ಪೂಜೆ ಮಾಡುವ ವಿಧಾನದ ಬಗ್ಗೆ ಪುರಾಣಗಳಲ್ಲಿ ತಿಳಿಸಲಾಗಿದೆ. ಋಷಿಮುನಿಗಳಿಂದ ಕೂಡ ಕೆಲ ಪೂಜಾ ವಿಧಾನಗಳು ವಿವರಿಸಲ್ಪಟ್ಟಿದೆ. ನಮ್ಮ ಮನೆಗಳಲ್ಲಿ ಮನೆ ಹಿರಿಯರು ಕೂಡ ಪೂಜೆ ಮಾಡುವಾಗ ಪಾಲಿಸಬೇಕಾದ ಅಥವಾ ದೇವಸ್ಥಾನಕ್ಕೆ ಹೋಗಿದ್ದಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಹೇಳಿ ಎಚ್ಚರಿಸುತ್ತಿರುತ್ತಾರೆ. ಹಾಗಾಗಿ ಹಿಂದುಗಳು ದೇವರ ಪೂಜೆ ಬಗ್ಗೆ ತಿಳಿದುಕೊಳ್ಳಲೇಬೇಕಾದ ಕೆಲ ಅಗತ್ಯ ನಿಯಮಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
● ಗಣೇಶನಿಗೆ ಪೂಜೆ ಮಾಡುವಾಗ ತುಳಸಿಯನ್ನು ಅರ್ಪಿಸಬಾರದು.
● ಅಮ್ಮನವರಿಗೆ ದೂರ್ವೇ ಅರ್ಪಿಸಬಾರದು
● ಶಿವಲಿಂಗಕ್ಕೆ ಕೇತಕಿಪುಷ್ಪ ಅರ್ಪಿಸಬಾರದು
● ಮಹಾವಿಷ್ಣುವಿಗೆ ಅಕ್ಷತೆಯ ತಿಲಕವನ್ನು ಇಡಬಾರದು
● ಒಂದೇ ಪೂಜೆ ಕೋಣೆಯಲ್ಲಿ ಎರಡು ಸಾಲಿಗ್ರಾಮ ಅಂದರೆ ಎರಡು ಶಂಖಗಳು ಇರಬಾರದು.
ಬಾತ್ರೂಮ್ ಟೈಲ್ಸ್ ನಲ್ಲಿರುವ ಹಳೆಯ ಕಲೆಗಳನ್ನು ತೆಗೆಯಲು ಈ ಸುಲಭ ಟೆಕ್ನಿಕ್ ಬಳಸಿ ಒಂದೇ ನಿಮಿಷದಲ್ಲಿ ಕಲೆ ಹೋಗುತ್ತೆ.!
● ಒಂದು ದೇವಸ್ಥಾನದಲ್ಲಿ ಮೂರು ಗಣೇಶ ವಿಗ್ರಹಗಳು ಇರಬಾರದು.
● ತುಳಸೀ ದಳಗಳನ್ನು ಹಲ್ಲಿನಿಂದ ಜಗಿದು ತಿನ್ನಬಾರದು
● ದೇವಸ್ಥಾನದ ಮುಖ್ಯದ್ವಾರದ ಎದುರುಗಡೆ ಚಪ್ಪಲಿ ಹಾಗೂ ಶೂಗಳನ್ನು ಬಿಡಬಾರದು, ದೇವಸ್ಥಾನದ ಕೆಳಗೆ ಕೂಡ ಈ ರೀತಿ ತಪ್ಪುಗಳನ್ನು ಮಾಡಬಾರದು.
● ದೇವರ ದರ್ಶನ ಮಾಡಿ ಹಿಂತಿರುಗುವ ಸಮಯದಲ್ಲಿ ಗಂಟೆ ಹೊಡೆಯಬಾರದು.
● ಆರತಿಯನ್ನು ಒಂದೇ ಕೈಯಿಂದ ತೆಗೆದುಕೊಳ್ಳಬಾರದು
● ಮನೆಯಲ್ಲಿ ಪೂಜಿಸುವ ಶಿವಲಿಂಗವು ಹೆಬ್ಬೆರಳಿಗಿಂತ ದೊಡ್ಡದಿರಬಾರದು.
