Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಬಡತನ ದೂರ ಆಗುವ ಮೊದಲು ಮನೆಗೆ ಅದೃಷ್ಟ ಬರುವುದನ್ನು ಸೂಚಿಸುವ 5 ಲಕ್ಷಣಗಳು ಇವು.!

Posted on December 26, 2023 By Kannada Trend News No Comments on ಬಡತನ ದೂರ ಆಗುವ ಮೊದಲು ಮನೆಗೆ ಅದೃಷ್ಟ ಬರುವುದನ್ನು ಸೂಚಿಸುವ 5 ಲಕ್ಷಣಗಳು ಇವು.!

 

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಶ್ರೀಮಂತರಾಗುವ ಅವಕಾಶ ಇದ್ದೆ ಇದೆ. ಬಡವರಾಗಿ ಹುಟ್ಟುವುದು ನಮ್ಮ ತಪ್ಪಲ್ಲ ಆದರೆ ಬಡವರಾಗಿ ಸತ್ತರೆ ಖಂಡಿತವಾಗಿಯೂ ಆ ತಪ್ಪು ನಮ್ಮದೇ ಆಗಿರುತ್ತದೆ. ಹಾಗಾಗಿ ನಮ್ಮ ಬಾಲ್ಯ ಹೇಗೆ ಇದ್ದರು ಅಂತ್ಯ ಮಾತ್ರ ನಾವಂದು ಕೊಂಡಂತೆ ಇರಬೇಕು.

ಆ ರೀತಿ ನಮ್ಮ ಬದುಕನ್ನು ರೂಪಿಸಿಕೊಂಡು ನಮ್ಮ ಜೀವನವನ್ನು ನಮ್ಮಿಷ್ಟದಂತೆ ಕಳೆಯಬೇಕು ಅದಕ್ಕಾಗಿ ಎಷ್ಟೇ ಕಷ್ಟ ಬಂದರೂ ಕೂಡ ಎದುರಿಸುವ ಮನಸ್ಸಿರಬೇಕು. ಜೀವನದಲ್ಲಿ ಶ್ರೀಮಂತಿಕೆ ಎನ್ನುವುದು ಎಲ್ಲಾ ಸಮಯದಲ್ಲೂ ಅದೃಷ್ಟದಿಂದಲೇ ಬರುವುದಿಲ್ಲ, ನಮ್ಮ ಕಠಿಣ ಪ್ರಯತ್ನಕ್ಕೆ ಕೆಲವೊಮ್ಮೆ ಅದೃಷ್ಟ ಕೂಡ ಸಾಥ್ ಕೊಟ್ಟು ನಾವು ಶ್ರೀಮಂತರಾಗುತ್ತೇವೆ.

ಹಾಗಾಗಿ ನಾವು ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಕಾರ್ಯ ಪ್ರವೃತ್ತರಾಗಿರಬೇಕು. ಇದರ ನಡುವೆ ನಮಗೆ ನಾವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೇವೆ ಮತ್ತು ನಮ್ಮ ನಿರೀಕ್ಷೆಯ ಮಟ್ಟದ ಶ್ರೀಮಂತಿಕೆಯನ್ನು ನಾವು ತಲುಪುತ್ತಿದ್ದೇವೆ ಎನ್ನುವುದು ನಮಗೆ ಕೆಲವು ಸೂಚನೆಗಳ ಮೂಲಕ ಸಿಗುತ್ತದೆ. ಅಂತಹ ಕೆಲವು ಸೂಚನೆಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.

* ನಿಮಗೆ ಪ್ರತಿದಿನ ಕೂಡ ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರವಾಗುತ್ತಿದ್ದರೆ ಭಗವಂತ ನಿಮಗೆ ಅನುಗ್ರಹಿಸುತ್ತಿದ್ದಾನೆ ನೀವು ಕಷ್ಟ ಪಡುತ್ತಿರುವ ಕೆಲಸಗಳಿಗೆ ಭಗವಂತನ ಆಶೀರ್ವಾದ ಇದ್ದೇ ಇರುತ್ತದೆ, ನೀವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೀರಾ ಮತ್ತು ಶೀಘ್ರದಲ್ಲಿಯ ಗುರಿ ತಲುಪಲಿದ್ದೀರ ಎಂದು ಅರ್ಥ.

ಆದರೆ ನೀವು ಈ ರೀತಿ ಎಚ್ಚರವಾದಾಗ ಅದನ್ನು ನಿರ್ಲಕ್ಷಿಸಿ ಮಲಗಿದ್ದರೆ ನಿಮ್ಮ ಅದೃಷ್ಟವನ್ನು ನಿಮ್ಮ ಕೈಯಾರೆ ಕಳೆದುಕೊಳ್ಳುತ್ತಿದ್ದೀರಿ. ಹಾಗಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರವಾದರೆ ತಕ್ಷಣ ಎದ್ದು ನೀವು ಯಾವ ಕನಸಿಗಾಗಿ ಕಷ್ಟಪಡುತ್ತಿದ್ದೀರಾ ಆ ಕೆಲಸಗಳ ಕಡೆ ಗಮನ ಕೊಡಿ, ಭಗವಂತನ ಕೃಪಾಕಟಾಕ್ಷದಿಂದ ನಿಮ್ಮ ದಾರಿ ಸುಗಮವಾಗುತ್ತದೆ

* ನೀವೇನಾದರೂ ದಾರಿಯಲ್ಲಿ ಹೋಗುವಾಗ ನಿಮಗೆ ಹಣ ಸಿಕ್ಕಿದರೆ ಅಥವಾ ನಾಣ್ಯ ಅಥವಾ ಬೆಳ್ಳಿಯ ಪದಾರ್ಥಗಳು ಸಿಕ್ಕಿದರೆ ನೀವು ಶೀಘ್ರದಲ್ಲಿಯೇ ಶ್ರೀಮಂತರಾಗಲಿದ್ದೀರಿ ನಿಮಗೆ ಅಪಾರ ಮಟ್ಟದ ಹಣ ಒಲಿದು ಬರಲಿದೆ ಎನ್ನುವುದನ್ನು ಸೂಚಿಸುವ ಸಂಕೇತ ಆಗಿರುತ್ತದೆ.

* ನಿಮ್ಮ ಮನೆಯ ಸುತ್ತಲೂ ಹಸು ಬಂದು ಸೆಗಣಿ ಮಾಡುತ್ತಿದ್ದರೆ ಅಥವಾ ಹಸು ಬಂದು ನಿಲ್ಲುತ್ತಾ ಇದ್ದರೆ ಅದು ಕೂಡ ತಾಯಿ ಮಹಾಲಕ್ಷ್ಮಿ ಶೀಘ್ರದಲ್ಲಿ ನಿಮ್ಮ ಮನೆಗೆ ಬರಲಿದ್ದಾನೆ ಎನ್ನುವುದನ್ನು ಸೂಚಿಸುವ ಲಕ್ಷಣ ಆಗಿರುತ್ತದೆ. ಈ ರೀತಿ ಹಸು ಬಂದಾಗ ಅದಕ್ಕೆ ಕೈಲಾದಷ್ಟು ಆಹಾರ ಕೊಟ್ಟು ಕಳುಹಿಸಿ ಅದಕ್ಕೆ ಹೊಡೆದು ಗಾಬರಿಗೊಳಿಸಿ ನೋವು ಮಾಡಬೇಡಿ. ಈ ರೀತಿ ಹಸು ಹಾಗೂ ಕರು ಕನಸಿನಲ್ಲಿ ಕಂಡರೂ ಕೂಡ ಅದು ಇದೇ ಫಲ ಸೂಚಿಸುತ್ತದೆ

* ನಿಮ್ಮ ಕನಸಿನಲ್ಲಿ ನೀವು ಬೆಟ್ಟ ಹತ್ತುತ್ತಿರುವ ರೀತಿ ಕಂಡರೆ ಅದು ಕೂಡ ನೀವು ಶೀಘ್ರದಲ್ಲಿಯೇ ಹಣಕಾಸಿನ ವಿಚಾರದಲ್ಲಿ ಅತ್ಯುತ್ತಮ ಸ್ಥಾನ ತಲುಪುತ್ತಿದ್ದಿರಿ ಎನ್ನುವುದನ್ನು ಸೂಚಿಸುವ ಲಕ್ಷಣ ಆಗಿರುತ್ತದೆ.

* ಇದೇ ರೀತಿಯಾಗಿ ನಿಮ್ಮ ಪಿತೃಗಳು ಕನಸಿನಲ್ಲಿ ಕಂಡರೆ ಅದು ಕೂಡ ನಿಮಗೆ ನಿಮ್ಮ ಕುಟುಂಬದ ಹಿರಿಯರ ಹಾಗೂ ದೇವರ ಆಶೀರ್ವಾದ ನಿಮ್ಮ ಮೇಲೆ ಇದೆ ಎನ್ನುವುದನ್ನು ಸೂಚಿಸುತ್ತದೆ, ಇದರ ಮೂಲಕ ನೀವು ಜೀವನದಲ್ಲಿ ಬಹಳ ಬೇಗ ಯಶಸ್ವಿಯಾಗುತ್ತಿರಿ ಎನ್ನುವುದನ್ನು ಸೂಚಿಸುತ್ತದೆ.
* ನಿಮ್ಮ ಮೇಲೆ ಏನಾದರೂ ಅನಿರೀಕ್ಷಿತವಾಗಿ ನೀರು ಬಿದ್ದರೆ ಅದು ಕೂಡ ನಿಮಗೆ ಶ್ರೀಮಂತಿಕೆಯನ್ನು ತರುತ್ತದೆ ಎನ್ನುವುದನ್ನು ಸೂಚಿಸಿರುವ ಸಂಕೇತ ಆಗಿರುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಈ 15 ರಹಸ್ಯಗಳು ಗೊತ್ತಿದ್ದರೆ ನಿಮ್ಮ ದೇಹವು ನೀವು ಹೇಳಿದಂತೆ ಕೇಳುತ್ತದೆ.!
Next Post: ಶನಿವಾರ ರಾತ್ರಿ ಉಪ್ಪಿನಿಂದ ಈ ಕೆಲಸ ಮಾಡಿ, ನಿಮ್ಮ ಮನೆಯ ಸದಸ್ಯರ ಯಾವುದೇ ಸದಸ್ಯರ ದುಶ್ಚಟ ಬೇಕಾದ್ರೂ ಬಿಡಿಸಬಹುದು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore