ನಿಮಗೆ ತಿಳಿದಿರುವ ಬಹುಪಾಲು ಸಿಂಹ ರಾಶಿಯವರು ಸ್ಟ್ರಾಂಗ್ ಮತ್ತು ಕಠಿಣವಾಗಿ ಕಾಣಿಸಿಕೊಂಡರು ಒಳಗಿನಿಂದ ಭಾವನಾತ್ಮಕವಾಗಿ ಇರುತ್ತಾರೆ. ಅವರು ಪ್ರೀತಿಸುವ ಯಾರೊಂದಿಗಾದರೂ ಹೆಚ್ಚು ವಾದ ವಿವಾದವನ್ನು ಮಾಡಿದರೆ ಅವರ ಹೃದಯ ಬಡಿತವು ಕೂಡ ಹೆಚ್ಚಾಗುತ್ತದೆ. ಅವರು ಬೇರೆಯವರ ಮುಂದೆ ಗಟ್ಟಿಮುಟ್ಟಾಗಿರುವ ಹಾಗೆ ಕಂಡರೂ ಕೂಡ ವಾಸ್ತವವಾಗಿ ಅವರು ಸೂಕ್ಷ್ಮ ವ್ಯಕ್ತಿಗಳಾಗಿರುತ್ತಾರೆ.
ಸಿಂಹ ರಾಶಿಯವರು ಪರಿಪೂರ್ಣತೆಗಾಗಿ ಶ್ರಮಿಸುತ್ತಾರೆ ಎನ್ನುವುದು ಬಹುತೇಕ ಎಲ್ಲರಿಗೂ ತಿಳಿದಿದೆ. ಅವರು ಸ್ಪರ್ಧಿಸುವಂತಹ ಪ್ರತಿಯೊಂದರಲ್ಲಿಯೂ ಕೂಡ ಮೊದಲನೇ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಹಾಗೂ ಮೊದಲ ಸ್ಥಾನವನ್ನು ಪಡೆದುಕೊಳ್ಳುವುದಕ್ಕೆ ಯಾವಾಗಲೂ ಪ್ರಯತ್ನಿಸುತ್ತಾರೆ. ಹೆಚ್ಚಿನ ಜನರು ಸಿಂಹ ರಾಶಿಯವರೊಂದಿಗೆ ಚರ್ಚೆ ಮಾಡುವುದು ಅಸಾಧ್ಯ ಎಂದು ತಿಳಿದುಕೊಂಡಿರುತ್ತಾರೆ.
ಈ ಸುದ್ದಿ ಓದಿ:- ಈ 5 ವೇಳೆಗಳಲ್ಲಿ ಶೃಂಗಾರ ಮಾಡಿದ್ರೆ ದಾರಿದ್ರ್ಯ ಖಂಡಿತ ಅನುಭವಿಸಬೇಕು. ದಂಪತಿಗಳು ಈ ವಿಷಯಗಳನ್ನು ತಿಳಿದುಕೊಳ್ಳಿ
ಕೆಲವೊಮ್ಮೆ ಅದು ನಿಜವು ಕೂಡ ಆಗಬಹುದು ಇವರು ಜನರಲ್ಲಿ ಹೆಚ್ಚು ನಂಬಿಕೆ ಇಡುವ ಗುಣವನ್ನು ಹೊಂದಿರುತ್ತಾರೆ. ಮತ್ತು ನಿರಂತರವಾಗಿ ಇದರ ಮೇಲೆ ತೋರಿಸೋದಕ್ಕೆ ಪ್ರಯತ್ನಿಸುತ್ತಾರೆ. ಆದರೆ ಈ ಅಂಶವೇ ಅವರ ದೌರ್ಬಲ್ಯ ಅಂತ ಜನ ಭಾವಿಸುತ್ತಾರೆ. ತಮ್ಮ ಸಂಗಾತಿಯ ಸಂತೋಷವನ್ನು ಕಾಪಾಡಿಕೊಳ್ಳುವುದಕ್ಕೆ ಇವರು ತುಂಬಾ ಶ್ರಮಿಸುತ್ತಾರೆ ಮತ್ತು ತಮ್ಮ ಕಾರ್ಯಗಳು ಮತ್ತು ತಮ್ಮ ಅಚಲವಾದ ಪ್ರೀತಿಯಿಂದ ತಮ್ಮ ಸಂಗಾತಿಯನ್ನು ಖುಷಿಪಡಿಸುವಲ್ಲಿ ಎಂದಿಗೂ ವಿಫಲರಾಗುವುದಿಲ್ಲ.
ಇವರು ನಿರಂತರವಾಗಿ ಪ್ರಾಯೋಗಿಕ ವಾಗಿ ಪ್ರೀತಿಸಬೇಕು ಅಂತ ಬಯಸುತ್ತಾರೆ ಮತ್ತು ಅದೇ ರೀತಿಯ ಪ್ರೀತಿಯನ್ನು ನೀಡುತ್ತಾರೆ ಕೂಡ. ರೋಮ್ಯಾಂಟಿಕ್ ವ್ಯಕ್ತಿತ್ವ ಇವರ ಸಕಾರಾತ್ಮಕ ಗುಣವಾಗಿದೆ. ಸಿಂಹ ರಾಶಿಯವರನ್ನು ವಂಚಿಸಿದ ನಂತರವೂ ನೀವು ಪದೇಪದೇ ನಂಬಿಕೆಯನ್ನು ಗಳಿಸಿದರೆ ಅದು ಅವರು ನಿಮಗೆ ನೀಡಿದ ಮತ್ತೊಂದು ಅವಕಾಶ ಅಂತ ನೀವು ಅರ್ಥ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:- ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತದೆ.!
ಒಮ್ಮೆ ನೀವು ಅವರ ನಂಬಿಕೆಯನ್ನು ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದಕ್ಕೆ ನಿಮಗೆ ಕಷ್ಟವಾಗುತ್ತದೆ. ಏಕೆ ಎಂದರೆ ಅವರು ಒಂದೇ ಜನರ ಮೇಲೆ ನಿರಂತರವಾದ ನಂಬಿಕೆಯನ್ನು ಇಡುವುದಿಲ್ಲ. ನೀವು ಸಿಂಹ ರಾಶಿಯನ್ನು ತುಂಬಾ ಲಘುವಾಗಿ ತೆಗೆದುಕೊಳ್ಳುವುದು ತಪ್ಪು. ಯಾಕೆಂದರೆ ಇವರು ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವುದಕ್ಕೆ ಹಲವಾರು ಅವಕಾಶಗಳನ್ನು ನೀಡುತ್ತಾರೆ.
ಆದರೆ ಪದೇಪದೇ ಅದೇ ತಪ್ಪನ್ನು ಮಾಡಿದರೆ ಅಂತಿಮವಾಗಿ ಅವರು ಕ್ಷಮಿಸಿ ನಿಮ್ಮ ಬಗ್ಗೆ ಮರೆತೇ ಬಿಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯ ಜನರು ತುಂಬಾ ಶ್ರಮಜೀವಿಗಳು ಅಂತ ಪರಿಗಣಿಸಲಾಗುತ್ತದೆ. ಗೋಪಾಲನ ಕೃಪೆಯಿಂದ ಸಿಂಹ ರಾಶಿಯವರಿಗೆ ತಮ್ಮ ಶ್ರಮಕ್ಕೆ ತಕ್ಕ ಫಲ ಕಂಡಿತ ವಾಗಿ ಸಿಗುತ್ತದೆ. ಜೀವನದಲ್ಲಿ ಯಶಸ್ಸನ್ನು ಸಾಧಿಸುವುದಕ್ಕೆ ಇವರು ಕೃಷ್ಣನೊಂದಿಗೆ ರಾಧೆಯನ್ನು ಪೂಜಿಸಬೇಕು.
ಈ ಸುದ್ದಿ ಓದಿ:- ಮನೆಯಲ್ಲಿ ತುಳಸಿ ಗಿಡವಿದ್ರೆ ಈ ತಪ್ಪು ಮಾಡಬೇಡಿ.!
ಇನ್ನು ಸೂರ್ಯನ ಪ್ರಖರತೆಯನ್ನು ತಡೆದುಕೊಳ್ಳಬಲ್ಲ ದೇವಾದಿ ದೇವ ಕೈಲಾಸ ವಾಸಿಯಾದ ಈಶ್ವರನು ಸಿಂಹ ರಾಶಿಯವರ ಅಧಿದೇವತೆ ಭಗವಾನ್ ಶಿವ ಸೂರ್ಯನ ಪ್ರಜ್ವಲತೆಯನ್ನು ಕಡಿಮೆ ಮಾಡಿ ಜೀವನ ದಲ್ಲಿ ಶಾಂತಿ ನೆಮ್ಮದಿಗಳನ್ನು ಸಿಂಹ ರಾಶಿಯವರಿಗೆ ಕೊಡುತ್ತಾನೆ. ಶಿವ ಆರಾಧನೆಯು ಸಿಂಹ ರಾಶಿಯವರ ಜೀವನದಲ್ಲಿ ಶಾಂತಿ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ.
ಪ್ರತಿನಿತ್ಯ ಓಂ ನಮಃ ಶಿವಾಯ ಎನ್ನುವ ಮಂತ್ರವನ್ನು ಜಪಿಸಿ ಪ್ರತಿನಿತ್ಯ ಶಿವಲಿಂಗಕ್ಕೆ ನೀರು ಮತ್ತು ಹಾಲನ್ನು ಅರ್ಪಿಸಿ ಹಾಗೂ ಸೋಮವಾರದಂದು ಬಡ ಜನರಿಗೆ ಮತ್ತು ಶ್ವಾನಗಳಿಗೆ ಹಾಲು ನೀಡಿ. ಆರ್ಥಿಕ ಸಮಸ್ಯೆಗಾಗಿ ಸಿಂಹ ರಾಶಿಯ ವರು ಬುಧನ ಆರಾಧನೆಯನ್ನು ಮಾಡಬೇಕು.
ಈ ಸುದ್ದಿ ಓದಿ:- ಮಿಥುನ ರಾಶಿಯವರ ಸಹಜ ಗುಣ ಸ್ವಭಾವಗಳು.!
ಬುಧವಾರದಂದು ಹಸಿರು ವಸ್ತ್ರದಲ್ಲಿ ಹೆಸರು ಕಾಳನ್ನು ದಾನ ಮಾಡಬೇಕು. ಬುಧನ ಅಧಿದೇವರು ವಿಷ್ಣು ಹೀಗಾಗಿ ಭಗವಾನ್ ವಿಷ್ಣುವಿನ ಅವತಾರವಿರುವ ದೇವಸ್ಥಾನದಲ್ಲಿ ಬುಧವಾರದಂದು ತುಳಸಿ ಅರ್ಚನೆಯನ್ನು ಮಾಡಿಸ ಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.