Home Useful Information ಮಾರ್ಚ್ 08, ಮಹಾಶಿವರಾತ್ರಿ. ಈ ದಿನದಂದು 3 ವಸ್ತುಗಳಲ್ಲಿ ತಪ್ಪದೇ ಒಂದನ್ನಾದರೂ ತನ್ನಿ, ವರ್ಷಪೂರ್ತಿ ಧನ ಲಾಭ ಸಾಕಷ್ಟು ಹಣ ಬರುತ್ತದೆ…

ಮಾರ್ಚ್ 08, ಮಹಾಶಿವರಾತ್ರಿ. ಈ ದಿನದಂದು 3 ವಸ್ತುಗಳಲ್ಲಿ ತಪ್ಪದೇ ಒಂದನ್ನಾದರೂ ತನ್ನಿ, ವರ್ಷಪೂರ್ತಿ ಧನ ಲಾಭ ಸಾಕಷ್ಟು ಹಣ ಬರುತ್ತದೆ…

0
ಮಾರ್ಚ್ 08, ಮಹಾಶಿವರಾತ್ರಿ. ಈ ದಿನದಂದು 3 ವಸ್ತುಗಳಲ್ಲಿ ತಪ್ಪದೇ ಒಂದನ್ನಾದರೂ ತನ್ನಿ, ವರ್ಷಪೂರ್ತಿ ಧನ ಲಾಭ ಸಾಕಷ್ಟು ಹಣ ಬರುತ್ತದೆ…

 

ಇನ್ನೆರಡು ದಿನಗಳಲ್ಲಿ ಬರಲಿರುವ ಮಾರ್ಚ್ 8ರ ಶಿವರಾತ್ರಿ ದಿನದಂದು ನಾವು ಹೇಳುವ ರೀತಿಯಲ್ಲಿ ನೀವು ಸಣ್ಣ ಉಪಾಯವನ್ನು ಮಾಡಿದರೆ ನಿಮ್ಮ ಬದುಕಿನಲ್ಲಿ ಬಂದಿರುವ ಬಹುತೇಕ ಎಲ್ಲಾ ಕಷ್ಟಗಳಿಂದ ಮುಕ್ತಿ ಪಡೆಯಬಹುದು. ವರ್ಷದಲ್ಲಿ ಈ ಒಂದು ದಿನವನ್ನಾದರೂ ಸಂಪೂರ್ಣವಾಗಿ ಶಿವನಿಗಾಗಿ ಮೀಸಲಿಟ್ಟು ಶಿವ ಪೂಜೆ, ಶಿವನ ಧ್ಯಾನ ಮಾಡುವುದು.

ಶಿವನ ಮಂತ್ರ ಹೇಳುವುದು, ಶಿವನ ಸನ್ನಿಧಾನಕ್ಕೆ ಹೋಗುವುದು ಈ ರೀತಿ ಆಚರಣೆಗಳನ್ನು ಅನುಸರಿಸಿ ಸಾಧ್ಯವಾದರೆ ಉಪವಾಸ ಮತ್ತು ಜಾಗರಣೆ ಇದ್ದು ಪಾರ್ವತಿ ಪರಮೇಶ್ವರರ ಕೃಪೆಗೆ ಪಾತ್ರರಾಗಿ. ಇದರೊಂದಿಗೆ ತಪ್ಪದೆ ಈಗ ನಾವು ಹೇಳುವ ಈ ಮೂರು ವಸ್ತುಗಳಲ್ಲಿ ಒಂದು ವಸ್ತುವನ್ನು ನಿಮ್ಮ ಮನೆಗೆ ತಂದು ನಿಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಿ. ಈ ದಿನ ಮನೆಗೆ ತರುವಂತಹ ಈ ಮೂರು ವಸ್ತುಗಳಿಗೂ ವಿಭಿನ್ನ ಬಗೆಯ ಶಕ್ತಿ ಇದೆ. ಯಾವುದನ್ನು ತರುವುದರಿಂದ ಏನು ಫಲ ಮಾಹಿತಿ ಇಲ್ಲಿದೆ ನೋಡಿ.

1. ಈ ದಿನ ಅಕ್ಕಿಯನ್ನು ಖರೀದಿಸಿ ಮನೆಗೆ ತರಬೇಕು. ಸಾಮಾನ್ಯವಾಗಿ ಜನರು ಈ ದಿನ ಉಪವಾಸ ಇರುವುದರಿಂದ ಅಕ್ಕಿ ಬಳಸುವುದಿಲ್ಲ ಆದರೂ ಅಕ್ಕಿಯನ್ನು ತಂದು ಮರುದಿನ ಅದನ್ನು ಮನೆಯಲ್ಲಿರುವ ಅಡುಗೆಗೆ ಬಳಸುವ ಇಟ್ಟಿರುವ ಅಕ್ಕಿಯ ಜೊತೆ ಮಿಕ್ಸ್ ಮಾಡಿ ಪ್ರತಿದಿನವೂ ಕೂಡ ಅದರಿಂದ ಮಾಡುವ ಆಹಾರ ಪದಾರ್ಥಗಳನ್ನು ಸೇವಿಸಿ.

ಈ ಸುದ್ದಿ ಓದಿ:- BPL, APL, AAY ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್, ಇನ್ನು ಮುಂದೆ ಈ ಬಗೆಯ ರೇಷನ್ ಕಾರ್ಡ್ ದಾರರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಬರುವುದಿಲ್ಲ…

ಇದರ ಜೊತೆಗೆ ಅಕ್ಕಿ ತಂದ ಸಮಯದಲ್ಲಿ ಸ್ವಲ್ಪ ಅಕ್ಕಿಯನ್ನು ಒಂದು ಚಿಕ್ಕ ಪೇಪರ್ ನಲ್ಲಿ ಕಟ್ಟಿ, ನೀವು ಹಣಕಾಸು ಇಡುವ ಪರ್ಸ್ ನಲ್ಲಿ ಅಥವಾ ನಿಮ್ಮ ಬೀರುವಿನಲ್ಲಿ ಇಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿಗಳು ಸುಧಾರಿಸುತ್ತದೆ, ಸಾಲ ಬಾಧೆ ತೀರುತ್ತದೆ, ಅನಿರೀಕ್ಷಿತ ಧನಲಾಭವಾಗುತ್ತದೆ ನಿಮ್ಮ ವ್ಯಾಪಾರ ವ್ಯವಹಾರ ಗಟ್ಟಿಯಾಗಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗುತ್ತದೆ ಈ ರೀತಿ ನೀವು ಆರ್ಥಿಕವಾಗಿ ಸದೃಢರಾಗುತ್ತೀರಿ.

* ಅದೇ ರೀತಿಯಾಗಿ ಗೋಧಿಯನ್ನು ತರುವುದರಿಂದ ಸೂರ್ಯನ ಸಂಪೂರ್ಣ ಅನುಗ್ರಹ ಮತ್ತು ಶಿವನ ಆಶೀರ್ವಾದವು ನಿಮಗೆ ದೊರೆಯುತ್ತದೆ. ನಿಮ್ಮ ಉದ್ಯೋಗದಲ್ಲಿ ಯಾವುದೇ ರೀತಿ ಕಿರಿಕಿರಿ ಇದ್ದರೂ ಅಥವಾ ನಿಮ್ಮ ಶ್ರಮಕ್ಕೆ ತಕ್ಕ ಹಾಗೆ ಪ್ರಮೋಷನ್ ಸಿಗದೇ ಇದ್ದರೂ ವರ್ಗಾವಣೆ ಸಮಸ್ಯೆ ಇದೆಲ್ಲ ಸಮಸ್ಯೆಗಳಿಗೆ ಇದು ಪರಿಹಾರ ಮಾರ್ಗವಾಗಿದೆ. ಈ ದಿನ ನೀವು ಗೋಧಿಯನ್ನು ತಂದು ಮರುದಿನ ಅದನ್ನು ಆಹಾರವಾಗಿ ಉಪಯೋಗಿಸುವುದರಿಂದ ವೃತ್ತಿಗೆ ಸಂಬಂಧಪಟ್ಟ ಹಾಗೆ ಇರುವ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಕಾಣುತ್ತೀರಿ.

ಹೆಸರು ಕಾಳು ಕೂಡ ಇದೇ ರೀತಿಯ ಶುಭಫಲಗಳನ್ನು ಉಂಟುಮಾಡುತ್ತದೆ ನಿಮ್ಮ ಮಕ್ಕಳು ಹೇಳಿದ ಮಾತು ಕೇಳದೆ ಇದ್ದರೆ ಅವರಿಗೆ ಓದಿನಲ್ಲಿ ಆಸಕ್ತಿ ಇಲ್ಲದಿದ್ದರೆ ಅಥವಾ ನಿಮಗೆ ವಿದ್ಯಾಭ್ಯಾಸದಲ್ಲಿ ಯಾವುದೇ ರೀತಿಯ ತೊಂದರೆಗಳು ಇದ್ದರೆ ಇಲ್ಲ, ನೀವು ದುಡುಕಿ ತೆಗೆದುಕೊಂಡ ನಿರ್ಧಾರಗಳಿಂದ ಕಷ್ಟದಲ್ಲಿ ಸಿಲುಕಿದ್ದರೆ ಅಥವಾ ನಿಮಗೆ ಬಹಳ ಕಷ್ಟಗಳು ಬಂದು ಮುಂದೆ.

ಈ ಸುದ್ದಿ ಓದಿ:-ಶಿವರಾತ್ರಿ ದಿನ ಈ ತಪ್ಪುಗಳನ್ನು ಮಾಡಬೇಡಿ ಶಿವ ಕೋಪಗೊಳ್ಳುವನು

ಯಾವ ರೀತಿ ಇದನ್ನು ಪರಿಹರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ದಿಕ್ಕು ತೋಚದಂತೆ ಆಗಿದ್ದರೆ ಶಿವರಾತ್ರಿ ದಿನ ಹೆಸರುಕಾಳು ತಂದು ಮರುದಿನ ಆಹಾರ ಪದಾರ್ಥದಲ್ಲಿ ಸೇರಿಸಿ ಅಡುಗೆ ಮಾಡಿ ಸೇವಿಸಿ. ಹೀಗೆ ಮಾಡುವುದರಿಂದ ಒಳ್ಳೆಯ ಫಲಿತಾಂಶಗಳನ್ನು ಕಾಣುತ್ತೀರಿ. ನಿಮ್ಮ ಶಕ್ತಿಯನುಸಾರ ನಿಮಗೆ ಎಷ್ಟು ಸಾಧ್ಯ ಅಷ್ಟು ಈ ಧಾನ್ಯಗಳನ್ನು ಮನೆಗೆ ಖರೀದಿಸಿ ತರಬಹುದು ಈ ಸರಳ ಉಪಾಯ ಮಾಡಿ ಸಂತೋಷವಾಗಿರಿ.

LEAVE A REPLY

Please enter your comment!
Please enter your name here