Home Blog Page 201

ಈ ಕಾರ್ಡ್ ಹೊಂದಿರುವ ರೈತರ 2 ಲಕ್ಷದ ವರೆಗಿನ ಸಾಲ ಮನ್ನಾ, ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಘೋಷಣೆ.!

 

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಬಹುಮತ ಬೆಂಬಲದೊಂದಿಗೆ ಗೆದ್ದು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಜನರಿಗೆ ಪ್ರಚಾರದ ವೇಳೆಯಲ್ಲಿ ವಾಗ್ದಾನ ಕೊಟ್ಟಿದ್ದ 5 ಪಂಚಖಾತ್ರಿ ಯೋಜನೆಗಳನ್ನು ರಾಜ್ಯದ ಸಾಲದ ಹೊರೆ ಹೆಚ್ಚಾಗದಂತೆ ಜಾರಿಗೆ ತರುತ್ತೇವೆ ಎನ್ನುವ ಭರವಸೆಯನ್ನು ಮತ್ತೊಮ್ಮೆ ನೀಡಿದ್ದಾರೆ.

ಈಗ ರೈತರ ಸಾಲದ ಬಗ್ಗೆ ಕೂಡ ಗಮನ ಹರಿಸಿರುವ ಇವರು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ರೈತರ ಸಾಲ ಮನ್ನಾ ಮಾಡುವಂತಹ ಯೋಜನೆಗೂ ಕೂಡ ಕೈ ಹಾಕಿದ್ದಾರೆ. ಇದಕ್ಕಾಗಿ ವಿಶೇಷವಾದ ರೂಪುರೇಷೆ ರಚಿಸಿ ಆ ನಿಯಮಾವಳಿಗಳ ಒಳಗೆ ಬರುವ ರೈತರ ಸಾಲ ಮನ್ನಾ ಮಾಡಲು ಆದೇಶ ನೀಡಿದ್ದಾರೆ. ಇದರ ಬಗ್ಗೆ ಈ ಅಂಕಣದಲ್ಲಿ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ರೈತರಿಗೆ ಬ್ಯಾಂಕ್ ಗಳಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಎನ್ನುವ ಕಾರ್ಡ್ಗಳನ್ನು ನೀಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಅನೇಕ ರೈತರಿಗೆ ಈ ಬಗ್ಗೆ ಮಾಹಿತಿ ಇಲ್ಲ ಈಗಾಗಲೇ ದೇಶದಾದ್ಯಂತ ರೈತರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಡೆಯಿಂದ ಕಿಸಾನ್ ಸಮ್ಮರ್ ಯೋಜನೆ ಅಡಿಯಲ್ಲಿ ಸಹಾಯಧನ ಸಿಗುತ್ತಿದೆ.

ಈ ಸಹಾಯಧನ ಪಡೆಯುವ ರೈತರು ಯಾವ ಬ್ಯಾಂಕ್ ಖಾತೆಯ ಮೂಲಕ ಸಹಾಯಧನ ಪಡೆಯುತ್ತಿದ್ದಾರೋ ಅದೇ ಬ್ಯಾಂಕಿನ ಶಾಖೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಈಗ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲು ಇದೇ ಬ್ಯಾಂಕ್ಗಳಿಗೆ ಮನವಿ ಮಾಡಿದೆ. ಯಾವ ಬ್ಯಾಂಕ್ ನಲ್ಲಿ ಎಷ್ಟು ರೈತರು ಕಿಸಾನ್ ಯೋಜನೆಯ ಹಣ ಪಡೆಯುತ್ತಿದ್ದಾರೋ ಅವರೆಲ್ಲರ ಪಟ್ಟಿ ರಚಿಸಿ ಆ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಬೇಕು ಎಂದು ಕೇಳಿದೆ.

ರೈತರು ಸಹ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಸಂಬಂಧಪಟ್ಟ ಬ್ಯಾಂಕುಗಳಿಗೆ ಹೋಗಿ ಅರ್ಜಿ ಫಾರಂ ಪಡೆದು ಭರ್ತಿ ಮಾಡಿ ಕೇಳಲಾಗುವ ಕೆಲ ದಾಖಲೆ ಪತ್ರಗಳನ್ನು ಕೊಟ್ಟು ಅರ್ಜಿ ಸಲ್ಲಿಸಬೇಕು. ಪಡಿತರ ಚೀಟಿ, ಸಂಯೋಜಿತ ಐಡಿ, KCC ಬ್ಯಾಂಕ್ ಪಾಸ್ ಬುಕ್ ಮೊಬೈಲ್ ನಂಬರ್, ಆದಾಯ ಪ್ರಮಾಣ ಪತ್ರ ಮತ್ತು ಭೂಮಿ ದಾಖಲೆಗಳು ಇವುಗಳನ್ನು ನೀಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು.

1,60,000 ದ ವರೆಗೂ ಕೂಡ ಈ ರೀತಿ ಕಿಸಾನ್ ಕ್ರೆಡಿಟ್ ಕಾರ್ಡ್ ಇಂದ ಸಾಲ ಪಡೆಯಬಹುದು. ಇದರ ಜೊತೆಗೆ ರೈತರಿಗಾಗಿ ಮತ್ತೊಂದು ಮಹತ್ವದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ರೈತರಿಗೆ ಬಡ್ಡಿ ಸಬ್ವೆನ್ಷನ್ ಸ್ಕೀಮ್ ಅಡಿಯಲ್ಲಿ 2024ರ ಆರ್ಥಿಕ ವರ್ಷದಲ್ಲಿ ಸಾಲ ಮನ್ನಾ ಮಾಡುವಂತ ನಿರ್ಧಾರವನ್ನು ಸರ್ಕಾರ ಮಾಡಿದೆ. ಈ ರೀತಿ ಸಾಲಮನ್ನದ ಫಲಾನುಭವಿಗಳಾಗಲು ಸರ್ಕಾರ ಹೇಳಿರುವ ನಿಯಮಗಳನ್ನು ಪಾಲಿಸಿ ಈ ಕ್ರಮದಲ್ಲಿ ಅರ್ಜಿ ಸಲ್ಲಿಸಿದರೆ ಸಾಲ ಮನ್ನಾ ಆಗಲಿದೆ.

● ಹತ್ತಿರದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬೇಕು
● ಶಾಖೆ ವ್ಯವಸ್ಥಾಪಕರ ಬಳಿ ಸಾಲ ಮನ್ನಾ ಕುರಿತು ಚರ್ಚಿಸಬೇಕು
● ಸಾಲ ಮನ್ನಾ ಅಜ್ಜಿ ಫಾರಂ ಪಡೆದು ಭರ್ತಿ ಮಾಡಿ ಬ್ಯಾಂಕ್ ಗೆ ಸಲ್ಲಿಸಬೇಕು.
● ಆನ್ಲೈನ್ ಅಲ್ಲಿಯೂ ಕೂಡ ಅಧಿಕೃತ ವೆಬ್ಸೈಟ್ ಗೆ ತೆರಳಿ ಅರ್ಜಿ ಸಲ್ಲಿಸಬಹುದು.
● ಸಾಲ ಪಡೆದ ವಿವರ ಮತ್ತು ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಕೂಡ ಅರ್ಜಿ ಫಾರಂ ಜೊತೆ ಸಲ್ಲಿಸಬೇಕು.
● ಆದರೆ ಈ ಸಾಲ ಮನ್ನಾ ಸೌಲಭ್ಯವು ಮಾರ್ಚ್ 31, 2016 ಕ್ಕಿಂತ ಮುನ್ನ ಜಿಲ್ಲಾ ಸಹಕಾರಿ ಬ್ಯಾಂಕಿಂದ ಸಾಲ ಪಡೆದ ರೈತರಿಗಷ್ಟೇ ಲಭ್ಯವಾಗಲಿದೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ, ಈ ದಾಖಲೆಗಳು ಇದ್ದರೆ ನೀವು ಕೂಡ ಅರ್ಜಿ ಸಲ್ಲಿಸಬಹುದು.

 

ಪಡಿತರ ಚೀಟಿ ಎನ್ನುವುದು ಪ್ರತಿ ಕುಟುಂಬ ಹೊಂದಿರಲೇಬೇಕಾದ ಒಂದು ದಾಖಲೆ ಪತ್ರ. ಕುಟುಂಬದ ಎಲ್ಲಾ ಸದಸ್ಯರ ಹೆಸರುಗಳನ್ನು ಕೂಡ ಒಳಗೊಂಡ ಗುರುತಿನ ಚೀಟಿ ಇದಾಗಿದ್ದು, ಇದನ್ನು ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆ ನೀಡುತ್ತದೆ. ಈ ಪಡಿತರ ಚೀಟಿ ಮೂಲಕ ಕುಟುಂಬದ ಸ್ಥಿತಿಗತಿಯನ್ನು ನಿರ್ಧರಿಸಬಹುದು. ಆ ಕಾರಣ ಇವುಗಳನ್ನು ಸರ್ಕಾರದ ಅನೇಕ ಯೋಜನೆಗಳ ಭಾಗವಾಗಿ ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಯಾಗಿ ಕೇಳಲಾಗುತ್ತದೆ.

ರೇಷನ್ ಕಾರ್ಡ್ ಗಳು ಪ್ರಮುಖವಾಗಿ ಬಳಕೆ ಆಗುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡುವಂತಹ ಉಚಿತ ಪಡಿತರವನ್ನು ಪಡೆಯಲು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉಚಿತವಾಗಿ ಅಕ್ಕಿ, ರಾಗಿ, ಗೋಧಿ ಯಂತಹ ಧಾನ್ಯಗಳನ್ನು ನೀಡುತ್ತಿದ್ದು ಕೈಗೆಟಕುವ ಬೆಲೆಯಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಕೂಡ ನೀಡುತ್ತಿವೆ.

ರೇಷನ್ ಕಾರ್ಡನ್ನು ಒಂದು ಮನದಂಡವಾಗಿ ಬಳಸಿ, ರೇಷನ್ ಕಾರ್ಡ್ ಅಲ್ಲಿ ಇರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಪಡಿತರವನ್ನು ನೀಡಲಾಗುತ್ತಿದೆ. ಕರ್ನಾಟಕ ಜೊತೆಗೆ ಇತ್ತೀಚೆಗೆ ಸ್ಥಾಪಿತವಾದ ಹೊಸ ಸರ್ಕಾರ ನೀಡುತ್ತಿರುವ ಉಚಿತ 10 ಕೆಜಿ ಅಕ್ಕಿ ಮತ್ತು ಮನೆಯ ಯಜಮಾನಿಗೆ 2000ರೂ. ಸಹಾಯಧನ ಕೊಡುವ ಗೃಹಲಕ್ಷ್ಮಿ ಯೋಜನೆ, ಮುಂತಾದವುಗಳಿಗೂ ಕೂಡ ರೇಷನ್ ಕಾರ್ಡ್ ಅಗತ್ಯ ದಾಖಲೆಯಾಗಿ ಬೇಕಾಗುತ್ತದೆ.

ಇಷ್ಟೆಲ್ಲ ಪ್ರಾಮುಖ್ಯತೆ ರೇಷನ್ ಕಾರ್ಡ್ ಹೊಂದಿರುವುದರಿಂದ ಈಗ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಸಂಖ್ಯೆ ಹೆಚ್ಚಾಗುತ್ತಿದೆ. ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆಯು ಈ ರೀತಿ ರೇಷನ್ ಕಾರ್ಡ್ ವಿತರಣೆ ಮಾಡುವ ಅಧಿಕಾರವನ್ನು ಹೊಂದಿತ್ತು. ಆದರೆ ಇದಕ್ಕೆ ಅರ್ಜಿ ಆಹ್ವಾನ ಮಾಡುವ ಪ್ರಕ್ರಿಯೆಯನ್ನು ಸ್ವಲ್ಪ ದಿನಗಳ ಮಟ್ಟಿಗೆ ಸ್ಥಗಿತ ಮಾಡಿತ್ತು.

ಈಗ ಮತ್ತೊಮ್ಮೆ ಜೂನ್ 25 ರಿಂದ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಅನುಮತಿ ನೀಡಿದೆ. ಹೊಸದಾಗಿ ಮದುವೆ ಆಗಿರುವ ದಂಪತಿಗಳು ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದಾದರೆ ಅಥವಾ ರೇಷನ್ ಕಾರ್ಡ್ ನಲ್ಲಿ ಇರುವವರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಅಥವಾ ಸೇರಿಸುವ ಪ್ರಕ್ರಿಯೆಗೆ ಅಥವಾ ರೇಷನ್ ಕಾರ್ಡ್ ನ ತಿದ್ದುಪಡಿಗೆ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೂಡ ಮಾಡಿಕೊಟ್ಟಿದೆ.

ಕೆಲ ಪ್ರಮುಖ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ ಆನ್ಲೈನ್ ಅಲ್ಲಿಯೇ ರೇಷನ್ ಕಾರ್ಡ್ ಪಡೆಯಬಹುದು. ಕುಟುಂಬದ ಆದಾಯದ ಮೇಲೆ ಆ ಕುಟುಂಬಸ್ಥರು APL, BPL ಅಥವಾ AAY ಯಾವ ಕಾರ್ಡ್ ಗೆ ಅರ್ಹರು ಎನ್ನುವುದು ನಿರ್ಧಾರ ಆಗುತ್ತದೆ.

ರೇಷನ್ ಕಾರ್ಡ್ ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:-
● kar.nic.in ವೆಬ್ ಸೈಟ್ ಗೆ ಭೇಟಿ ಕೊಟ್ಟು ಇ- ಸೇವೆಗಳು ಎನ್ನುವುದನ್ನು ಆಯ್ಕೆ ಮಾಡಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಆಪ್ಷನ್ ಅನ್ನು ಕ್ಲಿಕ್ ಮಾಡಿ.
ಅಥವಾ ನೇರವಾಗಿ
● https://ahara.kar.nic./home/Eservices ಎನ್ನುವುದರ ಮೇಲೆ ಕ್ಲಿಕ್ ಮಾಡಿ, ಇ- ಪಡಿತರ ಚೀಟಿ ಎನ್ನುವ ಆಪ್ಷನ್ ಅನ್ನು ಆಯ್ಕೆ ಮಾಡಿ ಹೊಸ ಪಡಿತರಕ್ಕಾಗಿ ಅರ್ಜಿ ಎನ್ನುವಲ್ಲಿ ಕ್ಲಿಕ್ ಮಾಡಿ.
● ಅರ್ಜಿ ಫಾರಂ ಭರ್ತಿ ಮಾಡಿ ನಿಮ್ಮ ಆಯ್ಕೆ ಭಾಷೆ ಕನ್ನಡ ಎನ್ನುವುದನ್ನು ಸೆಲೆಕ್ಟ್ ಮಾಡಿ ಕೇಳಲಾಗುವ ಅಗತ್ಯ ದಾಖಲೆಗಳ ಸಾಫ್ಟ್ ಕಾಪಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ವೋಟರ್ ಐಡಿ
● ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
● ವಯಸ್ಸಿನ ಪ್ರಮಾಣ ಪತ್ರ
● ಡ್ರೈವಿಂಗ್ ಲೈಸೆನ್ಸ್
● ಇತ್ತೀಚಿನ ಪಾರ್ಸ್ ಪೋರ್ಟ್ ಅಳತೆಯ ಭಾವಚಿತ್ರ
● ಮೊಬೈಲ್ ಸಂಖ್ಯೆ
● ಸ್ವಯಂ ಘೋಷಿತ ಪ್ರಮಾಣ ಪತ್ರ
● ಕುಟುಂಬಸ್ಥರ ಬಯೋಮೆಟ್ರಿಕ್ ಮಾಹಿತಿಗಳು.

ಕರ್ನಾಟಕದ ಜನತೆಗೆ ಬಿಗ್ ಶಾ’ಕ್, ವಿದ್ಯುತ್ ಬಿಲ್ ಕಟ್ಟಲೇಬೇಕು.!

ಕರ್ನಾಟಕದ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆ ಪ್ರಚಾರ ವೇಳೆ ಘೋಷಿಸಿದ್ದ ಗ್ಯಾರೆಂಟಿ ಕಾರ್ಡ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಈ ವರ್ಷದ ಆರಂಭದಿಂದಲೇ ಕಾಂಗ್ರೆಸ್ ಸರ್ಕಾರ ಶುರು ಮಾಡಿದ್ದ ಪ್ರಜಾಧ್ವನಿ ಯಾತ್ರೆಯಿಂದಲೇ ಈ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರದ ನಾಯಕರುಗಳು ಮಾತನಾಡುತ್ತಿದ್ದರು.

ಅದರಲ್ಲೂ ಈ ವರ್ಷ ನಡೆದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಪ್ರಣಾಳಿಕೆಯಲ್ಲಿ  ಗ್ಯಾರಂಟಿ ಕಾರ್ಡ್ ನ 5 ಯೋಜನೆಗಳು ಕರ್ನಾಟಕ ಜನತೆಯ ಮತಸೆಳೆಯಲು ಪ್ರಮುಖ ಅಸ್ತ್ರವಾಗಿದ್ದವು. ಅಂತಿಮವಾಗಿ ಕಾಂಗ್ರೆಸ್ ಸರ್ಕಾರವು ಗೆದ್ದು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಘೋಷಣೆ ಆಗಿದ್ದಾರೆ. ಕಾಂಗ್ರೆಸ್ ಪಕ್ಷವು ಹೇಳಿದ್ದ ರೀತಿಯಲ್ಲಿ ಅಧಿಕಾರ ಬಂದ ಕೂಡಲೇ ಮೊದಲ ಸಂಪುಟ ಸಭೆಯಲ್ಲಿ ಈ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಆದೇಶ ಹೊರಡಿಸಿ ಎಂದು ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳುವಂತೆ ರಾಜ್ಯದ ಜನತೆಯಿಂದ ಒತ್ತಡ ಹೆಚ್ಚಾಗುತ್ತಿದೆ.

ಮೊದಲ ಗ್ಯಾರಂಟಿ ಯೋಜನೆಯಾಗಿ ಅನೌನ್ಸ್ ಆಗಿದ್ದ ಕರ್ನಾಟಕದ ಎಲ್ಲಾ ಕುಟುಂಬಗಳಿಗೂ ವಿದ್ಯುತ್ ಉಚಿತ ಎನ್ನುವ ಘೋಷಣೆ ಬಗ್ಗೆ ಜನರು ಹೆಚ್ಚು ಗೊಂದಲಕ್ಕೀಡಾಗಿದ್ದಾರೆ. ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಕರ್ನಾಟಕವನ್ನು ಬೆಳಗುವ ಧ್ಯೇಯದೊಂದಿಗೆ ಮನೆಮನೆಗೂ ಕೂಡ ವಿದ್ಯುತ್ ಉಚಿತ ಕೊಡುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿತ್ತು.

ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮುಂತಾದವರು ಈ ಬಗ್ಗೆ ಮಾತನಾಡಿದ್ದ ವಿಡಿಯೋ ತುಣುಕುಗಳು ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಹಾಗಾಗಿ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಜನಸಾಮಾನ್ಯರು ಮೇ ತಿಂಗಳಿನಿಂದಲೇ ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ. ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತಲ್ಲ ಈಗ ಅವರೇ ಅಧಿಕಾರಕ್ಕೆ ಬಂದಿದ್ದಾರೆ ನಮ್ಮನ್ನು ಕರೆಂಟ್ ಬಿಲ್ ಕೇಳಲು ಬರಬೇಡಿ ಎಂದು ಪಟ್ಟು ಹಿಡಿದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲೂ ಕೂಡ ವಿದ್ಯುತ್ ಬಿಲ್ ನೀಡಲು ಹೋಗುವ ಪ್ರತಿನಿಧಿಗಳಿಗೆ ಗ್ರಾಮಸ್ಥರುಗಳು ಅವಾಜ್ ಹಾಕಿ ವಾಪಸ್ ಕಳಿಸುತ್ತಿರುವ ವಿಡಿಯೋಗಳು ಹರಿದಾಡುತ್ತಿವೆ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ರಚನೆ ಆಗಿ ನಂತರ ಫ್ರೀಯಾಗಿ ಕೊಡಬಹುದು ಆದರೆ ಈವರೆಗೆ ನೀವು ಬಳಸಿರುವ ವಿದ್ಯುತ್ತನ್ನು ಫ್ರೀ ಕೊಡಲು ಆಗುವುದಿಲ್ಲ.

ಹಿಂದಿನ ಬಿಲ್ ಆದರೂ ಪಾವತಿ  ಮಾಡಲೇಬೇಕು, ಉಚಿತ ಯೋಜನೆ ಕುರಿತು ಯಾವ ಆದೇಶವು ಸರ್ಕಾರದಿಂದ ಬಂದಿಲ್ಲ ಹಾಗಾಗಿ ನಮ್ಮ ಇಲಾಖೆ ಕೊಟ್ಟಿರುವ ಕೆಲಸವನ್ನು ನಾವು ಮಾಡಬೇಕು ನಮ್ಮ ಕರ್ತವ್ಯ ಮಾಡಲು ಬಿಡಿ. ನಿಮಗೆ ವಿದ್ಯುತ್ ಬಿಲ್ ಕೊಡುತ್ತೇವೆ ಪಾವತಿ ಮಾಡಿ ಎಂದು ಗ್ರಾಮ ಪಂಚಾಯಿತಿಯ ವಿದ್ಯುತ್ ಪ್ರತಿನಿಧಿಗಳು ಹೇಳಿದರೂ ಕೂಡ ಜನಸಾಮಾನ್ಯರು ಕೇಳುವ ಮನಸ್ಥಿತಿಯಲ್ಲಿ ಇಲ್ಲ.

ಹಾಗಾದ್ರೆ ಕಾಂಗ್ರೆಸ್ ಕೊಟ್ಟಿದ್ದು ಬರೀ ಭರವಸೆಗಳ ಆ ಮಾತುಗಳೆಲ್ಲ ಸುಳ್ಳಾ? ಎಂದು ಮರು ಪ್ರಶ್ನೆ ಕೇಳುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ಜಾರಿ ಮಾಡಿದರೆ ಜೂನ್ ತಿಂಗಳ ನಂತರದ ವಿದ್ಯುತ್ ಬಿಲ್ ಉಚಿತ ಆಗಬಹುದು ಆದರೂ ಕೂಡ ಅದರಲ್ಲಿ ಕಂಡಿಷನ್ಸ್ ಗಳು ಏನೇನು ಇರುತ್ತವೆ ಎನ್ನುವುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಈ ಬಗ್ಗೆ ಸರ್ಕಾರದಿಂದ ಅಧಿಕೃತ ಅನುಮೋದನೆ ಸಿಗುವವರೆಗೂ ಕೂಡ ವಿದ್ಯುತ್ ಪಾವತಿ ಮಾಡಬೇಕು ಎಂದು ಹೇಳುತ್ತಿದ್ದರು.

ಕೂಡ ಜನಸಾಮಾನ್ಯರು ನಿಮ್ಮ ಕೆಲಸ ನೀವು ಮಾಡಿಕೊಂಡು ಹೋಗಿ ನಾವಂತೂ ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್ ಕಟ್ಟುವುದೇ ಇಲ್ಲ ಎಂದು ಪಟ್ಟು ಹಿಡಿಯುತ್ತಿದ್ದಾರೆ. ನಾಡಿನಾದ್ಯಂತ ಕೂಡ ಇದೇ ಪರಿಸ್ಥಿತಿ ಇದೆ. ಸದ್ಯಕ್ಕಿಗೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆ ಗ್ರಾಮಕ್ಕೆ ಗ್ರಾಮ ಪಂಚಾಯಿತಿ ವಿದ್ಯುತ್ ಪ್ರತಿನಿಧಿ ಒಬ್ಬರು ವಿದ್ಯುತ್ ಬಿಲ್ ಸಂಗ್ರಹ ಮಾಡಲು ಹೋದಾಗ ಊರಿನ ಗ್ರಾಮಸ್ಥರು ಜೊತೆ ಮಾತಿನ ಚಕಮಕಿಗಿಳಿದ ವಿಡಿಯೋ ಹರಿದಾಡುತ್ತಿದೆ. ವೀಡಿಯೋ  ನೋಡಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

https://youtu.be/t27dzMFuhOM

ಉಚಿತ ವಿದ್ಯುತ್ 200 ಯೂನಿಟ್ ಭಾಗ್ಯ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ ಗೊತ್ತಾ.? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆಯಲ್ಲಿ ಕಾಂಗ್ರೆಸ್ ಪಕ್ಷವು ಪದೇಪದೇ ತಮ್ಮ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದರೆ ಕರ್ನಾಟಕ ಎಲ್ಲಾ ಜನರಿಗೂ ಅನ್ವಯವಾಗುವಂತೆ ಐದು ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿತ್ತು. ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಚಾರ ಪ್ರಣಾಳಿಕೆಯಲ್ಲಿ ಬಳಸಿದ್ದ ಆ 5 ಗ್ಯಾರಂಟಿ ಕಾರ್ಡ್ ಗಳು ಟ್ರಂಪ್ ಕಾರ್ಡುಗಳಾಗಿ ಬಳಕೆಯಾಗಿ ಜನಮತ ಸೆಳೆಯಲು ಅನುಕೂಲ ಮಾಡಿತು.

ಅಂತಿಮವಾಗಿ ಈಗ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಕರ್ನಾಟಕದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇನ್ನು ಐದು ವರ್ಷಗಳವರೆಗೂ ಕಾಂಗ್ರೆಸ್ ಸರ್ಕಾರವೇ ಕರ್ನಾಟಕದಲ್ಲಿ ಆಳ್ವಿಕೆ ನಡೆಸಲಿದೆ. ಈಗ ಜನಸಾಮಾನ್ಯರಿಗೆ ಪಕ್ಷ ನೀಡಿದ ಆಶ್ವಾಸನೆಗಳಾದ ಆ ಐದು ಯೋಜನೆಗಳನ್ನು ಯಾವಾಗ ಜಾರಿಗೆ ತರುತ್ತದೆ ಎಂದು ಜನರು ಆಸೆ ಕಣ್ಣುಗಳಿಂದ ನೋಡುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗದ ನಾಯಕ ಸಿದ್ದರಾಮಯ್ಯ ಅವರು ಚುನಾವಣೆ ಪ್ರಚಾರದ ವೇಳೆ ಗ್ಯಾರೆಂಟಿ ಕಾಡುಗಳ ಬಗ್ಗೆ ಪ್ರತಿ ವೇದಿಕೆಯಲ್ಲಿಯೂ ಮಾತನಾಡಿದ್ದರು. ಯಾವುದೇ ಬೆಲೆಯನ್ನು ತೆತ್ತು ಬೇಕಾದರೂ ಖಂಡಿತವಾಗಿಯೂ ಈ ಯೋಜನೆಗಳನ್ನು ಕರ್ನಾಟಕದಲ್ಲಿ ಜಾರಿಗೆ ತರುತ್ತಿದ್ದೇವೆ ಎನ್ನುವ ಹೇಳಿಕೆ ನೀಡಿದ್ದರು.

ಈ ಐದು ಗ್ಯಾರಂಟಿ ಕಾರ್ಡ್ ಗಳಲ್ಲಿ ಮೊದಲನೇ ಗ್ಯಾರಂಟಿ ಯೋಜನೆ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಕರ್ನಾಟಕದ ಎಲ್ಲಾ ಕುಟುಂಬಗಳಿಗೂ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಕೊಡುವುದಾಗಿ ಘೋಷಣೆ ಮಾಡಿತ್ತು. ವಿಧಾನಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷದ ಪರ ಬಂದ ದಿನದಿಂದಲೂ ಕೂಡ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಈ ಯೋಜನೆಗಳ ಬಗ್ಗೆ ಜನಸಾಮಾನ್ಯರು ಹೆಚ್ಚು ಪ್ರಶ್ನೆ ಮಾಡುತ್ತಿದ್ದಾರೆ.

ಜೊತೆಗೆ ನಾವು ಈ ತಿಂಗಳಿಂದ ಕರೆಂಟ್ ಬಿಲ್ ಕಟ್ಟುವುದಿಲ್ಲ, ಮತ ನೀಡಿದ್ದೇವೆ ಉಚಿತವಾಗಿ ಕೊಡುವುದಾಗಿ ಹೇಳಿದ್ದ ನಿಮ್ಮ ಮಾತು ಉಳಿಸಿಕೊಳ್ಳಿ ಎಂದು ಕೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಈಗ ವಿಶ್ವಾಸವನ್ನು ಉಳಿಸಿಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಸರ್ಕಾರ ಇದರ ಬಗ್ಗೆ ಕೆಲ ನಿಯಮಗಳನ್ನು ಹೇರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಪ್ರಭಾವಿ ನಾಯಕರಾದ ಜಿ ಪರಮೇಶ್ವರ್ ಅವರು ಸಹ ಇದರ ಬಗ್ಗೆ ಮಾತನಾಡಿ ಎಲ್ಲರಿಗೂ ಉಚಿತವಾಗಿ ಕೊಡುವುದರಿಂದ ವಂಚನೆ ಯಾಗಬಹುದು ಯೋಜನೆ ಸರಿಯಾದ ರೀತಿಯಲ್ಲಿ ಎಲ್ಲರನ್ನು ತಲುಪುವುದಿಲ್ಲ ಹಾಗಾಗಿ ಕೆಲ ನಿಯಮಗಳನ್ನು ಹೇರಲೇಬೇಕಾಗುತ್ತದೆ ಎನ್ನುವುದನ್ನು ಒಪ್ಪಿಕೊಂಡಿರುವುದರಿಂದ BPL ಕಾರ್ಡ್ ಮತ್ತು AAY ಕಾರ್ಡುಗಳನ್ನು ಹೊಂದಿರುವ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳಿಗೆ ಈ ರೀತಿ ವಿದ್ಯುತ್ ಉಚಿತವಾಗಿ ಸಿಗಬಹುದೇನೋ ಅನ್ನುವ ಊಹಾಪೋಹಗಳು ಹರಿದಾಡುತ್ತಿವೆ.

ಜೊತೆಗೆ ಈ ಕುರಿತು ಇರುವ ಮತ್ತೊಂದು ಗೊಂದಲ ಎಂದರೆ ಸರ್ಕಾರವು 200 ಯೂನಿಟ್ ವಿದ್ಯುತ್ ಬಳಸುವವರಿಗೆ ಉಚಿತ ಎಂದು ಹೇಳಿತ್ತು. ಒಂದು ವೇಳೆ 200 ಯೂನಿಟ್ ಕ್ಕಿಂತ ಹೆಚ್ಚು ವಿದ್ಯುತ್ ಬಳಸಿದ ಕುಟುಂಬಗಳಿಗೆ 200 ಯೂನಿಟ್ ಬಿಟ್ಟು ಹೆಚ್ಚಿನ ಬಳಕೆಗೆ ಮಾತ್ರ ಚಾರ್ಜ್ ಮಾಡಲಿದೆಯಾ ಅಥವಾ 200 ಯೂನಿಟ್ ವಿದ್ಯುತ್ ಬಳಸುವವರಿಗೆ ಮಾತ್ರ ಈ ಉಚಿತ ಗ್ಯಾರಂಟಿ ಕಾರ್ಡ್ ಫಲಾನುಭವಿಗಳಾಗುವ ಅವಕಾಶ ಸಿಗಲಿದೆಯೋ ಎನ್ನುವುದರ ಬಗ್ಗೆಯೂ ಕೂಡ ಸರ್ಕಾರದಿಂದ ಸ್ಪಷ್ಟನೆ ಸಿಕ್ಕಿಲ್ಲ.

ಸರ್ಕಾರ ರಚನೆ ಆದ ಮೇಲೆ ಮೊದಲ ಕ್ಯಾಬಿನೆಟ್ ಅಲ್ಲಿಯೇ ಇದರ ಬಗ್ಗೆ ಆದೇಶ ಬರುತ್ತದೆ ಎನ್ನುವ ಸ್ಪಷ್ಟತೆ ಸಿಕ್ಕಿರುವುದರಿಂದ ಇನ್ನೂ ಕೆಲವೇ ದಿನಗಳನ್ನು ಕಾದು ನೋಡಿದರೆ ಕಾಂಗ್ರೆಸ್ ಸರ್ಕಾರ ಈ ಗೃಹ ಜ್ಯೋತಿ ಯೋಜನೆಗಳಿಗೆ ರೂಪಿಸುವ ರೂಪರೇಷೆಗಳು ಏನು, ಹೇರುವ ನಿಯಮಗಳು ಏನು ಎನ್ನುವುದು ಜನಸಾಮಾನ್ಯರಿಗೆ ಸ್ಪಷ್ಟವಾಗಿ ತಿಳಿಯಲಿದೆ. ಅಲ್ಲಿಯವರೆಗೂ ಕೂಡ ತಾಳ್ಮೆಯಿಂದ ಕಾಯೋಣ.

ಅಭಿಷೇಕ ಮಾಡುವಾಗ ಕಣ್ಣು ಮುಚ್ಚುವ ದೇವಿ, ಈ ಪವಾಡವನ್ನು ನೀವೇ ನಿಮ್ಮ ಕಣ್ಣಾರೆ ಈ ವಿಡಿಯೋದಲ್ಲಿ ನೋಡಿ.!


ಭಾರತ ದೇಶದಾದ್ಯಂತ ಅನೇಕ ದೇವಾಲಯಗಳು ಇವೆ. ಅದರಲ್ಲೂ ದಕ್ಷಿಣ ಆಗದಲ್ಲಂತೂ ಇವುಗಳ ಸಂಖ್ಯೆ ಇನ್ನೂ ಅಧಿಕ. ಇಲ್ಲಿ ಒಂದೊಂದು ದೇವಸ್ಥಾನದಲ್ಲಿ ನೆಲೆಸಿರುವ ಒಂದೊಂದು ತಾಯಿಯದು ವಿಶೇಷ ಶಕ್ತಿ ಹಾಗೂ ಒಂದೊಂದು ದೇವಸ್ಥಾನದ ನಿರ್ಮಾಣದ ಬಗ್ಗೆಯೂ ಕೂಡ ಒಂದೊಂದು ದಂತ ಕಥೆ ಇದೆ. ಇದೇ ರೀತಿಯ ಒಂದು ಪುರಾತನ ಪ್ರಸಿದ್ಧವಾದ ಭದ್ರಕಾಳಿ ಅಮ್ಮನವರ ದೇವಾಲಯವು ಪಕ್ಕದ ರಾಜ್ಯವಾದ ತೆಲಂಗಾಣದ ವಾರಂಗಲ್ ಸಮೀಪದಲ್ಲಿ ಇದೆ.

ವಾರಂಗಲ್ ನಗರದಿಂದ ಈ ದೇವಸ್ಥಾನಕ್ಕೆ 10 ಕಿಲೋಮೀಟರ್ ಆಗುತ್ತದೆ. ಇಲ್ಲಿ ಸುಮಾರು 7,000 ವರ್ಷಗಳ ಹಿಂದೆ ನಿರ್ಮಿತವಾದ ಭದ್ರಕಾಳಿ ಅಮ್ಮನವರ ದೇವಾಲಯ ಇದೆ. ಇಲ್ಲಿ ನಡೆಯುವ ಒಂದು ಚಮತ್ಕಾರವನ್ನು ಪ್ರತಿಯೊಬ್ಬರೂ ಕೂಡ ಕಣ್ಣಾರೆ ನೋಡಬಹುದು. ಈ ವಿಶೇಷತೆಯಿಂದಲೇ ಪ್ರತಿದಿನವೂ ಕೂಡ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಇಲ್ಲಿ ಭದ್ರಕಾಳಿ ಅಮ್ಮನವರ 10 ಅಡಿ ಎತ್ತರದ ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾದ ವಿಗ್ರಹ ಇದೆ. ಈ ವಿಗ್ರಹಕ್ಕೆ ಪ್ರತಿದಿನವೂ ಕೂಡ ವಿವಿಧ ರೀತಿಯ ಅಭಿಷೇಕ ನಡೆಯುತ್ತದೆ. ಈ ರೀತಿ ಅಭಿಷೇಕ ಮಾಡುವಾಗ ಒಂದು ಅಚ್ಚರಿಯ ಘಟನೆ ನಡೆಯುತ್ತದೆ. ಅದೇನೆಂದರೆ, ವಿಗ್ರಹಕ್ಕೆ ಅಭಿಷೇಕ ಮಾಡುವಾಗ ಅಮ್ಮನವರು ಕಣ್ಣುಮುಚ್ಚುತ್ತಾರೆ, ಭಾರತದಲ್ಲಿರುವ ಯಾವ ದೇವಾಲಯದಲ್ಲೂ ಕೂಡ ಇಂತಹದೊಂದು ವಿಸ್ಮಯವನ್ನು ಕಾಣಲು ಸಾಧ್ಯವಿಲ್ಲ.

ಈ ವಿಗ್ರಹವು ಭಾರತದಲ್ಲಿರುವ ಅತ್ಯಂತ ಪುರಾತನವಾದ ಭದ್ರಕಾಳಿ ಅಮ್ಮನವರ ವಿಗ್ರಹ. ಮತ್ತು ಈ ಚಮತ್ಕಾರವು ಇಂದಿಗೂ ಕೂಡ ಪ್ರತಿನಿತ್ಯವೂ ನಡೆಯುತ್ತಿರುವ ಒಂದು ವಿಸ್ಮಯಕಾರಿ ಸಂಗತಿ ಆಗಿದೆ. ಸುಮಾರು 2000 ವರ್ಷಗಳಿಂದಲೂ ಕೂಡ ಇದೇ ರೀತಿ ನಡೆದುಕೊಂಡು ಬಂದಿದೆ ಎನ್ನುವ ಮಾತಿದೆ. ಸಾಕ್ಷಾತ್ ಭದ್ರಕಾಳಿ ಅಮ್ಮನವರೇ ಈ ವಿಗ್ರಹದ ಒಳಗೆ ನೆಲೆಸಿದ್ದಾರೆ ಎನ್ನುವ ನಂಬಿಕೆಗಳು ಕೂಡ ಭಕ್ತರ ಮನದಲ್ಲಿ ಮನೆ ಮಾಡಿದೆ.

ಇದಕ್ಕೆ ಸಾಕ್ಷಿಯಾಗಿ ಇತಿಹಾಸದ ಕೆಲ ಘಟನೆಗಳು ಕೂಡ ಇವೆ ಅದೇನೆಂದರೆ, ಚಾಲುಕ್ಯರ ದೊರೆ ಇಮ್ಮಡಿ ಪುಲಕೇಶಿಯು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿ, ಭದ್ರಕಾಳಿ ಅಮ್ಮನವರ ಮಹಾನ್ ಭಕ್ತರಾಗಿರುತ್ತಾರೆ. ಆದರೆ 1312 ಇಸವಿಯಲ್ಲಿ ದೆಹಲಿಯ ದೊರೆ ಅಲ್ಲಾವುದ್ದೀನ್ ಖಿಲ್ಜಿಯು ದೇವಸ್ಥಾನದ ಮೇಲೆ ಕಣ್ಣಿಟ್ಟು ದೇವಸ್ಥಾನವನ್ನು ದ್ವಂಸ ಮಾಡಲು 70,000 ಕಾಳುಗಳನ್ನು ಕಳುಹಿಸುತ್ತಾನೆ.

ಆದರೆ ಆ 70,000 ಆಳುಗಳು ಕೂಡ ದೇವಸ್ಥಾನವನ್ನು ಪ್ರವೇಶ ಕೂಡ ಮಾಡಲಾಗದೆ ಅಲ್ಲಿಯೇ ಕುಸಿದು ಬಿದ್ದಿದ್ದರು ಮತ್ತು ಸ್ವತಃ ಅಲ್ಲಾವುದ್ದೀನ್ ಖಿಲ್ಜಿಯೇ ದೇವಸ್ಥಾನವನ್ನು ಕೆಡವಲು ಹೋದಾಗ ಸಾಕ್ಷಾತ್ ಭಧ್ರಕಾಳಿ ಅಮ್ಮನವರು ಪ್ರತ್ಯಕ್ಷವಾಗಿ ಆತನನ್ನು ಹಿಮ್ಮೆಟ್ಟಿಸಿದ್ದರು ಎನ್ನುವ ಕಥೆಗಳು ಇವೆ. ಮರುದಿನವೇ ಆತ ತನ್ನ ದಂಡನಾಯಕನಾದ ಮಲ್ಲಿಕಾಫರ್ ಇಂದ ಹತನಾದ ಎನ್ನುವ ಉಲ್ಲೇಖ ಇದೆ.

ದೇವಸ್ಥಾನದ ಕುರಿತ ಇನ್ನೊಂದು ಕುತೂಹಲಕಾರಿ ವಿಷಯ ಏನೆಂದರೆ ದೇವಸ್ಥಾನದ ಒಳಗೆ ಒಂದು ಸುರಂಗ ಮಾರ್ಗ ಇದೆ. ಈ ಸುರಂಗ ಮಾರ್ಗವು ದೇವಲೋಕವನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. ಹಿಂದೆ ಭದ್ರಕಾಳಿ ಅಮ್ಮನವರು ದೇವಲೋಕದಿಂದ ಇದೇ ಮಾರ್ಗವಾಗಿ ಸಂಚಾರ ಮಾಡಿ ದೇವಸ್ಥಾನಕ್ಕೆ ಬರುತ್ತಿದ್ದರು ಎನ್ನುವುದನ್ನು ಭಕ್ತಾದಿಗಳು ಮಾತನಾಡುತ್ತಾರೆ. ಆದರೆ ಇಂದು ಈ ಸುರಂಗ ಮಾರ್ಗವು ಸಂಪೂರ್ಣವಾಗಿ ಮುಚ್ಚಿ ಹೋಗಿದೆ.

ಭದ್ರಕಾಳಿ ಅಮ್ಮನವರು ಇಂದಿಗೂ ಕೂಡ ವಿಗ್ರಹ ರೂಪದಲ್ಲಿ ನೆಲೆಸಿ ಬಂದ ಭಕ್ತಾದಿಗಳ ಕಷ್ಟವನ್ನು ಪರಿಹರಿಸುವ ಜಗನ್ಮಾತೆಯಾಗಿ ತನ್ನ ಭಕ್ತಾದಿಗಳನ್ನು ಕಾಯುತ್ತಿದ್ದಾರೆ. ಈ ದೇವಸ್ಥಾನದ ಕುರಿತ ಕಥೆಗಳನ್ನು ಕೇಳಿದರೆ ಜೀವನದಲ್ಲಿ ಒಮ್ಮೆ ಆದರೂ ದೇವಸ್ಥಾನಕ್ಕೆ ಹೋಗಬೇಕು ಎಂದು ಅನಿಸಿದೇ ಇರಲಾರದು. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

2,000 ಮುಖ ಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸಿದ RBI. ಸೆಪ್ಟೆಂಬರ್ 30 ರವರೆಗೆ ಮಾತ್ರ ನೋಟು ಬದಲಾವಣೆಗೆ ಅವಕಾಶ.!

2006 ನವೆಂಬರ್ 8ರಂದು ಪ್ರಧಾನ ಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರು ಒಂದು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದರು. ಆಗ ಚಲಾವಣೆಯಲ್ಲಿದ್ದ 500ರೂ. ಮುಖಬೆಲೆಯ ನೋಟು ಹಾಗೂ 1000ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಕರಣಗೊಳಿಸಿದ್ದರು. ಆ ಸಮಯದಲ್ಲಿ ಜನಸಾಮಾನ್ಯರಿಗೆ ಇದು ಸ್ವಲ್ಪ ತೊಂದರೆ ಆದರೂ ಕೂಡ ಒಂದು ರೀತಿಯಲ್ಲಿ ಕಪ್ಪು ಹಣದ ಮೇಲೆ ಕಡಿವಾಳ ಹಾಕಿದ ರೀತಿಯಾಯಿತು.

ಬ್ಲಾಕ್ ಮನಿ ಹೊರ ತರುವ ಪ್ರಮುಖ ಉದ್ದೇಶದೊಂದಿಗೆ ಆದ ಈ ಆದೇಶದ ಬಗ್ಗೆ ಪ್ರತಿಪಕ್ಷಗಳು ಇಂದು ಕೂಡ ಟೀಕೆ ಮಾಡುತ್ತಿವೆ. ಹಳೆಯ ನೋಟುಗಳು ಚಲಾವಣೆ ನಿಂತ ತಕ್ಷಣವೇ 2,000ರೂ. ಮುಖಬೆಲೆಯ ಹೊಸ ನೋಟುಗಳು ಮತ್ತು 200ರೂ. ಮುಖಬೆಲೆಯ ನೋಟುಗಳು ಮೊದಲಿಗೆ ಬಾರಿಗೆ ಜಾರಿಗೆ ಬಂದವು. ಬಾಹ್ಯಾಕಾಶ ಯಾನ ಹೊಂದಿದ್ದ ಗುಲಾಬಿ ಬಣ್ಣದಿಂದ ಕೂಡಿದ್ದ ಹೊಸ ಮಾರ್ಪಾಡಿನ 2000 ರೂ ಮುಖಬೆಲೆಗೂ ಕೂಡ ಈಗ ಸಮಯ ಮುಗಿದಿದೆ.

ಆರಂಭದಲ್ಲಿ 2000 ನೋಟು ಚಲಾವಣೆಗೆ ಬಂದಾಗ ಎಲ್ಲೆಡೆ ಕೂಡ ಚಿಲ್ಲರೆ ಇಲ್ಲ ಎನ್ನುವ ಕಾರಣಕ್ಕೆ ತೊಂದರೆ ಎದುರಾಗಿತ್ತು. ನಂತರ ದಿನಗಳಲ್ಲಿ ಡಿಜಿಟಲ್ ವ್ಯವಹಾರ ಹೆಚ್ಚಾದ ಕಾರಣ ಆ ಸಮಸ್ಯೆಗೆ ಪರಿಹಾರ ಸಿಕ್ಕಿತ್ತು. ದೊಡ್ಡ ದೊಡ್ಡ ನಗದು ವ್ಯವಹಾರ ನಡೆಯುವಲ್ಲಿ 2000ರೂ. ಮುಖಬೆಲೆಯ ನೋಟುಗಳು ಬಾರಿ ಪಾತ್ರ ವಹಿಸಿದ್ದವು.

ಅಲ್ಲದೆ 2000ರೊ. ಮುಖಬೆಲೆಯ ನೋಟಿನಲ್ಲಿ ನ್ಯಾನೋ ಚಿಪ್ ಅಳವಡಿಸಲಾಗಿದೆ ಅದನ್ನು ಮೊಬೈಲ್ ಆಪ್ ಮೂಲಕ ಸ್ಕ್ಯಾನ್ ಮಾಡಿದಾಗ ನರೇಂದ್ರ ಮೋದಿ ಅವರು ಮಾತನಾಡುವುದನ್ನು ನೋಡಬಹುದು, ಅಲ್ಲದೆ ಈ ಹಣ ಎಲ್ಲೇ ಶೇಖರಣೆ ಆಗಿದ್ದರು ಅದನ್ನು ಈ ಚಿಪ್ ಮೂಲಕ ಕಂಡುಹಿಡಿಯಬಹುದು ಇದರಿಂದ ಕಪ್ಪು ಹಣದ ಸಂಗ್ರಹಣೆ ಕಂಡುಹಿಡಿಲು ಸುಲಭವಾಗಲಿದೆ ಎನ್ನುವ ವಿಷಯ ನೋಟು ಚಲಾವಣೆಗೆ ಬಂದ ಸಮಯದಲ್ಲಿ ಸಂಚಲನವನ್ನು ಸೃಷ್ಟಿಸಿ ಹೊಸದೊಂದು ಅಲೆಯನ್ನೇ ಎಬ್ಬಿಸಿತ್ತು.

ಆದರೆ ನಿಧಾನವಾಗಿ 2018 ರಿಂದ ಈಚೆಗೆ ಇದರ ಚಲಾವಣೆ ಕಡಿಮೆ ಆಗಿದೆ 2018 ನೇ ಇಸ್ವಿಯಲ್ಲಿಯೇ ಈ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಜನಸಾಮಾನ್ಯರಲ್ಲಿ ಓಡಾಡುತ್ತಿದ್ದ ಹಣವಷ್ಟೇ ವಹಿವಾಟು ನಡೆಯುತ್ತಿತ್ತು ಹೊರತು ಬ್ಯಾಂಕಿನಿಂದ ಯಾವುದೇ ಹೊಸ 2,000ರೂ. ನೋಟು ಸಿಗುತ್ತಿರಲಿಲ್ಲ. ಆಗಾಗ ಜನರು ಈ ನೋಟು ಕೂಡ ಸದ್ಯದಲ್ಲೇ ಬ್ಯಾನ್ ಆಗಲಿದೆ ಹಾಗಾಗಿ ಇದು ಹೆಚ್ಚು ಚಲಾವಣೆಯಲ್ಲಿಲ್ಲ ಎಂದು ಮಾತನಾಡುತ್ತಿದ್ದರು ಕೂಡ RBI ಆಗಲಿ ಸರ್ಕಾರ ಆಗಲಿ ಇದರ ಬಗ್ಗೆ ಸ್ಪಷ್ಟೀಕರಣ ಕೊಟ್ಟಿರಲಿಲ್ಲ.

ಈಗ ಅಧಿಕೃತವಾಗಿ ಮೇ 19ರಂದು RBI ಈ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಣೆಯನ್ನು ಹೊರಡಿಸಿ ದೇಶದ ಜನತೆಗೆ ಶಾ’ಕ್ ನೀಡಿದೆ. 2000 ಮುಖಬೆಲೆಯ ನೋಟುಗಳನ್ನು ನೀಡದಂತೆ ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ ಜೊತೆಗೆ ಜನರಿಗೂ ಸಹ ವಿನಿಮಯ ಮಾಡಿಕೊಳ್ಳುವುದಕ್ಕೆ ಕಾಲಾವಕಾಶವನ್ನು ನೀಡಿದೆ. ಈ ವಿಷಯದಲ್ಲಿ ನೋಟ್ ಬದಲಾಯಿಸುವುದಕ್ಕೆ ಹೆಚ್ಚಿನ ಕಾಲಾವಕಾಶ ನೀಡಿರುವುದು ಸಮಾಧಾನಕರ ವಿಷಯ ಆಗಿದೆ.

ಜನರು ಉಳಿತಾಯ ಖಾತೆಯಲ್ಲಿ ಜಮೆ ಮಾಡಬಹುದು ಅಥವಾ ಬ್ಯಾಂಕಿಗೆ ಕೊಟ್ಟು ಅದನ್ನು ಬದಲು ಸಹ ಮಾಡಿಸಿಕೊಳ್ಳಬಹುದು. ಅಕ್ಟೋಬರ್ 1ರಿಂದ 2,000ರೂ. ಮುಖಬೆಲೆಯ ನೋಟು ಚಲಾವಣೆ ನಿಲ್ಲುವುದರಿಂದ ಸೆಪ್ಟೆಂಬರ್ 30ರ ಒಳಗೆ ಬ್ಯಾಂಕಿಗೆ 2000 ಮುಖಬೆಲೆಯ ನೋಟುಗಳನ್ನು ನೀಡಬೇಕು. ಒಂದು ದಿನಕ್ಕೆ ಒಬ್ಬ ವ್ಯಕ್ತಿಯು ರೂ.20,000 ವರೆಗೂ ಮಾತ್ರ 2,000 ನೋಟುಗಳನ್ನು ಠೇವಣಿ ಇಡಬಹುದು ಎನ್ನುವ ಮಿತಿಯನ್ನು ಸರ್ಕಾರ ಹೇರಿದೆ.

ಮೇ 23ನೇ ತಾರೀಖಿನಿಂದ ಈ ವಿನಿಮಯ ಕಾರ್ಯವು ಆರಂಭ ಆಗಲಿದೆ. ನೀವು ಸಹ 2000 ನೋಟುಗಳನ್ನು ಹೊಂದಿದ್ದರೆ RBI ನೀತಿಯಂತೆ ಬ್ಯಾಂಕ್ಗಳಿಗೆ ಹಿಂದಿರುಗಿಸಿ ಮತ್ತು ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ತಪ್ಪದೇ ಹಂಚಿಕೊಳ್ಳಿ.

HDFC ಬ್ಯಾಂಕ್ ನಾ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 5 ವರ್ಷಕ್ಕೆ 30 ಲಕ್ಷ ಹಣ ಪಡೆಯಬಹುದು.! ಹಣ ಉಳಿತಾಯ ಮಾಡುವವರಿಗೆ ಬೆಸ್ಟ್ ಯೋಜನೆ ಇದು.

 

ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಇಂದು ಎಲ್ಲರಿಗೂ ಕೂಡ ಬದುಕಲು ಹಣವೇ ಮುಖ್ಯ. ಒಂದರ್ಥದಲ್ಲಿ ದಿನ ಆರಂಭ ಆಗುವುದೇ ಹಣದ ಮೂಲಕ ಎಂದರೂ ಅದು ತಪ್ಪಾಗುವುದಿಲ್ಲ. ಯಾಕೆಂದರೆ ಹಣವಿಲ್ಲದೆ ಇಂದು ಯಾವ ಕೆಲಸವೂ ಕೂಡ ನಡೆಯುತ್ತಿಲ್ಲ, ನಮಗೆ ಏನು ಕೂಡ ಸಿಗುವುದಿಲ್ಲ. ಆದ್ದರಿಂದ ಹಣವನ್ನು ಉಳಿಸುವುದು ಅಥವಾ ಆದಾಯವನ್ನು ಗಳಿಸುವುದರ ಹಿಂದೆಯೇ ಪ್ರತಿಯೊಬ್ಬರ ಜೀವನ ಸುತ್ತುತ್ತಿದೆ ಎಂದರೆ ಸುಳ್ಳಲ್ಲ.

ಹಣ ಗಳಿಸುವುದು ಮಾತ್ರವಲ್ಲದೆ ಅದನ್ನು ಉಳಿತಾಯ ಮಾಡುವುದು ಅಥವಾ ಅದರಿಂದ ಹೆಚ್ಚುವರಿ ಗಳಿಕೆ ಮಾಡುವುದು ಕೂಡ ಆದಾಯದ ಒಂದು ಮೂಲವೇ. ಅದಕ್ಕಾಗಿ ಜನ ಹಣ ಉಳಿದ ಮಾಡಲು ಬ್ಯಾಂಕ್ ಗಳು, ಅಂಚೆಕಚೇರಿಯ ಯೋಜನೆಗಳು, LIC ಯೋಜನೆಗಳ ಮೊರೆ ಹೋಗುತ್ತಾರೆ. ಇವುಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವೇ ಗ್ಯಾರಂಟಿ ಆಗಿರುವುದರಿಂದ ಹಣಕಾಸಿನ ಮೇಲೆ ಯಾವುದೇ ಅಪಾಯ ಇರುವುದಿಲ್ಲ.

ಆದ್ದರಿಂದ ಜನ ತಮ್ಮ ಕೈಲಾದಷ್ಟು ಹಣವನ್ನು ಭವಿಷ್ಯದ ಉದ್ದೇಶಕ್ಕಾಗಿ ಅಥವಾ ಯಾವುದೋ ಕನಸನ್ನು ಸಾಕಾರ ಮಾಡಿಕೊಳ್ಳುವ ಸಲುವಾಗಿ ಇವುಗಳಲ್ಲಿ ಹಣ ಉಳಿಸುತ್ತಾ ಬರುತ್ತಾರೆ. ಇನ್ನೊಂದು ಮೂಲಕವಾಗಿ ಕೂಡ ಹೆಚ್ಚುವರಿ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಆದಾಯ ಗಳಿಸಬಹುದು. ಇದರ ಬಗ್ಗೆ ಆಸಕ್ತಿ ಇರುವವರು ಶೇರ್ ಮಾರ್ಕೆಟ್ ಗಳು, ಸ್ಟಾಕ್ ಗಳು, ಮ್ಯೂಚುವಲ್ ಫಂಡ್ಗಳನ್ನು ಬಳಸಿಕೊಳ್ಳುತ್ತಾರೆ.

ಆದರೆ ಇಲ್ಲಿ ಹಣಕಾಸಿಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ ಮತ್ತು ನಿಶ್ಚಿತ ಮೊತ್ತದ ಲಾಭವೇ ಬರುತ್ತದೆ ಎಂದು ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಹಾಗಾಗಿ ರಿಸ್ಕ್ ತೆಗೆದುಕೊಳ್ಳಲು ಇಷ್ಟ ಇಲ್ಲದೆ ಇರುವವರು ಇಲ್ಲಿ ಹೂಡಿಕೆ ಮಾಡಲು ಹೋಗುವುದಿಲ್ಲ. ಬ್ಯಾಂಕ್ ಗಳಲ್ಲಿ ಇರುವ ಯೋಜನೆಗಳ ಮೂಲಕವೇ ಅಧಿಕಲಾಭ ಪಡೆಯಲು ಇಚ್ಚಿಸಿದರೆ HDFC ಬ್ಯಾಂಕಿನ ಎರಡು ಯೋಜನೆಗಳಿವೆ.

● HDFC ನಿವೃತ್ತಿ ಉಳಿತಾಯ ನಿಧಿ ಇಕ್ವಿಟಿ ಯೋಜನೆ:-
ಇದು HDFC ಬ್ಯಾಂಕ್ ನಲ್ಲಿ ಹೆಚ್ಚು ಲಾಭ ಕೊಡುವ ಒಂದು ಮ್ಯೂಚುವಲ್ ಫಂಡ್ ಯೋಜನೆ ಆಗಿದೆ. HDFC ಬ್ಯಾಂಕ್ ಇದೀಗ ಇಂತಹ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಇದರಲ್ಲಿ ಹೂಡಿಕೆ ಮಾಡಿದ ಗ್ರಾಹಕರಿಗೆ ವರ್ಷಕ್ಕೆ 15% ಗಿಂತಲೂ ಹೆಚ್ಚಿನ ಲಾಭ ಸಿಗಲಿದೆ. ಈ ಯೋಜನೆಗಳಲ್ಲಿ ಐದು ವರ್ಷ ಉಳಿತಾಯ ಮಾಡಿದರು ಸಾಕು 15 ಲಕ್ಷದಿಂದ 30 ಲಕ್ಷದವರೆಗೆ ಲಾಭ ಪಡೆಯಬಹುದು.

ಕಡಿಮೆ ಸಮಯದಲ್ಲಿ ಅಧಿಕ ಲಾಭ ಗಳಿಸಬೇಕು ಎನ್ನುವ ಆಸಕ್ತಿ ಇರುವವರು ಈ HDFC ನಿವೃತ್ತಿ ಉಳಿತಾಯ ನಿಧಿ ಇಕ್ವಿಟಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು ಹೂಡಿಕೆ ಮಾಡುವ ಹಣದ ಮೊತ್ತ ಹೆಚ್ಚಾಗುತ್ತಾ ಹೋದಂತೆ ಇನ್ನು ಹೆಚ್ಚಿನ ಲಾಭವನ್ನು ಕೂಡ ನೀವು ಗಳಿಸಬಹುದು.

● ಹಿರಿಯ ನಾಗರಿಕರ ಉಳಿತಾಯ ಯೋಜನೆ:-
ಹಿರಿಯ ನಾಗರಿಕರಿಗೆ ಅವರ ಜೀವನದ ಸಂಧ್ಯಾ ಕಾಲದಲ್ಲಿ ಜೀವನ ನಿರ್ವಹಣೆಗೆ ಮತ್ತು ವೈದ್ಯಕೀಯ ವೆಚ್ಚಗಳಿಗೆ ಸೇರಿದಂತೆ ಹಣಕಾಸಿನ ಅವಶ್ಯಕತೆ ಬಹಳ ಇರುತ್ತದೆ. ಹಾಗಾಗಿ ದುಡಿಯುವ ಸಮಯದಿಂದಲೇ ಇದರ ಬಗ್ಗೆ ಗಮನಹರಿಸಬೇಕು. ದುಡಿದ ಹಣದಲ್ಲಿ ಉಳಿತಾಯ ಮಾಡಿದ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಕೂಡ ಅವರ ಉಳಿತಾಯಕ್ಕೆ ಅನುಗುಣವಗಿ ಬಡ್ಡಿರೂಪದಲ್ಲಿ ಆದಾಯವನ್ನು ಪಡೆಯಬಹುದು.

ಅದು ಅವರ ತಿಂಗಳ ಖರ್ಚಿಗೆ ಸಹಾಯಕ್ಕೆ ಬರಲಿದೆ. ಪ್ರಸ್ತುತವಾಗಿ HDFC ಬ್ಯಾಂಕ್ ನ ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೇಲೆ 8.7% ಬಡ್ಡಿ ದರದ ಲಾಭ ಇರುವುದರಿಂದ ಈ ಯೋಜನೆಯಲ್ಲಿ ಹಿರಿಯ ನಾಗರಿಕರು ಹೂಡಿಕೆ ಮಾಡಿ ಲಾಭ ಪಡೆಯಬಹುದು

ವಾಹನ ಖರೀದಿಗೆ ಸರಿಯಾದ ಸಮಯ ಯಾವುದು ಗೊತ್ತಾ? ಯಾವುದೇ ತೊಂದರೆ ಇಲ್ಲದೆ ಹಲವು ವರ್ಷಗಳವರೆಗೆ ವಾಹನ ನಮ್ಮ ಜೊತೆಗೆ ಇರಬೇಕು ಎಂದರೆ ಈ ಉಪಾಯ ಮಾಡಿ.!

 

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ವಾಹನಗಳ ಅಗತ್ಯ ಇದೆ. ಪ್ರತಿಯೊಂದು ಮನೆಗೂ ಕೂಡ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರದ್ದೇ ಆಗಲಿ ಒಂದು ವಾಹನ ಬೇಕೇ ಬೇಕು. ಇಂದಿನ ಧಾವಂತ ಬದುಕಿನಲ್ಲಿ ಸಮಯಕ್ಕೆ ಸರಿಯಾಗಿ ನಮ್ಮ ಕೆಲಸಗಳು ಆಗಬೇಕು ಎಂದರೆ ವಾಹನಗಳ ಮೊರೆ ಹೋಗಲೇಬೇಕು. ಆದರೆ ಈ ರೀತಿ ವಾಹನಗಳ ಖರೀದಿಗೆ ಬಹಳ ಶ್ರಮ ಹಾಕಬೇಕು.

ಹಲವು ದಿನಗಳ ವರೆಗೆ ದುಡಿದ ಹಣವನ್ನು ಹೂಡಿಕೆ ಮಾಡಿ ಅಥವಾ ಇದಕ್ಕಾಗಿ ಲೋನ್ ಮಾಡಿ ವಾಹನಗಳನ್ನು ಖರೀದಿಸುತ್ತೇವೆ. ಒಂದು ಬಾರಿ ವಾಹನ ನಮ್ಮದು ಎಂದು ಆದಮೇಲೆ ಅದರ ಮೇಲೆ ಒಂದು ಸೆಂಟಿಮೆಂಟ್ ಬೆಳೆಯುತ್ತದೆ. ಹಾಗಾಗಿ ಆ ವಾಹನ ಬಹಳ ದಿನಗಳವರೆಗೆ ನಮ್ಮ ಜೊತೆ ಇರಬೇಕು ಎನ್ನುವ ಇಚ್ಛೆ ಉಂಟಾಗುತ್ತದೆ. ಜೊತೆಗೆ ನಾವು ಅದರ ಮೂಲಕವೇ ಸಂಚಾರ ಮಾಡುವುದರಿಂದ ನಮ್ಮ ಸಂಪೂರ್ಣ ಪ್ರಾಣದ ಜವಾಬ್ದಾರಿ ಅದರ ಮೇಲೆ ಇರುತ್ತದೆ.

ಹಾಗಾಗಿ ವಾಹನ ಖರೀದಿಸುವಾಗ ಕೆಲ ನಿಯಮಗಳನ್ನು ಪಾಲಿಸಿದರೆ ನಿಮ್ಮ ಆರೋಗ್ಯಕ್ಕೂ ತೊಂದರೆ ಆಗದಂತೆ ಹಾಗೂ ಬಹಳ ದಿನಗಳವರೆಗೆ ವಾಹನವು ನಿಮ್ಮ ಮನೆಯಲ್ಲಿ ಇರುವಂತೆ ನೋಡಿಕೊಳ್ಳಬಹುದು. ಶುಭ ಕಾರ್ಯಗಳನ್ನು ಮಾಡುವಾಗ ಯಾರು ಸಹಾ ರಾಹುಕಾಲ, ಗುಳಿಕ ಕಾಲ ಮತ್ತು ಯಮಗಂಡ ಕಾಲದಲ್ಲಿ ಮಾಡುವುದಿಲ್ಲ. ಇದೇ ನಿಯಮ ವಾಹನ ಖರೀದಿಗೂ ಕೂಡ ಅನ್ವಯಿಸುತ್ತದೆ.

ಯಾಕೆಂದರೆ ವಾಹನವು ಲಕ್ಷ್ಮಿ ಸ್ವರೂಪದಲ್ಲಿ ನಮ್ಮ ಮನೆಗೆ ಬರುವುದರಿಂದ ಅದನ್ನು ಒಳ್ಳೆ ಘಳಿಗೆಯಲ್ಲಿ ಖರೀದಿಸಿ ಮನೆಗೆ ತರಬೇಕು. ಆದ್ದರಿಂದ ಈ ಮೂರು ಕಾಲಗಳನ್ನು ಬಿಟ್ಟು ವಾಹನ ಖರೀದಿಸಬೇಕು. ಅದರಲ್ಲೂ ಗೋಧೂಳಿ ಲಗ್ನದ ಸಮಯದಲ್ಲಿ ವಾಹನ ಖರೀದಿ ಮಾಡಿದರೆ ಬಹಳ ಒಳ್ಳೆಯದು ಎನ್ನುತ್ತದೆ ಶಾಸ್ತ್ರ.

ಗೋಧೂಳಿ ಲಗ್ನದಲ್ಲಿ ಮನೆಗೆ ಏನೇ ಬಂದರು ಅದು ಅದು ಇನ್ನಷ್ಟು ಹೆಚ್ಚಾಗುತ್ತದೆ. ಯಾಕೆಂದರೆ, ಹೆಸರಿನಲ್ಲಿ ಇರುವಂತೆ ಗೋಧೂಳಿ ಎಂದರೆ ಮನೆಯಿಂದ ಮೇಯಲು ಹೊರಗೆ ಹೋಗಿದ್ದ ಚತುಷ್ಪಾದ ಪ್ರಾಣಿಗಳೆಲ್ಲ ಹೊಟ್ಟೆ ತುಂಬಾ ಮೇವು ಮೇದು ಸುರಕ್ಷಿತವಾಗಿ ಮನೆಗೆ ಬಂದು ಸೇರುವಂತಹ ಘಳಿಗೆ ಅದು. ಹಾಗಾಗಿ ಗೋಧೂಳಿ ಲಗ್ನಕ್ಕೆ ಅಷ್ಟೊಂದು ಪ್ರಶಾಸ್ತ್ಯ ಇದೆ.

ಇತ್ತೀಚಿಗೆ ಎಲ್ಲಾ ಶೋರೂಮ್ ಗಳಲ್ಲೂ ಕೂಡ ವ್ಯವಹಾರಗಳು ಬೆಳಗ್ಗೆ 10 ರ ಮೇಲೆ ನಡೆಯುವುದರಿಂದ ಮತ್ತು ವಾಹನ ಡೆಲಿವರಿ ಸಂಜೆ ಸಮಯ ಸಿಗುವುದರಿಂದ ವಾಹನವನ್ನು ಖರೀದಿಸುವ ಗ್ರಾಹಕರಿಗೆ ಈ ಸಮಯದಿಂದ ಅನುಕೂಲತೆ ಆಗುತ್ತದೆ. ಇದೇ ಸಮಯದಲ್ಲಿ ಕರೆದಿಸಿ ಮತ್ತು ತಪ್ಪದೆ ನಿಮ್ಮ ಹತ್ತಿರದಲ್ಲಿರುವ ಯಾವ ದೇವಸ್ಥಾನದಲ್ಲಾದರೂ ಪೂಜೆ ಮಾಡಿಸಿ ನಂತರ ಮನೆಗೆ ತೆಗೆದುಕೊಂಡು ಬನ್ನಿ.

ಶುಕ್ರವಾರದ ಸಂಜೆ ಸಮಯದಲ್ಲಿ ಈ ರೀತಿ ಗೋಧೂಳಿ ಲಗ್ನದಲ್ಲಿ ವಾಹನವನ್ನು ಮನೆಗೆ ತರುವುದರಿಂದ ಇನ್ನು ಹೆಚ್ಚಿನ ಶುಭ ಎಂದು ನಂಬಲಾಗಿದೆ. ಈ ರೀತಿ ಓರೆಗಳನ್ನು ನೋಡಿ ವಾಹನಗಳನ್ನು ಖರೀದಿಸಿದಾಗ ಅದರಿಂದ ನಮಗೆ ಲಾಭ ಹಾಗೂ ಸುರಕ್ಷತೆಯು ಇರುತ್ತದೆ, ಇದನ್ನು ಸಹ ನಂಬಲೇಬೇಕು. ಹೀಗೆ ಮಾಡಿದಾಗ ಹಲವು ದಿನಗಳವರೆಗೆ ನಮ್ಮ ಜೊತೆಯಲ್ಲಿ ವಾಹನ ಇರುವ ಸಾಧ್ಯತೆ ಇರುತ್ತದೆ.

ಮನೆಗೆ ತರುವ ಯಾವುದೇ ವಸ್ತುವಾದರೂ ಲಕ್ಷ್ಮಿ ಸ್ವರೂಪ ಆಗಿರುವುದರಿಂದ ಅದಕ್ಕೆ ಸಮಯ ಕೊಟ್ಟು ಶುಭ ಘಳಿಗೆಯಲ್ಲಿ ತೆಗೆದುಕೊಂಡು ಬನ್ನಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ಬೇಗ ಸಾಲ ತೀರಿಸಬೇಕಾ.? ನಿಮ್ಮ ಮನೆ ವಾಸ್ತುವಿನಲ್ಲಿ ಈ ಚಿಕ್ಕ ಬದಲಾವಣೆ ಮಾಡಿಕೊಳ್ಳಿ ಸಾಕು.!

 

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಸಾಲ ಎನ್ನುವುದು ಒಂದು ಋಣ ಇದ್ದಂತೆ. ಅದರಿಂದ ಮುಕ್ತರಾಗಬೇಕು ಎಂದು ಜನ ತಮ್ಮಿಂದ ಆದಷ್ಟು ಬೇಗ ಸಾಲ ತೀರಿಸಲು ಪ್ರಯತ್ನ ಪಡುತ್ತಾರೆ. ಎಷ್ಟೇ ದುಡಿದರೂ, ಕೈಯಲ್ಲಿ ಹಣಕಾಸು ಓಡಾಡುತ್ತಿದ್ದರು ಕೆಲ ಸಮಯದಲ್ಲಿ ಸಾಲ ತೀರಿಸಲು ಆಗುವುದಿಲ್ಲ.

ಈ ರೀತಿ ಆಗುತ್ತಿದೆ ಎಂದರೆ ಮನೆಯಲ್ಲಿರುವ ವಾಸು ದೋಷ ಕೂಡ ಇದಕ್ಕೆ ಕಾರಣ ಆಗಿರುತ್ತದೆ. ಏಕೆಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಾಸ್ತುಶಾಸ್ತ್ರವನ್ನು ಪಾಲಿಸುತ್ತೇವೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಐಶ್ವರ್ಯ ಎಲ್ಲವೂ ಇರಬೇಕು ಎಂದರೆ ವಾಸ್ತು ಸರಿಯಾಗಿರಬೇಕು ಎನ್ನುವ ಬಲವಾದ ನಂಬಿಕೆ ಇದೆ. ಹಾಗಾಗಿ ನೀವು ನಿಮ್ಮ ಕೈ ಮೀರಿ ಪ್ರಯತ್ನ ಮಾಡಿಯೂ ಸಮಸ್ಯೆಯಿಂದ ಹೊರ ಬರುತ್ತಿಲ್ಲ ಎಂದರೆ ಅದಕ್ಕೆ ವಾಸ್ತುವೇ ಕಾರಣ ಆಗಿರುತ್ತದೆ.

ಹಾಗಾಗಿ ನಿಮ್ಮ ಎಲ್ಲಾ ರೀತಿಯ ಸಮಸ್ಯೆಯಿಂದ ಹೊರ ಬರಬೇಕಾದರೆ ಮನೆಯಲ್ಲಿ ಈ ಸಣ್ಣಪುಟ್ಟ ವಾಸ್ತುವಿಗೆ ಸಂಬಂಧ ಪಟ್ಟ ಹಾಗೆ ಬದಲಾವಣೆ ಮಾಡಿ ಸಾಕು. ವಾಸ್ತು ಶಾಸ್ತ್ರದಲ್ಲಿ ಒಂದು ಮನೆ ಎಂದ ಮೇಲೆ ಅದರಲ್ಲಿರುವ ಅಡುಗೆಮನೆ ಹಾಗೂ ಶೌಚಾಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಅಡುಗೆ ಮನೆ ಮತ್ತು ಶೌಚಾಲಯವು ಯಾವ ಮನೆಯಲ್ಲಿ ಸರಿಯಾದ ರೀತಿಯಲ್ಲಿ ಇರುತ್ತದೆ ಹಾಗೂ ಶುದ್ಧವಾಗಿರುತ್ತದೆ.

ಆ ಮನೆಯಲ್ಲಿ ಮಹಾಲಕ್ಷ್ಮಿಯು ನೆಲೆಸಿರುತ್ತಾಳೆ. ಆ ಗೃಹಗಳಲ್ಲಿ ಕಲಹವಾಗಲಿ, ಮನಸ್ತಾಪವಾಗಲಿ, ಆರೋಗ್ಯ ಸಮಸ್ಯೆ ಆಗಲಿ ಹಣಕಾಸಿನ ತೊಂದರೆ ಆಗಲಿ ಇರುವುದಿಲ್ಲ ಎನ್ನುವುದನ್ನು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ. ಹಾಗಾಗಿ ಈ ಅಂಕಣದಲ್ಲೂ ಕೂಡ ಅಡುಗೆಮನೆ ಮತ್ತು ಶೌಚಾಲಯಕ್ಕೆ ಸಂಬಂಧಪಟ್ಟ ಹಾಗೆ ಕೆಲ ಬದಲಾವಣೆಗಳ ಸಲಹೆಯನ್ನು ಕೊಡುತ್ತಿದ್ದೇವೆ ಇದನ್ನು ಪಾಲಿಸಿ ಸಮಸ್ಯೆಯಿಂದ ಹೊರಬನ್ನಿ.

ಅಡುಗೆ ಮನೆಯಲ್ಲಿ ಅಡುಗೆ ಆದಮೇಲೆ ಎಲ್ಲಾ ಪದಾರ್ಥಗಳನ್ನು ಹಾಗೆ ಬಿಡುವ ಬದಲು ಶುದ್ಧವಾಗಿ ಸರಿಯಾಗಿ ಜೋಡಿಸಿ ನಂತರ ಊಟ ಮಾಡಿದ ಹಾಗೂ ಅಡುಗೆಗೆ ಬಳಸಿದ ಎಲ್ಲಾ ಪಾತ್ರೆಗಳನ್ನು ತೊಳೆದು ನಂತರ ಮಲಗಬೇಕು. ಯಾಕೆಂದರೆ ರಾತ್ರಿ ನಾವು ಮಲಗಿದ ಮೇಲೆ ಮನೆಗೆ ಗೃಹಲಕ್ಷ್ಮಿ ಬಂದು ನೋಡುತ್ತಾರೆ. ಆಗ ಅಡುಗೆಮನೆ ಅಸ್ತವ್ಯಸ್ತವಾಗಿದ್ದರೆ ಬೇಸರ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.

ಹಾಗಾಗಿ ಯಾವುದೇ ಕಾರಣಕ್ಕೂ ರಾತ್ರಿ ಸಮಯ ಎಂಜಲು ಪಾತ್ರೆಗಳನ್ನು ಹಾಗೆಯೇ ಬಿಟ್ಟು ಮಲಗಲೇಬಾರದು. ಜೊತೆಗೆ ಊಟ ಮಾಡುವ ಸಮಯದಲ್ಲೂ ಕೂಡ ಯಾವುದೇ ಕಾರಣಕ್ಕೂ ನಾವು ಮಲಗುವ ಹಾಸಿಗೆಯ ಮೇಲೆ ಊಟ ಮಾಡಬಾರದು. ನೆಲದ ಮೇಲೆ ಒಂದು ಚಾಪೆ ಹಾಕಿಕೊಂಡು ನಾವು ತಿನ್ನುವ ಆಹಾರಕ್ಕೆ ಗೌರವ ಕೊಟ್ಟು ಊಟ ಮಾಡಬೇಕು ಇಲ್ಲವಾದಲ್ಲಿ ಅನ್ನಪೂರ್ಣೇಶ್ವರಿ ತಾಯಿಗೆ ಅವಮಾನ ಮಾಡಿದ ರೀತಿ ಆಗುತ್ತದೆ. ಈ ತಪ್ಪನ್ನು ಕೂಡ ಸರಿ ಮಾಡಿಕೊಳ್ಳಿ.

ಬಚ್ಚಲುಮನೆಗೆ ಸಂಬಂಧ ಪಟ್ಟ ಹಾಗೆ ಹೇಳುವುದಾದರೆ ಒಂದಕ್ಕಿಂತ ಹೆಚ್ಚು ಬಕೆಟ್ ಗಳನ್ನು ನಾವು ಬಾತ್ರೂಮಿನಲ್ಲಿ ಆಗಲಿ ಅಥವಾ ಶೌಚಾಲಯದಲ್ಲಿ ಆಗಲಿ ಬಾತ್ ರೂಮಿನಲ್ಲಿ ಆಗಲಿ ಯಾವುದೇ ಕಾರಣಕ್ಕೂ ಇಡಬಾರದು. ಜೊತೆಗೆ ಅಲ್ಲಿಡುವ ಬಕೆಟ್ ಹಾಗೂ ಮಗ್ ಅಲ್ಲಿ ಸದಾ ನೀರು ತುಂಬಿರಬೇಕು. ಯಾವುದೇ ಕಾರಣಕ್ಕೂ ಇವುಗಳನ್ನು ಖಾಲಿ ಇಡಬಾರದು.

ಇವುಗಳು ಖಾಲಿ ಇದ್ದರೆ ಹಣಕಾಸಿನ ಬಿಕ್ಕಟ್ಟು ಉಂಟಾಗುತ್ತದೆ. ಶೌಚಾಲಯದಲ್ಲಿ ಹಾಗೂ ಬಾತ್ರೂಮಿನಲ್ಲಿ ಬಳಸುವ ಬಕೆಟ್ಗಳು ಮತ್ತು ಮಗ್ ಗಳು ಹಾಗೂ ಉಳಿದ ಯಾವುದೇ ಪದಾರ್ಥವಾದರೂ ಕಪ್ಪು ಬಣ್ಣದಲ್ಲಿ ಇರಬಾರದು ಎನ್ನುವುದನ್ನು ವಾಸ್ತು ಶಾಸ್ತ್ರ ಹೇಳುತ್ತದೆ. ಈ ವಿಚಾರ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಸಿದ್ದು CM ಆಗುತ್ತಿದ್ದ ಹಾಗೇ ಬಿಗ್ ಶಾ-ಕ್ ಕೊಟ್ಟಿದ್ದಾರೆ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಸಿಗಬೇಕು ಅಂದ್ರೆ ನಿಮ್ಮ ಬಳಿ ಈ ಕಾರ್ಡ್ ಇರಬೇಕು ಇಲ್ಲದಿದ್ದರೆ ಹಣ ಸಿಗಲ್ಲ.!

ಕರ್ನಾಟಕದಲ್ಲಿ ಹೊಸ ಸರ್ಕಾರ ಸ್ಥಾಪನೆ ಆಗುತ್ತಿದೆ. ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ರಾಜ್ಯದ ಅಧಿಕಾರದ ಹಿಡಿದಿದೆ. ಇದರ ಬೆನ್ನಲ್ಲೇ ಜನಸಾಮಾನ್ಯರಿಂದ ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಚಾರದ ವೇಳೆ ಕೊಟ್ಟಿದ್ದ ಭರವಸೆಗಳನ್ನು ಜಾರಿಗೆ ತರುವಂತೆ ಒತ್ತಡ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಪಕ್ಷವು ನೀಡಿದ ಐದು ಗ್ಯಾರಂಟಿ ಕಾರ್ಡ್ ಗಳಲ್ಲಿ ಒಂದು ಗೃಹಲಕ್ಷ್ಮಿ ಯೋಜನೆ ಅಡಿ ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ಸಹಾಯಧನ ಕೊಡಲಾಗುತ್ತದೆ.

ಎನ್ನುವುದು ಈಗ ಕಾಂಗ್ರೆಸ್ ಪಕ್ಷದ ಸರ್ಕಾರ ಸ್ಥಾಪನೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಸಹಾಯಧನ ಪಡೆಯುವುದು ಹೇಗೆ? ಮತ್ತು ಕಂಡಿಷನ್ ಗಳು ಏನೆಲ್ಲಾ ಇರಬಹುದು ಎನ್ನುವುದರ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಕಾರ್ಡ್ಗಳನ್ನು ಘೋಷಣೆ ಮಾಡಿದ ಸಂದರ್ಭದಲ್ಲಿಯೇ ಸ್ಪಷ್ಟವಾಗಿ ಗೃಹಲಕ್ಷ್ಮಿ ಯೋಜನೆ ಅಡಿ ಮನೆಯ ಯಜಮಾನಿಗೆ ಈ ಸಹಾಯಧನ ನೀಡಲಾಗುವುದು ಎಂದು ಹೇಳಿದ್ದರಿಂದ.

ಫಲಾನುಭವಿಗಳನ್ನು ಗುರುತಿಸುವುದಕ್ಕೆ ಅರ್ಜಿ ಆಹ್ವಾನ ಮಾಡುವ ಬದಲು ರೇಷನ್ ಕಾರ್ಡ್ ಮೂಲಕವೇ ಫಲಾನುಭವಿಗಳನ್ನು ಗುರುತಿಸಬಹುದು ಎನ್ನುವುದು ಕೆಲವರ ಅಭಿಪ್ರಾಯ. ಯಾಕೆಂದರೆ ಈಗ ಸರ್ಕಾರದ ಯಾವುದೇ ಯೋಚನೆಯ ಸಹಾಯಧನಗಳಾದರು ಕೂಡ ನೇರವಾಗಿ DBT ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ.

ಒಂದು ಬಾರಿ ಅರ್ಜಿ ಸಲ್ಲಿಸಿ ಮಾಹಿತಿ ಕೊಟ್ಟಿದ್ದೇ ಆದಲ್ಲಿ ಅಭ್ಯರ್ಥಿಗಳ ಯಾವ ಬ್ಯಾಂಕ್ ಖಾತೆಯು NPCI ಗೆ ಲಿಂಕ್ ಆಗಿರುತ್ತದೆ ಆ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ. ಈಗ ಇದೇ ಮಾನದಂಡ ಇಟ್ಟುಕೊಂಡು ಫಲಾನುಭವಿಗಳನ್ನು ಗುರುತಿಸಿದರೆ ಸರಕಾರಕ್ಕೆ ಮನೆಯ ಯಜಮಾನರ ಗುರುತಿಸುವಿಕೆ ಸರಳವಾಗುತ್ತದೆ. ಬಹುತೇಕ ಎಲ್ಲಾ ರೇಷನ್ ಕಾರ್ಡ್ ಗಳು ಕೂಡ ಮಹಿಳೆಯ ಹೆಸರುಗಳಲ್ಲೇ ಇವೆ ಮನೆಯ ಉಳಿದ ಸದಸ್ಯರ ಹೆಸರುಗಳು ನಂತರದಲ್ಲಿ ಇದೆ.

ಗೃಹಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ ಈ ಸಹಾಯಧನ ಸಿಗುತ್ತಿರುವುದರಿಂದ ಇದೇ ಮಾನದಂಡ ಪ್ರಯೋಗ ಮಾಡಿದರೆ ಯಾವ ಮಹಿಳೆಯ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆ ಮತ್ತು ಆ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆಯೋ ಆ ಖಾತೆಗೆ ಯಾವುದೇ ಅರ್ಜಿ ಆಹ್ವಾನ ಮಾಡದೆ ಸಹಾಯಧನ ವರ್ಗಾವಣೆ ಮಾಡಬಹುದು.

ಸರ್ಕಾರ ಇದನ್ನೇ ಪರಿಣನೆಗೆ ತೆಗೆದುಕೊಂಡರೆ ಒಂದು ಬಾರಿ ಈ ರೀತಿ ಸಹಾಯಧನವನ್ನು ಪಡೆದರೆ ಅದು ಖಾಯಂ ಆಗಿ ಯೋಜನೆ ಜಾರಿಯಲ್ಲಿ ಇರುವಷ್ಟು ವರ್ಷಗಳವರೆಗೂ ಬರಲಿದೆ. ಆದರೆ ಈ ಪ್ರಯೋಜನ ಬಿಪಿಎಲ್ ಮತ್ತು ಎ ವೈ ರೇಷನ್ ಕಾರ್ಡ್ ಹೊಂದಿ ಆಧಾರ್ ಲಿಂಕ್ ಮಾಡಿಸಿರುವ ಮಹಿಳೆಯರಿಗೆ ಮಾತ್ರ ಸಿಗಲಿದೆ. ಕೂಡ ಆಗಲಿದೆ. ಇದರ ಬದಲು ಸರ್ಕಾರ ಏನಾದರೂ ಅರ್ಜಿ ಆಹ್ವಾನಿಸಿ ಇನ್ನಷ್ಟು ದಾಖಲೆಗಳ ಪತ್ರಗಳನ್ನು ಕೇಳಿ ಕಂಡಿಷನ್ ಗಳನ್ನು ಹೇರಿ ಯೋಜನೆಯನ್ನು ಜಾರಿಗೆ ತರುವುದಾದರೆ ಹಲವು ಫಲಾನುಭವಿಗಳು ಇದರಿಂದ ವಂಚಿತರಾಗಬಹುದು.

ಮೊದಲಿಗೆ ಸರ್ಕಾರ ಎಲ್ಲರಿಗೂ ಉಚಿತ ಎಂದು ಘೋಷಣೆ ಮಾಡಿದ್ದರೂ ನಿಧಾನವಾಗಿ ಒಂದೊಂದೇ ಯೋಜನೆಗಳ ಮೇಲೆ ನಿಯಮಗಳನ್ನು ಹೇರುತ್ತಿದೆ. ಈ ಬಗ್ಗೆ ಈ ಪರಮೇಶ್ವರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಶೀಘ್ರವಾಗಿಯೇ ಮೊದಲ ಕ್ಯಾಬಿನೆಟ್ ಅಲ್ಲಿಯೇ ಯೋಜನೆಗಳ ಜಾರಿಗೆ ಆದೇಶ ಹೊರ ಬೀಳಲಿದೆ ಎಂದಿರುವುದರಿಂದ ಅಂತಿಮವಾಗಿ ಸರ್ಕಾರ ನಿಲುವು ಏನು ಎನ್ನುವುದನ್ನು ತಿಳಿದುಕೊಳ್ಳಲು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ.