Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸಾಲ ತಗೊಂಡು ಹಣ ವಾಪಸ್ ಕೊಡ್ತಾ ಇಲ್ವಾ.? ಚಿಂತೆ ಬಿಡಿ ಈ ದೇವಿನಾ ಬೇಡಿಕೊಳ್ಳಿ ಸಾಕು ಸಾಲದ ರೂಪದಲ್ಲಿ ಕೊಟ್ಟ ಹಣ, ಒಡವೆ, ವಾಹನ ಏನೇ ಆದ್ರೂ ವಾಪಸ್ ಬರುತ್ತೆ.!

Posted on May 27, 2023February 10, 2025 By Kannada Trend News No Comments on ಸಾಲ ತಗೊಂಡು ಹಣ ವಾಪಸ್ ಕೊಡ್ತಾ ಇಲ್ವಾ.? ಚಿಂತೆ ಬಿಡಿ ಈ ದೇವಿನಾ ಬೇಡಿಕೊಳ್ಳಿ ಸಾಕು ಸಾಲದ ರೂಪದಲ್ಲಿ ಕೊಟ್ಟ ಹಣ, ಒಡವೆ, ವಾಹನ ಏನೇ ಆದ್ರೂ ವಾಪಸ್ ಬರುತ್ತೆ.!

 

ನಮ್ಮಲ್ಲಿ ಹಲವು ಜನರು ಕಷ್ಟ ಎಂದು ಸಹಾಯ ಬೇಡಿಕೊಂಡು ಬಂದವರಿಗೆ ತಮ್ಮ ಬಳಿ ಇರುವ ಹಣ ಒಡವೆಯನ್ನು ಹಿಂದು ಮುಂದು ನೋಡದೆ ಕೊಟ್ಟುಬಿಡುತ್ತಾರೆ. ಆದರೆ ಸಹಾಯ ತೆಗೆದುಕೊಂಡವರು ನಂತರ ದಿನಗಳಲ್ಲಿ ಅವರನ್ನು ಮರೆತು, ಅವರಿಂದ ಪಡೆದ ಹಣ ಹಾಗೂ ಒಡವೆಯನ್ನು ಕೂಡ ಹಿಂತಿರುಗಿಸದೆ ವಂಚನೆ ಮಾಡುತ್ತಾರೆ. ಈ ರೀತಿ ಮೋಸ ಹೋದವರು ಕೆಲವೊಮ್ಮೆ ಇದಕ್ಕೆ ಸಾಕ್ಷ್ಯಾಧಾರಗಳಿಲ್ಲದೆ ನ್ಯಾಯ ಪಡೆಯಲಾಗುವುದಿಲ್ಲ.

 

ಆದರೆ ಇದಕ್ಕಾಗಿಯೇ ನಮ್ಮ ಭಾರತ ದೇಶದಲ್ಲಿ ಒಂದು ದೇವಾಲಯ ಇದೆ. ಇಲ್ಲಿರುವ ಶಕ್ತಿ ದೇವಿ ಈ ರೀತಿ ಮೋಸ ಹೋದವರನ್ನು ಕಾಯುವ ಜಗನ್ಮಾತೆಯಾಗಿ ಪವಾಡ ಸೃಷ್ಟಿಸುತ್ತಿದ್ದಾರೆ. ಆ ದೇವಾಲಯ ಹಾಗೂ ಶಕ್ತಿಯ ಬಗ್ಗೆ ಇಂದು ಈ ಅಂಕಣದಲ್ಲಿ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಮ್ಮ ಪಕ್ಕದ ರಾಜ್ಯ ದೇವಾಲಯಗಳ ತೊಟ್ಟಿಲು ಎಂದು ಕರೆಸಿಕೊಂಡಿರುವ ಮಧುರೈ ಮೀನಾಕ್ಷಿ ದೇವಸ್ಥಾನದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.

ಪುರಾಣ ಹಾಗೂ ಇತಿಹಾಸದಲ್ಲಿ ಈ ದೇವಸ್ಥಾನದ ಬಗ್ಗೆ ಉಲ್ಲೇಖವು ಇದೆ. ಆದರೆ ಇಲ್ಲಿ ನಡೆಯುವ ಪವಾಡದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಅದೇನೆಂದರೆ ಜೀವನದಲ್ಲಿ ಯಾರು ಬೇರೆಯವರಿಗೆ ಹಣ ಹಾಗೂ ಒಡವೆ ಸಹಾಯ ಮಾಡಿ ಮೋಸ ಆಗುತ್ತಿರುತ್ತಾರೋ ಅವರು ಈ ದೇವಸ್ಥಾನಕ್ಕೆ ಬಂದು ದೇವಾಲಯದ ಹುಂಡಿಯಲ್ಲಿ ತಮಗಾದ ವಂಚನೆ ಬಗ್ಗೆ ಚೀಟಿ ಬರೆದು ಹಾಕಿದರೆ ಈ ರೀತಿ ಬರೆದು ಹಾಕಿದ ಕಡಿಮೆ ಸಮಯದಲ್ಲಿ ಅವರಿಗೆ ಅದಕ್ಕೆ ಪರಿಹಾರ ಸಿಗುತ್ತದೆ ಇದಕ್ಕೆ ಸಾಕ್ಷಿಯಾಗಿ ನಡೆದ ಒಂದು ಘಟನೆ ಬಗ್ಗೆ ಕೂಡ ಈ ಲೇಖನದಲ್ಲಿ ಹೇಳುತ್ತಿದ್ದೇವೆ.

ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ ನಟಸ್ವರ ಎನ್ನುವ ಒಬ್ಬಾತ ಎರಡು ನಾಣ್ಯಗಳಿಗೆ ಈ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ, ಬಹಳ ಕಷ್ಟಪಟ್ಟು ಕೂಡಿಟ್ಟಿದ್ದ ತನ್ನ ಹಣವನ್ನು ಸಂಬಂಧಿಕರಿಗೆ ಕೊಟ್ಟು ಮೋಸ ಹೋಗಿದ್ದ. ನಂತರ ಆತನಿಗೆ ಏನು ಮಾಡಬೇಕು ಎಂದು ತೋಚದೆ ದುಃಖದಲ್ಲಿದ್ದಾಗ ಕನಸಿನಲ್ಲಿ ಸಾಕ್ಷಾತ್ ಮೀನಾಕ್ಷಿ ತಾಯಿಯೇ ಬಂದು ನಿನ್ನ ದುಃಖವನ್ನೆಲ್ಲಾ ಚೀಟಿ ಬರೆದು ಹುಂಡಿಯಲ್ಲಿ ಹಾಕು ಎಂದು ಹೇಳಿದರಂತೆ.

ಆ ರೀತಿ ಬರೆದು ಹಾಕಿದ ಮರುದಿನವೇ ನಟಸ್ವರನಿಗೆ ಆ ರಾಜ್ಯದ ರಾಜರ ಆಸ್ಥಾನದಲ್ಲಿ ಕೆಲಸ ದೊರೆಯಿತು ಅಲ್ಲಿಗೆ ಸಿಗುತ್ತಿದ್ದ ಪಗಾರ ದೇವಸ್ಥಾನದಲ್ಲಿ ಸಿಗುತ್ತಿದ್ದ ಸಂಬಳಕ್ಕಿಂತ 100 ಪಟ್ಟು ಹೆಚ್ಚು. ಈ ರೀತಿ ಪವಾಡ ರೀತಿಯಲ್ಲಿ ಮೀನಾಕ್ಷಿ ದೇವಿಯು ನಟಸ್ವರನ ಸಮಸ್ಯೆ ಪರಿಹಾರ ಮಾಡಿದ್ದರು. ಅಂದಿನಿಂದ ಈ ಚೀಟಿ ಹಾಕುವ ಪ್ರತೀತಿ ಬೆಳೆದು ಬಂತು.

ಈ ದೇವಸ್ಥಾನದ ಪ್ರಧಾನ ಅರ್ಚಕರ ಕನಸಿನಲ್ಲಿ ಮಧುರೈ ಮೀನಾಕ್ಷಿ ತಾಯಿಯೂ ಕಾಣಿಸಿಕೊಂಡು ತನ್ನ ಭಕ್ತರು ಇನ್ನು ಮುಂದೆ ಇದೇ ರೀತಿ ಹುಂಡಿಯಲ್ಲಿ ಚೀಟಿಗಳನ್ನು ಬರೆದು ಹಾಕುತ್ತಾರೆ. ಅದರಲ್ಲಿ ಅವರ ಕಷ್ಟಗಳನ್ನು ಬರೆದಿರುತ್ತಾರೆ. ಯಾವುದೇ ಕಾರಣಕ್ಕೂ ಇದನ್ನು ಯಾರು ಓದಬಾರದು ಎಂದು ಪ್ರಮಾಣ ಮಾಡಿಸಿಕೊಂಡಿದ್ದರಂತೆ.

ಆದ್ದರಿಂದ ಈ ದೇವಸ್ಥಾನದಲ್ಲಿ ಇಂದಿಗೂ ಸಹ ಚೀಟಿ ಹಾಕುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಇಲ್ಲಿಗೆ ಬಂದ ಬಹುತೇಕ ಎಲ್ಲಾ ಭಕ್ತಾದಿಗಳು ಕೂಡ ಚೀಟಿ ಹಾಕಿದ ಕೆಲವೇ ಸಮಯದಲ್ಲಿ ಪರಿಹಾರವೂ ದೊರೆತಿರುವುದಕ್ಕೆ ಸಾಕ್ಷಿ ಇದೆ. ಇಂತಹ ಪ್ರಭಾವವುಳ್ಳ ಈ ತಾಯಿಯ ಸನ್ನಿಧಾನಕ್ಕೆ ನೀವು ಕೂಡ ತಪ್ಪದೇ ನೀಡಿ ಅಮ್ಮನ ಕೃಪೆಗೆ ಪಾತ್ರರಾಗಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

 

Devotional
WhatsApp Group Join Now
Telegram Group Join Now

Post navigation

Previous Post: ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 2,000 ಸಹಾಯಧನ ಪಡೆಯಬೇಕು ಎಂದರೆ ನೀವು ಈ ಕಾರ್ಡನ್ನು ಹೊಂದಿರಲೇಬೇಕು.;
Next Post: ನಾಳೆಯಿಂದ 21 ವರ್ಷದವರೆಗೆ ಈ 3 ರಾಶಿಯವರಿಗೆ ಗಜಕೇಸರಿ ಯೋಗ, ಮುಟ್ಟಿದ್ದೆಲ್ಲ ಚಿನ್ನವಾಗುವಂತಹ ಕಾಲ ಬಂದಿದೆ ಆ ಅದೃಷ್ಟವಂತ ರಾಶಿ ಯಾವುದು ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore