ತೆರೆ ಮೇಲೆ ಸಾಹಸ ಸಿಂಹನಾಗಿ ಜಯ ಸಿಂಹನಾಗಿ ಯಜಮಾನನಾಗಿ ಕೋಟಿಗೊಬ್ಬನಾಗಿ ಯಶಸ್ಸು ಕಂಡಿದ್ದ ಅಭಿನವ ಭಾರ್ಗವ ವಿಷ್ಣು ದಾದಾ ವೈಯುಕ್ತಿಕ ಬದುಕಿನಲ್ಲಿ ಕಂಡಿದ್ದೆಲ್ಲಾ ಬರಿ ಕಷ್ಟವೇ. ಸಿನಿಮಾ ಇಂಡಸ್ಟ್ರಿಗೆ ಬಂದ ಮೇಲೂ ಕೂಡ ನಾನಾ ರೀತಿ ವಿವಾದಗಳನ್ನು ಎದುರಿಸಿದ, ಸಂಕಷ್ಟಗಳನ್ನು ಜಯಿಸಿದ ವಿಷ್ಣುವರ್ಧನ್(Vishnu Smaraka) ಅವರು ಸ-ತ್ತ ಮೇಲೂ ಕೂಡ ನೆಮ್ಮದಿ ಕಂಡಿಲ್ಲ ಎಂದೇ ಹೇಳಬಹುದು. ಯಾಕೆಂದರೆ ಅವರು ಸ-ತ್ತ ಮೇಲೆ ಅವರ ಸ.ಮಾ.ಧಿ ವಿಷಯದಲ್ಲಿ ಇನ್ನೂ ವಿವಾದ.
ಇದೆ ವಿಷ್ಣುವರ್ಧನ್(Vishnu Vardhan) ಅವರು ನಮ್ಮನ್ನೆಲ್ಲ ಆಗಲಿ 13 ವರ್ಷಗಳೇ ಕಳೆದಿವೆ, 13 ವರ್ಷಗಳಿಂದ ನಾಲ್ಕೈದು ಮಂದಿ ಮುಖ್ಯ ಮಂತ್ರಿಗಳಾಗಿದ್ದಾರೆ, ಕರ್ನಾಟಕದ ಮೂರು ಪಕ್ಷಗಳ ನಾಯಕರುಗಳ ಕೂಡ ಮಂತ್ರಿಗಳಾಗಿದ್ದಾರೆ ಆದರೂ ಸಹ ಸರ್ಕಾರದಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಡಲು ಆಗುತ್ತಿಲ್ಲ.
ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ಅಭಿಮಾನ್ ಸ್ಟುಡಿಯೋದಲ್ಲಿ ಮಾಡಬೇಕು ಎನ್ನುವುದು ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಸೆ. ಯಾಕೆಂದರೆ ಬೆಂಗಳೂರಿನಲ್ಲಿಯೇ ವಿಷ್ಣುವರ್ಧನ್ ಅವರ ಪುಣ್ಯಭೂಮಿ ಇದ್ದರೆ ಅವರ ಅಭಿಮಾನಿಗಳು ಇಲ್ಲಿಗೆ ಬಂದು ಪೂಜೆ ಮಾಡಬಹುದು, ಸಮಯ ಕಳೆದು ಹೋಗಬಹುದು ಎನ್ನುವುದು ಕುಟುಂಬದವರ ಹಾಗೂ ಅಭಿಮಾನಿಗಳ ಇಚ್ಛೆ ಆದರೆ ಈ ಸ್ಥಳ ಬಾಲಣ್ಣ ಅವರ ಕುಟುಂಬಕ್ಕೆ ಸೇರಿದ್ದಾಗಿದೆ.
ಅದಕ್ಕಾಗಿ ಅವರು ಸ್ಥಳ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ ಆದರೆ ಹಿಂದೆ ಒಂದು ಸಮಯದಲ್ಲಿ 10 ಕುಂಟೆ ಜಾಗವನ್ನು ಕೊಡುವುದಾಗಿ ಒಪ್ಪಿಕೊಂಡು ಪತ್ರಕ್ಕೆ ಸಹಿ ಮಾಡಿದ್ದರಂತೆ. ಆದರೆ ಈಗ ಅದಕ್ಕೂ ಸಹ ತಕರಾರು ಎತ್ತಿದ್ದಾರೆ. ವಿಷ್ಣುವರ್ಧನ್ ಅವರ ಸ.ಮಾ.ಧಿ ಬಳಿ ಯಾರು ಸಹ ಬರುವುದಿಲ್ಲ ಮತ್ತು ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಅವರ ಸ್ಮಾರಕ ಇಲ್ಲಿ ಕಟ್ಟುವುದು ಇಷ್ಟವೇ ಇಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರಂತೆ.
ಈ ಜಾಗಕ್ಕೆ ಯಾರಾದರೂ ಬಂದರೆ ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಡುವುದಾಗಿ ಕೂಡ ಅವಾಜ್ ಹಾಕುತ್ತಿದ್ದಾರಂತೆ. ಇದರಿಂದ ರೊಚ್ಚಿ ಗೆದ್ದಿರುವ ವಿಷ್ಣುದಾದಾ ಅಭಿಮಾನಿ ಹಾಗೂ ಡಾಕ್ಟರ್ ವಿಷ್ಣುವರ್ಧನ್ ಸೇವಾ ಸಮಿತಿಯ ಅಧ್ಯಕ್ಷರು ಆಗಿರುವ ವೀರಕಪುತ್ರ ಶ್ರೀನಿವಾಸ್ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅವರು ಒಂದು ವಿಡಿಯೋ ಮಾಡಿ ಹರಿಬಿಟ್ಟು ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಅದೇನೆಂದರೆ ಬಾಲಣ್ಣ ಅವರಿಗೆ ಈ ಆಸ್ತಿ ಪಿತ್ರಾರ್ಜಿತವಾಗಿ ಬಂದಿಲ್ಲ, ಅದನ್ನು ಸಹ ಸರ್ಕಾರದವರೇ ಕೊಟ್ಟಿರುವುದು. ಬಾಲಣ್ಣ ಕುಟುಂಬದ ಕಡೆಯವರು ಬೇಕೆಂದಲೇ ಈ ರೀತಿ ಕಿರಿಕ್ ಮಾಡುತ್ತಿದ್ದಾರೆ. ನಮಗೆಲ್ಲರಿಗೂ ವಿಷ್ಣು ಸ್ಮಾರಕ ಇಲ್ಲೇ ಆಗಬೇಕು ಎನ್ನುವ ಇಚ್ಛೆ ಇದೆ. ಅಕಸ್ಮಾತ್ ಅವರ ಸಮಾಧಿಯನ್ನು ತೆರೆವು ಮಾಡುತ್ತಾರೆ ಎಂದು ಹರಿದಾಡುತ್ತಿರುವ ವಿಷಯ ನಿಜ ಆದರೆ ಅಭಿಮಾನಿಗಳೆಲ್ಲ ಸೇರಿ ಇಲ್ಲೇ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವಿಷಯದ ಕುರಿತು ವಿಷ್ಣುವರ್ಧನ್ ಅವರ ಅಳಿಯ ಆಗಿರುವ ಅನಿರುದ್ಧ್ ಅವರು ಸಹ ವಿಡಿಯೋ ಒಂದನ್ನು ಮಾಡಿ ವಿಷ್ಣುವರ್ಧನ್ ಅವರ ಸ.ಮಾ.ಧಿ.ಯನ್ನು ತೆರೆವು ಮಾಡುತ್ತೇವೆ ಎಂದು ಮಾತನಾಡುತ್ತಿದ್ದಾರೆ. ನಮ್ಮ ಕುಟುಂಬದವರಿಗೆ ಅಭಿಮಾನ್ ಸ್ಟುಡಿಯೋದಲ್ಲಿಯೇ ಅವರ ಪುಣ್ಯಭೂಮಿ ಆಗಬೇಕು ಎಂದು ಆಸೆ ಇರುವುದು, ಈ ವಿಷಯದಲ್ಲಿ ನಾವು ಎಂದಿಗೂ ಅಭಿಮಾನಿಗಳ ಜೊತೆ ಇರುತ್ತೇವೆ ಎಂದು ಮಾತನಾಡಿದ್ದಾರೆ.
ಸಿನಿಮಾಗಳಲ್ಲಿ ಸ್ಟಾರ್ ಆಗಿದ್ದರು ಕೂಡ ಸಾ.ವಿ.ನ.ಲ್ಲೂ ನೆಮ್ಮದಿ ಕಾಣದ ಈ ದುರಂತ ನಾಯಕನ ಸ.ಮಾ.ಧಿ ವಿಚಾರದ ವಿವಾದ ಆದಷ್ಟು ಬೇಗ ಇತ್ಯಾರ್ಥವಾಗಲಿ, ಈ ವರ್ಷವಾದರೂ ಅವರ ಸ್ಮಾರಕ ಅಲ್ಲೇ ಆಗಲಿ ಎಂದು ಕನ್ನಾಡಿಭಿಮಾನಿಗಳೆಲ್ಲಾ ಕೇಳಿಕೊಳ್ಳೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ಉತ್ತರಿಸಿ.
https://youtu.be/QkemKyepoFo