ನಾನು ಲೈಂಗಿಕ ಕಿರುಕುಳ ಅನುಭವಿಸಿದ್ದೆ, ತಾಯಿಗೆ ಹೇಳಿದರು ಪ್ರಯೋಜನವಾಗಲಿಲ್ಲ ಎನ್ನುವ ಶಾ-ಕಿಂಗ್ ಹೇಳಿಕೆ ನೀಡಿದ ಖುಷ್ಬೂ ಸುಂದರ್ ಪಂಚ ಬಾಷ ನಟಿ ಖುಷ್ಬು ಅವರು ತಮ್ಮ ಜೀವನದಲ್ಲಾದ ಒಂದು ಕಹಿ ಬಗ್ಗೆ ಈಗ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಸಿನಿಮಾ ನಟನೆ ಜೊತೆ ರಾಜಕೀಯದಲ್ಲೂ ಕೂಡ ಬಹಳ ಸಕ್ರಿಯ ರಾಗಿರುವ ಇವರು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ನಂತರ ಎರಡು ವರ್ಷಗಳ ಹಿಂದೆ ಬಿಜೆಪಿಗೆ ಪಕ್ಷಾಂತರ ಆಗಿರುವ ಇವರಿಗೆ ನ್ಯಾಷನಲ್ ವುಮೆನ್ ಕಮಿಷನ್ ಸದಸ್ಯೆ ಆಗಿ ಬಡ್ತಿ ಸಿಕ್ಕಿದೆ.
ಈ ಸಂದರ್ಭದಲ್ಲಿ ಅವರು ನೀಡಿದ ಸಂದರ್ಶನದಲ್ಲಿ ಸ್ವಂತ ತಂದೆಯಿಂದ ಲೈಂಗಿಕ ಕಿರುಕುಳ ಆಗಿತ್ತು ಎನ್ನುವ ಶಾ’ಕಿಂ’ಗ್ ಹೇಳಿಕೆಯನ್ನು ನೀಡಿದ್ದಾರೆ. ಅದರ ಬಗ್ಗೆಯೇ ಈಗ ದೇಶದಾದ್ಯಂತ ಚರ್ಚೆ ಜೋರಾಗಿ ನಡೆಯುತ್ತಿದೆ ಅಷ್ಟಕ್ಕೂ ಖುಷ್ಬೂ ಬದುಕಿನಲ್ಲಿ ಆಗಿದ್ದು ಏನು ಗೊತ್ತಾ? ಖುಷ್ಬೂ ಅವರು ಸಹ ಎಲ್ಲರಂತೆ ಸಾಮಾನ್ಯ ಕುಟುಂಬದಲ್ಲಿ ಬೆಳೆದವರು. ಅವರ ತಾಯಿ ಪತಿಯೇ ಪರ ದೈವ ಎಂದು ನಂಬಿದವರು.
ಆದರೆ ಅವರ ತಂದೆ ಆ ರೀತಿ ಇರಲಿಲ್ಲವಂತೆ. ಕುಡಿಯುವುದು, ಕುಡಿದು ಹೆಂಡತಿಯ ಮೇಲೆ ಹ.ಲ್ಲೆ ಮಾಡುವುದು, ಮಕ್ಕಳಿಗೆ ಹಿಂಸೆ ಕೊಡುವುದು, ಮಡದಿ ಮತ್ತು ಮಕ್ಕಳಿಗೆ ಕೆಟ್ಟ ಮಾತಿನಲ್ಲಿ ಬಯ್ಯುವುದು ಇದೆಲ್ಲ ತನ್ನ ಜನ್ಮ ಸಿದ್ಧ ಹಕ್ಕು ಎಂದುಕೊಂಡಿದ್ದರಂತೆ. ಇಷ್ಟಾದರೂ ಪರವಾಗಿಲ್ಲ ಎಂಟು ವರ್ಷದ ಬಾಲಕಿ ಆಗಿದ್ದಾಗಲೇ ಖುಷ್ಬೂ ಅವರ ಮೇಲೆ ತಂದೆಯ ಕೆಟ್ಟ ದೃಷ್ಟಿ ಬಿದ್ದಿತ್ತಂತೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಆ ವಯಸ್ಸಿಗೆ ಸ್ವಂತ ತಂದೆಯಿಂದಲೇ ನಾನು ನೋವು ತಿಂದಿದ್ದೆ ಎನ್ನುವುದನ್ನು ಖುಷ್ಬೂ ಅವರು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಆಗಲೇ ತಾಯಿಗೆ ತಿಳಿಸಿದರು ಅದನ್ನು ಅವರು ನಂಬುವ ಪರಿಸ್ಥಿತಿಯಲ್ಲಿ ಇರಲಿಲ್ಲ ಎಂದು ಸಹ ಹೇಳಿದ್ದಾರೆ. ನಂತರ ತಂದೆಯನ್ನು ಎದುರಿಸುವ ಶಕ್ತಿ ನನಗೆ 15ನೇ ವಯಸ್ಸಿಗೆ ಬಂದಿತ್ತು, ಆದರೆ ನನಗೆ 16 ವಯಸ್ಸಿದ್ದಾಗ ಅವರು ತೀರಿಕೊಂಡರು ನಂತರ ನಾವು ಪಟ್ಟ ಪಾಡು ಅಷ್ಟಿಷ್ಟಲ್ಲ ಎಂದು ಹೇಳಿಕೊಂಡಿದ್ದಾರೆ. ಅವರ ಮಾತಿನ ಉದ್ದೇಶ ಮಹಿಳೆಯರು ಹೇಗೆ? ತಮ್ಮ ಹಕ್ಕುಗಳ ಬಗ್ಗೆ ಧೈರ್ಯವಾಗಿ ಮಾತನಾಡಬೇಕು.
ಮತ್ತು ಬದುಕಿನಲ್ಲಿ ಸಮಸ್ಯೆ ಬಂದಾಗ ಹೆದರಿ ಹಿಂದಕ್ಕೆ ಓಡದೆ ಅಥವಾ ಮತ್ತೊಬ್ಬರ ಮೇಲೆ ಅವಲಂಬಿತರಾಗದೆ ಅದನ್ನು ಎದುರಿಸುವ ಶಕ್ತಿ ಹೇಗೆ ಪಡೆದುಕೊಳ್ಳಬೇಕು ಎನ್ನುವುದನ್ನು ಹೇಳುವ ಬರದಲ್ಲಿ ತಮ್ಮ ಜೀವನದಲ್ಲಾದ ಕಹಿ ಘಟನೆ ಉದಾಹರಣೆಯೊಂದಿಗೆ ಹೇಳಿದ್ದಾರೆ. ಹೆಣ್ಣು ಮಕ್ಕಳು ವಿದ್ಯಾಂತರಾಗದೆ ಹೋದರೆ ಆರ್ಥಿಕವಾಗಿ ಸದೃಢವಾಗದೆ ಹೋದರೆ ಈ ರೀತಿ ಪದೇ ಪದೇ ಪುರುಷ ಪ್ರಧಾನ ಸಮಾಜದಿಂದ ದೌರ್ಜನ್ಯ ಎದುರಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ಹೇಳುವುದು ಅವರ ಆಶಯವಾಗಿತ್ತು ಎನಿಸುತ್ತದೆ.
ನಂತರ ಅಂತಹ ಪರಿಸ್ಥಿತಿಯಿಂದ ಹೊರಬಂದ ಈಕೆ ಇಂದು ದೇಶ ಮಟ್ಟದಲ್ಲಿ ಗುರುತಿಸಿಕೊಳ್ಳುವಷ್ಟು ಜನಪ್ರಿಯತೆ ಪಡೆದುಕೊಂಡಿದ್ದು ಒಂದು ಸಾಧನೆಯೇ ಸರಿ. ಹಿಂದಿ ಸಿನಿಮಾರಂಗ ದತ್ತ ವಲಸೆ ಬಂದ ಇವರು ಬಾಲ ನಟಿಯಾಗಿ ಗುರುತಿಸಿಕೊಂಡು, ನಂತರ ನಿಧಾನವಾಗಿ ನಾಯಕನಟಿಯಾಗಿ ಕಾಣಿಸಿಕೊಳ್ಳಲು ಶುರು ಮಾಡಿದರು. ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಖುಷ್ಬು ಅವರು ಕನ್ನಡ ಸಿನಿಮಾದಲ್ಲೂ ಕೂಡ.
ರವಿಚಂದ್ರನ್ ವಿಷ್ಣುವರ್ಧನ್ ಅಂಬರೀಶ್ ರಮೇಶ್ ಅರವಿಂದ್ ಅವರೊಂದಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ನಟನಾ ಲೋಕದಲ್ಲಿ ತನ್ನದೇ ಆದ ಛಾಪು ಮಾಡಿಸಿರುವ ಈಕೆ ವೈಯುಕ್ತಿಕ ಜೀವನದಲ್ಲೂ ಕೂಡ ಸುಂದರ್ ಎನ್ನುವ ತಮಿಳು ನಿರ್ದೇಶಕರನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದು ಸಂತಸದಿಂದ ಇದ್ದಾರೆ. ಈಗ ರಾಜಕೀಯ ಪ್ರವೇಶ ಮಾಡಿ ಹೊಸದೊಂದು ಅಲೆ ತರುವ ಭರವಸೆಯಲ್ಲಿದ್ದಾರೆ.