Home Blog Page 191

ತಿರುಪತಿಗೆ ಹೋಗುವ ಬಹುತೇಕ ಭಕ್ತಾದಿಗಳು ಈ ತಪ್ಪನ್ನು ಮಾಡುವುದರಿಂದ ಅವರಿಗೆ ವೆಂಕಟೇಶ್ವರ ಸ್ವಾಮಿಯ ಸಂಪೂರ್ಣ ಅನುಗ್ರಹ ಸಿಗುತ್ತಿಲ್ಲ.!

 

ಸಂಕಟ ಬಂದಾಗ ವೆಂಕಟರಮಣ ಎನ್ನುವ ಗಾದೆಯು ಕನ್ನಡದಲ್ಲಿ ಜನಪ್ರಿಯವಾಗಿದೆ. ನೆರೆ ರಾಜ್ಯವಾದ ಆಂಧ್ರಪ್ರದೇಶದಲ್ಲಿ ನೆಲೆ ನಿಂತಿರುವ ಪುರಾಣ ಪ್ರಸಿದ್ಧವಾದ ಈ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ದೇಶದ ನಾನಾ ಮೂಲೆಗಳಿಂದಲೂ ಕೂಡ ಭಕ್ತರ ದಂಡು ಬರುತ್ತದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಿಂದ ದಿನವೂ ಕೂಡ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ವೆಂಕಟೇಶ್ವರನ ದರ್ಶನಕ್ಕಾಗಿ ಹೋಗುತ್ತಾರೆ.

ವೆಂಕಟೇಶ್ವರ ಸ್ವಾಮಿಯು ತನ್ನನ್ನು ಅರಸಿ ಬರುವ ಭಕ್ತರಗಳ ಏನೇ ಸಮಸ್ಯೆ ಇದ್ದರೂ ಕೂಡ ಪರಿಹಾರ ಮಾಡುತ್ತಾರೆ. ಒಂದು ಬಾರಿ ತಿರುಪತಿಯಲ್ಲಿ ನೆಲೆ ನಿಂತಿರುವ ಈ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರೆ ಅವರ ಜೀವನದ ಎಲ್ಲಾ ಕಷ್ಟಗಳು ಕೂಡ ನಿವಾರಣೆ ಆಗುತ್ತಿರುವ ನಂಬಿಕೆ ಭಕ್ತಾದಿಗಳಲ್ಲಿ ಅಚಲವಾಗಿರುವುದರಿಂದ ದಿನೇ ದಿನೇ ಅಲ್ಲಿಗೆ ಹೋಗುವ ಭಕ್ತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

ಅನೇಕರಿಗೆ ಒಂದು ಬಾರಿ ವೆಂಕಟೇಶ್ವರ ದರ್ಶನ ಮಾಡಿದ ಬಳಿಕ ಅವರ ಸಮಸ್ಯೆಗೆ ಪರಿಹಾರ ಸಿಗುತ್ತದೆ ನಂತರ ಅವರು ವಾಡಿಕೆಯಂತೆ ಪ್ರತಿ ತಿಂಗಳು ಅಥವಾ ಪ್ರತಿ ವರ್ಷ ವೆಂಕಟೇಶ್ವರ ದರ್ಶನಕ್ಕಾಗಿ ಹೋಗುತ್ತಾರೆ. ಆದರೆ ಕೆಲವರಿಗೆ ಎಷ್ಟೇ ಬಾರಿ ತಿರುಪತಿಗೆ ಹೋಗಿ ತಿಮ್ಮಪ್ಪನ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು ಕೂಡ ಅವರ ಸಮಸ್ಯೆ ಪರಿಹಾರ ಆಗುವುದೇ ಇಲ್ಲ ಇದಕ್ಕೆಲ್ಲ ಅವರು ಮಾಡುವ ನಾಲ್ಕು ತಪ್ಪುಗಳು ಕಾರಣ ಆಗಿರುತ್ತವೆ.

ತಿರುಪತಿಗೆ ಹೋಗುವ ಪ್ರತಿಯೊಬ್ಬರ ಗಮನವೂ ಕೂಡ ಗರ್ಭಗುಡಿಯಲ್ಲಿ ನಿಂತಿರುವ ವೆಂಕಟೇಶ್ವರ ವಿಗ್ರಹದ ಮೇಲೆ ಇರುತ್ತದೆ. ಕಾಲ್ನಡಿಗೆಯಲ್ಲಿ ಅಥವಾ ಆ ಜನಸಾಗರ ನಡುವೆ ಧರ್ಮದರ್ಶನ ವಿಶೇಷ ದರ್ಶನಕ್ಕಾಗಿ ಕಾದು ಸುಸ್ತಾಗಿ ವೆಂಕಟೇಶ್ವರ ದರ್ಶನ ಮಾಡಿದ ಬಳಿಕ ಏನನ್ನೋ ಸಾಧಿಸಿದ ಆನಂದ ಸಿಗುತ್ತದೆ ಆದರೆ ವೆಂಕಟೇಶ್ವರ ದರ್ಶನ ಮಾಡುವುದಕ್ಕೂ ಮುನ್ನ ಮತ್ತೊಂದು ಕೆಲಸ ಮಾಡಬೇಕು ಎನ್ನುವುದು ಅನೇಕರಿಗೆ ತಿಳಿದಿಲ್ಲ.

ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೂ ಮುನ್ನ ಅಲ್ಲೇ ನೆಲೆ ನಿಂತಿರುವ ವರಾಹನಾಥ ಸ್ವಾಮಿ ದೇವಾಲಯಕ್ಕೆ ಹೋಗಿ ವರಹನಾಥ ಸ್ವಾಮಿಯ ದರ್ನಶವನ್ನು ಪಡೆಯಬೇಕು ಹೀಗಿದ್ದಲ್ಲಿ ಮಾತ್ರ ತನಗೆ ತೃಪ್ತಿ ಆಗುವುದು ಅಂತವರ ಪೂಜೆ ನನಗೆ ಬೇಗ ಅರ್ಪಿತವಾಗುತ್ತದೆ ಎನ್ನುವುದನ್ನು ಸ್ವತಃ ವೆಂಕಟೇಶ್ವರ ಸ್ವಾಮಿಯೇ ಹೇಳಿದ್ದಾರೆ. ಜೊತೆಗೆ ಪುರಾಣ ಕಥೆಗಳ ಪ್ರಕಾರ ಭೂವರಹನಾಥ ಸ್ವಾಮಿ ಹಾಗೂ ವೆಂಕಟೇಶ್ವರನ ಸ್ವಾಮಿಯ ನಡುವೆ ಆಗಿರುವ ಒಪ್ಪಂದವೊಂದು ಆಗಿದೆ.

ಯಾಕೆಂದರೆ ವೆಂಕಟೇಶ್ವರ ಸ್ವಾಮಿಯ ನೆಲೆ ನಿಂತಿರುವ ಈ ಜಾಗವು ಭೂವರಹನಾಥ ಸ್ವಾಮಿಯದ್ದಾಗಿದ್ದು ಅಲ್ಲಿ ನೆಲೆಸಲು ಅನುಮತಿ ಕೇಳಿದಾಗ ಮೂರು ಒಪ್ಪಂದಗಳನ್ನು ಮಾಡಿಕೊಂಡ ಭೂವರಹ ಸ್ವಾಮಿಯು ವೆಂಕಟೇಶ್ವರ ಅವರಿಗೆ ಅನುಮತಿ ಕೊಟ್ಟಿದ್ದರು ಎಂದು ಉಲ್ಲೇಖ ಇದೆ. ಆ ಒಪ್ಪಂದ ಪತ್ರವು ಈಗ ಟಿಟಿಡಿ ವಸ್ತು ಸಂಗ್ರಹಾಲಯದಲ್ಲಿದ್ದು ಅಲ್ಲಿಗೆ ಭೇಟಿ ಕೊಡುವ ಪ್ರತಿಯೊಬ್ಬರೂ ಕೂಡ ನೋಡಬಹುದಾಗಿದೆ.

ಈ ಒಪ್ಪಂದದ ಪ್ರಕಾರ ತಿರುಪತಿಯಲ್ಲಿ ನಡೆಯುವ ಪ್ರಥಮ ಪೂಜೆ, ಪ್ರಥಮ ನೈವೇದ್ಯ ವರಹನಾಥ ಸ್ವಾಮಿಗೆ ಮತ್ತು ತನ್ನನ್ನು ಕಾಣಬಯಸುವ ಭಕ್ತಾದಿಗಳು ಮೊದಲಿಗೆ ವರಹನಾಥ ಸ್ವಾಮಿಯಾದ ನಿನ್ನನ್ನು ದರ್ಶನ ಮಾಡುತ್ತಾರೆ ಎಂದು ವೆಂಕಟೇಶ್ವರ ಸ್ವಾಮಿ ವಚನ ಕೊಟ್ಟಿದ್ದರಂತೆ. ಆದರೆ ಪೂಜೆ ಹಾಗೂ ನೈವೇದ್ಯದ ವಿಚಾರದಲ್ಲಿ ಇಂದಿಗೂ ಇದೆ ನಿಯಮ ನಡೆಯುತ್ತಿದೆ. ಭಕ್ತಾದಿಗಳಿಗೆ ಈ ವಿಷಯ ತಿಳಿಯದ ಕಾರಣ ಅವರು ಮೊದಲಿಗೆ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ನಿಲ್ಲುತ್ತಿದ್ದಾನೆ.

ವರ್ಷಗಳ ಬಳಿಕ ಈ ತಪ್ಪನ್ನು ತಿದ್ದುವ ಕಾರಣದಿಂದಾಗಿ ಭೂವರಹನಾಥ ಸ್ವಾಮಿ ದರ್ಶನ ಮಾಡದೆ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಲು ಹೋಗುವರಿಗೆ ಸಮಸ್ಯೆ ಆಗದೆ ಇರಲಿ ಎಂದು ವೆಂಕಟೇಶ್ವರ ಸ್ವಾಮಿಯ ಗರ್ಭಗುಡಿ ತಲುಪುವ ಮುನ್ನ ಸಿಗುವ ಗರುಡ ಕಂಬದ ಹಿಂದೆಯೇ ಭೂವರಹನಾಥ ಸ್ವಾಮಿಯ ವಿಗ್ರಹವನ್ನು ಕೂಡ ಕೆತ್ತಲಾಗಿದೆ ಅದನ್ನು ದರ್ಶನ ಮಾಡಿಕೊಂಡು ಬೇಕಾದರೂ ಭಕ್ತಾದಿಗಳು ವೆಂಕಟೇಶ್ವರ ದರ್ಶನಕ್ಕೆ ಹೋಗಬಹುದು. ಇದೇ ರೀತಿಯ ಇನ್ನು ಮೂರು ತಪ್ಪುಗಳ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಶಿವನ ಕೃಪೆ ಇಂದು ಈ 4 ರಾಶಿಯವರಿಗೆ ಇರಲಿದೆ, ಅಂದುಕೊಂಡ ಕೆಲಸದಲ್ಲಿ ಜಯ, ಅನಿರೀಕ್ಷಿತ ಧನಲಾಭ.!

 

ಮೇಷ ರಾಶಿ:- ಸದಾ ಚುರುಕಿನ ಸ್ವಭಾವದಿಂದ ಕೂಡಿರುವ ನೀವು ಇಂದು ನೀವು ಹಾಕಿಕೊಂಡ ಪ್ಲಾನ್ ಪ್ರಕಾರ ಕೆಲಸ ನಡೆಯದಿದ್ದರೆ ಚಿಂತಾಕ್ರಾಂತರಾಗುವಿರಿ. ಆತ್ಮ ವಿಶ್ವಾಸದಿಂದ ನಿಮ್ಮ ಕೆಲಸಗಳನ್ನು ಮುಂದುವರಿಸಿ ಎಲ್ಲಾ ಕೆಲಸದಲ್ಲೂ ಕೂಡ ನಿಮಗೆ ಯಶಸ್ಸು ಸಿಗಲಿದೆ. ಯಾರೊಂದಿಗೂ ವಿವಾದ ಬೇಡ.
ಶುಭ ಸಂಖ್ಯೆ – 05

ವೃಷಭ ರಾಶಿ:- ನೀವು ಕೂಡಿಟ್ಟ ಕಾಸೆಲ್ಲಾ ಇಂದು ಖರ್ಚಾಗುತ್ತದೆ. ಯಾವುದರ ಮೇಲೂ ದುರಾಸೆ ಪಡದೆ ಬಂದದ್ದನ್ನು ಸಂತಸದಿಂದ ಸ್ವೀಕರಿಸಿ. ನಿಮ್ಮನ್ನು ಬಳಸಿಕೊಳ್ಳುವ ಜನರ ಬಗ್ಗೆ ಎಚ್ಚರಿಕೆಯಿಂದಿರಿ. ಆಡುವ ಮಾತುಗಳ ಮೇಲೆ ನಿಯಂತ್ರಣವಿರಲಿ ಇಲ್ಲವಾದಲ್ಲಿ ಅಧಿಕಾರವನ್ನು ಕಳೆದುಕೊಳ್ಳುವಿರಿ.
ಶುಭ ಸಂಖ್ಯೆ – 09

ಮಿಥುನ ರಾಶಿ:- ಮನೆಯನ್ನು ಕೊಳ್ಳುವ ಅವಕಾಶ ಸಿಗಲಿದೆ ಆದರೆ ಮನೆ ಅಥವಾ ಭೂಮಿಯನ್ನು ಕೊಳ್ಳುವ ನಿರ್ಧಾರಕ್ಕೆ ಸದ್ಯಕ್ಕೆ ಕೈ ಹಾಕಬೇಡಿ. ವಿದ್ಯಾರ್ಥಿಗಳು ಓದಿನಲ್ಲಿ ಮುಂದೆ ಇರುತ್ತಾರೆ. ರಾಜಕೀಯದಲ್ಲಿ ಸಕ್ರಿಯರಾಗಿರುವವರಿಗೆ ಶತ್ರುಗಳ ಕಾಟ ಹೆಚ್ಚಾಗಿರುತ್ತದೆ.
ಶುಭ ಸಂಖ್ಯೆ – 07

ಕಟಕ ರಾಶಿ:- ಆಭರಣ ತಯಾರಿಕೆ ವೃತ್ತಿ ಮಾಡುವವರಿಗೆ ಲಾಭದ ದಿನವಾಗಿದೆ. ಆತ್ಮವಿಶ್ವಾಸ ಕಡಿಮೆ ಆಗುವ ಸನ್ನಿವೇಶಗಳು ಬಂದರೂ ಕೂಡ ಆತ್ಮೀಯರ ಭರವಸೆಯ ಸಾಂತ್ವನ ಸಿಗುತ್ತದೆ. ದೈಹಿಕ ಆರೋಗ್ಯದ ಸಮಸ್ಯೆ ಇರುವುದಿಲ್ಲ. ಇದೇ ರೀತಿ ಮುಂದುವರೆದರೆ ಕೀರ್ತಿ ಪ್ರತಿಷ್ಠೆ ಲಭಿಸುತ್ತದೆ.
ಶುಭ ಸಂಖ್ಯೆ – 02

ಸಿಂಹ ರಾಶಿ:- ಆರ್ಥಿಕ ವಿಷಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಹಣದ ಕೊರತೆ ಕಡಿಮೆಯಾಗುತ್ತದೆ. ಮಾನಸಿಕ ಸದೃಢತೆ ಇರುತ್ತದೆ. ನಿಮ್ಮಲ್ಲಿ ನಾಯಕತ್ವದ ಗುಣ ವಿಶೇಷವಾಗಿರುತ್ತದೆ. ಸ್ವಂತ ಗೃಹ ಮತ್ತು ವಾಹನ ಖರೀದಿಸುವ ಭಾಗ್ಯವಿರುವ ದಿನವಾಗಿದೆ. ದಿನ ಪೂರ್ತಿ ಸಂತೋಷವಾಗಿರುತ್ತೀರಿ.
ಶುಭ ಸಂಖ್ಯೆ – 01

ಕನ್ಯಾ ರಾಶಿ:- ಕಂಕಣ ಭಾಗ್ಯ ಕೂಡಿ ಬರುವ ದಿನವಾಗಿದೆ. ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ. ಈ ದಿನ ಉದ್ಯೋಗವನ್ನು ಬದಲಾಯಿಸುವ ಮನಸು ಮಾಡುತ್ತೀರಿ. ಈ ದಿನದ ಆದಾಯ ವ್ಯಯ ಸರಿ ಸಮಾನವಾಗಿರುತ್ತದೆ. ಅಧಿಕಾರವರ್ಗಕ್ಕೆ ವಿಶೇಷ ಸವಲತ್ತು ದೊರೆಯುತ್ತದೆ.
ಶುಭ ಸಂಖ್ಯೆ – 3

ತುಲಾ ರಾಶಿ:- ಸಾರ್ವಜನಿಕ ವೃತ್ತಿಪರರು ನಷ್ಟ ಅನುಭವಿಸುವ ದಿನವಾಗಿರುತ್ತದೆ. ಆದಷ್ಟು ತಾಳ್ಮೆಯಿಂದ ಇರಿ ಇಲ್ಲವಾದಲ್ಲಿ ನಿಮ್ಮ ಹೆಸರು ಹಾಳಾಗುತ್ತದೆ. ಆತುರ ಪಡದೆ ಶಾಂತಿ ಸಂಯಮದಿಂದಿದ್ದರೆ ಯಶಸ್ಸು ಲಭಿಸುತ್ತದೆ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ.
ಶುಭ ಸಂಖ್ಯೆ- 07

ವೃಶ್ಚಿಕ ರಾಶಿ:- ಬೇರೆಯವರ ಸಾಲದ ವಿಚಾರದಲ್ಲಿ ಮಧ್ಯವರ್ತಿ ಆಗದಿರಿ. ಈ ದಿನ ಸಾಲ ಪಡೆದುಕೊಳ್ಳುವ ಅಥವಾ ಸಾಲ ನೀಡುವ ನಿರ್ಧಾರ ಮಾಡಬೇಡಿ. ಸಂಗಾತಿಯ ಜೊತೆಗೆ ವಾದ ವಿವಾದಗಳು ಇರುತ್ತವೆ. ಬೇಡದ ವಿಚಾರಗಳಿಗೆ ತಲೆ ಹಾಕಬೇಡಿ. ಊಹಿಸಿರದ ಜವಾಬ್ದಾರಿಗಳು ನಿಮ್ಮ ಪಾಲಿಗೆ ಬರಲಿವೆ.
ಶುಭ ಸಂಖ್ಯೆ – 04

ಧನಸ್ಸು ರಾಶಿ:- ಭೂಮಿಗೆ ಸಂಬಂಧಿಸಿದ ವಿವಾದಗಳನ್ನು ಎದುರಿಸುವಿರಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸಿದರೆ ಒಳ್ಳೆಯದು. ಸದಾ ಚುರುಕುತನದಿಂದ ಇರುತ್ತೀರಿ. ಇಂದು ರುಚಿಕರ ಊಟ ಹಾಗೂ ಒಳ್ಳೆಯ ನಿದ್ದೆ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತೀರಿ.
ಶುಭ ಸಂಖ್ಯೆ – 3

ಮಕರ ರಾಶಿ:- ಆತ್ಮಸ್ಥೈರ್ಯ, ಆತ್ಮವಿಶ್ವಾಸದ ಕೊರತೆ ಇದ್ದರೂ ಕೂಡ ಮಾನಸಿಕ ಸದೃಢತೆ ನಿಮ್ಮನ್ನು ಕಾಪಾಡುತ್ತದೆ. ನಿಮ್ಮ ಸ್ಥಾನಕ್ಕೆ ಚ್ಯುತಿ ಬರದಂತೆ ವರ್ತಿಸಿ. ಕ್ರಮೇಣವಾಗಿ ಜೀವನದಲ್ಲಿ ನೀವು ಒಳ್ಳೆಯ ಸ್ಥಾನವನ್ನು ತಲುಪುತ್ತೀರಿ.
ಶುಭ ಸಂಖ್ಯೆ – 9

ಕುಂಭ ರಾಶಿ:- ನಿಮ್ಮ ಪ್ಲಾನ್ ಪ್ರಕಾರ ಇಂದಿನ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಅನಿರೀಕ್ಷಿತ ಧನಲಾಭವಾಗುವ ಸಾಧ್ಯತೆಗಳಿವೆ. ಅದೃಷ್ಟದ ಬಲವಿದೆ. ಆದಾಯವನ್ನು ಹೆಚ್ಚಿಸಿಕೊಳ್ಳಿ. ದುಡುಕುತನದಲ್ಲಿ ಮಾತನಾಡಿ ತೊಂದರೆ ಮಾಡಿಕೊಳ್ಳಬೇಡಿ. ಕುಟುಂಬ ಸೌಖ್ಯವಿರುತ್ತದೆ.
ಶುಭ ಸಂಖ್ಯೆ – 09

ಮೀನ ರಾಶಿ:- ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿಯುತ್ತಾರೆ. ದಂಪತಿಗಳಿಗೆ ಸಂತಾನ ಲಾಭವಿದೆ. ನಿಮ್ಮ ಮಕ್ಕಳ ಹೆಸರಿನಲ್ಲಿ ವ್ಯಾಪಾರವನ್ನು ಆರಂಭಿಸಿದರೆ ಲಾಭ ಬರುತ್ತದೆ. ಇಂದು ನಿಮ್ಮ ಮಕ್ಕಳ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸುವ ಸಾಧ್ಯತೆಗಳಿವೆ.
ಶುಭ ಸಂಖ್ಯೆ – 07

ಹಳೆಯ ಮಾತ್ರೆಗಳು ಮನೆಯಲ್ಲಿ ಇದ್ದರೆ ಅವುಗಳನ್ನು ಬಿಸಾಕಬೇಡಿ, ಸಿಕ್ಕಾಪಟ್ಟೆ ಉಪಯೋಗಕ್ಕೆ ಬರುತ್ತದೆ.!

 

ಕೆಲವರ ಮನೆಯಲ್ಲಿ ಒಂದು ಮಿನಿ ಮೆಡಿಕಲ್ ಇರುತ್ತದೆ ಎಂದೇ ಹೇಳಬಹುದು. ಯಾಕೆಂದರೆ, ಮನೆಯಲ್ಲಿ ವಯಸ್ಸಾದವರು ಅಥವಾ ಚಿಕ್ಕ ಮಕ್ಕಳು ಅಥವಾ ಕಾಯಿಲೆ ಬಿದ್ದಿರುವವರು ಇದ್ದರೆ ಸಾಕಷ್ಟು ಮಾತ್ರೆಗಳು ಮನೆಯಲ್ಲಿ ಶೇಖರಣೆ ಆಗಿರುತ್ತವೆ. ಒಮ್ಮೊಮ್ಮೆ ನಾವು ಅಡ್ವಾನ್ಸ್ ಆಗಿ ತಲೆ ನೋವಿನ ಮಾತ್ರೆ, ಪೇನ್ ಕಿಲ್ಲರ್ ಮಾತ್ರೆ ಅಥವಾ ಜ್ವರದ ಮಾತ್ರೆಗಳನ್ನು ಕೂಡ ತಂದು ಸ್ಟೋರ್ ಮಾಡಿ ಇಟ್ಟಿರುತ್ತೇವೆ.

ಇವೆಲ್ಲವೂ ಕೂಡ ಎಕ್ಸ್ಪರಿ ಡೇಟ್ ಮುಗಿದ ಮೇಲೆ ವೇಸ್ಟ್ ಆಗುತ್ತದೆ, ಅವುಗಳನ್ನು ನಾವು ಬಿಸಾಕಿ ಬಿಡುತ್ತೇವೆ. ಎಕ್ಸ್ಪರಿ ಆದ ಮಾತ್ರೆಗಳನ್ನು ಸೇವಿಸಿದರೆ ಅದು ಪಾಯಿಸನ್ ಆಗುವ ಕಾರಣ ದೇಹಕ್ಕೆ ಅಡ್ಡ ಪರಿಣಾಮ ಆಗುತ್ತದೆ ಎನ್ನುವ ಕಾರಣ ಅದನ್ನು ಒಲ್ಲದ ಮನಸ್ಸಿನಿಂದ ಬಿಸಾಕುತ್ತೇವೆ.

ಹಾಗೆಯೇ ಕಾಯಿಲೆ ಗುಣ ಮಾಡುವುದಕ್ಕೆ ತಂದ ಔಷಧಿಯ ಗುಣವೇ ಮುಗಿದು ವಿಷವಾದ ಮೇಲೆ ಆ ವಸ್ತುವಿನಿಂದ ಇನ್ನೇನು ಪ್ರಯೋಜನ ಎನ್ನುವ ಕಾರಣದಿಂದ ಅದು ವೇಸ್ಟ್ ಎನ್ನುವ ಭಾವನೆ ನಮಗೆ ಬರುತ್ತದೆ. ಆದರೆ ಆ ವೇಸ್ಟ್ ಮಾತ್ರೆಗಳು ಕೂಡ ಅನೇಕ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಈಗ ನಾವು ಹೇಳುವ ಈ ಒಂದು ಕೆಲಸಕ್ಕೆ ವೇಸ್ಟ್ ಮಾತ್ರೆಗಳೇ ಮುಖ್ಯ.

ಅದೇನೆಂದರೆ ಎಲ್ಲರ ಮನೆಯಲ್ಲೂ ಕೂಡ ಜಿರಳೆ, ಇರುವೆ, ಇಲಿ, ಹಲ್ಲಿಗಳ ಕಾಟ ಇದ್ದೇ ಇರುತ್ತದೆ. ಇನ್ನು ಅನೇಕ ಸಣ್ಣ ಜೀವಿಗಳು ಅಡುಗೆ ಮನೆಗೆ ಸೇರಿಕೊಂಡು ಕಿರಿ ಕಿರಿ ಮಾಡುತ್ತಿರುತ್ತವೆ. ಇವುಗಳನ್ನು ಮನೆಯಿಂದ ಓಡಿಸದಿದ್ದರೆ ಅದೇನಾದ್ರೂ ಆಹಾರ ಪದಾರ್ಥಗಳ ಮೇಲೆ ಓಡಾಡಿದರೆ ಅಥವಾ ಅವು ನಮ್ಮನ್ನು ಕಚ್ಚಿದ್ದರೆ ನಮಗೆ ಅವುಗಳಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.

ಊಟದ ಪದಾರ್ಥವು ಪಾಯ್ಸನ್ ಆಗುವ ವಿಷಯದಲ್ಲಿ ವೈದ್ಯರೇ ಮನೇಲಿರುವ ಜಿರಳೆಗಳು ಕಾರಣ ಎಂದು ಹೇಳಿ ಬಿಡುತ್ತಾರೆ ಇದರಿಂದ ಅನೇಕ ವೈರಲ್ ಫೀವರ್ ಗಳು ಫುಡ್ ಪಾಯಿಸನ್ ಗಳಾಗಿ ಮನೆಯವರೆಲ್ಲ ಸಂಕಷ್ಟ ಅನುಭವಿಸಿ ಇವುಗಳ ಮೇಲೆ ಕೋಪಗೊಂಡಿರುತ್ತೇವೆ.

ನಾವು ಮಾರ್ಕೆಟ್ ಅಲ್ಲಿ ಸಿಗುವ ಯಾವುದೇ ಔಷಧಿಗಳನ್ನು ತಂದು ಹಾಕಿದರೂ ಕೂಡ ಇವು ಮನೆ ಬಿಟ್ಟು ಹೋಗುವುದಿಲ್ಲ ಅಂತಹ ಸಮಯದಲ್ಲಿ ಹಳೆ ಮಾತ್ರೆಗಳನ್ನು ಉಪಯೋಗಿಸಿಕೊಂಡು ಒಂದು ಸಿಂಪಲ್ ಟ್ರಿಕ್ ಮಾಡಿ ಸಾಕು ಇನ್ಯಾವತ್ತು ಅವು ನಿಮ್ಮ ಮನೆಯ ಕಡೆ ಸುಳಿಯದಂತೆ ಹೋಗಿಬಿಡುತ್ತವೆ ಅಥವಾ ಸತ್ತು ಹೋಗುತ್ತವೆ.

ಈ ರೀತಿ ಮಾಡುವುದಕ್ಕೆ ಹಳೆ ಮಾತ್ರೆಗಳ ಜೊತೆ ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟು ಮತ್ತು ಕೊಬ್ಬರಿ ಎಣ್ಣೆ ಕೂಡ ಬೇಕು. ಒಂದಷ್ಟು ಹಳೆ ಮಾತ್ರೆಗಳನ್ನು ಹಾಕಿ ಪುಡಿ ಮಾಡಿಕೊಳ್ಳಿ. ಎರಡು ಚಮಚಗಳಷ್ಟು ಹಳೆ ಮಾತ್ರೆಗಳ ಪುಡಿ ಆಗಿದ್ದರೆ ಅದಕ್ಕೆ ಎರಡು ಚಮಚಗಳಷ್ಟು ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟನ್ನು ಹಾಕಿ. ಈಗ ಅದಕ್ಕೆ ಒಂದುವರೆ ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿ ಅಥವಾ ಉಂಡೆ ಮಾಡಲು ಎಷ್ಟು ಬೇಕೋ ಅಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ.

ಇದನ್ನು ಈಗ ಜಿರಳೆಗಳು ಹೆಚ್ಚಾಗಿ ಓಡಾಡುವ ಅಡಿಗೆ ಮನೆ ಶೆಲ್ಫ್, ಸಿಂಕ್ ಕೆಳಗೆ ಇಲ್ಲೆಲ್ಲಾ ಇಡಿ. ಕೊಬ್ಬರಿ ಎಣ್ಣೆಯ ಘಮವು ಇವುಗಳನ್ನು ಸೆಳೆಯುವುದರಿಂದ ಅವು ಬಂದು ಇದನ್ನು ತಿಂದು ಸತ್ತು ಹೋಗುತ್ತವೆ ಅಥವಾ ಇದನ್ನು ತಿಂದ ಮೇಲೆ ಅದಕ್ಕೆ ತೊಂದರೆಯಾಗುವ ಕಾರಣ ಮತ್ತೆ ಆ ಜಾಗಕ್ಕೆ ಅವು ಬರುವುದಿಲ್ಲ.

ಇಂದಿಗೂ ಉಸಿರಾಡುತ್ತಿರುವ ಶನಿ ಪರಮಾತ್ಮ, ಇಲ್ಲಿಗೆ ಬಂದರೆ ಶನಿದೋಷ ನಿವಾರಣೆಯಾಗುತ್ತದೆ. ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಸಂಕಷ್ಟಗಳು ನಿವಾರಣೆಯಾಗುತ್ತದೆ.

 

ಶನಿಮಹಾತ್ಮ ಈ ಹೆಸರು ಕೇಳಿದ ತಕ್ಷಣವೇ ಎಲ್ಲರ ಕಿವಿಯು ನೆಟ್ಟಗಾಗುತ್ತದೆ. ಸದಾ ಸನ್ಮಾರ್ಗದಲ್ಲಿ ನಡೆ ಎಂದು ಎಚ್ಚರಿಕೆ ಕೊಡುವ ಶನಿಪರಮೇಶ್ವರನ ಪ್ರಭಾವದ ಬಗ್ಗೆ ಜನರಿಗೆ ಮಾಹಿತಿಗಿಂತ ತಪ್ಪು ತಿಳುವಳಿಕೆ ಹೆಚ್ಚು. ಶನಿಮಹಾತ್ಮ ಎಂದ ತಕ್ಷಣ ಇದು ಕಾಟ ಎಂದು ಭಾವಿಸಿರುವವರಿಗೆ ಶನಿದೇವನ ಅನುಗ್ರಹ ಸಿಕ್ಕರೆ ಎಷ್ಟು ಶಾಂತಿ ನೆಮ್ಮದಿ ಮತ್ತು ಸಂತೋಷ ಹಾಗೂ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎನ್ನುವುದರ ಅರಿವಿರುವುದಿಲ್ಲ.

ಶನೇಶ್ವರನು ಬಹಳ ಪ್ರಭಾವಶಾಲಿ ದೇವರು ಸದಾ ಸತ್ಯ, ನ್ಯಾಯ, ಧರ್ಮ, ಪ್ರಾಮಾಣಿಕತೆಗೆ ಪ್ರತಿಬಿಂಬದಂತಿರುವ ಈ ದೇವರ ದರ್ಶನ ಪಡೆಯುವುದು ಹಾಗೂ ಅನುಗ್ರಹ ಪಡೆಯುವುದೇ ಪುಣ್ಯ. ನಮ್ಮ ಭಾರತ ದೇಶದಲ್ಲಿ ಕೂಡ ಶನಿ ದೇವರ ಹಲವು ದೇವಾಲಯಗಳು ಇವೆ. ಅಂತಹದ್ದೇ ಒಂದು ಪ್ರಸಿದ್ಧ ದೇವಾಲಯ ಶನಿ ಸಿಂಗನಾಪುರದಲ್ಲಿರುವ ಶನಿ ದೇವರ ವಿಗ್ರಹ.

ಶನಿ ಸಿಂಗನಾಪುರವು ಮಹಾರಾಷ್ಟ್ರದಲ್ಲಿರುವ ನಾಸಿಕ್ ಸಮೀಪ ಇದೆ. ನಾಸಿಕ್ ನಗರದಿಂದ 140 ಕಿ.ಮೀ ಪ್ರಯಾಣ ಮಾಡಿದರೆ ಶನಿ ಸಿಂಗನಾಪುರ ಸಿಗುತ್ತದೆ. ಪ್ರತಿ ಅರ್ಧಗಂಟೆಗೂ ನಾಸಿಕ್ ನಗರದಿಂದ ಸರ್ಕಾರಿ ಬಸ್ ಗಳು ಮತ್ತು ನೂರಾರು ಕ್ಯಾಬ್ ಗಳು ಶನಿ ಸಿಂಗನಪುರವನ್ನು ತಲುಪಲು ಸಿಗುತ್ತವೆ. ಶನಿ ಸಿಂಗನಪುರದಲ್ಲಿ ಶನಿ ಮಹಾತ್ಮನ ದೇವಸ್ಥಾನದ ಬದಲು ಶನಿ ದೇವರು ನಿಂತಲ್ಲೇ ಶಿಲೆಯಾಗಿರುವ ಒಂದು ವಿಗ್ರಹವಿದೆ.

ಈ ವಿಗ್ರಹ ಪ್ರತಿಷ್ಠಾಪನೆ ಆಗಿರುವ ಬಗ್ಗೆ ಒಂದು ಕಥೆಯು ಶನಿ ಪುರಾಣದಲ್ಲಿ ಇದೆ. ಸಾವಿರಾರು ವರ್ಷಗಳ ಹಿಂದೆ ಬಿಂಕಾರ ಎನ್ನುವ ರಾಕ್ಷಸನು ಇದ್ದ. ಈತ ಬಹಳ ದುಷ್ಟನಾಗಿದ್ದು ಒಮ್ಮೆ ಶನಿ ಸಿಂಗನಪುರದಲ್ಲಿದ್ದ ಎಲ್ಲಾ ಜನರನ್ನು ಮತ್ತು ಆ ಗ್ರಾಮವನ್ನು ನಾಶ ಮಾಡಲು ಸಿದ್ದರಾದ ಆಗ ಶನಿಮಹಾತ್ಮನು ಬಿಂಕಾರ ರಾಕ್ಷಸನನ್ನು ನಮ್ಮ ಆರನೇ ಕಣ್ಣಿನಿಂದ ಶನಿ ಸಿಂಗನಪುರದಲ್ಲಿ ಸಂಹಾರ ಮಾಡಿದರು.

ಆತ ಸಾಯುವಾಗ ತಾನು ಮತ್ತೊಮ್ಮೆ ಇಲ್ಲಿ ಹುಟ್ಟಿ ಈ ಗ್ರಾಮವನ್ನು ಇಲ್ಲಿರುವ ಎಲ್ಲಾ ಜೀವಜಂತುಗಳನ್ನು ನಾಶ ಮಾಡುವುದಾಗಿ ಶನಿ ದೇವರಿಗೆ ಸವಾಲು ಹಾಕಿದ. ಅಂದಿನಿಂದ ಆ ಊರಿಗೆ ಕಾವಲಾಗಿ ಬಿಂಕಾರ ರಾಕ್ಷಸನ ಕಾಟದಿಂದ ಜನತೆಯನ್ನು ರಕ್ಷಿಸಲು ಶನಿ ಪರಮಾತ್ಮನೇ ಇಲ್ಲಿ ಶಿಲೆಯಾಗಿ ನೆಲೆಸಿದ್ದಾನೆ ಎನ್ನುವ ಉಲ್ಲೇಖ ಇದೆ.

ಶನಿ ದೇವರು ಶಿಲೆಯಾಗಿ ನಿಂತಿರುವ ಕಲ್ಲನ್ನು ಕಾಣಬಹುದು. ಒಮ್ಮೆ ಪ್ರವಾಹದಲ್ಲಿ ಈ ಕಲ್ಲು ತೇಲಿ ಹೋಗಿತ್ತು 150 ವರ್ಷಗಳ ಬಳಿಕ ನದಿಯಲ್ಲಿ ಈ ಕಲ್ಲು ತೇಲಿ ಬಂತು. ಅಲ್ಲೇ ಸಮೀಪದಲ್ಲಿದ್ದ ದನ ಕಾಯುವವರು ಕಲ್ಲನ್ನು ಹೊಡೆದು ಪರೀಕ್ಷಿಸಿದಾಗ ರಕ್ತ ಸೋರಿ ಬರುತ್ತಿದನ್ನು ನೋಡಿ ಊರಿನ ಗ್ರಾಮಸ್ಥರಿಗೆ ತಿಳಿಸಿದಾಗ ಅಂದಿನ ದಿನ ರಾತ್ರಿ ಊರಿನ ಗ್ರಾಮಸ್ಥರ ಕನಸಿನಲ್ಲಿ ಶನಿ ಮಹಾತ್ಮನು ಬಂದು ತಮಗೆ ಈ ಊರಿನಲ್ಲಿ ದೇವಸ್ಥಾನ ಕಟ್ಟಬೇಕೆಂದು ಆಜ್ಞೆ ಕೊಟ್ಟರಂತೆ.

ಅಂದಿನಿಂದ ಶನಿ ಸಿಂಗನಪುರದ ಶನಿಮಹಾತ್ಮನ ಖ್ಯಾತಿ ಲೋಕ ವಿಕ್ಯಾತಿಯಾಗಿದೆ. ಶನಿದೋಷ ಇರುವವರು ಇಲ್ಲಿಗೆ ಬಂದು ಈ ದೇವರ ದರ್ಶನ ಮಾಡಿದರೆ ದೋಷ ಪರಿಹಾರ ಆಗುತ್ತದೆ ಎಂದು ನಂಬುತ್ತಾರೆ. ಪ್ರತಿದಿನವೂ ಕೂಡ 40,000 ಕ್ಕಿಂತ ಹೆಚ್ಚು ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. ಈ ದೇವರಿಗೆ ಮೇಲ್ಚಾವಣಿಯನ್ನು ಕೂಡ ನಿರ್ಮಿಸಿಲ್ಲ, ಹಲವು ಬಾರಿ ದೇವಸ್ಥಾನ ಕಟ್ಟಲು ಪ್ರಯತ್ನಿಸಿದರೂ ಕೂಡ ಶನಿದೇವರಿಗೆ ಅದು ಇಷ್ಟವಿಲ್ಲದ ಕಾರಣ ಸಾಧ್ಯವಾಗಿಲ್ಲ.

ಜೊತೆಗೆ ಈ ದೇವಸ್ಥಾನದಲ್ಲಿ ಯಾರು ಅರ್ಚಕರಿಲ್ಲ ಇಲ್ಲಿಗೆ ಬರುವ ಪುರುಷ ಭಕ್ತಾದಿಗಳೇ ಹತ್ತಿರದಲ್ಲಿರುವ ಬಾವಿಯಲ್ಲಿ ಸ್ನಾನ ಮಾಡಿ ಕಾವಿಯುಟ್ಟು ಶನಿ ದೇವರ ಪೂಜೆ ಸಲ್ಲಿಸಬಹುದು. ಮತ್ತು ಇಂದಿಗೂ ಸಹ ಶನಿ ದೇವರೇ ಊರನ್ನು ಕಾಯುತ್ತಿದ್ದಾರೆ ಎನ್ನುವ ನಂಬಿಕೆ ಇದೆ. ಹಾಗಾಗಿ ಊರಿನಲ್ಲಿ ಯಾವುದೇ ಕಳ್ಳತನ ದರೋಡೆ ಅಥವಾ ಅನ್ಯಾಯ ಜರುಗುವುದಿಲ್ಲ. ಈ ಊರಿನ ಬ್ಯಾಂಕ್, ಪೊಲೀಸ್ ಸ್ಟೇಷನ್ ಅಥವಾ ಯಾವ ಮನೆಗಳಿಗೂ ಕೂಡ ಬಾಗಿಲು ಇರುವುದಿಲ್ಲ. ಇಷ್ಟು ಪ್ರಭಾವಶಾಲಿಯಾದ ಈ ದೇವಸ್ಥಾನಕ್ಕೆ ನೀವು ಕೂಡ ಒಮ್ಮೆ ತಪ್ಪದೇ ಭೇಟಿ ಕೊಡಿ ಶನಿ ದೇವರ ಕೃಪೆಗೆ ಪಾತ್ರರಾಗಿ.

ಹಿಂದೂ ಧರ್ಮವನ್ನು ಸ್ವೀಕರಿಸಿದ ಪಾಕಿಸ್ತಾನದ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ.!

 

ಇಡೀ ಪ್ರಪಂಚದ ಎಲ್ಲಾ ಧರ್ಮಗಳಿಗಿಂತಲೂ ಕೂಡ ಹಳೆಯದಾದ ಧರ್ಮ ಹಿಂದೂ ಧರ್ಮ ಇದನ್ನು ಸನಾತನ ಧರ್ಮ ಎಂದು ಕೂಡ ಕರೆಯುತ್ತೇವೆ. ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ವಾಸ ಮಾಡುತ್ತಿದ್ದಾರೆ ಮತ್ತು ಪ್ರಪಂಚದಾದ್ಯಂತ ಕೂಡ ಹಿಂದೂ ಧರ್ಮವನ್ನು ಅನುಸರಿಸುವ ಅನೇಕರಿದ್ದಾರೆ ಹಾಗೂ ಇಂದು ಅಖಂಡ ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ದೇಶಗಳಾಗಿ ನಿರ್ಮಾಣವಾಗಿರುವ ಭಾರತದ ನೆರೆ ದೇಶಗಳನ್ನು ಕೂಡ ಹಿಂದೂ ಧರ್ಮದವರು ಇದ್ದಾರೆ.

ಭಾರತದ ನೆರೆ ದೇಶಗಳಲ್ಲಿ ಇಂದು ಅನೇಕರು ಬೇರೆ ಧರ್ಮವನ್ನು ಅನುಸರಿಸಿದರು ಕೂಡ ಅವರೆಲ್ಲರ ಮೂಲವೂ ಹಿಂದೂ ಧರ್ಮವಾಗಿದೆ ಇದನ್ನು ಅರಿತ ಅನೇಕರು ಮತ್ತೆ ತಮ್ಮ ಮನೆಗೆ ಹಿಂದಿರುಗಿದಂತೆ ಹಿಂದೂ ಧರ್ಮಕ್ಕೆ ಮರಳುತ್ತಿದ್ದಾರೆ. ಈಗ ಸರದಿಯಲ್ಲಿ ಪಾಕಿಸ್ತಾನದ ಫೇಮಸ್ ಸೋಶಿಯಲ್ ಮೀಡಿಯಾ ಸ್ಟಾರ್ ಕೂಡ ಸೇರಿದ್ದಾರೆ.

ನಮ್ಮ ಭಾರತದ ಬಗ್ಗೆ ತಿಳಿದುಕೊಂಡ ಅಥವಾ ಭಾರತಕ್ಕೆ ಭೇಟಿ ಕೊಟ್ಟ ಅನೇಕ ವಿದೇಶಿಗರು ಇಲ್ಲಿನ ನಾಡು ನೆಲ ಆಚಾರ ವಿಚಾರ ಧರ್ಮದ ವಿಚಾರ ಅರಿತು ಮತ್ತು ಇದಕ್ಕಿರುವ ವೈಜ್ಞಾನಿಕ ಕಾರಣಗಳನ್ನು ಅರಿತು ಮತ್ತು ಸಾಕ್ಷಾಧಾರಗಳನ್ನು ಕಂಡು ಅದರ ಅನುಭವದಿಂದ ಪ್ರೇರಿತರಾಗಿ ಆಧ್ಯಾತ್ಮದತ್ತ ವಾಲಿದ್ದಾರೆ. ತಮ್ಮ ಉಳಿದ ಬದುಕಿನ ಪೂರ್ತಿ ಹಿಂದು ಧರ್ಮವನ್ನು ಅನುಸರಿಸುವುದಾಗಿ ಒಪ್ಪಿಕೊಂಡು ಬದಲಾಗಿದ್ದಾರೆ.

ಇದೇ ರೀತಿ ನಮ್ಮ ಪಕ್ಕದ ರಾಷ್ಟ್ರವಾದ ಪಾಕಿಸ್ತಾನದ ಸೋಶಿಯಲ್ ಮೀಡಿಯಾ ಇನ್ಫುಯೆನ್ಸರ್ ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್ ಎಂದು ಕರೆಸಿಕೊಂಡಿರುವ ಶಯನ್ ಅಲಿ ಎನ್ನುವವರು ಕೂಡ ಹಿಂದು ಧರ್ಮಕ್ಕೆ ಕನ್ವರ್ಟ್ ಆಗಿರುವ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿಕೊಂಡಿದ್ದಾರೆ. ಸದ್ಯಕ್ಕೀಗ ಭಾರತ ಮತ್ತು ಪಾಕಿಸ್ತಾನದಾದ್ಯಂತ ಶಯನ್ ಅಲಿ ಅವರು ಹಿಂದೂ ಧರ್ಮಕ್ಕೆ ಕನ್ವರ್ಟ್ ಆಗಿರುವ ಸುದ್ದಿಯು ಹೆಚ್ಚು ಚರ್ಚೆ ಆಗುತ್ತಿದೆ.

ಮೊದಲಿನಿಂದಲೂ ಕೂಡ ಶಯನ್ ಅಲಿ ಅವರು ಭಾರತದ ಬಗ್ಗೆ ಮತ್ತು ಹಿಂದೂ ಧರ್ಮದ ಬಗ್ಗೆ ಅಪಾರ ಒಲವನ್ನು ಹೊಂದಿದ್ದರು. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಕೂಡ ಹುಟ್ಟಿದ್ದು ಪಾಕಿಸ್ತಾನದಲ್ಲಿ ಆದರೆ ಹೃದಯದಿಂದ ಭಾರತೀಯ ಎಂದು ಬರೆದು ಕೊಂಡಿರುವುದನ್ನು ನಾವು ಕಾಣಬಹುದು ಅಲ್ಲದೆ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್ಲೋಡ್ ಆಗಿರುವ ಹಲವು ಪೋಸ್ಟ್ಗಳಲ್ಲಿ ಮತ್ತು ವಿಡಿಯೋಗಳಲ್ಲಿ ಹಿಂದೂ ಧರ್ಮದ ಬಗ್ಗೆ ಭಾರತದ ಬಗ್ಗೆ ಮತ್ತು ನಮ್ಮ ದೇವರುಗಳ ಬಗ್ಗೆ ಇದೆ.

ಕೆಲವು ದಿನಗಳ ಹಿಂದೆ ಅವರು ಹನುಮಾನ್ ಚಾಲೀಸವನ್ನು ಪಠಿಸಿ ಅದನ್ನು ರೆಕಾರ್ಡ್ ಮಾಡಿ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಅವರು ಅಧಿಕೃತವಾಗಿ ಹಿಂದು ಧರ್ಮವನ್ನೇ ಸ್ವೀಕರಿಸಿದ್ದಾರೆ. ಈ ಬಗ್ಗೆ ಶಯನ್ ಅಲಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.

ಪಾಕಿಸ್ತಾನದ ಕೆಲವು ಗುಪ್ತಚರ ಸಂಸ್ಥೆಗಳಿಂದ ನನಗೆ ಒತ್ತಡ ಬೀಳುತ್ತಿದೆ. ನಾನು ಸದ್ಯದಲ್ಲೇ ಇಲ್ಲಿಂದ ಪರಾರಿ ಆಗಬೇಕಾದ ಸನ್ನಿವೇಶಗಳು ಕೂಡ ಕ್ರಿಯೇಟ್ ಆಗುತ್ತಿವೆ. ಆದರೂ ಕೂಡ ಶ್ರೀಕೃಷ್ಣನ ಮಾರ್ಗದರ್ಶನ ನನಗಿದೆ. ಆತನ ಸಾಂತ್ವನವು ನನಗೆ ಸಿಕ್ಕಿದೆ ಎಂದಿದ್ದಾರೆ. ಶ್ರೀ ಕೃಷ್ಣನ ಮಾರ್ಗದರ್ಶನದಂತೆ ನಡೆದುಕೊಳ್ಳುವುದಾಗಿ ಮತ್ತು ಶೀಘ್ರದಲ್ಲಿ ಅವರು ಭಾರತಕ್ಕೆ ಭೇಟಿ ಕೊಡುವುದಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಈಗ ಎಲ್ಲೆಡೆ ಇವರು ಹಿಂದೂ ಧರ್ಮದ ಸಂಪ್ರದಾಯದಂತೆ ಉಡುಪುಗಳನ್ನು ತೊಟ್ಟಿರುವ ಮತ್ತು ಹಿಂದೂ ದೇವರುಗಳ ಬಗ್ಗೆ ಮಾತನಾಡಿರುವ ಮತ್ತು ದೇವರನಾಮಗಳನ್ನು ಹಾಡಿರುವ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.

 

 

ಫ್ರೀ ಬಸ್ ಹತ್ತಲು ಮಹಿಳೆಯರ ಪೈಪೋಟಿ, ಬಸ್ ಬಾಗಿಲನ್ನೆ ಕಿತ್ತು ಹಾಕಿದ ಪ್ರಯಾಣಿಕರು.!

 

ಜೂನ್ 11ರಂದು ಕಾಂಗ್ರೆಸ್ ಸರ್ಕಾರವು ಘೋಷಿಸಿದ್ದ ಪಂಚಖಾತ್ರಿ ಯೋಜನೆಗಳಲ್ಲಿ ಮೊದಲನೆಯದಾಗಿ ಶಕ್ತಿ ಯೋಜನೆಯು ರಾಜ್ಯದಾದ್ಯಂತ ಜಾರಿಗೆ ಬಂದಿದೆ. ಈ ಯೋಜನೆಯ ಪ್ರಯೋಜನವನ್ನು ಈಗ ನಾಡಿನ ಎಲ್ಲಾ ಮಹಿಳೆಯರು ಕೂಡ ಪಡೆದುಕೊಳ್ಳುತ್ತಿದ್ದಾರೆ. ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕದ ನಿವಾಸಿಗಳಾದ ಎಲ್ಲಾ ಮಹಿಳೆಯರು ಕೂಡ ಕರ್ನಾಟಕ ಸಾರಿಗೆ ಸಂಸ್ಥೆಯ ನಿಗಮದ ಬಸ್ ಗಳಾದ KSRTC, BMTC, ವಾಯುವ್ಯ ಕರ್ನಾಟಕ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತವಾಗಿ ಕರ್ನಾಟಕದ ಗಡಿಯೊಳಗೆ ಎಲ್ಲಿ ಬೇಕಾದರೂ ಪ್ರಯಾಣ ಮಾಡಬಹುದಾಗಿದೆ.

ಹೀಗಾಗಿ ಶಾಲಾ ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಿಂದ ಹಿಡಿದು ಉದ್ಯೋಗಕ್ಕೆ ಹೋಗುವವರು ಮತ್ತು ವಲಸೆ ಕಾರ್ಮಿಕರಿಗೆ ಈ ಯೋಜನೆಯು ಪ್ರಯೋಜನಕ್ಕೆ ಬರುತ್ತದೆ. ಮತ್ತೊಂದೆಡೆ ಈ ಯೋಜನೆ ಪ್ರಭಾವದಿಂದ ಕರ್ನಾಟಕದ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲೂ ಕೂಡ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಕಾರಣ ಇಷ್ಟೇ ಕರ್ನಾಟಕದಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇರುವ ಕಾರಣ ಈಗ ಮಹಿಳೆಯರು ತಮ್ಮ ಕುಟುಂಬದ ಇತರ ಮಹಿಳೆಯರು ಮತ್ತು ಸ್ನೇಹಿತೆಯರ ಜೊತೆ ಪ್ರವಾಸಕ್ಕೆ ಹೊರಡುತ್ತಿದ್ದಾರೆ.

ಅದರಲ್ಲೂ ಧಾರ್ಮಿಕ ಕ್ಷೇತ್ರಗಳ ಕಡೆಗೆ ಹೆಚ್ಚು ಮುಖ ಮಾಡುತ್ತಿರುವ ಕಾರಣ ಈಗ ಎಲ್ಲಾ ದೇವಸ್ಥಾನಗಳಲ್ಲೂ ಕೂಡ ಮಹಿಳೆಯರದ್ದೇ ದಂಡು. ರಾಜ್ಯದಲ್ಲಿ ಯೋಜನೆ ಜಾರಿಗೆ ಬಂದು ಒಂದು ವಾರ ಕಳೆದಿದೆ. ಒಂದು ವಾರದಿಂದ ಪ್ರಯಾಣಿಸಿರುವ ಮಹಿಳಾ ಪ್ರಯಾಣಿಕರ ಸಂಖ್ಯೆಯು ಪುರುಷ ಪ್ರಯಾಣಿಕರ ಸಂಖ್ಯೆ ಗಿಂತ ಹೆಚ್ಚಿದ್ದು ಇದರಿಂದ ಶೂನ್ಯದರ ಟಿಕೆಟ್ ವಿತರಣೆಯಾಗಿದೆ ಎನ್ನುವ ದತ್ತಾಂಶವನ್ನು ಕೂಡ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದೆ.

ಮಹಿಳಾ ಪ್ರಯಾಣಿಕರ ಸಂಖ್ಯೆ ಬಸ್ ನಲ್ಲಿ ಹೆಚ್ಚಾಗುತ್ತಿರುವ ಕಾರಣ ಆಗುತ್ತಿರುವ ಅವಾಂತರಗಳ ಬಗ್ಗೆ ಕೂಡ ವರದಿಯಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಯೋಜನೆ ಜಾರಿಗೆ ಬಗ್ಗೆ ಆದೇಶ ಬಂದ ದಿನದಿಂದಲೂ ಕೂಡ ಸಾಕಷ್ಟು ತಮಾಷೆಯ ವಿಡಿಯೋಗಳು ಮತ್ತು ಪೋಸ್ಟ್ಗಳು ಅಪ್ಲೋಡ್ ಆಗಿದೆ, ಅವುಗಳನ್ನು ನಾವು ಸಹ ನೋಡಿ ನಕ್ಕಿದ್ದೇವೆ. ಇವುಗಳ ಜೊತೆ ಬಸ್ ಗಳಲ್ಲಿ ಆಗುತ್ತಿರುವ ಅವಾಂತರಗಳ ವಿಡಿಯೋಗಳು ನೋಡುಗರನ್ನು ಶಾ’ಕ್ ಆಗುವಂತೆ ಮಾಡಿವೆ.

ಕೆಲವೆಡೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಕಾರಣ ಬಸ್ ಗಳಲ್ಲಿ ವಿಪರೀತ ರಶ್ ಆಗಿದ್ದರೆ, ಕೆಲವು ರೂಟ್ ಗಲ್ಲಿ ಬಸ್ ಗಳ ಸಂಖ್ಯೆ ಕಡಿಮೆ ಆಗಿದೆ ಎನ್ನುವ ಆರೋಪವಿದೆ. ಕೆಲವು ಕಡೆ ಟಿಕೆಟ್ ಕೊಡಲು ಪರದಾಡುತ್ತಿರುವ ಜನಸಂದನಿ ಒಳಗಡೆ ಕಂಡಕ್ಟರ್ಗಳು ಪರದಾಡುವ ಪ್ರಸಂಗಗಳು ಕಂಡುಬಂದಿದ್ದರೆ ಕೊಳ್ಳೇಗಾಲದ ಬಸ್ ನಿಲ್ದಾಣದಲ್ಲಿ ಬಸ್ ಡೋರ್ ಕಿತ್ತು ಬಂದಿರುವ ಘಟನೆ ನಡೆದಿದೆ. ಶನಿವಾರ ಸಂಜೆ 3:45ರಂದು ಈ ಘಟನೆ ನಡೆದಿದ್ದು, ಈ ಘಟನೆ ಈಗ ಸೋಶಿಯಲ್ ಮೀಡಿಯಾದ ಚರ್ಚೆ ವಿಷಯವಾಗಿದೆ.

ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ಮಳೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿ ಅಮವಾಸ್ಯೆಯಂದು ವಿಶೇಷ ಪೂಜೆ ನಡೆಯುತ್ತದೆ. ಅಂದಿನ ದಿನ ಸುತ್ತಮುತ್ತಲಿನ ಗ್ರಾಮಸ್ಥರುಗಳು ಮಾತ್ರವಲ್ಲದೆ ದೂರದ ಜಿಲ್ಲೆಗಳಿಂದಲೂ ಕೂಡ ಮಲೆ ಮಹದೇಶ್ವರ ಸನ್ನಿಧಾನಕ್ಕೆ ಭಕ್ತಾದಿಗಳು ಬರುತ್ತಾರೆ. ಶನಿವಾರದ ಬೆಳಗಿನಿಂದಲೂ ಕೂಡ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿರುವ ಎಲ್ಲಾ ಬಸ್ ಗಳು ಕೂಡ ವಿಪರೀತ ರಷ್ ಆಗಿದ್ದು ಅವೆಲ್ಲದರಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಾಗಿದೆ ಎನ್ನುವ ಮಾಹಿತಿ ಇದೆ.

ಶನಿವಾರದಂದು ಕೊಳ್ಳೇಗಾಲ ಬಸ್ ನಿಲ್ದಾಣವು ಸಂಪೂರ್ಣವಾಗಿ ಬೆಟ್ಟಕ್ಕೆ ಹೋಗುವ ಭಕ್ತಾದಿಗಳಿಂದ ತುಂಬಿಹೋಗಿತ್ತು, ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಲು ಬಂದ KSRTC ಬಸ್ ಗೆ ಮಹಿಳೆಯರು ಏಕಾಏಕಿ ನುಗ್ಗಿದ ಪರಿಣಾಮ ಡೋರ್ ಕಿತ್ತು ಬಂದಿದೆ. ನಂತರ ಮಹಿಳೆಯರ ಸುರಕ್ಷತೆಯ ಉದ್ದೇಶದಿಂದ ಎಲ್ಲರನ್ನು ಕೂಡ ಕೆಳಗಿಳಿಸಿ ಬೇರೆ ಬಸ್ ನಲ್ಲಿ ಕಳುಹಿಸಿ ಕೊಡಲಾಗಿದೆ.

ರಾಜ್ಯದಲ್ಲಿ ಹೊಸ ಟ್ರಾಫಿಕ್ ರೂಲ್ಸ್ ಜಾರಿ ಜುಲೈ 1 ರಿಂದ ಯಾವುದೇ ಟ್ರಾಫಿಕ್ ಫೈನ್ ಕಟ್ಟುವಂತಿಲ್ಲ.!

 

ತಿಂಗಳಾಯ್ತು ಅಂದ್ರೆ ಕೆಲವೊಂದು ರೂಲ್ಸ್‌ಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತವೆ. ಅವುಗಳಲ್ಲಿ ಸಂಚಾರ ನಿಯಮಗಳು ಕೂಡ ಒಂದು. ಇದು ಜನಸಾಮಾನ್ಯರ ದಿನನಿತ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರವು ಹಲವಾರು ಮೋಟಾರ್ ಕಾಯಿದೆ ನೀತಿಗಳನ್ನು ಜಾರಿಗೆ ತಂದಿದೆ. ಟ್ರಾಫಿಕ್ ರೂಲ್ಸ್ ಫಾಲೋ ಮಾಡ್ಲಿಲ್ಲ ಅಂದ್ರೆ ಫೈನ್‌ ಹಾಕೋದು ಪಕ್ಕಾ ಅಂತಾ ಎಲ್ರಿಗೂ ತಿಳಿದಿರೋ ವಿಷಯ. ಆದ್ರೆ, ನಾವಿಂದು ಹೇಳೋ ವಿಷಯದ ಬಗ್ಗೆ ನೀವು ತಿಳಿದರೆ ನೀವೂ ಶಾ.ಕ್‌ ಆಗ್ತೀರಾ.

ಹೌದು, ಎಲ್ಲಾ ವಾಹನ ಸವಾರರಿಗೆ ಇದು ಗುಡ್ ನ್ಯೂಸ್ ಆಗಿದೆ. ಟ್ರಾಫಿಕ್ ನಿಯಮದಲ್ಲಿ ಹೊಸ ಬದಲಾವಣೆಯಾಗಿದೆ. ಇದು ವಾಹನ ಸಂಚಾರ ನಿಯಮದಲ್ಲಿ ದೊಡ್ಡ ಬದಲಾವಣೆಯದ್ದಾಗಿದೆ. ಇನ್ನು ಮುಂದೆ ಯಾರೂ ಕೂಡ ದಂಡ ಪಾವತಿಸುವಂತಿಲ್ಲ. ಕರ್ನಾಟಕ ರಾಜ್ಯದಾದ್ಯಂತ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆಯಾಗಿದೆ. ಹಾಗಾದ್ರೆ, ಬದಲಾಗಿರುವ ಟ್ರಾಫಿಕ್ ರೂಲ್ಸ್ ಏನು.? ಯಾಕೆ ದಂಡ ಪಾವತಿಸುವಂತಿಲ್ಲ.? ಯಾರಿಗೆಲ್ಲಾ ಈ ಹೊಸ ನಿಯಮ? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಸಂಪೂರ್ಣವಾಗಿ ನೋಡೋಣ ಬನ್ನಿ…

ಇನ್ನು ಮುಂದೆ ಟ್ರಾಫಿಕ್ ನಿಯಮದಲ್ಲಿ ಬದಲಾವಣೆಯಾಗಲಿದೆ. ಡಿಎಲ್ ಇಲ್ಲದೇ ಎಲ್ಲಿಗೆ ಬೇಕಾದರೂ ಕಾರು, ಬೈಕು ಹಾಗೂ ಸ್ಕೂಟರ್ ಅನ್ನು ಚಲಾಯಿಸಬಹುದು. ಒಬ್ಬ ವ್ಯಕ್ತಿ ವಾಹನವನ್ನ ಓಡಿಸಲು ಚಾಲನಾ ಪರವಾನಗಿಯನ್ನ ಹೊಂದಿರಬೇಕು. ಆದರೆ, ಒಬ್ಬ ವ್ಯಕ್ತಿಯು ಚಾಲನಾ ಪರವಾನಗಿಯನ್ನು ಹೊಂದಿದ್ದರೂ ಕೂಡ ವಾಹನವನ್ನ ಚಾಲನೆ ಮಾಡುವಾಗ ಅದನ್ನ ತನ್ನೊಂದಿಗೆ ಇಟ್ಟುಕೊಳ್ಳದೆ ಮರೆತರೆ, ಇಂತಹ ಸ್ಥಿತಿಯಲ್ಲಿ ಪೊಲೀಸರು ಚಲನ್ ಕಡಿತಗೊಳಿಸಬಹುದು. ಆದರೆ, ಅದನ್ನ ತಪ್ಪಿಸಲು ತಂತ್ರವಿದೆ.

ಇದರಿಂದ ಇನ್ಮುಂದೆ ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಾಫ್ಟ್ ಕಾಪಿಯನ್ನು ಈ ಡಿಜಿಟಲ್ ಲಾಕರ್‌ನಲ್ಲಿ ಇಟ್ಟುಕೊಂಡರೆ ನಿಮ್ಮನ್ನು ಪೊಲೀಸರು ತಪಾಸಣೆ ಮಾಡುವ ವೇಳೆ ಅದನ್ನೇ ತೋರಿಸಿ ನೀವು ಮುಂದೆ ಸಾಗಬಹುದು. ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಮನೆಯಲ್ಲೇ ಇಟ್ಟು ಬಂದಿದ್ದರು ಕೂಡ ಯಾವುದೇ ರೀತಿಯ ತೊಂದರೆ ಆಗೋದಿಲ್ಲ.

ನೀವೇನಾದರೂ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಂಡಿದ್ದರೆ, ನೀವು ಅದನ್ನ ಮನೆಯಲ್ಲಿಯೇ ಇಟ್ಟುಕೊಂಡು ಚಾಲನೆ ಮಾಡಬಹುದು. ಹೌದು, ಆದರೆ ಇದಕ್ಕಾಗಿ ನೀವು ಈ ಒಂದು ಕೆಲಸವನ್ನು ಮಾಡಬೇಕು. ವಾಸ್ತವವಾಗಿ ಡಿಜಿಟಲ್ ಇಂಡಿಯಾವನ್ನ ಉತ್ತೇಜಿಸಲು ಸರ್ಕಾರವು ಬಹಳ ಹಿಂದೆಯೇ ಡಿಜಿಟಲ್ ಲಾಕರ್ ಹೆಸರಿನ ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿದೆ.

ಈ ಮೊಬೈಲ್ ಅಪ್ಲಿಕೇಶನ್ ನಲ್ಲಿ ಭಾರತದ ಯಾವುದೇ ನಾಗರಿಕರು ತಮ್ಮ ಪ್ರಮುಖ ದಾಖಲಾತಿಗಳನ್ನ ಸಾಫ್ಟ್ ಕಾಪಿ ರೂಪದಲ್ಲಿ ಇರಿಸಬಹುದು. ಈ ಅಪ್ಲಿಕೇಶನ್ ನಲ್ಲಿರುವಂತಹ ನಿಮ್ಮ ಡಾಕ್ಯುಮೆಂಟ್ ನ ಸಾಫ್ಟ್ ಕಾಪಿಯು ಎಲ್ಲೆಡೆ ಮಾನ್ಯವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಡ್ರೈವಿಂಗ್ ಲೈಸೆನ್ಸ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಲು ನೀವು ಬಯಸದೆ ಇದ್ದರೆ, ನೀವು ಅದರ ಸಾಫ್ಟ್ ಕಾಪಿಯನ್ನ ಡಿಜಿಟಲ್ ಲಾಕರ್ ನಲ್ಲಿ ಇರಿಸಿಕೊಳ್ಳಬಹುದು.

ಅದಾದ ನಂತರ ನೀವು ಕಾರು, ಬೈಕು, ಸ್ಕೂಟರ್ ಇತ್ಯಾದಿಗಳನ್ನ ಆರಾಮವಾಗಿ ಓಡಿಸಬಹುದು. ಈ ಆಪ್‌ನಲ್ಲಿ ಒಬ್ಬ ನಾಗರಿಕನು ತನಗೆ ಅತ್ಯಗತವಾಗಿ ಬೇಕಾಗಿರುವ ಎಲ್ಲಾ ದಾಖಲೆಗಳ ಸಾಫ್ಟ್ ಕಾಪಿಯನ್ನು ನಿಮ್ಮ ಬಳಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಇದರ ಅವಶ್ಯಕತೆ ಬಂದಾಗ ಅದನ್ನು ಡಿಜಿಟಲ್ ಲಾಕರ್ ಆಪ್‌ನಲ್ಲಿಯೇ ತೋರಿಸಬಹುದು. ಈ ರೀತಿ ಡಿಜಿಟಲ್ ಲಾಕರ್‌ನಲ್ಲಿ ಹೊಂದಿರುವ ಸಾಫ್ಟ್ ಕಾಪಿಗಳು ಎಲ್ಲಾ ಕಡೆ ಮಾನ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜುಲೈ 1 ರಿಂದಲೇ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದ್ದು, ಸರ್ಕಾರದಿಂದಲೇ ಅಧಿಕೃತವಾಗಿ ಘೋಷಣೆಯಾಗಲಿದೆ.

ಗೃಹಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಇಡೀ KSRTC ಬಸ್ ಅನ್ನು ಬುಕ್ ಮಾಡಲು ಬಂದ ಅಜ್ಜಿ.!

 

ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿಗಳಲ್ಲಿ ಮೊದಲನೇ ಗ್ಯಾರಂಟಿ ಆಗಿ ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಪಕ್ಷವು ನೀಡಿದ ಗ್ಯಾರಂಟಿ ಕಾರ್ಡ್ ಯೋಜನೆಗಳ ಪೈಕಿ ಸದ್ಯಕ್ಕೀಗ ಕರ್ನಾಟಕದ ಮಹಿಳೆಯರು ಈ ಯೋಜನೆಯ ಅನುಕೂಲತೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಕರ್ನಾಟಕದ ಮಹಿಳೆಯರಿಗೆ ಮಾತ್ರ ಈ ಯೋಜನೆಗಳ ಫಲಾನುಭವಿಗಳ ಆಗಲು ಅವಕಾಶ ಇದ್ದು ಕರ್ನಾಟಕದ ಗಡಿ ಒಳಗೆ ಅವರು ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಸ್ಗಳಲ್ಲೂ ಕೂಡ ಬಸ್ ಚಾರ್ಜ್ ನೀಡದೆ ಟಿಕೆಟ್ ಪಡೆದು ಪ್ರಯಾಣಿಸಬಹುದಾಗಿದೆ.

ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲಾ ವರ್ಗದ ಮಹಿಳೆಯರಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿರುವುದರಿಂದ ಈ ಯೋಜನೆ ಜಾರಿಗೆ ಬಂದ ದಿನದಿಂದಲೂ ಕೂಡ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಈ ಯೋಜನೆ ಕುರಿದಂತೆ ಸಾಕಷ್ಟು ಟ್ರೋಲ್ ಗಳು, ಮೀಮ್ಸ್ ಗಳು ಹರಿದಾಡುತ್ತಿದೆ.

ಇದರಿಂದ ಆಗುತ್ತಿರುವ ಅವಾಂತರಗಳ ಬಗ್ಗೆ ವಿಡಿಯೋಗಳನ್ನು ನೋಡಿ ನಕ್ಕಿದ್ದೇವೆ. ಯೋಜನೆ ಜಾರಿ ಆದ ಮೇಲೆ ಮಹಿಳಾ ಪ್ರಯಾಣಿಕರಿಗೂ ಮತ್ತು ನಿರ್ವಾಹಕರಿಗೂ ಆಗುತ್ತಿರುವ ಜಗಳಗಳ ಬಗ್ಗೆಯೂ ಕೂಡ ಗಂಭೀರವಾದ ವರದಿಯಾಗಿದೆ, ಕೆಲವೆಡೆ ಬಸ್ ಗಳು ಸಾಮಾನ್ಯಕ್ಕಿಂತ ವಿಪರೀತ ರಷ್ ಆಗುತ್ತಿದ್ದು ಇದಕ್ಕೆಲ್ಲ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟಿರುವುದೇ ಕಾರಣ ಎನ್ನುವ ದೂರು ಕೂಡ ಕೇಳಿ ಬರುತ್ತಿದೆ.

ಇಷ್ಟೆಲ್ಲಾ ಪರ ಹಾಗೂ ವಿರೋಧಗಳ ನಡುವೆ ಕೂಡ ಯಶಸ್ವಿಯಾಗಿ ಈ ಯೋಜನೆ ಒಂದು ವಾರ ಪೂರೈಸಿದೆ. ಒಂದು ವಾರದಿಂದ ರಾಜ್ಯದ ಸಾರಿಗೆ ಸಂಸ್ಥೆಗಳಿಗೆ ಆಗಿರುವ ನಷ್ಟದ ಬಗ್ಗೆ ಮಾಹಿತಿಯನ್ನು ಕಲೆಹಾಕಿ ವಿರೋಧ ಪಕ್ಷಗಳು ಮತ್ತು ಇತರ ಪಕ್ಷಗಳ ಅನುಯಾಯಿಗಳು ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಲೇ ಇದ್ದಾರೆ, ಸರ್ಕಾರವನ್ನು ದೂರುತ್ತಿದ್ದಾರೆ.

ಈ ಎಲ್ಲಾ ಅವಾಂತರಗಳ ನಡುವೆ ಇನ್ನೊಂದು ವಿಭಿನ್ನವಾದ ಘಟನೆ ಇಂದು ನಡೆದಿದೆ. ಅದೇನೆಂದರೆ, ಮಹಿಳೆಯರಿಗೆ ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದರಿಂದ ಇಡೀ ಬಸ್ ಅನ್ನೇ ಉಚಿತವಾಗಿ ಬುಕ್ ಮಾಡಿಕೊಳ್ಳಲು ಅಜ್ಜಿಯೊಬ್ಬರು ಬಂದು ಮಾಹಿತಿ ಕೇಂದ್ರದಲ್ಲಿ ವಿಚಾರಿಸಿದ್ದಾರೆ.

ಮೆಜೆಸ್ಟಿಕ್ ಮಾಹಿತಿ ಕೇಂದ್ರಕ್ಕೆ ಬಂದ ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿಯಾದ ಸುನಂದ ಎನ್ನುವವರು ಎನ್ಕ್ವೈರಿ ಕೌಂಟರ್ ಅಲ್ಲಿ ಯಾವ ಯಾವ ಮಾರ್ಗಗಳಿಗೆ ಎಷ್ಟು ಬಸ್ ಗಳು ಇವೆ ಯಾವ ಸಮಯಕ್ಕೆ ಬರುತ್ತದೆ ಎನ್ನುವ ಎಲ್ಲಾ ಮಾಹಿತಿಯನ್ನು ಕಲೆಹಾಕಿ ಒಂದು ಪೇಪರಲ್ಲಿ ಬರೆದುಕೊಂಡಿದ್ದಾರೆ. ನಂತರ ಕಾರಣ ವಿಚಾರಿಸಿದಾಗ ತಮ್ಮ ಉದ್ದೇಶದ ವಿಚಾರವನ್ನು ಹಂಚಿಕೊಂಡಿದ್ದಾರೆ.

ಸುನಂದ ಎನ್ನುವ ವಯಸ್ಸಿನ ವೃದ್ಧೆಯೊಬ್ಬರು ತಮ್ಮ ಕುಟುಂಬದ ಮಹಿಳೆಯರು ಮತ್ತು ಸ್ನೇಹಿತೆಯರನ್ನು ಸೇರಿಸಿ 20 ಜನರ ತಂಡವನ್ನು ಮಾಡಿಕೊಂಡಿದ್ದಾರಂತೆ. ಇವರ ಜೊತೆಗೆ ಇನ್ನು 20 ಮಂದಿಯನ್ನು ಸೇರಿಸಿಕೊಳ್ಳುವ ಪ್ಲಾನ್ ಮಾಡಿರುವ ಇವರು ನಾಲ್ಕೈದು ದಿನಗಳ ಕಾಲ ಕರ್ನಾಟಕದ ಇರುವ ಧಾರ್ಮಿಕ ಕ್ಷೇತ್ರಗಳಿಗೆ ಈ ಉಚಿತ ಬಸ್ ವ್ಯವಸ್ಥೆಯಲ್ಲಿ ಫ್ರೀ ಯಾಗಿ ಪ್ರಯಾಣ ಮಾಡಲು ನಿರ್ಧರಿಸಿದ್ದಾರಂತೆ.

ಅದಕ್ಕಾಗಿ ಮಹಿಳೆಯರಿಗೆ ಪ್ರಯಾಣ ಉಚಿತ ಆಗಿರುವುದರಿಂದ ಎಲ್ಲರೂ ಒಂದೇ ಬಸ್ ಅಲ್ಲಿ ಪ್ರಯಾಣಿಸಲು ಬುಕ್ ಮಾಡಿಕೊಳ್ಳಲು, ಸೀಟ್ ರಿಸರ್ವ್ ಮಾಡಿಕೊಳ್ಳಲು ಅವಕಾಶ ಇದೆಯಾ ಎನ್ನುವುದನ್ನು ವಿಚಾರಿಸಲು ಬಂದಿದ್ದಾರೆ. ಇವರ ಈ ಪ್ಲಾನಿಂಗ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

 

ಟ್ರಿಪ್ ಕ್ಯಾನ್ಸಲ್ ಮಾಡದಿದ್ದಕ್ಕೆ ಪ್ರಯಾಣಿಕನಿಗೆ ಆಟೋದಿಂದ ಗುದ್ದಿ ಹಲ್ಲೆ ಮಾಡಿದ ಆಟೋ ಚಾಲಕ. ವಿಡಿಯೋ ವೈರಲ್

 

ಬೆಂಗಳೂರಿನಲ್ಲಿ ಆಟೋ ಚಾಲಕರ ಸುಲಿಗೆ ಮತ್ತು ದುರ್ವರ್ತನೆಯ ಕುರಿತು ಸಾಕಷ್ಟು ಆರೋಪಗಳು ಪ್ರತಿನಿತ್ಯವೂ ಕೂಡ ದಾಖಲಾಗುತ್ತಿವೆ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಆಗುತ್ತಲೇ ಇವೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ಈ ರೀತಿ ಆಟೋ ಚಾಲಕರು ಪ್ರಯಾಣಿಕರ ಮೇಲೆ ಮಾಡುತ್ತಿರುವ ದೌರ್ಜನ್ಯಗಳ ಬಗ್ಗೆ ವಿಡಿಯೋಗಳು ವೈರಲ್ ಆಗುತ್ತಲಿವೆ.

ಬೆಂಗಳೂರಿನ ಮಹಾನಗರದಲ್ಲಂತೂ ಕೆಲ ಆಟೋ ಚಾಲಕರ ಈ ರೀತಿ ನಡತೆಯಿಂದ ಆಟೋ ಚಾಲಕರೆಲ್ಲರೂ ಗೂಂಡಾಗಳು ಎನ್ನುವಂತಹ ಭಾವನೆ ಬರುವ ರೀತಿ ಆಗಿಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಆಟೋ ಚಾಲಕರಿಗೂ ಕ್ಯಾಬ್ ವ್ಯವಸ್ಥೆಯು ಕಾಂಪಿಟೇಶನ್ ಆಗಿ ಕಾಡುತ್ತಿದೆ. ಇದರ ನಡುವೆ ಇವರು ಸಹ ಆನ್ಲೈನ್ ಬುಕಿಂಗ್, ಓಲಾ ಆಟೋ ಇಂತಹ ವ್ಯವಸ್ಥೆ ಮೂಲಕ ಇದಕ್ಕೆ ಕಾಂಪಿಟೇಶನ್ ಕೊಡುತ್ತಾ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.

ನಮ್ಮ ನೆಲದಲ್ಲಿ ಆಟೋ ಚಾಲಕರ ಬಗ್ಗೆ ಒಂದು ಸೆಂಟಿಮೆಂಟ್ ಇದೆ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಕೂಡ ಆಟೋ ಚಾಲಕರು ಹೀರೋ ಆಗಿರುವ ಉದಾಹರಣೆಗಳ ಬಗ್ಗೆ ಕೇಳಿದ್ದೇವೆ, ಹೊಗಳಿದ್ದೇವೆ. ಲಕ್ಷಾಂತರ ರೂಪಾಯಿಗಳನ್ನು ತಮ್ಮ ಗಡಿಬಿಡಿಯಲ್ಲಿ ಪ್ರಯಾಣಿಕರು ಮರೆತು ಹೋಗಿದ್ದಕ್ಕೆ ಆಸೆ ಪಡೆದೆ ಅದನ್ನು ಮಾಲೀಕರಿಗೂ ಅಥವಾ ಹತ್ತಿರದ ಠಾಣೆಗೂ ತಲುಪಿಸಿರುವ ಉದಾಹರಣೆಯ ಚಾಲಕರು ಇದ್ದಾರೆ.

ಅಥವಾ ಲಕ್ಷಾಂತರ ಮೌಲ್ಯದ ಬಂಗಾರದ ಒಡವೆಗಳು ಆಭರಣಗಳು, ದಾಖಲೆ ಪತ್ರಗಳನ್ನು ಕೂಡ ಈ ರೀತಿ ಪ್ರಾಮಾಣಿಕೆಯಿಂದ ವಾಪಸ್ಸು ಕೊಟ್ಟು ನಯಪೈಸೆಯನ್ನು ಕೂಡ ಕಾಣಿಕೆಯಾಗಿ ಪಡೆಯದ ಆಟೋ ಚಾಲಕರ ವ್ಯಕ್ತಿತ್ವದ ಮೇಲೆ ಅಭಿಮಾನವಿದೆ. ಅವರ ಬಗ್ಗೆ ಹೊಗಳಿ ನಾವೇ ಮಾತನಾಡಿರುತ್ತೇವೆ. ಗರ್ಭಿಣಿ ಹೆಂಗಸರಿಗೆ ಉಚಿತವಾಗಿ ಪ್ರಯಾಣ ಕಲ್ಪಿಸಿ ಕೊಡುವ, ವೃದ್ಧರು ಹಾಗೂ ಅಸಹಾಯಕರಿಗೆ ಮನೆ ಮಕ್ಕಳ ಹಾಗೆ ರಸ್ತೆ ಮಧ್ಯೆ ಸಹಾಯಕ್ಕೆ ನಿಲ್ಲುವ ಇವರ ಈ ಗುಣ ಇವರನ್ನು ಆಟೋ ರಾಜ ಎಂದು ಕರೆಯುವಂತೆ ಮಾಡಿದೆ.

ಅವರ ಮಧ್ಯೆ ಬೆರಳಣಿಕೆಯಷ್ಟು ಮಂದಿ ಆಟೋ ಚಾಲಕರು ಈಗ ಗೂಂಡಾಗ ರೀತಿ ವರ್ತನೆ ಮಾಡಿ ಸುದ್ದಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವರದಿಯಾಗಿದ್ದ ಅದೆಷ್ಟೋ ಉದಾಹರಣೆಗಳ ಜೊತೆ ಬೆಂಗಳೂರಿನಲ್ಲಿ ನಡೆದ ಒಂದು ಪ್ರಕರಣವು ಸೇರಿದೆ. ಬೆಂಗಳೂರಿನ ವ್ಯಕ್ತಿಯು ತನ್ನ ತಾಯಿಯ ಜೊತೆ ಪ್ರಯಾಣ ಮಾಡುವುದಕ್ಕಾಗಿ ಓಲಾ ಆಟೋ ಬುಕ್ ಮಾಡಿದ್ದಾರೆ, ಸ್ಥಳಕ್ಕೆ ಬಂದ ಆಟೋ ಚಾಲಕ ಆನ್ಲೈನ್ ಟ್ರಿಪ್ ಕ್ಯಾನ್ಸಲ್ ಮಾಡುವಂತೆ ಕೇಳಿದ್ದಾನೆ.

ಬಳಿಕ ಆಫ್ಲೈನ್ ಅಲ್ಲಿಯೇ ತನ್ನ ಜೊತೆ ಬರುವಂತೆ ಶರತ್ತು ಹಾಕಿದ್ದಾನೆ, ಇದಕ್ಕೆ ಒಪ್ಪದೆ ಆಟೋ ಹತ್ತದೆ ಹೋಗಿದಕ್ಕೆ ಹಿಂದಿನಿಂದ ಬಂದು ಆತನ ತಾಯಿಯ ಎದುರೇ ಆಟೋಯಿಂದ ಗುದ್ದಿ ಹಲ್ಲೆ ಮಾಡಿ ದುರ್ನಡತೆ ತೋರಿದ್ದಾನೆ ಆಟೋ ಚಾಲಕ. ಆಟೋ ಚಾಲಕನ ಉದ್ದಟತನ ಅಲ್ಲೇ ಹತ್ತಿರದಲ್ಲಿದ್ದ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಈಗ ಆ ವಿಡಿಯೋ ಕ್ಲಿಪ್ಪಿಂಗ್ ಜೊತೆ ತನಗಾದ ಅನ್ಯಾಯದ ಬಗ್ಗೆ ಆಟೋ ಚಾಲಕನ ಆಟೋ ಸಂಖ್ಯೆ ಸಮೇತ ದೂರು ಬರೆದು ತನಗಾದ ಅನುಭವದ ಬಗ್ಗೆ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

ಈತನ ವರ್ತನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೋಲಿಸರಿಗೆ ಆತ ಮನವಿ ಮಾಡಿಕೊಂಡಿದ್ದಾನೆ. ಅನೀಶ್. ಎಸ್ ಎನ್ನುವ ವ್ಯಕ್ತಿಯು ತಮ್ಮ @Anish0012 ಎನ್ನುವ ಹೆಸರಿನ ಟ್ವಿಟರ್ ಖಾತೆಯಲ್ಲಿ ಬೆಂಗಳೂರಿನಲ್ಲಿ ಈ ರೀತಿ ವರ್ತನೆ ಸರ್ವೇಸಾಮಾನ್ಯವಾಗುತ್ತಿದೆ. KA03AH7784 ಸಂಖ್ಯೆಯ ಆಟೋ ಚಾಲಕನಿಂದ ತನಗೆ ಈ ರೀತಿಯ ಹಲ್ಲೆಯಾಗಿದೆ ಎಂದು ಆರೋಪ ಮಾಡಿದ್ದಾರೆ. ನಗರದಲ್ಲಿ ನಡೆದ ವರ್ತನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಒಂದು ಗುರುವಾರ ಭಕ್ತಿಯಿಂದ ಬಾಬಾ ಮುಂದೆ 2 ರೂಪಾಯಿ ಇಟ್ಟು, ಈ ರೀತಿ ಪೂಜೆ ಮಾಡಿ ನಿಮ್ಮ ಬೇಡಿಕೆಗಳು ಈಡೇರುತ್ತವೆ.!

 

ಸದ್ಗುರು ಸಾಯಿಬಾಬಾ, ಶಿರಡಿ ಸಾಯಿಬಾಬಾ ಎಂದು ಕರೆಸಿಕೊಳ್ಳುವ ಈ ಪವಾಡ ಪುರುಷರು ಕಲಿಯುಗದಲ್ಲಿ ತನ್ನ ಭಕ್ತರ ಸಕಲ ಕಷ್ಟಗಳನ್ನು ಕೂಡ ಪರಿಹಾರ ಮಾಡುತ್ತಿರುವ ದೇವರು. ಇಂದು ಮನೆ ಮನೆಗಳಲ್ಲಿ ಕೂಡ ಸಾಯಿಬಾಬಾರ ಭಕ್ತರಿರುವುದನ್ನು ನಾವು ಕಾಣುತ್ತೇವೆ. ಇದಕ್ಕೆಲ್ಲ ಕಾರಣ ಸಾಯಿಬಾಬಾ ಅವರ ಅನುಗ್ರಹ ಅವರ ಭಕ್ತರ ಮೇಲೆ ಇದ್ದು ಸದಾ ಅವರನ್ನು ಕಷ್ಟಗಳಿಂದ ಪಾರು ಮಾಡಿ ಮಕ್ಕಳ ರೀತಿ ಪೋಷಿಸುತ್ತ ಇರುವುದು.

ಸಾಯಿಬಾಬಾ ಅನುಗ್ರಹವನ್ನು ಪಡೆಯುವುದು ಬಹಳ ಸುಲಭ ಆದರೆ ಅದಕ್ಕೆ ಭಕ್ತಿ ಬಹಳ ಮುಖ್ಯ. ಪ್ರಾಮಾಣಿಕತೆಯಿಂದ ಭಕ್ತಿಯಿಂದ ಸಾತ್ವಿಕವಾಗಿ ನಡೆದುಕೊಂಡಲ್ಲಿ ಸಾಯಿಬಾಬಾರ ಅನುಗ್ರಹ ಬಹಳ ಬೇಗ ದೊರೆಯುತ್ತದೆ. ಜೊತೆಗೆ ನಾವು ಅಂದುಕೊಂಡ ಕೆಲಸಗಳು ನಡೆಯಲು ಸಾಯಿಬಾಬಾ ಅವರ ಆಶೀರ್ವಾದವನ್ನು ಪಡೆದುಕೊಳ್ಳಬೇಕು ಎಂದರೆ ಕೆಲವು ಸರಳ ವಿಧಾನಗಳು ಇವೆ.

ಈ ವಿಧಾನಗಳಿಂದ ಸಾಯಿಬಾಬಾ ಅವರನ್ನು ಪ್ರಾರ್ಥಿಸಿ ಪೂಜಿಸಿದರೆ ಬಹಳ ಬೇಗ ಅನುಗ್ರಹ ದೊರೆತು ಸಂಕಷ್ಟಗಳು ಇದ್ದರೆ ಪರಿಹಾರ ಆಗುತ್ತವೆ ಅಥವಾ ಇಷ್ಟಾರ್ಥಗಳು ಇದ್ದರೆ ಅವು ಸಿದ್ಧಿ ಆಗುತ್ತವೆ. ನೀವೇನಾದರೂ ಯಾವುದಾದರೂ ವಿಷಯ ಆಗಬೇಕು ಎಂದು ಬಹಳ ಆಸೆ ಪಟ್ಟಿದ್ದರೆ ಉದಾಹರಣೆಗೆ ಬಂಗಾರ ಕೊಂಡುಕೊಳ್ಳಬೇಕು, ಸೈಟ್ ಕೊಂಡುಕೊಳ್ಳಬೇಕು, ಮನೆ ಕಟ್ಟಿಸಬೇಕು ಅಥವಾ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಆಗಬೇಕು.

ಈ ರೀತಿಯಾದ ಯಾವುದಾದರೂ ಆಸೆಗಳನ್ನು ಇಟ್ಟುಕೊಂಡಿದ್ದರೆ ಒಂದು ಗುರುವಾರದಂದು 2 ರೂಪಾಯಿಯಿಂದ ಸಾಯಿಬಾಬಾ ಅವರನ್ನು ಈಗ ನಾವು ಹೇಳುವ ರೀತಿಯಲ್ಲಿ ಪೂಜೆ ಮಾಡಿ ಸಾಕು. ನೀವು ಅಂದುಕೊಂಡ ಕೆಲಸ ಆದಂತೆಯೇ ಸರಿ ಅಷ್ಟು ನಿಖರವಾಗಿ ಸಾಯಿಬಾಬಾ ಅವರು ಆ ಕಾರ್ಯ ಆಗುವಂತೆ ಮಾಡುತ್ತಾರೆ.

ಪ್ರತಿದಿನ ಸಾಯಿಬಾಬಾ ಅವರನ್ನು ಪೂಜೆ ಮಾಡುವವರಿಗೆ ಈ ವಿಧಾನ ತಿಳಿದಿರುತ್ತದೆ ಅಥವಾ ಹೊಸದಾಗಿ ಸಾಯಿಬಾಬಾ ಅವರನ್ನು ಪೂಜೆ ಮಾಡುತ್ತಾ ಇರುವವರು ಈ ರೀತಿ ಮಾಡಿ. ಮನೆಯನ್ನು ಶುದ್ಧಿ ಮಾಡಿ ನೀವು ಸ್ನಾನ ಮಾಡಿ ಮಡಿ ಉಟ್ಟುಕೊಂಡು ಸಾಧ್ಯವಾದರೆ ಉಪವಾಸ ಆಚರಣೆ ಮಾಡಿ ಸಾಯಿಬಾಬಾ ಅವರ ಫೋಟೋ ಅಥವಾ ವಿಗ್ರಹವನ್ನು ಗಂಧ ಮತ್ತು ಅರಿಶಿಣದಿಂದ ಅಲಂಕರಿಸಿ ಹಳದಿ ಹೂವು ಇಟ್ಟು ದೀಪ ಹಚ್ಚಿ ನೈವೇದ್ಯ ಮಾಡಿ ಧೂಪವನ್ನು ಕೂಡ ಹಾಕಿ.

ಈ ರೀತಿ ಮಾಡುವಾಗ ತಪ್ಪದೇ 2 ರೂಪಾಯಿ ನಾಣ್ಯವನ್ನು ಕೂಡ ಸಾಯಿಬಾಬಾ ಅವರ ಎದುರುಗಡೆ ಇಡಿ. ಆ ದಿನ ಪೂರ್ತಿ ಅದು ಅಲ್ಲೇ ಇರಲಿ ಸಂಜೆ ವೇಳೆ ಸಾಯಿಬಾಬಾ ಅವರ ಮಂದಿರಕ್ಕೆ ಹೋಗಿ ಸ್ವಲ್ಪ ಸಮಯ ಕಳೆದು ಧ್ಯಾನ ಮಾಡಿ ಬನ್ನಿ. ಮರು ದಿನ ಶುಕ್ರವಾರ ಕೂಡ ಅದು ಸಾಯಿಬಾಬಾ ಅವರ ಬಳಿಯೇ ಇರಲಿ. ಶುಕ್ರವಾರದ ಪೂಜೆಯಂತೆ ಪೂಜೆ ಮಾಡಿ ಆ ಸಮಯದಲ್ಲೂ ಕೂಡ ಸಾಯಿಬಾಬಾ ಅವರ ಅನುಗ್ರಹಕ್ಕೆ ಪ್ರಾರ್ಥಿಸಿ, ಆ ನಾಣ್ಯವನ್ನು ಅಲ್ಲೇ ಬಿಡಿ.

ಶನಿವಾರದಂದು ಆ ನಾಣ್ಯವನ್ನು ಇಟ್ಟುಕೊಂಡು ನೀವು ನಿಮ್ಮ ಕನಸಿನ ಕಾರ್ಯ ಕೈಗೊಳ್ಳಲು ಹಣ ಇಟ್ಟಿರುವ ಕಡೆ ಈ ಹಣವನ್ನು ಇಡಿ ಅಥವಾ ನೀವೇನಾದರೂ ಆ ಕಾರ್ಯಕ್ಕೆ ಹೊರಟಿದ್ದರೆ ಅದರ ಜೊತೆಗೆ ಈ ನಾಣ್ಯವನ್ನು ಕೂಡ ತೆಗೆದುಕೊಂಡು ಹೋಗಿ. ಬಂಗಾರ ಖರೀದಿಸುತ್ತಿದ್ದರೆ ಆ ದುಡ್ಡಿನ ಜೊತೆ 2 ರೂಪಾಯಿಯನ್ನು ಕೂಡ ಕೊಡಿ ಅಥವಾ ಮನೆಗೆ ವಸ್ತುಗಳನ್ನು ಖರೀದಿಸುತ್ತಿದ್ದರೆ ಅದರ ಜೊತೆ ಹೀಗೆ 2 ರೂಪಾಯಿಯನ್ನು ಕೊಡಿ.

ಒಂದು ವೇಳೆ ಮಕ್ಕಳ ವಿದ್ಯಾಭಾಸದ ಉದ್ದೇಶ ಹೊಂದಿದ್ದರೆ ಆ ಎರಡು ರೂಪಾಯಿಯನ್ನು ಮಕ್ಕಳ ಬ್ಯಾಗಲ್ಲಿ ಅಥವಾ ಜೇಬಿನಲ್ಲಿ ಇಡಿ. ಜೊತೆಗೆ ನಿಮ್ಮ ಮಗುವಿಗೆ ಆ 2 ರುಪಾಯಿಯನ್ನು ಜೋಪಾನವಾಗಿ ಇಟ್ಟುಕೊಳ್ಳುವಂತೆ ಬುದ್ಧಿ ಹೇಳಿ. ಈ ರೀತಿ ಮಾಡಿದರೆ ಆದಷ್ಟು ಬೇಗ ನಿಮ್ಮ ಇಷ್ಟಾರ್ಥ ಸಿದ್ಧಿ ಆಗುತ್ತದೆ.