Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಡಾಲಿ ಮಾತನಾಡುತ್ತಿರುವಾಗ ಡಿ ಬಾಸ್, ಡಿ ಬಾಸ್ ಎಂದು ಚೀರಾಡಿದ ಅಭಿಮಾನಿಗಳು ಇದನ್ನು ಕೇಳಿದಂತಹ ನಟ ಧನಂಜಯ್ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಆಶ್ಚರ್ಯ ಆಗುತ್ತೆ

Posted on December 27, 2022 By Kannada Trend News No Comments on ಡಾಲಿ ಮಾತನಾಡುತ್ತಿರುವಾಗ ಡಿ ಬಾಸ್, ಡಿ ಬಾಸ್ ಎಂದು ಚೀರಾಡಿದ ಅಭಿಮಾನಿಗಳು ಇದನ್ನು ಕೇಳಿದಂತಹ ನಟ ಧನಂಜಯ್ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಆಶ್ಚರ್ಯ ಆಗುತ್ತೆ

ಡಾಲಿ ಮಾತು ಕೇಳಿ ಶಾ-ಕ್ ಆದ ಅಭಿಮಾನಿಗಳು

 

ನಟ ಡಾಲಿ ಧನಂಜಯ್(Dali Dananjay) ಅಭಿನಯದ ಜಮಾಲಿಗುಡ್ಡ(Jamaligudda) ಸಿನಿಮಾ ಇದೇ ತಿಂಗಳ 30ನೇ ತಾರೀಕು ಕರ್ನಾಟಕದ ಅತ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಕೂಡ ತೆರೆ ಕಾಣಲಿದೆ ಸದ್ಯಕ್ಕೆ ಧನಂಜಯ್ ಅವರು ಈ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ನಟಿ ಅದಿತಿ ಪ್ರಭುದೇವ ಅವರು ನಟಿಸಿದ್ದು ರುಕ್ಮಿಣಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧನಂಜಯ್ ಅವರು ಈ ವರ್ಷ ಸಾಲು ಸಾಲು ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ.

ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿವೆ ಹಾಗಾಗಿ ವರ್ಷದ ಕೊನೆಯಲ್ಲಿ ತೆರೆ ಕಾಣಲಿರುವ ಜಮಾಲಿಗುಡ್ಡ ಸಿನಿಮಾ ಕೂಡ ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಅಂತಾನೆ ಹೇಳಬಹುದು. ಇನ್ನು ಕಳೆದ ಒಂದು ತಿಂಗಳಿನಿಂದ ಜಮಾಲಿಗುಡ್ಡ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಭಾಗಿಯಾಗಿರುವಂತಹ ಧನಂಜಯ ಅವರು ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ನಡೆದಂತಹ ಇವೆಂಟ್ ಒಂದರಲ್ಲಿ ಪಾಲ್ಗೊಂಡಿದ್ದಾರೆ.

ಈ ಸಮಯದಲ್ಲಿ ಜಮಾಲಿ ಗುಡ್ಡದ ಕಥೆಯ ಬಗ್ಗೆ ಹಾಗೂ ಈ ಸಿನಿಮಾದಲ್ಲಿ ಇರುವಂತಹ ವಿಶೇಷ ಪಾತ್ರಗಳ ಬಗ್ಗೆ ಮಾತನಾಡುತ್ತಿರುವಾಗ ಅಲ್ಲಿ ನೆರದಿದ್ದಂತಹ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಜೋರಾಗಿ ಚಿರಚಾಡಿದ್ದಾರೆ. ಧನಂಜಯ್ ಅವರಿಗೆ ಮಾತನಾಡುವುದಕ್ಕೂ ಕೂಡ ಅವಕಾಶ ಕೊಟ್ಟಿಲ್ಲ ಇದನ್ನು ಕೇಳಿಸಿಕೊಂಡಂತಹ ಧನಂಜಯ ಅವರು ದರ್ಶನ್ ಅಭಿಮಾನಿಗಳಿಗೆ ಹೇಳಿದ್ದೇನು ಎಂಬುದನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.

ಧನಂಜಯ್ ಮಾತನಾಡುತ್ತಿರುವಂತಹ ಸಂದರ್ಭದಲ್ಲಿ ಡಿ ಬಾಸ್ ಡಿ ಬಾಸ್ ದರ್ಶನ್ ಎಂದು ಕೂಗುತ್ತಿದ್ದಂತಹ ಅಭಿಮಾನಿಗಳ ಮಾತನ್ನು ಕೇಳಿದಂತಹ ಧನಂಜಯ್ ಇನ್ನೂ ಜೋರಾಗಿ ಕಿರಿಕಿ ಇನ್ನೂ ಜೋರಾಗಿ ಡಿ ಬಾಸ್ ಎಂದು ಘೋಷಣೆ ಕೂಗಿ. ಕೇವಲ ಅವರೊಬ್ಬರ ಹೆಸರನ್ನು ಮಾತ್ರವಲ್ಲದೆ ಕನ್ನಡ ಸಿನಿಮಾ ರಂಗದಲ್ಲಿ ಇರುವಂತಹ ಎಲ್ಲಾ ಕಲಾವಿದರ ಹೆಸರನ್ನು ಕೂಗಿ. ನಾವು ಯಾರನ್ನೆಲ್ಲ ನೋಡಿ ಬೆಳೆದಿದ್ದೆವು ಯಾರನ್ನೆಲ್ಲ ನೋಡಿ ಕಲಿತಿದ್ದೆವೋ ಅವರ ಹೆಸರನ್ನೆಲ್ಲ ಜೋರಾಗಿ ಕೂಗಿ ಚಿತ್ರರಂಗ ಇನ್ನು ದೊಡ್ಡದಾಗಿ ಬೆಳೆಯಲಿ ಚಿತ್ರರಂಗದಲ್ಲಿ ಇರುವಂತಹ ಎಲ್ಲಾ ಕುಟುಂಬಸ್ಥರು ಕೂಡ ಒಂದಾಗಲಿ ಎಂದು ಧನಂಜಯ್ ಅವರು ಪ್ರತಿಕ್ರಿಯಿಸಿದ್ದಾರೆ.

ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಧನಂಜಯ್ ಅವರು ಮಾತನಾಡಿದಂತಹ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಧನಂಜಯ್ ಅವರು ಪ್ರತಿಕ್ರಿಯಿಸಿದ ಬಗೆಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಸಾಮಾನ್ಯವಾಗಿ ಒಬ್ಬ ಕಲಾವಿದ ಅಥವಾ ಒಬ್ಬ ನಟ ಮಾತನಾಡುವಂತಹ ಸಮಯದಲ್ಲಿ ಬೇರೊಬ್ಬ ನಟನ ಹೆಸರನ್ನು ಹೇಳಿದರೆ ಆತನಿಗೆ ಮುಜುಗರವಾಗಬಹುದು. ಅಷ್ಟೇ ಅಲ್ಲದೆ ತಾನು ಏನನ್ನು ಹೇಳಲು ಹೊರಟಿದ್ದಾನೋ ಅದನ್ನು ಹೇಳದೆ ಇರಬಹುದು ಇದರಿಂದ ಬೇಸರವೂ ಕೂಡ ಉಂಟಾಗಬಹುದು.

ಆದರೆ ಧನಂಜಯ್ ಅವರು ಮಾತ್ರ ತಾಳ್ಮೆಯನ್ನು ಕಳೆದುಕೊಳ್ಳದೆ ಅಭಿಮಾನಿಗಳೊಟ್ಟಿಗೆ ಸೇರಿ ಅವರದ್ದೇ ದಾರಿಯಲ್ಲಿ ಅವರಿಗೆ ಬುದ್ಧಿಯನ್ನು ಕಲಿಸಿದ್ದಾರೆ. ಹೌದು ಕಳೆದ ಒಂದು ವಾರದಿಂದ ಎಲ್ಲೇ ನೋಡಿದರೂ ಕೂಡ ದರ್ಶನ್ ಅಭಿಮಾನಿಗಳದ್ದೆ ಕಾರುಬಾರು. ಅದರಲ್ಲಿಯೂ ಕೂಡ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆತ ಬಿದ್ದ ಮೇಲಂತೂ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ ಅಂತ ಹೇಳಬಹುದು. ಅದೇನೇ ಆಗಲಿ ಅವರವರ ಫ್ಯಾನ್ಸ್ ಅವರವರಿಗೆ ಹೆಚ್ಚು ಸದ್ಯಕ್ಕೆ ನಟ ಧನಂಜಯ್ ಅವರು ಪ್ರತಿಕ್ರಿಯಿಸಿದ ಪರಿ ಮಾತ್ರ ಅದ್ಭುತವಾಗಿದೆ. ನೀವು ಕೂಡ ಧನಂಜಯ್ ಮಾತನಾಡಿದಂತಹ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ.

Entertainment Tags:Adithi Prabhudeva, Challenging star darshan, D Boss, Daali Dananjay, Jamali Gudda
WhatsApp Group Join Now
Telegram Group Join Now

Post navigation

Previous Post: AnilKumble: ಇಂಗ್ಲೀಷ್ ಜಾಹೀರಾತಿನಲ್ಲಿ ಬಾಲಿವುಡ್ ಹಾಡು ಬೇಡ ಕನ್ನಡದ ಹಾಡು ಹೇಳುತ್ತೇನೆ ಎಂದು ಶಂಕರ್ ನಾಗ್ ಅಭಿನಯದ ಹಾಡು ಹೇಳಿ ಕನ್ನಡಿಗರ ಮನಸ್ಸನ್ನು ಗೆದ್ದ ಅನಿಲ್ ಕುಂಬ್ಳೆ
Next Post: ನನಗೆ ಮಕ್ಕಳು ಬೇಕು, ಆದ್ರೆ ಮಕ್ಕಳ ತಾಯಿ ಮಾತ್ರ ಬೇಡ ವೈರಲ್ ಆಯ್ತು ನಟ ಸಲ್ಮಾನ್ ಖಾನ್ ಮಾತು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore