Home Blog Page 338

ಗಣೇಶ ಹಬ್ಬದ ನೆಪದಲ್ಲಿ ಮತ್ತೆ ಬರಲಿದ್ದಾರೆ ಅಪ್ಪು, ಗಣೇಶನೊಟ್ಟಿಗೆ ಇರುವ ಅಪ್ಪು ಪ್ರತಿಮೆ ನೋಡಿ ಅಶ್ವಿನಿ ಹೇಳಿದ್ದೇನು ಗೊತ್ತ ನಿಜಕ್ಕೂ ಕಣ್ಣೀರು ಬರುತ್ತೆ.

ಇನ್ನೇನು ಆಷಾಡ ಮುಗಿಯಿತು, ಶ್ರಾವಣ ಮಾಸದ ಆಗಮನವಾಗಲಿದೆ. ಶ್ರಾವಣದಲ್ಲಿ ಹಬ್ಬಗಳ ಸಾಲೇ ಸಾಲು ಅದರಲ್ಲೂ ಮಕ್ಕಳು ಹಾಗೂ ಯುವಕರ ಪಾಲಿನ ಪ್ರೀತಿಯ ಹಬ್ಬವಾದ ವಿನಾಯಕ ಚತುರ್ಥಿ ಹಬ್ಬದ ಸಂಭ್ರಮ ತಿಂಗಳಿಗೆ ಮುಂಚೆಯಿಂದಲೇ ಶುರುವಾಗುತ್ತದೆ ಎನ್ನಬಹುದು. ಪ್ರತಿ ವರ್ಷ ಕೂಡ ದೇಶದ ನಾನಾ ಕಡೆಗಳಲ್ಲಿ ಅದ್ದೂರಿಯಾಗಿ ಈ ಹಬ್ಬ ಜರುಗುತ್ತದೆ ಹಾಗೂ ಊರು ಊರುಗಳಲ್ಲಿ ಕೂಡ ಮಕ್ಕಳು ಹುಡುಗರು ಚಂದ ಎತ್ತಿ ಗಣೇಶನನ್ನು ಕೂರಿಸಿ ಪೂಜಿಸುವ ವಾಡಿಕೆ ಹಿಂದಿನಿಂದಲೂ ಇದೆ. ಹೀಗಾಗಿ ಈ ಉಳಿದ ಎಲ್ಲಾ ಹಬ್ಬಗಳಿಗಿಂತ ಸಮುದಾಯದವರೆಲ್ಲರನ್ನು ಒಟ್ಟಾಗಿ ಸೇರಿಸುವ ನೆಪ ಹೊಂದಿರುವುದರಿಂದ ಗಣೇಶ ಚತುರ್ಥಿ ಹೆಚ್ಚು ಪ್ರಿಯ ಹಬ್ಬ ಎಂದು ಹೇಳಬಹುದು. ಈ ಗಣೇಶ ಹಬ್ಬದ ಆಚರಣೆಯ ಸಮಯದಲ್ಲಿ ತಂದುಕೂರಿಸುವ ಗಣೇಶನ ವಿಗ್ರಹ ಒಂದು ಹೆಚ್ಚಿನ ವಿಶೇಷತೆ ಹಾಗೂ ಆಕರ್ಷಣೆ. ಪ್ರತಿ ವರ್ಷವೂ ಕೂಡ ವಿವಿಧ ವಿನ್ಯಾಸದ ಗಣೇಶನ ವಿಗ್ರಹವನ್ನು ತಂದು ಪೂಜಿಸುತ್ತಾರೆ.

ಈ ವರ್ಷ ನಮ್ಮ ಏರಿಯಾದಲ್ಲಿ ಯಾವ ರೀತಿಯ ಗಣಪತಿಯನ್ನು ಕೂರಿಸುತ್ತಾರೆ ಎಂದು ನೋಡುವುದೇ ಒಂದು ರೀತಿಯ ಕುತೂಹಲವಾಗಿರುತ್ತದೆ. ಯಾಕೆಂದರೆ ಈಗಾಗಲೇ ನಾವು ಹಲವಾರು ವರ್ಷಗಳಿಂದ ವಿಭಿನ್ನ ವಿಭಿನ್ನ ಗಣೇಶನ ವಿಗ್ರಹಗಳು ಹಾಗೂ ಎತ್ತರದ ವಿಷಯದಲ್ಲಿ ವಿನ್ಯಾಸದ ವಿಷಯದಲ್ಲಿ ಬಣ್ಣದ ವಿಚಾರದಲ್ಲಿ ವಿಭಿನ್ನತೆ ಹೊಂದಿರುವ ಗಣೇಶ ವಿಗ್ರಹಗಳನ್ನು ನೋಡಿದ್ದೇವೆ. ಎಲ್ಲರೂ ದುಡ್ಡು ಹಾಕಿ ಅದ್ದೂರಿಯಾಗಿ ಮಾಡುವ ಈ ಆಚರಣೆ ಮನಸ್ಸಿಗೆ ಅಷ್ಟೇ ಖುಷಿಯನ್ನು ಕೊಡುತ್ತದೆ. ಹಲವು ಕಡೆ ಈ ಸಂದರ್ಭದಲ್ಲಿ ನಾಟಕ ನೃತ್ಯ ಆರ್ಕೆಸ್ಟ್ರಾ ಈ ರೀತಿ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡು ಜನರಿಗೆ ಮನರಂಜನೆಯನ್ನು ನೀಡುತ್ತಾರೆ. ಈ ವರ್ಷ ಅಂತಹ ವಿಭಿನ್ನ ವಿನ್ಯಾಸದ ಗಣೇಶನ ವಿಗ್ರಹ ದ ಬಗ್ಗೆ ಆಸಕ್ತಿ ಇರುವವರಿಗೆ ಹಾಗೂ ಅದರ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವವರಿಗೆ ಸಂತಸವಾಗುವ ವಿಷಯ ಯಾಕೆಂದರೆ ಈ ವರ್ಷ ಅಪ್ಪು ಜೊತೆಯಲ್ಲಿ ಗಣೇಶ ಬರುತ್ತಿದ್ದಾರೆ.

ಹೌದು ಇದನ್ನು ಕೇಳಿದರೆ ಆಶ್ಚರ್ಯ ಅನ್ನಿಸಬಹುದು. ಆದರೆ ಈ ರೀತಿಯ ಕಲಾಕೃತಿಗಳು ಈಗಾಗಲೇ ಕಲಾವಿದ ಕೈ ಕುಂಚದಲ್ಲಿ ಮಿಂಚಿದ್ದು ಮಾರ್ಕೆಟ್ನಲ್ಲಿ ಈಗಾಗಲೇ ಈ ರೀತಿಯ ವಿಗ್ರಹಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಹಾಗೂ ಸಾಮಾಜಿಕ ಜಾಲತಾಣದಲ್ಲೂ ಕೂಡ ಈ ವಿಗ್ರಹಗಳನ್ನು ನೋಡಿದವರು ಅದನ್ನು ಫೋಟೋ ತೆಗೆದು ಹಂಚಿಕೊಂಡು ಈ ರೀತಿ ಕೂಡ ನಾವು ದೇವರನ್ನು ಪೂಜಿಸುವ ಜೊತೆಗೆ ದೇವತಾ ಮನುಷ್ಯನನ್ನು ಪೂಜಿಸೋಣ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ. ಈಗಾಗಲೇ ಯಾವುದೇ ಊರಿನ ಜಾತ್ರೆಯಾಗಲಿ ಹಬ್ಬವಾಗಲಿ ರಥೋತ್ಸವವಾಗಲಿ ಅಲ್ಲಿ ಅಪ್ಪು ಚಿತ್ರಪಟಕ್ಕೂ ಕೂಡ ಪೂಜೆ ಸಲ್ಲುತ್ತದೆ. ಅಲ್ಲದೆ ಸಿನಿಮಾಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮ ಇದ್ದರೂ ಕೂಡ ಮೊದಲು ಅಪ್ಪು ಅವರ ಫೋಟೋಗೆ ನಮನ ಸಲ್ಲಿಸಿ ನಂತರ ಕಾರ್ಯಕ್ರಮವನ್ನು ಆರಂಭಿಸುತ್ತಾರೆ. ಹೀಗೆ ಪ್ರತಿ ಮನೆ ಮನೆಗಳಲ್ಲಿ ಹಾಗೂ ಪ್ರತಿ ಮನಮನಗಳಲ್ಲಿ ಅಪ್ಪುಗೆ ಪೂಜೆ ಸಲ್ಲುತ್ತಿದೆ.

ಈ ಬಾರಿ ಗಣೇಶನ ಹಬ್ಬದಲ್ಲಿ ಸಹ ಅಪ್ಪುವನ್ನು ನೆನೆದುಕೊಂಡು ಅವರದೇ ಸಿನಿಮಾದ ಸಾಲಾದ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವ ಮಾತನ್ನು ಜೀವಂತವಾಗಿ ಇಡುವ ಪ್ರಯತ್ನವನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ಮಣ್ಣಿನ ವಿಗ್ರಹವಾಗಿದ್ದು ಪರಿಸರ ಸ್ನೇಹಿ ಕೂಡ ಆಗಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ಫೋಟೋಗಳಲ್ಲಿ ಅಪ್ಪು ಅವರ ಮುಖವನ್ನು ಕೈಯಿಂದ ಮುದ್ದಿಸುತ್ತಿರುವ ಗಣೇಶನ ವಿಗ್ರಹ ಹಾಗೂ ಅಪ್ಪು ಜೊತೆ ಕೈ ಹಿಡಿದುಕೊಂಡು ನಡೆಯುತ್ತಿರುವ ಗಣೇಶನ ವಿಗ್ರಹ ಈ ರೀತಿಯ ವಿನ್ಯಾಸದ ವಿಗ್ರಹಗಳು ರೆಡಿ ಆಗಿರುವುದಾಗಿ ಕಾಣಿಸುತ್ತಿವೆ. ನೀವು ಕೂಡ ಈ ಗಣೇಶ ಮೂರ್ತಿ ಅಪ್ಪು ಜೊತೆ ಇರುವುದನ್ನು ಇಷ್ಟಪಡುವುದಾದರೆ ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಮಾಹಿತಿಯನ್ನು ತಪ್ಪದೇ ಶೇರ್ ಮತ್ತು ಲೈಕ್ ಮಾಡಿ.

ಮುಸ್ಲಿಂ ಮಹಿಳೆಗೆ ಹಣ ಕೊಟ್ಟ ಸಿದ್ದರಾಮಯ್ಯ, ನಿಮ್ಮ ದುಡ್ಡು ಯಾರಿಗೆ ಬೇಕು ಎಂದು ವಾಪಸ್ ಎಸೆದ ಮಹಿಳೆ, ಈ ವೈರಲ್ ವಿಡಿಯೋ ನೋಡಿ.

ಇತ್ತೀಚೆಗೆ ಬಾಗಲಕೋಟೆಯಲ್ಲಿ ಬಾದಾಮಿ ವಿಧಾನಸಭಾ ಕ್ಷೇತ್ರದ ಕೆರೂರು ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಅಂದರೆ ಎರಡು ಸಮುದಾಯಗಳ ನಡುವೆ ಘ-ರ್ಷ-ಣೆ ಉಂಟಾಗಿತ್ತು. ಒಂದು ಗುಂಪಿನವರು ಹಿಂದೂ ಸಮುದಾಯಕ್ಕೆ ಸೇರಿದರೆ ಮತ್ತೊಂದು ಗುಂಪಿನವರು ಮುಸ್ಲಿಂ ಜನಾಂಗದವರು. ಪರಸ್ಪರ ಹೊ-ಡೆದಾಡಿಕೊಂಡು ಸಾಕಷ್ಟು ಜನರು ಗಾಯಗೊಂಡಿದ್ದರು. ಅವರೆಲ್ಲರೂ ಅಲ್ಲಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ಸಮಯದಲ್ಲಿ ಅವರೆಲ್ಲರ ಆರೋಗ್ಯವನ್ನು ವಿಚಾಯಿಸುವುದಕ್ಕೆ ಅವರ ಯೋಗಕ್ಷೇಮವನ್ನು ನೋಡುವುದಕ್ಕೆ ಸಾಕಷ್ಟು ರಾಜಕೀಯ ಮುಖಂಡರುಗಳು ಬರುತ್ತಿದ್ದರು. ಅದೇ ರೀತಿ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಗಾಯಾಳುಗಳನ್ನು ನೋಡಲು ಹೋಗಿದ್ದರು. ಮೊದಲು ಹಿಂದೂ ಸಮುದಾಯದವರನ್ನು ಮಾತನಾಡಿಸಲು ಹೋದಾಗ ತೀವ್ರ ವಿ-ರೋ-ಧ ವ್ಯಕ್ತವಾಗುತ್ತದೆ, ಅಲ್ಲಿಂದ ವಾಪಸ್ ಬರಬೇಕಾಗುತ್ತದೆ. ನಂತರ ಮುಸ್ಲಿಂ ಗಾಯಾಳುಗಳನ್ನು ನೋಡಲು ಹೋದಾಗ ಕೂಡ ಅದೇ ರೀತಿ ವಾತಾವರಣವಿರುತ್ತದೆ.

ಮುಸ್ಲಿಂ ಗಾಯಾಳುಗಳನ್ನು ಮಾತನಾಡಿಸಲು ಹೋದ ಸಂದರ್ಭದಲ್ಲಿ ಅಲ್ಲೇ ಅವರ ಕುಟುಂಬಸ್ಥರಿಗೆ ಅಂದರೆ ಅಲ್ಲಿದ್ದ ಗಾಯಾಳು ಕುಟುಂಬದ ಓರ್ವ ಮಹಿಳೆಗೆ ಎರಡು ಲಕ್ಷ ಹಣವನ್ನು ಕೊಡುತ್ತಾರೆ. ಆ ಮನೆಯಲ್ಲಿ ನಾಲ್ಕು ಜನ ಗಾಯಾಳುಗಳಾಗಿದ್ದರು ಹಾಗಾಗಿ ತಲ 50,000 ಶೇರ್ ಮಾಡಿಕೊಂಡು ಚಿಕಿತ್ಸೆ ಕೊಡಿಸಿ ಎಂದು ಹೇಳಿಕೊಡುತ್ತಾರೆ. ಹಾಗೆ ಹೇಳಿದ ತಕ್ಷಣ ಮಹಿಳೆಗೆ ಎಲ್ಲಿತ್ತೋ ಕೋಪ ತಕ್ಷಣ ತೀವ್ರವಾಗಿ ತಮ್ಮ ಸಿಟ್ಟನ್ನು ಹೊರ ಹಾಕುತ್ತಾರೆ. ನಿಮ್ಮ ಹಣ ಇಲ್ಲಿ ಯಾರಿಗೆ ಬೇಕು? ನಮಗೆ ಅದರ ಅವಶ್ಯಕತೆ ಇಲ್ಲ ನಮಗೆ ಜೀವಿಸಲು ನೆಮ್ಮದಿಯ ವಾತಾವರಣ ಸೃಷ್ಟಿ ಮಾಡಿಕೊಡಿ ಎಂದು ಮನವಿ ಮಾಡುತ್ತಾರೆ. ಆದರೆ ಸಿದ್ದರಾಮಯ್ಯನವರು ಮಾತ್ರ ಒತ್ತಾಯ ಪೂರಕವಾಗಿ ಮಹಿಳೆಯ ಕೈಗೆ ಹಣವನ್ನು ಇಡುತ್ತಾರೆ. ಮತ್ತು ಕಾರು ಹತ್ತಿ ಹೊರಡುತ್ತಾರೆ. ಆದರೆ ಹಣವನ್ನು ತೆಗೆದುಕೊಳ್ಳಲು ಒಪ್ಪದ ಮಹಿಳೆ ಸಿದ್ದರಾಮಯ್ಯನವರ ಕಾರಿನ ಹಿಂದೆ ಅದನ್ನೆಲ್ಲ ಎಸೆದು ಬಿಡುತ್ತಾರೆ.

ಎರಡು ಲಕ್ಷ ಸಂಪೂರ್ಣ ಹಣವು ರಸ್ತೆಯ ತುಂಬೆಲ್ಲಾ ಚೆಲ್ಲಿ ಹೋಗುತ್ತದೆ. ಅದಾದ ಬಳಿಕ ಆ ಮಹಿಳೆ ಕೆಲವು ಮಾತುಗಳನ್ನು ಕೂಡ ಹೇಳುತ್ತಾರೆ. ನಮ್ಮ ಊರಿನಲ್ಲಿ ಎಲ್ಲರೂ ನೆಮ್ಮದಿಯಿಂದ ಶಾಂತಿ ವಾತಾವರಣದಲ್ಲಿ ಬದುಕುತ್ತಿದ್ದೆವು, ಹಿಂದುಗಳು ಮುಸ್ಲಿಮರಿಗೆ ಹಾಗೂ ಮುಸ್ಲಿಮರು ಹಿಂದುಗಳಿಗೆ ಸಹಾಯ ಮಾಡಿಕೊಂಡು ಸಹಬಾಳ್ವೆ ನಡೆಸುತ್ತಿದೆವು. ಯಾವುದೋ ಸಣ್ಣ ಕಾರಣಕ್ಕಾಗಿ ಈಗ ಗಲಾಟೆ ಆಗಿದೆ ಅದು ನಮ್ಮ ನಡುವೆ ಸರಿ ಹೋಗುತ್ತದೆ. ಆದರೆ ಈ ರಾಜಕೀಯ ನಾಯಕರುಗಳು ಇದರ ಮಧ್ಯೆ ಬಂದು ತಮ್ಮ ರಾಜಕೀಯ ಲಾಭ ಪಡೆಯುವುದಕ್ಕಾಗಿ ನಮ್ಮ ನಮ್ಮ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ನಾಳೆಯೂ ಕೂಡ ನಮ್ಮ ಕಷ್ಟಗಳಿಗೆ ಹಿಂದುಗಳು ಬರ್ತಾರೆ ಹಾಗೂ ಹಿಂದೂಗಳ ಕಷ್ಟಗಳಿಗೆ ನಾವು ಹೋಗುತ್ತಿವೆ. ಆದರೆ ಈ ರಾಜಕೀಯ ನಾಯಕರು ಮತ್ತು ಜನಪ್ರತಿನಿಧಿಗಳು ನಮ್ಮ ಕಷ್ಟ ಸುಖಕ್ಕೆ ಬರುವುದಿಲ್ಲ.

ಇವರು ನಮ್ಮ ನಮ್ಮ ನಡುವೆ ಜಗಳ ತಂದಿಟ್ಟು ಅವರು ಲಾಭ ಮಾಡಿಕೊಳ್ಳುತ್ತಾರೆ. ಹಾಗಾಗಿ ನನಗೆ ಇವರ ಹಣ ಬೇಡ ಎಂದು ಎಸೆದೆ ಎಂದು ಆ ಮಹಿಳೆ ತನ್ನ ಮಾತುಗಳನ್ನು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಈ ಸುದ್ದಿ ಎಲ್ಲೆಡೆ ಪ್ರಸಾರವಾಗುತ್ತಿದ್ದು ಮತ್ತು ಮಹಿಳೆ ಹಾಗೂ ಸಿದ್ದರಾಮಯ್ಯ ಅವರ ನಡುವೆ ನಡೆದ ಈ ಘಟನೆ ವಿಡಿಯೋ ಎಲ್ಲಡೆ ವೈರಲ್ ಕೂಡ ಆಗುತ್ತಿದೆ. ಹಣದಾಸೆಗೆ ತನ್ನ ವಿವೇಕ ಕಳೆದುಕೊಳ್ಳದ ಈ ದಿಟ್ಟ ಮಹಿಳೆಯ ಗುಣವನ್ನು ಎಲ್ಲರೂ ಮೆಚ್ಚಿ ಗುಣಗಾನ ಮಾಡುತ್ತಿದ್ದಾರೆ. ಈ ಮುಸ್ಲಿಂ ಮಹಿಳೆ ಮಾಡಿದ ಈ ರಾದಂತದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ನಿಮ್ಮ ಕಣ್ಣಿಗೊಂದು ಸವಾಲ್ ಈ ಫೋಟೋ ಒಳಗೆ ಅಡಗಿರುವ ನಟನ ಹೆಸರನ್ನು ಗುರುತಿಸುವಿರ.? ತಿಳಿಯದಿದ್ದರೆ ಫೋಟೋ ಜೂಮ್ ಮಾಡಿ ನೋಡಿ ಕಾಣುತ್ತೆ.

ಮೊದಲಲ್ಲಾ ಬುದ್ಧಿವಂತಿಕೆ ಹೆಚ್ಚಿಸಿಕೊಳ್ಳಲು ಹಾಗೂ ಮನೋರಂಜನೆ ಪಡೆಯಲು ಜನರು ನಾನಾ ಆಟಗಳನ್ನು ಆಡುತ್ತಿದ್ದರು. ಕೆಲವೊಂದು ದೈಹಿಕ ಶ್ರಮ ಉಪಯೋಗಿಸಿ ಆಡುವ ಆಟಗಳು ಆದರೆ ಕೆಲವೊಂದು ಮನಸ್ಸಿನಲ್ಲೇ ಬುದ್ಧಿವಂತಿಕೆ ಉಪಯೋಗಿಸಿ ಪ್ರಶ್ನೆಯನ್ನು ಬಿಡಿಸಿ ಅದಕ್ಕೆ ಉತ್ತರ ಹೇಳುವ ಆಟಗಳು, ಆದರೆ ಇನ್ನೂ ಕೆಲವು ಕಣ್ಣಿನ ದೃಷ್ಟಿಗೂ ಸಂಬಂಧ ಪಟ್ಟ ಆಟಗಳು ಆಗಿರುತ್ತವೆ. ಹಿಂದಿನ ಕಾಲದಲ್ಲೂ ಕೂಡ ರಾಜ ಮಹಾರಾಜರೇ ಯುದ್ಧ ಮಾಡುವಾಗ ಈ ರೀತಿ ಮಲ್ಲ ಯುದ್ದ, ದೃಷ್ಟಿಯುದ್ದ ಇಂತಹ ಯುದ್ಧಗಳನ್ನು ಮಾಡುತ್ತಿದ್ದರಂತೆ. ಇನ್ನು ಅದೇ ವಾಡಿಕೆ ಮುಂದುವರಿದು, ಆದರೆ ಕೆಲವು ಬೇರೆ ಬೇರೆ ರೂಪಗಳನ್ನು ಪಡೆದುಕೊಂಡು ಇಂತಹ ಆಟಗಳು ಅಥವಾ ಸ್ಪರ್ಧೆಗಳು ಜನರನ್ನು ರಂಜಿಸುತ್ತಲೇ ಬಂದಿವೆ. ಮೊದಲು ನಮ್ಮ ಹಿರಿಯರು ನಮಗೆ ಒಗಟುಗಳನ್ನು ಕೇಳಿ ಅದನ್ನು ಬಿಡಿಸಲು ಹೇಳುತ್ತಿದ್ದರು. ನಂತರ ಅದು ಕೂಡಿಸಿ ಕಳಿಸಿ ಭಾಗಿಸುವ ಬುದ್ಧಿವಂತಿಕೆ ಆಟಗಳು ಆಗಿ ಅಂಕೆಗಳನ್ನು ಒಳಗೊಂಡಿತ್ತು.

ಆದರೆ ಅದನ್ನು ಬಿಡಿಸುವಷ್ಟರಲ್ಲಿ ಒಳ್ಳೆಯ ಮನರಂಜನೆ ಸಿಗುತ್ತಿತ್ತು ಹಾಗೂ ಸಮಯವು ಕಳೆಯುತ್ತಿತ್ತು ಈಗಿನ ಕಾಲದಲ್ಲಿ ಸ್ಪರ್ಧಾತಕ ಪರೀಕ್ಷೆಗಳಲ್ಲಿ ಕೂಡ ಮೆಂಟಲ್ ಅಬಿಲಿಟಿ ಎನ್ನುವ ಒಂದು ಭಾಗ ಇರುತ್ತದೆ. ಅದು ತಲೆಗೆ ಕೆಲಸ ಕೊಟ್ಟು ಬುದ್ಧಿವಂತಿಕೆಗೆ ಆಹಾರ ನೀಡಿ ನಂತರ ಉತ್ತರ ಕಂಡುಕೊಳ್ಳುವ ಕೆಲಸವಾಗಿರುತ್ತದೆ. ಈಗಿನ ಕಾಲದಲ್ಲಿ ಮನೋರಂಜನೆ ನೀಡುತ್ತಿರುವುದು ಮೊಬೈಲ್ ಫೋನ್ಗಳು. ಈ ಮೊಬೈಲ್ ಫೋನ್ಗಳಲ್ಲಿ ದಿನ ಒಂದಕ್ಕೆ ಲಕ್ಷಾಂತರ ವಿಷಯಗಳು ಹಂಚಿಕೆಯಾಗುತ್ತಿವೆ ಇಂತಹ ಈ ದೊಡ್ಡ ಸಮುದ್ರದಲ್ಲಿ ಈ ರೀತಿ ಸಣ್ಣಪುಟ್ಟ ಆಟಗಳಿಗೂ ಕೂಡ ಚಿಕ್ಕದಾದ ಜಾಗ ಇದ್ದೇ ಇದೆ. ಕೆಲವೊಮ್ಮೆ ವಿಶೇಷವಾಗಿ ಕಾಣುವ ಪ್ರಶ್ನೆಗಳು ವೈರಲ್ ಆಗಿ ಆ ದಿನದಲ್ಲಿ ಅತಿ ಹೆಚ್ಚು ಶೇರ್ ಆದ ಕಂಟೆಂಟ್ ಕೂಡ ಆಗಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಕೇಳುವಾಗ ಯಾವುದಾದರು ಎರಡು ಒಂದೇ ರೀತಿಯ ಫೋಟೋಗಳನ್ನು ಹಾಕಿ ಅವುಗಳಲ್ಲಿರುವ ಕೆಲವೊಂದು ವ್ಯತ್ಯಾಸಗಳನ್ನು ಗುರುತಿಸಿ ಎಂದು ಕೇಳುತ್ತಾರೆ.

ಅಥವಾ ಒಂದು ದೊಡ್ಡ ಚಿತ್ರವನ್ನು ಹಾಕಿ ಅದರೊಳಗೆ ಕೆಲವು ಸಣ್ಣಪುಟ್ಟ ಪ್ರಾಣಿಗಳ ಚಿತ್ರ ಅಡಗಿರುವಂತೆ ಆದರೆ ಮೊದಲ ನೋಟಕ್ಕೆ ಅದು ತಿಳಿಯದಂತೆ ನಿಧಾನವಾಗಿ ವಿಚಾರ ಮಾಡಿ ನೋಡಿದಾಗ ಅವುಗಳು ಅರಿವಿಗೆ ಬರುವಂತೆ ಇರುತ್ತವೆ ಅಂತವುಗಳನ್ನು ಗುರುತಿಸಿ ಎಂದು ಕೇಳುತ್ತಾರೆ. ನಮಗೆ ಸಾಮಾಜಿಕ ಜಾಲತಾಣದಲ್ಲಿ ಆಡಲು ಸಿಗುತ್ತವೆ. ಅವುಗಳ ಜೊತೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿಗೆ ಹೆಸರು ಪಡೆಯುತ್ತಿರುವುದು ಆಪ್ಟಿಕಲ್ ಇಲ್ಯೂಷನ್ ಗಳು. ಆರ್ಟಿಕಲ್ ಇಲ್ಯೂಷನ್ ಎಂದರೆ ಅದೊಂದು ಮೊದಲ ನೋಟಕ್ಕೆ ಗೊತ್ತಾಗದೆ ಅದರೊಳಗೆ ಏನೋ ವಿಷಯವನ್ನು ಹಿಡಿದುಕೊಂಡು ಅದನ್ನು ಮರೆಮಾಚುವಂತೆ ಕಾಣುತ್ತಿರುವ ಒಂದು ಫೋಟೋ ಆಗಿರುತ್ತೆ. ಆದರೆ ಸೂಕ್ಷ್ಮ ದೃಷ್ಟಿ ಇಟ್ಟು ಅವಲೋಕಿಸಿದಾಗ ಅದರೊಳಗಿರುವ ಅಂಶವು ನಮಗೆ ತಿಳಿಯುತ್ತದೆ ಇದನ್ನೇ ಆರ್ಟಿಕಲ್ ಇಲ್ಯೂಷನ್ ಎನ್ನುತ್ತಾರೆ. ಈಗ ಇಂತಹದೇ ಒಂದು ಫೋಟೋ ಸೋಶಿಯಲ್ ಮೀಡಿಯಾದರೆ ಸಕ್ಕತ್ ವೈರಲ್ ಆಗುತ್ತಿದೆ.

ಕಪ್ಪು ಬಿಳಿ ಬಣ್ಣದ ಗೆರೆಗಳಿರುವ ಈ ಆರ್ಟಿಕಲ್ ಇಲ್ಯೂಶನ್ ಮೊದಲ ನೋಟಕ್ಕೆ ಬರಿ ಗೆರೆಗಳಿರುವ ಚಿತ್ರ ಎನ್ನುವಂತೆ ಕಾಣುತ್ತದೆ. ಆದರೆ ದೃಷ್ಟಿ ಇಟ್ಟು ಅದನ್ನೇ ಗಮನಿಸಿದಾಗ ತಿಳಿತ್ತದೆ ಅದರಲ್ಲಿ ಕರ್ನಾಟಕದ ಮಹಾನ್ ವ್ಯಕ್ತಿ ಒಬ್ಬರ ಹೆಸರಿದೆ ಎಂದು. ನೀವು ಕೂಡ ಇದನ್ನು ಪರೀಕ್ಷಿಸಿ ನೋಡಿ ಈ ಫೋಟೋವನ್ನು ನೋಡಿ ಕಂಡುಹಿಡಿಯುವ ಅದರಲ್ಲಿರುವ ಹೆಸರನ್ನು ಗುರುತಿಸುವ ಪ್ರಯತ್ನ ಮಾಡಿ. ಅಕಸ್ಮಾತ್ ನಿಮಗೆ ಇದು ತಿಳಿಯಲು ಸಾಧ್ಯವಾಗದೆ ಹೋದರೆ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಯಾಕೆಂದರೆ ನಾವೇ ಉತ್ತರವನ್ನು ಹೇಳುತ್ತೇವೆ. ಈ ಹೆಸರು ಬೇರೆ ಯಾರದ್ದೂ ಅಲ್ಲ ಕರ್ನಾಟಕದ ಅಭಿಮಾನಿಗಳ ದೇವರು ಪುನೀತ್ ರಾಜಕುಮಾರ್ ಅವರ ಹೆಸರು. ಈ ಉತ್ತರ ಮೊದಲೇ ನಿಮಗೆ ತಿಳಿದಿದ್ದರೆ ಕಾಮೆಂಟ್ ಮಾಡಿ Yes ಅಂತ.

ರವಿಚಂದ್ರನ್ ನಮ್ಮನೆ ದೇವರು ಅಂದ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಅಷ್ಟಕ್ಕೂ ರವಿಚಂದ್ರನ್ ಮಾಡಿದ ಸಹಾಯವೇನೂ ನೋಡಿ.

ಬುಲೆಟ್ ಪ್ರಕಾಶ್ ಕನ್ನಡದ ಜನಪ್ರಿಯ ಹಾಸ್ಯ ನಟ. ಅವರು ತೆರೆ ಮೇಲೆ ಬಂದರೆ ಸಾಕು ಪ್ರೇಕ್ಷಕರೆಲ್ಲ ಬಿದ್ದು ಬಿದ್ದು ನಗುವಷ್ಟು ಹಾಸ್ಯವನ್ನು ನಟಿಸಿ ಎಲ್ಲರನ್ನು ಮನೋರಂಜಿಸುತ್ತಿದ್ದವರು ಇವರು. ಅವರ ಹಾಸ್ಯ ಅಭಿನಯದ ಜೊತೆಗೆ ಅವರ ದಢೂತಿ ದೇಹ ಕಪ್ಪು ಬಣ್ಣವನ್ನು ಕೂಡ ನೋಡಿ ನಗುತ್ತಿದ್ದರು ಜನರು. ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚಿನ ಕಾಲದಿಂದ ಕನ್ನಡ ಚಲನಚಿತ್ರರಂಗದಲ್ಲಿ ಹಾಸ್ಯನಟನಾಗಿ ಪರಿಚಿತವಾಗಿರುವ ಬುಲೆಟ್ ಪ್ರಕಾಶ್ ಅವರು ಸುಮಾರು 300 ಸಿನಿಮಾಗಳಿಗಿಂತಲೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ ಕನ್ನಡದಲ್ಲಿ ಮನೋರಂಜನೆ ನೀಡಿದ್ದಾರೆ. ಇಂತಹ ಅದ್ಭುತವಾದ ಕಲಾವಿದ ಇಂದು ನಮ್ಮೊಂದಿಗೆ ಇಲ್ಲ ಎನ್ನುವುದೇ ತುಂಬಾ ದುಃಖದ ಸಂಗತಿಯಾಗಿದೆ. ಅವರು ಇಲ್ಲದೆ ಇದ್ದರೂ ಅವರ ಕನಸುಗಳನ್ನು ನನಸು ಮಾಡಲು ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್ ಪ್ರಯತ್ನ ಮಾಡುತ್ತಿದ್ದಾರೆ.

ಬುಲೆಟ್ ಪ್ರಕಾಶ್ ಅವರಿಗೆ ತಮ್ಮ ಪುತ್ರನನ್ನು ಕನ್ನಡ ಚಲನಚಿತ್ರರಂಗದ ದೊಡ್ಡ ಸ್ಟಾರ್ ಆಗಿ ಬೆಳೆಸಬೇಕು ಎನ್ನುವ ಆಸೆ ಇತ್ತು. ಇದಕ್ಕಾಗಿ ಮಗನಿಗೆ ಅಗತ್ಯ ಇರುವ ಎಲ್ಲಾ ತರಬೇತಿಗಳನ್ನು ಕೂಡ ಕೊಡಿಸುತ್ತಿದ್ದರು ಬುಲೆಟ್ ಪ್ರಕಾಶ್ ಅವರು. ಮೊದಲ ಬಾರಿ ರಕ್ಷಕ್ ಅವರು ಕ್ಯಾಮರಾ ಎದುರಿಸಿದ್ದು ಸೃಜನ್ ಅವರು ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮದಲ್ಲಿ. ಈ ಕಾರ್ಯಕ್ರಮದ ಒಂದು ಎಪಿಸೋಡ್ ನಲ್ಲಿ ಅತಿಥಿಯಾಗಿ ಆಗಮಿಸಿದ್ದ ಬುಲೆಟ್ ಪ್ರಕಾಶ್ ಅವರು ತಮ್ಮ ಮಗನ ಬಗ್ಗೆ ತಮಗಿರುವ ಕನಸನ್ನು ಅಲ್ಲಿ ವೇದಿಕೆ ಮೇಲೆ ಹೇಳಿಕೊಂಡಿದ್ದರು. ಇದಾದ ಬಳಿಕ ಮಗನನ್ನು ಕರೆಸಿ ವೇದಿಕೆ ಮೇಲೆ ಡ್ಯಾನ್ಸ್ ಮತ್ತು ಸ್ಟಂಟ್ಸ್ ಕೂಡ ಮಾಡಿಸಿದ್ದರು. ಆಗಲೇ ಜನತೆಗೆ ಗೊತ್ತಾಯಿತು ಬುಲೆಟ್ ಪ್ರಕಾಶ್ ಅವರ ಮಗನಿಗೆ ಎಷ್ಟೊಂದು ಪ್ರತಿಭೆ ಇದೆ ಎಂದು.

ಮಗ ರಕ್ಷಕ್ ಕೂಡ ಅಪ್ಪನ ಕನಸಿಗೆ ನೀರೆಯುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ನಂದ ಕಿಶೋರ್ ಅವರ ನಿರ್ಮಾಣದ ಅಧ್ಯಕ್ಷ ಶರಣ್ ಅವರ ಅಭಿನಯದ ಗುರು ಶಿಷ್ಯರು ಎನ್ನುವ ಸಿನಿಮಾದಲ್ಲಿ ಶಿಷ್ಯನಾಗಿ ರಕ್ಷಕ್ ಬುಲೆಟ್ ಅವರು ಅಭಿನಯಿಸಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಅವರ ಅದೃಷ್ಟ ಏನು ಎನ್ನುವುದನ್ನು ಪರೀಕ್ಷಿಸಿಕೊಳ್ಳಲು ತಯಾರಾಗಿದ್ದಾರೆ ಬುಲೆಟ್ ರಕ್ಷಕ್ ಅವರು. ಇದರ ಮಧ್ಯೆ ಮಾಧ್ಯಮ ಸಂದರ್ಶನ ಒಂದರಲ್ಲಿ ಭಾಗವಹಿಸಿದ ಅವರು ಅವರ ಜೀವನದ ಹಾಗೂ ಅವರ ತಂದೆಯ ಜೀವನದ ಕುರಿತಾದ ಹಲವಾರು ವಿಷಯಗಳನ್ನು ವರದಿಗಾರರೊಂದಿಗೆ ಹಂಚಿಕೊಂಡಿದ್ದಾರೆ. ಮಾತಿನ ಮಧ್ಯೆ ಅವರು ರವಿಚಂದ್ರನ್ ಅವರನ್ನು ನೆನೆಸಿಕೊಂಡಿದ್ದಾರೆ ಹಾಗೂ ರವಿಚಂದ್ರನ್ ಅವರನ್ನೇ ಅವರ ಮನೆಯ ದೇವರು ಎಂದು ಕೂಡ ಹೇಳಿದ್ದಾರೆ. ಅವರು ಹೀಗೆ ಮಾತನಾಡಲು ಅದಕ್ಕೆ ಕಾರಣ ಕೂಡ ಇದೆಯಂತೆ. ಅದನ್ನು ಪ್ರಶ್ನೆ ಮಾಡಿದ ಸಂದರ್ಶನಗಾರರಿಗೆ ರಕ್ಷಕ್ ಬುಲೆಟ್ ಈ ರೀತಿ ಅದಕ್ಕೆ ವಿವರಣೆ ನೀಡಿದರು.

ನಮ್ಮ ತಂದೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದಾಗ ರವಿಚಂದ್ರನ್ ಸರ್ ಅವರು ನಮ್ಮ ತಂದೆಗೆ ಹೆಚ್ಚಿನ ಅವಕಾಶ ಕೊಟ್ಟರು ಹಾಗೂ ಸಿನಿಮಾ ರಂಗದಲ್ಲಿ ಅವರನ್ನು ಪ್ರಕಾಶ್ ಎನ್ನುವ ಹೆಸರಿನಿಂದ ಗುರುತಿಸುವುದು ಸ್ವಲ್ಪ ಕಷ್ಟವಾಗುತ್ತಿತ್ತು ಹಾಗಾಗಿ ಬುಲೆಟ್ ಎನ್ನುವ ಹೆಸರನ್ನು ನಮ್ಮ ತಂದೆಯವರ ಹೆಸರಿನ ಜೊತೆ ಜೋಡಿಸಿದ್ದು ರವಿಚಂದ್ರನ್ ಸರ್. ತಂದೆ ಯಾವಾಗಲೂ ಬುಲೆಟ್ ಗಾಡಿಯಲ್ಲಿ ಓಡಾಡುತ್ತಿದ್ದರು ಹಾಗೂ ಆ ಗಾಡಿಯಲ್ಲೇ ಸೆಟ್ ಗೆ ಹೋಗುತ್ತಿದ್ದರು ಅದನ್ನು ಗಮನಿಸಿದ ರವಿಚಂದ್ರನ್ ಸರ್ ನಮ್ಮ ತಂದೆ ಹೆಸರನ್ನು ಬುಲೆಟ್ ಪ್ರಕಾಶ್ ಎಂದು ಸೇರಿಸಿದರು. ಈ ಹೆಸರಿನಲ್ಲಿಯೇ ಇದುವರೆಗೆ ನಾವು ಗುರುತಿಸಿಕೊಂಡಿದ್ದೇವೆ. ನಮ್ಮ ತಂದೆ ಇದುವರೆಗೆ ಮಾಡಿದ ಎಲ್ಲಾ ಸಿನಿಮಾಗಳಲ್ಲೂ ಕೂಡ ಈ ಹೆಸರನ್ನು ಇಟ್ಟುಕೊಂಡಿದ್ದರು ನಾನು ಕೂಡ ಈಗ ಅದೇ ಹೆಸರಿನಿಂದ ಮುಂದುವರಿಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಜೊತೆಗೆ ಕೆಲವು ವಿಷಯಗಳ ಮೇಲೆ ಬೇಸರ ಕೂಡ ಪಟ್ಟು ಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಹಾಗೂ ಅದರ ಆಚೆಗೆ ಹಲವಾರು ಜನ ನಮ್ಮನ್ನು ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ನಮ್ಮ ತಂದೆ ಅವರು ನನಗೆ ಬೇಕಾದಷ್ಟು ಮಾಡಿ ಹೋಗಿದ್ದಾರೆ. ನನಗೆ ಯಾರ ಸಹಾಯದ ಅವಶ್ಯಕತೆಯೂ ಇಲ್ಲ ಆದರೂ ಕೂಡ ಜನರು ಇಲ್ಲ ಸಲ್ಲದ್ದನ್ನು ಮಾತನಾಡಿ ಟ್ರೋಲ್ ಮಾಡುತ್ತಿದ್ದಾರೆ. ಎಲ್ಲರಿಗೂ ಕೂಡ ಅವರದೇ ಆದ ವೈಯಕ್ತಿಕ ಬದುಕಿದೆ. ಸುಮ್ಮನೆ ಅವರ ಹುಚ್ಚಾಟಕ್ಕೆ ಇಷ್ಟ ಬಂದ ಹಾಗೆ ಬರೆದು ಪೋಸ್ಟ್ ಮಾಡಿ ಇನ್ನೊಬ್ಬರ ಮನೆಯ ಸಂತೋಷವನ್ನು ಹಾಳು ಮಾಡಬಾರದು ಎಂದು ತಮ್ಮ ಮನಸ್ಸಿನಲ್ಲಿರುವ ಬೇಸರವನ್ನು ಹೇಳಿಕೊಂಡಿದ್ದಾರೆ. ನಾನು ಕೂಡ ಬೇರೆ ಹೀರೋಗಳ ಮಕ್ಕಳಂತೆ ಸಿನಿಮಾ ರಂಗದಲ್ಲಿ ಭವಿಷ್ಯ ಕಂಡುಕೊಳ್ಳಲು ಬರುತ್ತಿದ್ದೇನೆ. ಈಗಾಗಲೇ ಈ ರಂಗದಲ್ಲಿರುವ ಹಲವಾರು ಕಲಾವಿದರು ತಮ್ಮ ಮಕ್ಕಳನ್ನು ಇದರಲ್ಲಿ ನೆಲೆಕಾಣುವಂತೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ ಹಾಗೆ ಕೂಡ ನನ್ನ ತಂದೆಯು ನನ್ನ ಬಗ್ಗೆ ಕನಸು ಇಟ್ಟುಕೊಂಡಿದ್ದರು.

ನನಗೂ ಅದೇ ಆಸೆ ಇರುವುದರಿಂದ ಆ ಕಡೆಗೆ ನಾನು ಗಮನ ಕೊಡುತ್ತಿದ್ದೇನೆ. ನನಗೆ ನಂಬಿಕೆ ಇದೆ ನನ್ನ ತಂದೆ ಆಸೆಯಂತೆ ನಾನು ಕನ್ನಡ ಚಲನಚಿತ್ರ ರಂಗದಲ್ಲಿ ಹೆಸರು ಮಾಡೇ ಮಾಡುತ್ತೇನೆ ಎಂದು ಹಠ ಕೂಡ ತೊಟ್ಟಿದ್ದಾರಂತೆ ರಕ್ಷಕ್ ಬುಲೆಟ್ ಅವರು. ಈಗಾಗಲೇ ಕನ್ನಡ ಚಲನಚಿತ್ರ ರಂಗದಲ್ಲಿ ಸ್ಟಾರ್ ಕಿಡ್ ಗಳು ನಟ-ನಟಿಯರಾಗಿ, ನಿರ್ದೇಶಕರಾಗಿ ನಿರ್ಮಾಪಕರಾಗಿ ಒಂದಲ್ಲ ಒಂದು ರೀತಿಯಲ್ಲಿ ಈ ಜೀವನ ನಡೆಸುತ್ತಿದ್ದಾರೆ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಅವರಿಗೂ ಸಹ ಈ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ಸಿಗುವಂತಾಗಲಿ ಅವರು ಕೂಡ ಅವರ ತಂದೆ ಹೆಸರನ್ನು ಮೀರಿಸುವಷ್ಟು ಸಾಧನೆ ಮಾಡಲಿ. ಅದಕ್ಕೆ ಅವರಿಗೆ ಬೇಕಾದ ಅನುಕೂಲ ವಾತಾವರಣ ಹಾಗೂ ಅವಕಾಶಗಳು ಅವರ ಅರಸಿ ಬರಲಿ ಎಂದು ಬುಲೆಟ್ ಪ್ರಕಾಶ್ ಅವರ ಹಾಸಕ್ಕೆ ಅಭಿಮಾನಿಗಳಾಗಿರುವ ನಾವೆಲ್ಲರೂ ಹಾರೈಸೋಣ.

ಶ್ರಾವಣಿ ಮತ್ತು ಪುನೀತ್ ರಾಜ್ ಕುಮಾರ್ ಅವರ ನಡುವಿನ ಸಂಬಂಧ ತಿಳಿದರೆ ನಿಜಕ್ಕೂ ಎಲ್ಲರೂ ಕಣ್ಣೀರಿಡುವುದು ಗ್ಯಾರಂಟಿ.

ಶಾರ್ವರಿ ಸದ್ಯಕ್ಕೆ ಈಕೆ ಶಾರ್ವರಿ ಎನ್ನುವ ಹೆಸರಿಗಿಂತ ಆದ್ರಿಕಾ ಎನ್ನುವ ಹೆಸರಿನಿಂದ ದೇಶದಾದ್ಯಂತ ಫೇಮಸ್, ಯಾಕೆಂದರೆ ಚಾರ್ಲಿ777 ಎನ್ನುವ ಸಿನಿಮಾದಲ್ಲಿ ಈಕೆ ಆರ್ದಿಕಾ ಎನ್ನುವ ಪಾತ್ರ ನಿರ್ವಹಿಸಿದ್ದಳು. ಸಿನಿಮಾದಲ್ಲಿ ಪಪ್ಪಿ ಪಾರ್ಕಿನಲ್ಲಿ ಇತ್ತು ಎನ್ನುವ ಡೈಲಾಗ್ ಯಿಂದ ಫೇಮಸ್ ಆಗಿರುವ ಪುಟ್ಟ ಹುಡುಗಿ ಶಾರ್ವರಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜೂನಿಯರ್ಸ್ ಎನ್ನುವ ಕಾರ್ಯಕ್ರಮದಿಂದ ಈ ಮೊದಲು ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದರು. ಡ್ರಾಮಾ ಜೂನಿಯರ್ಸ್ ಎಪಿಸೋಡ್ ಗಳನ್ನು ನೋಡಿ ಆ ಕಾರ್ಯಕ್ರಮದಲ್ಲಿ ಇವರ ಆಕ್ಟಿಂಗ್ ನೋಡಿ ಹಲವಾರು ಸಿನಿಮಾ ಆಫರ್ ಗಳು ಇವರನ್ನು ಹರಸಿ ಬಂದಿದ್ದವು. ಹಾಗಾಗಿ ಇವರು ಪೈಲ್ವಾನ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ಮಗಳಾಗಿ ಅಭಿನಯಿಸುವ ಅದೃಷ್ಟ ಪಡೆದುಕೊಂಡರು. ನಂತರ ಲಂಬೋದರ ಇನ್ಸ್ಪೆಕ್ಟರ್ ವಿಕ್ರಂ ಚಾರ್ಲಿ777 ಈ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ.

ಸದ್ಯಕ್ಕೆ ಭಾರತದಾದ್ಯಂತ ಅಬ್ಬರಿಸುತ್ತಿರುವ ಚಾರ್ಲಿ777 ಸಿನಿಮಾದಲ್ಲಿ ಎಲ್ಲಾ ಪಾತ್ರಗಳಿಗೂ ಕೂಡ ಅವರದ್ದೇ ಆದ ಬೆಲೆ ಇದೆ. ಅದರಲ್ಲಿ ಹೆಚ್ಚಿನ ಬೆಲೆ ಈ ಪುಟಾಣಿ ಮಗುವಿಗೆ ಇದೆ ಎನ್ನಬಹುದು. ಸಿನಿಮಾದಲ್ಲಿ ಇರುವ ಎಲ್ಲರಂತೆ ಈಕೆಯು ಕೂಡ ಜನರ ಗಮನವನ್ನು ಸೆಳೆದಿದ್ದಾಳೆ ಹಾಗೂ ಸಿಕ್ಕಾಪಟ್ಟೆ ಫೇಮಸ್ ಕೂಡ ಆಗುತ್ತಿದ್ದಾಳೆ. ಶಾರ್ವರಿಗೆ ಪುನೀತ್ ರಾಜಕುಮಾರ್ ಅವರ ಸಿನಿಮಾಗಳಲ್ಲೂ ಅವರೊಟ್ಟಿಗೆ ಅಭಿನಯಿಸುವ ಅವಕಾಶ ಸಿಕ್ಕಿತಂತೆ. ಅದು ಕೂಡ ಒಂದಲ್ಲ ಎರಡೆರಡು ಸಿನಿಮಾಗಳಲ್ಲಿ ಶಾರ್ವರಿ ಅವರು ಪುನೀತ್ ರಾಜಕುಮಾರ್ ಅವರ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ ಅವರ ದುರಾದೃಷ್ಟವೋ ಅಥವಾ ಮತ್ತೇನೋ ಗೊತ್ತಿಲ್ಲ ಎರಡು ಬಾರಿ ಕೂಡ ಈ ಅವಕಾಶಗಳು ಕೈತಪ್ಪಿ ಹೋಗಿವೆ. ಇದರ ಬಗ್ಗೆ ಶಾರ್ವರಿ ಅವರ ತಾಯಿಯೇ ಹೇಳಿಕೊಂಡಿದ್ದಾರೆ.

ನನ್ನ ಮಗಳಿಗೆ ಪುನೀತ್ ರಾಜಕುಮಾರ್ ಅವರು ಎಂದರೆ ತುಂಬಾ ಇಷ್ಟ ಅವರೊಟ್ಟಿಗೆ ಅಭಿನಯಿಸುವ ಅವಕಾಶ ಮೊದಲಿಗೆ ಜೇಮ್ಸ್ ಸಿನಿಮಾದಲ್ಲಿ ಬಂದಿತ್ತು ಆದರೆ ಆ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಕೋವಿಡ್ ಭಯ ಇದ್ದ ಕಾರಣ ನಾವು ಅಭಿನಯಿಸುವುದು ಬೇಡ ಎಂದು ಬಿಟ್ಟೆವು. ಆ ದಿನಗಳಲ್ಲಿ ಶಾರ್ವರಿ ತುಂಬಾ ನೊಂದುಕೊಂಡಿದ್ದಳು ಹಾಗೂ ಅವಕಾಶ ಕಳೆದುಕೊಂಡಿದ್ದಕ್ಕಾಗಿ ದುಃಖ ಪಡುತ್ತಿದ್ದಳು. ಅವಳು ಯಾವಾಗಲೂ ಹೇಳುತ್ತಿತ್ತು ಒಂದೇ ನನಗೆ ನಾಲ್ಕು ಆಸೆಗಳು ಇರುವುದು ನಾನು ಮೋದಿ ಅವರನ್ನು ಭೇಟಿಯಾಗಬೇಕು ನಾಯಿ ಜೊತೆ ಸಿನಿಮಾ ಮಾಡಬೇಕು ದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಹಾಗೂ ಪುನೀತ್ ರಾಜಕುಮಾರ್ ಅವರ ಜೊತೆ ಸಿನಿಮಾ ಮಾಡಬೇಕು ಎಂದು ಈಗಾಗಲೇ ಮೋದಿ ಅವರನ್ನು ಭೇಟಿ ಮಾಡಿದ್ದು ಆಯ್ತು ನಾಯಿಯ ಜೊತೆ ಸಿನಿಮಾ ಮಾಡಿದ್ದು ಆಯ್ತು ಮುಂದೆ ಯಾವಾಗಲಾದರೂ ದೇವಿ ಪಾತ್ರವನ್ನು ಕೂಡ ಮಾಡುತ್ತಾಳೆ.

ಆದರೆ ಪುನೀತ್ ಅವರ ಜೊತೆ ನಟಿಸುವ ಅವಕಾಶ ಸಿಗುವುದಿಲ್ಲವಲ್ಲ ಎನ್ನುವುದನ್ನು ನೆನೆದುಕೊಂಡು ಇನ್ನು ಕೂಡ ದುಃಖ ಪಡುತ್ತಾಳೆ ಹಾಗೂ ನಾವು ಜೇಮ್ಸ್ ಸಿನಿಮಾದಲ್ಲಿ ಸಿಕ್ಕ ಅವಕಾಶ ತಪ್ಪಿಸಿ ಬಿಟ್ಟೆವಲ್ಲಾ ಎಂದು ತುಂಬಾ ಕೊರಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದಲ್ಲದೆ ದ್ವಿತ್ವ ಎನ್ನುವ ಸಿನಿಮಾದಲ್ಲೂ ಅಭಿನಯಿಸಲು ಪುನೀತ್ ಅವರ ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆಯಿಂದ ಶಾರ್ವರಿ ಅಕೌಂಟಿಗೆ ಹಣ ಕೂಡ ಹಾಕಿದ್ದಾರಂತೆ ಚೈಲ್ಡ್ ಆರ್ಟಿಸ್ಟ್ ಆಗಿದ್ದರು ಕೂಡ ಸೆಲೆಕ್ಟ್ ಆಗದ ತಕ್ಷಣವೇ ನಂಬರ್ ಪಡೆದುಕೊಂಡು ಪೇಮೆಂಟ್ ಮಾಡಿದ್ದಾರಂತೆ ಆದರೆ ಈ ಬಾರಿಯೂ ಕೂಡ ದೇವರು ಅವರೊಟ್ಟಿಗೆ ಕಾಣಿಸಿಕೊಳ್ಳುವ ಅವಕಾಶ ಕೊಡಲೇ ಇಲ್ಲ ನಾವು ಸಾಧ್ಯವಾದರೆ ಮುಂದೊಂದು ದಿನ ಅವರ ಪ್ರೊಡಕ್ಷನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತೇವೆ ಇಲ್ಲವಾದರೆ ಪುನೀತ್ ಅವರು ಕೊಟ್ಟಿದ್ದ ಹಣವನ್ನು ಸಮಾಜ ಸೇವೆಗಾಗಿ ಖರ್ಚು ಮಾಡುತ್ತೇವೆ ಎಂದು ಶಾರ್ವರಿ ತಾಯಿ ಹೇಳಿಕೊಂಡಿದ್ದಾರೆ.

ನೆಚ್ಚಿನ ಹುಡುಗನಿಗೆ ಹ್ಯಾಪಿ ಬರ್ಡೆ ಮೈ ಲವ್ ಎಂದು ವಿಶ್ ಮಾಡಿದ ಸಾನ್ವಿ, ಸುದೀಪ್ ಪುತ್ರಿ ಸಾನ್ವಿ ಲವ್ ನಲ್ಲಿ ಬಿದ್ದಿದ್ದಾರ.?

ಸಾನ್ವಿ ಸುದೀಪ್ ಕನ್ನಡದ ಸ್ಟಾರ್ ಹೀರೋ ಕಿಚ್ಚ ಸುದೀಪ್ ಅವರ ಒಬ್ಬಳೇ ಮಗಳು. ಕಿಚ್ಚ ಸುದೀಪ್ ಎಂದರೆ ಕರ್ನಾಟಕ ಮಾತ್ರವಲ್ಲದೆ ತಮಿಳು ತೆಲುಗು ಹಿಂದಿ ಹೀಗೆ ಎಲ್ಲಾ ಚಿತ್ರರಂಗವು ಕೂಡ ತಿರುಗಿ ನೋಡುವಂತೆ ಮಾಡಿದ ನಟ. ಇವರ ನಟನೆ ನೋಡಿ ಮೆಚ್ಚಿದವರೇ ಇಲ್ಲ. ಕಿಚ್ಚ ಸುದೀಪ್ ಅವರಿಗೆ ಕರ್ನಾಟಕದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಮನೆಗೆ ಮನೆಗಳಲ್ಲೂ ಕೂಡ ಈ ನಟನನ್ನು ಮೆಚ್ಚಿದ ಅಭಿಮಾನಿಗಳು ಸಿಗುತ್ತಾರೆ. ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋ ಮೂಲಕ ಕಿರುತೆರೆ ಅಭಿಮಾನಿಗಳ ಮನವನ್ನು ಕೂಡ ಗೆದ್ದಿರುವ ಕಿಚ್ಚ ಸುದೀಪ್ ಅವರಿಗೆ ಅವರೇ ಸಾಟಿ. ವಾರಾಂತ್ಯದ ಎರಡು ಎಪಿಸೋಡ್ ಗಳಲ್ಲಿ ಅವರು ಕಿರುತೆರೆಯಲ್ಲಿ ಕಾಣಿಸಿಕೊಂಡರು ಕೂಡ ಇವುಗಳನ್ನು ನೋಡಲು ವಾರ ಪೂರ್ತಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಹಾಗೂ ಸುದೀಪ್ ಅವರ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎಂದು ಅಭಿಮಾನಿಗಳು ಅವರ ಸಿನಿಮಾಗಳಿಗಾಗಿ ಕಾಯುತ್ತಿರುತ್ತಾರೆ.

ಸದ್ಯಕ್ಕೆ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಹೈ ಬಜೆಟ್ ಸಿನಿಮಾ ವಿಕ್ರಾಂತ್ ರೋಣ ಸಿನಿಮಾವು ಪಾನ್ ಇಂಡಿಯಾ ಸಿನಿಮಾ ವಾಗಿ ತಯಾರಾಗಿದ್ದು ಇದು ಭಾರತದ ಅಬ್ಬರಿಸಲು ರೆಡಿ ಆಗುತ್ತಿದೆ. ಇದೇ ತಿಂಗಳ 29ನೇ ತಾರೀಕಿನಂದು ಸಿನಿಮಾ ರಿಲೀಸ್ ಕೂಡ ಆಗಲಿದೆ ಅಲ್ಲದೆ ವಿಶ್ವದಾದ್ಯಂತ ದಾಖಲೆ ಮಾಡುವ ನಿರೀಕ್ಷೆಯನ್ನು ಈಗಾಗಲೇ ಹುಟ್ಟು ಹಾಕಿದೆ. ಈ ಸಿನಿಮಾ ತೆರೆಕಂಡ ಮೇಲೆ ಕಿಚ್ಚ ಸುದೀಪ್ ಅವರ ಅಭಿಮಾನಿ ಬಳಗ ಇನ್ನಷ್ಟು ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೂ ಈ ಸಿನಿಮಾದ ಮೂಲಕ ವಿಶ್ವದಾದ್ಯಂತ ಇವರು ಅಭಿಮಾನಿಗಳನ್ನು ಗಳಿಸಿಕೊಳ್ಳಲಿದ್ದಾರೆ. ಇಂತಹ ಕಿಚ್ಚ ಸುದೀಪ್ ಅವರ ಮಗಳು ಬೇರೆ ಯಾರಾದರೂ ಅಭಿಮಾನಿ ಎಂದರೆ ಖಂಡಿತ ಆಶ್ಚರ್ಯವಾಗಬಹುದು ಆದರೆ ಆ ಮಾತು ನಿಜ. ಸಾನ್ವಿ ಸುದೀಪ್ ಅವರು ಹೈದರಾಬಾದ್ ಅಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

ವಿದ್ಯಾಭ್ಯಾಸದ ಜೊತೆ ಪೇಂಟಿಂಗ್ ಅಲ್ಲೂ ಕೂಡ ತುಂಬಾ ಆಸಕ್ತಿ ಹೊಂದಿರುವ ಇವರು ಇದಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನು ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟಿನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಇವರು ತಮ್ಮ ತಂದೆ ವಿಷಯಗಳು ಅವರ ಸಿನಿಮಾಗಳು ಸಿನಿಮಾಗೆ ಸಂಬಂಧಪಟ್ಟ ಪ್ರಚಾರದ ವಿಷಯಗಳು ಹೀಗೆ ಹೆಚ್ಚಾಗಿ ತನ್ನ ತಂದೆ ವಿಷಯವನ್ನು ಹಂಚಿಕೊಳ್ಳುತ್ತಿರುತ್ತಾರೆ. ಹಾಗೂ ಅವರ ತಂದೆಯನ್ನು ಬಿಟ್ಟರೆ ಅವರ ಕಸಿನ್ ಬ್ರದರ್ ವಿಷಯವನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಅಪ್ಪನನ್ನು ಬಿಟ್ಟು ಬೇರೆ ನಟರ ವಿಷಯ ಎಂದರೆ ಅವರು ಅತಿ ಹೆಚ್ಚು ಹಚ್ಚಿಕೊಂಡಿರುವುದು ಸಿದ್ದಾರ್ಥ್ ಅವರನ್ನು ಅದಲ್ಲದೆ ಅವರು ಅವರನ್ನು ತಮ್ಮ ಕ್ರಶ್ ಎಂದು ಕೂಡ ಹೇಳಿಕೊಂಡಿದ್ದಾರೆ.

