Home Entertainment ಮನೆ ಆಸ್ತಿ ಕಳೆದುಕೊಂಡು ಕಂಗಾಲಗಿರುವ ರವಿಚಂದ್ರನ್ ಬಗ್ಗೆ ಸೊಸೆ ಸಂಗೀತ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಆಶ್ಚರ್ಯ

ಮನೆ ಆಸ್ತಿ ಕಳೆದುಕೊಂಡು ಕಂಗಾಲಗಿರುವ ರವಿಚಂದ್ರನ್ ಬಗ್ಗೆ ಸೊಸೆ ಸಂಗೀತ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಆಶ್ಚರ್ಯ

0
ಮನೆ ಆಸ್ತಿ ಕಳೆದುಕೊಂಡು ಕಂಗಾಲಗಿರುವ ರವಿಚಂದ್ರನ್ ಬಗ್ಗೆ ಸೊಸೆ ಸಂಗೀತ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಆಶ್ಚರ್ಯ

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರವನ್ನು ಅದ್ದೂರಿ ತನದಿಂದ ತೋರಿಸಿದ ಏಕೈಕ ಸರದಾರ ಅಂದರೆ ಅದು ರವಿಚಂದ್ರನ್ ಅಂತಾನೇ ಹೇಳಬಹುದು. ಇತ್ತೀಚಿನ ದಿನದಲ್ಲಿ ಕೋಟಿ ಕೋಟಿ ಬಜೆಟ್ ಹಾಕಿ ಸಿನಿಮಾ ತೆಗೆಯುತ್ತಿರಬಹುದು ಆದರೆ ಸುಮಾರು ನಾಲ್ಕು ದಶಕಗಳ ಹಿಂದೆ ಹಣವನ್ನು ನೀರಿನಲ್ಲಿ ಖರ್ಚು ಮಾಡಿ ಸಿನಿಮಾವನ್ನು ಅದ್ದೂರಿಯಾಗಿ ಮೇಕಿಂಗ್ ಮಾಡಿದ ಕೀರ್ತಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ರವಿಚಂದ್ರನ್ ಸಿನಿಮಾ ಅಂದರೆ ಸಾಕು ಅಲ್ಲಿ ಏನಾದರೂ ಒಂದು ವಿಶೇಷತೆ ಇದ್ದೇ ಇರುತ್ತದೆ ಎಂಬುದು ಸಾಕಷ್ಟು ಜನರಿಗೆ ತಿಳಿದಿದೆ ಇನ್ನು ರವಿಚಂದ್ರನ್ ಅವರು ಹುಟ್ಟುತ್ತಾ ಆಗರ್ಭ ಶ್ರೀಮಂತರು. ಹೌದು ಅವರ ತಂದೆ ಈಶ್ವರಿ ಪ್ರೊಡಕ್ಷನ್ ಮೂಲಕ ಹಲವಾರು ದಿಗ್ಗಜ ನಟರಿಗೆ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ.

ಇನ್ನು ತಂದೆಯ ಹಾದಿಯಂತೆ ರವಿಚಂದ್ರನ್ ಅವರು ಕೂಡ ಹಲವಾರು ಸಿನಿಮಾಗಳಿಗೆ ಈಶ್ವರಿ ಪ್ರೊಡಕ್ಷನ್ ಮೂಲಕ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ‌‌. ಆದರೆ ರವಿಚಂದ್ರನ್ ಅವರ ಕನಸು ಮಾತ್ರ ಪ್ರೇಕ್ಷಕರಿಗೆ ಉತ್ತಮವಾದ ಸಿನಿಮಾವನ್ನು ನೀಡಬೇಕು ಎಂಬುದು ಮಾತ್ರ ಆಗಿತ್ತು ಈ ಕಾರಣಕ್ಕಾಗಿಯೇ ಅವರು ಸಿನಿಮಾಗಳಿಗಾಗಿ ಹಣದ ಹೊಳೆಯನ್ನೆ ಅರಿಸಿದ್ದಾರೆ. ಈ ಸಿನಿಮಾಗಳನ್ನು ತೆಗೆಯುವುದಕ್ಕೆ ರವಿಚಂದ್ರನ್ ಅವರು ಎಷ್ಟು ಆಸ್ತಿ ಮಾಡಿಕೊಂಡಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲವಂತೆ. ಒಂದು ಕಾಲದಲ್ಲಿ ರವಿಚಂದ್ರನ್ ಸಿನಿಮಾ ಅಂದರೆ ಸಾಕು ಪ್ರೇಕ್ಷಕರು ಹುಚ್ಚೆದ್ದು ನೋಡುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ರವಿಚಂದ್ರನ್ ಅವರು ಯಾವುದೇ ಸಿನಿಮಾ ತೆಗೆದರೂ ಕೂಡ ಆ ಸಿನಿಮಾ ಓಡುತ್ತಿಲ್ಲ.

ಫ್ಲಾಫ್ ಆಗುತ್ತಿದೆ ಇದರ ಬಗ್ಗೆ ರವಿಚಂದ್ರನ್ ಅವರ ಜೀ ಕನ್ನಡ ವೇದಿಕೆಯಲ್ಲಿ ಕಣ್ಣೀರು ಹಾಕಿತ್ತಾ ನಾನು ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಕಥೆಯನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಭಾವುಕರಾಗಿದ್ದಾರೆ. ಅಷ್ಟೇ ಅಲ್ಲದೆ ತಾವು ಸಿನಿಮಾಗಾಗಿ ಎಷ್ಟು ಆಸ್ತಿಯನ್ನು ಕಳೆದುಕೊಂಡಿದ್ದೇನೆ ಎಂಬುದರ ಬಗ್ಗೆಯೂ ಕೂಡ ಮಾತನಾಡಿದ್ದಾರೆ ಆದರೆ ಇದೇ ವೇದಿಕೆಯಲ್ಲಿ ಮುಂದೊಂದು ದಿನ ಜನ ಮೆಚ್ಚುವಂತಹ ಸಿನಿಮಾವನ್ನು ನಾನು ನೀಡುತ್ತೇನೆ ಈಗ ಸೋತಿರಬಹುದು ಆದರೆ ಮುಂದಿನ ದಿನದಲ್ಲಿ ಗೆದ್ದು ತೋರಿಸುತ್ತೇನೆ ಎಂದು ಸವಾಲನ್ನು ಹಾಕಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಮಾತನಾಡುವುದಕ್ಕೆ ಪ್ರಾರಂಭಿಸಿದರು ಆದರೆ ಇದೀಗ ರವಿಚಂದ್ರನ್ ಅವರ ಸೊಸೆ ತಮ್ಮ ಮಾವನ ಬಗ್ಗೆ ಹಾಗೂ ಗಂಡನ ಬಗ್ಗೆ ಮಾತನಾಡಿರುವುದು ನಿಜಕ್ಕೂ ಅಚ್ಚರಿಯನಿಸಿದೆ.

ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ತಿಂಗಳ ಹಿಂದಷ್ಟೇ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರ ಮದುವೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವಂತಹ ಸಂಗೀತ ಅವರನ್ನು ಮನೋರಂಜನ್ ಅವರು ಮದುವೆಯಾಗಿದ್ದಾರೆ. ಇದೊಂದು ಪಕ್ಕ ಅರೆಂಜ್ ಮ್ಯಾರೇಜ್ ಆಗಿದ್ದರೂ ಕೂಡ ಸಂಗೀತ ಅವರು ತಮ್ಮ ಮಾವ ಹಾಗೂ ಗಂಡನನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಇತ್ತೀಚಿಗಷ್ಟೇ ನಡೆದ ಸಂದರ್ಶನ ಒಂದರಲ್ಲಿ ಸಂಗೀತ ಅವರನ್ನು ನಿಮ್ಮ ಮಾವ ಸಿನಿಮಾಗಾಗಿ ಆಸ್ತಿ ಸಿರಿ ಸಂಪತ್ತು ಎಲ್ಲವನ್ನು ಕಳೆದುಕೊಂಡು ಇದೀಗ ಬರಿಗೈನಲ್ಲಿ ಇದ್ದಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನೆಯನ್ನು ಕೇಳಿದ್ದಾರೆ.

ಈ ಪ್ರಶ್ನೆಗೆ ಸಂಗೀತ ಕೊಟ್ಟ ಉತ್ತರ ನಿಜಕ್ಕೂ ಎಲ್ಲರನ್ನು ನಿಬ್ಬರಿಗಾಗಿಸುವಂತೆ ಮಾಡಿದೆ ಹೌದು, ಅಷ್ಟಕ್ಕೂ ಸಂಗೀತ ಹೇಳಿದ್ದಾದರೂ ಏನು ಅಂದರೆ ದುಡ್ಡು ಇವತ್ತು ಬರುತ್ತೆ ನಾಳೆ ಹೋಗುತ್ತೆ. ದುಡ್ಡಿಗೆ ಬೆಲೆಯನ್ನು ಪ್ರಾಮುಖ್ಯತೆಯನ್ನು ನೀಡಬಾರದು ನಮ್ಮ ಮಾವ ಹಾಗೂ ನನ್ನ ಗಂಡ ಇಬ್ಬರೂ ಕೂಡ ಒಳ್ಳೆಯ ವ್ಯಕ್ತಿಗಳು ಇದಿಷ್ಟೇ ಸಾಕು ಇದಕ್ಕಿಂತ ದೊಡ್ಡ ಸಿರಿ ಸಂಪತ್ತು ಬೇಕಿಲ್ಲ. ಇಂದು ಸತತ ಸಿನಿಮಾಗಳು ಸೋತಿರಬಹುದು ಆದರೆ ಮುಂದೊಂದು ದಿನ ಒಳ್ಳೆಯ ಸಿನಿಮಾಗಳು ಬರುತ್ತದೆ ಈ ಸಿನಿಮಾದಿಂದಲೇ ನಮ್ಮ ಮಾವನವರಿಗೆ ಮತ್ತೆ ಯಶಸ್ಸು ಕೀರ್ತಿ ಹಾಗೂ ಹಣ ಎಲ್ಲವು ದೊರೆಯುತ್ತದೆ. ಅಲ್ಲಿಯವರೆಗೂ ನಾವು ತಾಳ್ಮೆಯಿಂದ ಕಾಯುತ್ತೇವೆ ಕಳೆದುಕೊಂಡಿದ್ದರ ಬಗ್ಗೆ ನಾವು ಚಿಂತೆ ಮಾಡಬಾರದು.

ಬದಲಿಗೆ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಮಾತ್ರ ಆಲೋಚನೆ ಮಾಡಬೇಕು ನನ್ನ ಮಾವನ ಬಗ್ಗೆ ನನಗೆ ಹೆಮ್ಮೆ ಇದೆ ಹಾಗಾಗಿ ನಾನು ಅವರು ಕಳೆದುಕೊಂಡಿದ್ದರ ಬಗ್ಗೆ ಎಂದಿಗೂ ಕೂಡ ಚಿಂತೆ ಮಾಡುವುದಿಲ್ಲ. ಮುಂದೊಂದು ದಿನ ಅವರು ಉತ್ತಮವಾದ ಜೀವನವನ್ನು ಕಲ್ಪಿಸಿ ಕೊಡುತ್ತಾರೆ ಎಂಬ ಭರವಸೆಯಲ್ಲಿ ಇದ್ದೇನೆ ಎಂದು ಹೇಳಿದ್ದಾರೆ. ನಿಜಕ್ಕೂ ಸಂಗೀತ ಅವರ ಈ ಮಾತನ್ನು ಕೇಳಿ ಮನೆಯವರೆಲ್ಲ ಭಾವುಕರಾಗಿದ್ದಾರೆ ಇನ್ನು ಪ್ರೇಕ್ಷಕರು ಅಭಿಮಾನಿಗಳು ಸಹ ಸಂಗೀತ ಅವರ ಒಳ್ಳೆಯ ಗುಣವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ನಿಜಕ್ಕೂ ಈಗಿನ ಕಾಲದಲ್ಲಿ ಹಣ ಆಸ್ತಿ ಸಿರಿ ಸಂಪತ್ತಿಗೆ ಬೆಲೆಯನ್ನು ನೀಡುತ್ತಾರೆ ಆದರೆ ಈಕೆ ಮಾತ್ರ ವ್ಯಕ್ತಿತ್ವಕ್ಕೆ ಬೆಲೆ ನೀಡಿದ್ದಾರೆ ಎಂದು ಹಾಡಿ ಹೊಗಳುತ್ತಿದ್ದರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ

LEAVE A REPLY

Please enter your comment!
Please enter your name here