Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪು & ದಚ್ಚು ಕೊನೆಯದಾಗಿ ಮಾಡಿದ ಭಭ್ರುವಾಹನ ನಾಟಕದ ಸುಂದರ ಕ್ಷಣ ಅಪ್ಪು & ದಚ್ಚು ಅಭಿಮಾನಿಗಳು ಈ ದೃಶ್ಯವನ್ನು ಒಮ್ಮೆಯಾದರೂ ನೋಡಲೇಬೇಕು.

Posted on March 16, 2023 By Kannada Trend News No Comments on ಅಪ್ಪು & ದಚ್ಚು ಕೊನೆಯದಾಗಿ ಮಾಡಿದ ಭಭ್ರುವಾಹನ ನಾಟಕದ ಸುಂದರ ಕ್ಷಣ ಅಪ್ಪು & ದಚ್ಚು ಅಭಿಮಾನಿಗಳು ಈ ದೃಶ್ಯವನ್ನು ಒಮ್ಮೆಯಾದರೂ ನೋಡಲೇಬೇಕು.

ಒಂದು ವೇದಿಕೆಯಲ್ಲಿ ಸಿನಿಮಾ ನಟರು ಸೇರುತ್ತಾರೆ ಎಂದರೆ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಅದರಲ್ಲೂ ಸ್ಟಾರ್ ನಟರಿಬ್ಬರೂ ಒಂದೇ ವೇದಿಕೆಯಲ್ಲಿ ಜೊತೆ ಜೊತೆಗೆ ಹೆಜ್ಜೆ‌ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸಿದರೆ, ಇನ್ನೂ ಕೆಲವರು ಸ್ಟೇಜ್ ಮೇಲೆ ಡೈಲಾಗ್ ಗಳನ್ನು ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಇದೀಗ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಹಾಗೂ sandal wood ನ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರು ಡಾ. ರಾಜ್ ಅವರು ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರದ ಸಂಭಾಷಣೆಯೊಂದಕ್ಕೆ ವೇದಿಕೆ ಮೇಲೆ ಪಾತ್ರಧಾರಿಗಳಾಗುವ ಮೂಲಕ ಪಾತ್ರ ನಿರ್ವಹಿಸುವ ದೃಶ್ಯಾವಳಿ ವೈರಲ್ ಆಗಿ ಮೆಚ್ಚುಗೆ ಪಡೆಯುತ್ತಿದೆ.

ಹೌದು ವರನಟ ಡಾ. ರಾಜಕುಮಾರ್ ಅವರು ದ್ವಿಪಾತ್ರದಲ್ಲಿ ಅಭಿನಯಿಸಿದ ಭಬ್ರುವಾಹನ ಚಲನಚಿತ್ರದ ಕ್ಲೈಮ್ಯಾಕ್ಸ್ ಭಾಗದ ಯಾರು ಬಲ್ಲರು ನಿನ್ನ ಭುಜಬಲದ ಪರಾಕ್ರಮವ ಎಂಬ ಸನ್ನಿವೇಶವನ್ನು ವೇದಿಕೆ ಮೇಲೆ ಪ್ರದರ್ಶಿಸಿದ್ದಾರೆ. ಕನ್ನಡ ಚಿತ್ರರಂಗದ ಸುವರ್ಣ ಮಹೋತ್ಸವ ವೇದಿಕೆಯಲ್ಲಿ ದರ್ಶನ್ ಅರ್ಜುನನಾಗಿ, ಅಪ್ಪು ಬಭ್ರುವಾಹನನಾಗಿ ವೇದಿಕೆ ಏರಿದ್ದರು ಆ ಸನ್ನಿವೇಶದಲ್ಲಿ ನಟ ದರ್ಶನ ಅರ್ಜುನನ ಪಾತ್ರವನ್ನು ನಿರ್ವಹಿಸಿದರೆ.

ಅಪ್ಪು ಭಬ್ರುವಾಹನನ ಪಾತ್ರ ನಿರ್ವಹಣೆ ಮಾಡುವ ಮೂಲಕ ಒಬ್ಬರಿಗೊಬ್ಬರು ತಿರುಗೇಟು ನೀಡುವ ಮೂಲಕ ಭರ್ಜರಿ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡಿದ್ದರು ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಸ್ಯಾಂಡಲ್‌ವುಡ್‌ನ ಸೂಪರ್‌ ಸ್ಟಾರ್‌ಗಳಾದ ಪುನೀತ್ ಮತ್ತು ದರ್ಶನ್ ಜತೆಯಾಗಿ ಅಭಿನಯಿಸಿದ ಚಿತ್ರ ಒಂದೇ ಒಂದು. ಅದು ಪುನೀತ್ ಅಭಿನಯದ ‘ಅರಸು’ ಚಿತ್ರದಲ್ಲಿ ದರ್ಶನ್ ಕೆಲವೇ ನಿಮಿಷಗಳ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಟ ದರ್ಶನ್ ಹಾಗೂ ಅಪ್ಪು ಕೂಡ ಒಳ್ಳೆ ಸ್ನೇಹಿತರು. ಪುನೀತ್ ನಟನೆಯ ‘ಅರಸು’ ಚಿತ್ರದಲ್ಲಿ ಸಂಭಾವನೆ ಇಲ್ಲದೇ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಡಾ. ರಾಜ್‌ಕುಮಾರ್ ಫ್ಯಾಮಿಲಿಗೂ ತೂಗುದೀಪ ಶ್ರೀನಿವಾಸ್ ಫ್ಯಾಮಿಲಿಗೂ ಆತ್ಮೀಯ ಒಡನಾಟ ಇದೆ. ಅಣ್ಣಾವ್ರ ಸಿನಿಮಾಗಳಲ್ಲಿ ತೂಗುದೀಪ ಶ್ರೀನಿವಾಸ್ ಆಸ್ಥಾನ ಕಲಾವಿದರರಾಗಿದ್ದರು. 80ರ ದಶಕದ ಆರಂಭದಲ್ಲಿ ಡಾ. ರಾಜ್‌ಕುಮಾರ್ ಮಗಳು ಲಕ್ಷ್ಮಿ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ನಟ ದರ್ಶನ್ ಕೂಡ ಭಾಗಿ ಆಗಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಫೋಟೊದಲ್ಲಿ ದರ್ಶನ್, ಪುನೀತ್, ಲಕ್ಷ್ಮಿ ಅವರ ಜೊತೆಗೆ ಪುಟಾಣಿ ವಿಜಯ್ ರಾಘವೇಂದ್ರ ಅವರನ್ನು ಕೂಡ ನೋಡಬಹುದು.

ಸದ್ಯಕ್ಕೆ ಎಲ್ಲೆಡೆ ಫ್ಯಾನ್ ವಾರ್ ನಡೆಯುತ್ತಿರುವುದನ್ನು ನೀವು ಕಾಣಬಹುದಾಗಿದೆ ಆದರೆ ಇದಕ್ಕಿಂತ ಮುಂಚೆ ಅಪ್ಪು ಅವರು ಬದುಕಿದ್ದಾಗ ದರ್ಶನ್ ಅವರ ಜೊತೆ ಎಷ್ಟು ಒಡನಾಟ ಇತ್ತು ಎಂಬುವುದು ಅವರಿಗೆ ಅಷ್ಟೇ ತಿಳಿದಿತ್ತು. ಸದ್ಯಕ್ಕೆ ಅಪ್ಪು ಮತ್ತು ದರ್ಶನ್ ಅಭಿಮಾನಿಗಳಿಗಾಗಿ ಇವರಿಬ್ಬರೂ ನಟಿಸಿದಂತಹ ಬಬ್ರುವಾಹನ ಸಿನಿಮಾದ ನಾಟಕದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಇವರಿಬ್ಬರ ನಡುವೆ ಎಷ್ಟು ಅವಿನಾಭವನ ಸಂಬಂಧವಿತ್ತು ಎಂಬುದನ್ನು ಇದು ಎತ್ತಿ ತೋರಿಸುತ್ತದೆ ದಚ್ಚು ಮತ್ತು ಅಪ್ಪು ಇಬ್ಬರು ಎಷ್ಟು ಅಮೋಘವಾಗಿ ಅಭಿನಯಿಸಿದ್ದರು ಎಂಬುವುದು ತಿಳಿಯುತ್ತದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ.

https://youtu.be/ybe74bIU7Hg

Entertainment Tags:Appu, Dacchu, Darshan, Puneeth
WhatsApp Group Join Now
Telegram Group Join Now

Post navigation

Previous Post: ನನ್ನ ಜೀವನದಲ್ಲಿ ಏನಾಗಾತ್ತಿದೆ, ಅರ್ಪಿತ & ನನ್ನ ನಡುವೆ ಹುಳಿಹಿಂಡಿದ್ದು ಯಾರು.? ನಾನು ಯಾಕೆ ಸಾ-ಯೋ ನಿರ್ಧಾರ ಮಾಡಿದ್ದು ಯಾಕೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ನೋಡಿ.!
Next Post: ಗಜ ಸಿನಿಮಾ ಬಿಡುಗಡೆ ಸಮಯದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಸಿನಿಮಾಗಳು ಪೈಪೋಟಿ ಕೊಟ್ಟು ಬಿಡುಗಡೆ ಆಗಿದ್ದವು. ಆದ್ರೆ ಕೊನೆಗೆ ಗೆದ್ದ ಸಿನಿಮಾ ಯಾವ್ದು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore