Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಬಿಗ್ ಬಾಸ್ ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿದ ಆರ್ಯವರ್ಧನ್ ಗುರೂಜಿ, ಈ ಮಾತು ಕೇಳುತ್ತಿದ್ದ ಹಾಗೆ ಕೆಂಡಮಂಡಲವಾದ ಸುದೀಪ್ ಗುರೂಜಿಗೆ ಕೊಟ್ಟ ವಾರ್ನಿಂಗ್ ಏನು ಗೊತ್ತಾ.?

Posted on October 16, 2022 By Kannada Trend News No Comments on ಬಿಗ್ ಬಾಸ್ ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿದ ಆರ್ಯವರ್ಧನ್ ಗುರೂಜಿ, ಈ ಮಾತು ಕೇಳುತ್ತಿದ್ದ ಹಾಗೆ ಕೆಂಡಮಂಡಲವಾದ ಸುದೀಪ್ ಗುರೂಜಿಗೆ ಕೊಟ್ಟ ವಾರ್ನಿಂಗ್ ಏನು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿ ಇದಾಗಲೇ 3 ವಾರ ಕಳೆದು ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ ಈ ವಾರದ ಟಾಸ್ ನಲ್ಲಿ ಎರಡು ತಂಡಗಳಿದ್ದು. ಈ ತಂಡದಲ್ಲಿ ಮೊದಲನೇ ತಂಡದ ನಾಯಕತ್ವವನ್ನು ನಟಿ ಅನುಪಮ ಗೌಡ ಅವರ ವಹಿಸಿಕೊಂಡ ವಿಚಾರ ನಿಮಗೆ ತಿಳಿದೇ ಇದೆ. ಬಂಗಾರವನ್ನು ಗೆಲ್ಲುವಂತ ಟಾಸ್ಕ್ ಅನ್ನು ನೀಡಲಾಗಿರುತ್ತದೆ ಈ ಸಮಯದಲ್ಲಿ ಅನುಪಮಾ ಅವರು ತಮ್ಮ ತಂಡದಲ್ಲಿ ಇದ್ದಂತಹ ಎಲ್ಲಾ ಬಂಗಾರವನ್ನು ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ. ಆದರೂ ಕೂಡ ತಂಡವನ್ನು ಮುನ್ನಡೆಸಿಕೊಂಡು ಹೋಗುವುದರಲ್ಲಿ ಅನುಪಮಾ ಅವರು ಚಾಣಕ್ಯತನದಿಂದ ಕಾರ್ಯ ನಿರ್ವಹಿಸುತ್ತಾರೆ.

ಪ್ರತಿ ಶನಿವಾರ ಮತ್ತು ಭಾನುವಾರ ಎರಡು ದಿನಗಳು ಕೂಡ ಕಿಚ್ಚ ಸುದೀಪ್ ಅವರು ವೇದಿಕೆಯ ಮೇಲೆ ಬಂದು ಮನೆಯಲ್ಲಿ ಇರುವಂತಹ ಬಿಗ್ ಬಾಸ್ ಸ್ಪರ್ಧಿಗಳು ಈ ವಾರದಲ್ಲಿ ಏನೆಲ್ಲ ತಪ್ಪು ಮಾಡಿದ್ದಾರೆ ಹಾಗೂ ಯಾರು ಆಟವನ್ನು ಉತ್ತಮವಾಗಿ ಆಡಿದ್ದಾರೆ ಹಾಗೂ ಮನೆಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳು ಏನು ಎಂಬುದರ ಬಗ್ಗೆ ಸಲಹೆಯನ್ನು ನೀಡುತ್ತಾರೆ. ಅದೇ ರೀತಿಯಲ್ಲಿ ಭಾನುವಾರದ ಸಂಚಿಕೆ ಅಂದರೆ ಈ ದಿನದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಈ ಮನೆಯಲ್ಲಿ ಯಾರು ಅತ್ಯುತ್ತಮವಾಗಿ ಆಟ ಆಡಿದ್ದಾರೆ ಯಾರಿಗೆ ಯಾವ ಸ್ಥಾನವನ್ನು ನೀಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳುತ್ತಾರೆ.

