ನೇಮ್ ಮಾಡುವುದು ಸುಲಭ ಆದರೆ ಅದನ್ನು ಹಾಗೆ ಕಾಪಾಡಿಕೊಳ್ಳುವುದು ಬಹಳ ಕಷ್ಟ. ಅದೇ ರೀತಿ ಆಗಿದೆ ಹಲವು ಸೆಲೆಬ್ರಿಟಿಗಳ ಪರಿಸ್ಥಿತಿ. ನಟ ಅಥವಾ ನಟಿಯರು ಫೇಮಸ್ ಆದ ಮೇಲೆ ವಿವಾದಗಳು ಆಗಿಬಿಟ್ಟರೆ ಅವರ ಕೆರಿಯರ್ ಹಾಳಾದಂತೆ ಲೆಕ್ಕ. ಈಗ ಅದೇ ಭಯದಲ್ಲಿ ಇದ್ದಾರೆ ಕಿಚ್ಚನ ಜೊತೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ಎಕ್ಕಸಕ್ಕ ಎಂದು ಕುಳಿತಿದ್ದ ರಕ್ಕಮ್ಮನ ಪರಿಸ್ಥಿತಿ.
ಈಕೆಯ ನಿಜವಾದ ಹೆಸರು ಜಾಕ್ವೆಲಿನ್ ಫೆರ್ನಾಂಡಿಸ್. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಇವರು ಅಲ್ಲಿ ಬಹಳ ಬೇಡಿಕೆಯ ನಟಿ. ದಕ್ಷಿಣ ಭಾರತದಲ್ಲಿ ಕೂಡ ತನ್ನ ಝಲಕ್ ತೋರಿರುವ ಈಕೆ ತಮಿಳು ತೆಲುಗು ಮಲಯಾಳಂ ಮತ್ತು ಕನ್ನಡ ಸಿನಿಮಾಗಳನ್ನು ಸಹ ಐಟಂ ಹಾಡಿಗಾಗಿ ಬಹಳ ಬೇಡಿಕೆಯಲ್ಲಿ ಇದ್ದಾರೆ. ಆದರೆ ಇವರು ಮಾಡಿಕೊಂಡ ಒಂದೇ ಒಂದು ಎಡವಟ್ಟಿನಿಂದ ಈಗ ತೀರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಾಕ್ವೆಲಿನ್ ಫೆರ್ನಾಂಡಿಸ್ ಅವರನ್ನು ಈ ಪರಿಸ್ಥಿತಿಗೆ ತಂದದ್ದು ಒಬ್ಬ ಕನ್ನಡಿಗ ಎನ್ನುವುದೇ ಬಹಳ ಬೇಸರದ ವಿಷಯ. ಸುಖೇಂದ್ರ ಚಂದ್ರಶೇಖರ್ ಎನ್ನುವ ವಂಚಕನ ಬಗ್ಗೆ ಕರ್ನಾಟಕದ ಎಲ್ಲರಿಗೂ ತಿಳಿದಿದೆ. ಬಹುಕೋಟಿ ವಂಚನೆಯ ಆರೋಪಿ ಆಗಿರುವ ಸುಖೇಂದ್ರ ಚಂದ್ರಶೇಖರ್ ಅವರು ಜಾಕ್ವೆಲಿನ್ ಫೆರ್ನಾಂಡಿಸ್ ಸೇರಿದಂತೆ ಹಲವು ನಟಿಯರ ಜೊತೆ ಸಂಪರ್ಕದಲ್ಲಿ ಇದ್ದರು. ಈಗ ಇವರಿಬ್ಬರ ನಡುವೆ ಸ್ನೇಹದ ಕಾರಣದಿಂದ ಜಾಕ್ವೆಲಿನ್ ಸಹ ಕೋರ್ಟ್ ಮೆಟ್ಟಿಲು ಏರುವಂತೆ ಮಾಡಿದೆ.
ಇಷ್ಟಕ್ಕೆ ಸುಮ್ಮನಾಗದೆ ಪದೇ ಪದೇ ಬೀಡಿಯಿಂದ ತನಿಖೆ ಮತ್ತು ಕೋರ್ಟ್ ಅಲ್ಲಿ ಹೇಳಿಕೆ ಮುಂತಾದ ವಿಷಯಗಳಿಂದ ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡು ಕೋರ್ಟು ಕಛೇರಿ ಅಲೆಯುವಂತೆ ಆಗಿದೆ. ಈ ಬಗ್ಗೆ ಬಹಳ ಬೇಸರ ಮಾಡಿಕೊಂಡಿರುವ ಜಾಕುಲಿನ್ ಫೆರ್ನಾಂಡಿಸ್ ಅವರು ಇಂದು ಆ ವಿಷಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ.
ನಾನು ಆ ಮನುಷ್ಯನನ್ನು ಬಹಳವಾಗಿ ನಂಬಿದ್ದೆ ಆತನಿಗಾಗಿ ಎಲ್ಲವನ್ನು ಅರ್ಪಿಸಿದ್ದೆ ಆತ ನನ್ನನ್ನು ಬಳಸಿಕೊಂಡು ಈಗ ಬದುಕನ್ನು ನರಕ ಆಗುವಂತೆ ಮಾಡಿ ಬಿಟ್ಟಿದ್ದಾನೆ ಎಂದು ಕಣ್ಣೀರಿಟ್ಟುಕೊಂಡು ಹೇಳಿಕೆ ನೀಡಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸುಖೇಂದ್ರ ಚಂದ್ರಶೇಖರ್ ಅವರ ಸ್ನೇಹ ಆಗಿದ್ದು ಪಿಂಕಿ ಇರಾನಿ ಎನ್ನುವರಿಂದ. ಆದರೆ ಅಸಲಿಗೆ ಪಿಂಕಿ ಇರಾನಿ ಅವರೇ ಜಾಕ್ವೆಲಿನ್ ಗೆ ಮೋಸ ಮಾಡಿರುವುದು.
ಯಾಕೆಂದರೆ ಪಿಂಕಿ ಇರಾನಿ ಅವರು ತಾವು ಕೊಡುತ್ತಿರುವುದು ಎಂದು ಹೇಳಿಕೊಂಡು ಸುಖೇಂದ್ರ ಚಂದ್ರಶೇಖರ್ ಕೊಡುತ್ತಿದ್ದ ಬಹಳ ದುಬಾರಿ ಬೆಲೆಯ ಉಡುಗೊರೆಗಳನ್ನು ಜಾಕ್ವೆಲಿನ್ ಅವರಿಗೆ ಕೊಟ್ಟಿದ್ದಾರೆ, ಪ್ರತಿ ಬಾರಿ ಕೂಡ ಅವರು ಅವರೇ ಕೊಡುತ್ತಿರುವುದಾಗಿ ಹೇಳಿ ಮೋಸ ಮಾಡಿ ಕೊಟ್ಟಿದ್ದಾರೆ. ಇದೆಲ್ಲವನ್ನು ಕೊಟ್ಟಿರುವ ಕಾರಣ ಈಗ ಸುಖೇಂದ್ರ ಅವರು ಅರೆಸ್ಟ್ ಆಗಿರುವುದರಿಂದ ಅವರಿಗೂ ತಟ್ಟುತ್ತಿದೆ.
ಒಂದು ಕಡೆ ಉತ್ತಮವಾಗಿ ಕೆರಿಯರ್ ನಡೆಯುತ್ತಿತ್ತು ಕೈ ತುಂಬಾ ಕೆಲಸ ಇತ್ತು ಈಗ ಈಕೆಯ ಈ ವಿವಾದದಿಂದಾಗಿ ಇವರ ಒಪ್ಪಿಕೊಂಡಿದ್ದ ಪ್ರಾಜೆಕ್ಟ್ ಗಳಿಂದ ಇವರನ್ನು ಕೈ ಬಿಡುವಂತಾಗಿದೆ. ಪದೇ ಪದೇ ವಿಚಾರಣೆಯಿಂದ ಹೇಳಿಕೆಗಳಗ ಕೊಡುವುದರಿಂದ ಜಾಕ್ವೆಲಿನ್ ಬೇಸತ್ತು ಹೋಗಿದ್ದಾರೆ. ಇದರ ಬಗ್ಗೆ ಅವರೇ ಹೇಳಿಕೆ ನೀಡಿರುವುದು ಅವರ ನೋವು ಎಷ್ಟಿದೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿದೆ. ಆದಷ್ಟು ಬೇಗ ಜಾಕ್ವೆಲಿನ್ ಈ ಎಲ್ಲ ವಿವಾದಗಳಿಂದ ಹೊರಬಂದು ಮೊದಲಿನಂತಾಗಲಿ ಮತ್ತೊಮ್ಮೆ ಮಗದೊಮ್ಮೆ ಕನ್ನಡಿಗರನ್ನು ಮನರಂಜಿಸುವಂತೆ ಆಗಲಿ ಎಂದು ಹಾರೈಸೋಣ.