ಯಾವಾಗಲೂ ಸಿದ್ದಾರ್ಥ್ ಮಲ್ಲೋತ್ರ ಅವರ ಸ್ಟೇಟಸ್ ಗಳನ್ನು ಅಪ್ಪಿಕೊಳ್ಳುವ ಅವರು ಅವರ ಸೋಶಿಯಲ್ ಮೀಡಿಯಾ ಅಕೌಂಟ್ ಫುಲ್ ವಿಜಯ್ ಸಿದ್ದಾರ್ಥ್ ಮಲ್ಹೋತ್ರ ಅವರ ಫೋಟೋಗಳನ್ನು ತುಂಬಿಸಿಕೊಂಡಿದ್ದಾರೆ. ವಾರದಲ್ಲಿ ಐದು ದಿನವಾದರೂ ಇವರ ಫೋಟೋ ಹಾಕಿ ತಮ್ಮ ಅಭಿಮಾನ ವ್ಯಕ್ತಪಡಿಸುವ ಇವರು ಅವರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಅವರ ಹುಟ್ಟು ಹಬ್ಬಕ್ಕೆ ಅವರ ಫೋಟೋ ಹಾಕಿ ಹ್ಯಾಪಿ ಬರ್ತ್ಡೇ ಮೈ ಲವ್ ಎಂದು ವಿಶ್ ಮಾಡಿದ್ದಾರೆ, ಸಿದ್ಧಾರ್ಥ್ ಮಲ್ಹೋತ್ರ ಅವರು ಈ ವರ್ಷ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಪುನೀತ್ ಜೇಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್ ನಿತ್ಯನಂದನನ್ನು ಮದುವೆ ಆಗುತ್ತೆನೆ ಎಂಬ ಶಾ-ಕಿಂ-ಗ್ ಹೇಳಿಕೆ ಕೊಟ್ಟಿದ್ದಾರೆ.

ಜೇಮ್ಸ್ ಸಿನಿಮಾ ಕನ್ನಡದ ಅಭಿಮಾನಿಗಳ ದೇವರ ಕೊನೆಯ ಚಿತ್ರ ಈ ಸಿನಿಮಾದಲ್ಲಿ ಅಭಿನಯಿಸಿದ ಎಷ್ಟೋ ಕಲಾವಿದರು ನಾವೆಷ್ಟು ಪುಣ್ಯ ಮಾಡಿದ್ದೇವೆ ಪುನೀತ್ ಅವರೊಂದಿಗೆ ಕೊನೆಯ ಕ್ಷಣಗಳನ್ನು ಕಳೆಯುವ ಅವಕಾಶ ನಮಗೆ ಸಿಕ್ಕಿತಲ್ಲ ಎಂದು ತೃಪ್ತಿ ಪಟ್ಟು ಕೊಳ್ಳುತ್ತಿದ್ದಾರೆ. ಅದರಲ್ಲಿ ಈ ಸಿನಿಮಾದ ನಟಿ ಪ್ರಿಯ ಆನಂದ್ ಅವರಿಗೆ ಇದು ಎರಡನೇ ಬಾರಿ ಸಿಕ್ಕಿರುವ ಅವಕಾಶವಾಗಿದೆ ಯಾಕೆಂದರೆ ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವಮಾನದ ಶ್ರೇಷ್ಠ ಚಿತ್ರ ಎಂದು ಕರೆಯಬಹುದಾದ ರಾಜಕುಮಾರ ಎನ್ನುವ ಸಿನಿಮಾದಲ್ಲಿ ಪ್ರಿಯ ಆನಂದ್ ಅವರೇ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಮತ್ತು ಈಗ ಜೇಮ್ಸ್ ಸಿನಿಮಾದಲ್ಲೂ ಕೂಡ ಪ್ರಿಯ ಆನಂದ್ ಅವರೇ ಪುನೀತ್ ಅವರಿಗೆ ಜೋಡಿಯಾಗಿ ನಟಿಸುವ ಅದೃಷ್ಟ ಕೂಡ ಅವರ ಪಾಲಿಗೆ ದೊರಕಿದೆ.

ಮೂಲತಃ ತಮಿಳು ನಟಿ ಆದ ಇವರನ್ನು ಆ ರೀತಿ ಗುರಿತುಸುವುದೇ ಕಷ್ಟ. ಏಕೆಂದರೆ ಕನ್ನಡದ ನೇಟಿವಿಟಿಗೆ ತಕ್ಕಂತೆ ಹೊಂದಿಕೊಂಡಂತೆ ಇರುವ ಇವರನ್ನು ಕನ್ನಡದ ನಟಿ ಎಂದೇ ಹೇಳಬಹುದು ಅಷ್ಟು ಕನ್ನಡಿಗರ ಮನಕ್ಕೆ ಇವರು ಹತ್ತಿರವಾಗಿದ್ದಾರೆ. ಮೊದಲಿಗೆ ಪ್ರಿಯ ಆನಂದ್ ಅವರು ಕಿಚ್ಚ ಸುದೀಪ್ ಅವರ ಮಾಣಿಕ್ಯ ಎನ್ನುವ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಅವರಿಗೆ ಕನ್ನಡದಲ್ಲಿ ಹೆಚ್ಚಿನ ಅವಕಾಶಗಳು ಸಿಗಲು ಶುರುವಾದವು ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಆರೆಂಜ್ ಸಿನಿಮಾದಲ್ಲಿ ಅಭಿನಯಿಸುವ ಅದೃಷ್ಟ ಪಡೆದುಕೊಂಡರು. ಹೀಗೆ ರಾಜಕುಮಾರ ಹಾಗೂ ಜೇಮ್ಸ್ ಎನ್ನುವ ಎರಡು ಸಿನಿಮಾಗಳು ನಟಿಸಿರುವ ಇವರಿಗೆ ಕನ್ನಡದಲ್ಲಿ ನಟಿಸಲು ಹಲವಾರು ಆಫರ್ ಗಳು ಈಗಲೂ ಕೂಡ ಇವೆ.

ತಮಿಳಿನಲ್ಲೂ ಕೂಡ ಬಹುತೇಕ ಸ್ಟಾರ್ ಹೀರೋ ಸಿನಿಮಾಗಳಲ್ಲಿ ನಟಿಸಿರುವ ಇವರು ಮಿರ್ಚಿ ಶಿವ ಅವರೊಂದಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ಸುಮೋ ಮತ್ತು ಕಾಸೆದೆನ್ ಕಡವುಲಡ ಎನ್ನುವ ಸಿನಿಮಾಗಳು ತೆರೆ ಕಾಣಬೇಕಾಗಿದೆ. ಇದಲ್ಲದೆ ಹಿರಿಯ ನಟ ಪ್ರಶಾಂತ್ ಅವರೊಂದಿಗೂ ಕೂಡ ಅಂದಗನ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾವು ಕೂಡ ಸದ್ಯದಲ್ಲೇ ತೆರೆ ಕಾಣಲಿದೆ ಹೀಗೆ ಕೈ ತುಂಬಾ ಸಿನಿಮಾ ಆಫರ್ ಗಳನ್ನು ಕನ್ನಡ ಮತ್ತು ತಮಿಳು ಭಾಷೆಯಿಂದ ಗಿಟ್ಟಿಸಿಕೊಂಡಿರುವ ಪ್ರಿಯ ಆನಂದ್ ಅವರು ಮದುವೆ ಆಗುವುದರ ಬಗ್ಗೆ ಮೌನ ಮುರಿದು ಮಾತನಾಡಿದ್ದಾರೆ. ಇವರು ಮದುವೆ ಆಗಲು ಒಪ್ಪಿಕೊಂಡಿರುವ ವ್ಯಕ್ತಿ ಯಾರು ಗೊತ್ತಾ ದೇವಮಾನವ ಎಂದು ಕರೆಸಿಕೊಂಡಿರುವ ನಿತ್ಯಾನಂದ ಅವರ ಜೊತೆ ಇವರು ವಿವಾಹವಾಗುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಅವರು ಹೇಳಿದ ಈ ಮಾತುಗಳು ವೈರಲ್ ಆಗಿದ್ದೆ ತಡ ಸೋಶಿಯಲ್ ಮೀಡಿಯಾದಲ್ಲಿ ಇವರನ್ನು ನೆಟ್ಟಿಗರು ಹಿಗ್ಗಾಮುಗ್ಗ ವಾಗಿ ಟ್ರೋಲ್ ಮಾಡಿದ್ದಾರೆ.

ನಂತರ ಅದಕ್ಕೆ ಸ್ಪಷ್ಟನೆ ಕೊಟ್ಟ ಪ್ರಿಯ ಆನಂದ್ ಅವರು ನಾನು ತಮಾಷೆಗಾಗಿ ಈ ಮಾತನ್ನು ಹೇಳಿದೆ ನನ್ನ ಹೆಸರು ಪ್ರಿಯ ಆಗಿರುವುದರಿಂದ ನಿತ್ಯಾನಂದ ಅವರ ಹೆಸರು ಹೋಲುತ್ತದೆ ಹಾಗಾಗಿ ಮದುವೆಯಾದರೆ ಹೆಸರನ್ನು ಹೆಚ್ಚಿಗೆ ಬದಲಾಯಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಕೂಡ ತಮಾಷೆಗಾಗಿಯೇ ನುಡಿದಿದ್ದು ಅದನ್ನು ಬೇರೆ ಅರ್ಥ ಕಲ್ಪಿಸಿಕೊಂಡು ತಿಳಿದುಕೊಳ್ಳುವುದರಲ್ಲಿ ಅರ್ಥವಿಲ್ಲ. ಈ ವಿಚಾರವನ್ನು ಇನ್ನು ಮುಂದೆ ಇಲ್ಲಿಗೆ ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದರು. ಅಂದಹಾಗೆ ಈ ಸ್ಪಷ್ಟನೆ ಕೊಟ್ಟ ಬಳಿಕ ಅವರು ಮದುವೆ ಬಗ್ಗೆ ಮಾತನಾಡಿರುವುದು ಕೂಡ ಕೇವಲ ತಮಾಷೆಗಾಗಿ ಎನ್ನುವುದು ರುಜುವಾದಂತೆ ಆಯಿತು.

ವಿಕ್ರಾಂತ್ ರೋಣ ಸಿನಿಮಾಗೆ ಕಿಚ್ಚ ಸುದೀಪ್ ಪಡೆದಿರುವ ದಾಖಲೆ ಮಟ್ಟದ ಸಂಭಾವನೆ ಎಷ್ಟು ಗೊತ್ತಾ.?

ವಿಕ್ರಾಂತ್ ರೋಣ ಸದ್ಯಕ್ಕೆ ಕನ್ನಡದಲ್ಲಿ ತಯಾರಾಗಿರುವ ಬಹು ನಿರೀಕ್ಷಿತ ಸಿನಿಮಾ. ಕೆಜಿಎಫ್ ಸಿನಿಮಾದ ನಂತರ ಕನ್ನಡದಲ್ಲಿ ತಯಾರಾಗಿರುವ ಹೈ ಬಜೆಟ್ ಸಿನಿಮಾ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅಬ್ಬರಿಸಲು ಸಿದ್ಧವಾಗಿದೆ. ನಟ ಕಿಚ್ಚ ಸುದೀಪ್ ಅವರು ತಮ್ಮ ಅಭಿನಯ ಚಾತುರ್ಯತೆಯನ್ನು ಈಗಾಗಲೇ ಕನ್ನಡದ ಹಲವು ಸಿನಿಮಾಗಳಲ್ಲಿ ಪ್ರಯೋಗ ಮಾಡಿ ನಿರೂಪಿಸಿದ್ದಾರೆ. ಕಿಚ್ಚ ಸುದೀಪ್ ಅವರು ಕನ್ನಡದ ನಂಬರ್ ಒನ್ ಸ್ಟಾರ್ ಪಟ್ಟಿಯಲ್ಲಿದ್ದಾರೆ. ಕನ್ನಡದಲ್ಲಿ ಈಗಾಗಲೇ ಬಹುತೇಕ ಅತ್ಯುತ್ತಮ ಸಂಖ್ಯೆಯಲ್ಲಿ ಸಿನಿಮಾಗಳನ್ನು ನೀಡಿರುವ ಇವರು ಕನ್ನಡಕ್ಕೆ ಸ್ಪರ್ಶ ಎನ್ನುವ ಸಿನಿಮಾದ ಮೂಲಕ ಹೀರೋ ಆಗಿ ಪಾದರ್ಪಣೆ ಮಾಡಿದರು. ಆನಂತರ ಬಂದ ಹುಚ್ಚ ಸಿನಿಮಾವು ಅವರ ಸಿನಿಮಾ ಬದುಕಿನ ಅತ್ಯುತ್ತಮ ಸಿನಿಮಾ ವಾಗಿ ಅವರ ಬದುಕಿನ ದಿಕ್ಕನ್ನು ಬದಲಾಯಿಸಿತು.

ಅದಾದ ಬಳಿಕ ನಂದಿ ಕಿಚ್ಚ ವಾಲಿ ಧಮ್ ಚಂದು ಸ್ವಾತಿಮುತ್ತು ಮೈ ಆಟೋಗ್ರಾಫ್ ವೀರ ಮದಕರಿ ವೀರ ಪರಂಪರೆ ಮುಸ್ಸಂಜೆ ಮಾತು ಗೂಳಿ ಕಾಮಣ್ಣನ ಮಕ್ಕಳು ಜಸ್ಟಮಾತ್ ಮಾತಲ್ಲಿ ಕಿಚ್ಚ ಹುಚ್ಚ ರಂಗ ಎಸ್‌ಎಸ್‌ಎಲ್‌ಸಿ ರನ್ನ ಮಾಣಿಕ್ಯ ಕೋಟಿಗೊಬ್ಬ 2 ಕೋಟಿಗೊಬ್ಬ 3 ಮುಂತಾದ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿರುವ ಕಿಚ್ಚ ಸುದೀಪ್ ಅವರು ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಹಿಂದಿ ತಮಿಳು ತೆಲುಗು ಸಿನಿಮಾಗಳನ್ನು ಖಳನಾಯಕನಾಗಿ ಮಿಂಚುತ್ತಿದ್ದಾರೆ. ಅಮಿತಾ ಬಚ್ಚನ್ ಅವರ ಜೊತೆ ಅಭಿನಯಿಸುವ ಅದೃಷ್ಟ ಪಡೆದ ಇವರು ರಾಜಮೌಳಿ ಅವರ ನಿರ್ದೇಶನದ ಬಾಹುಬಲಿ ಸಿನಿಮಾದಲ್ಲೂ ಕೂಡ ತಮಗಾಗಿ ಒಂದು ಪಾತ್ರವನ್ನು ಮೀಸಲಾಗಿಡುವಷ್ಟು ಎಲ್ಲಾ ಭಾಷೆಗಳಲ್ಲೂ ಅಭಿಮಾನ ಹೊಂದಿದ್ದಾರೆ. ಕಿಚ್ಚ ಸುದೀಪ್ ಅವರು ಈಗ ತಮ್ಮ ವರ್ಚಸ್ಸನ್ನು ವಿಕ್ರಾಂತ್ ರೋಣ ಸಿನಿಮಾದ ಮೂಲಕ ಮತ್ತೊಂದು ಹಂತಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾವು ಈಗಾಗಲೇ ಹಲವು ವಿಷಯಗಳಿಂದ ಫೇಮಸ್ ಆಗಿದೆ. ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ಬುರ್ಜಾ ಖಲಿಫ್ ಅಂತಹ ಕಟ್ಟಡದ ಮೇಲೆ ತನ್ನ ಲೋಗೋ ಲಾಂಚ್ ಮಾಡಿಕೊಂಡ ಸಿನಿಮಾ ಕನ್ನಡದ ಹೆಸರನ್ನು ವಿಶ್ವಮಟ್ಟಕ್ಕೆ ಗುರುತಿಸಿಕೊಳ್ಳುವಷ್ಟು ಖ್ಯಾತಿಯನ್ನು ಕನ್ನಡಿಗರಿಗೆ ತಂದಿದೆ. ಒಂದಾದ ಮೇಲೆ ಒಂದರಂತೆ ಹಲವು ವಿಚಾರದಲ್ಲಿ ಈ ಸಿನಿಮಾ ದಾಖಲೆ ಮಾಡುತ್ತಿದ್ದು ಕಳೆದ ತಿಂಗಳಷ್ಟೇ ಈ ಸಿನಿಮಾದ ಐಟಂ ಹಾಡೊಂದನ್ನು ರಿಲೀಸ್ ಮಾಡತ್ತು. ಜಾಕ್ವೆಲಿನ್ ಮತ್ತು ಸುದೀಪ್ ಅವರು ಹೆಜ್ಜೆ ಹಾಕಿದ್ದ ರಾರಾ ರಕ್ಕಮ್ಮ ಎನ್ನುವ ಹಾಡು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಅಲ್ಲಿ ಇದ್ದು, ರೀಲ್ ಮಾಡಲು ಇಚ್ಚಿಸುವವರ ನಂಬರ್ ಒನ್ ಫೇವರೆಟ್ ಸಾಂಗ್ ಆಗಿದೆ. ಅಲ್ಲದೆ ಭಾರತದ ಹಲವಾರು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಹಾಗೂ ಸೋಶಿಯಲ್ ಮೀಡಿಯಾ ಬಳಕೆದಾರರು ಸೇರಿದಂತೆ ಅತಿ ಹೆಚ್ಚಿನ ಜನರು ಈ ಹಾಡಿಗೆ ರೀಲ್ಸ್ ಮಾಡಿ ಅದನ್ನು ಕೂಡ ಒಂದು ದಾಖಲೆ ಮಾಡಿದ್ದಾರೆ.

ಇನ್ನೇನು ಸಿನಿಮಾ ತೆರೆ ಮೇಲೆ ಅಬ್ಬರಿಸಲು ದಿನಾಂಕ ಕೂಡ ಗೊತ್ತಾಗಿದೆ. ಈ ತಿಂಗಳ 29ನೇ ತಾರೀಕು ಸಿನಿಮಾ ಥಿಯೇಟರ್ ನಲ್ಲಿ ನೋಡಲು ಸಿಗುತ್ತದೆ. ಈ ಸಮಯದಲ್ಲಿ ಸುದೀಪ್ ಅವರು ಈ ಸಿನಿಮಾಗಾಗಿ ತೆಗೆದುಕೊಂಡಿರುವ ಸಂಭಾವನೆ ಬಾರಿ ಸುದ್ದಿಯಾಗುತ್ತಿದೆ. ಸಿನಿಮಾ 95 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಈ ಸಿನಿಮಾದ ನಾಯಕ ಕಿಚ್ಚ ಸುದೀಪ್ ಅವರು ಬರೋಬ್ಬರಿ 15 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ.

ಶಿವಣ್ಣನ ಬರ್ತಡೆ ಆಚರಿಸಲು ಬಂದ ನಟ ದರ್ಶನ್, ಶಿವಣ್ಣನಿಗೆ ಕೊಟ್ಟ ಸರ್ಪ್ರೈಸ್ ನೋಡಿ.!

ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ 60 ವರ್ಷದ ಸಂಭ್ರಮ. ಜುಲೈ 12ಕ್ಕೆ 60ನೇ ವಸಂತಕ್ಕೆ ಕಾಲಿಟ್ಟಿರುವ ಶಿವಣ್ಣ ಅವರಿಗೆ ಅಭಿಮಾನಿಗಳು ಕಾಮನ್ ಡಿಪಿ ಹಾಕುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯದ ಮಹಾಪೂರವನ್ನು ಹರಿಸುತ್ತಿದ್ದಾರೆ. ಪ್ರತಿ ವರ್ಷವೂ ಕೂಡ ನೆಚ್ಚಿನ ನಟನಾದ ಶಿವಣ್ಣನ ಹುಟ್ಟುಹಬ್ಬವನ್ನು ಅಭಿಮಾನಿಗಳು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಕಳೆದ ಎರಡು ವರ್ಷದಿಂದ ಕೊರೋನಾ ಇದ್ದ ಕಾರಣದಿಂದಾಗಿ ಆಚರಣೆಯನ್ನು ಕುಟುಂಬಕಷ್ಟೇ ಮೀಸಲಿಟ್ಟಿದ್ದಾರೆ. ಆದರೆ ಅಭಿಮಾನಿಗಳು ಶಿವಣ್ಣನ ಹೆಸರಿನಲ್ಲಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿ ತಾವು ಇದ್ದಲ್ಲಿಂದಲೇ ಶುಭಾಶಯವನ್ನು ತಿಳಿಸುತ್ತಿದ್ದರು. ಆದರೆ ಕುಟುಂಬದೊಂದಿಗೆ ಜೊತೆಗಾದರೂ ಸಂತಸದ ಕ್ಷಣವನ್ನು ಆಚರಿಸುತ್ತಿದ್ದ ಶಿವಣ್ಣ ಅವರು ಈ ಬಾರಿ ಅದನ್ನು ಕೂಡ ಆಚರಿಸಿಕೊಂಡಿಲ್ಲ ಕಾರಣ ಎಲ್ಲರಿಗೂ ತಿಳಿದ ಹಾಗೆ ಶಿವಣ್ಣ ತಮ್ಮ ಮಗನಂತಿದ್ದ ತಮ್ಮನನ್ನು ಕಳೆದುಕೊಂಡಿದ್ದಾರೆ.

ಅಪ್ಪು ಅವರ ಅ.ಗ.ಲಿ.ಕೆ ನೋ.ವು ಶಿವಣ್ಣ ಕುಟುಂಬದಲ್ಲಿ ಇನ್ನು ಎದ್ದು ಕಾಣುತ್ತಿದೆ ಈಗಲೂ ಕೂಡ ಅವರ ಮನೆಯ ವಾತಾವರಣ ಕತ್ತಲೆಯಿಂದ ಕೂಡಿದೆ ಎನ್ನಬಹುದು. ಹಾಗೂ ಈ ನೋವು ಎಂದಿಗೂ ನಿರಂತರವಾಗಿರುತ್ತದೆ. ಅವರ ಕುಟುಂಬಸ್ಥರ ಎಲ್ಲರ ಮುಖದಲ್ಲೂ ಕೂಡ ಅಪ್ಪು ಅವರನ್ನು ಮರೆಯಲಾಗದ ದುಃಖ ತುಂಬಿ ತುಳುಕಾಡುತ್ತಿದೆ. ಇದರ ನಡುವೆ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ಮುಂದೆ ಸಾಗಲೇಬೇಕಾದ ಅನಿವಾರ್ಯತೆ ಇರುವುದರಿಂದ ಎಲ್ಲರೂ ತಮ್ಮ ತಮ್ಮ ಕಾರ್ಯಗಳಲ್ಲಿ ಮೊದಲಿನ ಹಾಗೆ ತೊಡಗಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ. ಶಿವಣ್ಣ ಅವರು ಕೂಡ ಇತ್ತೀಚೆಗೆ ಶೂಟಿಂಗ್ಗಳಲ್ಲಿ ಭಾಗವಹಿಸುವುದು ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡೆಸಿಕೊಳ್ಳುವುದು ಮಾಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಿಕೆಡಿ ಎನ್ನುವ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಭಾಗವಹಿಸುತ್ತಿರುವ ಶಿವಣ್ಣ ಅವರ ಹಬ್ಬವನ್ನು ಶಿವರಾಜ್ಯೋತ್ಸವ ಎನ್ನುವ ಹೆಸರಿನಿಂದ ಎರಡು ಸಂಚಿಕೆಗಳಲ್ಲಿ ಆಚರಿಸಲಾಯಿತು.

ಈ ವಾರದ ಸಂಚಿಕೆ ಪೂರ್ತಿ ಶಿವಣ್ಣ ಅವರಿಗೆ ಮೀಸಲಿಟ್ಟು ಅವರ ಸಿನಿಮಾದ ಹಾಡುಗಳನ್ನು ಡ್ಯಾನ್ಸ್ ಮೂಲಕ ಅಭಿನಯಿಸಿ ಸ್ಪರ್ಧಾರ್ಥಿಗಳು ಎಲ್ಲರನ್ನು ರಚಿಸಿದರು ಹಾಗೂ ವೇದಿಕೆ ಮೇಲೆ ಕೇಕ್ ಕಟ್ ಮಾಡಿ ಶಿವಣ್ಣನ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಶಿವಣ್ಣನ ಹುಟ್ಟುಹಬ್ಬದ ಅಂಗವಾಗಿ ಹಲವಾರು ಸಿನಿಮಾಗಳು ಅವರಿಗಾಗಿ ಸೆಟ್ಟೇರಿವೆ. ಎಲ್ಲಾ ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಟ್ಟಿರುವ ಶಿವಣ್ಣ ಅವರು ಅಭಿಮಾನಿಗಳ ಜೊತೆ ಆ ವಿಷಯವನ್ನೆಲ್ಲ ಹಂಚಿಕೊಂಡಿದ್ದಾರೆ. ನಡುವೆ ಮತ್ತೊಂದು ಮಹತ್ವದ ವಿಷಯ ಏನೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶಿವಣ್ಣ ಅವರ ಕುಟುಂಬದ ಆತ್ಮೀಯ ಸ್ನೇಹಿತರಾಗಿದ್ದರು. ಶಿವಣ್ಣ ರಾಘಣ್ಣ ಅಪ್ಪು ಹಾಗೂ ದರ್ಶನ್ ಅವರು ಒಳ್ಳೆಯ ಸ್ನೇಹಿತರಾಗಿದ್ದರು ದರ್ಶನ್ ಅವರ ತಂದೆ ಇದ್ದಾಗಲಿಂದಲೂ ಕುಟುಂಬದ ಜೊತೆ ಅನ್ಯೋನ್ಯ ಸಂಬಂಧ ಹೊಂದಿದ್ದರು.

ಈ ಬಾರಿ ಶಿವಣ್ಣ ಅವರು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎನ್ನುವುದನ್ನು ತಿಳಿದ ದರ್ಶನ್ ಅವರು ತಾವೇ ತಮ್ಮ ಕಾರಿನಲ್ಲಿ ಶಿವಣ್ಣನ ಮನೆಗೆ ಹೋಗಿ ಅಲ್ಲಿ ಕೇಕ್ ಕಟ್ ಮಾಡಿಸಿ ಸಣ್ಣದಾಗಿ ಸೆಲೆಬ್ರೇಶನ್ ಮಾಡಿದ್ದಾರೆ. ಜೊತೆಗೆ ಕೆಲವು ಮೂಲಗಳ ಪ್ರಕಾರ ಶಿವಣ್ಣ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರೀತಿಯಿಂದ ದುಬಾರಿ ಬೆಳೆಯ ವಾಚ್ ಒಂದನ್ನು ಗಿಫ್ಟ್ ನೀಡಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಏನೇ ಆದರೂ ತಮ್ಮನನ್ನು ಕಳೆದುಕೊಂಡಿರುವ ಅಪ್ಪು ಅವರಿಗೆ ದರ್ಶನ್ ಅವರು ತಮ್ಮನಾಗಿ ಇರುವುದಾಗಿ ಹೇಳಿಕೊಂಡಿದ್ದಾರೆ ಹಾಗೂ ಹಾಗೆ ನಡೆದುಕೊಳ್ಳುತ್ತಿದ್ದಾರೆ.

ಹುಡುಗಿರ ಗ್ಲಾಮರ್ ತೋರಿಸೋಕೆ ರವಿಚಂದ್ರನ್ ಇಂದ ಮಾತ್ರ ಸಾಧ್ಯ ಎಂಬ ಶಾ-ಕಿಂ-ಗ್ ಹೇಳಿಕೆ ನೀಡಿದ ಪ್ರಿಯಾಂಕಾ ಉಪೇಂದ್ರ.

ಪ್ರಿಯಾಂಕ ಉಪೇಂದ್ರ ಅವರು ಕಳೆದ ಎರಡು ದಶಕಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಸಕ್ರಿಯರಾಗಿದ್ದಾರೆ ಇದುವರೆಗೂ ಸುಮಾರು 50 ಸಿನಿಮಾಗಳನ್ನು ಕನ್ನಡದಲ್ಲಿ ನಟಿಸಿರುವ ಈ ನಟಿ ಇಂದಿಗೂ ಕೂಡ ಕನ್ನಡ ಮಾತ್ರವಲ್ಲದೇ ಬೆಂಗಾಳಿ ಒರಿಯ ತಮಿಳು ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲೂ ಕೂಡ ಬೇಡಿಕೆ ಇರುವ ನಟಿ. ಉಪೇಂದ್ರ ಅವರ ಜೊತೆ ಎಚ್2ಓ ಎನ್ನುವ ಸಿನಿಮಾದ ಮೂಲಕ ಕನ್ನಡ ಚಲನಚಿತ್ರರಂಗ ಪಾದಾರ್ಪಣೆ ಮಾಡಿದ ಇವರು ಕನ್ನಡದ ಒಬ್ಬ ಪ್ರಮುಖ ನಟಿಯಾಗಿ ಬದಲಾಗಿದ್ದಾರೆ. ಮದುವೆಯಾದ ಬಳಿಕ ಸಿನಿಮಾಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡ ಈ ನಟಿ ಮತ್ತೆ ತಮ್ಮನ್ನು ಯಾರೂ ಉಪೇಂದ್ರ ಅವರ ಪತ್ನಿ ಎಂದು ಗುರುತಿಸಬಾರದು ನಾನು ಕೊನೆವರೆಗೂ ಒಬ್ಬ ನಟಿ ಎಂದು ಗುರುತಿಸಿಕೊಳ್ಳಬೇಕು ಎನ್ನುವ ಆಸೆಯಿಂದ ಮತ್ತೆ ಅಭಿನಯಿಸಲು ಶುರು ಮಾಡಿದ್ದಾರೆ. ಉಪೇಂದ್ರ ಅವರು ಕೂಡ ತಮ್ಮ ಪತ್ನಿಯ ಎಲ್ಲಾ ಕನಸುಗಳಿಗೆ ಸಪೋರ್ಟಿವ್ ಆಗಿ ನಿಲ್ಲುತ್ತಾರೆ.

ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಭಾಗಿಯಾದ ಪ್ರಿಯಾಂಕ ಉಪೇಂದ್ರ ಅವರು ತಮ್ಮ ಸಿನಿಮಾ ಜರ್ನಿಯ ಬಗ್ಗೆ ಕೆಲವೊಂದು ಮಾತುಗಳನ್ನಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ರವಿಚಂದ್ರನ್ ಅವರ ಬಗ್ಗೆ ಆಡಿದ ಮಾತುಗಳು ಎಲ್ಲರ ಗಮನ ಸೆಳೆಯುತ್ತಿವೆ. ರವಿಚಂದ್ರನ್ ಅವರ ಸಿನಿಮಾಗಳು ನಾಯಕಿಯಾಗಿ ನಟಿಸಬೇಕು ಎಂದರೆ ನಿಜವಾಗಿಯೂ ಅದೃಷ್ಟ ಇರಬೇಕು ಯಾಕೆಂದರೆ ಸಿನಿಮಾದಲ್ಲಿ ಅವರು ಬೇರೆ ಎಲ್ಲರಿಗಿಂತ ನಟಿಯ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಮಲ್ಲ ಎನ್ನುವ ಸಿನಿಮಾದಲ್ಲಿ ನಾನು ರವಿಚಂದ್ರನ್ ಅವರ ಜೊತೆ ಅಭಿನಯಿಸಿದ್ದೇನೆ ಆ ಸಿನಿಮಾಗೆ ನಾನು ಆಯ್ಕೆಯಾಗುತ್ತೇನೆ ಎಂದೇ ಅಂದುಕೊಂಡಿರಲಿಲ್ಲ. ನಾನು ಹೈಟ್ ಕಡಿಮೆ ಇದ್ದ ಕಾರಣ ರಿಜೆಕ್ಟ್ ಆಗುತ್ತೇನೆ ಎಂದುಕೊಂಡಿದ್ದೆ ಆದರೆ ನನ್ನ ಜೊತೆ ಒಂದೇ ಒಂದು ಸನ್ನಿವೇಶದಲ್ಲಿ ಅಭಿನಯಿಸಿದ ಬಳಿಕ ರವಿಚಂದ್ರನ್ ಅವರು ಸಿನಿಮಾ ಗೆ ನನ್ನನ್ನು ಒಪ್ಪಿಕೊಂಡು ಬಿಟ್ಟರು.

ನಂತರ ನಡೆದದ್ದೆಲ್ಲ ಒಂದು ಇತಿಹಾಸ. ಮಲ್ಲ ಸಿನಿಮಾದಲ್ಲಿ ನನ್ನ ಮತ್ತು ರವಿಚಂದ್ರನ್ ಅವರ ಕಾಂಬಿನೇಷನ್ ಅನ್ನು ಎಲ್ಲರೂ ತುಂಬಾ ಮೆಚ್ಚಿಕೊಂಡರು. ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಹೆಚ್ಚಾಗಿ ಹಾಡುಗಳು ಕೂಡ ಹಿಟ್ ಆಗುತ್ತದೆ ಮತ್ತು ಹಾಡುಗಳಲ್ಲಿ ಅವರು ವಿಭಿನ್ನ ಪ್ರಯೋಗ ಮಾಡುವುದಕ್ಕೆ ಅವರು ಫೇಮಸ್ ಆಗಿದ್ದಾರೆ. ಮತ್ತು ಅವರ ಸಿನಿಮಾಗಳಲ್ಲಿ ನಟಿಯರನ್ನು ತುಂಬಾ ಗ್ಲಾಮರಸ್ಸಾಗಿ ಹಾಗೂ ಹಾಡುಗಳಲ್ಲಿ ಅವರ ಸೌಂದರ್ಯವನ್ನು ಇನ್ನಷ್ಟು ಹಿಮ್ಮಡಿಗಳುವಂತೆ ತೋರಿಸುತ್ತಾರೆ. ನಿಜವಾಗಿಯೂ ಸಿನಿಮಾರಂಗದಲ್ಲಿ ರವಿಚಂದ್ರನ್ ಅವರಿಗೆ ಅವರೇ ಸಾಟಿ. ಅವರಷ್ಟು ನಟಿಯರ ಮೇಲೆ ಪ್ರಯೋಗ ಮಾಡುವವರು ಯಾರು ಇಲ್ಲ. ಈಗಾಗಲೇ ರವಿಚಂದ್ರನ್ ಅವರ ಹಲವು ಸಿನಿಮಾಗಳಲ್ಲಿ ಇಂತಹ ಪ್ರಯೋಗಗಳನ್ನು ನೀವೆಲ್ಲ ನೋಡಿದ್ದೀರಿ. ಯಾವಾಗೂ ಸಿನಿಮಾ ಬಗ್ಗೆ ಅಷ್ಟೊಂದು ಕ್ರೇಝ್ ಇಟ್ಟುಕೊಂಡಿರುವ ಕನಸುಗಾರ ಅವರು ಎಂದು ಹೇಳಿದ್ದಾರೆ.

ಸಿನಿಮಾ ಹಾಡುಗಳಲ್ಲಿ ನನ್ನನ್ನು ಎಷ್ಟು ಸುಂದರವಾಗಿ ತೋರಿಸಿದ್ದಾರೆ ಎಂದು ನೀವೆಲ್ಲ ನೋಡಿದ್ದೀರಿ. ಹೀಗಾಗಿ ಅವರ ಸಿನಿಮಾಗಳು ನನಗೆ ತುಂಬಾ ಇಷ್ಟ ಜೊತೆಗೆ ಮತ್ತೊಮ್ಮೆ ಅವರ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ದೊರೆತರೆ ಖಂಡಿತ ಒಪ್ಪಿಕೊಳ್ಳುತ್ತೇನೆ ಎಂದು ಕೂಡ ಹೇಳಿಕೊಂಡಿರುವ ಅವರು ಕ್ರೇಜಿಸ್ಟಾರ್ ಎನ್ನುವ ಸಿನಿಮಾದಲ್ಲೂ ಕೂಡ ರವಿಚಂದ್ರನ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈಗ ಸಾಮಾಜಿಕ ಜಾಲತಾಣದಲ್ಲಿ ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ರವಿಚಂದ್ರನ್ ಹಾಗೂ ಪ್ರಿಯಾಂಕ ಅವರು ಮತ್ತೆ ಒಟ್ಟಿಗೆ ಹಾಡೊಂದಕ್ಕೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲಾಗುತ್ತಿದೆ. ಮತ್ತೆ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರಾ ಎನ್ನುವ ಅನುಮಾನಗಳಿಗೆ ಇದು ಕಾರಣವಾಗಿದೆ. ರವಿಚಂದ್ರನ್ ಮತ್ತು ಪ್ರಿಯಾಂಕಾ ಅವರನ್ನು ಒಟ್ಟಿಗೆ ನೋಡುವಂತಹ ಆಸೆ ನಿಮಗಿದ್ದರೆ ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ‌.