ ನಡೆದು ತಮ್ಮ ನಿರ್ಧಾರವನ್ನು ಬದಲಾಯಿಸಿದ ಉದಾಹರಣೆಗಳು ಇವೆ. ಗಂಡ ಹೆಂಡತಿ ಇಬ್ಬರೂ ಮಕ್ಕಳಿದ್ದ ಸಂಸಾರ ತುಂಬಾ ಚೆನ್ನಾಗಿ ನಡೆಯುತ್ತಿತ್ತು.

ಇದ್ದಕ್ಕಿದ್ದ ಹಾಗೆ ಗಂಡನ ಕೆಲಸವು ಹೊರಟು ಹೋಯಿತು, ಮಕ್ಕಳ್ಳಿಬ್ಬರ ಶಾಲಾ ಖರ್ಚು ಹಾಗೂ ಮನೆಯ ನಿರ್ವಹಣೆ ಖರ್ಚು ಅಧಿಕವಾಗ ತೊಡಗಿತು. ಮಕ್ಕಳನ್ನು ಕಾನ್ವೆಂಟ್ ಸೇರಿಸಿದ ಕಾರಣ ನಂತರ ದಿನಗಳಲ್ಲಿ ಮಕ್ಕಳ ಶಾಲಾ ಫೀಸ್ ಹೊರೆ ಎನಿಸಿತು. ಗೌರ್ಮೆಂಟ್ ಶಾಲೆಗೆ ಹಾಕಲು ಟಿಸಿ ಕೇಳಿದರೆ ಫೀಸ್ ಕಟ್ಟದೆ ಕೊಡುವುದಿಲ್ಲ ಎನ್ನುವ ಆಡಳಿತ ಮಂಡಳಿಯ ವರ್ತನೆ ಬೇರೆ ಏನು ದಾರಿಯೇ ಇಲ್ಲವಾ ಎನ್ನುವ ಹಂತಕ್ಕೆ ತಲುಪಿಸಿತ್ತು.

ಆಗ ಆ ಮನೆಯ ಗೃಹಿಣಿಯು ಮಕ್ಕಳೊಡನೆ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಹತ್ತಿರದವರ ಬಳಿ ತನ್ನ ಕಷ್ಟವನ್ನೆಲ್ಲ ಹೇಳಿಕೊಂಡಾಗ ಇದನ್ನೆಲ್ಲಾ ಕೇಳಿದವರು ರಾಯರ ಭಕ್ತರಾಗಿದ್ದ ಕಾರಣ ಮುಡುಪು ಅನುಷ್ಠಾನದ ಬಗ್ಗೆ ತಿಳಿಸುತ್ತಾರೆ. ಆಗ ಅವರು ಎಲ್ಲವನ್ನು ಮಾಡಿದ್ದೇವೆ ನೋಡೋಣ ಎಂದು ಭಕ್ತಿಯಿಂದ ಎಲ್ಲಾ ಭಾರವನ್ನು ರಾಯರ ಮೇಲೆ ಹಾಕಿ ಮುಡುಪು ಅನುಷ್ಠಾನವನ್ನು ಶುರು ಮಾಡುತ್ತಾರೆ.

ಶುರುವಾದ ನಾಲ್ಕೇ ದಿನದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಅವರ ಸಮಸ್ಯೆಗಳು ಪರಿಹಾರ ಆಗುವ ಸೂಚನೆಗಳು ಕಂಡುಬರುತ್ತವೆ. 9 ದಿನಗಳವರೆಗೆ ಈ ಅನುಷ್ಠಾನವನ್ನು ಪಾಲಿಸುವುದರ ಬಗ್ಗೆ ನಿರ್ಧಾರ ಮಾಡಿಕೊಂಡಿದ್ದ ಅವರು 9 ದಿನಗಳನ್ನು ಪೂರೈಸಿದ ನಂತರ ಅವರ ಬದುಕಿನ ಭವಣೆಯೇ ಬದಲಾಗಿ ಹೋಗುತ್ತದೆ.

ನಂತರದ ದಿನಗಳಲ್ಲಿ ಅವರು ಗುರುರಾಯರ ಭಕ್ತರಾಗಿ ಇಂದಿಗೂ ಚೆನ್ನಾಗಿ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಜೀವನದಲ್ಲಿ ಒಮ್ಮೆ ಮಾತ್ರ ಮನುಷ್ಯ ಜನ್ಮ ಸಿಗುತ್ತದೆ, ಇದನ್ನು ಸಾರ್ಥಕವಾಗಿ ಬದುಕಬೇಕು ಸಮಸ್ಯೆಗಳು ಬಂದ ತಕ್ಷಣ ಹೇಡಿಗಳ ರೀತಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಎನ್ನುವ ನಿರ್ಧಾರವನ್ನು ಮಾಡಿದ್ದಾರೆ. ತಮ್ಮಂತೆ ಕಷ್ಟದಲ್ಲಿರುವ ಇತರರಿಗೂ ಕೂಡ ರಾಯರ ಮಹಿಮೆ ಬಗ್ಗೆ ಮುಡುಪು ಅನುಷ್ಠಾನದ ಶಕ್ತಿಯ ಬಗ್ಗೆ ತಿಳಿಸಿ ರಾಯರ ಸೇವೆ ಮಾಡುತ್ತಿದ್ದಾರೆ. ನೀವು ಕೂಡ ಬದುಕಿನಲ್ಲಿ ಸಾಕಷ್ಟು ನೊಂದು ಹೋಗಿದ್ದರೆ, ನಿಮ್ಮಿಂದ ಬಗೆಹರಿಸಲಾಗದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದರೆ ಭಕ್ತಿಯಿಂದ ರಾಯರನ್ನು ಪ್ರಾರ್ಥಿಸಿ ನಡೆದುಕೊಳ್ಳಿ. ಚಮತ್ಕಾರ ನಡೆಯುವುದರಲ್ಲಿ ಅನುಮಾನವೇ ಇಲ್ಲ.

ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುವ ವರಾಹಿ ದೇವಿ ಅಧ್ಬುತ ಮಂತ್ರ

 

ವರಾಹಿ ತಾಯಿಯ ಬಗ್ಗೆ ನಾಡಿನ ಅನೇಕರಿಗೆ ತಿಳಿದೇ ಇದೆ. ದೇವಿಯ ರೂಪ ಹಾಗೂ ಹಂದಿಯ ಮುಖ ಹೊಂದಿರುವ ಈ ತಾಯಿಯನ್ನು ಭಕ್ತಿಯಿಂದ ಪಂಚಪೂಜಾದಿಯಿಂದ ಪ್ರಾರ್ಥಿಸಿದರೆ ಅವರ ಎಲ್ಲ ಕಷ್ಟಗಳು ಕೂಡ ಪರಿಹಾರ ಆಗುತ್ತದೆ. ಹೆಚ್ಚಿನ ಜನರು ಈ ವರಾಹಿ ಅಮ್ಮನನ್ನು ತಮ್ಮ ಗೊಂದಲಗಳಿಗೆ ಪರಿಹಾರ ಕೇಳುವ ಸಲುವಾಗಿ ಪೂಜಿಸುತ್ತಾರೆ. ಪುರಾಣಗಳ ಪ್ರಕಾರ ಭೂಮಿ ಮೇಲೆ 330 ಕೋಟಿ ದೇವತೆಗಳು ಇದ್ದಾರೆ.

ಒಬ್ಬೊಬ್ಬರಿಗೂ ಕೂಡ ಒಂದೊಂದು ರೀತಿಯ ಕ್ರಮದಿಂದ ಪೂಜೆ ಮಾಡಿದರೆ ಇಷ್ಟ ಆಗುತ್ತದೆ. ಆ ದೇವರ ಅನುಗ್ರಹ ಆಗಬೇಕು ಎಂದರೆ ಅವರಿಗೆ ಇಷ್ಟವಾದ ಹಾದಿಯಲ್ಲಿ ಪೂಜಿಸಿ ಪ್ರಾರ್ಥಿಸಬೇಕು. ಹಾಗೆಯೆ ವರಾಹಿ ಅಮ್ಮನಿಗೂ ಕೂಡ ಪೂಜಿಸುವುದಕ್ಕೆ ಒಂದು ಪ್ರತ್ಯೇಕ ವಿಧಾನ ಇದೆ. ಈ ವಿಶೇಷ ರೀತಿಯಲ್ಲಿ ತಾಯಿಯನ್ನು ಪ್ರಾರ್ಥಿಸುವುದರಿಂದ ನಿಮ್ಮ ಸಮಸ್ಯೆ ಖಂಡಿತ ಪರಿಹಾರ ಆಗುತ್ತದೆ.

ಜೊತೆಗೆ ಜನರು ಒಂದೊಂದು ಸಮಸ್ಯೆಗೆ ಒಂದೊಂದು ದೇವರನ್ನು ಪೂಜಿಸುತ್ತಾರೆ. ವಿದ್ಯೆಗಾಗಿ ಸರಸ್ವತಿ, ಶಕ್ತಿಗಾಗಿ ದುರ್ಗೆ, ಹಣಕ್ಕಾಗಿ ಲಕ್ಷ್ಮಿ ವಿಷ್ಣು ವೆಂಕಟೇಶ್ವರ, ಅರಿವಿಗಾಗಿ ಗುರುವಿನ ಮೊರೆ ಹೋಗುತ್ತಾರೆ. ವರಾಹ ಅಮ್ಮನವರನ್ನು ಪೂಜಿಸಲು ಕೂಡ ಒಂದು ಸ ಕಾರಣ ಇದ್ದೇ ಇದೆ. ಅದೇನೆಂದರೆ ಭಕ್ತಾದಿಗಳ ಮನದಲ್ಲಿ ಯಾವುದೇ ಗೊಂದಲಗಳು ಬಂದಾಗ ಅದಕ್ಕೆ ಉತ್ತರ ಕಂಡುಕೊಳ್ಳಲು ಈ ರೀತಿ ವರಾಹಿ ಅಮ್ಮನನ್ನು ಪೂಜಿಸುತ್ತಾರೆ.

ಅದು ಉದ್ಯೋಗಕ್ಕೆ ಸಂಬಂಧಪಟ್ಟ ಗೊಂದಲವೇ ಇರಬಹುದು, ಹೊಸ ಉದ್ಯೋಗವನ್ನು ಆರಂಭಿಸಬೇಕೋ ಬೇಡವೋ ಎನ್ನುವ ಗೊಂದಲ ಇರಬಹುದು ಅಥವಾ ಮದುವೆ ಆಯ್ಕೆ ಬಂದಾಗ ಒಪ್ಪಿಕೊಳ್ಳಬೇಕೋ ಬೇಡವೋ ಅಥವಾ ಹಣಕಾಸಿನ ಸಂಬಂಧಪಟ್ಟ ವ್ಯವಹಾರ ಬಂದಾಗ ಅದನ್ನು ಮಾಡಬಹುದಾ ಬೇಡವಾ ಎನ್ನುವ ಗೊಂದಲ ಇರಬಹುದು ಈ ರೀತಿ ಆರೋಗ್ಯ, ಆರ್ಥಿಕತೆ, ಉದ್ಯೋಗ, ವಿದ್ಯೆ, ಹಣಕಾಸು ಈ ರೀತಿ ಯಾವುದೇ ವಿಷಯಗಳಲ್ಲಿ ಗೊಂದಲ ಉಂಟಾದರೂ ವರಾಹಿ ಅಮ್ಮನನ್ನು ಧ್ಯಾನಿಸಿ ಪರಿಹಾರ ಪಡೆಯಬಹುದು.

ಇದಕ್ಕಾಗಿ ನೀವು ಹೆಚ್ಚಿನ ಹಣಕಾಸು ಖರ್ಚು ಮಾಡಿ ಪೂಜೆ ಪುನಸ್ಕಾರ ಹೋಮ ಹವನ ಮಾಡಿಸುವ ಅವಶ್ಯಕತೆ ಇಲ್ಲ ಅಥವಾ ಕಠಿಣ ವ್ರತವನ್ನು ಪಾಲಿಸುವ ಕಟ್ಟುನಿಟ್ಟು ನಿಯಮಗಳು ಇಲ್ಲ. ಕೆಲ ಸರಳ ವಿಧಾನಗಳ ಮೂಲಕ ಕೂಡ ವರಾಹಿ ಅಮ್ಮನನ್ನು ಪ್ರಾರ್ಥಿಸಿ ಅವರ ಮೂಲಕವೇ ನಿಮ್ಮ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು. ಅದಕ್ಕಾಗಿ ಈ ತಾಯಿಯನ್ನು ಗೊಂದಲಗಳಿಗೆ ಉತ್ತರಿಸುವ ಅಮ್ಮ ಎಂದು ಕರೆಯಲಾಗುತ್ತದೆ. ವರಾಹಿ ಅಮ್ಮನನ್ನು ನೀವು ಆಯ್ಕೆ ಕೇಳುವುದಾದರೆ ಈ ಕ್ರಮವನ್ನು ಅನುಸರಿಸಿ.

ಇದಕ್ಕಾಗಿ ಒಂದು ಮಂತ್ರ ಇದೆ ಮಂತ್ರ ಜಪಿಸುವ ಉತ್ತರ ಪಡೆಯಬಹುದು. ಅದಕ್ಕೂ ಮುನ್ನ ಸ್ನಾನ ಮಾಡಿ ಶುದ್ಧ ವಸ್ತ್ರ ಧರಿಸಿ ಒಳ್ಳೆ ಮನಸ್ಸಿನಿಂದ ವರಾಹಿ ಅಮ್ಮನನ್ನು ಸ್ಮರಣೆ ಮಾಡಿ ನಂತರ ಈ ಮೇಲೆ ತಿಳಿಸಿದಂತೆ ಪಂಚೋಪಾದಿಯಿಂದ ಅರಿಶಿಣ ಮ, ಕುಂಕುಮ, ಅಕ್ಷತೆ, ದೂಪ ದೀಪಗಳಿಂದ ತಾಯಿಯನ್ನು ಆರಾಧಿಸಿ ನೈವೇದ್ಯ ತೋರಿಸಿ ನಂತರ ಒಂದು ಸ್ಥಳದಲ್ಲಿ ಕುಳಿತುಕೊಳ್ಳಿ.

ನೂರೆಂಟು ಬಾರಿ ವರಾಹಿ ಅಮ್ಮನವರ ಮಂತ್ರವಾದ ಓಂ ಹ್ರೀಂ ನಮೋ ವಾರಾಹಿ ಘೊರೆ ಸ್ವಪ್ನಂ ಠಾಂ ಠಃ ಸ್ವಾಹಾ ಈ ಮಂತ್ರವನ್ನು ಜಪಿಸಿ. ಜಪಿಸಿದ ನಂತರ ನೆಮ್ಮದಿಯಿಂದ ನಿದ್ದೆ ಮಾಡಿ. ಸಾಧ್ಯವಾದರೆ ಈ ಮಂತ್ರವನ್ನು ರಾತ್ರಿ 10 ಗಂಟೆಗೆ ಆರಂಭಿಸಿ 11 ಗಂಟೆ ಒಳಗೆ ಮುಗಿಸಿ ನಿದ್ರೆ ಮಾಡಿ. ಅಮ್ಮನವರು ವರಾಹ ರೂಪದಲ್ಲಿ ಬಂದು ಅಥವಾ ಒಬ್ಬರು ಹೆಂಗಸಿನ ರೂಪದಲ್ಲಿ ಬಂದು ನಿಮಗೆ ಕೆಲ ಸೂಕ್ಮಗಳ ಮೂಲಕ.

ಆ ಕಾರ್ಯ ಮಾಡಬೇಕಾ ಮಾಡಬಾರದ ಅಥವಾ ಅದರಿಂದ ಒಳಿತಾಗುತ್ತದೆಯೋ ಕೆಡಕಾಗುತ್ತದೆಯೋ, ಲಾಭವಾಗುತ್ತದೆಯೋ ನಷ್ಟವಾಗುತ್ತದೆಯೋ ಎನ್ನುವುದರ ಬಗ್ಗೆ ಉತ್ತರ ಕೊಡುತ್ತಾರೆ. ಆ ಸಮಯದಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕನಾದ ಉತ್ತರ ಬರದಿದ್ದ ಸಮಯದಲ್ಲಿ ಬೇಸರವಾದರೂ ಕೂಡ ತಾಯಿಯ ಎಚ್ಚರಿಕೆಯನ್ನು ಪಾಲಿಸಿ ನಡೆದರೆ ಮುಂದೊಂದು ದಿನ ಸಂಕಷ್ಟ ಪಡುವುದು ತಪ್ಪುತ್ತದೆ.

ಕಲ್ಲು ಉಪ್ಪು ಮತ್ತು ಕುಂಕುಮದಿಂದ ಭಾನುವಾರ ರಾತ್ರಿ ಈ ರೀತಿ ಮಾಡಿ, ಹಣಕಾಸಿನ ಸಮಸ್ಯೆ ಇನ್ನು ಮುಂದೆ ಬರುವುದಿಲ್ಲ.!

 

ಮನುಷ್ಯನಿಗೆ ಸದಾ ಕಾಲ ಒಂದಲ್ಲ ಒಂದು ತೊಂದರೆಗಳು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ಎಲ್ಲ ಸಮಸ್ಯೆಗಳಿಗೂ ಕೂಡ ಪರಿಹಾರ ಇರುವುದಿಲ್ಲ. ಇದ್ದರು ಕೆಲವು ಸಮಸ್ಯೆಗಳಿಗೆ ಕೆಲವು ತೊಂದರೆಗಳಿಗೆ ತಂತ್ರಶಾಸ್ತ್ರದ ಮೂಲಕ ಅಥವಾ ಸಿದ್ದಿ ಶಾಸ್ತ್ರ ಮೂಲಕ ಪರಿಹಾರ ಕಂಡು ಕೊಳ್ಳಬೇಕಾಗುತ್ತದೆ. ಮುಖ್ಯವಾಗಿ ಕಣ್ಣು ದೃಷ್ಟಿ, ಹಿತ ಶತ್ರುಗಳ ಕಾಟ, ಕುಟುಂಬದಲ್ಲಿ ಗಂಡ ಹೆಂಡತಿ ನಡುವೆ ಮನಸ್ತಾಪ, ಆರ್ಥಿಕ ಸಮಸ್ಯೆ, ಪ್ರೇಮದ ವೈಫಲ್ಯ ಮದುವೆ ಸಂಬಂಧಿತ ಸಮಸ್ಯೆಗಳು, ಉದ್ಯೋಗದಲ್ಲಿನ ಸಮಸ್ಯೆಗಳು ಮತ್ತು ವ್ಯಾಪಾರದಲ್ಲಿನ ಯಾವುದೇ ಸಮಸ್ಯೆ ಬಂದರೂ ಕೂಡ ಅದಕ್ಕೂ ಇದೆ ಪರಿಹಾರವಾಗಿರುತ್ತದೆ.

ಈ ಮೂಲಕ ತಂತ್ರಶಾಸ್ತ್ರ ತಿಳಿಸಿರುವ ಉಪಾಯಗಳನ್ನು ಮಾಡಿಕೊಂಡು ಈ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದ. ಅದಕ್ಕಾಗಿ ಈ ಅಂಕಣದಲ್ಲಿ ಇಂದು ಒಂದು ವಿಶೇಷ ಪ್ರಯೋಗದ ಬಗ್ಗೆ ಹೇಳಿಕೊಡುತ್ತಿದ್ದೇವೆ. ಅಡುಗೆಗೆ ಬಳಸುವ ಉಪ್ಪಿನ ಶಕ್ತಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ತಂತ್ರ ಶಾಸ್ತ್ರದಲಂತೂ ಅದಕ್ಕೆ ವಿಪರೀತವಾದ ಪ್ರಾಶಸ್ತವೇ ಇದೆ. ಲಕ್ಷ್ಮಿ ಸ್ವರೂಪವಾದ ಲಕ್ಷ್ಮಿಗೆ ಪ್ರಿಯವಾದ ವಸ್ತುವಾಗಿರುವ ಈ ಉಪ್ಪನ್ನು ಬಳಸಿಕೊಂಡು ಮನೆಗಾಗಿರುವ ದೃಷ್ಟಿಯನ್ನು ತೆಗೆಯಬಹುದು.

ಜೊತೆಗೆ ಮನೆಯಲ್ಲಿರುವ ನೆಗೆಟಿವ್ ಎನರ್ಜಿಯನ್ನು ಕೂಡ ಹೋಗಲಾಡಿಸಬಹುದು. ಯಾಕೆಂದರೆ ಉಪ್ಪಿಗೆ ಈ ರೀತಿ ನೆಗೆಟಿವ್ ಎನರ್ಜಿಗಳನ್ನು ಎಳೆದುಕೊಳ್ಳುವ ಶಕ್ತಿ ಇರುತ್ತದೆ ಅದು ಮನೆಯಲ್ಲಿ ಇದ್ದಷ್ಟು ಅದನ್ನೆಲ್ಲವನ್ನು ಹಿಡಿದುಕೊಂಡು ಸಕರಾತ್ಮಕ ವಾತಾವರಣವನ್ನು ತುಂಬುತ್ತದೆ. ಆದ್ದರಿಂದ ಉಪ್ಪಿನಿಂದಲೇ ಈ ಒಂದು ಉಪಾಯವನ್ನು ಮಾಡಬೇಕು. ಆದರೆ ಈ ಪ್ರಯೋಗ ಮಾಡುವಾಗ ನಂಬಿಕೆ ಇರಬೇಕು ಅಷ್ಟೇ. ಹಾಗಿದ್ದಲ್ಲಿ ನಿಮ್ಮ ಮನೆಯ ಎಲ್ಲಾ ಸಮಸ್ಯೆಗಳು ದೂರ ಆಗುತ್ತವೆ.

ಇನ್ನು ವಿಶೇಷವಾದ ಪರಿಹಾರ ಸಿಗಬೇಕು ಅದರಲ್ಲೂ 64 ಗಂಟೆಗಳಲ್ಲಿ ಪರಿಹಾರ ಸಿಗಬೇಕು ಎಂದಾಗ ಈ ಉಪಾಯ ಮಾಡಿ. ಮೊದಲಿಗೆ ಮನೆಯನ್ನು ಶುದ್ಧವಾಗಿ ಸ್ವಚ್ಛ ಮಾಡಿ ಆಗ ಕೂಡ ನೀವು ಮನೆ ಸ್ವಚ್ಛ ಮಾಡುವ ನೀರಿಗೆ ಉಪ್ಪು ಹಾಕಿಕೊಂಡು ಕಲಕಿ ಒರೆಸಬಹುದು. ಇದರಿಂದಲೂ ಸಹ ಮನೆಯಲ್ಲಿರುವ ನೆಗಟಿವ್ ಎನರ್ಜಿಯನ್ನು ಹೊರ ಹಾಕಿದಂತಾಗುತ್ತದೆ.

ಇನ್ನು ಸಹ ನೆಗೆಟಿವ್ ಶಕ್ತಿಯ ಪ್ರಭಾವ ಹೆಚ್ಚಾಗಿದ್ದರೆ ಒಂದು ಬಟ್ಟಲಿನಲ್ಲಿ ಒಂದು ಹಿಡಿ ಉಪ್ಪನ್ನು ತೆಗೆದುಕೊಳ್ಳಿ ಅದಕ್ಕೆ ಒಂದು ಚಮಚದಷ್ಟು ಕುಂಕುಮವನ್ನು ಹಾಕಿ ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಅದು ಕೆಂಪು ಬಣ್ಣ ಬಂದ ಬಳಿಕ ಅದನ್ನು ಮನೆ ಯಾವುದೇ ಮೂಲೆಯಲ್ಲಿ ಇಡಿ. ಮನೆಯ ರೂಮ್ ಅಥವಾ ಹಾಲಿನಲ್ಲಿ ಇಟ್ಟರೂ ನಡೆಯುತ್ತದೆ ಆದರೆ ವಿನಾಕಾರಣ ಟಚ್ ಮಾಡಿ ಚೆಲ್ಲುವ ರೀತಿ ಮಾಡಬಾರದು. ಈ ರೀತಿ ಕುಂಕುಮ ನಿಶ್ಚಿತ ಉಪ್ಪನ್ನು ಇಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಇದರ ಪರಿಣಾಮ ನಿಮಗೆ ತಿಳಿಯುತ್ತದೆ.

ಆದರೆ ಮೊದಲ ಬಾರಿಗೆ ಇದನ್ನು ಶುರು ಮಾಡುವಾಗ ಭಾನುವಾರದಂದು ಮಾಡಬೇಕು ಉದ್ಯೋಗ ಸ್ಥಳಗಳಲ್ಲಿ ಅಥವಾ ವ್ಯಾಪಾರ ಸ್ಥಳದಲ್ಲಿ ಮಾಡಬಹುದು. ಭಾನುವಾರ ರಾತ್ರಿ ಮಾಡಲು ಸಾಧ್ಯವಾಗಲಿಲ್ಲ ಎಂದರೆ ಗುರುವಾರ ಕೂಡ ಇದನ್ನು ಮಾಡಬಹುದು. ಈ ರೀತಿ ಮಾಡಿದ ಬಳಿಕ ಒಂದೊಳ್ಳೆ ಫಲಿತಾಂಶವನ್ನು ಕಾಣುತ್ತೀರಿ. ಇದನ್ನು ವಿಸರ್ಜನೆ ಮಾಡುವ ವಿಷಯದಲ್ಲಿ ಗೊಂದಲ ಬಂದರೆ ಅದಕ್ಕೂ ಕೂಡ ಉತ್ತರ ಇದೆ ನೋಡಿ.

ನೀವು ಭಾನುವಾರ ಇದನ್ನು ಇಟ್ಟ ಕಾರಣ ಮುಂದಿನ ಭಾನುವಾರದವರೆಗೂ ಕೂಡ ಅದು ಅಲ್ಲೇ ಇರಲಿ. ಮುಂದಿನ ಭಾನುವಾರ ಇದನ್ನು ತೆಗೆದು ಮತ್ತೊಮ್ಮ ಒಂದು ಹಿಡಿ ಉಪ್ಪನ್ನು ತೆಗೆದುಕೊಂಡು ಒಂದು ಚಮಚ ಕುಂಕುಮವನ್ನು ಹಾಕಿಕೊಂಡು ಇದೇ ರೀತಿ ಮಿಶ್ರಣ ಮಾಡಿ ಮನೆಯ ಮೂಲೆಗಳಲ್ಲಿ ಇಡಿ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಹೇಗೆ ಪರಿಹಾರ ಆಗುತ್ತದೆ ಎಂದು ಪರೀಕ್ಷಿಸಿ ನೋಡಿ.

ಹರಕೆ ಕಟ್ಟಿ ಮರೆತು ಹೋದ್ರಾ.? ಮಾಡಿಕೊಂಡು ತೀರಿಸದೆ ಹೋದ್ರೆ ನಮ್ಮ ಜೀವನದಲ್ಲಿ ಏನಾಗುತ್ತೆ ಗೊತ್ತ.? ಎಚ್ಚರ..!

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ದೇವರನ್ನು ವಿವಿಧ ರೀತಿಯಲ್ಲಿ ಪೂಜೆ ಮಾಡುತ್ತೇವೆ. ಕಷ್ಟಗಳು ಬಂದಾಗ ಮನೆಯಲ್ಲಿ ಪೂಜೆಗಳನ್ನು ಮಾಡಿಸುವುದು ಹೋಮಗಳನ್ನು ಮಾಡಿಸುವುದು ಒಂದು ರೀತಿ ಆದರೆ ಅನುಕೂಲತೆ ಇಲ್ಲದೆ ಹೋದಾಗ ಬಹಳ ಕಷ್ಟದಲ್ಲಿದ್ದಾಗ ಕೈಯಲ್ಲಿರುವ ಕಾಣಿಕೆಯನ್ನು ಹಾಕಿ ಕೋರಿಕೆ ಕೇಳಿಕೊಂಡು ಹರಕೆ ಕಟ್ಟಿಕೊಳ್ಳುತ್ತೇವೆ.

ಸಾಮಾನ್ಯವಾಗಿ ಹೆಚ್ಚಿನ ಜನರು ಯಾವ ದೇವರಿಗೆ ಹರಕೆ ಮಾಡಿಕೊಡುತ್ತಾರೋ ಆ ದೇವರ ವಾರ ಇದ್ದ ದಿನ ಮನೆಯನ್ನು ಶುದ್ಧಗೊಳಿಸಿ ಪೂಜೆ ಮಾಡಿ ಮಡಿ ಉಟ್ಟುಕೊಂಡು ಒಂದು ಅರಿಶಿಣದ ಬಟ್ಟೆಯಲ್ಲಿ ಒಂದು ನಾಣ್ಯವನ್ನು ಹಾಕಿ ಗಂಟು ಕಟ್ಟಿ ಇಡುತ್ತಾರೆ. ನಂತರ ತಮ್ಮ ಹರಕೆಯನ್ನು ಕೇಳಿಕೊಳ್ಳುತ್ತಾರೆ. ಈ ಹರಕೆ ಪೂರೈಸಿದ ಬಳಿಕ ಕಾಣಿಕೆಯನ್ನು ಅರ್ಪಿಸಿ ನಿನ್ನ ಸನ್ನಿಧಾನಕ್ಕೆ ಬಂದು ದರ್ಶನ ಪಡೆಯುತ್ತೇನೆ ಎಂದು ಹೇಳಿಕೊಳ್ಳುತ್ತಾರೆ.

ಇದಾದ ಬಳಿಕ ಸ್ವಲ್ಪ ದಿನಗಳಲ್ಲಿ ಅದನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಇನ್ನು ಕೆಲವರು ಇನ್ನೊಂದು ರೀತಿಯಲ್ಲಿ ಹರಕೆ ಮಾಡಿಕೊಳ್ಳುತ್ತಾರೆ. ಅದೇನೆಂದರೆ ಇದೇ ರೀತಿ ಆ ದೇವರ ವಾರ ಇರುವ ದಿನ ದೇವಾಲಯಕ್ಕೆ ಹೋಗಿ ಅಥವಾ ಮನೆ ಸ್ವಚ್ಛಗೊಳಿಸಿ ಮಡಿ ಉಟ್ಟುಕೊಂಡು ದೇವರಿಗೆ ಪೂಜೆ ಮಾಡಿದ ಬಳಿಕ ನನಗೆ ಈ ರೀತಿ ಒಂದು ಸಮಸ್ಯೆಯಿಂದ ಪರಿಹಾರ ಮಾಡು ಅಥವಾ ಈ ರೀತಿ ಒಂದು ಒಳ್ಳೆ ಸುದ್ದಿ ಬರುವ ಹಾಗೆ ಮಾಡು.

ಹೀಗೆ ಮಾಡಿದರೆ ಸನ್ನಿಧಾನಕ್ಕೆ ಬಂದು ಈ ರೀತಿ ನಿನ್ನ ಹರಕೆ ತೀರಿಸುತ್ತೇನೆ ಎಂದು ಅನ್ನದಾನವನ್ನು ಅಥವಾ ಉರುಳು ಸೇವೆಯನ್ನು ಅಥವಾ ಇಷ್ಟು ಬಾರಿ ದೇವಾಲಯಕ್ಕೆ ಬರುತ್ತೇನೆ ಎಂದು ಅಥವಾ ವಿಶೇಷ ರೀತಿಯಲ್ಲಿ ಪೂಜೆ ಮಾಡುತ್ತೇನೆ ಎಂದು ಅಥವಾ ಅಲಂಕಾರ ಮಾಡಿಸುತ್ತೇನೆ ಎಂದು ಅವರಿಗೆ ತೋಚಿದ ರೀತಿಯಲ್ಲಿ ದೇವರ ಸೇವೆ ಮಾಡುತ್ತೇನೆ ಎಂದು ಹರಕೆ ಮಾಡಿಕೊಳ್ಳುತ್ತಾರೆ.

ಆದರೆ ಸ್ವಲ್ಪ ದಿನ ಕಳೆದ ಬಳಿಕ ಯಾವ ರೀತಿ ಹರಕೆ ತೀರಿಸುತ್ತೇನೆ ಎಂದು ಹರಕೆ ಮಾಡಿಕೊಂಡಿದ್ದೆ ಎನ್ನುವುದನ್ನು ಮರೆತು ಬಿಟ್ಟಿರುತ್ತಾರೆ. ಹೀಗಾದಾಗ ಬದುಕಿನಲ್ಲಿ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ. ನೀವು ಯಾವ ವಿಷಯಕ್ಕಾಗಿ ಕೋರಿಕೆ ಮಾಡಿಕೊಂಡು ಮರೆತ್ತಿದ್ದಿರೋ ಅದೇ ವಿಷಯದಲ್ಲಿ ಪದೇ ಪದೇ ನಿಮಗೆ ತೊಂದರೆ ಆಗುತ್ತಿರುತ್ತದೆ. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ, ಸಣ್ಣ ಪುಟ್ಟ ವಿಷಯಕ್ಕೆ ಜಗಳ ಆಗುತ್ತಿರುತ್ತದೆ.

ಉದ್ಯೋಗ ವಿಷಯವಾಗಿ ಹರಕೆ ಮಾಡಿಕೊಂಡಿದ್ದರೆ ಉದ್ಯೋಗ ಸ್ಥಳದಲ್ಲಿಯೇ ಸಮಸ್ಯೆ ಆಗುತ್ತದೆ, ಹಣಕಾಸಿನ ವಿಚಾರಕ್ಕೆ ಹರಕೆ ಮಾಡಿಕೊಂಡು ಮರೆತಿದ್ದರೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತೀರಿ. ಈ ರೀತಿ ಮಕ್ಕಳ ವಿಚಾರಕ್ಕೆ ಹರಕೆ ಮಾಡಿಕೊಂಡಿದ್ದರೆ ಅವರು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಇಂತಹ ಸೂಚನೆಗಳನ್ನು ಮರೆತರು ಕೆಲವೊಮ್ಮೆ ಆ ದೇವರುಗಳೇ ಕನಸಿನಲ್ಲಿ ಬಂದು ಎಚ್ಚರಿಸುತ್ತಿರುತ್ತಾರೆ. ಆಗ ದೇವರು ಕನಸಿನಲ್ಲಿ ಬರುವುದು ಒಳ್ಳೆಯದು ಎಂದುಕೊಂಡು ಮರೆತು ಬಿಡಬಾರದು.

ಆದಷ್ಟು ಕೋರಿಕೆ ಪೂರೈಸಿದ ಕೆಲವೇ ದಿನಗಳಲ್ಲಿ ಹರಕೆಯನ್ನು ಕೂಡ ಸಲ್ಲಿಸಿ ಬಿಡಬೇಕು ಒಂದು ವೇಳೆ ನೀವು ಹರಕೆ ಮಾಡಿಕೊಂಡಿದ್ದ ವಿಷಯ ಮರೆತು ಹೋಗಿದ್ದರೆ ದೇವಸ್ಥಾನಕ್ಕೆ ಹೋಗಿ ತಪ್ಪು ಕಾಣಿಕೆಯನ್ನು ಹಾಕಿ ನಿಮ್ಮ ಕೈಯಲ್ಲಿ ಆದ ಸೇವೆಯನ್ನು ದೇವರಿಗೆ ಮಾಡಿ ನಿಮಗೆ ಯಾವ ರೀತಿ ತಿಳಿಯುತ್ತದೆ ಆ ವಿಧಾನದಲ್ಲಿ ಹರಕೆ ತೀರಿಸಿ ಕ್ಷಮೆ ಕೇಳಬೇಕು. ಈ ರೀತಿ ಮಾಡುವುದರಿಂದ ಸಮಸ್ಯೆಗಳಿಂದ ಆಚೆ ಬರಬಹುದು. ಆದರೆ ಯಾವುದೇ ಕಾರಣಕ್ಕೂ ಮಾಡಿಕೊಂಡಿದ್ದ ಹರಕೆಯನ್ನು ಮರೆಯುವುದು ಬಹಳ ತಪ್ಪು. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಿ ಬದುಕಬೇಕು.

 

ಮಧುಮೇಹ ಗುಣಪಡಿಸುವ ವಿಸ್ಮಯಕಾರಿ ದೇವಾಲಯ. ಇಲ್ಲಿ ಭಕ್ತಿಯಿಂದ ಬೇಡಿಕೊಂಡ್ರೆ ಸಾಕು, ಸಕ್ಕರೆ ಖಾಯಿಲೆ ಸಂಪೂರ್ಣ ವಾಸಿಯಾಗುತ್ತದೆ.

 

ನಮ್ಮ ಭಾರತ ದೇಶದಲ್ಲಿ ದೇವಾಲಯಗಳು ಇಲ್ಲದ ಊರು ಇಲ್ಲವೇ ಇಲ್ಲ ಎಂದು ಹೇಳಬಹುದು. ಪ್ರತಿಯೊಂದು ಊರಿನಲ್ಲೂ ಸಹ ಒಂದಕ್ಕಿಂತ ಹೆಚ್ಚು ದೇವಾಲಯಗಳು ಇರುತ್ತವೆ. ಅದರಲ್ಲಿ ಹಲವು ದೇವಾಲಯಗಳು ಅಲ್ಲಿರುವ ದೇವತೆಗಳ ಶಕ್ತಿಯಿಂದ ಆಗುವ ಲೋಕವಿಖ್ಯಾತಿಗೊಂಡು ಹೆಚ್ಚು ಭಕ್ತರನ್ನು ಆಕರ್ಷಿಸುತ್ತದೆ. ಇದುವರೆಗೂ ಕೂಡ ನಾವು ಈ ರೀತಿ ಅನೇಕ ಉದಾಹರಣೆಗಳನ್ನು ಕೇಳಿದ್ದೇವೆ.

ವಿದ್ಯಾಭ್ಯಾಸದ ಆರಂಭಕ್ಕಾಗಿ ಹಾಗೂ ವಿದ್ಯಾಭ್ಯಾಸ ಚೆನ್ನಾಗಿ ಪಡೆಯಬೇಕು ಎಂದರೆ ಈ ದೇವಾಲಯಕ್ಕೆ ಹೋಗಬೇಕು, ಮಕ್ಕಳ ಭಾಗ್ಯ ಬೇಕು ಎಂದರೆ ಆ ದೇವಾಲಯಕ್ಕೆ ಹೋಗಿ ಈ ಪೂಜೆ ಮಾಡಿಸಬೇಕು, ಆರೋಗ್ಯಕ್ಕಾಗಿ ಈ ಹೋಮವನ್ನು ಆ ದೇವಾಲಯದಲ್ಲಿ ಮಾಡಬೇಕು ಈ ರೀತಿ ಸಾಕಷ್ಟು ಉದಾಹರಣೆಗಳನ್ನು ಕೇಳುತ್ತೇವೆ. ಈಗ ಮತ್ತೊಂದು ದೇವಾಲಯವು ಇದೇ ಲಿಸ್ಟ್ ಸೇರುತ್ತಿದ್ದು ವಿಶೇಷ ರೀತಿಯಲ್ಲಿ ಈ ದೇವಾಲಯ ಹೆಸರು ಮಾಡುತ್ತಿದೆ.

ದೇವಾಲಯಗಳ ತೊಟ್ಟಿಲು ಎಂದು ಕರೆಸಿಕೊಂಡಿರುವ ತಮಿಳುನಾಡಿನಲ್ಲಿ ಈ ದೇವಾಲಯ ಇದೆ. ಈ ದೇವಾಲಯದ ವಿಶೇಷತೆ ಏನೆಂದರೆ, ಮಧುಮೇಹಿಗಳು ಈ ದೇವಾಲಯಕ್ಕೆ ಹೋಗಿ ಈ ಒಂದು ಆಚರಣೆ ಮಾಡಿದರೆ ಅವರ ಸಕ್ಕರೆ ಕಾಯಿಲೆ ಸಂಪೂರ್ಣ ಮಾಯ ಆಗುತ್ತದೆ. ಭಕ್ತಿಯಿಂದ ಆಗದೆ ಇರುವ ಕೆಲಸ ಯಾವುದು ಇಲ್ಲ ಭಗವಂತನ ಮೇಲೆ ಎಲ್ಲಾ ಭಾರವನ್ನು ಹಾಕಿ ಭಕ್ತಿಯಿಂದ ನಡೆದುಕೊಳ್ಳುವುದರಿಂದ ಎಲ್ಲವೂ ಸರಿ ಹೋಗುತ್ತದೆ.

ಭಗವಂತನ ಕೃಪಾಕಟಾಕ್ಷ ಒಂದಿದ್ದರೆ ಸಾಕು ಎಲ್ಲವನ್ನು ಗೆಲ್ಲಬಹುದು ಎನ್ನುವುದಕ್ಕೆ ಇದು ಮತ್ತೊಂದು ಪ್ರತ್ಯಕ್ಷ ಉದಾಹರಣೆ. ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿರುವ ಕೋಯಿಲ್ ವೆನ್ನಿ ಎನ್ನುವ ಗ್ರಾಮದಲ್ಲಿ ಈ ದೇವಾಲಯ ಇದೆ. ಇಲ್ಲಿರುವ ಈಶ್ವರನನ್ನು ವೆನ್ನಿ ಕರುಂಬೇಶ್ವರರ್ ಎಂದು ಭಕ್ತಾದಿಗಳು ಕರೆಯುತ್ತಾರೆ ಸುಮಾರು ಸಾವಿರ ವರ್ಷಕ್ಕಿಂತಲೂ ಹೆಚ್ಚಿನ ಹಳೆ ದೇವಾಲಯವಿದು.

ಈ ದೇವಾಲಯಕ್ಕೆ ಈ ಹೆಸರು ಬರುವುದಕ್ಕೂ ಕಾರಣವಿದೆ. ವೆನ್ನಿ ಮತ್ತು ಕರಂಬುಗಳ ಮಧ್ಯೆ ಈ ಶಿವಲಿಂಗ ಮುಚ್ಚಿ ಹೋಗಿತ್ತು. ತಮಿಳಿನಲ್ಲಿ ಕರಂಬು ಎಂದರೆ ಕಬ್ಬು ಎಂದರ್ಥ. ಅಲ್ಲಿಗೆ ಬಂದ ಇಬ್ಬರು ಋಷಿಮುನಿಗಳು ಶಿವಲಿಂಗವನ್ನು ಗುರುತಿಸಿ ಪತ್ತೆ ಮಾಡಿದ ಕಾರಣ ಈ ದೇವಾಲಯಕ್ಕೆ ಬೆನ್ನಿಕರುಂಬರೇಶ್ವರರ್ ಎಂದು ಹೆಸರು ಬಂದಿದೆ. ಈ ದೇವಾಲಯಕ್ಕೆ ಬರುವ ಭಕ್ತಾದಿಗಳಲ್ಲಿ ಹೆಚ್ಚಿನ ಜನ ಮಧುಮೇಹಿಗಳೇ ಆಗಿರುತ್ತಾರೆ.

ಯಾಕೆಂದರೆ ಈ ದೇವಾಲಯಕ್ಕೆ ಬಂದರೆ ಸಕ್ಕರೆ ಕಾಯಿಲೆ ಗುಣವಾಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳು ನಂಬಿಕೆ. ದೇವಾಲಯಕ್ಕೆ ಬಂದಾಗ ರವೆ ಹಾಗೂ ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ದೇವರಿಗೆ ನೈವೇದ್ಯವಾಗಿ ಅರ್ಪಿಸಬೇಕು. ದೇವರಿಗೆ ನೈವೇದ್ಯ ಆದ ಬಳಿಕ ಅದನ್ನು ವಾಪಸ್ಸು ಕೊಡುತ್ತಾರೆ. ಪ್ರಸಾದ ರೂಪದ ರವೆ ಮತ್ತು ಸಕ್ಕರೆ ಮಿಶ್ರಣವನ್ನು ದೇವಸ್ಥಾನದ ಸುತ್ತಲೂ ಕೂಡ ಹಾಕಬೇಕು.

ಇರುವೆಗಳು ಬಂದು ರವೆಯನ್ನು ಬಿಟ್ಟು ಸಕ್ಕರೆಯನ್ನು ಮಾತ್ರ ತೆಗೆದುಕೊಂಡು ಹೋಗುತ್ತವೆ. ಈ ರೀತಿ ಇರುವೆಗಳು ಸಕ್ಕರೆಯನ್ನು ಬೇರ್ಪಡಿಸಿ ಅದನ್ನು ಸ್ವೀಕರಿಸಿದ ಬಳಿಕ ಅದನ್ನು ಅರ್ಪಿಸಿದವರು ಕೂಡ ಮಧುಮೇಹದಿಂದ ಮುಕ್ತಿ ಹೊಂದುತ್ತಾರೆ. ಕ್ರಮೇಣ ಅವರ ದೇಹದ ಸಕ್ಕರೆಯ ಪ್ರಮಾಣ ಅಂಶ ಕಡಿಮೆ ಆಗುತ್ತದೆ ಎಂದು ನಂಬಲಾಗಿದೆ. ನೀವು ಕೂಡ ಮಧುಮೇಹಿಗಳಾಗಿದ್ದರೆ ತಪ್ಪದೆ ತಮಿಳುನಾಡಿನ ಈ ದೇವಾಲಯಕ್ಕೆ ಭೇಟಿ ಕೊಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ನಿಮ್ಮ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಂಡು ಅವರಿಗೂ ಈ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿಯುವಂತೆ ಮಾಡಿ.

ದೀಪದ ಬತ್ತಿ ಪೂರ್ತಿ ಸುಟ್ಟು ಹೋಗುವುದರ ಸಂಕೇತ ಏನು ಗೊತ್ತಾ.? ಪ್ರತಿಯೊಬ್ಬರು ತಿಳಿಯಲೇ ಬೇಕಾದ ಮಾಹಿತಿ ಇದು.

 

ದೇವರ ಕೋಣೆಯಲ್ಲಿ ಹಚ್ಚುವ ದೀಪಗಳಿಗೆ ವಿಶೇಷ ಮಹತ್ವ. ಯಾಕೆಂದರೆ ಪ್ರತಿದಿನ ನಾವು ದೇವರ ಕೊನೆಯಲ್ಲಿ ಹಚ್ಚುವ ದೀಪಗಳಲ್ಲಿ ಸಕರಾತ್ಮಕ ಶಕ್ತಿ ತುಂಬಿರುತ್ತದೆ. ಆ ದೀಪಗಳು ಕೂಡ ದೈವಾಂಶ ಸಂಭೂತವಾಗಿರುತ್ತದೆ. ಪದೇ ಪದೇ ದೇವರ ಕೋಣೆಯಲ್ಲಿ ಇಡುವ ದೀಪಗಳನ್ನು ಬದಲಾಯಿಸಬಾರದು. ನಮ್ಮ ಹಿರಿಯರು ಯಾವ ದೀಪಗಳನ್ನು ಬಳಸಿಕೊಂಡು ಬರುತ್ತಿದ್ದರೂ ಪರವಾಗಿಲ್ಲ ಅದನ್ನೇ ಬಳಸಬೇಕು.

ಒಂದು ವೇಳೆ ಅದು ಪೂರ್ತಿ ಹಾಳಾಗಿದೆ ಅಥವಾ ಅದರಲ್ಲಿ ಭಿನ್ನವಾಗಿದೆ ಎನ್ನುವ ಸಮಯದಲ್ಲಿ ಮಾತ್ರ ನಾವು ಬೇರೆ ದೀಪಗಳನ್ನು ಬಳಸಬೇಕು. ಯಾಕೆಂದರೆ ನೀವು ದೀಪವನ್ನು ಬದಲಾಯಿಸಿ ಮತ್ತು ದೀಪವನ್ನು ಬದಲಿಸಿದ ನಂತರ ಅದರಲ್ಲಿ ಇರುವ ದೈವಿಕ ಶಕ್ತಿಯು ಮತ್ತೆ ಶೂನ್ಯದಿಂದ ಶುರುವಾಗುತ್ತದೆ, ಆ ಕಾರಣಕ್ಕಾಗಿ ಈಗಾಗಲೇ ಯಾವ ದೀಪಗಳನ್ನು ಹಿರಿಯರು ಮನೆಯಲ್ಲಿ ದೇವರಕೊಣೆಯಲ್ಲಿ ದೇವರ ಮುಂದೆ ಇಟ್ಟಿದ್ದಾರೋ ಅದೇ ದೀಪಗಳನ್ನು ನೀವು ಬೆಳಗಿಸಿ.

ದೇವರ ದೀಪ ಉರಿಯುತ್ತಿರುವುದರ ಸ್ವರೂಪವನ್ನೇ ನೋಡಿ ಮನೆಯಲ್ಲಿ ಆಗುವ ಒಳಿತು ಹಾಗೂ ಕೆಡಕುಗಳನ್ನು ತಿಳಿದುಕೊಳ್ಳಬಹುದು. ದೇವರಿಗೆ ನಮ್ಮ ಪೂಜೆ ಇಚ್ಛೆ ಆಗಿದೆಯೋ ಇಲ್ಲವೋ ಎನ್ನುವ ಅಂಶಗಳನ್ನು ತಿಳಿದುಕೊಳ್ಳಬಹುದು. ಯಾಕೆಂದರೆ ಮನೆಯ ದೇವರ ಕೋಣೆಯಲ್ಲಿ ಹಚ್ಚಿರುವ ದೀಪವು ಹೂವಿನ ಆಕಾರದಲ್ಲಿ ಉರಿಯುತ್ತಿದ್ದರೆ ದೇವರಿಗೆ ನಿಮ್ಮ ಕೋರಿಕೆ ಕೇಳಿಸಿದೆ, ನಿಮ್ಮ ಪೂಜೆಯಿಂದ ಅವರು ಪ್ರಸನ್ನರಾಗಿದ್ದಾರೆ ಎಂದು ಅರ್ಥ.

ಅಲ್ಲದೆ ದೀಪದ ಜ್ವಾಲೆಯು ಉರಿವಾಗ ಅದರಲ್ಲಿ ಯಾವುದಾದರೂ ದೇವರ ಮೂರ್ತಿರೂಪ ಕಾಣಿಸುತ್ತಿದ್ದರೆ ನಿಮಗೆ ಆ ದೇವರ ಅನುಗ್ರಹ ಆಗಿದೆ ಎಂದು ಅರ್ಥ. ಮನೆಯಲ್ಲಿ ದೇವರ ಕೋಣೆಯಲ್ಲಿ ದೀಪ ಉರಿಯುತ್ತಿದ್ದದೆ ಆ ಮನೆ ಪೂರ್ತಿ ವಾತಾವರಣವೇ ಬದಲಾಗಿರುತ್ತದೆ. ಮನೆಯಲ್ಲಿದ್ದ ನಕಾತ್ಮಕ ವಾತಾವರಣ ಹೋಗಿ ಸಕಾರಾತ್ಮಕತೆ ಸುತ್ತಲೂ ಆವರಿಸುತ್ತದೆ.

ಹಾಗೆಯೇ ದೀಪಗಳನ್ನು ಹಚ್ಚುವಾಗ ಕೆಲ ಎಡಗಟ್ಟುಗಳು ಆಗುತ್ತವೆ, ಅವು ಮುಂದೆ ಬರುವ ಕೆಲವು ಮುನ್ಸೂಚನೆಗಳನ್ನು ಕೊಡುವ ಸಂಕೇತಗಳಾಗಿರುತ್ತವೆ. ನೀವೇನಾದರೂ ಮನೆಯಲ್ಲಿ ದೇವರ ದೀಪ ಹಚ್ಚಿದ ಕೆಲವೇ ಸಮಯದಲ್ಲಿ ಅದು ಕೆಟ್ಟು ಹೋದರೆ, ದೀಪದ ಎಣ್ಣೆ ಮತ್ತು ಬತ್ತಿ ಇದ್ದರೂ ಕೂಡ ದೀಪ ಉರಿಯದೆ ಆರಿ ಹೋಗಿದ್ದರೆ ಇದು ಮನೆಗೆ ಏನಾದರೂ ಒಂದು ಕೆಡುಕು ಆಗುವುದರ ಸೂಚನೆಯಾಗಿದೆ.

ಈ ರೀತಿ ಆದಾಗ ತಕ್ಷಣವೇ ನೀವು ದೀಪವನ್ನು ಮತ್ತೊಮ್ಮೆ ಸ್ವಚ್ಛ ಮಾಡಿ ಬೇರೆ ಎಣ್ಣೆ ಹಾಗೂ ಬತ್ತಿಯನ್ನು ಹಾಕಿ ದೀಪ ಹಚ್ಚಿ ದೇವರ ಬಳಿ ಭಕ್ತಿಯಿಂದ ಒಳಿತಿಗಾಗಿ ಪ್ರಾರ್ಥಿಸಿಕೊಳ್ಳಿ. ಇದರಂತೆ ದೀಪದ ಭತ್ತಿ ಏನಾದರೂ ಕಪ್ಪಾಗಿದ್ದರೆ ಸುಟ್ಟು ಹೋಗಿದ್ದರೆ ಮರುದಿನ ದೀಪ ಹಚ್ಚುವಾಗ ಆ ಕಪ್ಪಾದ ಭಾಗವನ್ನು ತೆಗೆದುಹಾಕಿ ನೀವು ದೀಪ ಹಚ್ಚಬೇಕು.

ನಾವು ದಿನನಿತ್ಯ ಹಚ್ಚುವ ರೀತಿಯಲ್ಲಿಯೇ ಎಣ್ಣೆ ಹಾಗೂ ಬತ್ತಿಯನ್ನು ಹಾಕಿ ದೀಪ ಹಚ್ಚಿದರೂ ಕೂಡ ಕೆಲವೊಮ್ಮೆ ಬತ್ತಿಯು ಜೋರಾಗಿ ಉರಿದು ಪೂರ್ತಿ ಬತ್ತಿ ಸುಟ್ಟು ಹೋಗಿರುತ್ತದೆ. ಈ ರೀತಿ ಆಗುವುದು ಕೂಡ ಅಶುಭ ಸೂಚನೆಯೇ ಆಗಿದೆ. ಯಾವುದೇ ಕಾರಣಕ್ಕೂ ಈ ರೀತಿ ಆದಾಗ ನಿರ್ಲಕ್ಷಿಸಬೇಡಿ. ತಪ್ಪದೇ ನೀವು ನಿಮ್ಮ ಮನೆ ದೇವರನ್ನು ಪ್ರಾರ್ಥಿಸಿ, ಮತ್ತೊಮ್ಮೆ ದೇವರ ಕೋಣೆಯನ್ನು ಸ್ವಚ್ಛ ಮಾಡಿ.

ಮನೆಯನ್ನು ಸ್ವಚ್ಛಗೊಳಿಸಿ ಮಡಿ ಉಟ್ಟುಕೊಂಡು ಭಕ್ತಿಯಿಂದ ದೀಪ ಹಚ್ಚಿ. ಈಗಲೂ ಕೂಡ ಮನಸಾರೆ ನಿಮ್ಮ ಇಷ್ಟ ದೇವತೆ ಹಾಗೂ ಕುಲದೇವತೆಯನ್ನು ಏನು ಕೆಡಕಾಗದಂತೆ ಕಾಪಾಡು ಎಂದು ಪ್ರಾರ್ಥಿಸಿಕೊಳ್ಳಿ. ಯಾವುದೇ ಘಟನೆ ಜರುಗಿದರೂ ಅದು ಮತ್ತೊಂದರ ಸೂಚನೆ ಆಗಿರುತ್ತದೆ, ಅದನ್ನು ಅರಿತುಕೊಂಡು ಅದಕ್ಕೆ ಇರುವ ಪರಿಹಾರ ಮಾಡಿಕೊಂಡಾಗ ಸಮಸ್ಯೆಯಿಂದ ಸುಲಭವಾಗಿ ಹೊರ ಬರಬಹುದು.

ಊಟದಲ್ಲಿ ಕೈಮದ್ದು ಯಾಕೆ ಹಾಕ್ತಾರೆ.? ಇದನ್ನು ತಿಂದ್ರೆ ದೇಹದಲ್ಲಿ ಏನೆಲ್ಲಾ ತೊಂದರೆ ಆಗುತ್ತೆ.! ಕೈಮದ್ದು ಹಾಕಿದ್ದಾರೆ ಅಂತ ಕಂಡು ಹಿಡಿಯೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 

ಹಳ್ಳಿ ಕಡೆ ಊಟಕ್ಕೆ ಕೈ ಮದ್ದು ಹಾಕುತ್ತಾರೆ ಎಂದು ಮಾತನಾಡುತ್ತಾರೆ.ಅದನ್ನು ಯಾರು ಹಾಕುತ್ತಾರೆ? ಹೇಗೆ ಹಾಕುತ್ತಾರೆ ಮತ್ತು ಅದರ ಪರಿಣಾಮ ಎಷ್ಟು ಕೆಟ್ಟದಾಗಿರುತ್ತದೆ ಗೊತ್ತಾ?. ಹೆಚ್ಚಾಗಿ ಹಳ್ಳಿಕಡೆ ಈ ಮಾತನ್ನು ಕೇಳುತ್ತೇವೆ ಕೈ ಮದ್ದು ಹಾಕಿದ್ದಾರೆ ಎಂದು ಮಾತನಾಡುತ್ತಿರುತ್ತಾರೆ. ಈ ಕೈಮದ್ದು ಹಾಕುವುದು ಎಂದರೆ ಊಟದಲ್ಲಿ ಯಾವುದೋ ಒಂದು ಪದಾರ್ಥವನ್ನು ಸೇರಿಸಿ ಹಾಕುವುದು ಎಂದರ್ಥ. ಆದರೆ ನಿಖರವಾಗಿ ಅದರಲ್ಲಿ ಏನು ಇರುತ್ತದೆ ಎಂದು ಇದುವರೆಗೂ ಸಹ ಯಾರಿಗೂ ಭೇದಿಸಲು ಸಾಧ್ಯವಾಗಿಲ್ಲ.

ಅಮವಾಸ್ಯೆ ಮತ್ತು ಹುಣ್ಣಿಮೆ ದಿನವನ್ನು ಮದ್ದು ಹಾಕಲು ಆರಿಸಿಕೊಳ್ಳುತ್ತಾರೆ. ಯಾಕೆಂದರೆ ಈ ದಿನ ಮದ್ದು ಹಾಕಿದರೆ ಅದು ಹಾಕಿಸಿ ಕೊಂಡವರ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ ಎಂದು ಈ ರೀತಿ ಮಾಡುತ್ತಾರೆ. ಈ ದಿನ ಬಿಟ್ಟು ಬೇರೆ ದಿನಗಳಲ್ಲಿ ಸಹ ಮದ್ದು ಹಾಕುತ್ತಾರೆ. ಮದ್ದು ಹಾಕಿದ ತಕ್ಷಣವೇ ಅಥವಾ ಮರುದಿನವೇ ಹಾಕಿಸಿಕೊಂಡವರಿಗೆ ಅದರ ಪರಿಣಾಮ ಗೊತ್ತಾಗುವುದಿಲ್ಲ.

ಮೂರು ತಿಂಗಳು ಆದ ಬಳಿಕ ಅವರಿಗೆ ವಾಂತಿ ಆಗಲು ಶುರುವಾಗುತ್ತದೆ, ಯಾವ ಆಹಾರ ಪದಾರ್ಥಗಳ ಮೇಲೂ ಆಸಕ್ತಿ ಇರುವುದಿಲ್ಲ, ಜೊತೆಗೆ ಇವರಿಗೆ ಎಣ್ಣೆ ವಾಸನೆ ಮತ್ತು ಒಗ್ಗರಣೆ ವಾಸನೆ ಕಂಡರೆ ಆಗುವುದಿಲ್ಲ. ವಿಪರೀತವಾದ ಹೊಟ್ಟೆ ನೋವು ಕೂಡ ಕಾಡುತ್ತದೆ, ಎಷ್ಟೇ ಆಸ್ಪತ್ರೆ ಸುತ್ತಿದರೂ ಕೂಡ ಇವರ ಹೊಟ್ಟೆ ನೋವಿಗೆ ಹಾಗು ವಾಂತಿಗೆ ಪರಿಹಾರ ಸಿಗುವುದಿಲ್ಲ. ಆಗ ಮದ್ದು ಹಾಕಿರಬಹುದು ಎಂದು ಕೆಲವರು ಗುರುತಿಸುತ್ತಾರೆ.

ಈ ರೀತಿ ಮದ್ದು ಹೊಟ್ಟೆಗೆ ಮತ್ತು ಸೇರಿದಿಯಾ ಎಂದು ಕಂಡು ಹಿಡಿಯಲು ಕೆಲ ವಿಧಾನಗಳು ಇವೆ. ಹೆಚ್ಚಿನ ಜನ ನುಗ್ಗೆರಸದ ಮೂಲಕ ಇದನ್ನು ಕಂಡು ಹಿಡಿಯುತ್ತಾರೆ. ಹೇಗೆಂದರೆ ಅವರ ಮನೆಯ ಯಾರಾದರೂ ಒಬ್ಬರು ಈ ರೀತಿ ಮದ್ದು ಹಾಕಿಸಿಕೊಂಡು ನರಳುತ್ತಿರುವವರ ಕೈಯ ಮೇಲೆ ನುಗ್ಗೆ ಸೊಪ್ಪಿನ ರಸವನ್ನು ಹಿಂಡುತ್ತಾರೆ. ಆ ಸೊಪ್ಪಿನ ರಸ ಗಟ್ಟಿಯಾದರೆ ಅವರ ಹೊಟ್ಟೆಯಲ್ಲಿ ಮದ್ದು ಬಿದ್ದಿದೆ ಎಂದು ಅರ್ಥ. ಇದಲ್ಲದೆ ಹುರುಳಿ ಕಾಳಿನಿಂದ ಕೂಡ ಮದ್ದು ಆಗಿದೆಯಾ ಇಂದು ಕಂಡುಹಿಡಿಯುತ್ತಾರೆ.

ಮದ್ದು ಬಿದ್ದಿದೆ ಎಂದು ತಿಳಿದ ಸಮಯದಲ್ಲಿ ಅವರನ್ನು ಕರೆದುಕೊಂಡು ಮದ್ದು ತೆಗೆಯುವವರ ಬಳಿ ಹೋಗಿ ತೆಗೆಸುತ್ತಾರೆ. ಆದರೆ ಎಲ್ಲರೂ ಕೂಡ ಈ ರೀತಿ ಮತ್ತು ತೆಗೆಯಲು ಆಗುವುದಿಲ್ಲ. ಅದಕ್ಕೆ ಕೆಲ ನಿಯಮಗಳು ಇವೆ. ಅದನ್ನು ಮದ್ದು ತೆಗೆಯುವವರ ಮಾತ್ರ ತಿಳಿದು ಕೊಂಡಿರುತ್ತಾರೆ, ಆ ಕುಟುಂಬದವರಿಗೆ ಮಾತ್ರ ಅದು ಗೊತ್ತಿರುತ್ತದೆ. ಅವರು ವಿಭಿನ್ನವಾದ ರೀತಿಯಲ್ಲಿ ಮದ್ದು ತೆಗೆದು ಪಥ್ಯ ಇರಲು ಹೇಳುತ್ತಾರೆ.

ಹೊಟ್ಟೆಯಲ್ಲಿ ಇರುವ ಮದ್ದನ್ನು ತೆಗೆದ ಮೇಲೆ ಯಾವ ಪದಾರ್ಥದ ಮೂಲಕ ಮದ್ದು ನಿಮ್ಮ ದೇಹ ಸೇರಿತ್ತು ಆ ಪದಾರ್ಥವನ್ನು ತಿಂದರೆ ವಾಂತಿಯಾಗಲು ಶುರುವಾಗುತ್ತದೆ. ಒಂದು ವೇಳೆ ಇದನ್ನು ಪತ್ತೆ ಮಾಡಲು ಆಗದೆ ಹೋದಲ್ಲಿ ಮದ್ದು ಹಾಕಿ ಒಂದು ವರ್ಷ ತುಂಬಿ ಬಿಟ್ಟರೆ ಹೊಟ್ಟೆಯಲ್ಲಿ ಅದರ ಮೇಲೆ ಕೂದಲು ಬೆಳೆಯುತ್ತದೆ. ಆಗ ಅದು ಮತ್ತು ಹಾಕಿಸಿಕೊಂಡವರನ್ನು ಸಾ.ವಿ.ನ ದವಡೆಗೂ ನೂಕಬಹುದು. ಆದ್ದರಿಂದ ಅಮಾವಾಸ್ಯೆ ಹುಣ್ಣಿಮೆ ದಿನದಂದು ಯಾರ ಮನೆಯಲ್ಲಿ ಆಗಲಿ ಹೋಟೆಲ್ ನಲ್ಲಿ ಆಗಲಿ ಊಟ ಮಾಡಬಾರದು.

ಮದ್ದು ಹಾಕುವವರು ಇವರೇ ಆಗಿರುತ್ತಾರೆ ಎಂದು ನಿಖರವಾಗಿ ಹೇಳಲು ಅಸಾಧ್ಯ, ಊಹಿಸಬಹುದು ಅಷ್ಟೇ. ಆದ್ದರಿಂದ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು . ಕೆಲವರು ಇದನ್ನು ಹರಕೆ ಹೊತ್ತು ಹಾಕುತ್ತಾರೆ ಎನ್ನುವ ಮಾತುಗಳು ಇವೆ ಆದರೆ ಇನ್ನೂ ಕೆಲವರು ವಂಶ ಪಾರಂಪರ್ಯವಾಗಿ ಪಾಲಿಸಿಕೊಂಡು ಬಂದಿರುತ್ತಾರೆ ಅದಕ್ಕೆ ಅದನ್ನು ಅವರು ಮುಂದುವರಿಸಲೇಬೇಕು ಇಲ್ಲವಾದಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ ಹಾಕುತ್ತಾರೆ ಎಂದು ಮಾತನಾಡುತ್ತಾರೆ. ಅದೇನಿದ್ದರೂ ಇನ್ನೊಬ್ಬರ ಮನೆಯಲ್ಲಿ ಹೋಗಿ ಊಟ ಮಾಡುವ ಮುನ್ನ ಎಚ್ಚರಿಕೆಯಿಂದ ಇರಿ.

ಗಂಡನ ಏಳಿಗೆ ಪ್ರಗತಿ ಬಯಸುವ ಹೆಂಡತಿ ಈ ಸಣ್ಣ ಉಪಾಯ ಮಾಡಿದ್ರೆ ಸಾಕು, ರಾತ್ರೋ ರಾತ್ರಿ ಅದೃಷ್ಟವೇ ಬದಲಾಗುತ್ತದೆ.!

 

ಗಂಡ ಹೆಂಡತಿ ಸಂಬಂಧ ಎನ್ನುವುದು ಅತಿ ಶ್ರೇಷ್ಠವಾದ ಸಂಬಂಧ. ಅದರಲ್ಲೂ ಭಾರತದಂತಹ ದೇಶದಲ್ಲಿ ಪತಿ-ಪತ್ನಿಯನ್ನು ಬೇರೆಯಾಗಿ ಕಾಣುವುದಿಲ್ಲ ದಂಪತಿಯನ್ನು ಒಂದೇ ಹೆಸರಿನಿಂದ ಅವರನ್ನು ಕರೆಯುತ್ತೇವೆ. ಅರ್ಧನಾರೀಶ್ವರ ತತ್ವವನ್ನು ನಂಬಿದ ದೇಶ ನಮ್ಮದು. ಹಾಗಾಗಿ ಜೀವನ ಸಂಗಾತಿಗೆ ಅರ್ಧಾಂಗಿ ಎನ್ನುವ ಅಧಿಕಾರವನ್ನು ಕೊಟ್ಟಿರುತ್ತೇವೆ.

ಇದರ ಅರ್ಥ ಗಂಡ ಹಾಗೂ ಹೆಂಡತಿ ಇಬ್ಬರೂ ಬೇರೆ ಬೇರೆ ಅಲ್ಲ ಇವರಿಬ್ಬರು ಎರಡು ದೇಹ ಒಂದೇ ಉಸಿರು ಎಂದು. ಹಾಗಾಗಿ ವಿವಾಹ ಬಂಧನಕ್ಕೆ ಇಬ್ಬರು ಒಳಪಟ್ಟ ಮೇಲೆ ಅವರ ಜೀವನದಲ್ಲಿ ಯಾವುದೇ ಕೆಡಕು ನಡೆದರೂ ಕೂಡ ಅದು ಇಬ್ಬರ ಮೇಲೂ ಪರಿಣಾಮ ಬೀರುತ್ತದೆ. ಒಬ್ಬರ ಒಳಿತು ಮತ್ತೊಬ್ಬರಿಗೂ ಮತ್ತೊಬ್ಬರಿಗೂ ಸಮವಾಗಿರುತ್ತದೆ. ಹಾಗಾಗಿ ಪತಿಯ ಸಂಪೂರ್ಣ ಏಳಿಗೆ ಪತ್ನಿ ಹೊಣೆಗಾರಿಕೆ ಎಂದರು ತಪ್ಪಾಗಲಾರದು.

ಹೀಗಾಗಿ ಗಂಡನಿಗೆ ಉದ್ಯೋಗದಲ್ಲಿ ತೊಂದರೆ ಆಗುತ್ತಿದ್ದರೆ, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಇಲ್ಲ ಎಂದರೆ ಅಥವಾ ಗಂಡ ಯಾವುದ್ದರೂ ದುಷ್ಚಟಕ್ಕೆ ಬಲಿಯಾಗಿದ್ದರೆ ಅಥವಾ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ, ಗಂಡ ಹೆಂಡತಿ ನಡುವೆ ವೈ ಮನಸ್ಸು ಉಂಟಾದರೆ ಈ ರೀತಿ ಗಂಡನಿಗೆ ಸಂಬಂಧ ಪಟ್ಟ ಯಾವುದೇ ವಿಷಯಗಳಾದರೂ ಅದರ ಪರಿಹಾರಕ್ಕಾಗಿ ಪ್ರಾರ್ಥನೆಯನ್ನು ಹೆಂಡತಿಯೇ ಮಾಡಬಹುದು.

ಈ ರೀತಿ ಮನುಷ್ಯನ ಸಾಮರ್ಥ್ಯದಿಂದ ಪರಿಹರಿಸಲಾಗದ ಕಷ್ಟಗಳು ಬಂದಾಗ ಎಲ್ಲರೂ ಸಹ ಭಗವಂತನ ಮೊರೆ ಹೋಗುತ್ತಾರೆ. ಮೊದಲಿಗೆ ನಾವು ನಮ್ಮ ಕುಲದೇವರ ಪ್ರಾರ್ಥನೆ ಮಾಡಿ ಕುಲದೇವರನ್ನು ಪೂಜಿಸಿ ಆ ದೇವರಲ್ಲಿ ಮೊರೆಯನ್ನು ಇಡಬೇಕು. ಯಾವ ವಿಧಾನದಿಂದ ಪ್ರಾರ್ಥಿಸಿದರೆ ಅತಿ ಶೀಘ್ರವಾಗಿ ಸಮಸ್ಯೆ ಪರಿಹಾರ ಆಗುತ್ತದೆ ಎನ್ನುವ ವಿಧಾನದ ಬಗ್ಗೆ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಪ್ರತಿದಿನ ಬೆಳಗ್ಗೆ ಎದ್ದು ದೇವರ ಕೋಣೆ ಕ್ಲೀನ್ ಮಾಡಿ ಮಡೀ ಮಾಡಿಟ್ಟುಕೊಂಡು ಕುಲದೇವರಿಗೆ ಹೂವು ಕುಂಕುಮ ಇಟ್ಟು ಪೂಜೆ ಮಾಡಿ ತುಪ್ಪ ಮತ್ತು ಎಣ್ಣೆಯಿಂದ ದೀಪ ಹಚ್ಚಿ ನಿಮ್ಮ ಸಮಸ್ಯೆಗಳನ್ನೆಲ್ಲ ಹೇಳಿಕೊಳ್ಳಬೇಕು, ಬಳಿಕ 108 ಬಾರಿ ನಿಮ್ಮ ಕುಲದೇವರ ನಾಮಗಳನ್ನು ಜಪ ಮಾಡಬೇಕು.

ನಿಮ್ಮ ಪೂಜೆ ವಿಧಾನ ಮುಗಿದ ಮೇಲೆ ಅವರು ಉದ್ಯೋಗಕ್ಕೆ ಹೊರ ಹೋಗುವಾಗ ಅಥವಾ ಹೊರಗೆ ಯಾವುದಾದರೂ ಒಳ್ಳೆ ಕೆಲಸಕ್ಕೆ ಹೋಗುವಾಗ ಅಥವಾ ವ್ಯಾಪಾರ ಸಂಬಂಧಿತ ಕೆಲಸಗಳಿಗೆ ಹೋಗುವಾಗ. ನೀವು ದೇವರಿಗೆ ಇಟ್ಟಿದ್ದ ಕುಂಕುಮವನ್ನು ಅವರ ಹಣೆಗೂ ಪ್ರಸಾದ ಎಂದುಕೊಂಡು ಇಡಬೇಕು. ಮತ್ತು ದೇವರ ಹೂವನ್ನು ಕೂಡ ಪ್ರಸಾದ ಎಂದುಕೊಂಡು ಅವರಿಗೆ ಕೊಡಬೇಕು. ಈ ರೀತಿ ಮನೆಯಿಂದ ಹೊರಡುವಾಗ ದೇವರ ಆಶೀರ್ವಾದ ತೆಗೆದುಕೊಂಡು ಹೊರಟರೆ ಆ ಕಾರ್ಯ ಸಿದ್ದಿ ಆಗುತ್ತದೆ.

ಇದರಂತೆ ಇನ್ನೂ ಮುಖ್ಯವಾದ ವಿಷಯ ಏನೆಂದರೆ ಪತ್ನಿಯಾದವಳು ಗಂಡನ ಪ್ರತಿಯೊಂದು ವಿಚಾರದಲ್ಲೂ ಗಮನ ಇಟ್ಟಿರಬೇಕು. ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಬಾರದು. ಕೆಟ್ಟ ಮಾರ್ಗದಿಂದ ಹಣ ಸಂಪಾದನೆ ಮಾಡುತ್ತಿದ್ದರೆ ಅಥವಾ ಸುಳ್ಳು ಹೇಳುತ್ತಿದ್ದಾರೆ ಮೋಸ ಮಾಡಿ ವ್ಯಾಪಾರ ಮಾಡುತ್ತಿದ್ದರೆ ಅದಕ್ಕೆಲ್ಲಾ ಸಹಕಾರ ಕೊಡಬಾರದು. ಯಾವುದೇ ಕೆಟ್ಟ ಗುಣಗಳು ಕಣ್ಣಿಗೆ ಬಿದ್ದರೂ ತಕ್ಷಣ ಅದನ್ನು ತಿದ್ದುವ ಸಂಸ್ಕಾರ ಹೆಂಡತಿಯಲ್ಲಿದ್ದರೆ ಮನೆ ಏಳಿಗೆ ಆಗುವುದರಲ್ಲಿ ಸಂಶಯವಿಲ್ಲ. ಇದೇ ರೀತಿ ಇನ್ನೂ ಅನೇಕ ಸುಲಭ ಮಾರ್ಗಗಳೂ ಇವೆ. ಅವುಗಳ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಈ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ 48 ಪ್ರದಕ್ಷಿಣೆ ಹಾಕಿದ್ರೆ ಸಾಕು ಸಕಲವನ್ನು ಕರುಣಿಸುತ್ತಾನೆ ಈ ನರಸಿಂಹಸ್ವಾಮಿ. ಲಕ್ಷಾಂತರ ಭಕ್ತರ ಬದುಕನ್ನು ಬದಲಿಸಿದ ದೇವಾಲಯವಿದು.

ಹಾಸನ ಜಿಲ್ಲೆಯಲ್ಲಿರುವ ಬೇಲೂರು, ಹಳೇಬೀಡು, ಶ್ರವಣಬೆಳಗೊಳದ ದೇವಾಲಯಗಳು ತಮ್ಮ ಶಿಲ್ಪಕಲೆಯಿಂದಲೇ ಜನಮನ ಸೆಳೆಯುತ್ತವೆ. ಇದೆಲ್ಲವೂ ಹೊಯ್ಸಳರ ಕೊಡುಗೆ ಆಗಿದ್ದು, ಹೊಯ್ಸಳರ ತಮ್ಮ ಆಡಳಿತ ಕಾಲದಲ್ಲಿ ಕರ್ನಾಟಕದ ದಕ್ಷಿಣದಾದ್ಯಂತ ಸಾಕಷ್ಟು ಈ ರೀತಿಯ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಅತಿ ಹೆಚ್ಚು ದೇವಾಲಯಗಳು ದಕ್ಷಿಣ ಕರ್ನಾಟಕದಲ್ಲಿಯೇ ಕಂಡುಬರುತ್ತವೆ.

ಹೊಯ್ಸಳರ ಕಾಲ ಎಂದ ಕೂಡಲೇ ಅವರ ಶ್ರೀಮಂತ ವಾಸ್ತು ಶೈಲಿಯ ದೇವಾಲಯಗಳೇ ನೆನಪಿಗೆ ಬರುತ್ತವೆ. ಪ್ರೇಕ್ಷಣೀಯ ಸ್ಥಳಗಳೆನಿಸಿರುವ ಈ ದೇವಾಲಯಗಳು ಮಾತ್ರವಲ್ಲದೆ ಹಾಸನದ ಬಹುತೇಕ ಗ್ರಾಮಗಳಲ್ಲಿ ಇಷ್ಟೇ ಪ್ರಭಾವಶಾಲಿಯಾದ ಅನೇಕ ದೇವಾಲಯಗಳು ಹೊಯ್ಸಳ ಕಾಲದಲ್ಲಿ ನಿರ್ಮಾಣ ಆಗಿವೆ. ಹೊಯ್ಸಳರ ಹೆಸರಾಂತ ದೊರೆಯಾದ ರಾಜ ವಿಷ್ಣುವರ್ಧನನ ಕಾಲದಿಂದ ಹಿಡಿದು ನಂತರದಲ್ಲಿ ಬಂದ ಹೊಯ್ಸಳ ಸಾಮ್ರಾಜ್ಯದ ಅನೇಕ ಅರಸರುಗಳು ಕೂಡ ಈ ರೀತಿ ಅಲ್ಲಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಇವರ ನಿರ್ಮಾಣದ ಒಂದೊಂದು ದೇವಾಲಯವು ಕೂಡ ತನ್ನದೇ ಆದ ವಿಶೇಷತೆಯಿಂದ ಕೂಡಿದೆ. ಅದರಲ್ಲಿ ಹಾಸನ ಜಿಲ್ಲಾ ಕೇಂದ್ರದಿಂದ 13 ಕಿಲೋ ಮೀಟರ್ ಅಂತರದಲ್ಲಿರುವ ಶಾಂತಿಗ್ರಾಮ ಎನ್ನುವ ಊರಿನಲ್ಲಿರುವ ಶ್ರೀ ಲಕ್ಷ್ಮಿ ವರದಾ ಯೋಗ ಭೋಗ ನರಸಿಂಹ ಸ್ವಾಮಿ ದೇವಾಲಯದ ವಿಶೇಷ ಶಕ್ತಿಯ ಬಗ್ಗೆ ಈ ಲೇಖನದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ರಾಜ ವಿಷ್ಣುವರ್ಧನ ತನ್ನ ಪ್ರೀತಿಯ ಮಡದಿ ಶಾಂತಲೆಗಾಗಿ ಈ ಗ್ರಾಮವನ್ನು ನಿರ್ಮಿಸಿದರು ಎನ್ನುವ ಕಥೆಗಳಿವೆ.

ಆದ್ದರಿಂದಲೇ ಈ ಊರಿಗೆ ಶಾಂತಿಗ್ರಾಮ ಎನ್ನುವ ಹೆಸರು ಬಂದಿದೆ ಎಂದು ಹೇಳುತ್ತಾರೆ. ಇನ್ನು ಈ ಊರಿನಲ್ಲಿರುವ ವಿಶೇಷ ಲಕ್ಷ್ಮಿ ವರದಾ ಯೋಗ ಭೋಗ ನರಸಿಂಹ ಸ್ವಾಮಿಯ ದೇವಾಲಯವು ಕೂಡ ಹೊಯ್ಸಳರ ಶೈಲಿಯೊಂದಿಗೆ ನಿರ್ಮಾಣವಾಗಿದೆ. ಇಲ್ಲಿರುವ ಯೋಗ ಭೋಗ ನರಸಿಂಹ ಸ್ವಾಮಿಯ ವಿಗ್ರಹವು 12ನೇ ಶತಮಾನಕ್ಕಿಂತ ಹಳೆಯದು ಎಂದು ಪುರತತ್ವ ಇಲಾಖೆಯ ಹೇಳಿದೆ ಆದರೆ 12ನೇ ಶತಮಾನದಲ್ಲಿ ಹೊಯ್ಸಳ ದೊರೆ ವೀರಬಳ್ಳಾಲ ಈ ದೇವಾಲಯದ ಜೀರ್ಣೋದರ ಕ್ರಿಯೆಯನ್ನು ಮಾಡಿಸಿ ಆ ಮೂಲಭೂಗ್ರಹವನ್ನು ಅಲ್ಲೇ ಪ್ರತಿಷ್ಠಾಪಿಸಿದ್ದಾರೆ ಎಂದು ಇತಿಹಾಸದಲ್ಲಿದೆ.

ಸಾಮಾನ್ಯವಾಗಿ ಲಕ್ಷ್ಮಿ ನರಸಿಂಹ ಸ್ವಾಮಿಯ ದೇವಾಲಯಗಳಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯ ತೊಡೆಯ ಮೇಲೆ ಕುಳಿತಿರುವ ವಿಗ್ರಹವನ್ನು ಕಾಣುತ್ತೇವೆ. ಆದರೆ ಈ ದೇವಾಲಯದ ವಿಗ್ರಹದಲ್ಲಿ ನರಸಿಂಹ ಸ್ವಾಮಿಯು ಯೋಗ ದಾರಿಯಾಗಿದ್ದು ಯೋಗದ ಭಂಗಿಯಲ್ಲಿ ಕುಳಿತಿದ್ದಾರೆ. ನರಸಿಂಹ ಸ್ವಾಮಿಯ ವಿಗ್ರಹದ ಕೆಳಗೆ ಚಿಕ್ಕದಾಗಿ ಲಕ್ಷ್ಮಿ ವಿಗ್ರಹವು ಕೂಡ ಇದೆ. ಮತ್ತು ಎರಡು ಕೈಗಳಲ್ಲಿರುವ ಶಂಖ ಹಾಗೂ ಚಕ್ರಗಳು ಸಾಮಾನ್ಯವಾಗಿ ಇರುವ ಉಗ್ರ ನರಸಿಂಹನ ವಿಗ್ರಹದಂತೆ ಇರದೆ ಅದಲು ಬದಲಾಗಿ ಇವೆ.

ನಿತ್ಯವೂ ಇಲ್ಲಿಗೆ ಬಂದು ಅನೇಕ ಭಕ್ತಾದಿಗಳು ಸ್ವಾಮಿಯ ಕೃಪೆಗೆ ಪಾತ್ರವಾಗುತ್ತಾರೆ. ಮತ್ತು ಈ ದೇವಸ್ಥಾನದ ಬಗ್ಗೆ ಜನಪ್ರಿಯವಾಗಿರುವ ಸುದ್ದಿಯೇನೆಂದರೆ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ಸಮಸ್ಯೆ ಅಥವಾ ಕೋರಿಕೆಗಳಿದ್ದರೂ ಕೂಡ ಪ್ರತಿದಿನ ಮುಂಜಾನೆ ದೇವಾಲಯದ ಬಳಿ ಇರುವ ಕೊಳದಲ್ಲಿ ಮುಳುಗಿ ಲಕ್ಷ್ಮಿ ವರದಾ ಯೋಗ ಭೋಗ ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿದರೆ, ಲಕ್ಷ್ಮಿ ವರದ ಯೋಗ ಭೋಗ ನರಸಿಂಹ ಸ್ವಾಮಿ ಧ್ಯಾನಿಸುತ್ತಾ 48 ಪ್ರದಕ್ಷಿಗಳನ್ನು ಹಾಕಿದರೆ ಅದು ಸಿದ್ಧಿ ಆಗುತ್ತದೆ ಎನ್ನುವ ನಂಬಿಕೆ ಇದೆ.

ಮತ್ತು ಕೋರಿಕೆ ನೆರವೇರಿದ ನಂತರ ಒಂದು ದಿನ ಬಂದು ಅಲ್ಲಿ ಬರುವ ಭಕ್ತಾದಿಗಳಿಗೆ ತಮ್ಮ ಶಕ್ತಿಯನುಸಾರ ಪ್ರಸಾದದ ವ್ಯವಸ್ಥೆ ತಪ್ಪದೆ ಮಾಡಬೇಕು ಎನ್ನುವ ರೂಢಿ ಕೂಡ ಇದೆ. ಆ ಪ್ರಭಾವಶಾಲಿ ದೇವಾಲಯಕ್ಕೆ ನೀವು ಕೂಡ ಒಮ್ಮೆ ತಪ್ಪದೆ ಭೇಟಿ ಕೊಡಿ, ಶ್ರೀ ಲಕ್ಷ್ಮಿ ವರದಾ ಯೋಗ ಭೋಗ ನರಸಿಂಹ ಸ್ವಾಮಿ ಕೃಪೆಗೆ ಪಾತ್ರರಾಗಿ.

ಟೂತ್ ಬ್ರಷ್ ಹಳೆಯದಾಗಿದ್ದರೆ ಬಿಸಾಕಬೇಡಿ, ಈ 11 ಕೆಲಸಗಳಿಗೆ ಸಹಾಯಕ್ಕೆ ಬರುತ್ತದೆ ನೋಡಿ.

 

ಕಸದಿಂದ ರಸ ಎನ್ನುವ ಮಾತುಗಳನ್ನು ಕೇಳಿದ್ದೇವೆ. ಕೇಳುವುದಷ್ಟೇ ಅಲ್ಲದೆ ಸಾಧ್ಯವದಷ್ಟು ನಾವು ಅದನ್ನು ಪಾಲಿಸಲೇಬೇಕು. ಯಾಕೆಂದರೆ ಈ ದುಬಾರಿ ದುನಿಯಾದಲ್ಲಿ ಯಾವ ವಸ್ತುವೂ ಕೂಡ ಕಡಿಮೆ ಬೆಲೆಗೆ ಸಿಗುವುದಿಲ್ಲ. ಒಂದು ವಸ್ತುವನ್ನು ಒಂದು ಉಪಯೋಗಕ್ಕಾಗಿ ತೆಗೆದುಕೊಳ್ಳುವ ಬದಲು ಮಲ್ಟಿಪಲ್ ಯೂಸ್ ಆಗುವ ವಸ್ತುಗಳನ್ನು ಖರೀದಿಸುವುದು ಕೂಡ ಹಣ ಉಳಿಸುವ ಟೆಕ್ನಿಕ್.

ಇದರ ಜೊತೆಗೆ ಯಾವುದಾದರೂ ಒಂದು ಕಾರಣಕ್ಕೆ ತೆಗೆದುಕೊಂಡಿದ್ದ ವಸ್ತುವನ್ನು ಅದರ ಉಪಯೋಗ ಮುಗಿದ ಬಳಿಕ ಅಥವಾ ಆ ವಸ್ತುವಿನ ಇಂದ ಇನ್ನು ಮುಂದೆ ಆ ಕೆಲಸ ಆಗುವುದಿಲ್ಲ ಎನ್ನುವ ಕಾರಣಕ್ಕೆ ಕಸಕ್ಕೆ ಹಾಕುವ ಬದಲು ಅದನ್ನು ಬೇರೆ ಕೆಲಸಗಳಿಗೆ ಉಪಯೋಗ ಆಗುವಂತೆ ಮಾರ್ಪಡಿಸಿಕೊಳ್ಳಬೇಕು. ಇದರಿಂದ ಕೂಡ ತಕ್ಕಮಟ್ಟಿಗೆ ಗೃಹಿಣಿಯರು ಮನೆ ಖರ್ಚಿನ ಉಳಿತಾಯ ಮಾಡಬಹುದು ಭಾರತ ದೇಶ ಮಹಿಳೆಯರಿಗೆ ಈ ಕಲೆ ಹುಟ್ಟಿನಿಂದಲೇ ಬಂದಿದೆ ಎಂದು ಹೇಳಬಹುದು. ಯಾಕೆಂದರೆ ನಮ್ಮಲ್ಲಿ ಮಧ್ಯಮ ವರ್ಗದಿಂದ ಬಂದವರಾದ್ದರಿಂದ ಈ ರೀತಿ ಹಣ ಉಳಿಸುವ ಉಳಿತಾಯಗಳು ರಕ್ತದಲ್ಲಿ ಬಂದಿದೆ ಎಂದರು ತಪ್ಪಾಗಲಾರದು. ಒಬ್ಬರನ್ನ ನೋಡಿ ಒಬ್ಬರು, ಒಬ್ಬರಿಂದ ಕೇಳಿ ಮತ್ತೊಬ್ಬರು ಎಲ್ಲರೂ ಕೂಡ ಈ ಟೆಕ್ನಿಕ್ ಬಳಸಿಕೊಂಡು ಸಾಧ್ಯವಾದಷ್ಟು ಮನೆ ಹಣ ಉಳಿತಾಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಈಗ ಈ ಅಂಕಣದಲ್ಲಿ ಟೂತ್ ಬ್ರಷ್ ಉಪಯೋಗ ಮುಗಿದ ಬಳಿಕ ಅದನ್ನು ಬಳಸಿಕೊಂಡು ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಕೆಲ ಟಿಪ್ಸ್ ಕೊಡುತ್ತಿದ್ದೇವೆ. ನಾವು ಟೂತ್ ಬ್ರಷ್ ಅನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಬಳಸಬೇಕು ಎಂದು ದಂತ ವೈದ್ಯರು ಸಲಹೆ ಕೊಡುತ್ತಾರೆ. ಆದರೆ ಮೂರು ತಿಂಗಳಿಗೆ ಬಿಸಾಡುವಷ್ಟು ಬ್ರಷ್ ಹಳೆಯದಾಗಿಲ್ಲ ಎಂದರೆ ಅದನ್ನು ಕಸಕ್ಕೆ ಹಾಕಲು ಮನಸಾಗುವುದಿಲ್ಲ. ಈಗಿನ ಕಾಲದಲ್ಲಿ ಬ್ರಷ್ ಅನ್ನು ಕೂಡ ಬ್ರಾಂಡೆಡ್ ಕಂಪನಿ ಗಳಿಂದ ತೆಗೆದುಕೊಳ್ಳುವುದರಿಂದ ದುಬಾರಿ ಬೆಲೆ ಕೊಟ್ಟು ತಂದ ಬ್ರಷ್ ಉಪಯೋಗ ಮುಗಿದ ಬಳಿಕ ಅವುಗಳನ್ನು ಬಳಸಿಕೊಂಡು ಈ ಕೆಲಸಗಳನ್ನು ಮಾಡಬಹುದು.

● ಟೂತ್ ಬ್ರಷ್ ಹೆಡ್ ಟಿಪ್ ಅನ್ನು ಕಟ್ ಮಾಡಿ ಅದನ್ನು ಕ್ಲೀನಿಂಗ್ ಬ್ರಷ್ ಅಥವಾ ಪೇಂಟಿಂಗ್ ಪ್ರೆಸ್ ತರ ಅಂಟಿಸಿಕೊಳ್ಳುವ ಮೂಲಕ ಕೀಬೋರ್ಡ್ಗಳ ಮೇಲೆ ಆಗಿರುವ ಧೂಳನ್ನು ನೀಟಾಗಿ ಸ್ವಚ್ಛ ಮಾಡಬಹುದು.
● ಟೂತ್ ಬ್ರಷ್ ಹೆಡ್ ಕೆಳಗೆ ಸ್ವಲ್ಪ ಬಿಸಿ ಮಾಡಿ ವಿ ಶೇಪ್ ಅಲ್ಲಿ ಬೆಂಡ್ ಮಾಡಿಕೊಳ್ಳುವುದರಿಂದ ಮಿಕ್ಸಿಯ ಜಾರ್ ಹಾಕುವ ಭಾಗದಲ್ಲಿ ನೀಟಾಗಿ ಕ್ಲೀನ್ ಮಾಡಬಹುದು. ಬೇರೆ ಯಾವ ವಸ್ತುವಿನಿಂದಲೂ ಕೂಡ ಈ ರೀತಿ ಮೂಲೆ ಮೂಲೆಗಳನ್ನು ಕ್ಲೀನ್ ಮಾಡಲು ಸಾಧ್ಯವಿಲ್ಲ.
● ಈ ರೀತಿ ವಿ ಶೇಪಲ್ಲಿ ಬ್ರಷ್ ಅನ್ನು ಬೆಂಡ್ ಮಾಡಿದ ಮೇಲೆ ಅದನ್ನು ಸ್ವಲ್ಪ ಡೆಕೋರೇಟ್ ಮಾಡಿ ಹಾಕಿದರೆ ಹ್ಯಾಂಗಿಂಗ್ ಕ್ಲಿಪ್ ತರ ಬಳಸಬಹುದು.

● ಅನಾದಿ ಕಾಲದಿಂದಲೂ ಕೂಡ ಟೂತ್ ಬ್ರಷ್ ಗಳನ್ನು ಬಳಸಿಕೊಂಡು ಬಾಚಣಿಕೆಗಳನ್ನು ಕ್ಲೀನ್ ಮಾಡುವ ಪದ್ಧತಿ ರೂಢಿಯಲ್ಲಿ ಇದೆ.
● ಮಕ್ಕಳ ಎರೇಸರ್ ಮೇಲೆ ಕೂಡ ಡಬಲ್ ಸೈಡ್ ಗಮ್ ಟೇಪ್ ಹಾಕಿ ಟೂತ್ ಬ್ರಷ್ ನ ಹೆಡ್ ಪಾರ್ಟ್ ಕಟ್ ಮಾಡಿ ಅಟಿಸಿದರೆ ಮಕ್ಕಳು ಎರೇಸ್ ಮಾಡಿದ್ದನ್ನು ನೀಟಾಗಿ ಒರೆಸಬಹುದು.
● ನಾಲ್ಕೈದು ಟೂತ್ ಬ್ರಷ್ ಗಳ ಹೆಡ್ ಪಾರ್ಟ್ ಕಟ್ ಮಾಡಿ ಅವುಗಳನ್ನು ಒಂದು ಮರದ ಪೀಸಿಗೆ ಅಂಟಿಸುವ ಮೂಲಕ ಡೋರ್ ಮ್ಯಾಟ್ ಗಳು ಹಾಗೂ ಮೆಶ್‌ಗಳನ್ನು ಕ್ಲೀನ್ ಮಾಡಬಹುದು.

● ಎರಡು ಟೂತ್ ಬ್ರಷ್ ತೆಗೆದುಕೊಂಡು ಹೆಡ್ ಪಾರ್ಟ್ ಕಟ್ ಮಾಡಿ ನಂತರ ಅವೆರಡನ್ನು ಒಂದು ರಬ್ಬರ್ ಸಹಾಯದಿಂದ ಜೋಡಿ ಮಾಡಿ ಅವುಗಳ ಮಧ್ಯೆ ಟೂತ್ಪೇಸ್ಟ್ ಖಾಲಿ ಆದ ಸಂದರ್ಭದಲ್ಲಿ ಅದನ್ನು ಪ್ರೆಸ್ ಮಾಡಲು ಬಳಸಬಹುದು.
● ಸ್ವಿಚ್ ಬೋರ್ಡ್ ಗಳನ್ನು ಕ್ಲೀನ್ ಮಾಡುವ ಸಮಯದಲ್ಲಿ ಟೂತ್ ಬ್ರಷ್ ಒದ್ದೆ ಮಾಡಿ ಅದಕ್ಕೆ ಪೇಸ್ಟ್ ಹಾಕಿ ಕ್ಲೀನ್ ಮಾಡಿ ಬಟ್ಟೆಯಿಂದ ಒರೆಸಿದರೆ ನೀಟಾಗಿ ಕ್ಲೀನ್ ಆಗುತ್ತದೆ. ಆದರೆ ಕ್ಲೀನ್ ಮಾಡುವ ಮುಂಚೆ ಮೆನ್ ಸ್ವಿಚ್ ಅನ್ನು ಆಫ್ ಮಾಡಿರಬೇಕು. ಕ್ಲೀನ್ ಮಾಡಿದ ಮೇಲೆ ಅದು ಒಣಗಿದ ನಂತರವೇ ಆನ್ ಮಾಡಬೇಕು.