Home Blog Page 342

ವೈರಲ್ ಆಯ್ತು ರಾಯನ್ ಸರ್ಜಾ ಅವರನ್ನೆ ಹೊಲುತ್ತಿರುವ ಚಿರು ಅವರ ಹಳೆಯ ಫೋಟೋ, ಫೋಟೋ ನೋಡಿ ಕಣ್ಣೀರಿಟ್ಟ ಮೇಘನಾ ರಾಜ್

ಕನ್ನಡ ಚಲನಚಿತ್ರರಂಗಕ್ಕೆ ಯಾರ ಕೆ.ಟ್ಟ ದೃಷ್ಟಿ ಬಿದ್ದಿದ್ದೀಯೋ ಏನೋ ಕಳೆದ ಎರಡು ವರ್ಷದಿಂದ ಹಲವಾರು ಪ್ರತಿಭಾವಂತ ನಟರು ಹಾಗೂ ಸಹೃದಯಿ ಜೀವಿಗಳನ್ನು ಸಿನಿಮಾರಂಗವು ಕಳೆದುಕೊಳ್ಳುತ್ತಿದೆ. ಇದು ಕೇವಲ ಚಲನಚಿತ್ರರಂಗಕ್ಕೆ ಮಾತ್ರ ಆದ ನ.ಷ್ಟ.ವಂತು ಖಂಡಿತ ಅಲ್ಲ, ಇದು ಇಡೀ ಕರ್ನಾಟಕಕ್ಕೆ ಆದ ಅನ್ಯಾಯ ಎಂದು ಹೇಳಬಹುದು. ಚಿರಂಜೀವಿ ಸರ್ಜಾ ಸಂಚಾರಿ ವಿಜಯ್ ಇತ್ತೀಚಿಗೆ ಪುನೀತ್ ರಾಜಕುಮಾರ್ ಎಸ್ ಪಿ ಬಾಲಸುಬ್ರಮಣ್ಯಂ ಜಯಂತಿ ರಾಮು ಸತ್ಯಜಿತ್ ಶಿವರಾಮ್ ಅವರು ಹೀಗೆ ಹಲವಾರು ಕಣ್ಮಣಿಗಳನ್ನು ನಾವು ಕಳೆದುಕೊಂಡಿದ್ದೇವೆ. ಅದರಲ್ಲೂ ಅಕಾಲಿಕ ಮ.ರ.ಣ.ಕ್ಕೆ ತುತ್ತಾಗಿರುವ ಚಿರಂಜೀವಿ ಸರ್ಜಾ ಸಂಚಾರಿ ವಿಜಯ್ ಮತ್ತು ಪುನೀತ್ ರಾಜಕುಮಾರ್ ಅವರನ್ನು ನೆನೆದರೆ ಎಲ್ಲರ ಕರುಳು ಕೂಡ ಕಿತ್ತು ಬರುತ್ತದೆ. ದೇವರು ನಿಜಕ್ಕೂ ಕ್ರೂರಿ ಎಂದು ಅಭಿಮಾನಿಗಳು ಆ ವಿಧಿಗೆ ಶಾಪ ಹಾಕುತ್ತಿದ್ದಾರೆ.

ಯಾಕೆಂದರೆ ಚಿರಂಜೀವಿ ಸರ್ಜಾ ಅವರು ಮ.ರ.ಣ ಹೊಂದಿದಾಗ ಅವರ ವಯಸ್ಸು ಕೇವಲ 35 ಅಷ್ಟೇ. ಹತ್ತು ವರ್ಷಗಳ ಪ್ರೀತಿಯ ನಂತರ ವಿವಾಹ ಜೀವನಕ್ಕೆ ಕಾಲಿಟ್ಟಿದ ಮೇಘನಾ ರಾಜ್ ಹಾಗೂ ಚಿರಂಜೀವಿ ಅವರ ಮುದ್ದಾದ ಜೋಡಿ ಇಡೀ ಕರ್ನಾಟಕದಾದ್ಯಂತ ಫೇಮಸ್ ಆಗಿತ್ತು. ಸ್ಯಾಂಡಲ್ ವುಡ್ನ ಮೋಸ್ಟ್ ಕ್ಯೂಟೆಸ್ಟ್ ಕಪಲ್ ಗಳಾಗಿ ಹೆಸರುವಾಸಿಯಾಗಿದ್ದ ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಮೇಘನ ಅವರು ಚಿರು ಅವರ ಮಗುವನ್ನು ಹೊಟ್ಟೆಯಲ್ಲಿ ಹೊತ್ತಿದ್ದರು. ಆದರೆ ತನ್ನ ಕರುಳ ಕುಡಿ ಕಣ್ಣು ಬಿಡುವ ಮುನ್ನ ಆ ಕೂಸನ್ನು ನೋಡಿ ಕಣ್ತುಂಬಿಕೊಳ್ಳುವ ಮುನ್ನವೇ ಅಂದರೆ ಮೇಘನಾ ರಾಜ್ ಅವರು ಐದು ತಿಂಗಳ ಗರ್ಭಿಣಿ ಆಗಿರುವಾಗಲೇ ಚಿರಂಜೀವಿ ಸರ್ಜಾ ಅವರು ವಿಧಿಯಾಟಕ್ಕೆ ಬಲಿಯಾಗಿ ಹೋಗಿದ್ದಾರೆ. ಈ ವಿಷಯವನ್ನು ಕೇಳಿ ಇಡೀ ಕರ್ನಾಟಕವೇ ಮೇಘನಾ ರಾಜ್ ಅವರ ಮೇಲೆ ಕರುಣೆ ತೋರಿತ್ತು.

ನಗು ಮುಖದ ಚಿರು ಮುಂದೆಂದೂ ಮನಸ್ಪೂರ್ತಿ ನಗಲಾದಷ್ಟು ನೋವನ್ನು ಕುಟುಂಬಕ್ಕೆ ತುಂಬಿ ಕಾಣದ ಲೋಕಕ್ಕೆ ಮರೆಯಾಗಿ ಹೋದರು. ಚಿರಂಜೀವಿ ಸರ್ಜಾ ಅವರನ್ನು ಅವರ ತಮ್ಮ ಧ್ರುವ ಸರ್ಜಾ ಕೂಡ ಅಷ್ಟೇ ಪ್ರೀತಿಸುತ್ತಿದ್ದರು ಚಿಕ್ಕ ವಯಸ್ಸಿನಿಂದಲೂ ಅಣ್ಣನ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಇವರಿಬ್ಬರ ಬಾಂಧವ್ಯ ನೋಡಿ ಇಡೀ ಕರ್ನಾಟಕವೇ ಕೊಂಡಾಡಿತ್ತು. ಆದರೆ ಇಂದು ಧ್ರುವ ಸರ್ಜಾ ಅವರ ಮುಖದಲ್ಲಿ ಅವರ ಅಣ್ಣ ಇಲ್ಲದ ದುಃಖ ಎದ್ದು ಕಾಣುತ್ತಿದೆ. ಹಾಗೂ ಪತ್ನಿ ಮೇಘನಾ ರಾಜ್ ಅವರ ಸಂ.ಕ.ಟ.ವ.ನ್ನಂತು ಹೇಳತೀರದು. ಚಿರು ಪುತ್ರನಾದ ರಾಯನ್ ಸರ್ಜಾ ಅವರಿಗೆ ತಂದೆ ತಾಯಿ ಎಲ್ಲವೂ ಕೂಡ ಆಗಿ ಮೇಘನಾ ಅವರೇ ನೋಡಿಕೊಳ್ಳುತ್ತಿದ್ದಾರೆ. ಮಗನ ಎಲ್ಲ ಮೂಮೆಂಟ್ಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ ಮೇಘನಾ ಅವರು.

ಮೇಘನಾ ರಾಜ್ ಅವರು ಇತ್ತೀಚೆಗೆ ಚಿರಂಜೀವಿ ಸರ್ಜಾ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಪತಿ ಕುಟುಂಬದವರ ಜೊತೆ ರಾಯನ್ ಸರ್ಜಾ ಸಮಯ ಕಳೆದ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದರು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಫೋಟೋ ವೈರಲ್ ಆಗುತ್ತಿದೆ. ಚಿರಂಜೀವಿ ಸರ್ಜಾ ಅವರು ಅವರ ಅಜ್ಜಿ ಲಕ್ಷ್ಮೀದೇವಿ ಅವರ ಜೊತೆಯಲ್ಲಿ ತೆಗೆಸಿಕೊಂಡ ವೈಟ್ ಅಂಡ್ ಬ್ಲಾಕ್ ಫೋಟೋ ಅದು. ಇದರಲ್ಲಿ ವಿಶೇಷತೆ ಏನೆಂದರೆ ಈ ಫೋಟೋದಲ್ಲಿ ಚಿರಂಜೀವಿ ಸರ್ಜಾ ಅವರು ಥೇಟ್ ರಾಯನ್ ಸರ್ಜಾ ಅವರ ರೀತಿಯಲ್ಲೇ ಇದ್ದಾರೆ. ಅವರಿಬ್ಬರ ಫೋಟೋವನ್ನು ಒಟ್ಟಿಗೆ ಇಟ್ಟರೆ ಎರಡು ಬೇರೆ ಬೇರೆ ಫೋಟೋ ಎಂದು ಗುರುತಿಸಲಾಗದಷ್ಟು ಹೊಂದಾಣಿಕೆ ಅಪ್ಪ ಮಗನಲ್ಲಿ ಇದೆ. ಇದನ್ನು ನೋಡಿದ ಅಭಿಮಾನಿಗಳು ಚಿರು ಅವರೇ ಮತ್ತೆ ಹುಟ್ಟಿ ಬಂದಿದ್ದಾರೆ ಎನ್ನುತ್ತಿದ್ದಾರೆ. ನಿಮಗೆ ಏನಾನಿಸುತ್ತದೆ ಈ ಚಿತ್ರ ನೋಡಿದರೆ.? ತಪ್ಪದೆ ನಮಗೆ ಕಾಮೆಂಟ್ ಮಾಡಿ ಧನ್ಯವಾದಗಳು.

ದರ್ಶನ್ ಗೆ ಬಾಕ್ಸ್ ಆಫೀಸ್ ಸುಲ್ತಾನ ಎಂಬ ಹೆಸರಿಟ್ಟಿದ್ದು ಯಾರು ಗೊತ್ತ.?

ದರ್ಶನ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಹಲವು ಹೆಸರುಗಳಲ್ಲಿ ಕರೆಯುತ್ತಾರೆ ದಾಸ, ಚಾಲೆಂಜಿಂಗ್ ಸ್ಟಾರ್, ದಚ್ಚು, ಸುಂಟರಗಾಳಿ, ಒಡೆಯ, ಯಜಮಾನ ಈ ರೀತಿ ಹಲವು ಹೆಸರುಗಳಲ್ಲಿ ಕರೆದರೂ ಸ್ಯಾಂಡಲ್ವುಡ್ ಸುಲ್ತಾನ ಎಂದು ಹೇಳುವುದು ಸ್ವಲ್ಪ ಎಲ್ಲದಕ್ಕಿಂತ ವಿಶೇಷವಾಗಿದೆ. ದರ್ಶನ್ ಅವರನ್ನು ಹೀಗೆ ಹೇಳಲು ಕಾರಣ ಕೂಡ ಇದೆ ಮತ್ತು ದರ್ಶನ್ ಅವರನ್ನು ಯಾರು ಮೊದಲು ಈ ಹೆಸರಿನಿಂದ ಗುರುತಿಸಿದರು ಎನ್ನುವುದನ್ನು ಕೂಡ ತಿಳಿದುಕೊಳ್ಳಬೇಕು ಎಂದರೆ ಈ ಅಂಕಣವನ್ನು ಪೂರ್ತಿ ಓದಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದ ಹೆಸರಾಂತ ನಟ ತೂಗುದೀಪ್ ಶ್ರೀನಿವಾಸ್ ಅವರ ಹಿರಿಯ ಪುತ್ರ. ಇಷ್ಟು ದೊಡ್ಡ ನಟನ ಮಗನಾದರು ಕೂಡ ದರ್ಶನ್ ಅವರು ಬೆಳೆದಿದ್ದು ಅಪ್ಪನ ಹೆಸರು ಹೇಳಿಕೊಂಡು ಅಲ್ಲ, ತಮ್ಮ ಸ್ವಂತ ಪರಿಶ್ರಮದಿಂದ ಸ್ಯಾಂಡಲ್ವುಡ್ ನಲ್ಲಿ ಶಾಸ್ತ್ರಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

ಆರಂಭದಲ್ಲಿ ಲೈಟ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡ ದರ್ಶನ್ ಅವರು ಅವರ ತಂದೆ ತೀರಿಕೊಂಡ ಬಳಿಕ ಜೀವನ ನಡೆಸಲು ಹಲವಾರು ಕಷ್ಟಗಳನ್ನು ಪಟ್ಟಿದ್ದಾರೆ. ಸಂಸಾರ ನಿರ್ವಹಣೆಗಾಗಿ ಹಾಲನ್ನು ಕರೆದು ಮಾರುವ ವೃತ್ತಿಯನ್ನು ಕೂಡ ಮಾಡುತ್ತಿದ್ದ ದರ್ಶನ ಅವರು ವಿದ್ಯಾಭ್ಯಾಸದಲ್ಲಿ ಅಷ್ಟೊಂದು ಆಸಕ್ತಿ ತೋರದೆ ನೀನಾಸಂ ಸೇರಿಕೊಂಡು ರಂಗ ಶಿಕ್ಷಣದ ಕಡೆಗೆ ಗಮನಕೊಟ್ಟರು. ನಂತರ ಬಂದು ಚಲನಚಿತ್ರ ರಂಗದಲ್ಲಿ ಲೈಟ್ ಬಾಯ್ ಹಾಗೂ ಸಹಾಯಕ ನಿರ್ದೇಶಕನಾಗಿ ಸೇರಿಕೊಂಡರು ಇವರು. ಜೊತೆಗೆ ಮೊದಮೊದಲಿಗೆ ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಪಾತ್ರಗಳನ್ನು ಕೂಡ ಮಾಡಿದ್ದಾರೆ ದಾಸ. ದರ್ಶನ್ ಅವರು ಮೆಜೆಸ್ಟಿಕ್ ಸಿನಿಮಾದಲ್ಲಿ ನಾಯಕನಟನ ಪಾತ್ರಕ್ಕೆ ಆಯ್ಕೆಯಾದರು. ಮೆಜೆಸ್ಟಿಕ್ ಚಿತ್ರದ ಅದ್ಭುತವಾದ ಗೆಲುವಿನ ನಂತರ ನಡೆದಿದ್ದೆಲ್ಲ ಇತಿಹಾಸ ಎಂದೇ ಹೇಳಬಹುದು. ಆನಂತರ ಧ್ರುವ, ಕಿಟ್ಟಿ, ನಿನಗೋಸ್ಕರ ಈ ರೀತಿ ಸಿನಿಮಾಗಳಲ್ಲಿ ದರ್ಶನ್ ಅವರು ಕಾಣಿಸಿಕೊಂಡರು.

ಮತ್ತೊಮ್ಮೆ ಅವರಿಗೆ ಬ್ರೇಕ್ ನೀಡಿದ ಸಿನಿಮಾ ನನ್ನ ಪ್ರೀತಿಯ ರಾಮು. ಈ ಸಿನಿಮಾದಲ್ಲಿ ದರ್ಶನ್ ಅವರ ನಟನೆಗೆ ಮನಸೋಲದವರೇ ಇಲ್ಲ. ಇಂದಿಗೂ ಕೂಡ ದರ್ಶನ್ ಅವರ ಫೇವರೆಟ್ ಸಿನಿಮಾಗಳಲ್ಲಿ ಹಾಗೂ ಅಭಿಮಾನಿಗಳಿಗೆ ದರ್ಶನ್ ಅವರಲ್ಲಿ ಇಷ್ಟವಾದ ಸಿನಿಮಾಗಳಲ್ಲಿ ನಮ್ಮ ಪ್ರೀತಿಯ ರಾಮು ಮೊದಲನೇ ಸ್ಥಾನದಲ್ಲಿ ಇರುತ್ತದೆ. ಈ ಸಿನಿಮಾದ ಗೆಲುವಿನ ನಂತರ ದರ್ಶನ್ ಅವರ ವೃತ್ತಿ ಮತ್ತೊಂದು ರೀತಿಯಲ್ಲಿ ಬದಲಾಗಿತ್ತು. ನಂತರ ದರ್ಶನ್ ಅವರು ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ. ಮತ್ತೊಂದು ಹೆಮ್ಮೆಯ ವಿಚಾರ ಏನೆಂದರೆ ಕನ್ನಡದಲ್ಲಿ ಎಲ್ಲಾ ನಟರಿಗಿಂತ ದರ್ಶನ್ ಅವರಿಗೆ ಅಭಿಮಾನಿಗಳು ಹೆಚ್ಚಾಗಿ ಇದ್ದಾರೆ. ದರ್ಶನ್ ಅವರು ಕೂಡ ಅಭಿಮಾನಿಗಳನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ ಇದೇ ಕಾರಣಕ್ಕಾಗಿ ದರ್ಶನ್ ಎಂದರೆ ಎಲ್ಲರಿಗೂ ಪ್ರೀತಿ.

ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಇವರು ಮೈಸೂರಿನ ತಮ್ಮ ಫಾರಂ ಹೌಸಿನಲ್ಲಿ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ ಹಾಗೂ ಝೂನಲ್ಲಿ ಕೂಡ ಹಲವಾರು ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ವೈಯುಕ್ತಿಕ ಬದುಕಿನಲ್ಲಿ ಮಾತ್ರ ಕೆಲವೊಮ್ಮೆ ವಿವಾದ ಮಾಡಿಕೊಳ್ಳುವ ದರ್ಶನವರು ಸಿನಿಮಾ ವಿಚಾರವಾಗಿ ಹೇಳುವುದಾದರೆ ಸ್ಯಾಂಡಲ್ವುಡ್ ಅನ್ನು ಆಳುತ್ತಿರುವ ಕಿಂಗ್ ಎಂದು ಹೇಳಬಹುದು ಹಾಗಾಗಿ ಇವರನ್ನು ಬಾಕ್ಸ್ ಆಫೀಸ್ ಸುಲ್ತಾನ ಎಂದು ಕೂಡ ಕರೆಯುತ್ತಾರೆ. ಅವರನ್ನು ಮೊದಲು ಈ ಹೆಸರಿನಲ್ಲಿ ಕರೆದಿದ್ದು ಕನ್ನಡದ ಹೆಸರಾಂತ ಪತ್ರಕರ್ತ “ಪಾರ್ಥ ಸಾರಥಿ” ಅವರು. ದರ್ಶನ್ ಅವರ ಸಿನಿಮಾಗಳು ಹಿಟ್ ಆದರೆ ಅದು ಎಷ್ಟರ ಮಟ್ಟಿಗೆ ಹಿಸ್ಟರಿ ಕ್ರಿಯೇಟ್ ಮಾಡುತ್ತದೆ ಮತ್ತು ಗಲ್ಲಾ ಪೆಟ್ಟಿಗೆಯನ್ನು ಎಷ್ಟು ಭರ್ತಿ ಮಾಡುತ್ತದೆ ಎನ್ನುವುದನ್ನು ಹತ್ತಿರದಿಂದ ಕಂಡಿದ್ದ ಇವರು ದರ್ಶನ್ ಅವರ ಆಪ್ತ ಬಳಗದ ಸ್ನೇಹಿತರು ಕೂಡ ಆಗಿದ್ದರು. ದರ್ಶನ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ವಿಕ್ರಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ನಟಿ ಜಾಕ್ವೇಲಿನ್ ಪಡೆದ ದುಬಾರಿ ಎಷ್ಟು ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ತಲೆ ತಿರುಗುತ್ತೆ.

ವಿಕ್ರಾಂತ್ ರೋಣ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಚಿತ್ರ. ಅನೂಪ್ ಭಂಡಾರಿ ಅವರ ನಿರ್ದೇಶನದ ಈ ಸಿನಿಮಾ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹೊಸದೊಂದು ಟ್ರೆಂಡ್ ಸೃಷ್ಟಿ ಮಾಡುತ್ತಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ವಿಶೇಷತೆಯಿಂದ ಸುದ್ದಿಯಾಗಿರುವ ಈ ಸಿನಿಮಾ ಜುಲೈ ತಿಂಗಳಿನ 29ನೇ ತಾರೀಖಿನಂದು ಬಿಡುಗಡೆಯಾಗಲು ಸಜ್ಜು ಮಾಡಿಕೊಳ್ಳುತ್ತಿದೆ. ಈ ಸಂಬಂಧವಾಗಿ ಈಗಾಗಲೇ ಪ್ರಚಾರ ಕಾರ್ಯಕ್ರಮಕ್ಕೆ ಚಾಲ್ತಿ ನೀಡಿರುವ ಸಿನಿಮಾ ತಂಡ ಟ್ರೈಲರ್ ಕೂಡ ಲಾಂಚ್ ಮಾಡಿದೆ. ಈ ಸಿನಿಮಾದ ಫಸ್ಟ್ ಲುಕ್
ಹಾಗೂ ಟೈಟಲ್ ಲಾಂಚ್ ದುಬೈನ ಬುರ್ಜ ಖಲೀಫಾ ಕಟ್ಟಡದ ಮೇಲೆ ಬೆಳಗಿಸಿದ ಖ್ಯಾತಿ ಸುದೀಪ್ ಅವರಿಗೆ ಸಲ್ಲುತ್ತದೆ. ಇದುವರೆಗೆ ಈ ರೀತಿಯ ಹೊಸ ಪ್ರಯೋಗವನ್ನು ಸಿನಿಮಾದ ಲೋಗೋಗಾಗಿ ಪ್ರಯತ್ನ ಮಾಡಿದ ಇತಿಹಾಸ ಸುದೀಪ್ ಅವರಿಂದ ಶುರುವಾಗಿದೆ.

ಇದಾದ ಬಳಿಕ ಸಹಜವಾಗಿ ಇಡೀ ಪ್ರಪಂಚಕ್ಕೆ ವಿಕ್ರಾಂತ್ ರೋಣ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಭಾರತದ ಆರು ಭಾಷೆಗಳಲ್ಲಿ ರಾರಾಜಿಸಲು ಸಿದ್ಧವಾಗಿದೆ. ಅಲ್ಲದೆ ವಿದೇಶಿ ಭಾಷೆಗಳಲ್ಲಿ ಕೂಡ ವಿಕ್ರಾಂತ್ ರೋಣ ಸಿನಿಮಾವು ತೆರೆ ಕಾಣುತ್ತಿದೆ. ಇಲ್ಲಿಯವರೆಗೆ ಭಾರತದಾದ್ಯಂತ ಎಲ್ಲಾ ಭಾಷೆಗಳ ಸಿನಿಮಾಗಳಲ್ಲೂ ಕೂಡ ಸುದೀಪ್ ಅವರಿಗೆ ಬೇಡಿಕೆ ಇದ್ದು ಹಾಗೂ ಸುದೀಪ್ ಅವರಿಗೆ ಎಲ್ಲಾ ಭಾಷೆಗಳಲ್ಲೂ ಕೂಡ ಅಭಿಮಾನಿಗಳು ಇದ್ದಾರೆ. ವಿಕ್ರಾಂತ್ ರೋಣ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾದ ಬಳಿಕ ಸುದೀಪ್ ಅವರು ನ್ಯಾಷನಲ್ ಸ್ಟಾರ್ ಮಾತ್ರವಲ್ಲದೆ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಬದಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕಂದರೆ ಇಷ್ಟು ಮಟ್ಟದ ಒಂದು ವಿಶ್ವಾಸವನ್ನು ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ನೋಡಿದ ಸಿನಿಮಾ ವಿಮರ್ಶಕರು ಹೇಳುತ್ತಿದ್ದಾರೆ.

ಸಿನಿಮಾ ತಂಡ ಮೊದಲಿಗೆ ರಾರಾ ರಕ್ಕಮ್ಮ ಎನ್ನುವ ಐಟಂ ಹಾಡನ್ನು ರಿಲೀಸ್ ಮಾಡಿತ್ತು. ಹಾಡು ಬಿಡುಗಡೆಗೊಂಡ ಕೆಲವೇ ನಿಮಿಷಗಳಲ್ಲಿ ದಾಖಲೆ ಮಟ್ಟದ ವೀಕ್ಷಣೆ ಹಾಗೂ ಲೈಕ್ಸ್ ಪಡೆದು ಜನಮನ್ನಣೆ ಗಳಿಸಿತು. ಅದರಲ್ಲೂ ಕಿಚ್ಚ ಸುದೀಪ್ ಅವರು ಈ ಹಾಡಿಗೆ ರೀಲ್ಸ್ ಮಾಡಿದ ಬಳಿಕ ಇದು ಮತ್ತೊಂದು ಮಟ್ಟಕ್ಕೆ ಪ್ರಚಾರ ಪಡೆದುಕೊಂಡಿತು ಎಂದೇ ಹೇಳಬಹುದು. ಕಿಚ್ಚ ಸುದೀಪ್ ಅವರ ಹೆಜ್ಜೆಗಳನ್ನು ಅನುಸರಿಸಿದ ಅವರ ಅಭಿಮಾನಿಗಳು ಕಿರುತೆರೆ ಕಲಾವಿದರು ಮತ್ತು ಫೇಮಸ್ ಸೆಲೆಬ್ರಿಟಿಗಳು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಎಲ್ಲರೂ ಕೂಡ ರೀಲ್ಸ್ ಮಾಡಿ ತಮ್ಮ ತಮ್ಮ ಅಕೌಂಟ್ ಗಳಲ್ಲಿ ಶೇರ್ ಮಾಡಿ ಖುಷಿಪಟ್ಟರು. ಸದ್ಯಕ್ಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನದ್ದೇ ಅಬ್ಬರ ಎನ್ನಬಹುದು ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಕೂಡ ಈ ಹಾಡನ್ನು ಬಹಳ ಇಷ್ಟಪಟ್ಟು ಆ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ.

ಸಿನಿಮಾದಲ್ಲಿ ಈ ಹಾಡಿಗೆ ಸುದೀಪ್ ಅವರ ಜೊತೆ ಚಾಕ್ವೆಲಿನ್ ಅವರು ಕುಣಿದಿದ್ದಾರೆ. ಜಾಕ್ವೆಲಿನ್ ಅವರು ಬಹು ಬೇಡಿಕೆಯ ನಟಿ, ಸಂಭಾವನೆಯ ವಿಷಯದಲ್ಲೂ ಕೂಡ ಜಾಕ್ವೆಲಿನ್ ಆಗಾಗ ಸುದ್ದಿ ಆಗುತ್ತಾರೆ. ಹಾಗಾಗಿ ಈ ಸಿನಿಮಾಕ್ಕಾಗಿ ಅವರು ಎಷ್ಟು ಹಣ ಪಡೆದಿರಬಹುದು ಎಂದು ಎಲ್ಲರೂ ಕುತೂಹಲ ಭರಿತರಾಗಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದ ಅಭಿನಯಕ್ಕಾಗಿ ಜಾಕ್ವೆಲಿನ್ ಅವರು ಬರೋಬ್ಬರಿ ನಾಲ್ಕು ಕೋಟಿ ರೂಗಳನ್ನು ಸಂಭಾವನೆ ರೂಪದಲ್ಲಿ ತೆಗೆದುಕೊಂಡಿದ್ದಾರೆ ಸದ್ಯಕ್ಕೆ ಹಾಡೊಂದರಲ್ಲಿ ಕಾಣಿಸಿಕೊಂಡಿರುವ ರಂಜಿಸಿರುವ ಜಾಕ್ವೆಲಿನ್ ಅವರ ಪಾತ್ರದ ಬಗ್ಗೆ ಕೂಡ ಜನರಿಗೆ ಆಸಕ್ತಿ ಹೆಚ್ಚಾಗುತ್ತಿದೆ. ಒಂದು ಹಾಡಿಗೆ 4 ಕೋಟಿ ಸಂಭಾವನೆ ಪಡೆದಿರುವ ಜಾಕ್ವೇಲಿನ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ.

ಅಪ್ಪುಗೆ ಚಿನ್ನದ ಸರ ಗಿಫ್ಟ್ ನೀಡಿದ ಅಭಿಮಾನಿ, ಆದರೆ ಅಪ್ಪು ಮಾಡಿದ್ದೇನು ಗೊತ್ತಾ.?

ರಾಜ್ ಕುಟುಂಬ ಅಭಿಮಾನಿಗಳೇ ದೇವರು ಎಂದು ನಂಬಿ ಬದುಕುತ್ತಿದೆ. ಆದರೆ ಕರ್ನಾಟಕದ ಜನತೆ ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳ ದೇವರು ಎಂದು ಒಪ್ಪಿಕೊಂಡಿದ್ದಾರೆ. ಇದಕ್ಕೆ ಕಾರಣ ಇಷ್ಟೇ ಅಪ್ಪು ಅವರು ಅಭಿಮಾನಿಗಳ ಮೇಲೆ ಇಟ್ಟಿದ್ದ ಪ್ರೀತಿ ವಿಶ್ವಾಸ ಹಾಗೂ ಕರ್ನಾಟಕದ ಜನತೆ ಮೇಲೆ ಅಪ್ಪು ಅವರಿಗಿಂತ ಕಾಳಜಿ ಮತ್ತು ಸಮಾಜಕ್ಕಾಗಿ ಅಪ್ಪು ಅವರು ಮಾಡಿದ್ದ ಸಮಾಜ ಸೇವೆ. ಅಪ್ಪು ಅವರನ್ನು ಒಬ್ಬ ನಟನಾಗಿ ಇಡೀ ಕರ್ನಾಟಕವೇ ಬಾಲ್ಯದಿಂದಲೇ ಒಪ್ಪಿಕೊಂಡಿತ್ತು ಅಪ್ಪು ಅವರ ನಟನೆ ಅಪ್ಪು ಅವರ ಹಾಡಿನ ಶೈಲಿ, ಅವರ ಮಧುರವಾದ ಸ್ವರ ಎಲ್ಲಕ್ಕಿಂತ ಹೆಚ್ಚಾಗಿ ಅವರು ಮಾಡುತ್ತಿದ್ದ ಸ್ಟಂಟ್ಸ್ ಗಳು ಹಾಗೂ ಅವರ ಡ್ಯಾನ್ಸ್ ಗೆ ಫಿದಾ ಆಗದವರೆಲ್ಲ ಇಲ್ಲ. ಕರ್ನಾಟಕದ ಪ್ರತಿ ಮನೆ ಮನೆಗಳಲ್ಲೂ ಕೂಡ ಅಪ್ಪು ಅಭಿಮಾನಿಗಳು ಇದ್ದರು.

ಇದಕ್ಕೆ ಸಾಕ್ಷಿ ಎಂದರೆ ಕರ್ನಾಟಕದಲ್ಲಿ ಅಲ್ಲದೆ ಭಾರತದಲ್ಲಿಯೇ ಇವರಿಗೆ ಯಾರ ಸಾವಿಗೂ ಸೇರದಷ್ಟು ಅಭಿಮಾನಿಗಳು ಸುಮಾರು 25 ಲಕ್ಷಕ್ಕೂ ಹೆಚ್ಚಿನ ಜನ ಬಂದು ಅಪ್ಪು ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು ಹಾಗೂ ಕೊನೆಯದಾಗಿ ಅವರ ದರ್ಶನ ಪಡೆದಿದ್ದರು. ಆದರೆ ಅಪ್ಪು ಅವರ ಸಾ.ವಿ.ನ ಬಳಿಕ ಅವರು ಮಾಡುತ್ತಿದ್ದ ಸಮಾಜ ಸೇವೆ ಬಗ್ಗೆ ಜನರಿಗೆ ತಿಳಿದ ಬಳಿಕ ಅದು ಇನ್ನೂ ಎರಡು ಪಟ್ಟು ಹೆಚ್ಚಾಯಿತು ಎಂದು ಹೇಳಬಹುದು. ಇಂದಿಗೂ ಸಹ ಅಪ್ಪು ಅವರ ಸ್ಮಾರಕಕ್ಕೆ ಭೇಟಿ ನೀಡುತ್ತಿರುವ ಸಂಖ್ಯೆಯೇನೂ ಕಡಿಮೆ ಆಗಿಲ್ಲ. ಅಪ್ಪು ಅವರನ್ನು ಕರ್ನಾಟಕದಲ್ಲಿ ಒಬ್ಬ ದೇವರ ರೀತಿಯಲ್ಲಿ ಜನರು ಕಾಣುತ್ತಿದ್ದಾರೆ. ಹಾಗೂ ಅಪ್ಪು ಅವರ ವ್ಯಕ್ತಿತ್ವ ಏನು ಎನ್ನುವುದನ್ನು ಅವರ ಹತ್ತಿರದವರಲ್ಲಿ ಕೇಳಿದರೆ ನಿಜಕ್ಕೂ ಕಣ್ಣಂಚಿನಲ್ಲಿ ನೀರು ತುಂಬುತ್ತದೆ.

ಅಜಾತಶತ್ರು ಅಪ್ಪು ಅವರು ಎಂದು ಹೇಳಬಹುದು ಏಕೆಂದರೆ ಕನ್ನಡದಲ್ಲಿ ಸ್ಟಾರ್ ವಾರ್ ಇರುವುದು ಎಲ್ಲರಿಗೂ ತಿಳಿದಿದೆ. ಆದರೆ ಪುನೀತ್ ರಾಜಕುಮಾರ್ ಅವರು ಯಾವ ನಟನೊಂದಿಗೂ ಇದುವರೆಗೆ ವಿವಾದ ಮಾಡಿಕೊಂಡಿಲ್ಲ. ಪ್ರತಿಯೊಬ್ಬರೂ ಅಪ್ಪು ಅವರ ಸ್ನೇಹವನ್ನು ಬಯಸುತ್ತಿದ್ದರು ಅಷ್ಟು ಸಹೃದಯಿ ಸಹಜ ಜೀವಿ ಅಪ್ಪು ಅವರು. ಪುನೀತ್ ರಾಜಕುಮಾರ್ ಅವರನ್ನು ಅಭಿಮಾನಿಗಳು ಕೂಡ ಅಷ್ಟೇ ಇಷ್ಟಪಡುತ್ತಿದ್ದರು ಅದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ ಒಮ್ಮೆ ವ್ಯಕ್ತಿ ಒಬ್ಬ ಪುನೀತ್ ರಾಜಕುಮಾರ್ ಅವರಿಗೆ ಪ್ರೀತಿಯಿಂದ ಹಾಗೂ ಅಭಿಮಾನದಿಂದ ಚಿನ್ನದ ಸರವನ್ನು ಉಡುಗೊರೆ ಮಾಡಿಸಿಕೊಂಡು ತಂದಿದ್ದರು ಅದಕ್ಕೆ ಡಾಕ್ಟರ್ ರಾಜಕುಮಾರ್ ಅವರ ಡಾಲರ್ ಕೂಡ ಇತ್ತು. ಅದನ್ನು ಪುನೀತ್ ರಾಜಕುಮಾರ್ ಅವರ ಕೊರಳಿಗೆ ಅಭಿಮಾನಿಯೇ ಬಹಳ ಇಷ್ಟಪಟ್ಟು ಹಾಕಿದ್ದರು. ಅಭಿಮಾನಿ ಮನಸ್ಸನ್ನು ನೋಯಿಸಲು ಇಷ್ಟ ಪಡದ ಪುನೀತ್ ರಾಜಕುಮಾರ್ ಅವರು ಅದನ್ನು ಹಾಕಿಸಿಕೊಂಡರು.

ಆದರೆ ಒಂದು ಕ್ಷಣದ ನಂತರ ಅಷ್ಟೇ ನಯವಾಗಿ ನಾನು ಹಾಕಿಕೊಂಡರೆ ಮತ್ತೆ ತೆಗೆಯಬೇಕಾಗುತ್ತದೆ ಆದರೆ ಅದನ್ನು ನೀವೇ ಯಾವಾಗಲೂ ಹಾಕಿಕೊಂಡಿರಿ ಎಂದು ಪ್ರೀತಿಯಿಂದ ಅಭಿಮಾನಿಯ ಕೊರಳಿಗೆ ಪುನೀತ್ ಅವರೇ ಮತ್ತೆ ಹಾಕಿಬಿಟ್ಟರು. ಆ ವ್ಯಕ್ತಿ ಬೇರೆ ಯಾರು ಅಲ್ಲ ಶ್ರೀನಿವಾಸ್ ಎನ್ನುವ ರಾಜ್ ಕುಟುಂಬದ ಬಹುದೊಡ್ಡ ಅಭಿಮಾನಿ. ಹಾಸನದಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಇವರು ಪುನೀತ್ ಕುಟುಂಬಕ್ಕೆ ತುಂಬಾ ಆತ್ಮೀಯರು. ಹಿಂದೊಮ್ಮೆ ಪುನೀತ್ ರಾಜಕುಮಾರ್ ಅವರಿಗೆ ಬೆಳ್ಳಿಯಲ್ಲಿ ಡಾಕ್ಟರ್ ರಾಜಕುಮಾರ್ ಅವರ ಫೋಟೋವನ್ನು ಕೂಡ ತಿದ್ದಿಸಿ ಗಿಫ್ಟ್ ಮಾಡಿದ್ದರು. ಇಂದಿಗೂ ಸಹ ಪುನೀತ್ ರಾಜಕುಮಾರ್ ಅವರ ಮನೆಯಲ್ಲಿ ಆ ಗಿಫ್ಟ್ ಇದೆ. ತಮ್ಮ ಮನೆಯಲ್ಲಿ ಕೂಡ ಅದೇ ರೀತಿ ಹೋಲುವ ಫೋಟೋವನ್ನು ಇಟ್ಟುಕೊಂಡು ಪೂಜಿಸುತ್ತಿದ್ದಾರೆ ಈ ಅಭಿಮಾನಿ. ಅಭಿಮಾನಿ ತಂದಿದ್ದ ಚೈನನ್ನು ಮತ್ತೆ ಅವರಿಗೆ ಹಿಂತಿರುಗಿಸಿದರೆ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಪವಿತ್ರ ಲೋಕೇಶ್ ಅವರನ್ನು ತೆಲುಗು ಚಿತ್ರರಂಗದಿಂದ ಬ್ಯಾನ್ ಮಾಡಿದ್ದಾರೆ ಯಾಕೆ ಗೊತ್ತಾ.?

ಕಳೆದ ಕೆಲವು ದಿನಗಳಿಂದ ಕನ್ನಡ ಹಾಗೂ ತೆಲುಗು ಭಾಷೆಯ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ಪವಿತ್ರ ಲೋಕೇಶ್ ಹಾಗೂ ತೆಲುಗು ನಿರ್ಮಾಪಕ ನರೇಶ್ ಅವರ ಸಂಬಂಧದ ವಿಚಾರ ಸುದ್ದಿಯಾಗುತ್ತಲೇ ಇದೆ. ಮೊದಮೊದಲಿಗೆ ಇವರಿಬ್ಬರಿಗೂ ಮದುವೆ ಆಗಿದೆ ಎಂದು ಶುರುವಾದ ಈ ಸುದ್ದಿ ಎಲ್ಲಾ ಕಡೆ ಹಬ್ಬುತ್ತಿದ್ದಂತೆ ದಿಢೀರ್ ಎಂದು ಮಾಧ್ಯಮಗಳ ಮುಂದೆ ಬಂದ ನರೇಶ್ ಅವರ ಮೂರನೇ ಪತ್ನಿ ಇವರಬ್ಬಿರ ನಡುವೆ ಇರುವುದು ಬಿಜಿನೆಸ್ ಅಷ್ಟೇ ಎನ್ನುವ ಹೇಳಿಕೆಯನ್ನು ಕೊಟ್ಟರು. ಹಾಗೆಯೇ ಮಾಧ್ಯಮಗಳ ಮುಂದೆ ಕೂತು ತಮ್ಮ ಅಳಲನ್ನು ತೋಡಿಕೊಂಡ ರಮ್ಯ ಅವರು ಪವಿತ್ರ ಲೋಕೇಶ್ ಅವರ ಮೇಲೆ ಹಲವಾರು ಆ.ರೋ.ಪ.ಗಳನ್ನು ಕೂಡ ಹೊರಿಸಿದರು. ಮತ್ತು ಮಾಧ್ಯಮಗಳು ಲೋಕೇಶ್ ಅವರ ಪತಿ ಸುಚೇಂದ್ರ ಪ್ರಸಾದ್ ಅವರನ್ನು ಕೂಡ ಹುಡುಕಿಕೊಂಡು ಹೋಗಿ ಹಲವಾರು ಪ್ರಶ್ನೆಗಳನ್ನು ಮಾಡಿದ್ದರು.

ಅಲ್ಲಿಯೂ ಕೂಡ ಸುಚೇಂದ್ರಾ ಪ್ರಸಾದ್ ಅವರು ಪವಿತ್ರ ಲೋಕೇಶ್ ಅವರ ಬಗ್ಗೆ ಮಾತನಾಡಿ ಅವರ ವ್ಯಕ್ತಿತ್ವ ಎಂತಹದ್ದು ಎಂದು ಎಲ್ಲರಿಗೂ ತಿಳಿಯುವ ಹಾಗೆ ಮಾತನಾಡಿದರು. ಇಷ್ಟಕ್ಕೆ ನಿಲ್ಲದ ಪವಿತ್ರ ಲೋಕೇಶ್ ಅವರು ಇವರಿಬ್ಬರ ಹೇಳಿಕೆಗಳಿಗೆ ತಿರುಗೇಟು ಕೊಡುವ ಸಲುವಾಗಿ ತಾವೇ ಒಂದು ಪ್ರೆಸ್ ಮೀಟ್ ಕೂಡ ಕರೆದಿದ್ದರು. ಅಲ್ಲಿ ಅವರ ಮೇಲೆ ಇರುವ ಆರೋಪಗಳನ್ನು ಸಮರ್ಥಿಸಿಕೊಂಡ ಪವಿತ್ರ ಲೋಕೇಶ್ ಅವರು ರಮ್ಯಾ ಮತ್ತು ಸುಚೇಂದ್ರ ಪ್ರಸಾದ್ ಅವರು ತಮ್ಮ ಬಗ್ಗೆ ಆಡಿರುವ ಅಷ್ಟು ಮಾತುಗಳು ಸಂಪೂರ್ಣವಾಗಿ ನಿಜವಲ್ಲ ಎಂದು ವಾದ ಮಾಡಿದರು. ಹೀಗೆ ನಡೆಯುತ್ತಿದ್ದ ವಾಕ್ ಸಮರ ಪ್ರತಿದಿನ ಕನ್ನಡಿಗರಿಗೆ ಟಿವಿ ಮುಂದೆ ಕುಳಿತು ನೋಡಿ ನೋಡಿ ಬೇಸವರನ್ನು ಉಂಟು ಮಾಡಿತ್ತು ಜೊತೆಗೆ ತೆಲುಗು ಪ್ರೇಕ್ಷಕರು ಕೂಡ ಇದರಿಂದ ಬೇಸತ್ತು ಹೋದರು.

ನಂತರ ಮೈಸೂರಿನ ಹೋಟೆಲ್ ಮುಂದೆ ನಡೆದ ಹೈಡ್ರಾಮದಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಅವರು ನಡೆದುಕೊಂಡ ರೀತಿ ನೋಡಿದರೆ ನಿಜಕ್ಕೂ ಎಲ್ಲಾರಿಗೂ ಅಸಹ್ಯ ಎನಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಇವರ ವಿಡಿಯೋಗಳನ್ನು ನೋಡುತ್ತಿರುವ ನೆಟ್ಟಿಗರು ಕೂಡ ಕೋಪಗೊಂಡು ಇವರ ನಡೆಗಳ ಬಗ್ಗೆ ಕಮೆಂಟ್ ಮಾಡಿ ಉಗಿಯುತ್ತಿದ್ದಾರೆ. ಪವಿತ್ರ ಲೋಕೇಶ್ ಅವರು ಹಣದ ಆಸೆಗಾಗಿ ಹೀಗೆಲ್ಲ ಮಾಡಿದ್ದಾರೆ ಎನ್ನುವ ಅಪವಾದ ಕೆಲವು ಜನ ಹೇಳುವುದಾದರೆ, ಪವಿತ್ರ ಲೋಕೇಶ್ ಅವರು ಕೂಡ ಅವರ ತಂದೆ ಮೈಸೂರು ಲೋಕೇಶ್ ಅವರ ರೀತಿಯಲ್ಲೇ ನಡೆದುಕೊಂಡು ಅಪಮಾನ ಮಾಡಿಕೊಂಡರು ಎಂದು ಕೆಲವು ಜನ ಹೇಳುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಕೇರ್ ಮಾಡದ ಪವಿತ್ರ ಲೋಕೇಶ್ ಅವರು ತಾವು ಮಾಡಿದ್ದೆ ಸರಿ ಎನ್ನುವ ರೀತಿ ಇದ್ದರು ಆದರೆ ಈಗ ತೆಲುಗು ಚಿತ್ರರಂಗ ಅವರಿಗೊಂದು ಶಾಕ್ ಸುದ್ದಿ ನೀಡಿದೆ.

ಇತ್ತೀಚಿಗೆ ತೆಲುಗು ಚಿತ್ರರಂಗದಲ್ಲಿ ನಟಿ ಪವಿತ್ರ ಲೋಕೇಶ್ ಅವರು ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದರು ಬಹುತೇಕ ಎಲ್ಲಾ ಸ್ಟಾರ್ ನಟರಿಗೆ ತಾಯಿಯಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ತೆಲುಗು ಚಿತ್ರರಂಗ ಪವಿತ್ರ ಲೋಕೇಶ್ ಅವರಿಗೆ ಒಳ್ಳೆಯ ಸ್ಥಾನ ನೀಡುತ್ತಿದೆ ಎಂದು ಎಲ್ಲರೂ ಖುಷಿಪಟ್ಟಿದ್ದರು. ಆದರೆ ಪವಿತ್ರ ಅವರ ಈ ಬೆಳವಣಿಗೆಗಳಿಂದ ಬೇಸತ್ತ ಚಿತ್ರರಂಗ ತಾಯಿ ಪಾತ್ರಕ್ಕೆ ಇವರು ಸೂಕ್ತವಲ್ಲ ಆ ಪಾತ್ರಕ್ಕೆ ಇವರ ನ್ಯಾಯ ಒದಗಿಸುವುದಿಲ್ಲ ಎನ್ನುವ ನೆಪ ಹೇಳಿ ಈಗಾಗಲೇ ಒಪ್ಪಿಕೊಂಡಿದ್ದ ನಾಲ್ಕು ಸಿನಿಮಾಗಳಿಂದ ಪವಿತ್ರ ಲೋಕೇಶ್ ಅವರ ಹೆಸರನ್ನು ಕೈ ಬಿಟ್ಟಿದ್ದಾರಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಪವಿತ್ರ ಲೋಕೇಶ್ ಅವರನ್ನು ತೆಲುಗು ಸಿನಿಮಾರಂಗದಿಂದ ಬ್ಯಾನ್ ಮಾಡಿರುವುದು ಸರಿನಾ ಅಥವಾ ತಪ್ಪಾ ಎಂಬುದನ್ನು ಕಾಮೆಂಟ್ ಮುಖಾಂತರ ತಿಳಿಸಿ.

61 ವರ್ಷದ ಮುದುಕನನ್ನು 18 ವರ್ಷದ ಯುವತಿ ಪ್ರೀತಿಸಿ ಮದುವೆಯದ ಯುವತಿ. ಈ ಮುದುಕನನ್ನು ಮದುವೆ ಆಗಲು ಕಾರಣವೇನು ಗೊತ್ತ.? ತಿಳಿದರೆ ನೀವೇ ಶಾ-ಕ್ ಆಗುತ್ತೀರಿ

ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ. ಯಾರನ್ನು ಯಾರು ಮದುವೆಯಾಗಬೇಕು ಎಂದು ದೇವರು ಮೊದಲೇ ನಿರ್ಧಾರ ಮಾಡಿ ಭೂಮಿಗೆ ಕಳಿಸಿರುತ್ತಾನೆ ಎಂದು ನಮ್ಮ ಭಾರತೀಯರು ನಂಬಿದ್ದಾರೆ. ಈ ಒಂದು ಕಾರಣಕ್ಕಾಗಿ ನಮ್ಮಲ್ಲಿ ಯಾರು ಯಾರನ್ನೇ ಮದುವೆ ಆದರೂ ಕೂಡ ಇವರ ಹೆಸರೇ ನಮ್ಮ ಹಣೆಯಲ್ಲಿ ಬರೆದಿತ್ತು ಎಂದು ಒಪ್ಪಿಕೊಂಡು ಕೊನೆಯವರೆಗೂ ನೆಮ್ಮದಿಯಿಂದ ಜೀವನ ಕಳೆಯುತ್ತಾರೆ. ಸಂಸಾರ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೂಡ ಪತಿ-ಪತ್ನಿ ಆದವರು ಒಬ್ಬರನೊಬ್ಬರು ಬಿಟ್ಟುಕೊಡದೆ ಹೊಂದಾಣಿಕೆಯಿಂದ ಬದುಕುತ್ತಿದ್ದಾರೆ. ಈ ರೀತಿ ಸಾಮರಸ್ಯವನ್ನು ನಾವು ಭಾರತದ ಮದುವೆಗಳಲ್ಲಿ ಮಾತ್ರ ಕಾಣಬಹುದು. ಯಾಕೆಂದರೆ ನಮ್ಮಲ್ಲಿ ಹೆಚ್ಚಿನ ಮದುವೆಗಳು ದೊಡ್ಡವರು ನಿಶ್ಚಯಿಸಿದ ಮದುವೆಗಳಾಗಿರುತ್ತವೆ. ಹಿರಿಯರು ನಿರ್ಧಾರ ಮಾಡುವ ಇಂತಹ ಮದುವೆಗಳೇ ದೇವರ ನಿಶ್ಚಯ ಎಂದು ನಂಬಿ ಬದುಕುತ್ತಾರೆ ನಮ್ಮವರು.

ಆದರೆ ಈಗ ನಮ್ಮಲ್ಲಿ ಕೂಡ ಪ್ರೇಮ ವಿವಾಹಗಳು ಹೆಚ್ಚಾಗುತ್ತಿವೆ. ಸಹಪಾಠಿಗಳನ್ನು, ಸ್ನೇಹಿತರನ್ನು ಅಥವಾ ಸಹೋದ್ಯೋಗಿಗಳನ್ನು ಮೆಚ್ಚಿಕೊಂಡು ಅವರನ್ನೇ ಬಾಳ ಸಂಗಾತಿಯನ್ನಾಗಿ ಆಯ್ದುಕೊಂಡು ಸಂತೋಷದ ಜೀವನ ನಡೆಸುವವರು ಇದ್ದಾರೆ. ಈ ರೀತಿ ಪ್ರೇಮ ವಿವಾಹ ಆಗುವವರಲ್ಲಿ ಹಿರಿಯರು ನಿಶ್ಚಯಿಸುವ ಮದುವೆಯಲ್ಲಿ ಇರುವ ವಯಸ್ಸಿನ ಅಂತರಕ್ಕಿಂತ ಕಡಿಮೆ ಅಂತರ ಇರುತ್ತದೆ ಎನ್ನುವುದು ಎಲ್ಲರ ಭಾವನೆ. ಹಾಗಾಗಿ ಇವರ ನಡುವೆ ಹೊಂದಾಣಿಕೆ ಹೆಚ್ಚಿನ ಮಟ್ಟದಲ್ಲಿರುತ್ತದೆ ಎಂದು ಸಹ ಕೆಲವರು ನಂಬುತ್ತಾರೆ. ಆದರೆ ಪ್ರೇಮ ವಿವಾಹಗಳಲ್ಲೂ ಕೂಡ ಕೆಲವೊಮ್ಮೆ ಆಶ್ಚರ್ಯ ಘಟನೆಗಳು ನಡೆಯುತ್ತವೆ. ಅದೇನೆಂದರೆ ಇತ್ತೀಚೆಗೆ ವಯಸ್ಸಾಗಿರುವ ಮಹಿಳೆ ಚಿಕ್ಕ ವಯೋಮಾನದ ಹುಡುಗನನ್ನು ಮದುವೆಯಾಗುತ್ತಿರುವ ಘಟನೆಗಳು ಹಾಗೂ ಚಿಕ್ಕ ವಯಸ್ಸಿನ ಹುಡುಗಿ ವಯಸ್ಸಾದ ವೃದ್ಧನನ್ನು ಮದುವೆಯಾಗುತ್ತಿರುವುದು ಅಥವಾ ಇಬ್ಬರು ಸಲಿಂಗಿಗಳೇ ಮದುವೆ ಆಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತವೆ.

ಪ್ರೀತಿಯ ಹೆಸರಲ್ಲಿ ಇಂತಹ ಮದುವೆಗಳು ನಡೆದಾಗ ಕೆಲವರಿಗೆ ಆಶ್ಚರ್ಯ ಎನಿಸಬಹುದು ಆದರೆ ಅವುಗಳ ನಿಜ ಕಾರಣ ಕೇಳಿದರೆ ನಿಜವಾಗಿಯೂ ಮೆಚ್ಚಬೇಕು ಅನಿಸುತ್ತದೆ. ಇಂತಹದೇ ಒಂದು ಪ್ರಕರಣ ಇತ್ತೀಚೆಗೆ ನಡೆದಿದೆ ಹಾಗೂ ಈ ಮದುವೆಗೆ ಸಂಬಂಧಪಟ್ಟ ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಪ್ರಕರಣದ ವಿಷಯ ಏನೆಂದರೆ 18 ವರ್ಷದ ಹುಡುಗಿ 61 ವಯಸ್ಸಿನ ವೃದ್ಧನನ್ನು ಮದುವೆಯಾಗಿದ್ದಾಳೆ. ತನಕ್ಕಿಂತ ಮೂರು ಪಟ್ಟು ಹೆಚ್ಚು ಎಂದರೆ 43 ವರ್ಷ ವಯಸ್ಸಿನ ಅಂತರ ಇರುವವರನ್ನು ಈಕೆ ಮದುವೆಯಾಗಲು ಕಾರಣ ಕೇಳಿದಕ್ಕೆ ಅವಳು ಹೇಳುತ್ತಿರುವುದು ಆ ವ್ಯಕ್ತಿಯ ಮೇಲಿರುವ ಪ್ರೀತಿ ಎಂದು. ಈ ಕಾರಣಕ್ಕಾಗಿಯೇ ಯುವತಿ ಹಠಬಿದ್ದು ಆತನನ್ನು ವಿವಾಹವಾಗಿದ್ದಾಳಂತೆ. ಇದು ಸಾಧ್ಯವೇ ಎಂದು ಎಲ್ಲರಿಗೂ ಆಶ್ಚರ್ಯ ಎನಿಸಬಹುದು ಆದರೆ ನಿಜಕ್ಕೂ ಇಂಥದೊಂದು ಪ್ರಕರಣದ ಬಗ್ಗೆ ಇತ್ತೀಚೆಗೆ ಎಲ್ಲರಿಗೂ ತಿಳಿಯುತ್ತಿದೆ.

ಆಸಿಯಾ ಎನ್ನುವ 18 ವರ್ಷದ ಹುಡುಗಿ ಶಂಶದ್ ಎನ್ನುವ 61 ವರ್ಷ ವಯಸ್ಸಿನ ವೃದ್ಧನನ್ನು ಪ್ರೀತಿಸಿ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದಾಳೆ. ಶಂಶದ್ ಅವರು ಒಬ್ಬ ಸಮಾಜ ಸೇವಕ, ಆಪಾರ ಆಸ್ತಿ ಹೊಂದಿರುವ ಪುರುಷ ಜೊತೆಗೆ ಬಡವರಿಗೆ ಸಹಾಯ ಮಾಡುವುದು ಬಡ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸುವುದು ಈ ರೀತಿ ಕೆಲಸಗಳಲ್ಲಿ ತೊಡಗಿದ್ದರು. ಇವರ ಈ ಗುಣವೇ ಆಸಿಯಾಗೆ ಇಷ್ಟವಾಗಿ ಮದುವೆಯಾಗಿದ್ದಾಳೆ ಶಂಶದ್ ಕೂಡ ತುಂಬಾ ಒಳ್ಳೆಯ ವ್ಯಕ್ತಿಯಾಗಿತ್ತು ಆಸಿಯಾ ಮಾತ್ರವಲ್ಲದೇ ಆಸಿಯಾ ಕುಟುಂಬದ ಎಲ್ಲರನ್ನು ಕೂಡ ಸಂತೋಷವಾಗಿ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ ಇಷ್ಟು ಕಾರಣ ಸಾಕಲ್ಲವೇ ಒಬ್ಬ ಯುವತಿ ಸಂತೋಷದಿಂದ ಮದುವೆಗೆ ಜೀವನಕ್ಕೆ ಕಾಲಿಡಲು. ಈ ವಿವಾಹದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ಪುಟಾಣಿ ವಂಶಿಕ ಹೇಳಿದ ದೇವರ ಸ್ತೋತ್ರಕ್ಕೆ ಮನಸ್ಸೋತು ದೊಡ್ಡ ಉಡುಗೊರೆ ಕೊಟ್ಟ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು. ಏನದು ನೋಡಿ

ವಂಶಿಕ ಎಂಬ ಈ ಪುಟ್ಟ ಪೋರಿಯ ಹೆಸರು ಯಾರಿಗೆ ತಾನೇ ಕರ್ನಾಟಕದಲ್ಲಿ ಗೊತ್ತಿಲ್ಲ ತನ್ನ ಮುಗ್ಧ ನಟನೆಯಿಂದ, ನೃತ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ರಿಲ್ಸ್ ಗಳ ಮೂಲಕ ಮೆಚ್ಚುಗೆಯನ್ನ ಪಡೆದಿದ್ದ ಈ ಹುಡುಗಿ ಟಿವಿ ಶೋಗಳ ಮೂಲಕ ಜನರನ್ನು ಮನರಂಜಿಸುತ್ತಿದ್ದಾಳೆ . ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿ ಗಿಲಿ ಶೋಗಳ ಮೂಲಕ ತನ್ನ ಅಭಿನಯ ಚಾತುರ್ಯವನ್ನು ಪ್ರೇಕ್ಷಕರನ್ನು ಮನರಂಜಿಸಿ ಮೆಚ್ಚುಗೆಗಳನ್ನು ಗಿಟ್ಟಿಸಿಕೊಂಡಿದ್ದಾಳೆ.ನನ್ನಮ್ಮ ಸೂಪರ್ ಸ್ಟಾರ್  ಎಂಬುದುಪ್ರಸಿದ್ಧ ತಾಯಂದಿರು ಮತ್ತು ಅವರ ಮಕ್ಕಳನ್ನು ಒಳಗೊಂಡಿರುವ ಕನ್ನಡ ಆಟದ ಪ್ರದರ್ಶನವಾಗಿದೆ. ನನ್ನಮ್ಮ ಸೂಪರ್ ಸ್ಟಾರ್ ಪಟ್ಟಕ್ಕಾಗಿ ತಾಯಿ-ಮಗು ಜೋಡಿಗಳು ಮೋಜಿನ ಟಾಸ್ಕ್‌ಗಳಲ್ಲಿ ಸ್ಪರ್ಧಿಸುವುದರಿಂದ ಈ ಕಾರ್ಯಕ್ರಮವನ್ನು ತಾಯ್ತನಕ್ಕೆ ಸಮರ್ಪಿಸಲಾಗಿದೆ.