● ಶಿವಲಿಂಗವನ್ನು ತುಳಸಿ ಗಿಡದ ಬಳಿ ಇಡಬಾರದು
● ಗರ್ಭಿಣಿಯರು ಶಿವಲಿಂಗವನ್ನು ಮುಟ್ಟಬಾರದು
● ದೇವಸ್ಥಾನದಲ್ಲಿ ಸ್ತ್ರೀಯರು ತೆಂಗಿನಕಾಯಿ ಒಡೆಯಬಾರದು
● ಕುಟುಂಬದಲ್ಲಿ ಸೂತಕ ಇದ್ದಾಗ ಪೂಜಿಸುವ ವಿಗ್ರಹಗಳನ್ನು ಮುಟ್ಟಬಾರದು.
ಸದಾ ಆರೋಗ್ಯವಾಗಿರಲು ಈ 15 ಅಭ್ಯಾಸಗಳನ್ನು ರೂಢಿಸಿಕೊಳ್ಳಿ.!
● ಶಿವನಿಗೆ ಪೂರ್ಣ ಪ್ರದಕ್ಷಿಣೆ ಬರಬಾರದು
● ಶಿವನ ಅಭಿಷೇಕದ ತೀರ್ಥ ಹರಿಯುತ್ತಿದ್ದರೆ ಅದನ್ನು ದಾಟಬಾರದು.
● ಒಂದು ಕೈಯಿಂದ ದೇವರಿಗೆ ನಮಸ್ಕರಿಸಬಾರದು
● ತೀರ್ಥ ತೆಗೆದುಕೊಳ್ಳುವಾಗ ಬಲಗೈ ಕೆಳಗಡೆ ಒಂದು ಕರವಸ್ತ್ರ ಅಥವಾ ನಾಪ್ಕಿನ್ ಆಗಲಿ ಇಟ್ಟುಕೊಳ್ಳಬೇಕು. ತೀರ್ಥದ ಒಂದು ಹನಿಯೂ ಕೂಡ ಕೆಳಗೆ ಬೀಳದಂತೆ ನೋಡಿಕೊಳ್ಳಬೇಕು.
● ನೀವು ಹಚ್ಚ ಬೇಕಾದ ದೀಪವನ್ನು ಬೇರೆಯವರು ಹಚ್ಚಿದ ದೀಪದಿಂದ ಹಚ್ಚಬಾರದು.
● ತೀರ್ಥವನ್ನು ಕುಡಿದ ಮೇಲೆ ಕೈಯನ್ನು ತಲೆಗೆ ಒರೆಸಿಕೊಳ್ಳಬಾರದು, ಶಿರದಲ್ಲಿ ಗಾಯತ್ರಿ ದೇವಿಯು ನೆಲೆಸಿರುತ್ತಾರೆ. ಅವರಿಗೆ ಅಪಮಾನವಾಗುತ್ತದೆ, ಅದರ ಬದಲು ಕಣ್ಣುಗಳಿಗೆ ಒತ್ತುಕೊಳ್ಳಬೇಕು.
● ದೇವರಿಗೆ ಹರಕೆ ಮಾಡಿಕೊಳ್ಳುವಾಗ ಅದು ಭಕ್ತಿಯಿಂದ ಇರಬೇಕೆ ಹೊರತು, ಲಂಚದ ರೀತಿ ಇರುವ ಹಣದ ಹರಕೆ ಹೊರಬಾರದು.
● ಸ್ತ್ರೀಯರು ಹನುಮಂತ ದೇವರು ಹಾಗೂ ಶನಿದೇವರ ವಿಗ್ರಹಗಳನ್ನು ಮುಟ್ಟಿ ನಮಸ್ಕರಿಸಬಾರದು.
ದೇಹದ ಅಂಗಾಂಗಗಳಿಂದ ನಮ್ಮ ಶುಭ ಹಾಗು ಅಶುಭ ಫಲಗಳ ಬಗ್ಗೆ, ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು.! ಹೇಗೆ ಅಂತ ನೋಡಿ.!
● ಅವಿವಾಹಿತ ಸ್ತ್ರೀಯರು ಹನುಮಂತ ದೇವರ ಹಾಗೂ ಶನಿದೇವರ ಕಾಲಿಗೆ ಬೀಳದೆ ನಿಂತುಕೊಂಡೇ ನಮಿಸಬೇಕು.
● ದೇವಸ್ಥಾನದ ಅಥವಾ ಪೂಜೆಕೋಣೆಯ ಆವರಣವನ್ನು ಯಾವಾಗಲೂ ಕ್ಲೀನ್ ಆಗಿ ಇಟ್ಟುಕೊಂಡಿರಬೇಕು.
● ದೇವಾಲಯದಲ್ಲಿ ಎಷ್ಟೇ ಜನಜಂಗುಳಿ ಇದ್ದರೂ ನಿಮ್ಮ ಗಮನ ದೇವರ ಮೇಲೆ ಇರಬೇಕು. ದೇವರ ನಾಮಸ್ಮರಣೆ ಮಾಡುತ್ತಾ ಸರದಿ ಸಾಲಿನಲ್ಲಿ ಮುಂದೆ ಹೋಗುತ್ತಿರಬೇಕು.
● ಭೈರವನ ದೇವಾಲಯ ಬಿಟ್ಟು ಉಳಿದ ಯಾವ ದೇವಾಲಯಕ್ಕೂ ಕೂಡ ಕುಡುಕರು ಪ್ರವೇಶ ಮಾಡಬಾರದು.
● ದೇವಾಲಯವನ್ನು ಪ್ರವೇಶಿಸುವಾಗ ಬಲಗಾಲಿಟ್ಟು ಪ್ರವೇಶ ಮಾಡಬೇಕು ಹಾಗೂ ದೇವಾಲಯದಿಂದ ಹೊರಗೆ ಹೋಗುವಾಗ ಎಡಗಾಲಿಟ್ಟು ಹೊರಗೆ ಬರಬೇಕು.
● ದೇವಸ್ಥಾನದಲ್ಲಿ ಗಂಟೆಯನ್ನು ಬಹಳ ಕರ್ಕಶವಾಗಿ ಬಾರಿಸಬಾರದು ಮತ್ತು ಅತಿ ಜೋರು ಧ್ವನಿಯಲ್ಲಿ ಕೂಡ ಗಂಟೆ ಶಬ್ದ ಮಾಡಬಾರದು.
ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ಬಿಚ್ಚಿಟ್ಟ ಸತ್ಯಾಂಶ
● ಸಾಧ್ಯವಾದಷ್ಟು ದೇವಸ್ಥಾನಕ್ಕೆ ಹೋಗಲು ಬೇರೆ ಬಟ್ಟೆಗಳನ್ನು ಇಟ್ಟುಕೊಳ್ಳಬೇಕು, ಅವುಗಳನ್ನು ದೇವಸ್ಥಾನಕ್ಕೆ ಹೋಗುವಾಗ ಮಾತ್ರ ಧರಿಸಬೇಕು.
● ದೇವಸ್ಥಾನವು ಬಹಳ ದೂರ ಇಲ್ಲದಿದ್ದರೆ ಶೂ ಅಥವಾ ಚಪ್ಪಲಿಗಳನ್ನು ಹಾಕದೆ ಹೋಗುವುದೇ ಒಳ್ಳೆಯದು.
● ದೇವರ ದರ್ಶನವನ್ನು ನಿಂತು ನೋಡಿದ ತಕ್ಷಣ ಹಾಗೆ ಹೊರಟು ಬಿಡಬಾರದು ಎರಡು ನಿಮಿಷಗಳ ಕಾಲ ದೇವಸ್ಥಾನದಲ್ಲಿ ಕುಳಿತಿದ್ದು ಭಗವಂತನ ದರ್ಶನದ ಮಾಧುರ್ಯವನ್ನು ಅನುಭವಿಸಬೇಕು.
● ಆರತಿ ತೆಗೆದುಕೊಂಡ ನಂತರ ಅಥವಾ ದೇವರ ದೀಪಗಳನ್ನು ಮುಟ್ಟಿದ ನಂತರ ಕೈ ತೊಳೆದುಕೊಳ್ಳಬೇಕು.