ಕನ್ನಡದ ಕಿರುತೆರೆ ನಟಿ ಸುಷ್ಮಾ ರಾವ್ ಬಗ್ಗೆ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಗೊತ್ತು. ಧಾರವಾಹಿ ಜಗತ್ತು ಶುರುವಾದ ದಿನದಿಂದಲೂ ಕೂಡ ಸುಷ್ಮಾ ರಾವ್ ಅವರನ್ನು ನಾವು ಟಿವಿಯಲ್ಲಿ ನೋಡುತ್ತಾ ಬಂದಿದ್ದೇವೆ.
ಧಾರಾವಾಹಿಗಳಲ್ಲಿ ಕಣ್ಣೀರಿನ ಕಥೆಗಳಿಗೆ ನಾಯಕಿಯಾಗಿ ವಾರಾಂತ್ಯದಲ್ಲಿ ಬರುವ ಮನೋರಂಜನೆ ಕಾರ್ಯಕ್ರಮಗಳಿಗೆ ಅಪ್ಪಟ ಕನ್ನಡದಲ್ಲಿ ನಿರೂಪಣೆ ಮಾಡುವ ಆಂಕರ್ ಆಗಿ ತಮ್ಮ ಲವಲವಿಕೆ ನಗುವಿಂದಲೇ ಗುರುತಿಸಿಕೊಂಡಿರುವ ಸುಷ್ಮಾ ಈಗ ಕಲರ್ಸ್ ಕನ್ನಡ ವಾಹಿನಿಯ ನಂಬರ್ ಒನ್ ಧಾರವಾಹಿ ಭಾಗ್ಯಲಕ್ಷ್ಮಿ ಯಲ್ಲಿ ಭಾಗ್ಯ ಪಾತ್ರಧಾರಿಯಾಗಿ ಕೂಡ ಎಲ್ಲರ ಮನ ಗೆದ್ದಿದ್ದಾರೆ. ಇಷ್ಟೆಲ್ಲಾ ಸಕ್ಸಸ್ ಇದ್ದರೂ ವೈಯಕ್ತಿಕ ಜೀವನದಲ್ಲಿ ಮಾತ್ರ ನಟಿ ಬದುಕಿನಲ್ಲಿ ನಡೆಯಬಾರದೆಲ್ಲ ನಡೆದು ಹೋಗಿದೆ.
ಹತ್ತು ವರ್ಷಗಳ ಕಾಲ ಕಿರುತೆರೆಯಿಂದ ದೂರ ಉಳಿದಿದ್ದ ಸುಷ್ಮಾ ರವರು ಈಗ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿ ಯಾವುದೇ ಸ್ಯಾಂಡಲ್ವುಡ್ ಹೀರೋಯಿನ್ಗೂ ಕಡಿಮೆ ಇಲ್ಲದಂತೆ ಕ್ರೇಜ್ ಉಳಿಸಿಕೊಂಡಿದ್ದಾರೆ. ಹಾಗಾಗಿ ಮತ್ತೊಮ್ಮೆ ಸುಷ್ಮಾ ಅವರ ವೈಯಕ್ತಿಕ ಜೀವನದ ವಿಚಾರ ಚರ್ಚೆಯಲ್ಲಿದೆ.
ಈ ಸುದ್ದಿ ಓದಿ:-ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!
ಸುಷ್ಮಾ ಅವರ ಪತಿ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ 10 ವರ್ಷಕ್ಕಿಂತ ಹೆಚ್ಚು ಕಾಲ ಪ್ರೀತಿಸಿ ಮದುವೆ ಆಗಿದ್ದರು ಸುಷ್ಮಾ ಅವರನ್ನು ಒಬ್ಬಂಟಿ ಮಾಡಿರುವ ವ್ಯಕ್ತಿ ಯಾರು ಎಂದು ಎಲ್ಲರಿಗೂ ಪ್ರಶ್ನೆ ಇದೆ. ಇಡೀ ಕರ್ನಾಟಕಕ್ಕೆ ಪರಿಚಯ ಇರುವ ವ್ಯಕ್ತಿಯೇ ಇವರು, ಇವರು ಪ್ರೀತಿಸಿದ ವ್ಯಕ್ತಿಯನ್ನೇ ಅಗ್ನಿ ಸಾಕ್ಷಿಯಾಗಿ ಕೈ ಹಿಡಿದಿದ್ದರೂ ನಟಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.
ಮಲೆನಾಡ ಹುಡುಗಿ ಸುಷ್ಮಾ ಅವರು ಅಪ್ಪನ ಮುದ್ದುಮಗಳು, ಆರ್ಮಿ ಆಫೀಸರ್ ಆಗಿದ್ದ ತಂದೆ ಮಗಳ ಇಚ್ಛೆಯಂತೆ ಬೆಳೆಸಿದರು. ಆಕೆ ಆಯ್ದುಕೊಂಡಿದ್ದು ಕಲೆಯನ್ನು. ಭರತನಾಟ್ಯ ಮತ್ತು ನಟನೆಯಲ್ಲಿ ಸಾಧನೆ ಮಾಡಿರುವ ಸುಷ್ಮಾ ಅವರು ಗುಪ್ತಗಾಮಿನಿ ಧಾರಾವಾಹಿಯಿಂದಲೂ ಕನ್ನಡಿಗರಿಗೆ ಪರಿಚಿತರು 2002ರಲ್ಲಿ ತಮ್ಮ ಬಹುಕಾಲದ ಗೆಳೆಯ ಪ್ರೀತಂ ಗುಬ್ಬಿ ಅವರನ್ನು ಸುಷ್ಮಾ ಅವರ ಕೈ ಹಿಡಿದರು.
ಈ ಪ್ರೀತಂ ಗುಬ್ಬಿ ಬೇರೆ ಯಾರು ಅಲ್ಲ ಕನ್ನಡ ಚಿತ್ರರಂಗದಲ್ಲಿ ಎಂದು ಅಳಿಸಲಾಗದ ಇತಿಹಾಸ ಸೃಷ್ಟಿಸಲು ಮುಂಗಾರು ಮಳೆ ಸಿನಿಮಾದ ಕಥೆ ಬರೆದ ನಾಯಕ. ಮುಂಗಾರು ಮಳೆ ಗಾಳಿಪಟ ಇತ್ಯಾದಿಯಾಗಿ ಅನೇಕ ಸೂಪರ್ ಹಿಟ್ ಸಿನಿಮಾಗಳಿಗೆ ಕಥೆಗಾರರಾಗಿರುವ ಇವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಆತ್ಮೀಯರು ಕೂಡ.
ಈ ಸುದ್ದಿ ಓದಿ:-ನಿಮ್ಮ ರಾಶಿ ಪ್ರಕಾರವಾಗಿ ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಿ ಎಂದು ತಿಳಿಯಿರಿ.!
ಸುಷ್ಮಾ ಪ್ರೀತಂ ನಡುವೆ ಹತ್ತಾರು ವರ್ಷಗಳ ಪರಿಚಯವಿತ್ತು ಪ್ರೀತಿ ಬಹಳ ಗಟ್ಟಿಯಾಗಿತ್ತು, ಇದೇ ನಂಬುಗೆಯಿಂದ ದಿಟ್ಟ ಹುಡುಗಿ ಸುಷ್ಮಾ ಅವರು ಪ್ರೀತಂ ಕೈ ಹಿಡಿದರು ಆದರೆ ಮದುವೆ ನಂತರ ಬಂದ ಸಣ್ಣ ಪುಟ್ಟ ಮ’ನ’ಸ್ತಾ’ಪ’ಗಳು ಎಂದು ಇಬ್ಬರ ತೀರವನ್ನು ದೂರವಾಗಿಸಿದೆ.
ಇದರ ನಡುವೆ ಕಳೆದ ಒಂದು ದಶಕದಲ್ಲಿ ನಟಿ ಬದುಕಿನಲ್ಲಿ ಸಾಲು ಸಾಲು ದುರಂತಗಳ ನಡೆದಿದ್ದು ಪ್ರೀತಿಯ ತಂದೆಯನ್ನು ಕಳೆದುಕೊಂಡ ಸುಷ್ಮಾ ಅವರು ಕೆಲವೇ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ತಾಯಿಯನ್ನು ಕಳೆದುಕೊಂಡರು. ಇದೆಲ್ಲವನ್ನು ಮರೆಯಲೆಂದೆ ಮತ್ತೆ ನಟನೆಯತ್ತ ಮುಖ ಮಾಡಿ ಬಣ್ಣ ಹಚ್ಚಿ ನಗುತಿದ್ದರು ಇವರ ಮನಸ್ಸಿನಲ್ಲಿ ಇರುವ ದುಃ’ಖ ಇವರಿಗಷ್ಟೇ ಗೊತ್ತು.
ಆದರೆ ಇಷ್ಟು ಬುದ್ಧಿವಂತಿಕೆಯಿಂದ ಇರುವ ಇವರು ವೈಯಕ್ತಿಕ ಜೀವನದಲ್ಲಿ ಯಾಕೆ ಎಡವಿದರೂ ಎನ್ನುವ ಪ್ರಶ್ನೆ ಎಲ್ಲರಿಗೂ ಇದೆ. ಆದರೆ ಇವರ ಪ್ರೀತಿ ಎಷ್ಟು ಗಟ್ಟಿಯಾಗಿದೆ ಎಂದರೆ ಪ್ರೀತಂ ಗುಬ್ಬಿ ಹಾಗೂ ಸುಷ್ಮಾ ಅವರು ಹತ್ತು ವರ್ಷಗಳಿಂದ ದೂರ ಇದ್ದರು ಇಬ್ಬರು ಕೋರ್ಟ್ ಮೆಟ್ಟಿಲೇರಿಲ್ಲ ಮತ್ತು ಇನ್ನೊಂದು ಮದುವೆ ಆಗಿಲ್ಲ. ಇದು ಇಂದಲ್ಲ ನಾಳೆ ಇಬ್ಬರು ಒಂದಾಗುವ ಮನಸ್ಸಿಟ್ಟು ಕೊಂಡಿದ್ದಾರೆ ಎನ್ನುವುದನ್ನು ಬಲಪಡಿಸುವಂತಿದೆ, ಆದಷ್ಟು ಬೇಗ ಕನ್ನಡಿಗರು ಈ ಶುಭ ಸುದ್ದಿ ಕೇಳಲಿ.