ಕಾರ್ಯಕ್ರಮದ ತೀರ್ಪುಗಾರರು ಸೃಜನ್ ಲೋಕೇಶ್, ಅನು ಪ್ರಭಾಕರ್ ಮತ್ತು ತಾರಾ ಕಾರ್ಯಕ್ರಮವನ್ನು ಅನುಪಮಾ ಗೌಡ ನಡೆಸಿಕೊಡುತ್ತಿದ್ದಾರೆ. ಪ್ರದರ್ಶನವು 27 ನವೆಂಬರ್ 2021 ರಂದು ಪ್ರಥಮ ಪ್ರದರ್ಶನಗೊಂಡಿತು ಈ ಶೋ ಆರಂಭವಾದ ಬಳಿಕ ಹೆಚ್ಚು ಸುದ್ದಿ ಮಾಡಿದ್ದೇ ಮಾಸ್ಟರ್​ ಆನಂದ್​ ಪುತ್ರಿ ವಂಶಿಕಾ. ಎಲ್ಲರಿಗೂ ಮಾಸ್ಟರ್​ ಆನಂದ್​ಗೆ ಮಗಳಿದ್ದಾಳೆ ಎಂದು ಗೊತ್ತಿತ್ತು ಆದರೆ ಇಷ್ಟು ಆ್ಯಕ್ಟೀವ್ ಆಗಿರುವ ವಂಶಿಕಾ ಕಂಡು ಎಲ್ಲರೂ ಬೆರಗಾಗಿದ್ದರು. ತನ್ನ ಮುದ್ದಾದ ಮಾತುಗಳಿಂದ ಚುರುಕುತನದಿಂದ ಎಲ್ಲರ ಮನೆ ಮಾತಾಗಿದ್ದಳು ಸೋಶಿಯಲ್ ಮೀಡಿಯಾದಲ್ಲೂ ವಂಶಿಕಾ ಹವಾ ಜೋರಾಗಿತ್ತು.

ಕಳೆದ ಮೂರು ತಿಂಗಳಿನಿಂದ ಸಖತ್​ ಸೌಂಡ್ ಮಾಡಿದ್ದ ‘ನನ್ನಮ್ಮ ಸೂಪರ್ ಸ್ಟಾರ್‌ ಶೋ ಮುಕ್ತಾಯಗೊಂಡಿದೆ. ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋನ ಗ್ರ್ಯಾಂಡ್​ ಫಿನಾಲೆ ಭಾನುವಾರ (ಏ.3)  ನಡೆದಿದೆ. ತಾಯಿ ಯಶಸ್ವಿನಿ ಹಾಗೂ ಮಗಳು ವಂಶಿಕಾ ಅಂಜನಿ ಕಶ್ಯಪ ವಿನ್ನರ್ ಆಗಿ ಗೆಲುವಿನ ಟ್ರೋಫಿಯನ್ನು ಎತ್ತಿ ಹಿಡಿದ್ದಾರೆ. ಈ ಶೋ ಆರಂಭವಾದ ದಿನಗಳಿಂದ ತನ್ನದೇ ಆದ ವಿಶೇಷತೆಗಳಿಂದ ವೀಕ್ಷಕರ ಮನಗೆದ್ದಿತ್ತು. ಅದರಲ್ಲೂ ವಂಶಿಕಾ ಎಲ್ಲರ ಮನ ಸೂರೆಗೊಂಡಿದ್ದಳು ಪಟಪಟ ಮಾತಾಡುತ್ತಿದ್ದ ವಂಶಿಕಾಗೆ ಈ ಬಾರಿ ವಿನ್ನರ್ ಪಟ್ಟ ಸಿಗಲಿದೆ ಎಂದು ಎಲ್ಲರೂ ಅಂದುಕೊಂಡಿದ್ದರ. ಅದರಂತೆ ಯಶಸ್ವಿನಿ ಮತ್ತು ವಂಶಿಕಾ ‘ನನ್ನಮ್ಮ ಸೂಪರ್​ ಸ್ಟಾರ್​’ ಪಟ್ಟ ಪಡೆದುಕೊಂಡಿದ್ದಾರೆ.ಇನ್ನೂ  ತಾಯಿ-ಮಗಳ ಜೋಡಿಗೆ ಟ್ರೋಫಿ ಜೊತೆ 5 ಲಕ್ಷ ರೂಪಾಯಿ ಬಹುಮಾನದ ಹಣ ಸಿಕ್ಕಿದೆ.

‘ನನ್ನಮ್ಮ ಸೂಪರ್​ ಸ್ಟಾರ್​’ ಟೈಟಲ್​ ಗೆದ್ದ ಯಶಸ್ವಿನಿ ಹಾಗೂ ವಂಶಿಕಾ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ ಇತ್ತೀಚೆಗೆ ಮಾಸ್ಟರ್ ಆನಂದ್ ಅವರು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಹಾಗೆ ತಮ್ಮ ಗ್ರೀನ್ ಗೆಳೆಯರು ತಂಡದ ಮುಖಾಂತರ ಸ್ವಚ್ಛತಾ ಕಾರ್ಯವನ್ನು ಧರ್ಮಸ್ಥಳದಲ್ಲಿ ಹಮ್ಮಿಕೊಂಡಿದ್ದರು. ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ ಆಶೀರ್ವಚನವನ್ನು ಪಡೆಯುವ ವೇಳೆ ವಂಶಿಕಳಿಂದ ಸ್ತೋತ್ರವನ್ನು ಹೇಳಿಸಿದರು. ವಂಶಿಕ ತನ್ನ ಮುಗ್ಧ ಮಾತುಗಳಿಂದ ಪಟಾಕಿಯಂತೆ ಡೈಲಾಗ್ ಹೇಳುವುದು, ಡ್ಯಾನ್ಸ್ ಮಾಡುವುದಲ್ಲದೆ ನಾನು ದೇವರ ಹಾಡುಗಳನ್ನು ಮತ್ತು ಶ್ಲೋಕಗಳನ್ನು ಹೇಳುವುದರಲ್ಲೂ ಮುಂದೆ ಇರುವೆ ಎಂದು ಸಾಬೀತು ಪಡಿಸಿದ್ದಾಳೆ.

ಇವಳ ಈ ಶ್ಲೋಕಗಳನ್ನು ಮೌನದಿಂದ ಆಲಿಸಿದ ಡಾಕ್ಟರ್ ವೀರೇಂದ್ರ ಹೆಗಡೆಯವರು ಉಡುಗೊರೆಯನ್ನು ನೀಡಿದ್ದಾರೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಂಶಿಕ ಅವರ ತಂದೆ ಮಾಸ್ಟರ್ ಆನಂದ್ ಅವರು ಹೀಗೆಂದು ತಾಯಿಯಂತೆ ಅವಳಿಗೆ ಉಡುಗೊರೆಯನ್ನು ನೀಡಿದ ಧರ್ಮದೇವತೆಯ ಪ್ರೀತಿಯ ಪುತ್ರ ಶ್ರೀ ವೀರೇಂದ್ರ ಹೆಗಡೆ ಅಪ್ಪಾಜಿ ಅವರಿಗೆ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ. ವಂಶಿಕಾಗೆ ಇರುವ ಪ್ರತಿಭೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ಅದಷ್ಟು ಶೇರ್ ಮತ್ತು ಲೈಕ್ ಮಾಡಿ.

ಅಪ್ಪ ವಿ-ಧಿ-ವ-ಶ-ರಾದಾಗ ದರ್ಶನ್ ಫೋನ್ ಮಾಡಿ ನಿಮ್ಮ ಅಕ್ಕನ ಮದುವೆ ಸಂಪೂರ್ಣ ಜವಬ್ದಾರಿ ನಂದು ಅಂದಿದ್ರು ಆದ್ರೆ ಈಗ ದರ್ಶನ್ ಹೇಳ್ತಾ ಇರೋದೆ ಬೇರೆ.

ನಟ ದರ್ಶನ್ ಅವರ ಸ್ನೇಹಜೀವಿ ದರ್ಶನ್ ಅವರ ಸ್ನೇಹ ಬಳಗ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಸ್ನೇಹ ಎಂದರೆ ಪ್ರಾಣ ಬೇಕಾದರೂ ಕೊಡುವ ದಾಸನ ಸ್ನೇಹ ಅಷ್ಟು ಸುಲಭಕ್ಕೆ ಒಲಿಯುವುದಿಲ್ಲ. ಯಾವಾಗಲೂ ತುಂಬಾ ನೇರ ನುಡಿಯಿಂದ ಫೇಮಸ್ ಆಗಿರುವ ದರ್ಶನ್ ಅವರು ಅಷ್ಟೇ ಮಗುವಿನಂತ ಮನಸ್ಸು ಕೂಡ ಹೊಂದಿದ್ದಾರೆ. ಸ್ನೇಹಿತ ಎಂದು ಬಳಗಕ್ಕೆ ಸೇರಿಸಿಕೊಂಡರೆ ತನ್ನ ಸಹೋದರನಂತೆ ಅವರನ್ನು ಕಾಣುತ್ತಾರೆ. ಇದಕ್ಕೆ ಹತ್ತು ಹಲವರು ಉದಾಹರಣೆಗಳು ನಾವೆಲ್ಲ ನೋಡಿದ್ದೇವೆ ಅದಕ್ಕೊಂದು ಉದಾಹರಣೆ ಎಂದರೆ ನಟ ದರ್ಶನ್ ಮತ್ತು ಬುಲೆಟ್ ಪ್ರಕಾಶ್ ಸ್ನೇಹ. ನಟ ಬುಲೆಟ್ ಪ್ರಕಾಶ್ ಅವರು ದರ್ಶನ್ ಅವರಿಗೆ ತುಂಬಾ ಆತ್ಮೀಯರು ದರ್ಶನ್ ಮಾತವಲ್ಲದೆ ದರ್ಶನ್ ಕುಟುಂಬದ ಎಲ್ಲಾ ಸದಸ್ಯರಿಗೂ ಕೂಡ ಬುಲೆಟ್ ಪ್ರಕಾಶ್ ಅವರು ಅವರ ಮನೆಯವರಂತೆಯೇ ಇದ್ದರು.

ಬುಲೆಟ್ ಪ್ರಕಾಶ್ ಅವರು ಕನ್ನಡದಲ್ಲಿ 325 ಸಿನಿಮಾಗಿಂತಲೂ ಹೆಚ್ಚಿನ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಪ್ರತಿ ಬಾರಿ ಕೂಡ ತೆರೆ ಮೇಲೆ ಇವರನ್ನು ನೋಡಿದವರು ಹೊಟ್ಟೆ ಹಿಡಿದು ನಗುವಷ್ಟು ಹಾಸ್ಯವನ್ನು ಪ್ರೇಕ್ಷಕರಿಗೆ ನೀಡುತ್ತಾರೆ. ಸಾಧು ಕೋಕಿಲ ಹಾಗೂ ಬುಲೆಟ್ ಪ್ರಕಾಶ್ ಜುಗಲ್ ಬಂದಿ, ಪ್ರಜ್ವಲ್ ದೇವರಾಜ್ ಮತ್ತು ಬುಲೆಟ್ ಪ್ರಕಾಶ್ ಅವರ ಜೋಡಿ, ಹಾಗೂ ದರ್ಶನ್ ಮತ್ತು ಬುಲೆಟ್ ಪ್ರಕಾಶ್ ಇವರಿಬ್ಬರ ಕಾಂಬಿನೇಷನ್ ಪ್ರೇಕ್ಷಕರ ಕಣ್ಣಿಗೆ ಹಬ್ಬದೂಟ ಎನ್ನಬಹುದು. ಇಷ್ಟೊಂದು ಪ್ರತಿಭಾನ್ವಿತ ನಟ ತುಂಬಾ ಕಡಿಮೆ ವಯಸ್ಸಿನಲ್ಲಿ ನಮ್ಮನ್ನೆಲ್ಲ ಬಿಟ್ಟು ಅ.ಗ.ಲಿ.ದ್ದು ಕರ್ನಾಟಕ ಚಲನಚಿತ್ರ ರಂಗಕ್ಕೆ ತುಂಬಲಾಗದ ನ.ಷ್ಟ ಬುಲೆಟ್ ಪ್ರಕಾಶ್ ಅವರು ತುಂಬ ದೊಡ್ಡ ದೇಹ ಹೊಂದಿದ್ದರು. ಹಾಗೂ ಅದನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಆಪರೇಷನ್ ಮೊರೆ ಹೋದರು.

ಆದರೆ ಅವರ ದುರಾದೃಷ್ಟದಿಂದ ತುಂಬಾ ಸೈಡ್ ಎಫೆಕ್ಟ್ ಗಳಿಗೆ ಒಳಗಾಗಿ ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗಬೇಕಾಯಿತು. ಈ ಸಮಯದಲ್ಲಿ ಸಿನಿಮಾ ಅವಕಾಶಗಳನ್ನು ಕೂಡ ಕಳೆದುಕೊಂಡ ಬುಲೆಟ್ ಪ್ರಕಾಶ್ ಅವರು ತೀರ ಮಾನಸಿಕವಾಗಿ ಕೂಡ ಕುಗ್ಗಿ ಹೋಗಿದ್ದರು. ಆದರೆ ದರ್ಶನ್ ಅವರು ಮಾತ್ರ ಬುಲೆಟ್ ಪ್ರಕಾಶ್ ಅವರಿಗೆ ಯಾವಾಗಲೂ ಬೆನ್ನೆಲುವಾಗಿ ನಿಂತಿದ್ದರು ಅವರ ಕ.ಷ್ಟ ಸುಖ ಎಲ್ಲದರಲ್ಲಿ ಕೂಡ ಭಾಗಿ ಆಗುತ್ತಿದ್ದರು. ಆದರೆ ಬುಲೆಟ್ ಪ್ರಕಾಶ್ ಅವರು ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರ ಜೊತೆ ಮನಸ್ತಾಪ ಮಾಡಿಕೊಂಡರು ಆಗಲು ಕೂಡ ಸಹೋದರನನ್ನು ಸಂಭಾಳಿಸಿ ಬುಲೆಟ್ ಪ್ರಕಾಶ್ ಅವರ ಸ್ನೇಹವನ್ನು ಕೂಡ ಉಳಿಸಿಕೊಂಡಿದ್ದರು ದರ್ಶನ್ ಅವರು. ಇಷ್ಟೆಲ್ಲಾ ಆದ ಬಳಿಕ ಏಪ್ರಿಲ್ 6, 2022 ರಲ್ಲಿ ಬುಲೆಟ್ ಪ್ರಕಾಶ್ ಅವರು ತಮ್ಮ ಮನೆಯಲ್ಲಿ ಅವರ ಕೊ.ನೆ ಉಸಿರನ್ನು ಎ.ಳೆ.ದ.ರು.

ಬುಲೆಟ್ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಒಬ್ಬ ಮಗಳು ಹಾಗೂ ಒಬ್ಬ ಮಗ ಬುಲೆಟ್ ಪ್ರಕಾಶ್ ಅವರ ಸಾ.ವಿ.ನ ಬಳಿಕ ಅವರ ಮಗಳ ಮದುವೆ ಸಂಪೂರ್ಣ ಜವಾಬ್ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ದರ್ಶನ್ ಅವರು ಮಾತು ಕೊಟ್ಟಿದ್ದಾರೆ. ಬುಲೆಟ್ ಪ್ರಕಾಶ್ ಅವರಿಗೆ ಅವರ ಮಗನಾದ ರಕ್ಷಕ್ ಬುಲೆಟ್ ಅವರನ್ನು ದೊಡ್ಡ ನಾಯಕ ನಟನನ್ನಾಗಿ ಮಾಡುವ ಆಸೆ ಇತ್ತು. ದರ್ಶನ್ ಅವರು ಕೂಡ ರಕ್ಷಕ್ ಬುಲೆಟ್ ಅವರಿಗೆ ಒಳ್ಳೆ ರೀತಿಯಲ್ಲಿ ಗೈಡ್ ಮಾಡುತ್ತಾ ತಪ್ಪು ಮಾಡಿದ್ದಾಗ ತಿದ್ದುತ್ತಾ, ಸ್ವಂತ ಮಗನಷ್ಟೇ ಪ್ರೀತಿ ತೋರಿಸಿ ನೋಡಿಕೊಳ್ಳುತ್ತಿದ್ದಾರಂತೆ. ಸದ್ಯಕ್ಕೆ ಬುಲೆಟ್ ಪ್ರಕಾಶ್ ಮಗನಾದ ರಕ್ಷಕ ಬುಲೆಟ್ ಅವರು ನಂದ ಕಿಶೋರ್ ಅವರ ನಿರ್ದೇಶನದ ಅಧ್ಯಕ್ಷ ಖ್ಯಾತಿಯ ಶರಣ್ ಅವರ ಅಭಿನಯದ ಗುರು ಶಿಷ್ಯರು ಎನ್ನುವ ಸಿನಿಮಾದಲ್ಲಿ ಶಿಷ್ಯನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಅಕ್ಕನ ಮದುವೆಗೆ ಈಗಾಗಲೇ ಸಾಕಷ್ಟು ಹಣದ ಸಹಾಯ ಮಾಡಿದ್ದಾರೆ ರಂದು ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಹೇಳಿಕೊಂಡಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದರಲ್ಲಿ ದರ್ಶನ್ ಅವರು ಮೊದಲಿಗರು ಎಂಬುವುದು ಇದರಿಂದಲೇ ಸಾಬೀತಾಗಿದೆ ದರ್ಶನ್ ಅವರ ಈ ಕಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಈ ಸಲ ಒಂದಲ್ಲ ಬದಲಿಗೆ ಎರಡು ಬಿಗ್ ಬಾಸ್ ಬರ್ತಿದೆ, ಯಾವೆಲ್ಲಾ ಸೆಲೆಬ್ರಿಟಿಗಳು ಬರಲಿದ್ದಾರೆ ನೋಡಿ.!!

ಕನ್ನಡದಲ್ಲಿ ಹಲವಾರು ಕಾರ್ಯಕ್ರಮಗಳು ರಿಯಾಲಿಟಿ ಶೋಗಳು ಬರ್ತಾನೆ ಇರುತ್ತವೆ. ಆದರೆ ಜನರು ತುಂಬಾನೆ ಕಾಯುವುದು ಯಾವುದಕ್ಕೆ ಎಂದರೆ ಬಿಗ್ ಬಾಸ್ ಗೋಸ್ಕರ ಯಾವುದೇ ಒಂದು ರಿಯಾಲಿಟಿ ಶೋ ಶುರುವಾದಾಗ ತುಂಬಾ ಜನ ಕೇಳುವುದು ಬಿಗ್ ಬಾಸ್ ಯಾವಾಗ ಶುರು ಆಗುತ್ತೆ ಅಂತ ಹೇಳಿ ಕೇಳುತ್ತಾರೆ. ಅಷ್ಟೊಂದು ಮಟ್ಟಿಗೆ ಈ ಒಂದು ಶೋ ಜನತೆಗೆ ಸಾಕಷ್ಟ ಇಷ್ಟ ಅಂತ ಹೇಳಬಹುದು. ಅವರೆಲ್ಲರಿಗೂ ಕೂಡ ಬಿಗ್ ಬಾಸ್ ಅಭಿಮಾನಿಗಳಿಗೆ ಈ ಸಲ ಒಂದಲ್ಲ ಬದಲಾಗಿ ಎರಡು ಖುಷಿಯ ವಿಷಯ ಇರುವಂತದ್ದು . ಕಳೆದ ವರ್ಷ ಕೊರೋನ ಕಾರಣದಿಂದಾಗಿ ಬಿಗ್ ಬಾಸ್ ಅಷ್ಟೊಂದು ಮುಂದುವರಿದಿರಲಿಲ್ಲ ಮಧ್ಯದಲ್ಲಿ ಸ್ಟಾಪ್ ಆಗಿತ್ತು. ಆಮೇಲೆ ಮತ್ತೆ ಶುರುವಾಗಿತ್ತು ಇದಾದ ನಂತರ ಬಿಗ್ ಬಾಸ್ ಮಿನಿ ಸೀಸನ್ ಅನ್ನು ತೆಗೆದುಕೊಂಡು ಬರಲಾಗಿತ್ತು.

ಈ ಸಲ ಏನು ಮಾಡುತ್ತಾರೆ ಎಂದು ನೋಡುವುದಾದರೆ ಈ ಸಲ ಆಗಸ್ಟ್ ನಲ್ಲಿ ಮೊದಲ ಬಿಗ್ ಬಾಸ್ ಬರುವಂತದ್ದು ಈ ಒಂದು ಬಿಗ್ ಬಾಸ್ ಮುಗಿದ ಮೇಲೆ ಇನ್ನೊಂದು ಬಿಗ್ ಬಾಸ್ ಬರುತ್ತೆ. ಏನಿದು ಮೊದಲನೇ ಬಿಗ್ ಬಾಸ್ ಎರಡನೇ ಬಿಗ್ ಬಾಸ್ ಅಂತ ಕೇಳೋದಾದ್ರೆ ಅದಕ್ಕೆ ಉತ್ತರ ಈ ಕೆಳಗಿನಂತಿದೆ. ಕಳೆದ ವರ್ಷ ಬಿಗ್ ಬಾಸ್ ಅಂದರೆ ಕನ್ನಡ ಬಿಗ್ ಬಾಸ್ ಸೀಸನ್ 8 ಮೊದಲು ಪ್ರಸಾರವಾಗಿತ್ತು ಇದಾದ ಮೇಲೆ ಪ್ರಸಾರವಾಗಿದ್ದು ಬಿಗ್ ಬಾಸ್ ಮಿನಿ ಸೀಸನ್, ಒಂದು ಮಿನಿ ಸೀಸನ್ ನಲ್ಲಿ ಸೀರಿಯಲ್ ನ ನಟ ನಟಿಯರು ಮಾತ್ರನೇ ಇದ್ದರು. ಆದರೆ ಈ ಸಲ ಬಿಗ್ ಬಾಸ್ ಮಿನಿ ಸೀಸನ್ ಮೊದಲು ಶುರುವಾಗುತ್ತದೆ ಹಾಗೆಯೇ ಇದು ಕೇವಲ 42 ದಿನಗಳು ಕಾಲ ಮಾತ್ರ ನಡೆಯಲಿದ್ದು ಇದು ಕೇವಲ ವೂಟ್ ನಲ್ಲಿ ಮಾತ್ರಾನೇ ಪ್ರಸಾರವಾಗುತ್ತದೆ.

ಓ ಟಿ ಟಿ ನಲ್ಲಿ ಪ್ರಸಾರವಾಗುವಂತಹ ಈ ಮಿನಿ ಸೀಸನ್ ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪಾಪುಲರ್ ಆದಂತವರು ಜೊತೆಗೆ ರಾಜ್ಯದ ವಿವಿಧ ರಂಗದ ಕಲಾವಿದರು ಗಳನ್ನು ಕರೆ ತರಲಾಗುತ್ತದೆ ಎಂಬ ಮಾಹಿತಿ ಇರುವಂತದ್ದು. ಈ ಒಂದು ಮಿನಿ ಸೀಸನ್ ಮುಕ್ತಾಯವಾದ ಮೇಲೆ ಶುರುವಾಗುವುದೇ ಬಿಗ್ ಬಾಸ್ ಕನ್ನಡ ಸೀಸನ್ 9 ಅಂತ ಹೇಳಿದರೆ ದೊಡ್ಡ ರೀಸನ್ ಅಂತ ಹೇಳಬಹುದು. ನೂರು ದಿನಗಳ ರಿಯಾಲಿಟಿ ಎಪಿಸೋಡ್ ಗಳನ್ನು ಹೊಂದಿರುವoತಹ ಶೋ ಇದಾಗಿರುತ್ತದೆ ಇನ್ನೊಂದು ಪ್ರಮುಖವಾದಂತಹ ಮಾಹಿತಿ ಏನು ಎಂದು ನೋಡುವುದಾದರೆ ಈ ಒಂದು ಮಿನಿ ಸೀಸನ್.

ಬಿಗ್ ಬಾಸ್ ಮಿನಿ ಸೀಸನ್ ಏನು ಇದು ಆಗಸ್ಟ್ ನಲ್ಲಿ ಬರುತ್ತೆ ಇದರಲ್ಲೂ ಕೂಡ ಶನಿವಾರವೇ ಎಲಿಮಿನೇಶನ್ ಇರುತ್ತದೆ. ಹಾಗೆಯೇ ರವಿವಾರ ಕಿಚ್ಚ ಸುದೀಪ್ ಅವರು ಬಂದು ಯಾವ ರೀತಿ ಪ್ರತಿವಾರ ಮಾತನಾಡುತ್ತಿದ್ದರೋ ಹಾಗೆಯೇ ಈ ಓ ಟಿ ಟಿ ಪ್ಲಾಟ್ ಫಾರ್ಮ್ ನಲ್ಲಿ ಪ್ರಸಾರವಾಗುವ ಬಿಗ್ ಬಾಸ್ ನಲ್ಲಿಯೂ ಕೂಡ ಮಾತನಾಡಲಿದ್ದಾರೆ. ಶನಿವಾರವೇ ಈ ಒಂದು ಎಪಿಸೋಡ್ ಅನ್ನು ಶೂಟ್ ಮಾಡಲಾಗುತ್ತದೆ. ಶನಿವಾರ ಸಂಜೆ ಪ್ರಸಾರ ಮಾಡಲಾಗುತ್ತದೆ ಹಾಗೆಯೇ ಭಾನುವಾರ ವಾರದ ಮಾತುಕತೆ ಕಿಚ್ಚ ಸುದೀಪನಜೊತೆ ಅನ್ನುವಂತಹ ಎಪಿಸೋಡ್ ಪ್ರಸಾರವಾಗುತ್ತಿತ್ತೋ ಅದು ಕೂಡ ಮಿನಿ ಸೀಸನ್ ನಲ್ಲಿ ಇರುತ್ತದೆ. ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಬಿಗ್ ಬಾಸ್ ಗಾಗಿ ನೀವು ಕಾಯ್ತ ಇದ್ದೀರ.? ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.

ಸ್ಟೇಜ್ ಮೇಲೆ ರೋಮ್ಯಾಂಟಿಕ್ ಹಾಡಿಗೆ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಪ್ರಿಯಾಂಕಾ ಉಪೇಂದ್ರ.

ಪ್ರಿಯಾಂಕ ಉಪೇಂದ್ರ ಅವರು ಕನ್ನಡ ಭಾಷೆ ಅಲ್ಲದೆ ತಮಿಳು ತೆಲುಗು ಮಲಯಾಳಂ ಬೆಂಗಾಳಿ ಒರಿಯಾ ಹಾಗೂ ಹಿಂದಿ ಸಿನಿಮಾಗಳಲ್ಲೂ ಕೂಡ ಬಹು ಬೇಡಿಕೆ ಇರುವ ನಟಿ. ಕನ್ನಡದಲ್ಲಿ ಎಚ್ ಟು ಓ ಎನ್ನುವ ಸಿನಿಮಾ ಮೂಲಕ ಚಲನಚಿತ್ರ ರಂಗಕ್ಕೆ ಕಾಲಿಟ್ಟ ಪ್ರಿಯಾಂಕ ಉಪೇಂದ್ರ ಅವರು ಬಹಳ ಕಡಿಮೆ ವಯಸ್ಸಿಗೆ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಅದೃಷ್ಟ ಪಡೆದು ಕೊಂಡರು. ಉಪೇಂದ್ರ ಅವರ ಜೊತೆ ಎಚ್‌ಟುಓ ಮತ್ತು ಶ್ರೀಮತಿ ಎನ್ನುವ ಎರಡು ಸಿನಿಮಾಗಳು ಹಾಗೂ ರವಿಚಂದ್ರನ್ ಅವರ ಜೊತೆಯಲ್ಲಿ ಮಲ್ಲ ಮತ್ತು ಕ್ರೇಜಿಸ್ಟಾರ್ ಎನ್ನುವ ಎರಡು ಸಿನಿಮಾಗಳು ಹಾಗೂ ವಿಷ್ಣು ವರ್ಧನ್ ಅವರ ಜೊತೆಯಲ್ಲಿ ಕೋಟಿಗೊಬ್ಬ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ಮತ್ತು ಶಿವರಾಜ್ ಕುಮಾರ್ ಅವರ ಜೊತೆಯಲ್ಲಿ ರೌಡಿ ಅಳಿಯ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.

ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಕಳೆದ ಎರಡು ದಶಕಗಳಿಂದ ಇದುವರೆಗೆ ಕನ್ನಡದಲ್ಲಿ ಸುಮಾರು 50ರ ಹತ್ತಿರದ ಸಿನಿಮಾಗಳಲ್ಲಿ ನಟಿಸಿರುವ ಈ ನಟಿ ಪ್ರತಿಯೊಂದು ಸಿನಿಮಾದಲ್ಲೂ ಕೂಡ ಅವರ ಪಾತ್ರಕ್ಕೆ ಹೆಚ್ಚು ಗಮನ ಕೊಟ್ಟು ತಮಗೆ ಪ್ರಾಮುಖ್ಯತೆ ಇರುವ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಹೆಚ್ ಟು ಒ ಸಿನಿಮಾದಲ್ಲಿ ಕನ್ನಡದಲ್ಲಿ ಹೊಸ ವಿಭಿನ್ನ ಪ್ರಯತ್ನ ಆಗಿದ್ದರಿಂದ ತಾವು ಕೂಡ ಕನ್ನಡಕ್ಕೆ ಹೊಸಬರು ಎಂದು ಆ ಸಮಯದಲ್ಲಿ ತುಂಬಾ ಭಯಪಟ್ಟಿದ್ದರಂತೆ ಇವರು, ಆದರೆ ಉಪೇಂದ್ರ ಅವರ ಸ್ನೇಹದಿಂದ ಅವರಿಬ್ಬರ ಕಾಂಬಿನೇಷನ್ ಅಷ್ಟು ಚೆನ್ನಾಗಿ ಮೂಡಿಬರಲು ಕಾರಣವಾಯಿತಂತೆ. ಆ ಸಿನಿಮಾದ ಮೂಲಕ ಸ್ನೇಹವಾದ ಇವರಿಬ್ಬರ ಬಾಂಧವ್ಯ ನಂತರ ಪ್ರೀತಿಗೆ ತಿರುಗಿ ಇಬ್ಬರೂ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಈ ಜೋಡಿ ಆಯುಷ್ ಉಪೇಂದ್ರ ಮತ್ತು ಐಶ್ವರ್ಯ ಉಪೇಂದ್ರ ಎನ್ನುವ ಇಬ್ಬರು ಮಕ್ಕಳನ್ನು ಪಡೆದು ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ.

ಮದುವೆಯಾದ ಬಳಿಕ ಮಕ್ಕಳ ಸಲುವಾಗಿ ಸಿನಿಮಾದಿಂದ ಸ್ವಲ್ಪ ಬ್ರೇಕ್ ಪಡೆದುಕೊಂಡ ನಟಿ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಇದುವರೆಗೆ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ನಟಿ ಮದುವೆ ನಂತರ ಪೋಷಕ ಪಾತ್ರಗಳಿಗೆ ಮಾತ್ರ ಸೀಮಿತವಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮತ್ತೆ ಸಿನಿಮಾವನ್ನು ಮಾಡಿದರು ಕೂಡ ಸಿನಿಮಾ ನಾಯಕಿ ಆಗಿ ಅಥವಾ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತೇನೆ ಎಂದು ನಿರ್ಧಾರ ಮಾಡಿರುವ ಈ ನಟಿ ಮದುವೆ ನಂತರ ಮಾಡಿರುವ ಎಲ್ಲಾ ಸಿನಿಮಾಗಳು ಕೂಡ ಈ ರೀತಿಯ ಪಾತ್ರೆಗಳೇ ಎನ್ನುವುದು ತುಂಬಾ ವಿಶೇಷ. ಸಿನೆಮಾದಲ್ಲಿ ಸಕ್ಸಸ್ ಕಂಡಿರುವ ಪ್ರಿಯಾಂಕಾ ಉಪೇಂದ್ರ ಅವರು ಕೆಲವೊಮ್ಮೆ ವಿವಾದವನ್ನು ಕೂಡ ಮಾಡಿಕೊಂಡಿದ್ದಾರೆ. ಮಲ್ಲ ಸಿನಿಮಾದ ಕೆಲವು ಸನ್ನಿವೇಶಗಳ ವಿಚಾರದಿಂದ ಆಗೊಮ್ಮೆ ದೊಡ್ಡ ವಿವಾದ ಒಂದು ಉಂಟಾಗಿತ್ತು. ಆ ವಿಚಾರದಿಂದ ಉಪೇಂದ್ರ ಹಾಗೂ ಪಿಯಾಂಕ ನಡುವೆ ಬಿರುಕು ಕೂಡ ಏರ್ಪಟ್ಟಿದ್ದೆ ಎಂದು ಮಾತುಗಳು ಎದ್ದಿದ್ದವು.

ಆದರೆ ಕಾಲವೇ ಅದಕ್ಕೆಲ್ಲ ಉತ್ತರ ಕೊಟ್ಟಿದೆ ಮತ್ತೊಂದು ವಿಶೇಷತೆ ಏನೆಂದರೆ ಅವರು ಕಂಬ್ಯಾಕ್ ಮಾಡುತ್ತಿರುವ ಸಿನಿಮಾ ಕೂಡ ಕ್ರೇಜಿಸ್ಟಾರ್ ಅವರ ಜೊತೆಗೆ. ಇದಕ್ಕೆ ಉಪೇಂದ್ರ ಅವರ ಒಪ್ಪಿಗೆ ಕೂಡ ಇದೆಯಂತೆ. ಕ್ರೇಜಿಸ್ಟಾರ್ ಇನ್ನು ಸಿನಿಮಾದ ಮೂಲಕ ಮತ್ತೆ ಈ ಜೋಡಿ ಮೋಡಿ ಮಾಡಲಿದೆಯಂತೆ. ಈಗ ಆ ಸಿನಿಮಾ ಕೂಡ ತೆರೆಕಂಡಿದ್ದು ಆಯ್ತು. ಇದಾದ ಬಳಿಕ ಇತ್ತೀಚಿಗೆ ಡ್ರಾಮಾ ಜೂನಿಯರ್ಸ್ ಎನ್ನುವ ಕಿರುತೆರೆ ಕಾರ್ಯಕ್ರಮದ ವೇದಿಕೆಯಲ್ಲೂ ಕೂಡ ಪ್ರಿಯಾಂಕ ಉಪೇಂದ್ರ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಒಟ್ಟಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಇದಕ್ಕೆ ಸಂಬಂಧಪಟ್ಟ ಪ್ರೋಮೋಗಳು ಓಡಾಡುತ್ತಿದ್ದು ಯಾವ ಕಾರಣಕ್ಕಾಗಿ ಇವರಿಬ್ಬರು ಮತ್ತೆ ಒಟ್ಟಿಗೆ ಸೇರಿದ್ದಾರೆ ಎನ್ನುವುದು ಮಾತ್ರ ಇನ್ನು ತಿಳಿದಿಲ್ಲ ಅದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಡ್ಯಾನ್ಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.