ಈ ಪ್ರಶ್ನೆಗೆ ಮನೆಯ ಮಂದಿಯವರು ಮೊದಲ ಸ್ಥಾನವನ್ನು ಅರುಣ್ ಸಾಗರ್ ಅವರಿಗೆ ನೀಡುತ್ತಾರೆ ಎರಡನೇ ಸ್ಥಾನವನ್ನು ಅನುಪಮ ಗೌಡ ಅವರಿಗೆ ನೀಡುತ್ತಾರೆ. ತದನಂತರ ಗುರೂಜಿಯವರನ್ನು ಕಿಚ್ಚ ಸುದೀಪ್ ಅವರು ಪ್ರಶ್ನೆ ಕೇಳುತ್ತಾರೆ ನಿಮ್ಮ ಪ್ರಕಾರ ಯಾರಿಗೆ ನೀಡಬಹುದು ಅಂತ ಆಗ ಅವರು ಅನುಪಮಾ ಗೌಡ ಅವರಿಗೆ ಅಂತ ಹೇಳುತ್ತಾರೆ ತದನಂತರ ಬಿಗ್ ಬಾಸ್ ಎಂಬುದು ಒಂದು ಮ್ಯಾಚ್ ಫಿಕ್ಸಿಂಗ್ ಸರ್ ಎಂದು ಹೇಳುತ್ತಾರೆ. ಅನುಪಮಾ ಗೌಡ ಅವರ ಬಳಿ ಚಿನ್ನ ಇರಲಿಲ್ಲ ಆದರೂ ಕೂಡ ಅವರನ್ನು ಪದೇ ಪದೇ ಮನೆಯ ಒಳಗೆ ಕರೆದು ಮಾತನಾಡಿಸುತ್ತಿರುವುದನ್ನೆಲ್ಲ ನೋಡುತ್ತಿದ್ದರೆ ಹಾಗೂ ಈ ಬಾರಿಯ ಬಿಗ್ ಬಾಸ್ ನಲ್ಲಿ ಅನುಪಮಾ ಗೌಡ ಅವರಿಗೆ ಹೆಚ್ಚು ಸಪೋರ್ಟ್ ಮಾಡುತ್ತಿರುವುದನ್ನು ನೋಡುತ್ತಿದ್ದರೆ ಇದೊಂದು ಮ್ಯಾಚ್ ಫಿಕ್ಸಿಂಗ್ ಎಂದು ಹೇಳುತ್ತಾರೆ.

View this post on Instagram

A post shared by Colors Kannada Official (@colorskannadaofficial)

ಈ ಹೆಸರನ್ನು ಕೇಳುತ್ತಿದ್ದ ಹಾಗೆ ಕಿಚ್ಚ ಸುದೀಪ್ ಅವರು ಕೆಂಡಮಂಡಲವಾಗುತ್ತಾರೆ ಅಷ್ಟೇ ಅಲ್ಲದೆ ಗುರೂಜಿಯವರೆ ಮಾತಿನ ಮೇಲೆ ನಿಗಾ ಇರಲಿ ಬಾಯಿಗೆ ಬಂದ ಹಾಗೆ ಮಾತನಾಡಬೇಡಿ ಎಂದು ವಾರ್ನ್ ಮಾಡುತ್ತಾರೆ. ಇದಕ್ಕೆ ಪ್ರತಿ ಉತ್ತರ ಕೊಟ್ಟ ಗುರೂಜಿಯವರು ಯೋಚನೆ ಮಾಡಿ ಮಾತನಾಡಿದ್ದೇನೆ ಸರ್ ಇದೆಲ್ಲವನ್ನು ನೋಡುತ್ತಿದ್ದರೆ ನನಗೆ ಹಾಗೆ ಅನಿಸುತ್ತದೆ ಅಂತ ಹೇಳುತ್ತಾರೆ. ಸುದೀಪ್ ಅವರ ಕೋಪ ಇನ್ನಷ್ಟು ಹೆಚ್ಚಾಗುತ್ತದೆ ನಂತರ ಇಲ್ಲಿರುವ ವ್ಯಕ್ತಿಗಳು ಸುಮ್ಮನೆ ಬಂದು ಕೂತಿದ್ದಾರಾ ಇವರೇನು ಆಟ ಆಡುತ್ತಿಲ್ಲವೇ ಎಂದು ಹೇಳುತ್ತಿದ್ದಾರೆ. ಬಿಗ್ ಬಾಸ್ ಮನೆಯ ಒಳಗೆ ಕುಳಿತುಕೊಂಡು ಮ್ಯಾಚ್ ಫಿಕ್ಸಿಂಗ್ ಎಂದು ಹೇಳುತ್ತೀರಲ್ಲ ಇದು ಸರಿನಾ ಅಂತ ಹೇಳುತ್ತಾರೆ.

ಈ ವೇದಿಕೆಗೆ ಹಾಗೂ ಈ ಕಾರ್ಯಕ್ರಮಕ್ಕೆ ಧಕ್ಕೆ ತರುವಂತಹ ಮಾತುಗಳನ್ನು ನೀವೇನಾದರೂ ಆಡಿದರೆ ನಿಜಕ್ಕೂ ನಮ್ಮ ನಿಮ್ಮ ನಡುವೆ ಮುಂದೆ ಮಾತುಕತೆಯಾಗುತ್ತದೆ ಅಷ್ಟೇ ಅಂದಿದ್ದಾರೆ. ತದನಂತರ ನಿಮ್ಮ ವೈಯಕ್ತಿಕ ವಿಚಾರಕ್ಕೆ ಬಂದರೆ ಉದ್ದುದ್ದ ಭಾಷಣ ಬೀರುತ್ತೀರ ಆದರೆ ಬಿಗ್ ಬಾಸ್ ವೇದಿಕೆಗೆ ಬಂದು ಬಿಗ್ ಬಾಸ್ ಬಗ್ಗೆ ಈ ರೀತಿ ಕೀಳಾಗಿ ಮಾತನಾಡುತ್ತಿರುವುದು ಸರಿನಾ ಎಂದು ಗುರೂಜಿ ಅವರಿನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಇದನ್ನು ನೋಡುತ್ತಿರುವಂತಹ ವೀಕ್ಷಕರು ಕಿಚ್ಚ ಸುದೀಪ್ ಅವರು ಹೇಳುತ್ತಿರುವುದು ಸರಿಯಾಗಿ ಇದೆ ಎಂದು ಹೇಳುತ್ತಿದ್ದಾರೆ.

ಆದರೆ ಇನ್ನೂ ಕೆಲವು ಅಭಿಮಾನಿಗಳು ಮೊದಲ ಬಾರಿಗೆ ಆರ್ಯವರ್ಧನ್ ಗುರೂಜಿಯವರು ಬಿಗ್ ಬಾಸ್ ಬಗ್ಗೆ ಸರಿಯಾಗಿ ಹೇಳಿದ್ದಾರೆ ಹೌದು, ಬಿಗ್ ಬಾಸ್ ಎಂಬುದು ಒಂದು ಮ್ಯಾಚ್ ಫಿಕ್ಸಿಂಗ್ ಮೊದಲೇ ಇದರಲ್ಲಿ ಯಾರು ಗೆಲ್ಲುತ್ತಾರೆ ಯಾರೂ ಸೋಳುತ್ತಾರೆ ಎಂಬುದನ್ನು ನಿರ್ಣಯ ಮಾಡಿರುತ್ತಾರೆ ಎಂದು ಹೇಳಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಭಾನುವಾರದ ಸಂಚಿಕೆಯಲ್ಲಿ ಆರ್ಯವರ್ಧನ್ ಗುರೂಜಿ ಹಾಗೂ ಕಿಚ್ಚ ಸುದೀಪ್ ಅವರ ನಡುವೆ ಮಾತಿನ ಪೈಪೋಟಿ ಜೋರಾಗಿಯೇ ನಡೆಯಲಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

Entertainment Tags:Arya Vardhan Guruji, Big Boss Season 9, Kiccha sudeep
WhatsApp Group Join Now
Telegram Group Join Now

Post navigation

Previous Post: ಮನೆ, ಆಸ್ತಿ ಎಲ್ಲಾ ಕಳೆದುಕೊಂಡು ಬರಿಗೈ ನಲ್ಲಿ ಇರುವ ರವಿಚಂದ್ರನ್ ಸ್ಥಿತಿ ಕಂಡು ಸುದೀಪ್ ಮಾಡಿದ ಸಹಾಸವೇನು ಗೊತ್ತ.? ನಿಜಕ್ಕೂ ಇಡೀ ಮನಕುಲವೇ ಮೆಚ್ಚುವಂತಿದೆ.
Next Post: ಮಗುವಿಗೆ ಎದೆ ಹಾಲು ಉಣಿಸುತ್ತಲೇ ಮೇಕಪ್ ಮಾಡಿಸಿಕೊಂಡ ನಟಿ, ವಿಡಿಯೋ ನೋಡಿ ಕೆಡುಗಾಲ ಬಂತು ಅಂದ ನೆಟ್ಟಿಗರು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore