Home Blog Page 200

ಈ ಶಿವಲಿಂಗವನ್ನು ಮುಟ್ಟಿದ್ರೆ ಸಾಕು ಬೆನ್ನು ನೋವು, ಸೊಂಟ ನೋವು, ಮೂಳೆ ನೋವು 7 ದಿನದಲ್ಲಿ ಗುಣಮುಖವಾಗುತ್ತದೆ..!

 

ಬಿಲ್ವಾಣಂ ದರ್ಶನಂ ಪುಣ್ಯಂ, ಸ್ಪರ್ಶನಂ ಪಾಪ ನಾಶನಂ॥ ಎನ್ನುವ ಸ್ತೋತ್ರವನ್ನು ನಾವು ಕೇಳಿದ್ದೇವೆ ಈ ಸ್ತ್ರೊತ್ರದಲ್ಲಿರುವ ಪ್ರತಿಯೊಂದು ಪದವು ಕೂಡ ಅಕ್ಷರಶಃ ಸತ್ಯ. ಈಗಾಗಲೇ ನಾವು ಈ ರೀತಿ ಶಿವ ಹಾಗೂ ಶಿವನ ಮಹಾತ್ಮೆಯನ್ನು ಕುರಿತ ಸಾಕಷ್ಟು ಪುರಾಣ ಕಥೆಗಳನ್ನು ಕೇಳಿದ್ದೇವೆ. ಈ ಜಗತ್ತಿಗೆ ಒಬ್ಬನೇ ಒಡೆಯ ಅದು ಈಶ್ವರ ಮಾತ್ರ ಎನ್ನುವುದನ್ನು ನಂಬಿ ಜಗತೌ ಪಿತರೌ ಒಂದೇ ಪಾರ್ವತಿ ಪರಮೇಶ್ವರಃ ಎಂದು ಜಪಿಸಿದ್ದೇವೆ.

ಓಂಕಾರ ಸ್ವರೂಪಿಯಾದ ಈ ಶಿವನನ್ನು ನಾವೆಲ್ಲರೂ ಲಿಂಗ ಸ್ವರೂಪಿಯಾಗಿ ಕಾಣುತ್ತೇವೆ ಹಾಗೂ ಪೂಜಿಸುತ್ತೇವೆ. ಶಿವನ ಹೆಸರಿಗೆ ಎಷ್ಟು ಶಕ್ತಿ ಇದೆಯೋ ಅಷ್ಟೇ ಪ್ರಮಾಣದ ಪವಾಡವನ್ನುಂಟು ಮಾಡುವ ಶಕ್ತಿಯು ಶಿವಲಿಂಗಗಳೂ ಕೂಡ ಇವೆ ಎನ್ನುವುದನ್ನು ಸಾರುವ ಅನೇಕ ಕಥೆಗಳನ್ನು ಕೂಡ ಕೇಳಿದ್ದೇವೆ.

ಇಂದಿಗೂ ಸಹ ಆ ಚಮತ್ಕಾರಿಗಳು ಜಗತ್ತಿನಾದ್ಯಂತ ನಡೆಯುತ್ತಲೇ ಇವೆ. ಅದರಲ್ಲೂ ಕೂಡ ಶಿವನನ್ನು ಅತಿ ಹೆಚ್ಚಾಗಿ ಆರಾಧಿಸುವ ದೇಶವಾದ ನಮ್ಮ ಭಾರತ ದೇಶದ ಪೂರ್ತಿ ಅನೇಕ ಶಿವಾಲಯಗಳು ಇದ್ದು, ಇಲ್ಲಿ ಪ್ರತಿಯೊಂದು ದೇವಾಲಯದಲ್ಲೂ ಕೂಡ ವಿಭಿನ್ನ ರೀತಿಯಲ್ಲಿ ಶಿವನ ಸಾಕ್ಷಾತ್ಕಾರವನ್ನು ಅನುಭವಿಸಬಹುದು. ಇವನ 12 ಜ್ಯೋತಿರ್ಲಿಂಗ ಕ್ಷೇತ್ರಗಳು ಮಾತ್ರವಲ್ಲದೆ ಇನ್ನು ಅನೇಕ ಶಿವನ ದೇವಾಲಯಗಳು ಶಿವನಿಗೆ ಇರುವ ಶಕ್ತಿಯ ಬಗ್ಗೆ ಸಾರಿ ಸಾರಿ ಹೇಳುತ್ತಿವೆ.

ಈ ಕಲಿಕಾಲದಲ್ಲೂ ಕೂಡ ಶಿವನನ್ನೇ ನಂಬಿ ಹೋಗುವ ಅನೇಕ ಭಕ್ತಾದಿಗಳು ಶಿವನ ಕೃಪೆಗೆ ಒಳಗಾಗಿ ತಮಗೆ ಬರುವ ಸಂಕಷ್ಟಗಳಿಂದ ಪಾರಾಗಿ ಬರುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ನಡೆದ ಒಂದು ಘಟನೆಯನ್ನು ಈ ಅಂಕಣದಲ್ಲಿ ವಿವರಿಸುತ್ತಿದ್ದೇವೆ ಶಿವನು ಭಕ್ತರ ಯಾವುದೇ ರೂಪದ ಕಷ್ಟವನಾದರೂ ಕೂಡ ತಕ್ಷಣವೇ ಪರಿಹರಿಸುತ್ತಾರೆ.

ಶಿವನನ್ನು ಕುರಿತು ಜಪಿಸುವವರಿಗೆ ಕೇಳಿದ ವರಗಳ ಆಗಲೇ ನೀಡುವುದರಿಂದ ಈತನಿಗೆ ಸಾಂಬಸದಾ ಶಿವ ಎನ್ನುವ ಹೆಸರು ಇದೆ. ಹೀಗೆ ಜನರು ನಾನ ಕಾರಣಗಳಿಗಾಗಿ ಈಶ್ವರನನ್ನು ಪೂಜಿಸುತ್ತಾರೆ. ಅದರಲ್ಲಿ ಆರೋಗ್ಯ ಸಮಸ್ಯೆ ಕೂಡ ಒಂದು. ಶಿವನಿಗೆ ವೈಧ್ಯನಾಥೇಶ್ವರ ಎನ್ನುವ ಹೆಸರು ಕೂಡ ಇದೆ ಎನ್ನುವುದು ನಮ್ಮೆಲ್ಲರಿಗೂ ತಿಳಿದೆ ಇದೆ. ಹೆಸರಿನಲ್ಲಿ ವೈದ್ಯನಾಗಿರುವ ಶಿವನು ಮನುಷ್ಯರ ಆರೋಗ್ಯ ಸಮಸ್ಯೆಯನ್ನು ಪರಿಹರಿಸದೆ ಇರಲಾರ.

ಭಾರತದ ಪ್ರಖ್ಯಾತ ಹೃದಯ ತಜ್ಞ ಡಾ.ಪ್ರಕಾಶ್ ಮರ್ಮ ಎನ್ನುವವರ ಬಳಿ ಹೃದಯದ ಪರೀಕ್ಷೆ ಮಾಡಿಸಲು ವ್ಯಕ್ತಿಯೊಬ್ಬರು ಹೋಗಿದ್ದರು. ಇವರ ಹಾರ್ಟ್ ಚೆಕ್ ಅಪ್ ಮಾಡಿದ ಡಾಕ್ಟರ್ ಇವರಿಗೆ ಹೃದಯದ ಕ್ಯಾನ್ಸರ್ ಇರುವುದಾಗಿ ಹೇಳಿ ಇದಕ್ಕೆ ಚಿಕಿತ್ಸೆ ಇಲ್ಲ ನೀವು ಇನ್ನು ದಿನಗಳಷ್ಟೇ ಉಳಿಯಬಹುದು ಎನ್ನುವುದನ್ನು ಹೇಳಿದ್ದರು. ಆದರೆ ಆತ ವೈದ್ಯಲೋಕಕ್ಕೆ ಸವಾಲು ಹಾಕುತ್ತೇನೆ ಎಂದು ಡಾಕ್ಟರ್ ಗೆ ಚಾಲೆಂಜ್ ಮಾಡಿ ಝಾರ್ಖಂಡ್ ರಾಜ್ಯದಲ್ಲಿರುವ ಡೀಯೋಗ ಹಳ್ಳಿಯ ವೈಧ್ಯನಾಥೇಶ್ವರ ದೇವಸ್ಥಾನಕ್ಕೆ ಹೋಗಿ ಸೇವೆ ಮಾಡಿ 36 ದಿನಗಳಲ್ಲಿ ಸಂಪೂರ್ಣವಾಗಿ ತನ್ನ ರೋಗದಿಂದ ಹೊರ ಬಂದಿದ್ದಾರೆ.

ಹೃದ್ರೋಗ ಮಾತ್ರವಲ್ಲದೆ ಜನಸಾಮಾನ್ಯನನ್ನು ದಿನನಿತ್ಯ ಕಾಡಿ ಹಿಂಸಿಸುವ ಮಂಡಿ ನೋವು, ಬೆನ್ನು ನೋವು, ಸೊಂಟ ನೋವು ಮುಂತಾದ ಯಾವುದೇ ಬಗೆಯ ನೋವುಗಳು ಕಾಯಿಲೆಗಳು ಇದ್ದರೂ ಕೂಡ ಈ ವೈದ್ಯನಾಥೇಶ್ವರನ ದರ್ಶನದಿಂದ ಮತ್ತು ಇಲ್ಲಿರುವ ವೈದ್ಯನಾಥೇಶ್ವರ ಲಿಂಗವನ್ನು ಸ್ಪರ್ಷ ಮಾಡಲು ಭಕ್ತರಿಗೆ ಅವಕಾಶ ಕೊಡುವುದರಿಂದ ಸ್ಪರ್ಶದಿಂದಲೇ ಆ ನೋವುಗಳೆಲ್ಲ ಗುಣವಾಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆ. ಅದಕ್ಕಾಗಿ ಪ್ರತಿದಿನವೂ ಸುಮಾರು 5000 ಕ್ಕಿಂತ ಹೆಚ್ಚಿನ ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವೈದ್ಯಲೋಕಕ್ಕೆ ಅಚ್ಚರಿ ಆಗಿರುವ ಈ ದೇವಸ್ಥಾನಕ್ಕೆ ನೀವು ಕೂಡ ಒಮ್ಮೆಯಾದರೂ ಭೇಟಿಕೊಡಿ.

10ನೇ ತರಗತಿ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿ ನೇರ ನೇಮಕಾತಿ, ವೇತನ 50 ಸಾವಿರ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಕರ್ನಾಟಕದಲ್ಲಿರುವ ಎಲ್ಲ ಉದ್ಯೋಗ ಆಕಾಂಕ್ಷಿಗಳಿಗೂ ಸಿಹಿ ಸುದ್ದಿ. ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1,828 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಕರ್ನಾಟಕದ ಅಂಚೆ ವೃತ್ತದಲ್ಲಿ 48 ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗಾಗಿ ಇಲಾಖೆ ವತಿಯಿಂದಲೇ ಅಧಿಕೃತ ಅಧಿಸೂಚನೆ ಬಿಡುಗಡೆ ಆಗಿದೆ.

ವಯಸ್ಸಿನ ಮಿತಿಯಲ್ಲೂ ಕೂಡ ಬಾರಿ ಸಡಿಲಿಕೆ ಇದ್ದು, ಕರ್ನಾಟಕದಲ್ಲಿರುವ ಎಲ್ಲಾ ಪುರುಷ ಮತ್ತು ಮಹಿಳಾ ಆಸಕ್ತ ಅಭ್ಯರ್ಥಿಗಳು ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಅಂಕಣದಲ್ಲಿ ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಅಧಿಸೂಚನೆಯಲ್ಲಿರುವ ಪ್ರಮುಖ ಅಂಶಗಳಾದ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಬೇಕಾಗುವ ದಾಖಲೆಗಳು ಅರ್ಜಿ ಸಲ್ಲಿಸಲು ಇರುವ ಕಡೆ ದಿನಾಂಕ, ಉದ್ಯೋಗ ಸ್ಥಳ ಮತ್ತು ಹುದ್ದೆಯ ವಿವರದ ಕುರಿತ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.

ಇಲಾಖೆ:- ಭಾರತೀಯ ಅಂಚೆ ಇಲಾಖೆ.
ನೇಮಕಾತಿ:- ಪೋಸ್ಟ್ ಆಫೀಸ್ ನೇಮಕಾತಿ 2023.
ಕೆಲಸದ ಸ್ಥಳ:- ಕರ್ನಾಟಕದಾದ್ಯಂತ…

ಹುದ್ದೆಯ ಹೆಸರು:-
● ಗ್ರಾಮೀಣ ಢಕ್ ಸೇವಕ್
● ಬ್ರಾಂಚ್ ಪೋಸ್ಟ್ ಮಾಸ್ಟರ್
● ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್

ಒಟ್ಟು ಹುದ್ದೆಗಳ ಸಂಖ್ಯೆ:- 48.

ವೇತನ ಶ್ರೇಣಿ:-
● ಗ್ರಾಮೀಣ ಢಕ್ ಸೇವಕ್ – 10,000 ದಿಂದ 24,470.
● ಬ್ರಾಂಚ್ ಪೋಸ್ಟ್ ಮಾಸ್ಟರ್ – 12,000 ದಿಂದ 29,350.
● ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ – 10,000 ದಿಂದ 24,470.

ಶೈಕ್ಷಣಿಕ ವಿದ್ಯಾರ್ಹತೆ:- ಅಂಚೆ ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ SSLC, PUC ಅಥವಾ ತತ್ಸಮಾನ ತರಗತಿ ಉತ್ತೀರ್ಣವಾಗಿರುವವರು ಅರ್ಜಿ ಸಲ್ಲಿಸಬಹುದು.

ವಯಸ್ಸಿನ ಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 40 ವರ್ಷಗಳು

ವಯೋಮಿತಿ ಸಡಿಲಿಕೆ:-
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
● PWD ಅಭ್ಯರ್ಥಿಗಳಿಗೆ 10 ವರ್ಷಗಳು.

ಅರ್ಜಿ ಶುಲ್ಕ:-
● SC/ST, PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿರುವುದಿಲ್ಲ.
● ಉಳಿದ ಅಭ್ಯರ್ಥಿಗಳಿಗೆ 100 ರೂ.
● ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಆನ್ಲೈನ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.

ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ…
● ಆಕಾಂಕ್ಷಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಅಲ್ಲಿ ಸವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಕೇಳಲಾಗುವ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು.
● ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾದ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿ ಮಾಡಿದ ನಂತರವಷ್ಟೇ ಸಲ್ಲಿಕೆ ಪ್ರಕ್ರಿಯೆ ಪೂರ್ತಿಗೊಳ್ಳುತ್ತದೆ.
● ಅರ್ಜಿ ಸಲ್ಲಿಕೆ ಪೂರ್ತಿಕೊಂಡ ನಂತರ ವಿನಂತಿ ಸಂಖ್ಯೆ ಮತ್ತು ಅರ್ಜಿ ಸಂಖ್ಯೆಯನ್ನು ನೋಟ್ ಮಾಡಿ ಇಟ್ಟುಕೊಳ್ಳಿ.

ಕೇಳಲಾಗುವ ಪ್ರಮುಖ ದಾಖಲೆಗಳು:-
● ಇತ್ತೀಚಿನ ಭಾವಚಿತ್ರ ಮತ್ತು ಸಹಿ
● ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ
● ಆಧಾರ್ ಕಾರ್ಡ್
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರ
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಇನ್ನಿತರ ಯಾವುದೇ ಪ್ರಮುಖ ದಾಖಲೆಗಳು

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 22.05.2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 21.06.2023.

ವಿದ್ಯಾಪೋಷಕ್ ವಿದ್ಯಾರ್ಥಿವೇತನ, ಪ್ರತಿಯೊಬ್ಬರಿಗೂ ಸಿಗಲಿದೆ ಸ್ಕಾಲರ್ಶಿಪ್ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

 

ಆರ್ಥಿಕ ಸಮಸ್ಯೆಯ ಕಾರಣದಿಂದಾಗಿ ವಿದ್ಯಾರ್ಥಿಗಳ ಓದುವ ಕನಸು ಅದಕ್ಕೆ ನಿಲ್ಲಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರ ಉಚಿತ ಶಾಲಾ ಕಾಲೇಜುಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲತೆ ಮಾಡಿಕೊಡುತ್ತಿದೆ. ಇದರ ಜೊತೆಗೆ ಉಚಿತ ಸಮವಸ್ತ್ರ ಪಠ್ಯಪುಸ್ತಕ ಮತ್ತು ಸ್ಕಾಲರ್ಶಿಪ್ ಕೂಡ ನೀಡುತ್ತಿದೆ. ಇದರ ಜೊತೆಗೆ ದೇಶದ ಪ್ರತಿಷ್ಠಿತ ಸಂಸ್ಥೆಗಳು ಕೂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವ ಮೂಲಕ ಆರ್ಥಿಕ ಸಹಾಯ ಮಾಡಿ ಪುರಸ್ಕರಿಸುತ್ತಿವೆ.

ಕೆಲ ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ಶುಲ್ಕವನ್ನು ಕೂಡ ಭರಿಸುತ್ತಿವೆ. ಹಾಗೆಯೇ ಧಾರವಾಡದಲ್ಲಿರುವ ವಿದ್ಯಾ ಪೋಷಕ್ ಎನ್ನುವ ಸರ್ಕಾರೇತರ NGO ಸಂಸ್ಥೆ ಕೂಡ 2024-25ನೇ ಸಾಲಿನಲ್ಲಿ ಹತ್ತನೇ ತರಗತಿ, ಪಿಯುಸಿ, ಪದವಿ ಮತ್ತು ಸ್ನಾತಕೋತರ ಪದವಿ ಹಾಗೂ ವೃತ್ತಿಪರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ ಮಾಡಿದೆ. ಆಸಕ್ತರು ಅರ್ಜಿ ಕಲಿಸಬಹುದು ಅರ್ಹ ವಿದ್ಯಾರ್ಥಿಗಳ ಖಾತೆಗೆ ಸ್ಕಾಲರ್ಶಿಪ್ ಹಣ ನೇರ ವರ್ಗಾವಣೆಯಾಗಲಿದೆ.

ವಿದ್ಯಾ ಪೋಷಕ ಸ್ಕಾಲರ್ಶಿಪ್ ಪಡೆಯಲು ವಿದ್ಯಾರ್ಥಿಗಳಿಗೆ ಇರಬೇಕಾದ ಅರ್ಹತೆಗಳು:-
● ಹಿಂದಿನ ವರ್ಷದ ತರಗತಿಯಲ್ಲಿ ಶೇ. 85% ಅಂಕ ಪಡೆದಿರಬೇಕು.
● ಸರ್ಕಾರಿ ಶಾಲೆಗಳಲ್ಲಿ ಓದಿದ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆದ್ಯತೆ.

ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲೆಗಳು:-
● ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಪಾಸಾದ ಮಾರ್ಕ್ಸ್ ಕಾರ್ಡ್ ಫೋಟೋ
● ನಿಮ್ಮ ಮನೆಯ ಇತ್ತೀಚಿನ ವಿದ್ಯುತ್ ಬಿಲ್ ಫೋಟೋ
● ಪಡಿತರ ಚೀಟಿ ಫೋಟೋ
● ಅರ್ಜಿದಾರರ ಕುಟುಂಬ ಗಳಿಸುವ ಸದಸ್ಯರ ಬ್ಯಾಂಕ್ ಪಾಸ್‌ಬುಕ್ 1 ನೇ ಪುಟ ಮತ್ತು 6 ತಿಂಗಳ ವಹಿವಾಟಿನ ಪುಟ ಫೋಟೋಗಳು.

● ಕುಟುಂಬದ ಆದಾಯ ಪ್ರಮಾಣಪತ್ರ
● ವಸತಿ ಘಟಕದ ಮುಂದೆ ಕುಟುಂಬದ ಫೋಟೋ (ಮನೆಯ ಮುಂದೆ)
● ವಾಸಿಸುವ ಘಟಕದ ಸಂಪೂರ್ಣ ವೀಡಿಯೊವನ್ನು ಮನೆಯ ಹೊರಗೆ ಮತ್ತು ಒಳಗೆ 30 ಸೆಕೆಂಡುಗಳಿಂದ 60 ಸೆಕೆಂಡ್ ವರೆಗೆ ಕವರ್ ಮಾಡಿ ಸಲ್ಲಿಸಬೇಕು.

ಆಯ್ಕೆ ಮಾಡುವ ವಿಧಾನ :-
● ಈ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಯ ಶೈಕ್ಷಣಿಕ ಅರ್ಹತೆ ಮತ್ತು ಅವರ ಆರ್ಥಿಕ ಪರಿಸ್ಥಿತಿಯನ್ನು ಆಧಾರವನ್ನಾಗಿಟ್ಟುಕೊಂಡು ಆಯ್ಕೆ ಮಾಡುತ್ತಾರೆ.
● ವಿದ್ಯಾ ಪೋಷಕ ಸಂಸ್ಥೆ ಪರೀಕ್ಷೆ ನಡೆಸುತ್ತದೆ ಅದರಲ್ಲಿ ಶೇ.70 ಅಂಕ ಪಡೆದವರ ಅರ್ಜಿ ಮಾತ್ರ ಮಾನ್ಯವಾಗುತ್ತದೆ.

ಅರ್ಜಿಯನ್ನು ಸಲ್ಲಿಸುವ ವಿಧಾನ:-
● ಮೊದಲಿಗೆ @ https://www.vidyaposhak.ngo/ ಈ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.
● ಈ ವೆಬ್‌ಸೈಟ್‌ನಲ್ಲಿನ ಮುಖಪುಟದಲ್ಲಿ ಸ್ಕಾಲರ್ಶಿಪ್ ಅರ್ಜಿಗಳು ಕಾಣಿಸಿಕೊಳ್ಳುತ್ತದೆ. ನಿಮ್ಮ ತರಗತಿಗೆ ಅನುಸಾರವಾಗಿ ಸೆಲೆಕ್ಟ್ ಮಾಡಿಕೊಳ್ಳಿ.
● ವಿದ್ಯಾರ್ಥಿವೇತನ ಅರ್ಜಿ ಆಪ್ಷನ್ ಗೆ ಹೋಗಿ  Apply Now ಕ್ಲಿಕ್ ಮಾಡಿ.

● ಹೊಸ ಟ್ಯಾಬ್‌ನಲ್ಲಿ ಪುಟವೊಂದು ತೆರೆದುಕೊಳ್ಳುತ್ತದೆ. ಆ ಪುಟದಲ್ಲಿನ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಓದಿ ನಂತರ ಕೊನೆಯ ಭಾಗದಲ್ಲಿ “Apply Now” ಕ್ಲಿಕ್ ಮಾಡಿ.
● ಮತ್ತೆ ಹೊಸ ಟ್ಯಾಬ್ ಪುಟವೊಂದು ತೆರೆದುಕೊಳ್ಳುತ್ತದೆ, ಆ ಪುಟದಲ್ಲಿ ಗೂಗಲ್ ಫಾರ್ಮ್ ಇದೆ, ಅದರಲ್ಲಿ ನೀವು ಎಲ್ಲಾ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಬೇಕು ಮತ್ತು ಅಗತ್ಯವಿರುವ ಈ ಮೇಲೆ ಹೇಳಿದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಈಗ ಅಧಿಕಾರಿಯು ನಿಮ್ಮ ದಾಖಲೆಗಳನ್ನು ಪರಿಶೀಲಿಸುತ್ತಾರೆ ಮತ್ತು ನೀವು ಅರ್ಹರಾಗಿದ್ದರೆ ನಿಮ್ಮ ವಿದ್ಯಾರ್ಥಿ ವೇತನದ ಮೊತ್ತವು ನೀವು ನೀಡಿದ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತದೆ.

ವಿದ್ಯಾರ್ಥಿ ವೇತನದ ವಿವರ:-
● 10ನೇ ತರಗತಿ – 10,100
● PUC – 15,000
● ಪದವಿ – 20,000
● ಸ್ನಾತಕೋತ್ತರ ಪದವಿ – 25,000

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:-
ದೂ.ಸಂಖ್ಯೆ:- 0836-2747357 (10AM-5PM ನಡುವೆ).

ಜೂನ್ 14ರ ಒಳಗೆ ನಿಮ್ಮ ಆಧಾರ್ ಮಾಹಿತಿಯನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ, ಇಲ್ಲದಿದ್ರೆ ಶುಲ್ಕ ನೀಡಬೇಕಾಗುತ್ತದೆ…

0

ಆಧಾರ್ ಕಾರ್ಡ್ ಹೊಂದಿರುವವರಿಗೆ ಎಲ್ಲರಿಗೂ ಕೂಡ ಇದು ಬಹು ಮುಖ್ಯವಾದ ಸುದ್ದಿಯಾಗಿದೆ. ಯಾಕೆಂದರೆ ಆಧಾರ್ ಕಾರ್ಡ್ ಜಾರಿಗೆ ಬಂದು 10 ವರ್ಷಗಳಿಗಿಂತಲೂ ಹೆಚ್ಚು ಸಮಯವಾಯಿತು. ಇಂಥಹ ಸಮಯದಲ್ಲಿ ಆಧಾರ್ ಕುರಿತು UIDAI ಸಂಸ್ಥೆ ಆಧಾರ್ ಗ್ರಾಹಕರಿಗೆ ಪ್ಲಮುಖ ಸುದ್ದಿಯೊಂದನ್ನು ಅನೌನ್ಸ್ ಮಾಡಿದೆ. ಕಳೆದ ಹತ್ತು ವರ್ಷಗಳಿಂದ ಯಾರು ಒಮ್ಮೆ ಕೂಡ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿಲ್ಲ ಅಂತವರು ಕಡ್ಡಾಯವಾಗಿ ಜೂನ್ 14ರ ಒಳಗೆ ಅಪ್ಡೇಟ್ ಮಾಡಿಸಬೇಕು ಎಂದು ಹೇಳಿದೆ.

ಈಗ ಆನ್ಲೈನ್ ಮೂಲಕ ಮೈ ಆಧಾರ್ ಪೋರ್ಟಲ್ ಸೇವೆಗೆ ಹೋಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವವರಿಗೆ ಇದನ್ನು ಉಚಿತವಾಗಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಪ್ಡೇಟ್ ಮಾಡಿಸುವುದಕ್ಕಾಗಿ ಭಾರಿ ಶುಲ್ಕ ಪಾವತಿಸಬೇಕಾಗುತ್ತದೆ.

ನಿವಾಸಿಗಳು ತಮ್ಮ ಜನಸಂಖ್ಯೆ ವಿವರಗಳನ್ನು ಮರು ಮೌಲ್ಯೀಕರಿಸಲು ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಅದರಲ್ಲಿ ಬದಲಾವಣೆಗಳಿದ್ದರೆ ಈಗ ಬದಲಿಸಿಕೊಳ್ಳಲು ಅವಕಾಶ ನೀಡಿದೆ. ಇದರೊಂದಿಗೆ ಹುಟ್ಟಿದ ದಿನಾಂಕ ಅಥವಾ ಹೆಸರುಗಳಲ್ಲಿರುವ ಲಿಪ್ಯಂತಕರಣ ದೋಷ ಇನ್ನು ಮುಂತಾದ ಯಾವುದೇ ಮಾಹಿತಿಯಲ್ಲಿ ಸಮಸ್ಯೆಗಳು ಇದ್ದರೂ ಕೂಡ ಇವುಗಳನ್ನು ಸರಿಪಡಿಸಿಕೊಳ್ಳಲು ಇದು ಸಕಾಲ.

ಯಾಕೆಂದರೆ ಈಗ ಆನ್ಲೈನಲ್ಲಿ ಮೈ ಆಧಾರ್ ಪೋರ್ಟಲ್ ಮೂಲಕ ಇದನ್ನು ಉಚಿತವಾಗಿ ಮಾಡಿಕೊಳ್ಳಬಹುದು. ಕಳೆದ ಹತ್ತು ವರ್ಷಗಳಿಂದ ಒಂದು ಬಾರಿ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳದವರಿಗೆ ಮಾತ್ರ ಇದು ಉಚಿತವಾಗಿ ಸಿಗಲಿದೆ. ಸುಧಾರಿತ ಜೀವನ, ಉತ್ತಮ ಸೇವೆ ವಿತರಣೆ ಮತ್ತು ಧೃಡೀಕರಣದ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ ಎನ್ನುವುದನ್ನು UIDAI ಸಂಸ್ಥೆ ಹೇಳುತ್ತಿದೆ.

ಆದರೆ ಈ ಅಪ್ಡೇಟ್ ಅನ್ನು ಭೌತಿಕವಾಗಿ ಆಧಾರ್ ಕೇಂದ್ರಗಳಿಗೆ ಹೋಗಿ ಮಾಡಿಸುವವರು 50ರೂ. ಶುಲ್ಕ ಪಾವತಿಸಲೇಬೇಕುಹ ಹಾಗಾಗಿ ಆನ್ಲೈನಲ್ಲಿ ಮೈ ಆಧಾರ್ ಪೋರ್ಟಲ್ ಮೂಲಕ ಇದನ್ನು ಹೇಗೆ ಅಪ್ಡೇಟ್ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಿ.

● ಮೊದಲಿಗೆ ಆಧಾರ್ ಅಪ್ಡೇಟ್ ಮಾಡಲು ಬಯಸುವ ನಿವಾಸಿಗಳು https://myaadhaar.uidai.gov.in ಲಾಗಿನ್ ಮಾಡಬೇಕು.
● ವಿಳಾಸವನ್ನು ನವೀಕರಿಸುವುದಾದರೆ ಮುಂದುವರೆಯಲಿ ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ.
● ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು OTP ಬರುತ್ತದೆ, ಅದನ್ನು ನಮೂದಿಸಿ.
● ಡಾಕ್ಯುಮೆಂಟ್ ಅಪ್ಡೇಟ್ ಎನ್ನುವ ಆಪ್ಶನ್ ಕಾಣುತ್ತೆ ಅದನ್ನು ಕ್ಲಿಕ್ ಮಾಡಿದಾಗ ನಿವಾಸಿಯ ಅಸ್ತಿತ್ವದಲ್ಲಿರುವ ವಿವರಗಳು ಬರುತ್ತದೆ.

● ನಿವಾಸಿಗಳು ವಿವರಗಳನ್ನು ನೋಡಿ ಸರಿಯಾಗಿದ್ದರೆ ಮುಂದೆ ಇರುವ ಹೈಪರ್ ಲಿಂಕ್ ಅನ್ನು ಕ್ಲಿಕ್ ಮಾಡಿ
ಮುಂದಿನ ಸ್ಕ್ರೀನ್ ಮೇಲೆ ಡ್ರಾಪ್ ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ಆಯ್ಕೆ ಮಾಡಬೇಕು.
● ವಿಳಾಸದ ಪುರಾವೆಯನ್ನು ಸ್ಕ್ಯಾನ್ ಮಾಡಿ ಆ ಪ್ರತಿಯನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
● ದಾಖಲೆಗಳನ್ನು ನವೀಕರಿಸಲು ಅದರ ಪ್ರತಿಗಳನ್ನು ಕೂಡ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

● ಅಪ್ಡೇಟ್ ವಿನಂತಿಯನ್ನು ಸ್ವೀಕರಿಸಲಾಗುತ್ತದೆ. ಮತ್ತು 14 ಅಂಕಿಗಳ ಅಪ್ಡೇಟ್ ವಿನಂತಿ ಸಂಖ್ಯೆಯನ್ನು ಕೂಡ (URN) ರಚಿಸಿ ನೀಡಲಾಗುತ್ತದೆ.
● ಈ URN ಸಂಖ್ಯೆ ಬಳಸಿಕೊಂಡು ನೀವು ನಿಮ್ಮ myaadhaar ಪೋರ್ಟಲ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ಅಪ್ಡೇಟ್ ಆದ ನಂತರ ಅದರ ಪ್ರಿಂಟ್ ಔಟ್ ಕೂಡ ಪಡೆದುಕೊಳ್ಳಬಹುದು.

ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ 100 ರೂಪಾಯಿ ಹೂಡಿಕೆ ಮಾಡಿದ್ರೆ ಸಾಕು 20 ಲಕ್ಷ ಪಡೆಯಬಹುದು.!

 

ದುಡಿಯುವ ಪ್ರತಿ ವ್ಯಕ್ತಿಯೂ ಕೂಡ ತಾನು ದುಡಿದ ಹಣವನ್ನು ಉಳಿತಾಯ ಮಾಡಲು ನೋಡುತ್ತಾನೆ. ಆತನ ಹಣಕ್ಕೆ ಭದ್ರತೆ ಇರುವ ಹಣಕಾಸಿನ ಸಂಸ್ಥೆ ಮತ್ತು ಅದಕ್ಕೆ ಉತ್ತಮವಾದ ಬಡ್ಡಿದರ ಇದ್ದರೆ ಸಾಕು ಅದರತ್ತ ವಾಲುತ್ತಾರೆ. ಇಂತಹ ವಿಷಯಗಳಲ್ಲಿ ಭಾರತೀಯರಿಗೆ ನಂಬಿಕೆ ಆದ ಒಂದು ಹಣಕಾಸಿನ ಸಂಸ್ಥೆ ಎಂದರೆ ಅಂಚೆಕಛೇರಿ. ಯಾಕೆಂದರೆ, ಅಂಚೆ ಕಛೇರಿ ಕೇಂದ್ರ ಸರ್ಕಾರದ ಒಂದು ಭಾಗ ಆಗಿರುವ ಕಾರಣ ಅಂಚೆಕಛೇರಿ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವೇ ನೂರಕ್ಕೆ ನೂರರಷ್ಟು ಗ್ಯಾರಂಟಿ ಆಗಿರುತ್ತದೆ.

ಹಾಗಾಗಿ ಯಾವುದೇ ಅಪಾಯಗಳಿಲ್ಲದೆ ಅಂಚೆ ಕಛೇರಿ ಯೋಜನೆಗಳಲ್ಲಿ ಉಳಿತಾಯ ಮಾಡಬಹುದು. ಈಗಾಗಲೇ ಅಂಚೆ ಕಚೇರಿಯ ಅನೇಕ ಯೋಜನೆಗಳು ದೇಶದಾದ್ಯಂತ ಎಲ್ಲಾ ನಾಗರಿಕರ ಗಮನ ಸೆಳೆದಿದೆ. ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನಮಂತ್ರಿ ಮಾಸಿಕ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಅನೇಕ ಹೆಸರಾಂತ ಸ್ಕೀಮ್ ಗಳು ಇವೆ.

ಈ ರೀತಿ ಅಂಚೆಕಛೇರಿಯಲ್ಲಿರುವ ಮತ್ತೊಂದು ಹೆಸರಾಂತ ಯೋಜನೆ ಎಂದರೆ NSC ಸ್ಕೀಮ್. ಇದನ್ನು ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಅಥವಾ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಸ್ಕೀಮ್ ಎಂದು ಕೂಡ ಕರೆಯುತ್ತಾರೆ. ಈ ಯೋಜನೆಯಲ್ಲಿ ಉಳಿತಾಯ ಮಾಡುವುದರಿಂದ ಅತಿ ಹೆಚ್ಚಿನ ಬಡ್ಡಿ ದರವನ್ನು ಪಡೆಯುವುದು ಮಾತ್ರವಲ್ಲದೆ ನಿಮ್ಮ ಹಣವು ದೇಶದ ಅನುಕೂಲಕ್ಕೆ ಸಹ ವಿನಿಯೋಗವಾದ ಸಮಾಧಾನ ಸಿಗುತ್ತದೆ.

ಗ್ರಾಹಕರ ಹಣವು ದೇಶದ ಅವಶ್ಯಕತೆಗೆ ಬಳಕೆ ಆದರೂ ಗ್ರಾಹಕರಿಗೆ ಹೂಡಿಕೆಗೆ ತಕ್ಕ ಆದಾಯ ಬಡ್ಡಿದರದಲ್ಲಿ ವಾಪಸ್ಸು ಸಿಗುತ್ತದೆ. ಈ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಸ್ಕೀಮಿನ ರೂಪರೇಷೆಗಳು ಏನೆಂದು ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.

● ಯಾವುದೇ ಭಾರತೀಯ ಪ್ರಜೆಯೂ ಈ ಯೋಜನೆಯನ್ನು ಖರೀದಿಸಬಹುದು
● ಸಿಂಗಲ್ ಆಗಿ ಮತ್ತು ಜಂಟಿಯಾಗಿ ಕೂಡ ಖರೀದಿಸುವ ಅವಕಾಶವನ್ನು ಕೊಡಲಾಗಿದೆ.
● ಸದ್ಯಕ್ಕೀಗ ಅಂಚೆಕಛೇರಿ ನ್ಯಾಷನಲ್ ಸೇವಿಂಗ್ ಸ್ಕೀಮ್ ಬಡ್ಡಿದರವು 6.8% ಇದೆ. ಕಾಲಕಾಲಕ್ಕೆ ಇದು ಪರೀಷ್ಕೃವಾಗುತ್ತಿರುತ್ತದೆ. ಒಂದು ವೇಳೆ ನೀವು ಯೋಚನೆ ಖರೀದಿಸಿದ ನಂತರ ಬಡ್ಡಿದರ ಇಳಿಕೆ ಆದರೂ ಕೂಡ ನಿಮ್ಮ ಹಣಕ್ಕೆ ನೀವು ಯೋಚನೆ ಆರಂಭಿಸಿದಾಗ ಯಾವ ಬಡ್ಡಿದರ ನಿಗದಿ ಆಗಿತ್ತು ಅದೇ ಮೊತ್ತದಲ್ಲಿ ಲಾಭ ಸಿಗಲಿದೆ.

● ಇದನ್ನು ಒಂದೇ ಬಾರಿಗೆ ನಿಶ್ಚಿತ ಠೇವಣಿ ಇಡುವ ಮೂಲಕ ಕೂಡ ಖರೀದಿಸಬಹುದು, ಇಂತಹ ಅನುಕೂಲತೆಯನ್ನು ಕೂಡ ಮಾಡಿಕೊಡಲಾಗಿದೆ. ಈ ರೀತಿ ಹಣವನ್ನು ಹೂಡಿಕೆ ಮಾಡಲು ಬಯಸುವವರಿಗೆ ಬಡ್ಡಿ ದರ 7.8% ಅನ್ವಯ ಆಗಲಿದೆ.
● ಉದಾಹರಣೆಯೊಂದಿಗೆ ಹೇಳುವುದಾದರೆ ನೀವು 15 ಲಕ್ಷ ರೂಪಾಯಿಗಳನ್ನು ಒಂದೇ ಬಾರಿಗೆ ಈ ಯೋಜನೆ ಅಡಿ ಹೂಡಿಕೆ ಇಟ್ಟರೆ ಐದು ವರ್ಷದ ಮೆಚುರಿಟಿ ಸಮಯ ಮುಗಿದ ಬಳಿಕ 20.85 ಲಕ್ಷ ರಿಟರ್ನ್ಸ್ ಸಿಗಲಿದೆ. ಐದೇ ವರ್ಷಕ್ಕೆ 5.85 ಲಕ್ಷ ನಿಮಗೆ ಲಾಭ ಸಿಗಲಿದೆ.

● ನೀವು ಐದು ವರ್ಷಗಳವರೆಗೂ ಹೂಡಿಕೆ ಮಾಡುತ್ತಾ ಹೋದರೆ ಕನಿಷ್ಠ 100 ರೂಪಾಯಿಯಿಂದ ಕೂಡ ಇದನ್ನು ಆರಂಭಿಸಬಹುದು.
● ನಾಮಿನಿ ಫೆಸಿಲಿಟಿಗಳು ಕೂಡ ಲಭ್ಯವಿದ್ದು, ಯೋಚನೆ ಖರೀದಿಸಿದವರು ಮರಣ ಹೊಂದಿದ ಪಕ್ಷದಲ್ಲಿ ಅವರ ನಾಮಿನಿಗೆ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಹಣ ಸೇರುತ್ತದ. ಈ ಯೋಜನೆಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿದಲ್ಲಿರುವ ಅಂಚೆ ಕಛೇರಿಗೆ ಹೋಗಿ ವಿಚಾರಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ಈ ದೇವಾಲಯಕ್ಕೆ ಒಮ್ಮೆ ಭೇಟಿ ನಿಡಿದ್ರೆ ಸರ್ಪದೋಷ ನಿವಾರಣೆಯಾಗಿ ವಿವಾಹ ಹಾಗೂ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ.! ನಂಬಿ ಬಂದ ಭಕ್ತರ ಕಷ್ಟ ನಿವಾರಣೆ ಮಾಡುವ ದೈವ

 

ನಮ್ಮ ನಾಡಿನ ಒಂದೊಂದು ದೇವಾಲಯಕ್ಕೂ ಕೂಡ ಒಂದೊಂದು ರೀತಿಯ ವಿಶೇಷತೆ ಇದೆ. ಅನೇಕ ದೇವಾಲಯಗಳು ರಾಜರುಗಳ ಕಾಲದಲ್ಲಿ ಜೀರ್ಣೋದ್ದಾರವಾದರೂ ಅವು ಸೃಷ್ಟಿಯಾದ ಕಾಲದ ಕಥೆ ಕೇಳಿದಾಗ ಮೈ ರೋಮಾಂಚನವಾಗುತ್ತದೆ. ಒಂದೊಂದು ದೇವಾಲಯ ನಿರ್ಮಾಣವಾದದ್ದರ ಹಿಂದೆ ಒಂದೊಂದು ದಂತ ಕಥೆ ಇದೆ. ದೇವಾಲಯಗಳಲ್ಲಿ ನೆಲೆ ನಿಂತಿರುವ ದೇವತೆಗಳು, ಪ್ರತಿಯೊಂದು ದೇವರ ವಿಗ್ರಹಗಳು, ದೇವಸ್ಥಾನದಲ್ಲಿ ನೆರವೇರುವ ವಿಶೇಷ ಆಚರಣೆಗಳ ಹಿನ್ನೆಲೆ ಹಿಂದೆ ಇರುವ ಕಥೆಯೇ ವಿಶೇಷ.

ಕೆಲ ದೇವಾಲಯಗಳಿಗೆ ಭೇಟಿಕೊಡುವುದರಿಂದ ಮನೆ ಕಟ್ಟುವ ಭಾಗ್ಯ ಬರುತ್ತದೆ ಎಂದು ಜನ ನಂಬುತ್ತಾರೆ, ಹಾಗೆ ಇನ್ನು ಕೆಲವು ದೇವಸ್ಥಾನಗಳಿಗೆ ಭೇಟಿ ಕೊಡುವುದರಿಂದ ಕಂಕಣಭಾಗ್ಯ ಕೂಡಿಬರುತ್ತದೆ ಎನ್ನುತ್ತಾರೆ. ಕೆಲ ದೇವಸ್ಥಾನಗಳಲ್ಲಿನ ವಿಶೇಷ ಪೂಜೆ ಮಾಡಿಸುವುದರಿಂದ ಸರ್ಪ ದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ಮಾತುಗಳು ರೂಢಿಯಲ್ಲಿವೆ.

ಕರ್ನಾಟಕದಲ್ಲೂ ಕೂಡ ಸರ್ಪದೋಷ ನಿವಾರಣೆಗೆ ಮತ್ತು ಸಂತಾನ ಪ್ರಾಪ್ತಿಗಾಗಿ ಇರುವ ಅನೇಕ ದೇವಾಲಯಗಳು ಫೇಮಸ್ ಆಗಿವೆ. ಅದರಲ್ಲಿ ಒಂದು ಬೆಂಗಳೂರಿನ ಹೊರಭಾಗದಲ್ಲಿರುವ ರಾಮನಗರ ಜಿಲ್ಲೆಯ ಲಕ್ಷ್ಮಿನರಸಿಂಹ ಸ್ವಾಮಿ ಮತ್ತು ಗರುಡ ದೇವಾಲಯ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಸುಗ್ಗನಹಳ್ಳಿ ಗ್ರಾಮದಲ್ಲಿ ಪುರಾಣ ಪ್ರಸಿದ್ಧವಾದ ಲಕ್ಷ್ಮೀನರಸಿಂಹ ಸ್ವಾಮಿಯ ದೇವಸ್ಥಾನ ಇದೆ.

ಚೋಳ ರಾಜವಂಶದ ಅಸ್ತಿತ್ವದಲ್ಲಿದ್ದ ಈ ದೇವಸ್ಥಾನ ಸ್ಥಾಪಿತವಾದ ಹಿನ್ನೆಲೆ ಕಥೆ ಹೇಳುವುದಾದರೆ ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಕಲ್ಯಾಣ ಜರುಗಿದ ನಂತರ ಶುಕ ಮಹರ್ಷಿಗಳು ಈಗ ದೇವಸ್ಥಾನ ನಿರ್ಮಾಣವಾಗಿರುವ ಜಾಗದಲ್ಲಿ ಬಂದು ಒಂದು ಬದರಿ ವೃಕ್ಷದ ಕೆಳಗೆ ತಪಸ್ಸು ಮಾಡುತ್ತಿದ್ದರಂತೆ. ಇವರ ತಪಸ್ಸಿಗೆ ಒಲಿದ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯು ನಿಂತಿದ್ದ ರೂಪದಲ್ಲಿಯೇ ಬಂದು ದರ್ಶನ ಕೊಟ್ಟರಂತೆ.

ನಂತರ ಶುಕ ಮಹರ್ಷಿಗಳು ಅವರು ಯಾವ ರೂಪದಲ್ಲಿ ದೇವರನ್ನು ಕಂಡರೋ ಅದೇ ರೀತಿ ವಿಗ್ರಹ ಸೃಷ್ಟಿಸಿ ಪೂಜಾ ಕಾರ್ಯ ಆರಂಭಿಸಲು ಅಪ್ಪಣೆ ಕೊಟ್ಟರಂತೆ. ಈ ಘಟನೆಗೆ ಸಾಕ್ಷಿಯಾಗಿ ಇಂದು ಸಹ ಆ ಬದರಿ ವೃಕ್ಷದ ಕೆಳಗಡೆ ಶುಕ ಮಹರ್ಷಿಗಳ ಪಾದದ ಮುದ್ರೆ ಇರುವುದನ್ನು ಕಾಣಬಹುದು. ಸಾಮಾನ್ಯವಾಗಿ ಎಲ್ಲಾ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯಗಳಲ್ಲಿ ನರಸಿಂಹ ಸ್ವಾಮಿಯು ಕುಳಿತಿರುತ್ತಾರೆ ಅವರ ಎಳೆತೊಡೆಯ ಮೇಲೆ ಲಕ್ಷ್ಮಿ ದೇವಿಯು ಆಸೀನರಾಗಿರುತ್ತಾರೆ.

ಆದರೆ ಈ ದೇವಸ್ಥಾನದಲ್ಲಿ ಮಾತ್ರ ಲಕ್ಷ್ಮಿ ನರಸಿಂಹ ಸ್ವಾಮಿಯ ನಿಂತಿರುವ ರೂಪದಲ್ಲಿಯೇ ವಿಗ್ರಹ ಇದೆ. ಇಲ್ಲಿಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಮಾತ್ರವಲ್ಲದೇ ಪರ ರಾಜ್ಯಗಳಿಂದಲೂ ಕೂಡ ಭಕ್ತಾದಿಗಳು ಬರುತ್ತಾರೆ ಯಾಕೆಂದರೆ ಇಲ್ಲಿಗೆ ಬರುವುದರಿಂದ ಸರ್ಪದೋಷ ನಿವಾರಣೆ ಆಗುತ್ತದೆ ಹಾಗೂ ಸಂತಾನ ಭಾಗ್ಯ ಇಲ್ಲದೆ ಕೊರಗುವವರಿಗೆ ಮಕ್ಕಳ ಭಾಗ್ಯ ಪ್ರಾಪ್ತಿಯಾಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆ.

ಪ್ರತಿದಿನ ಗರುಡನನ್ನು ಪೂಜಿಸುವ ವಿಷ್ಣುವಿನ ಕೆಲವೇ ಕೆಲವು ದೇವಾಲಯಗಳು ಇದು ಕೂಡ ಒಂದು. ಆದ್ದರಿಂದ ಇದನ್ನು ಲಕ್ಷ್ಮಿ ಸಿಂಹ ಸ್ವಾಮಿ ದೇವಾಲಯ ಎನ್ನುವುದರ ಜೊತೆಗೆ ಗರುಡ ದೇವಾಲಯ ಎಂದು ಕೂಡ ಕರೆಯುತ್ತಾರೆ. ಇದು ಗರುಡ ಹುಟ್ಟಿದ ಸ್ಥಳ ಎಂದು ಕೂಡ ಹೇಳುತ್ತಾರೆ ಹಾಗಾಗಿ ಇದಕ್ಕೆ ಈ ಹೆಸರು ಬಂದಿರಬಹುದು. ಇದಕ್ಕೆ ಈ ಹೆಸರು ಬರುವುದರ ಹಿನ್ನೆಲೆ ಏನು ಇದರ ವೈಶಿಷ್ಟ ಏನು ಎನ್ನುವುದರ ಬಗ್ಗೆ ಕೂಡ ಇತಿಹಾಸ ಇದೆ. ಇದರ ಬಗ್ಗೆ ತಿಳಿದುಕೊಳ್ಳಲು ಮತ್ತು ಈ ದೇವಸ್ಥಾನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ತಪ್ಪದೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ರಸಗೊಬ್ಬರಕ್ಕೆ ಸಬ್ಸಿಡಿ ಘೋಷಣೆ.! ಇನ್ಮುಂದೆ ನೀವು ಖರೀದಿ ಮಾಡುವ ರಸಗೊಬ್ಬರಕ್ಕೆ ಹಣ ನೀಡಬೇಕಿಲ್ಲ.!

 

ಕೇಂದ್ರ ಸರ್ಕಾರದ ವತಿಯಿಂದ ದೇಶದ ರೈತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ ರೈತರಿಗೆ ರಸಗೊಬ್ಬರಗಳ ಮೇಲೆ ಸಬ್ಸಿಡಿ ಕೊಡುವ ಕುರಿತು ಬುಧವಾರ ನಡೆದ ಕ್ಯಾಬಿನೆಟ್ ಅಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ ಎನ್ನುವುದನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವ ಮನ್ಸುಖ್ ಮಾಂಡವಿಯ ರವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಪ್ರತಿ ವರ್ಷವೂ ಕೂಡ ರೈತರಿಗಾಗಿ ಈ ರೀತಿಯ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲಿದೆ. ಈಗಾಗಲೇ ಹಲವು ಬಾರಿ ಇದೇ ರೀತಿ ರಸಗೊಬ್ಬರಗಳ ಮೇಲೆ ಸಬ್ಸಿಡಿ ನೀಡಿದೆ, ಮತ್ತೊಮ್ಮೆ 2023-24 ಸಾಲಿನಲ್ಲಿ ಖಾರಿಫ್ ಬೆಳೆ ಬೆಳೆಯುವ ರೈತರಿಗೆ ಈ ಅನುಕೂಲತೆ ಮಾಡಿಕೊಡಲು ನಿರ್ಧರಿಸಿದೆ.

ದೇಶದಲ್ಲಿ ರೈತರಿಗೆ ಈ ಖಾರಿಫ್ ಸೀಸನ್ ಬಹಳ ಮುಖ್ಯ. ಈ ಸಮಯದಲ್ಲಿ ದೇಶದಾದ್ಯಂತ ಎಲ್ಲಾ ಭಾಗಗಳಲ್ಲೂ ಕೂಡ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಚಟುವಟಿಕೆ ಬೆಳೆಯುತ್ತವೆ. ಉತ್ತಮ ಇಳುವರಿಯನ್ನು ಪಡೆಯಲು ಎಲ್ಲರೂ ಕೂಡ ಈಗ ರಸಗೊಬ್ಬರಗಳ ಮೊರೆ ಹೋಗುತ್ತಿರುವುದರಿಂದ ಸಹಜವಾಗಿ ರಸಗೊಬ್ಬರಗಳ ಬೇಡಿಕೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ರಸಗೊಬ್ಬರಗಳ ಬೆಲೆ ಅಧಿಕವಾಗಬಹುದು ಮತ್ತು ಗುಣಮಟ್ಟ ಕುಸಿಯಬಹುದು.

ಆದ್ದರಿಂದ ಸರ್ಕಾರವು ಇಂತಹ ಸಮಯಗಳಲ್ಲಿ ರೈತಸ್ನೇಹಿ ನಿರ್ಧಾರವನ್ನು ತೆಗೆದುಕೊಂಡು ರಸಗೊಬ್ಬರಗಳ ಬೆಲೆಯನ್ನು ಸಬ್ಸಿಡಿ ನೀಡುವ ಮೂಲಕ ಈ ಹೊರೆಯನ್ನು ಕೊಂಚ ನಿಯಂತ್ರಿಸುವ ಕೆಲಸವನ್ನು ಮಾಡುತ್ತಿದೆ. ರಸಗೊಬ್ಬರಗಳ ಬೆಲೆ ನಿಯಂತ್ರಣ ಮತ್ತು ಉತ್ತಮ ಗುಣಮಟ್ಟದ ರಸ ಗೊಬ್ಬರಗಳನ್ನು ರೈತರಿಗೆ ಅವಶ್ಯಕವಾದ ಸಮಯದಲ್ಲಿ ತಲುಪಿಸಲು ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಮತ್ತು ಇದಕ್ಕಾಗಿ ಈ ಬಾರಿಯ ಖಾರಿಫ್ ಸೀಸನ್ನ ಅಲ್ಲಿ ಒಟ್ಟಾರೆಯಾಗಿ ರಸಗೊಬ್ಬರಗಳ ಮೇಲೆ 1.08 ಲಕ್ಷ ಕೋಟಿ ಗಳನ್ನು ಸಬ್ಸಿಡಿ ನೀಡುತ್ತಿದೆ. ಎನ್ನುವುದನ್ನು ಸಹ ಸಚಿವರು ತಿಳಿಸಿದ್ದಾರೆ. ಏಪ್ರಿಲ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಸರಿಸುಮಾರು 12 ಕೋಟಿಗೂ ಹೆಚ್ಚಿನ ರೈತರು ರಸಗೊಬ್ಬರಗಳ ಖರೀದಿಗೆ ಮುಂದಾಗುತ್ತಾರೆ. ಮಾರ್ಕೆಟ್ಗಳಲ್ಲಿ ರಸಗೊಬ್ಬರಗಳ ಬೆಲೆಯು, ಈಗ ಒಂದು ಚೀಲ ಯೂರಿಯಾ 276 ರೂಪಾಯಿ ಇದ್ದರೆ, DAP ಗೆ 1,350 ರೂಪಾಯಿ ಇದೆ

ಸರ್ಕಾರವು ಯೂರಿಯ ಮೇಲೆ 70,000 ಕೋಟಿ ಮತ್ತು DAP ಮೇಲೆ 38,000 ಕೋಟಿ ಸಬ್ಸಿಡಿ ನೀಡಲು ಮುಂದಾಗಿದೆ. ಇದರಿಂದ ರೈತರು ಅದೇ ಬೆಲೆಗೆ ರಸಗೊಬ್ಬರಗಳನ್ನು ಖರೀದಿಸಿದರು ಸಬ್ಸಿಡಿ ಹಣ ನಂತರ ಅವರ ಖಾತೆಗಳಿಗೆ ಜಮೆ ಆಗುತ್ತದೆ. ಆದರೆ ನೇರವಾಗಿ MRP ಗಳ ಬೆಲೆಯಲ್ಲಿ ವ್ಯತ್ಯಾಸವನ್ನು ಮಾಡಲಾಗುವುದಿಲ್ಲ ಎನ್ನುವುದನ್ನು ಕೂಡ ಸಚಿವರು ಸ್ಪಷ್ಟಪಡಿಸಿದ್ದಾರೆ.

ಈ ನೀತಿಯಿಂದ ನ್ಯಾಯಯುತವಾದ ಬೆಲೆಯಲ್ಲಿ ಮತ್ತು ಸಮಂಜಕರವಾದ ರೀತಿಯಲ್ಲಿ ದೇಶದ ಎಲ್ಲ ರೈತರಿಗೂ ಕೂಡ ರಸಗೊಬ್ಬರವು ಸರಿಯಾದ ಸಮಯಕ್ಕೆ ಸಿಗಲಿದೆ ಮತ್ತು ಗುಣಮಟ್ಟವು ಕೂಡ ಉತ್ತಮವಾಗಿರಲಿದೆ ಎನ್ನುವುದು ಜನಾಭಿಪ್ರಾಯ. ಸರಕಾರದ ಈ ಸಬ್ಸಿಡಿ ನೀತಿಯು DAP, ಪೊಟ್ಯಾಶಿಕ್ ಮತ್ತು ಇತರ ಪಾಸ್ಫೇಟಿಕ್ ರಸಗೊಬ್ಬರ ಮೇಲೆ ಅನ್ವಯ ಆಗಲಿದೆ. ಸಚಿವ ಸಂಪುಟದ ಈ ನಿರ್ಧಾರವು ದೇಶದ ಎಲ್ಲ ರೈತರ ಮುಖದಲ್ಲೂ ಕೂಡ ಸಂತಸ ಮೂಡಿಸಿದೆ ಸರ್ಕಾರದ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ಕಾಮೆಂಟ್ ಮಾಡಿ ತಿಳಿಸಿ.

ಭಾರತೀಯ ಆಹಾರ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ, ವೇತನ 60 ಸಾವಿರ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ತನ್ನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಕರ್ನಾಟಕದಾದ್ಯಂತ ಇರುವ ಎಲ್ಲಾ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಭಾರತೀಯ ಆಹಾರ ನಿಗಮ ಅಧಿಸೂಚನೆ ಕೂಡ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಮೊದಲು ಅಧಿಸೂಚನೆಗಳಿರುವ ಅಂಶಗಳನ್ನು ಅರ್ಥೈಸಿಕೊಂಡು ಆ ಪ್ರಕಾರವಾಗಿ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಹೊಂದಿದ್ದರೆ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲೂ ಸಹ ಹುದ್ದೆಗಳಿಗೆ ಸಂಬಂಧಪಟ್ಟ ಹಾಗೆ ವಿವರ, ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಪ್ರಕ್ರಿಯೆ, ಬೇಕಾಗುವ ದಾಖಲೆಗಳು ಮತ್ತು ವಯೋಮಿತಿ, ನೀಡಿರುವ ವಯೋಮಿತಿ ಸಡಿಲಿಕೆ ಹಾಗೂ ಪ್ರಮುಖ ದಿನಾಂಕಗಳ ಬಗ್ಗೆ ತಿಳಿಸಿಕೊಡಲಾಗಿದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ fci ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಮಾಹಿತಿ ತಿಳಿದುಕೊಳ್ಳಬಹುದು.

ನೇಮಕಾತಿ ಸಂಸ್ಥೆ:- ಭಾರತೀಯ ಆಹಾರ ನಿಗಮ.
ಒಟ್ಟು ಹುದ್ದೆಗಳ ಸಂಖ್ಯೆ:- 46.
ಉದ್ಯೋಗ ಸ್ಥಳ:- ಭಾರತದಾತ್ಯಂತ…
ಹುದ್ದೆಗಳು:- ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳು.

ಹುದ್ದೆಗಳ ವಿವರ:-
● ಸಹಾಯಕ ಜನರಲ್ ಮ್ಯಾನೇಜರ್ (CE).
● ಸಹಾಯಕ ಜನರಲ್ ಮ್ಯಾನೇಜರ್ (EM).

ವೇತನ ಶ್ರೇಣಿ:- ಭಾರತೀಯ ಆಹಾರ ನಿಗಮದ ಅಧಿಕೃತ ಅಧಿಸೂಚನೆ ಪ್ರಕಾರ ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ರೂ.60,000 ದಿಂದ 1,80,000 ಪ್ರತಿ ತಿಂಗಳು ವೇತನ ಸಿಗಲಿದೆ.

ವಯೋಮಿತಿ:-
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳನ್ನು ಪೂರೈಸಬೇಕು.
● ಗರಿಷ್ಠ 28 ವರ್ಷಗಳನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.

ಅರ್ಹತೆಗಳು:-
ಶೈಕ್ಷಣಿಕ ಅರ್ಹತೆಯಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, 12ನೇ ತರಗತಿ ಅಥವಾ ಅದಕ್ಕೆ ತತ್ಸಮಾನವಾದ ತರಗತಿಯನ್ನು ಉತ್ತೀರ್ಣರಾಗಿರಬೇಕು.

ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ…
● ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಭರ್ತಿ ಮಾಡಿ ಕೇಳಲಾದ ಅಗತ್ಯ ದಾಖಲೆಗಳ ಪ್ರತಿಗಳನ್ನು ಕೂಡ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
ಅರ್ಜಿ ಸಲ್ಲಿಕೆ ಪೂರ್ತಿಗೊಂಡ ಬಳಿಕ ಅರ್ಜಿ ಸಲ್ಲಿಕೆ ಆದ ಫಾರಂ ಅನ್ನು ಭವಿಷ್ಯದ ಬಳಕೆ ಉದ್ದೇಶದಿಂದ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು.

ಅರ್ಜಿ ಶುಲ್ಕ:-
● UR / ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
● SC/ST ಮತ್ತು ಮಹಿಳಾ ಅಭ್ಯರ್ಥಿಗಳಿಗೂ ಕೂಡ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.
● ಉಳಿದ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಸೂಚಿಸಿರುವಷ್ಟು ಅರ್ಜಿಶುಲ್ಕವನ್ನು ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಅಥವಾ ಆನ್ಲೈನ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.

ಆಯ್ಕೆ ವಿಧಾನ:-
● ದೈಹಿಕ ಪರೀಕ್ಷೆ
● ಲಿಖಿತ ಪರೀಕ್ಷೆ
● ಸಂದರ್ಶನ
●ದಾಖಲೆಗಳ ಪರಿಶೀಲನೆ.

ದೈಹಿಕ ಪರೀಕ್ಷೆಯಲ್ಲಿ ಕೇಳಲಾಗುವ ಅರ್ಹತೆ:-
● ಪುರುಷ ಅಭ್ಯರ್ಥಿಗಳು165cm
● ಮಹಿಳಾ ಅಭ್ಯರ್ಥಿಗಳು 155cm
● ಉತ್ತರ ಭಾರತ ವಲಯದ ಪುರುಷ ಅಭ್ಯರ್ಥಿ 162 cm
● ಉತ್ತರ ಭಾರತ ವಲಯದ ಮಹಿಳಾ ಅಭ್ಯರ್ಥಿಗಳ 150cm

ವೆಬ್ ಸೈಟ್ ವಿಳಾಸ:- www.fci.gov.in

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 03, ಏಪ್ರಿಲ್ 2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31, ಮೇ 2023.

ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ.! BPL ರೇಷನ್ ಕಾರ್ಡ್ ಹೊಸದಾಗಿ ಮಾಡಿಸಬೇಕು ಅಂದುಕೊಂಡವರು ತಪ್ಪದೆ ಅರ್ಜಿ ಸಲ್ಲಿಸಿ

 

ಪಡಿತರ ಚೀಟಿ ಎನ್ನುವುದು ಪ್ರತಿ ಕುಟುಂಬ ಹೊಂದಿರಲೇಬೇಕಾದ ಒಂದು ದಾಖಲೆ ಪತ್ರ. ಕುಟುಂಬದ ಎಲ್ಲಾ ಸದಸ್ಯರ ಹೆಸರುಗಳನ್ನು ಕೂಡ ಒಳಗೊಂಡ ಗುರುತಿನ ಚೀಟಿ ಇದಾಗಿದ್ದು, ಇದನ್ನು ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆ ನೀಡುತ್ತದೆ. ಈ ಪಡಿತರ ಚೀಟಿ ಮೂಲಕ ಕುಟುಂಬದ ಸ್ಥಿತಿಗತಿಯನ್ನು ನಿರ್ಧರಿಸಬಹುದು. ಆ ಕಾರಣ ಇವುಗಳನ್ನು ಸರ್ಕಾರದ ಅನೇಕ ಯೋಜನೆಗಳ ಭಾಗವಾಗಿ ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಯಾಗಿ ಕೇಳಲಾಗುತ್ತದೆ.

ರೇಷನ್ ಕಾರ್ಡ್ ಗಳು ಪ್ರಮುಖವಾಗಿ ಬಳಕೆ ಆಗುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡುವಂತಹ ಉಚಿತ ಪಡಿತರವನ್ನು ಪಡೆಯಲು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉಚಿತವಾಗಿ ಅಕ್ಕಿ, ರಾಗಿ, ಗೋಧಿ ಯಂತಹ ಧಾನ್ಯಗಳನ್ನು ನೀಡುತ್ತಿದ್ದು ಕೈಗೆಟಕುವ ಬೆಲೆಯಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಕೂಡ ನೀಡುತ್ತಿವೆ.

ರೇಷನ್ ಕಾರ್ಡನ್ನು ಒಂದು ಮನದಂಡವಾಗಿ ಬಳಸಿ, ರೇಷನ್ ಕಾರ್ಡ್ ಅಲ್ಲಿ ಇರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಪಡಿತರವನ್ನು ನೀಡಲಾಗುತ್ತಿದೆ. ಕರ್ನಾಟಕ ಜೊತೆಗೆ ಇತ್ತೀಚೆಗೆ ಸ್ಥಾಪಿತವಾದ ಹೊಸ ಸರ್ಕಾರ ನೀಡುತ್ತಿರುವ ಉಚಿತ 10 ಕೆಜಿ ಅಕ್ಕಿ ಮತ್ತು ಮನೆಯ ಯಜಮಾನಿಗೆ 2000ರೂ. ಸಹಾಯಧನ ಕೊಡುವ ಗೃಹಲಕ್ಷ್ಮಿ ಯೋಜನೆ, ಮುಂತಾದವುಗಳಿಗೂ ಕೂಡ ರೇಷನ್ ಕಾರ್ಡ್ ಅಗತ್ಯ ದಾಖಲೆಯಾಗಿ ಬೇಕಾಗುತ್ತದೆ.

ಇಷ್ಟೆಲ್ಲ ಪ್ರಾಮುಖ್ಯತೆ ರೇಷನ್ ಕಾರ್ಡ್ ಹೊಂದಿರುವುದರಿಂದ ಈಗ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಸಂಖ್ಯೆ ಹೆಚ್ಚಾಗುತ್ತಿದೆ. ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆಯು ಈ ರೀತಿ ರೇಷನ್ ಕಾರ್ಡ್ ವಿತರಣೆ ಮಾಡುವ ಅಧಿಕಾರವನ್ನು ಹೊಂದಿತ್ತು. ಆದರೆ ಇದಕ್ಕೆ ಅರ್ಜಿ ಆಹ್ವಾನ ಮಾಡುವ ಪ್ರಕ್ರಿಯೆಯನ್ನು ಸ್ವಲ್ಪ ದಿನಗಳ ಮಟ್ಟಿಗೆ ಸ್ಥಗಿತ ಮಾಡಿತ್ತು.

ಈಗ ಮತ್ತೊಮ್ಮೆ ಮೇ 18 ರಿಂದ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಅನುಮತಿ ನೀಡಿದೆ. ಹೊಸದಾಗಿ ಮದುವೆ ಆಗಿರುವ ದಂಪತಿಗಳು ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದಾದರೆ ಅಥವಾ ರೇಷನ್ ಕಾರ್ಡ್ ನಲ್ಲಿ ಇರುವವರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಅಥವಾ ಸೇರಿಸುವ ಪ್ರಕ್ರಿಯೆಗೆ ಅಥವಾ ರೇಷನ್ ಕಾರ್ಡ್ ನ ತಿದ್ದುಪಡಿಗೆ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೂಡ ಮಾಡಿಕೊಟ್ಟಿದೆ.

ಕೆಲ ಪ್ರಮುಖ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ ಆನ್ಲೈನ್ ಅಲ್ಲಿಯೇ ರೇಷನ್ ಕಾರ್ಡ್ ಪಡೆಯಬಹುದು. ಕುಟುಂಬದ ಆದಾಯದ ಮೇಲೆ ಆ ಕುಟುಂಬಸ್ಥರು APL, BPL ಅಥವಾ AAY ಯಾವ ಕಾರ್ಡ್ ಗೆ ಅರ್ಹರು ಎನ್ನುವುದು ನಿರ್ಧಾರ ಆಗುತ್ತದೆ. ರೇಷನ್ ಕಾರ್ಡ್ ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:-
● kar.nic.in ವೆಬ್ ಸೈಟ್ ಗೆ ಭೇಟಿ ಕೊಟ್ಟು ಇ- ಸೇವೆಗಳು ಎನ್ನುವುದನ್ನು ಆಯ್ಕೆ ಮಾಡಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಆಪ್ಷನ್ ಅನ್ನು ಕ್ಲಿಕ್ ಮಾಡಿ.

ಅಥವಾ ನೇರವಾಗಿ
● https://ahara.kar.nic./home/Eservices ಎನ್ನುವುದರ ಮೇಲೆ ಕ್ಲಿಕ್ ಮಾಡಿ, ಇ- ಪಡಿತರ ಚೀಟಿ ಎನ್ನುವ ಆಪ್ಷನ್ ಅನ್ನು ಆಯ್ಕೆ ಮಾಡಿ ಹೊಸ ಪಡಿತರಕ್ಕಾಗಿ ಅರ್ಜಿ ಎನ್ನುವಲ್ಲಿ ಕ್ಲಿಕ್ ಮಾಡಿ.
● ಅರ್ಜಿ ಫಾರಂ ಭರ್ತಿ ಮಾಡಿ ನಿಮ್ಮ ಆಯ್ಕೆ ಭಾಷೆ ಕನ್ನಡ ಎನ್ನುವುದನ್ನು ಸೆಲೆಕ್ಟ್ ಮಾಡಿ ಕೇಳಲಾಗುವ ಅಗತ್ಯ ದಾಖಲೆಗಳ ಸಾಫ್ಟ್ ಕಾಪಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ವೋಟರ್ ಐಡಿ
● ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
● ವಯಸ್ಸಿನ ಪ್ರಮಾಣ ಪತ್ರ
● ಡ್ರೈವಿಂಗ್ ಲೈಸೆನ್ಸ್
● ಇತ್ತೀಚಿನ ಪಾರ್ಸ್ ಪೋರ್ಟ್ ಅಳತೆಯ ಭಾವಚಿತ್ರ
● ಮೊಬೈಲ್ ಸಂಖ್ಯೆ
● ಸ್ವಯಂ ಘೋಷಿತ ಪ್ರಮಾಣ ಪತ್ರ
● ಕುಟುಂಬಸ್ಥರ ಬಯೋಮೆಟ್ರಿಕ್ ಮಾಹಿತಿಗಳು

ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್, ಮಹಿಳೆಯರ ಉಚಿತ ಬಸ್ ಪಾಸ್ ಗೆ ಅರ್ಜಿ ಆಹ್ವಾನ ಕೂಡಲೇ ಅರ್ಜಿ ಸಲ್ಲಿಸಿ.!

ಈ ಬಾರಿ ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಎಲೆಕ್ಷನ್ 2023ರಲ್ಲಿ ಸ್ಪಷ್ಟ ಬಹುಮತ ಬೆಂಬಲದೊಂದಿಗೆ ಆಯ್ಕೆ ಆಗಿದೆ. ಕಾಂಗ್ರೆಸ್ ಗೆಲುವಿಗೆ ವರ್ಷದ ಆರಂಭದಿಂದಲೂ ಕಾಂಗ್ರೆಸ್ ಪಕ್ಷವು ಪ್ರಚಾರದ ವೇಳೆ ಹೇಳಿಕೊಂಡು ಬರುತ್ತಿದ್ದ ಪಂಚಖಾತ್ರಿ ಯೋಜನೆಗಳೇ ಕಾರಣ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ.

ಕಾಂಗ್ರೆಸ್ ಪಕ್ಷವು ಹೇಳಿದ್ದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಭರವಸೆ ಇಟ್ಟು ಕರ್ನಾಟಕದ ನಾಗರಿಕರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯವನ್ನು ನಡೆಸುವ ಅಧಿಕಾರವನ್ನು ನೀಡಿದ್ದಾರೆ. ಜನತೆಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಕೂಡ ಮುಂದಾಗಿದೆ. ಕಾಂಗ್ರೆಸ್ ಪಕ್ಷವು ಪ್ರಚಾರದ ವೇಳೆ ಬಳಸಿದ್ದ 5 ಯೋಜನೆಗಳ ಗ್ಯಾರಂಟಿ ಕಾರ್ಡುಗಳಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರೇ ಸಹಿ ಮಾಡಿ ಕೊಟ್ಟಿದ್ದರು.

ಗೃಹಜ್ಯೋತಿ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ ಯೋಜನೆ ಅಡಿ ಕರ್ನಾಟಕದ ಎಲ್ಲಾ ಕುಟುಂಬಗಳ ಒಡತಿಗೆ 2,000 ರೂಪಾಯಿ ಸಹಾಯಧನ, ಯುವ ನಿಧಿ ಯೋಜನೆ ಅಡಿಯಲ್ಲಿ 2022-23ನೇ ಶೈಕ್ಷಣಿಕ ವರ್ಷದಲ್ಲಿ ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಎರಡು ವರ್ಷದವರೆಗೆ 3000ರೂ. ಮತ್ತು ಡಿಪ್ಲೊಮೋ ವಿದ್ಯಾರ್ಥಿಗಳಿಗೆ 1,500ರೂ.

ನಿರುದ್ಯೋಗ ಭತ್ಯೆ, ಶಕ್ತಿ ಯೋಜನೆ ಅಡಿಯಲ್ಲಿ ಕರ್ನಾಟಕದ ಎಲ್ಲಾ ಮಹಿಳೆಯರಿಗೂ ಕೂಡ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಉಚಿತ ಪ್ರಯಾಣ ಮತ್ತು ಅನ್ನಭಾಗ್ಯ ಯೋಜನೆ ಅಡಿ ಎಲ್ಲ ಕುಟುಂಬಗಳಿಗೂ ಕೂಡ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆಯನ್ನು ನೀಡಿತ್ತು ಅಂತೆಯೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣವಚನವನ್ನು ಸ್ವೀಕರಿಸಿದ ದಿನವೇ ತಮ್ಮ ಸಚಿವರ ಜೊತೆ ಚರ್ಚಿಸಿ ಇದಕ್ಕೆ ತಾತ್ವಿಕ ಒಪ್ಪಿಗೆಯನ್ನು ಸಹ ನೀಡಿ ಆದೇಶ ಪ್ರತಿ ಹೊರಡಿಸಿದ್ದಾರೆ.

ಪ್ರಚಾರದ ವೇಳೆಯಲ್ಲಿ ಅಧಿಕಾರಕ್ಕೆ ಬಂದ ಒಂದು ವಾರದ ಒಳಗೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಬಗ್ಗೆ ಜನತೆಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಸದ್ಯಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಕ್ಯಾಬಿನೆಟ್ ಮೀಟಿಂಗ್ ಕರೆಸಿ ಶೀಘ್ರವಾಗಿಯೇ ಇವುಗಳಿಗಿರುವ ಮಾರ್ಗಸೂಚಿ ಮತ್ತು ರೂಪುರೇಷೆಗಳ ಬಗ್ಗೆ ತಿಳಿಸುತ್ತೇವೆ ಎಂದು ಜನತೆಯಲ್ಲಿ ಸಮಯ ಕೇಳಿದ್ದಾರೆ.

ಬಲವಾದ ಮೂಲಗಳ ಪ್ರಕಾರ ಉಚಿತ ಬಸ್ ಪಾಸ್ ವ್ಯವಸ್ಥೆಗೆ ಶೀಘ್ರದಲ್ಲಿಯೇ ಸರ್ಕಾರದಿಂದ ವೆಬ್ಸೈಟ್ ಒಂದು ಬಿಡುಗಡೆ ಆಗಲಿದ್ದು ಆ ವೆಬ್ಸೈಟ್ ಮೂಲಕ ರಿಜಿಸ್ಟರ್ ಆದ ಮಹಿಳೆಯರಿಗೆ ಕರ್ನಾಟಕದಲ್ಲಿ KSRTC, BMTC, ವಾಯುವ್ಯ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುವ ಚಾನ್ಸ್ ಸಿಗಲಿದೆ. ಇದಕ್ಕಾಗಿ ಸರ್ಕಾರ ಏನೆಲ್ಲಾ ದಾಖಲೆಗಳನ್ನು ಕೇಳಬಹುದು ಅಥವಾ ಫಲಾನುಭವಿಗಳಿಗೆ ಇರಬೇಕಾದ ಅರ್ಹತೆ ಏನು ಎನ್ನುವುದರ ಬಗ್ಗೆ ಗೊಂದಲ ಕೂಡ ಸೃಷ್ಟಿಯಾಗಿದೆ.

ಬಲವಾದ ಮೂಲಗಳ ಪ್ರಕಾರ ಉಚಿತ ಬಸ್ ಪಾಸ್ ಸಿಗಲು ಮಹಿಳೆಯರಿಗಿರುವ ಕಂಡಿಷನ್ ಗಳು ಈ ರೀತಿ ಇರಲಿದೆ.

● ಮಹಿಳೆಯು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು
● ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು
● ಪ್ಯಾನ್ ಕಾರ್ಡ್ ಕೂಡ ಹೊಂದಿರಬೇಕು
● ಕರ್ನಾಟಕದ ಮಹಿಳೆಯರಿಗಷ್ಟೇ ಈ ಯೋಜನೆಯ ಫಲಾನುಭವಿಗಳಾಗಲು ಅವಕಾಶ.
● ಯಾವ ಜಾಗದ ಹೆಸರನ್ನು ಹೇಳಿ ರಿಜಿಸ್ಟರ್ ಮಾಡಿಕೊಂಡು ಪಾಸ್ ಪಡೆಯುತ್ತಾರೋ ಆ ಜಾಗದಿಂದ 60 ಕಿಲೋ ಮೀಟರ್ ವರೆಗೆ ಮಾತ್ರ ಉಚಿತ ಪ್ರಯಾಣ ನೀಡುವ ಸಾಧ್ಯತೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.