Home Blog Page 96

ಹೊಸ ವರ್ಷ 2024ರಲ್ಲಿ ಇವುಗಳನ್ನು ಮನೆಗೆ ತಂದರೆ ವರ್ಷಪೂರ್ತಿ ಹಣ, ಸಂಪತ್ತಿನ ಸುರಿಮಳೆ.!

 

ನೋಡು ನೋಡುತ್ತಿದ್ದಂತೆ 2023 ಕಣ್ಣ ಮುಂದೆ ಕರಗಿ ಹೋಯಿತು. ನಾವು ವರ್ಷದ ಅಂತ್ಯದಲ್ಲಿದ್ದೇವೆ ಈ ವರ್ಷದಲ್ಲಿ ಇನ್ನು ಬೆರಳಿಕೆಯಷ್ಟು ದಿನಗಳು ಮಾತ್ರ ಉಳಿದಿವೆ. ಹೊಸ ವರ್ಷದ ಆರಂಭದ ಸಂತಸ ಒಂದು ಕಡೆ ಆದರೆ ಒಂದು ವರ್ಷದಿಂದ ನಾವು ಮಾಡಿದ ಕೆಲಸಗಳು ಹಾಗೂ ನಮಗಾದ ಕ’ಷ್ಟ ನಷ್ಟಗಳು ಎಲ್ಲವೂ ಜೊತೆಗೆ ನೆನಪಾಗುತ್ತವೆ.

ಆಗಿದ್ದನ್ನು ಮರೆತು ಮುಂದಿನದ್ದನ್ನು ಎದುರಿಸುವ ಸಮಯ ಹೀಗೆ ‌ಪ್ರತಿ ವರ್ಷ ಹೊಸ ವರ್ಷ ಆರಂಭವಾಗುವಾಗ ನಾವು ಹಲವಾರು ಲೆಕ್ಕಾಚಾರಗಳನ್ನು ಹಾಕಿಕೊಂಡು ಪ್ಲಾನ್ ಮಾಡುತ್ತೇವೆ, ಕೆಲವರು ಹೊಸ ವರ್ಷದಲ್ಲಿ ರೆಸಲ್ಯೂಷನ್ ಗಳನ್ನು ಕೂಡ ಮಾಡುತ್ತಾರೆ, ಆದರೆ ಇವುಗಳಲ್ಲಿ ಎಷ್ಟನ್ನು ಸಾಧಿಸುತ್ತೇವೆ ಎನ್ನುವುದು ಯಕ್ಷಪ್ರಶ್ನೆ. ನಿಮ್ಮ ನೂತನ ವರ್ಷದ ಪ್ಲಾನಿಂಗ್ ಏನೇ ಇರಲಿ ನಿಮ್ಮ ಮನೆಯ ಐಶ್ವರ್ಯ ಹೆಚ್ಚಬೇಕು.

ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿ ಸಮೃದ್ಧಿ ಆಗಿರಬೇಕು ಎಂದರೆ ಈ ವರ್ಷ ಮನೆಗೆ ಈಗ ನಾವು ಹೇಳುವ ಈ ವಸ್ತುಗಳನ್ನು ತಪ್ಪದೇ ತೆಗೆದುಕೊಂಡು ಬನ್ನಿ. ಸಾಮಾನ್ಯವಾಗಿ ಹೊಸ ವರ್ಷಕ್ಕೆ ನಾವು ಹೊಸ ಕ್ಯಾಲೆಂಡರ್ ತರುತ್ತೇವೆ ಬಹುಶಃ ಅದೊಂದೇ ಬದಲಾವಣೆ ಎನಿಸುತ್ತದೆ. ಆದರೆ ಇದೊಂದು ವಸ್ತು ಮಾತ್ರ ಅಲ್ಲದೆ ಮನೆಯಲ್ಲಿ ಇನ್ನು ಅನೇಕ ವಸ್ತುಗಳ ಆಗಮನ ಆಗಬೇಕು.

ಮನೆಗೆ ಮಾತ್ರವಲ್ಲದೆ ಮನಸ್ಸಿನಲ್ಲೂ ಕೆಲವು ಬದಲಾವಣೆಗಳಾದರೆ ಇನ್ನೂ ಒಳ್ಳೆಯದು ಈ ರೀತಿ ಮನಸ್ಸಿನ ನೆಗೆಟಿವಿಟಿ ತೆಗೆದುಹಾಕಿ ಸಕಾರಾತ್ಮಕತೆಯನ್ನು ಉಂಟು ಮಾಡಬೇಕು ಮತ್ತು ಮನೆಯಲ್ಲಿರುವ ನೆಗೆಟಿವ್ ವೈಬ್ರೇಶನ್ ಹೊರ ಹಾಕಿ ದೈವಾನುಗ್ರಹ ಹಾಗೂ ಧನಾಕರ್ಷಣೆ ಆಗಬೇಕು ಎಂದರೆ ಹೊಸ ವರ್ಷದಲ್ಲಿ ಈ ವಸ್ತುಗಳನ್ನು ಮನೆಗೆ ತನ್ನಿ.

* ನವಿಲುಗರಿ:- ಪ್ರತಿಯೊಂದು ಮನೆಯಲ್ಲೂ ಕೂಡ ನವಿಲುಗರಿ ಇರಬೇಕು. ನವಿಲು ಗರಿಯನ್ನು ಎಲ್ಲರೂ ಇಟ್ಟುಕೊಳ್ಳುತ್ತಾರೆ. ವಿದ್ಯಾರ್ಥಿಗಳು ನವಿಲುಗರಿ ಪುಸ್ತಕದಲ್ಲಿ ಇಟ್ಟುಕೊಳ್ಳುವುದರಿಂದ ಓದಿನಲ್ಲಿ ಏಕಾಗ್ರತೆ ಬರುತ್ತದೆ ಎಂದು ಇಟ್ಟುಕೊಳ್ಳುತ್ತಾರೆ. ವ್ಯಾಪಾರ ವ್ಯವಹಾರ ಮಾಡುವವರು ತಮ್ಮ ವ್ಯಾಪಾರ ಚೆನ್ನಾಗಿ ಅಭಿವೃದ್ಧಿಯಾಗಲಿ ಎನ್ನುವ ಕಾರಣಕ್ಕಾಗಿ ನವಿಲುಗರಿಯನ್ನು ಗಲ್ಲಾಪೆಟ್ಟಿಗೆಯಲ್ಲಿ ಅಥವಾ ಅಂಗಡಿ ಮುಂಗಟ್ಟುಗಳಲ್ಲಿ ಇಟ್ಟುಕೊಳ್ಳುತ್ತಾರೆ.

ಇನ್ನು ಮನೆಯಲ್ಲಿ ನವಿಲುಗರಿ ಇಟ್ಟರೆ ಶ್ರೀ ಮಹಾವಿಷ್ಣುವಿನ ಜೊತೆಗೆ ತಾಯಿ ಮಹಾಲಕ್ಷ್ಮಿಯು ಕೂಡ ಪ್ರಸನ್ನರಾಗಿ ನಿಮ್ಮ ಮನೆಯ ಹಣಕಾಸಿನ ಸಮಸ್ಯೆಗಳನ್ನು ನಿವಾರಿಸುತ್ತಾರೆ. ಹಾಗಾಗಿ ನಿಮ್ಮ ಮನೆಯಲ್ಲಿ ನವಿಲುಗರಿ ಇಲ್ಲ ಎಂದರೆ ಹೊಸ ವರ್ಷದಲ್ಲಿ ಖರೀದಿಸಿ ತನ್ನಿ.

ಧರ್ಮ ಗ್ರಂಥಗಳು:- ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ರಾಮಾಯಣ ಮಹಾಭಾರತ ಧರ್ಮ ಗ್ರಂಥಗಳಾಗಿವೆ. ಅದೇ ರೀತಿ ಭಗವದ್ಗೀತೆಗೂ ಕೂಡ ನಾವು ಇಷ್ಟೇ ಪ್ರಾಶಸ್ತ್ಯ ಕೊಟ್ಟಿದ್ದೇವೆ. ಪ್ರತಿಯೊಂದು ಮನೆಗಳಲ್ಲೂ ಕೂಡ ಹೊಸ ವರ್ಷದ ರೆಸಲ್ಯೂಶನ್ ಆಗಿ ಸಾಧ್ಯವಾದರೆ ಹಿಂದುಗಳು ಈ ಧರ್ಮ ಗ್ರಂಥಗಳನ್ನು ಅಥವಾ ನೀವು ಅನ್ಯ ಧರ್ಮದವರಾಗಿದ್ದರೆ ನಿಮ್ಮ ಧರ್ಮದ ಧರ್ಮ ಗ್ರಂಥಗಳನ್ನು ಖರೀದಿಸಿ ಮನೆಯಲ್ಲಿ ಇಟ್ಟುಕೊಂಡು ಪ್ರತಿದಿನ ಸಂಜೆ ಸಮಯ ನಿಮ್ಮ ಮನೆಯ ಮಕ್ಕಳ ಜೊತೆ ಕೂತು ಓದಲು ಆರಂಭಿಸಿ.

ನಿಮ್ಮ ಮನೆಯ ವಾತಾವರಣವೂ ಎಷ್ಟು ಉತ್ತಮವಾಗಿ ಬದಲಾವಣೆ ಆಗುತ್ತದೆ ಎನ್ನುವುದನ್ನು ನೀವೇ ನೋಡಿ, ಇದೇ ನಿಮ್ಮ ಹೊಸ ವರ್ಷದ ರೆಸಲ್ಯೂಶನ್ ಆಗಲಿ ಎನ್ನುವುದು ನಮ್ಮ ಇಚ್ಛೆ. ಒಂದು ವೇಳೆ ನಿಮಗೆ ಈ ರೀತಿ ಮಾಡಲು ಇಷ್ಟ ಇಲ್ಲ ಎನ್ನುವುದಾದರೆ ನೀವು ನಾಸ್ತಿಕರಾಗಿದ್ದರೆ ಕೆಲವು ಒಳ್ಳೆಯ ಪುಸ್ತಕಗಳು ಇವೆ ಆ ಪುಸ್ತಕಗಳನ್ನಾದರೂ ಓದಲು ಶುರು ಮಾಡಿ, ಅದರಲ್ಲಿರುವ ಒಳ್ಳೆಯ ವಿಚಾರಗಳನ್ನು ಮನೆಯಲ್ಲಿ ಕಿರಿಯರ ಜೊತೆ ಹಂಚಿಕೊಳ್ಳಲು ಪ್ರಯತ್ನಿಸಿ.

* ಲಾಫಿಂಗ್ ಬುದ್ಧ:- ಲಾಫಿಂಗ್ ಬುದ್ಧ ಮನೆಯವ್ಲಿದ್ದರೆ ಸಕಾರಾತ್ಮಕ ವಾತಾವರಣ ತುಂಬುತ್ತದೆ. ಇದನ್ನು ನೋಡಿದ ತಕ್ಷಣ ನಮ್ಮ ಮಾನಸಿಕ ಒತ್ತಡಗಳು ಸ್ವಲ್ಪ ಕಡಿಮೆ ಆಗುತ್ತದೆ ಹಾಗಾಗಿ ನಿಮ್ಮ ಮನೆಯಲ್ಲಿ ಲಾಫಿಂಗ್ ಬುದ್ಧ ಇಲ್ಲ ಎಂದರೆ ‌ ಹೊಸ ವರ್ಷದಲ್ಲಿ ಖರೀದಿಸಿ. ಕೆಲವರು ಇದನ್ನು ತಾವೇ ತೆಗೆದುಕೊಳ್ಳಬಾರದು ಬೇರೆಯವರು ಉಡುಗೊರೆಯಾಗಿ ಕೊಡಬೇಕು ಎನ್ನುತ್ತಾರೆ. ನಿಮ್ಮ ಆತ್ಮೀಯರು ಹೊಸ ವರ್ಷಕ್ಕೆ ಏನನ್ನಾದರೂ ಕೊಡಲು ಇಚ್ಚಿಸಿದ್ದರೆ ಅವರು ನಿಮ್ಮ ಬಳಿ ಕೇಳಿದರೆ ಲಾಫಿಂಗ್ ಬುದ್ಧ ಕೊಡುವಂತೆ ಕೇಳಿ.

* ತೆಂಗಿನ ಮರ:- ಹೊಸ ವರ್ಷದಲ್ಲಿ ಪರಿಪೂರ್ಣ ಫಲ ಎಂದು ಕರೆಸಿಕೊಳ್ಳುವ ತೆಂಗಿನ ಮರವನ್ನು ಬೆಳೆಸಿ. ಸಾಕುವ ಪ್ರಯತ್ನ ಮಾಡಿ. ಒಂದು ವೇಳೆ ನಿಮಗೆ ನೀವಿರುವ ಸ್ಥಳದಲ್ಲಿ ಮರಗಳನ್ನು ಹಾಕಲು ಸಮಸ್ಯೆ ಆಗುತ್ತಿದ್ದರೆ ತೆಂಗಿನ ಮರದ ಬದಲು ನಿಮಗೆ ಅನುಕೂಲ ಆಗುವಂತೆ ಯಾವುದಾದರೂ ಚಿಕ್ಕ ಪುಟ್ಟ ಸಸಿ ಗಿಡಗಳನ್ನಾದರೂ ಹೊಸ ವರ್ಷದಿಂದ ಬೆಳೆಸಲು ಆರಂಭಿಸಿ.

ನಿಮಗೆ ಇಷ್ಟ ಇರುವ ವ್ಯಕ್ತಿಯನ್ನು ನೆನೆದು ಒಂದು ನಂಬರ್ ಆಯ್ಕೆ ಮಾಡಿ ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಯಾವ ಅಭಿಪ್ರಾಯವಿದೆ ಎಂದು ತಿಳಿಯಿರಿ.!

 

ಕೆಲವೊಂದು ಸಂಬಂಧಗಳ ಬಗ್ಗೆ ನಾವು ಅತಿ ಹೆಚ್ಚು ಯೋಚಿಸುತ್ತೇವೆ ಹಾಗೂ ಅದನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಬಯಸುತ್ತೇವೆ. ಈ ರೀತಿ ಆಲೋಚನೆಗಳು ಹೆಚ್ಚಾಗಿ ಬರುವುದು ಒಬ್ಬ ವ್ಯಕ್ತಿಯ ಮೇಲೆ ಪ್ರೀತಿ ಆದಾಗ. ಎರಡು ಕಡೆಯಿಂದ ಒಂದೇ ರೀತಿಯ ಭಾವನೆಗಳು ಇದ್ದು ಮುಖಾಮುಖಿಯಾಗಿ ನೇರವಾಗಿ ಮಾತನಾಡಿಕೊಂಡರೆ ಸಮಸ್ಯೆ ಇರುವುದಿಲ್ಲ ಆದರೆ ಕೆಲವರಿಗೆ ಆ ಸ್ಪಷ್ಟತೆ ಇರುವುದಿಲ್ಲ ಮತ್ತು ಕೆಲವರು ಎದುರಿಗಿರುವ ವ್ಯಕ್ತಿಯ ಭಾವನೆ ಅರಿಯಲು ಕ’ಷ್ಟ ಪಡುತ್ತಾರೆ.

ಹೀಗಾಗಿ ಸದಾ ಅವರದೇ ಯೋಚನೆಯಲ್ಲಿ ಮುಳುಗಿ ಕನಸು ಕಾಣುತ್ತಾರೆ ಮುಂದೊಂದು ದಿನ ಅವರ ನಿರೀಕ್ಷೆ ಉತ್ತರ ಬರದೇ ಇದ್ದಾಗ ಡಿಪ್ರೆಶನ್ ಗೆ ಹೋಗಿ ಬಿಡುತ್ತಾರೆ. ಈ ರೀತಿ ದು’ರಂ’ತ ಆಗುವುದರ ಬದಲು ಮೊದಲೇ ಭಾವನೆ ಏನಿದೆ ಎಂದು ತಿಳಿದುಕೊಳ್ಳುವುದು ಉತ್ತಮ. ನೇರವಾಗಿ ತಿಳಿದುಕೊಳ್ಳಲು ಆಗದೆ ಇದ್ದರೆ ಈಗ ನಾವು ಹೇಳಿದ ಈ ವಿಧಾನವನ್ನು ಅನುಸರಿಸಿ ಅದನ್ನು ಗೆಸ್ ಮಾಡಿ.

ಈಗ ನಿಮ್ಮ ಎದುರಿಗೆ ಮೂರು ಪುಸ್ತಕಗಳು ಇದೆ ಎಂದುಕೊಳ್ಳಿ. ಒಂದು ಪುಸ್ತಕ ಕೇಸರಿ ಬಣ್ಣದ್ದು 1 ಎಂದು ಬರೆದಿದೆ, ಮತ್ತೊಂದು ಪುಸ್ತಕ ಬಿಳಿ ಬಣ್ಮದಲ್ಲಿದ್ದು ಅದರಲ್ಲಿ 2 ಎಂದು ಬರೆದಿದೆ, ಮತ್ತೊಂದು ಪುಸ್ತಕ ಹಳದಿ ಬಣ್ಣದಲ್ಲಿದ್ದು ಅದರಲ್ಲಿ 3 ಎಂದು ಬರೆದಿದೆ ಎಂದುಕೊಳ್ಳಿ ಈಗ ಕಣ್ಣು ಮುಚ್ಚಿಕೊಂಡು ಆ ಮೂರು ಪುಸ್ತಕಗಳಲ್ಲಿ ಯಾವುದಾದರು ಒಂದನ್ನು ಆರಿಸಿ.

ನಿಮಗೆ ಈಗಲೂ ಕೂಡ ನಿಮ್ಮ ನಿರ್ಧಾರದ ಬಗ್ಗೆ ನಂಬಿಕೆ ಇಲ್ಲ ಎಂದರೆ ನೀವು ಮೂರು ಚೀಟಿಗಳಲ್ಲಿ ಮೂರು ಸಂಖ್ಯೆಯನ್ನು ಬರೆದು ಅದನ್ನು ಚೆನ್ನಾಗಿ ಕುಲಕ್ಕೆ ಕೆಳಗೆ ಹಾಕಿ ಯಾವುದಾದರೂ ಚಿಕ್ಕ ಮಕ್ಕಳಿಗೆ ತೆಗೆದುಕೊಡಲು ಹೇಳಿ ಮತ್ತು ಅದರಲ್ಲಿರುವ ಸಂಖ್ಯೆ ಯಾವುದು ಎಂದು ನೋಡಿ ಆ ಸಂಖ್ಯೆ ಆಧಾರದ ಮೇಲೆ ರಿಸಲ್ಟ್ ಹೀಗಿದೆ.

ನೀವಾಗಿ ಆರಿಸಿರುವ ಅಥವಾ ನಿಮಗೆ ಬಂದಿರುವ ಸಂಖ್ಯೆ ಕೇಸರಿ ಬಣ್ಣದ ಪುಸ್ತಕದ 1 ಎಂದು ಇದ್ದರೆ ನೀವು ನೇರವಾಗಿ ಹೋಗಿ ನಿಮ್ಮ ಮನಸ್ಸಿನಲ್ಲಿರುವುದನ್ನೆಲ್ಲವನ್ನು ಅವರ ಮುಂದೆ ಹೇಳಿಕೊಳ್ಳುವುದು ಬಹಳ ಉತ್ತಮ ಮತ್ತು ಈ ವಿಚಾರದಲ್ಲಿ ಅವರು ಸಮ್ಮತಿ ಸೂಚಿಸುವ ಸಾಧ್ಯತೆಗಳು ಕೂಡ ಇವೆ.

ಒಂದು ವೇಳೆ ಅವರದ್ದೇ ಆದ ಕಾರಣಗಳು ಇದ್ದರೂ ಅವು ನಿಮಗೆ ಬಹಳ ಬೇಗ ಮನೆವರಿಗೆ ಆಗಿ ಆ ಕ್ಷಣದಲ್ಲಿ ನೋವಾದರೂ ಅದರಿಂದ ಬಹಳ ಬೇಗ ಆಚೆ ಬಂದು ನಿಮ್ಮ ಜೀವನವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತೀರಾ ಹಾಗಾಗಿ ಯಾವುದೇ ಗೊಂದಲ ಇಲ್ಲದೆ ಈ ವಿಚಾರದ ಬಗ್ಗೆ ಮುಕ್ತವಾಗಿ ಅವರೊಂದಿಗೆ ಮಾತನಾಡಿ.

ನಿಮಗಿರುವ ಸಂಖ್ಯೆ 2 ಆಗಿದ್ದರೆ ನೀವು ಅವರ ಮೇಲೆ ಅಪಾರ ಪ್ರೀತಿ ಹೊಂದಿದ್ದೀರಾ ಹಾಗೂ ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ ಎಂದು ಅರ್ಥ. ಆದರೆ ಅವರು ನಿಮಗೆ ಯಾವುದೇ ರೀತಿಯ ಸ್ಪಷ್ಟ ಸೂಚನೆ ಕೊಡದೆ ಆಗಾಗ ಹತ್ತಿರವಾಗಿ, ಆಗಾಗ ಕಾರಣ ಇಲ್ಲದೆ ದೂರ ಆಗುತ್ತಿರುತ್ತಾರೆ.

ಈ ಸಂಬಂಧದಿಂದ ನಿಮಗೆ ನೋ’ವು ಹೆಚ್ಚಾಗುತ್ತದೆ ಆದರೆ ಎಷ್ಟೇ ನೋ’ವು ಆದರೂ ಅವರನ್ನೇ ಬಯಸುತ್ತೀರಿ. ನೀವು ಇದರಿಂದ ಆಚೆ ಬರಲು ಬಹಳ ಗಟ್ಟಿ ಮನಸ್ಸು ಮಾಡಬೇಕು ಇಲ್ಲವಾದಲ್ಲಿ ಅವರನ್ನು ಪಡೆದುಕೊಳ್ಳಲು ಅವರ ಮನಸ್ಸನ್ನು ಗೆಲ್ಲಲಾದರು ಪ್ರಯತ್ನ ಪಡಬೇಕು.

ನಿಮಗೇನಾದರೂ ಹಳದಿ ಬಣ್ಣದ ಪುಸ್ತಕದಲ್ಲಿರುವ 3 ಎನ್ನುವ ಸಂಖ್ಯೆ ಬಂದಿದ್ದರೆ ಸ್ವಲ್ಪ ದಿನ ಕಾದು ನೋಡಿ ನಿಮ್ಮ ರಿಸಲ್ಟ್ ತಿಳಿಯುತ್ತದೆ. ಯಾಕೆಂದರೆ ಅವರು ನಿಮ್ಮ ಮೇಲೆ ಇದೇ ಭಾವನೆ ಹೊಂದಿದ್ದರೆ ಅವರೇ ಬಂದು ಹೇಳುತ್ತಾರೆ.

ಒಂದು ವೇಳೆ ಅವರಿಗೆ ನಿಮ್ಮ ಮೇಲೆ ನಿಮ್ಮದೇ ರೀತಿ ಭಾವನೆ ಇಲ್ಲದೆ ಇದ್ದರೆ ನೀವು ಅದನ್ನು ಗಮನಿಸಿ ನಿಮಗೆ ಅವರ ಮೇಲಿರುವ ಆಸಕ್ತಿ ಕಳೆದುಕೊಳ್ಳುತ್ತೀರಿ ಮತ್ತು ಒಂದು ವೇಳೆ ನೀವು ಈಗ ಸಮಯದಲ್ಲಿ ಸೈಲೆಂಟ್ ಆಗಿದ್ದು ಅವರ ನಡವಳಿಕೆಗಳಿಂದ ಉತ್ತರ ಕಂಡುಕೊಂಡು ಸುಮ್ಮನಾದರೆ ಜೀವನಪೂರ್ತಿ ನೀವು ಅವರ ಜೊತೆ ಒಳ್ಳೆಯ ಸ್ನೇಹವನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ.

ಗೃಹಿಣಿಯರಿಗೆ ಅನುಕೂಲವಾಗುವ ಕೆಲವು ಅಡುಗೆ ಮನೆ ಟಿಪ್ ಗಳು.!

 

ಅಡುಗೆ ಮನೆ ಕೆಲಸದ ವಿಚಾರದಲ್ಲಿ ಎಷ್ಟು ಕಲಿತರು ಸಾಕಾಗುವುದಿಲ. ಲ ಯಾಕೆಂದರೆ ಅಡುಗೆಮನೆ ಎನ್ನುವುದು ಅಷ್ಟೊಂದು ಜವಾಬ್ದಾರಿಯ ಕೆಲಸವಾಗಿದೆ. ಮನೆಯವರ ಆರೋಗ್ಯದ ಗುಟ್ಟು ಹಾಗೂ ಮನೆಯ ಹಣ ಪೋಲಾಗದಂತೆ ತಡೆಯುವ ಜಾಗ ಅಡುಗೆ ಮನೆಯೇ ಆಗಿದೆ. ಹಾಗಾಗಿ ಹೆಚ್ಚಿನ ಸಮಯ ಅಡುಗೆ ಮನೆಯಲ್ಲಿ ಸಮಯ ಕಳೆಯುವ ಹೆಣ್ಣು ಮಕ್ಕಳಿಗೆ ಅಡುಗೆ ಕೆಲಸ ಕಡಿಮೆ ಮಾಡಿ ಅನುಕೂಲವಾಗುವಂತಹ ಕೆಲವು ಟಿಪ್ ಗಳನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ.

* ಸೇವನೆ ಕತ್ತರಿಸಿ ಇಟ್ಟರೆ ಅದು ಕಪ್ಪಾಗುತ್ತದೆ. ಹೀಗಾಗಬಾರದು ಎಂದರೆ ಕತ್ತರಿಸಿದ ಮೇಲೆ ಅದಕ್ಕೆ ನಿಂಬೆರಸ ಅಥವಾ ಉಪ್ಪು ಸವರಿ ಇಡಿ.
* ಯಾವಾಗಲೂ ತರಕಾರಿಗಳನ್ನು ಚೆನ್ನಾಗಿ ತೊಳೆದು ನಂತರ ಕತ್ತರಿಸಿ. ಕೆಲವರು ತರಕಾರಿಗಳನ್ನು ಕತ್ತರಿಸಿ ನಂತರ ತೊಳೆಯುತ್ತಾರೆ ಇದು ತಪ್ಪಾದ ಕ್ರಮ
* ನೀವು ಮಾಡುತ್ತಿರುವ ಗ್ರೇವಿ ಮಂದವಾಗಿ ಆಗಬೇಕು ಎಂದರೆ ಅಥವಾ ಯಾವುದೇ ಪಲ್ಯಗಳು ಹೆಚ್ಚಾಗಬೇಕು ಎಂದರೆ ತೆಂಗಿನಕಾಯಿಯನ್ನು ಬಳಸಿ ಇದನ್ನು ಯಾವುದೇ ತರಕಾರಿ ಜೊತೆ ಬೇಕಾದರೂ ಬಳಸಬಹುದು.

* ಪದೇಪದೇ ಕಾಯಿತುರಿಯುವುದು ಕ’ಷ್ಟ. ಹಾಗಾಗಿ ಕಾಯಿತುರಿ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು, ಆದರೆ ಬೇಗ ಕೆಟ್ಟು ಹೋಗುತ್ತದೆ. ಹೀಗಾಗಬಾರದು ಎಂದರೆ ಅದರ ಜೊತೆ ಕೆಲವು ಕರಿಬೇವಿನ ಎಲೆಗಳನ್ನು ಹಾಕಿ ಇಡಿ ಬಹಳ ದಿನದವರೆಗೆ ಫ್ರೆಶ್ ಆಗಿರುತ್ತದೆ
* ಹುರುಳಿಕಾಯಿ ಗೋರಿಕಾಯಿ ಇವುಗಳ ನಾರು ತೆಗೆದು ಇಟ್ಟರೆ ಬೇಗ ಒಣಗುವುದಿಲ್ಲ

* ಹುರುಳಿಕಾಯಿ ಅಥವಾ ಗೋರಿಕಾಯಿಯನ್ನು ಉರಿದು ಅಡುಗೆ ಮಾಡುವಾಗ ಅದರ ಬಣ್ಣ ಹಾಗೆ ಇರಬೇಕು ಎಂದರೆ ಉರಿಯುವಾಗ ಸ್ವಲ್ಪ ಉಪ್ಪು ಬೆರೆಸಿ.
* ಹಸಿಮೆಣಸಿನಕಾಯಿ ತೊಟ್ಟುಗಳನ್ನು ಬಿಡಿಸಿ ಸ್ಟೋರ್ ಮಾಡಿ ಇಟ್ಟರೆ, ಆವು ಬೇಗ ಹಣ್ಣಾಗುವುದಿಲ್ಲ.
* ಸಾಂಬಾರು ಕೂಟು ಮಾಡುವಾಗ ಮಸಾಲೆ ರುಬ್ಬಿ ಹಾಕುತ್ತಾರೆ. ರುಬ್ಬುವ ಮಸಾಲೆಗೆ ಒಂದು ಹಸಿ ಟೊಮೆಟೊ ಹಾಕಿ ರುಬ್ಬಿ, ಇದರಿಂದ ಅಡುಗೆ ಬಣ್ಣ ಚೆನ್ನಾಗಿರುತ್ತದೆ ಮತ್ತು ರುಚಿ ಹೆಚ್ಚಾಗುತ್ತದೆ.

* ಹಸಿಮೆಣಸಿನಕಾಯಿ ಖಾರಕ್ಕೆ ಉಪ್ಪಿನ ಜೊತೆ ಸ್ವಲ್ಪ ನಿಂಬೆರಸ ಹಾಕಿ ಫ್ರೈ ಮಾಡಿದರೆ ಬಿಸಿ ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತೆ, ಇದನ್ನು ಬಹಳ ದಿನದವರೆಗೆ ಇಟ್ಟುಕೊಳ್ಳಬಹುದು.
* ಹುರುಳಿಕಾಯಿ, ಕ್ಯಾರೆಟ್, ಗೋರಿಕಾಯಿ, ಬೆಂಡೆಕಾಯಿ ಇಂತಹ ತರಕಾರಿಗಳು ಬಾಡಿದ್ದರೆ ಅದನ್ನು ಸ್ವಲ್ಪ ಹೊತ್ತು ಉಪ್ಪು ನೀರಿನಲ್ಲಿ ಹಾಕಿ ಇಡಿ ಮತ್ತೆ ಫ್ರೆಶ್ ಆಗುತ್ತದೆ.

* ಬೀಟ್ರೋಟ್ ಹಚ್ಚುವಾಗ ಕೈ ಕೆಂಪಾಗುತ್ತದೆ, ಕೆಲವರಿಗೆ ಒಡೆಯುತ್ತದೆ ಈ ರೀತಿ ಆಗಬಾರದು ಎಂದರೆ ಮೊದಲೇ ಕೈಗೆ ಎಣ್ಣೆ ಸವರಿಕೊಂಡು ನಂತರ ಬೀಟ್ರೂಟ್ ಕಟ್ ಮಾಡಬೇಕು.
* ಪರಂಗಿ ಕಾಯಿ ಹಚ್ಚುವಾಗ ಮೊದಲು ಸಿಪ್ಪೆ ತೆಗೆದು ನಂತರ ತುದಿಗಳನ್ನು ಕಟ್ ಮಾಡಬೇಕು ಹೀಗೆ ಮಾಡುವುದರಿಂದ ಅದರ ಹಾಲು ಚಿಮ್ಮುವುದಿಲ್ಲ.

* ಪುದಿನ ಚಟ್ನಿ ರುಬ್ಬುವಾಗ ಸ್ವಲ್ಪ ನಿಂಬೆರಸ ಹಾಗೂ ಉಪ್ಪು ಹಾಕಿದರೆ ಚಟ್ನಿಯ ಬಣ್ಣ ಹಸಿರಾಗಿಯೇ ಇರುತ್ತದೆ.
* ಅಕ್ಕಿ ರೊಟ್ಟಿ ಮಾಡಲು ಹಿಟ್ಟನ್ನು ಬೇಯಿಸುವಾಗ ಸ್ವಲ್ಪ ಚಿರೋಟಿ ರವೆ ಬೆರೆಸಿ ಬೇಯಿಸಿದರೆ ರೊಟ್ಟಿ ಅಂಚು ಸೀಳಾಗುವುದಿಲ್ಲ
* ಪಾಯಸ ಮಾಡುವಾಗ ಹಾಲನ್ನು ಬಳಸಿದರೆ ಅದು ಮಂದವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ಇಂತಹ ಸಮಯದಲ್ಲಿ ಹಾಲಿನ ಪೌಡರ್ ಬಳಸಬಹುದು.

* ಜೇನುತುಪ್ಪವನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಗಟ್ಟಿಯಾಗುತ್ತದೆ. ಅದು ಬಹಳ ಬೇಗ ಕೆಡದ ವಸ್ತು ಆಗಿರುವುದರಿಂದ ಹೊರಗೆ ಶುಷ್ಕವಾದ ತಂಪಾದ ಸ್ಥಳದಲ್ಲಿಯೇ ಇಡಿ ಗಟ್ಟಿಯಾಗುವುದಿಲ್ಲ.
* ಹಾಟ್ ಬಾಕ್ಸ್ ನಲ್ಲಿ ಅಡುಗೆ ಹಾಕಿಟ್ಟಾಗ ಅದರಲ್ಲಿ ತೇವಾಂಶ ಇರುತ್ತದೆ. ಹೀಗಾಗಬಾರದು ಎಂದರೆ ಹಾಟ್ ಬಾಕ್ಸ್ ನಲ್ಲಿ ಇಟ್ಟು ಬಟ್ಟೆಯಿಂದ ಮುಚ್ಚಿ.

* ಬೇಯಿಸಿದ ಮೊಟ್ಟೆಯ ಸಿಪ್ಪೆ ತೆಗೆಯುವುದು ಸ್ವಲ್ಪ ಕಷ್ಟದ ಕೆಲಸ. ಬಿಸಿ ಇರುವಾಗ ಅದನ್ನು ತೆಗೆಯಲು ಹೋದರೆ ಸಿಪ್ಪೆ ಜೊತೆ ಒಳಗಡೆ ತಿರುಳು ಬರುತ್ತದೆ. ಇದನ್ನು ಸುಲಭವಾಗಿ ತೆಗೆಯಲು ಬೇಯಿಸಿದ ಮೊಟ್ಟೆಯನ್ನು ತಣ್ಣೀರಿಗೆ ಹಾಕಿ 10 ನಿಮಿಷಗಳ ಕಾಲ ಇಡಿ, ಅದು ಆರಿದ ಮೇಲೆ ಅದನ್ನು ತೆಗೆದುಕೊಂಡು ನೆಲಕ್ಕೆ ಮೆಲ್ಲಗೆ ಕುಟ್ಟಿ ನಿಧಾನವಾಗಿ ಸಿಪ್ಪೆಯನ್ನು ತೆಗೆಯಿರಿ.

ಹೆಂಡತಿಯಲ್ಲಿ ಈ ಗುಣಗಳು ಇದ್ದರೆ ಗಂಡನ ಬದುಕು ಸ್ವರ್ಗದಂತಿರುತ್ತದೆ.!

 

ಜೀವನದಲ್ಲಿ ಯಾವುದು ಕಡಿಮೆಯಾದರೂ ನೆಮ್ಮದಿ ಇರುವುದು ಬಹಳ ಮುಖ್ಯ. ಅದರಲ್ಲೂ ಕುಟುಂಬದಲ್ಲಿ ನೆಮ್ಮದಿ ಎನ್ನುವುದು ಬಹಳ ಮುಖ್ಯ. ಕುಟುಂಬದ ಕಲ್ಪನೆ ಬರುವುದೇ ಗಂಡ ಹೆಂಡತಿ ಮಕ್ಕಳು ಎನ್ನುವುದರಿಂದ. ಮಕ್ಕಳಿಗೆ ಅಪ್ಪ ಅಮ್ಮ ಸಂತೋಷವಾಗಿದ್ದರೆ ಅದಕ್ಕಿಂತ ಹೆಚ್ಚಿನ ಸಂತೋಷ ಮತ್ತೊಂದಿಲ್ಲ ಹಾಗೆಯೇ ಹಿರಿಯ ತಂದೆ ತಾಯಿಗಳಿಗೂ ಕೂಡ ಮಗ ಸೊಸೆ ಅಥವಾ ಮಗಳು ಅಳಿಯ ಅನ್ಯೋನ್ಯವಾಗಿದ್ದರೆ ಅದಕ್ಕಿಂತ ನೆಮ್ಮದಿ ಬೇರೊಂದಿಲ್ಲ.

ಇವೆಲ್ಲವೂ ಬೆಲೆ ಕಟ್ಟಲಾಗದ ಆಸ್ತಿಗಳು ಎದೆಲ್ಲರ ಮೂಲ ಗಂಡ ಹೆಂಡತಿಯ ಬಾಂಧವ್ಯದಲ್ಲಿ ಅಡಗಿದೆ. ಹಾಗಾಗಿ ಎಲ್ಲ ಸಂಬಂಧಗಳಿಗಿಂತಲೂ ಬಹಳ ಶ್ರೇಷ್ಠವಾದ ವಿಶೇಷವಾದ ಅನುಬಂಧವಾದ ಗಂಡ ಹೆಂಡತಿಯ ಸಂಬಂಧದಲ್ಲಿ ಆಯ್ಕೆ ಅವಕಾಶಗಳು ಕೂಡ ಇರುತ್ತವೆ.

ಯಾಕೆಂದರೆ ನಾವು ಯಾರ ಮನೆಯಲ್ಲಿ ಹುಟ್ಟಬೇಕು ಅಥವಾ ಯಾರು ನಮಗೆ ಮಕ್ಕಳಾಗಿ ಬರಬೇಕು ಎನ್ನುವುದನ್ನು ನಾವು ನಿರ್ಧರಿಸಲು ಆಗುವುದಿಲ್ಲ. ಆದರೆ ಬದುಕಿನ ಪೂರ್ತಿ ಅರ್ಧಾಂಗಿಯಾಗಿ ಬರುವ ಸಂಗಾತಿಯನ್ನು ಆರಿಸಿಕೊಳ್ಳುವ ಆಯ್ಕೆ ನಮಗಿದೆ.

ಹಾಗಾಗಿ ಈ ಆಯ್ಕೆ ವಿಷಯದಲ್ಲಿ ಹೆಣ್ಣಾಗಲಿ ಗಂಡಾಗಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ. ಬರೀ ಬಾಹ್ಯ ಆಕರ್ಷಣೆಗಳಿಗೆ ಒಳಗಾಗಿ ಬದುಕನ್ನು ಹಾಳು ಮಾಡಿಕೊಳ್ಳಬೇಡಿ. ಯಾಕೆಂದರೆ ಕೆಲವು ಹೆಣ್ಣು ಮಕ್ಕಳ ನೋಡಲು ಸುಂದರವಾಗಿ ಇಲ್ಲದೆ ಇದ್ದರೂ ಕೂಡ ಅವರಿಗೆ ಕುಟುಂಬವನ್ನು ಸರಿಯಾಗಿ ನಿರ್ವಹಿಸುವ, ಗಂಡನನ್ನು ಪ್ರೀತಿಯಿಂದ ನೋಡಿಕೊಳ್ಳುವ, ಗಂಡನ ಮನೆಯವರಿಗೆ ಗೌರವ ಕೊಟ್ಟು ಸಂಸಾರವನ್ನು ಸಾಗಿಸುವ ಗುಣಗಳು ಇರುತ್ತವೆ.

ಹಾಗಾಗಿ ಮದುವೆ ಹಂತಕ್ಕೆ ಬಂದಾಗ ಹೆಣ್ಣು ಗಂಡನ್ನು ಆಲಿಸುವಾಗ ಗಂಡು ಹೆಣ್ಣು ಆರಿಸುವಾಗ ಬರಿ ಸೌಂದರ್ಯದ ವಿಚಾರ ನೋಡದೆ ಗುಣವನ್ನು ನೋಡಿ ಸಂಬಂಧ ಬೆಳೆಸಿಕೊಳ್ಳುವುದು ಬಹಳ ಉತ್ತಮ ಮತ್ತು ಈಗ ನಾವು ಹೇಳುವ ಈ ಲಕ್ಷಣಗಳು ಇರುವಂತ ಹೆಂಡತಿ ಸಿಕ್ಕರಂತೆ ನಿಮ್ಮ ಬದುಕು, ಸ್ವರ್ಗವಾಗುವುದರಲ್ಲಿ ಅನುಮಾನವೇ ಇಲ್ಲ.

ಯಾವ ಹೆಣ್ಣು ಮಕ್ಕಳಿಗೆ ಹಿರಿಯರಿಗೆ ಗೌರವ ಕೊಡಲು ಗೊತ್ತಿರುತ್ತದೆಯೋ ಯಾವ ಹೆಣ್ಣು ಮಗಳು ಯಾವಾಗಲೂ ಪ್ರಾಮಾಣಿಕವಾಗಿರುತ್ತಾಳೋ ತನಗೆ ಕ’ಷ್ಟ ಎದುರಾಗುತ್ತದೆ ಎಂದು ಗೊತ್ತಿದ್ದರೆ ಕೂಡ ಮುಚ್ಚು ಮರೆ ಮಾಡದೆ ಸತ್ಯವನ್ನು ಹೇಳುತ್ತಾಳೆ ಆಕೆ ನಿಜವಾಗಿಯೂ ಗ್ರೇಟ್ ಈ ರೀತಿಯ ಹೆಣ್ಣು ಮಕ್ಕಳು ಸಂಗಾತಿಯಾಗಿ ಬಂದರೆ ಜನಪೂರ್ತಿ ನೆಮ್ಮದಿಯಾಗಿರಬಹುದು.

ಪ್ರತಿಯೊಬ್ಬರು ಮನೆಯಿಂದ ಎಲ್ಲೇ ದುಡಿಯಲು ಹೋದರು ಕೊನೆಗೆ ವಾಪಸ್ ಬರುವುದು ಮನೆಗೆ, ಆ ಮನೆಯಲ್ಲಿ ನೆಮ್ಮದಿ ಇರಬೇಕಾದದ್ದು ಬಹಳ ಮುಖ್ಯ. ಹಾಗಾಗಿ ಹೆಣ್ಣು ಮಕ್ಕಳು ಅಥವಾ ಮದುವೆಯಾದ ಗೃಹಿಣಿಯರು ಮನೆಯ ಶಾಂತಿ ಕಾಪಾಡಿಕೊಳ್ಳಿ, ಗಂಡನ ಕ’ಷ್ಟ ಸುಖ ಅರಿತು ಅವರ ಇಚ್ಛೆಯಂತೆ ಬದುಕಿ ಅವರ ಕನಸುಗಳಿಗೆ ಸಪೋರ್ಟ್ ಮಾಡಿ.

ಗಂಡನಿಗೆ ಗೌರವ ಕೊಡಿ, ಗಂಡ ಹಾಗೂ ಗಂಡನ ಮನೆಯವರನ್ನು ಅವಮಾನ ಮಾಡಿ ಮಾತನಾಡಬೇಡಿ, ನಿಮ್ಮ ತವರು ಮನೆಗೆ ಹೋಗಿ ಗಂಡನ ಮನೆಯ ಸಣ್ಣ ಪುಟ್ಟ ಘಟನೆಗಳನ್ನು ಬಣ್ಣ ಕಟ್ಟಿ ಹೇಳಬೇಡಿ. ಅವಶ್ಯಕತೆ ಇಲ್ಲದಿದ್ದರೂ ಕೂಡ ಗಂಡನಿಗೆ ದುಬಾರಿ ಒಡವೆಗಳು, ದುಬಾರಿ ಬಟ್ಟೆಗಳನ್ನು ಕೊಡಿಸಿ ಎಂದು ಹಿಂಸಿಸಬೇಡಿ.

ಗಂಡನ ಆರೋಗ್ಯದ ಬಗ್ಗೆ ಹೆಚ್ಚು ಮಹತ್ವ ಕೊಡಿ ಅವರ ಬೇಕು ಬೇಡಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಡೆದುಕೊಳ್ಳಿ. ನೀವು ಈ ರೀತಿ ಇದ್ದರೆ ಹೊರಗೆ ಅವರಿಗೆ ಏನೇ ಸಮಸ್ಯೆ ಇದ್ದರೂ ಎದುರಿಸಿ ಬರುತ್ತಾರೆ ಮತ್ತು ತಮಗೆ ಎಷ್ಟೇ ಹೊರೆ ಇದ್ದರೂ ಅದರಲ್ಲೂ ಕೂಡ ನಿಮ್ಮ ಕಾರಣದಿಂದಾಗಿ ನೆಮ್ಮದಿ ಕಾಣುತ್ತಾರೆ.

ಕೈಗೆ ಬೆಳ್ಳಿ ಉಂಗುರ ಹಾಕಿಕೊಂಡರೆ ಜೀವನದಲ್ಲಿ ಏನೆಲ್ಲಾ ಅದ್ಭುತಗಳು ನಡೆಯುತ್ತದೆ ನೋಡಿ

 

ಕೈ ಬೆರಳಿಗೆ ಉಂಗುರ ಹಾಕುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ರೂಢಿ. ಬೆರಳುಗಳಲ್ಲಿ ಕಿರುಬೆರಳು ಹಾಗೂ ಮಧ್ಯದ ಬೆರಳಿನ ನಡುವೆ ಇರುವ ಬೆರಳನ್ನು ಉಂಗುರದ ಬೆರಳು ಎಂದು ಕರೆಯಲಾಗುತ್ತದೆ. ಈ ಉಂಗುರದ ಬೆರಳಿಗೆ ಉಂಗುರ ಹಾಕಿದರೆ ಕೆಲವು ಸಂಪ್ರದಾಯಗಳಲ್ಲಿ ಮದುವೆ ಆದಂತೆ.

ಯಾಕೆಂದರೆ ಆ ಉಂಗುರದ ಬೆರಳಿನಲ್ಲಿರುವ ನರವು ನೇರವಾಗಿ ಹೃದಯಕ್ಕೆ ಸಂಪರ್ಕಿಸುತ್ತದೆ ಹಾಗಾಗಿ ಅದನ್ನು ಹಾರ್ಟ್ ಕನೆಕ್ಷನ್ ಎಂದು ಗೌರವಿಸಲಾಗುತ್ತದೆ. ಆದರೆ ಈಗ ಫ್ಯಾಷನ್ ಹೆಸರಿನಲ್ಲಿ ನಾವು ಎಲ್ಲಾ ಬೆರಳಿಗೂ ಉಂಗುರಗಳನ್ನು ಹಾಕುತ್ತಿದ್ದೇವೆ ಮತ್ತು ಇದುವರೆಗೂ ವಜ್ರದ ಹಾಗೂ ಬಂಗಾರದ ಉಂಗುರಗಳು ಹೆಚ್ಚು ವಿಶೇಷ ಎನಿಸುತ್ತಿದ್ದವು.

ಈಗ ಟ್ರೆಂಡ್ ಬದಲಾಗಿ ನಮ್ಮ ರಾಶಿ ನಕ್ಷತ್ರಕ್ಕೆ ತಕ್ಕ ಹರಳಿನ ಉಂಗುರಗಳು ಮತ್ತು ನಮ್ಮ ರಾಶಿಗೆ ತಕ್ಕ ಲೋಹದ ಉಂಗುರಗಳನ್ನು ಕೂಡ ಧರಿಸುತಿದ್ದೇವೆ. ಇವುಗಳಲ್ಲಿ ಎಲ್ದದಕ್ಕಿಂತ ಬೆಳ್ಳಿಯ ಉಂಗುರವನ್ನು ಧರಿಸುವುದು ಎಲ್ಲಕ್ಕಿಂತ ಹೆಚ್ಚು ಶ್ರೇಷ್ಠ. ಯಾಕೆ ಬೆಲ್ಲಿ ಉಂಗುರವನ್ನು ಧರಿಸಬೇಕು ಎನ್ನುವುದಕ್ಕೆ ಕೆಲ ಕಾರಣಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

* ಬೆಳ್ಳಿಯ ಉಂಗುರ ಧರಿಸುವುದರಿಂದ ಮನಸ್ಸಿನ ಚಂಚಲತೆ ದೂರ ಆಗುತ್ತದೆ ಮನಸ್ಸಿನಲ್ಲಿ ಸಕರಾತ್ಮಕ ಭಾವನೆಗಳು ಮೂಡುತ್ತವೆ.
* ಬೆಳ್ಳಿಯ ಉಂಗುರ ಧರಿಸುವುದರಿಂದ ಕೋ’ಪ ಕಂಟ್ರೋಲ್ ಗೆ ಬರುತ್ತದೆ, ಶಾರ್ಟ್ ಟೆಂಪರ್ ಇರುವವರು ಬೆಳಿಯ ಉಂಗುರವನ್ನು ಧರಿಸುವುದರಿಂದ ಅವರ ಸಿ’ಟ್ಟ’ನ್ನು ನಿಯಂತ್ರಣ ಮಾಡಬಹುದು

* ಬೆಳ್ಳಿಯ ಉಂಗುರ ಧರಿಸುವುದರಿಂದ ರಾಶಿ ಚಕ್ರದಲ್ಲಿ ಚಂದ್ರ ಮತ್ತು ಬುಧನು ಶಕ್ತಿಶಾಲಿ ಆಗುತ್ತಾನೆ. ಮನಸ್ಸಿನ ಕಾರಕನಾಗಿರುವ ಚಂದ್ರನು ಈ ಮೇಲೆ ತಿಳಿಸಿದಂತೆ ಮನಸ್ಸನ್ನು ತಿಳಿಗೊಳಿಸುವಂತಹ ಪರಿಣಾಮ ಉಂಟು ಮಾಡಿದರೆ ಬುಧ ಗ್ರಹ ಬುದ್ದಿಯ ದೇವತೆ ಎಂದು ಹೇಳಲಾಗುತ್ತದೆ. ಬುಧನ ಒಳ್ಳೆಯ ಪ್ರಭಾವದಿಂದ ಬುದ್ಧಿ ಚುರುಕಾಗುತ್ತದೆ, ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವವರು ಬೆಳ್ಳಿಯ ಉಂಗುರ ಧರಿಸಿದರೆ ಒಳ್ಳೆಯದು. ನಿಮ್ಮ ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ಬೆಳ್ಳಿಯ ಉಂಗುರವನ್ನು ಧರಿಸಬಹುದು.

* ಬೆಳ್ಳಿಯ ಉಂಗುರ ಧರಿಸುವುದರಿಂದ ಶಕ್ತಿದೇವತೆ ಪಾರ್ವತಿ ದೇವಿ ಮತ್ತು ಭಗವಂತನಾದ ಮಹಾದೇವನ ಆಶೀರ್ವಾದ ಕೂಡ ಸಿಗುತ್ತದೆ.ಬೆಳ್ಳಿಯನ್ನು ರಜ ಎಂದು ಕರೆಯುತ್ತಾರೆ.ಈ ರಜಸ್ಸು ಪಾರ್ವತಿ ದೇವಿಯಿಂದ ಉತ್ಪತ್ತಿಯಾಗಿರುತ್ತದೆ. ಒಂದು ವೇಳೆ ಬೆಳ್ಳಿಯ ಉಂಗುರ ಧರಿಸಿದರೆ ಅಸಾಧ್ಯವಾದ ಕಾರ್ಯಗಳನ್ನು ತಾಯಿ ಮಹಾಮಾಯೆಯ ಕೃಪಾಕಟಾಕ್ಷದಿಂದ ಮಾಡಬಹುದು.

* ಬೆಳ್ಳಿಯ ಉಂಗುರ ಧರಿಸಿದರೆ ದೈವಿಕ ಶಕ್ತಿ ಸಿದ್ದಿಗೊಳ್ಳುತ್ತದೆ.
* ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ನರದೌರ್ಬಲ್ಯದ ಸಮಸ್ಯೆ ದೂರ ಆಗುತ್ತದೆ. ಇದರಿಂದ ರಕ್ತಕ್ಕೆ ಸಂಬಂಧಿಸಿದ ರೋಗವನ್ನು ಕೂಡ ಕಂಟ್ರೋಲ್ ಆಗುತ್ತದೆ. ಹೆಣ್ಣು ಮಕ್ಕಳು ಕಾಲಿಗೆ ಬೆಳ್ಳಿಯ ಕಾಲುಂಗುರ ಧರಿಸುವುದರಿಂದ ಗರ್ಭಕೋಶಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನ್ಯಾಚುರಲ್ ಆಗಿ ಪರಿಹಾರ ಸಿಗುತ್ತದೆ

* ಬೆಳ್ಳಿಯ ಉಂಗುರ ಧರಿಸಿದಾಗ ಚಂದ್ರನು ಶಕ್ತಿಶಾಲಿ ಆದಾಗ ಮುಖದಲ್ಲಿ ಒಂದು ಹೊಳಪು ಬರುತ್ತದೆ. ಜನರನ್ನು ನಿಮ್ಮತ್ತ ಆಕರ್ಷಿಸುವ ಶಕ್ತಿ ಬೆಳ್ಳಗಿದೆ.
* ಬೆಳ್ಳಿಯನ್ನು ತಾಮ್ರ ಮತ್ತು ಚಿನ್ನದ ಜೊತೆ ಸೇರಿಸಿಕೊಂಡರೆ ಮನಸ್ಸು ಮತ್ತು ದೇಹದ ಆರೋಗ್ಯದ ಜೊತೆ ಸುಖ, ಶಾಂತಿ, ನೆಮ್ಮದಿ, ಸಂಪತ್ತು ತಾನಾಗೆ ಸಿಗಲು ಶುರು ಆಗುತ್ತವೆ.

* ಬೆಳ್ಳಿಯು ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು, ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಇದೆ. ಹಾಗಾಗಿ ಚಿಕ್ಕ ಮಕ್ಕಳಿಗೆ ಬೆಳ್ಳಿಯ ಬಟ್ಟಲು ಹಾಗೂ ಬೆಳ್ಳಿಯ ಚಮಚದಲ್ಲಿ ತಿನಿಸುತ್ತಾರೆ. ಆದರೆ ಬೆಳೆಯುತ್ತಾ ಹೋದಂತೆ ಅದನ್ನು ಬದಲಾಯಿಸಬೇಕು ಎನ್ನುವ ನಿಯಮ ಇಲ್ಲ. ದೊಡ್ಡವರದ ಮೇಲೆ ಅನುಕೂಲತೆ ಇಲ್ಲದವರು ಬೆಳ್ಳಿ ತಟ್ಟೆ ಖರೀದಿಸಲು ಆಗದಿದ್ದರೆ ಬೆಳ್ಳಿಯ ಉಂಗುರಗಳನ್ನು ಹಾಕಿಕೊಂಡು ಊಟ ಮಾಡುವುದರಿಂದ ಕೂಡ ಸಾಕಷ್ಟು ಆರೋಗ್ಯಕ್ಕೆ ಪೂರಕವಾದ ಅಂಶಗಳು ದೇಹಕ್ಕೆ ಸೇರುತ್ತವೆ.

 

ಉಪ್ಪಿನ ಈ 15 ಪರಿಹಾರಗಳು ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತವೆ.!

 

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ಗಾದೆ ಮಾತೇ ಇದೆ. ಈ ಮಾತು ಅಡುಗೆಗೆ ಉಪ್ಪು ಎಷ್ಟು ಮುಖ್ಯ ಎನ್ನುವುದನ್ನು ತಿಳಿಸುತ್ತದೆ. ಹಾಗಾಗಿ ಕೆಲವು ಕಡೆ ಉಪ್ಪನ್ನು ರುಚಿ ಎಂದು ಕೂಡ ಕರೆಯುತ್ತಾರೆ. ಉಪ್ಪು ಅಡುಗೆಗೆ ಮಾತ್ರವಲ್ಲ ಅದು ಆಯುರ್ವೇದದಲ್ಲಿ ಕೂಡ ಬಹಳ ಮಹತ್ವದ ಸ್ಥಾನ ಗಿಟ್ಟಿಸಿಕೊಂಡಿದೆ.

ಉಪ್ಪು ಅನೇಕ ಕಾಯಿಲೆಗಳಿಗೆ ಔಷಧಿಯೂ ಹೌದು ಇದಿಷ್ಟು ಮಾತ್ರವಲ್ಲದ ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ಉಪ್ಪು ಬಹಳ ಮುಖ್ಯ. ಉಪ್ಪನ್ನು ತಾಯಿ ಮಹಾಲಕ್ಷ್ಮಿಗೆ ಹೋಲಿಸಲಾಗುತ್ತದೆ ಹಾಗಾಗಿ ಒಪ್ಪಿಗೆ ಎಲ್ಲರೂ ಬಹಳ ಗೌರವ ಕೊಡುತ್ತಾರೆ ಕೆಲವು ತಂತ್ರ ಶಕ್ತಿಗಳ ಬಳಕೆಗೆ ಉಪ್ಪನ್ನು ವಸ್ತುವಾಗಿ ಬಳಸುತ್ತಾರೆ.

ಯಾಕೆಂದರೆ ಉಪ್ಪಿಗೆ ಎಲ್ಲ ನಕಾರಾತ್ಮಕ ಶಕ್ತಿಗಳನ್ನು ತೊಡೆದು ಹಾಕುವ ಶಕ್ತಿ ಇದೆ, ಉಪ್ಪಿನ ಬಳಕೆ ಮಾನಸಿಕ ಒತ್ತಡವನ್ನು ಕುಟುಂಬಕ್ಕಾಗಿರುವ ದೃಷ್ಟಿ ದೋಷ, ವಾಸ್ತುದೋಷಗಳನ್ನು ಪರಿಹಾರ ಮಾಡುತ್ತದ.ೆ ಯಾವ ರೀತಿ ಉಪ್ಪಿನಿಂದ ಪ್ರಯೋಗಗಳನ್ನು ಮಾಡಿ ನಮ್ಮ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.

1. ಮನೆಯಲ್ಲಿರುವ ಒಂದು ಗಾಜಿನ ಲೋಟ, ಅದರ ತುಂಬಾ ಉಪ್ಪು ಹಾಗೂ ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು ಒಂದು ದಿನ ಸಂಜೆ ಸಮಯ ಆ ಕೆಂಪು ವಸ್ತ್ರಕ್ಕೆ ಉಪ್ಪನ್ನು ಹಾಕಿ ಗಂಟು ಕಟ್ಟಿ ಮನೆಗೆ ದೃಷ್ಟಿ ತೆಗೆದು ಮನೆಯ ಮುಂಭಾಗಕ್ಕೆ ಕಟ್ಟಿದರೆ ಮನೆಯಲ್ಲಿರುವ ಎಲ್ಲ ನಕಾರತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಮನೆಯ ಅಕ್ಕಪಕ್ಕ ನಕಾರಾತ್ಮಕ ಶಕ್ತಿಗಳ ಸಂಚಾರ ಇಟ್ಟರೆ ಅಥವಾ ಮನೆ ಮೇಲೆ ನಕಾರಾತ್ಮಕ ಪ್ರಭಾವಗಳು ಆಗಿದ್ದರೆ ಅದನ್ನು ಕೂಡ ಪರಿಹಾರ ಮಾಡುತ್ತದೆ. ಒಂದು ವಾರ ಆದ ನಂತರ ಆ ಉಪ್ಪಿನ ಗಂಟನ್ನು ಬಿಚ್ಚಿ ಯಾವುದಾದರೂ ಗಿಡದ ಬುಡಕ್ಕೆ ಅಥವಾ ಹರಿಯುವ ನೀರಿಗೆ ಹಾಕಬಹುದು.

2. ಮನೆಯಲ್ಲಿ ವಿನಾಕಾರಣ ಕ’ಲ’ಹ, ಮ’ನ’ಸ್ಥಾ’ಪಗಳು, ಇದ್ದಕ್ಕಿದ್ದಂತೆ ಜ’ಗ’ಳಗಳು ಇಂತಹ ವಾತಾವರಣ ಉಂಟಾಗಿದ್ದರೆ, ಚೆನ್ನಾಗಿದ್ದ ಸಂಸಾರದಲ್ಲಿ ಈ ರೀತಿ ಆಗಲು ನರ ದೃಷ್ಟಿಯೇ ಕಾರಣ ಆಗಿರುತ್ತದೆ. ಹಾಗಾಗಿ ಆ ದೃಷ್ಟಿ ದೋಷ ನಿವಾರಣೆಗೆ ಮತ್ತು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳ ನಿವಾರಣೆಗೆ ಯಾವಾಗಲೂ ಮನೆಯನ್ನು ಒರೆಸುವಾಗ ನೀರಿಗೆ ಚಿಟಿಕೆ ಅರಿಶಿಣದ ಜೊತೆ ಒಂದು ಹಿಡಿ ಉಪ್ಪನ್ನು ಹಾಕಿಕೊಂಡು ಮನೆಯನ್ನು ಒರೆಸಬೇಕು ಆಗ ದೋಷಗಳು ಪರಿಹಾರವಾಗುತ್ತದೆ.

3. ಮನೆಯಲ್ಲಿ ಹಣಕಾಸಿನ ಕೊರತೆ ಇದ್ದರೆ, ಕೈಗೆ ಬಂದ ಹಣ ಉಳಿಯುತ್ತಿಲ್ಲ ಎಂದರೆ, ಸಾಲಬಾಧೆಗಳು ಹೆಚ್ಚಾಗಿದ್ದರೆ, ಯಾವ ಕೆಲಸವು ಕೈಗೂಡುತ್ತಿಲ್ಲ ಎನ್ನುವುದಾದರೆ ಈ ಸಮಸ್ಯೆ ಪರಿಹಾರವಾಗಿ ನಿಮ್ಮ ಆರ್ಥಿಕ ಅಭಿವೃದ್ಧಿಯಾಗಲು ಮತ್ತು ನಿಮ್ಮ ಕಡೆಗೆ ಹಣದ ಆಕರ್ಷಣೆ ಹೆಚ್ಚಾಗಲು ಉಪ್ಪಿನಿಂದ ಮತ್ತೊಂದು ಪ್ರಯೋಗವನ್ನು ಮಾಡಬಹುದು.

ಆದರೆ ಇದನ್ನು ಯಾರು ಕೂಡ ನೋಡಬಾರದು ಮನೆಯಲ್ಲಿ ಗೃಹಿಣಿ ಒಂದು ದಿನ ಮನೆಯನ್ನು ಸ್ವಚ್ಛ ಮಾಡಿ ನಿಮ್ಮ ಮನೆ ದೇವರನ್ನು ಪ್ರಾರ್ಥನೆ ಮಾಡಿ ಹಾಗೆಯೇ ಹಣದ ದೇವತೆಯಾದ ಶ್ರೀ ಮಹಾಲಕ್ಷ್ಮಿಯನ್ನು ಜೊತೆಗೆ ನಾರಾಯಣನನ್ನು ಮನಸಾರೆ ಪ್ರಾರ್ಥಿಸಿ ಬಳಿಕ ಸಂಜೆ ಸಮಯ ಗಾಜಿನ ಬಟ್ಟಲು ಅಥವಾ ಲೋಟದಲ್ಲಿ ಅರ್ಧ ಭಾಗ ಉಪ್ಪನ್ನು ತುಂಬಿಸಿ ಆ ಉಪ್ಪನ್ನು ಮನೆಯ ಮೂಲೆ ಮೂಲೆಗೂ ಹಿಡಿದುಕೊಂಡು ಓಡಾಡಬೇಕು, ಬಳಿಕ ಅದನ್ನು ತಂದು ಹಣ ಇಡುಲ‌ವ ಬೀರುವಿನ ಕೆಳಗೆ ಇಡಬೇಕು.

ಇದನ್ನು ಯಾರು ಕೂಡ ನೋಡಬಾರದು ಮತ್ತು ಇದು ಯಾರಿಗೂ ಕಾಣದ ರೀತಿ ನೋಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಬಹಳ ಉತ್ತಮ ಪರಿಣಾಮ ಬೀರುತ್ತದೆ. ಒಂದು ವಾರದ ಬಳಿಕ ಇದನ್ನು ತುಳಸಿ ಗಿಡದ ಬಳಿ ಅಥವಾ ಯಾವುದಾದರೂ ಗಿಡದ ಬಳಿ ಹಾಕಿ ಅಥವಾ ಯಾರು ತುಳಿಯದ ಜಾಗದಲ್ಲಿ ಹಾಕಿ ಬಳಿಕ ಮತ್ತೊಮ್ಮೆ ಇದೇ ಪ್ರಯೋಗವನ್ನು ನಿಮಗೆ ಎಷ್ಟು ದಿನ ಸಾಧ್ಯ ಅಷ್ಟು ದಿನ ಮುಂದುವರಿಸಿದರೆ ನಿಮ್ಮ ಆರ್ಥಿಕ ಸಮಸ್ಯೆ ಸುಧಾರಿಸುತ್ತದೆ.

ಹೆಣ್ಣು ಮಕ್ಕಳಿಗೆ ತಾಯಿಗಿಂತ ತಂದೆಯನ್ನು ಕಂಡರೆ ಹೆಚ್ಚು ಪ್ರೀತಿ ಯಾಕೆ ಗೊತ್ತಾ.?

 

ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೋ ಜಾದುಗಿರ ಅಪ್ಪ. ಹಗಲು ಮನೆಯಲ್ಲಿ ಕೂಲಿಕಾರ, ರಾತ್ರಿ ಮನೆಗೆ ಕಾವಲುಗಾರ, ಎಲ್ಲ ಕೊಡಿಸುವ ಸಾಹುಕಾರ ಅಪ್ಪ ಇದು ಕನ್ನಡದ ಚೌಕ ಸಿನಿಮಾದ ಹಾಡೊಂದರ ಸಾಲು. ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಈ ಸಾಹಿತ್ಯದ ಸಾಲುಗಳ ಮೇಲೆ ಕಣ್ಣಾಡಿಸಿದರೆ ಸಾಕು ಕಣ್ಣಂಚಲಿ ಹೆಣ್ಣು ಮಕ್ಕಳಿಗೆ ಕಣ್ಣಂಚಲಿ ನೀರು ತುಂಬುತ್ತದೆ, ಅದು ಆತ್ಮೀಯತೆಯ ಕಣ್ಣೀರಾಗಿರುತ್ತದೆ. ಯಾಕೆಂದರೆ ತಂದೆ ಹಾಗೂ ಮಕ್ಕಳ ಸಂಬಂಧ ಅಷ್ಟು ಶ್ರೇಷ್ಠ ಮತ್ತು ಪದಗಳಲ್ಲಿ ವಿವರಿಸಲಾಗದ ಅನುಬಂಧ ಅದು.

ಒಬ್ಬ ತಂದೆಗೆ ತನ್ನ ಮಗಳು ಹೆತ್ತ ತಾಯಿ ಹಾಗೂ ಸಹೋದರಿಯ ನಂತರ ಮೂರನೇ ತಾಯಿ ಆಗಿರುತ್ತಾಳೆ. ಹಾಗೇ ಮಗಳಿಗೆ ತಂದೆ ಸರ್ವಸ್ವವು ಆಗಿರುತ್ತಾನೆ. ಆಕೆ ಕಣ್ಣು ಬಿಟ್ಟಾಗಲಿಂದ ಅವಳ ದೃಷ್ಟಿಯಲ್ಲಿ ದೇವರು, ಹೀರೋ ಎಲ್ಲವೂ ಅವಳ ಅಪ್ಪನೇ. ಅಪ್ಪನನ್ನು ಹೊರಗಡೆ ಪ್ರಪಂಚ ಯಾವ ರೀತಿಯಾದರೂ ನೋಡಬಹುದು ಆದರೆ ಆ ಮಗಳ ಮುಂದೆ ಅಪ್ಪನನ್ನು ಮೀರಿಸುವಂತಹ ಯಾವ ಸಾಧಕನು ಇರುವುದಿಲ್ಲ. ಪ್ರತಿಯೊಬ್ಬ ತನಗೆ ಹೆಣ್ಣು ಮಗುವಾಗುತ್ತಿದ್ದಂತೆ ಬಹಳ ಮೆಚ್ಯುರ್ಡ್ ಆಗಿಬಿಡುತ್ತಾನೆ.

ಹೆಣ್ಣು ಮಗು ಹುಟ್ಟಿದ ತಕ್ಷಣ ಹೆಣ್ಣಾಯಿತು ಎಂದು ಮೂಗು ಮುರಿಯುವವರ ಮಧ್ಯೆ ಅಪ್ಪನಿಗೆ ಮಾತ್ರ ಮನೆಗೆ ಮಹಾಲಕ್ಷ್ಮಿ ಬಂದ ಸಂಭ್ರಮ ಇರುತ್ತದೆ. ಯಾವ ತಂದೆ ಕೂಡ ಹೆಣ್ಣು ಮಗು ಎಂದು ತನ್ನ ಮಗುವನ್ನು ತಾತ್ಸಾರ ಮಾಡಲಾರ, ಗಂಡು ಮಗುವಿಗೆ ಸಮವಾಗಿ ಅಲ್ಲ ಅದಕ್ಕಿಂತಲೂ ಒಂದು ಪಟ್ಟು ಹೆಚ್ಚಾಗಿ ಆ ಹೆಣ್ಣು ಮಗುವನ್ನು ನೋಡಿಕೊಳ್ಳುತ್ತಾನೆ.

ಅದುವರೆಗೂ ಆತ ಹೇಗೆ ಬದುಕಿದ್ದರೂ ಹೆಣ್ಣು ಮಗುವಿನ ತಂದೆಯಾದ ಮೇಲೆ ಆತನಿಗೆ ಹೆಣ್ಣು ಮಕ್ಕಳ ಮೇಲೆ ಗೌರವ ಬರುತ್ತದೆ. ಯಾರನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವ ಧೈರ್ಯವು ಸಹ ಮಾಡಲಾರ. ಕೆ’ಟ್ಟ ಮನುಷ್ಯನಲ್ಲೂ ಒಳ್ಳೆ ಸಂಸ್ಕಾರ ತುಂಬುವ ಶಕ್ತಿ ಆತನಿಗೆ ಹುಟ್ಟುವ ಮಕ್ಕಳಿಗೆ ಮಾತ್ರ ಇರುತ್ತದೆ.

ಒಂದು ಪಕ್ಷ ತಾಯಿ ಆ ಹೆಣ್ಣು ಮಗುವಿಗೆ ಹೊಡೆಯಬಹುದು, ಬೈಯಬಹುದು ಅಥವಾ ಮನಸ್ಸಿಗೆ ನೋ’ವಾಗುವಂತೆ ಮಾತನಾಡಬಹುದು. ಆಕೆಯ ಉದ್ದೇಶವು ಕೂಡ ಮಗಳು ಚೆನ್ನಾಗಿ ಬುದ್ಧಿ ಕಲಿಯಲಿ ಚೆನ್ನಾಗಿ ಓದಲಿ, ಒಳ್ಳೆಯವರ ಸಹವಾಸ ಮಾಡಲಿ ಎಂದು ಇರಬಹುದು, ಆದರೆ ಆಕೆ ಅದನ್ನು ನೇರವಾಗಿ ಮಾಡುತ್ತಾಳೆ. ಅದೇ ಈ ವಿಷಯಗಳು ತಂದೆಗೆ ತಿಳಿದರೆ ತಂದೆಯು ಬಹಳ ಮೃದುವಾಗಿ ಆಕೆಯ ಮನಪರಿವರ್ತನೆ ಮಾಡುತ್ತಾನೆ.

ತಂದೆ ಬಹುಶಃ ಮಗನ ವಿಚಾರದಲ್ಲಿ ಈ ರೀತಿ ಮಾಡಲಾರ ಮಗ ತಪ್ಪು ಮಾಡಿದ ತಕ್ಷಣ ಕೈ ಎತ್ತುವ ತಂದೆಗೆ ಮಗಳ ಮೇಲೆ ಆ ರೀತಿ ಮಾಡಲು ಮನಸ್ಸು ಬರುವುದಿಲ್ಲ. ಹಾಗೆ ತಾಯಿ ಎಷ್ಟೇ ಶತಪ್ರಯತ್ನ ಪಟ್ಟರು ತಿದ್ದಿಕೊಳ್ಳದ ಮಗಳು ತಂದೆ ಒಂದೇ ಒಂದು ಮಾತಿಗೆ ಕಟ್ಟುಬಿದ್ದು ತಂದೆ ಮಾತನ್ನು ಉಳಿಸಿಕೊಳ್ಳುವ ತಂದೆ ಹೇಳಿದಾಗೆ ಕೇಳುವ ತಂದೆಯ ಮಗಳಾಗಿ ಬಿಡುತ್ತಾಳೆ.

ಹೆಣ್ಣು ಮಗುವಿಗೆ ಜೀವನದಲ್ಲಿ ಎಂತಹದೆ ಕ’ಷ್ಟ ಬಂದರೂ ಆ ಭಾರ ಹಂಚಿಕೊಳ್ಳುವ ಒಂದೇ ಹೆಗಲು ಅವಳ ಅಪ್ಪ. ಅಪ್ಪ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಏನೇ ಆದರೂ ನನ್ನ ಅಪ್ಪ ಬರುತ್ತಾನೆ ಎನ್ನುವ ಧೈರ್ಯದಿಂದ ಆಕೆ ಯಾರಿಗೂ ಸೋಲುವುದಿಲ್ಲ ಅಪ್ಪ ಎನ್ನುವುದು ಆಕೆಯ ಪಾಲಿಗೆ ಬೆಲೆ ಕಟ್ಟಲಾದ ಆಸ್ತಿ ಆಕೆಗೆ ಕೇಳಿದ್ದೆಲ್ಲವನ್ನು ಕೊಡಿಸುವುದು ಮಾತ್ರವಲ್ಲದೆ ಆಕೆಯ ಪ್ರತಿಯೊಂದು ಆಸೆ ಆಕಾಂಕ್ಷೆಗಳಿಗೆ ಬೆಲೆ ಕೊಡುವ ಭಾವನಾತ್ಮಕ ಜೀವಿ ತಂದೆ.

ಹಾಗಾಗಿ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಸಮಸ್ಯೆ ಅಥವಾ ಆಸೆಯನ್ನು ಕುಟುಂಬದ ಬೇರೊಬ್ಬರ ಬಳಿ ಹೇಳಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಂದೆಯ ಜೊತೆಗೆ ಮುಕ್ತವಾಗಿ ಹೇಳಿಕೊಳ್ಳುತ್ತಾರೆ, ಹಾಗಾಗಿ ಆಕೆಗೆ ಎಲ್ಲರಿಗಿಂತ ತನ್ನ ತಂದೆಯ ಮೇಲೆ ಹೆಚ್ಚು ಪ್ರೀತಿ. ಪ್ರತಿಯೊಬ್ಬ ಪುರುಷನಿಗೂ ಈ ರೀತಿ ತಾಯಿಗಿಂತ ಮಗಳು ಸಿಗಲಿ ಹಾಗೆ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಸ್ನೇಹಿತನಂತ ತಂದೆಯ ಬಾಂಧವ್ಯ ಕೊನೆವರೆಗೂ ದಕ್ಕಲಿ.

 

100 ವರ್ಷ ಆದ್ರೂ ರೋಗಗಳಿಲ್ಲದೆ ಬದುಕಬೇಕು ಅಂದರೆ ಈ ಆಹಾರಗಳನ್ನು ತಿನ್ನಿ.!

ಯಾವುದೇ ರೋಗರುಜಿನ ಇಲ್ಲದೆ ನೂರು ವರ್ಷಗಳ ಕಾಲ ಬದುಕಬೇಕು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ನಾವು ಮಾತ್ರವಲ್ಲದೇ ನಾವು ಬಹಳ ಇಷ್ಟಪಡುವ ನಮ್ಮ ಕುಟುಂಬದವರು ಹಾಗೂ ನಮ್ಮ ಸ್ನೇಹಿತರು ಕೂಡ ಹೀಗೆ ನಮ್ಮೊಟ್ಟಿಗೆ ನೂರು ವರ್ಷಗಳ ಕಾಲ ಜೊತೆಯಾಗಿ ಸಂತೋಷವಾಗಿ ಇರಬೇಕು ಎಂದು ಬಯಸುತ್ತೇವೆ. ಹಿಂದೆಲ್ಲಾ ಋಷಿಮುನಿಗಳು 150 ವರ್ಷಗಳಿಗಿಂತ ಹೆಚ್ಚು ಕಾಲ ಕಾಡಿನಲ್ಲಿ ಆರೋಗ್ಯವಾಗಿ ಜೀವಿಸುತ್ತಿದ್ದರು.

ನಮ್ಮ ಹಿರಿಯ ತಲೆಗಯಳು ನೂರು ವರ್ಷ ದಾಟಿರುವುದಕ್ಕೆ ನಾವೇ ಸಾಕ್ಷಿಯಾಗಿದ್ದೇವೆ. ಆದರೆ ಇಂದು ಭಾರತದಲ್ಲಿ ಮನುಷ್ಯನ ಸರಾಸರಿ ಆಯಸ್ಸು 60ರ ಅಂಚಿಗೆ ಬಂದಿದೆ. ಇಷ್ಟು ಬೇಗ ಇಂತಹದೊಂದು ಬಿರುಗಾಳಿಯಂತಹ ಬದಲಾವಣೆ ಉಂಟಾಗಲು ಕಾರಣ ಏನಿರಬಹುದು ಎಂದು ಯಾವಾಗಲಾದರೂ ಯೋಚನೆ ಬಂದಿದೆಯಾ?

ನಮ್ಮ ದೇಶ ಮಾತ್ರವಲ್ಲದೆ ಹಲವು ದೇಶಗಳು ಈ ವಿಚಾರದ ಬಗ್ಗೆ ತಡೆದು ಕೆಡಿಸಿಕೊಂಡಿವೆ. ಇವುಗಳನ್ನು ಕಂಡುಹಿಡಿಯಲು ಹಲವಾರು ಪ್ರಯೋಗಗಳು ಕೂಡ ಆಗಿವೆ. ಆಗ ತಿಳಿದು ಬಂದ ಸತ್ಯಾಂವವೇನೆಂದರೆ, ಮನುಷ್ಯ ಆರೋಗ್ಯವಾಗಿರಲು ಆತನಿಗೆ ದೇಹಕ್ಕೆ ಬೇಕಾದ ಪೋಷಕಾಂಶಗಳು ಆಹಾರದ ಮೂಲಕ ದೇಹ ಸೇರಬೇಕು ಎನ್ನುವುದು ಎಷ್ಟು ನಿಜವೋ ಇದೇ ಆಹಾರ ಅತಿಯಾದರೆ ಅನಾರೋಗ್ಯಕ್ಕೂ ಕೂಡ ಅದೇ ಕಾರಣವಾಗುತ್ತದೆ ಎನ್ನುವುದು ಅಷ್ಟೇ ಸತ್ಯಂ ನಿಜವಾಗಿದೆ.

ಹಾಗಾಗಿ ಅಂತಿಮವಾಗಿ ಕಡಿಮೆ ತಿನ್ನುವುದೇ ಆಹಾರ ಗುಟ್ಟು ಎಂದು ಕಂಡುಹಿಡಿಯಲಾಗಿದೆ. ಇದನ್ನೇ ಪರೋಕ್ಷವಾಗಿ ಹಿರಿಯರು ಒಂದು ತಮಾಷೆಯಾದ ಮಾತಿನ ಮೂಲಕ ಒಂದು ಹೊತ್ತು ಉಂಡವನು ಯೋಗಿ, ಎರಡು ಹೊತ್ತು ಉಂಡವನು ಭೋಗಿ ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನನ್ನು ಆಸ್ಪತ್ರೆಗೆ ಹೊತ್ತುಕೊಂಡು ಹೋಗಿ ಎಂದು ಲೇವಡಿ ಮಾಡಿದ್ದನ್ನು ನಾವು ಕೇಳಿದ್ದೇವೆ.

ಇದು ಬರಿ ಮಾತಲ್ಲ ನೂರಕ್ಕೆ ನೂರರಷ್ಟು ಸತ್ಯ. ಇಲಿಗಳ ಮೇಲೆ ನಡೆದ ಸಂಶೋಧನೆಯ ಪ್ರಕಾರವಾಗಿ ಅವುಗಳಿಗೆ ಅಗತ್ಯ ಇರುವುದಕ್ಕಿಂತ 75% ಕಡಿಮೆ ಆಹಾರ ನೀಡಿದಾಗ ಅವುಗಳು ತಮ್ಮ ಆಯುಷ್ಯ ಆಯುಷ್ಯಕ್ಕಿಂತ ದುಪ್ಪಟ್ಟು ಹೆಚ್ಚು ಬದುಕಿದ್ದ ಉಲ್ಲೇಖಗಳಿವೆ. ಇದನ್ನು ಹೊರತುಪಡಿಸಿ ಮಾನವರ ಮೇಲೆ ದೇಶದ ಹಲವು ಭಾಗಗಳಲ್ಲಿ ಈ ರೀತಿ ಸಂಶೋಧನೆ ನಡೆಸಲಾಗಿದೆ.

ಇದರಲ್ಲಿ ಒಂದು ದ್ವೀಪದಲ್ಲಿ ಈಗಲೂ ಕೂಡ ಅಲ್ಲಿನ ಜನರು ನೂರು ವರ್ಷವನ್ನು ದಾಟಿ ಆರೋಗ್ಯವಂತರಾಗಿ ಸಂತೋಷದಿಂದ ಬದುಕುತ್ತಿದ್ದಾರೆ ಇದಕ್ಕೆ ಕಾರಣ ಏನು ಎಂದು ಹುಡುಕ ಹೊರಟವರಿಗೆ ಅವರ ಆಹಾರ ಪದ್ಧತಿಯೇ ಕಾರಣ ಎಂದು ತಿಳಿದು ಬಂದಿದೆ. ಮಿತಿಯಾದ ಆಹಾರ ಅದರಲ್ಲೂ ಆಹಾರದಲ್ಲಿ ಬಾದಾಮಿ, ಗೋಡಂಬಿ, ಸೂರ್ಯಕಾಂತಿ ಬೀಜ, ಅಗಸೆ ಬೀಜ, ಕೊಬ್ಬರಿ ಕಡಲೆಕಾಯಿ ಬೀಜ ಈ ರೀತಿಯ ನಟ್ಸ್ ಗಳನ್ನು ಹೆಚ್ಚಾಗಿ ಬಳಸುವುದು.

ಹಣ್ಣು ತರಕಾರಿ ಇವುಗಳ ಸೇವನೆಯನ್ನು ಹೆಚ್ಚು ಮಾಡುವುದು ಅವರು ಆರೋಗ್ಯವಂತರಾಗಿರಲು ಕಾರಣ ಆಗಿದೆ. ಇದಿಷ್ಟೇ ಅಲ್ಲದೆ ಅವರು ಹಣದ ಹಿಂದೆ ಓಡುವುದರ ಬದಲು ಸಂತೋಷದ ವಾತಾವರಣ ಸೃಷ್ಟಿಸುವುದಕ್ಕೆ ಹೆಚ್ಚು ಇಷ್ಟಪಡುತ್ತಾರೆ ಹಾಗಾಗಿ ಅವರು ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ.

ಅಕ್ಕ ಪಕ್ಕದವರ ಜೊತೆ ಸ್ನೇಹಿತರ ಜೊತೆ ಸಂಬಂಧ ಉತ್ತಮವಾಗಿಟ್ಟುಕೊಂಡು ಯಾವಾಗಲೂ ನಗುನಗುತ್ತಾ ಇರುತ್ತಾರೆ. ಯಾರಿಗೆ ಕ’ಷ್ಟ ಬಂದರೂ ಹೇಗಲಾಗುತ್ತಾರೆ. ಧರ್ಮ ಮಾರ್ಗದಲ್ಲಿ ಸಾಗುತ್ತಿರುವುದರಿಂದ ಅವರಿಗೆ ಮಾನಸಿಕ ಒತ್ತಡಗಳಿಲ್ಲ ಮತ್ತು ಅತಿಯಾದ ವ್ಯಾಯಾಮ ಏನು ಇಲ್ಲದೆ.

ನಿತ್ಯ ಮನೆ ಕೆಲಸಗಳನ್ನು ಜೀವನಕ್ಕೆ ಅವಶ್ಯಕತೆ ಇರುವ ಕೆಲಸಗಳನ್ನು ಮಾಡಿಕೊಂಡು ಯಾವುದೇ ಟೆನ್ಶನ್ ಇಲ್ಲದೆ ಬದುಕುತ್ತಿರುವುದು ಅವರ ದೀರ್ಘಾಯುಷ್ಯದ ಗುಟ್ಟು ಎಂದು ತಿಳಿದು ಬಂದಿದೆ. ಹೀಗಾಗಿ ನಿಮಗೂ ಕೂಡ ಈ ರೀತಿ ಆಯಸ್ಸು ಹೆಚ್ಚು ಹೊಂದುವ ಬಯಕೆ ಇದ್ದರೆ ತಿನ್ನುವ ಆಹಾರದ ಬಗ್ಗೆ ಹೆಚ್ಚು ಗಮನ ಕೊಡಿ ಹಾಗೂ ಮಾನಸಿಕ ಆರೋಗ್ಯವನ್ನು ಕೂಡ ಸರಿಪಡಿಸಿಕೊಳ್ಳಿ.

https://youtu.be/AmDI8xUOs1Q?si=8kMHaJ7F93Z1aOVu

ನೀವೇನಾದರೂ ಇವುಗಳನ್ನು ದಾನ ಮಾಡಿದರೆ ಕಷ್ಟಗಳನ್ನು ಕೊಂಡು ತಂದಂತೆ.!

 

ನಮ್ಮ ಶಾಸ್ತ್ರಗಳಲ್ಲಿ ದಾನ ಮಾಡುವುದಕ್ಕೆ ಒಂದು ಪದ್ಧತಿ ಇದೆ. ಯಾವ ವಸ್ತುಗಳನ್ನು ಯಾರು ದಾನ ಮಾಡಬೇಕು, ಯಾರಿಂದ ಯಾರು ದಾನ ತೆಗೆದುಕೊಳ್ಳಬೇಕು, ಯಾವುದನ್ನು ದಾನ ಮಾಡಬಾರದು, ಯಾವ ಸಮಯದಲ್ಲಿ ದಾನ ಮಾಡಬೇಕು, ಮಾಡಬಾರದು ಎನ್ನುವುದಕ್ಕೆಲ್ಲ ಒಂದು ವ್ಯವಸ್ಥೆ ಇದೆ ಅದನ್ನು ಮೀರಿ ನಡೆದಾಗ ಕ’ಷ್ಟ’ಗಳು ತಪ್ಪುವುದಿಲ್ಲ.

ಅದರಲ್ಲೂ ಕೆಲವು ವಸ್ತುಗಳನ್ನು ದಾನ ಕೊಡುವುದರಿಂದ ಹಾಗೂ ತೆಗೆದುಕೊಳ್ಳುವುದರಿಂದ ದರಿದ್ರ ಬರುತ್ತದೆ. ಈ ಸೂಕ್ಷ್ಮ ವಿಚಾರಗಳು ಅನೇಕರಿಗೆ ತಿಳಿಯದೆ ಇರುವ ಕಾರಣ ಬದುಕಿನಲ್ಲಿ ಅನೇಕ ಸಂ’ಕ’ಷ್ಟಗಳಿಗೆ ಸಿಲುಕುತ್ತಾರೆ. ಹಾಗಾಗಿ ಈ ಅಂಕಣದಲ್ಲಿ ಇದರ ಬಗ್ಗೆ ಕೆಲ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಇವುಗಳು ಹಿರಿಯರು ನೀಡಿರುವ ಸಲಹೆಗಳಾಗಿದ್ದು, ಪ್ರತಿಯೊಬ್ಬರೂ ಕೂಡ ಪಾಲಿಸಬಹುದಾದಷ್ಟು ಸರಳವಾಗಿದೆ. ಸಾಧ್ಯವಾದರೆ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ.

* ಯಾವುದೇ ಕಾರಣಕ್ಕೂ ನೀವು ಹಾಕಿರುವ ಬಟ್ಟೆಗಳನ್ನು ಬೇರೆಯವರಿಗೆ ದಾನ ಮಾಡಬೇಡಿ. ಒಂದು ವೇಳೆ ಬೇರೆಯವರಿಗೆ ಬಟ್ಟೆ ಅವಶ್ಯಕತೆ ಇದ್ದರೆ ನಿಮ್ಮ ಶಕ್ತಿಯನುಸಾರ ಹೊಸ ಬಟ್ಟೆ ಕೊಡಿಸಿಬಿಡಿ. ಆದರೆ ನೀವು ಉಟ್ಟಿರುವ ಬಟ್ಟೆಯನ್ನು ಇನ್ನೊಬ್ಬರಿಗೆ ಕೊಡಬೇಡಿ

* ಬಟ್ಟೆಗಳಂತೆ ಚಪ್ಪಲಿಗಳು ಕೂಡ ವೈಯಕ್ತಿಕ ಸಾಧನೆಗಳಾಗಿವೆ. ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಶಾಸ್ತ್ರಗಳು ಹೇಳುವ ಪ್ರಕಾರ ನಾವು ಹಾಕಿರುವ ಚಪ್ಪಲಿಯನ್ನು ಬೇರೆಯವರಿಗೆ ದಾನ ಕೊಡಬಾರದು. ಒಂದು ವೇಳೆ ನಮ್ಮ ಚಪ್ಪಲಿಗಳನ್ನು ಬೇರೆಯವರು ಕದ್ದು ಹಾಕಿಕೊಂಡು ಹೋದಾಗ ದೋ’ಷಗಳಿರುವುದಿಲ್ಲ, ಕರ್ಮ ಕಳೆಯಿತು ಎಂದು ನೆಮ್ಮದಿಯಾಗಿರಬಹುದು.

* ಸಂಜೆ ಮನೆಯಲ್ಲಿ ದೀಪ ಹಚ್ಚಿದ ನಂತರ ಯಾವುದೇ ತರಹದ ಧಾನ್ಯಗಳನ್ನು ಬೇರೆ ಅವರಿಗೆ ಕೊಡಬಾರದು. ಇನ್ನೊಬ್ಬರ ಬಳಿ ನೀವು ಕೂಡ ಯಾವುದೇ ದವಸ ಧಾನ್ಯಗಳನ್ನು ಸಾಲ ಕೇಳಬೇಡಿ. ಇದೆಲ್ಲವೂ ಕೂಡ ದರಿದ್ರದ ಲಕ್ಷಣವಾಗಿದೆ. ಯಾವಾಗಲೂ ಮನೆಯಲ್ಲಿ ಆಹಾರ ಪದಾರ್ಥಗಳಿಗೆ ಕೊರತೆ ಇರಬಾರದು. ಹಾಗೆಯೇ ಮೊಸರು, ಟಮೋಟೋ, ನಿಂಬೆಹಣ್ಣು ಇಂತಹ ಹುಳಿ ಪದಾರ್ಥಗಳನ್ನು ಕೂಡ ಕೊಡಬಾರದು ಒಂದು ವೇಳೆ ಈ ರೀತಿ ಮಾಡಿದರೆ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟು ಸಂಬಂಧ ಕೂಡ ಒಡೆಯುತ್ತದೆ ಎಂದು ಹೇಳಲಾಗುತ್ತದೆ

* ತವರು ಮನೆಯವರು ಹೆಣ್ಣು ಮಕ್ಕಳಿಗೆ ಎಮ್ಮೆ, ಕರು, ಹಸು ಎತ್ತು ಇವುಗಳನ್ನು ದಾನ ಕೊಡಬಾರದು.
* ಯಾವುದೇ ಸಮಯದಲ್ಲಿ ಭಿಕ್ಷುಕರು ಊಟ ಕೇಳಿಕೊಂಡು ಬಂದರು ಅವರನ್ನು ಹಾಗೆ ಕಳುಹಿಸಬೇಡಿ ಮತ್ತು ಅವರಿಗೆ ಹಳಸಿದ ಅಥವಾ ಕೆ’ಟ್ಟು ಹೋಗಿರುವ ಆಹಾರ ಪದಾರ್ಥಗಳನ್ನು ದಾನ ಮಾಡಬೇಡಿ. ನಿಮ್ಮ ಶಕ್ತಿಯನುಸಾರ ಏನನ್ನಾದರೂ ತಿನ್ನಲು ಕೊಟ್ಟು ಅವರ ಹಸಿವನ್ನು ತಣಿಸಿ.

* ಮಂಗಳವಾರ ಮತ್ತು ಶುಕ್ರವಾರ ಯಾರಿಗೂ ಹಣವನ್ನು ಕೊಡಬೇಡಿ ಮತ್ತು ಪ್ರತಿದಿನ ಸಂಜೆ ದೀಪ ಹಚ್ಚಿದ ನಂತರ ಯಾವುದೇ ಕಾರಣಕ್ಕೂ ಮನೆಯಿಂದ ಹಣವನ್ನು ಆಚೆ ತೆಗೆದುಕೊಂಡು ಹೋಗಿ ಖರ್ಚು ಮಾಡಬೇಡಿ ಯಾರಿಗೂ ಸಾಲವನ್ನು ಕೂಡ ಕೊಡಬೇಡಿ

* ಯಾರಿಗಾದರೂ ಕರ್ಚಿಫ್ ಗಿಫ್ಟ್ ಕೊಡುವುದು ದಾನ ಕೊಡುವುದು ಅಥವಾ ನೀವು ಬಳಸಿರುವ ಕರ್ಚಿಫ್ ನ್ನು ಕೊಡುವುದು ಮಾಡಬೇಡಿ. ಈ ರೀತಿ ಕೊಡುವುದರಿಂದ ಅವರ ನಂತರದ ದಿನಗಳಲ್ಲಿ ಅವರು ನಿಮ್ಮೊಂದಿಗೆ ಶ’ತ್ರು’ತ್ವ ಬೆಳೆಸುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಮತ್ತು ಆ ಮೂಲಕ ಇಬ್ಬರು ಕಣ್ಣೀರಿಡುವಂತೆ ಆಗುತ್ತದೆ ಎಂದು ಹೇಳುತ್ತಾರೆ

* ಮನೆಗೆ ಬಂದವರಿಗೆ ತಲೆಗೆ ಎಣ್ಣೆಯನ್ನು ಕೊಡಬಾರದು ಹಾಗೂ ಅವರ ತಲೆಗೆ ಎಣ್ಣೆ ಹಚ್ಚಬಾರದು.
* ಹೆಣ್ಣುಮಕ್ಕಳು ತವರು ಮನೆಯಿಂದ ಪೊರಕೆ ಹಾಗೂ ಬೆಂಕಿಪೊಟ್ಟಣವನ್ನು ಉಚಿತವಾಗಿ ತರಬಾರದು.
* ಕುಂಬಳಕಾಯಿಯನ್ನು ಯಾರಿಂದಲೂ ದಾನ ತೆಗೆದುಕೊಳ್ಳಬಾರದು

ಆಹಾರ ಔಷಧಿಯಾಗಿರಬೇಕು, ಅಡುಗೆ ಮನೆಯಲ್ಲಿ ಇರುವ ಔಷಧಿಗಳು ಯಾವುವು ಅಂತ ನೋಡಿ.!

 

ಆಧುನಿಕ ಜೀವನಶೈಲಿಗೆ ನಾವು ಮಾರು ಹೋಗಿದ್ದೇವೆ, ನಮ್ಮ ಹಿರಿಯರು ಮಾಡುತ್ತಿದ್ದ ಅನೇಕ ಕೆಲಸಗಳು ಹಾಗೂ ಅವರು ಬಳಸುತ್ತಿದ್ದ ವಸ್ತುಗಳು ಮತ್ತು ಬದುಕುತ್ತಿದ್ದ ರೀತಿಯನ್ನು ಬಿಟ್ಟು ಪಾಶ್ಚಿಮಾತ್ಯ ಶೈಲಿಗೆ ವಾಲಿರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗಿದ್ದೇವೆ. ಅವುಗಳಲ್ಲಿ ಕೆಲವನ್ನಾದರೂ ಎಚ್ಚೆತ್ತುಕೊಂಡು ಬದಲಾಯಿಸಿಕೊಳ್ಳಿ, ಇದರಿಂದ ನಮ್ಮ ಎಷ್ಟೋ ಸಮಸ್ಯೆಗೆ ಪರಿಹಾರ ಸಿಗುತ್ತದೆ.

* ಟೂತ್ಪೇಸ್ಟ್ ನಲ್ಲಿ ಕೆಲವು ಕೆಮಿಕಲ್ ಗಳು ಇವೆ. ಇವು ಹಲ್ಲಿನ ಎನಾಮೆಲ್ ಹಾಳು ಮಾಡುತ್ತದೆ ಎನ್ನುವುದು ತಿಳಿದಿದ್ದರೂ ಕೂಡ ಇನ್ನು ಸಹ ಟೂಥ್ ಪೇಸ್ಟ್ ಅತಿಯಾದ ಬಳಕೆ ತಪ್ಪು. ಇವುಗಳನ್ನು ಬದಲಾಯಿಸಿ ಬೇವಿನಕಡ್ಡಿ, ಇದ್ದಿಲು ಪುಡಿ, ಶುದ್ಧವಾದ ಹಸುವಿನ ಬೆರಣಿ ಯಿಂದ ಮಾಡಿದ ಬೂದಿಯಲ್ಲಿ ಅಥವಾ ರಂಗೋಲಿ ಪುಡಿಯಲ್ಲಿ ಹಲ್ಲು ತಿಕ್ಕುವುದು ಒಳ್ಳೆಯದು.

* ಬೆಳಗ್ಗೆ ಬೆಡ್ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸವನ್ನು ಮೊದಲು ಬದಲಾಯಿಸಿ, ಖಾಲಿ ಹೊಟ್ಟೆಯಲ್ಲಿ ಮೊದಲು ಎರಡು ಲೋಟ ಕುಡಿಯುವ ಹದಕ್ಕೆ ಇರುವ ಬಿಸಿ ನೀರನ್ನು ಕುಡಿಯಿರಿ.
* ಸಾಧ್ಯವಾದರೆ ಹಾಲಿನ ವಿಷಯದಲ್ಲೂ ಕೂಡ ದೇಸಿ ಹಸುವಿನ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಳಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು, ಇಲ್ಲವಾದಲ್ಲಿ ತೆಂಗಿನ ಹಾಲನ್ನು ಕೂಡ ಇದಕ್ಕೆ ಪರ್ಯಾಯವಾಗಿ ಬಳಸಬಹುದು.

* ಸಕ್ಕರೆ ಒಂದು ವೈಟ್ ಪಾಯ್ಸನ್ ಈ ಸ್ಲೋ ಪಾಯಿಸನ್ ನಿಂದ ದೂರ ಇರಿ ಹಾಗೂ ಇದರ ಬದಲು ಸಾವಯವ ಬೆಲ್ಲ ಬಳಸಿ.
* RO Water ಅಥವಾ ಕ್ಯಾನ್ ವಾಟರ್ ಕುಡಿಯುವ ಬದಲು ತಾಮ್ರದ ಹಂಡೆಯಲ್ಲಿ ನೀರನ್ನು ಶೇಖರಿಸಿ ಕುಡಿಯಿರಿ. ಇದಕ್ಕೆ ಸ್ವಲ್ಪ ಚಕ್ಕೆ ಪುಡಿ ಹಾಗೂ ಜೀರಿಗೆ ಪುಡಿ ಹಾಕಿ ಕುಡಿದರೂ ಒಳ್ಳೆಯದು.
* ಬಿಳಿ ಉಪ್ಪಿನಿಂದ ಸಹಜ ಉಪ್ಪಿಗೆ ಬನ್ನಿ
* ರೀಫೈನ್ಡ್ ಎಣ್ಣೆಯಿಂದ ನಿಜವಾದ ಗಾಣದ ಎಣ್ಣೆಗೆ ಬದಲಾಗಿ

* ಅಡುಗೆ ಮನೆಯಲ್ಲಿರುವ ಪ್ಲಾಸ್ಟಿಕ್ ಡಬ್ಬಗಳನ್ನು ಬದಲಾಯಿಸಿ ಸಾಮಗ್ರಿಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಲು ಗಾಜಿನ ಕಂಟೇನರ್ ಗಳು ಅಥವಾ ಸಿಲ್ವರ್ ಬಾಕ್ಸ್ ಗಳನ್ನು ಬಳಸಿ
* ಕುಕ್ಕರ್ ನಲ್ಲಿ ಅನ್ನ ಮಾಡಲು ಬದಲು ಪಾತ್ರೆಯಲ್ಲಿ ಅನ್ನ ಮಾಡಿ, ಮಣ್ಣಿನ ಮಡಿಕೆಯನ್ನು ಬಳಸಿ.
* ನಾನ್ ಸ್ಟಿಕ್ ಪಾತ್ರೆ ಹಾಗೂ ಇತರೆ ನಾನ್ ಸ್ಟಿಕ್ ವಸ್ತುಗಳನ್ನು ಬದಲಾಯಿಸಿ ಕಬ್ಬಿಣದ ಬಾಣಲಿ, ಕಬ್ಬಿಣದ ರೊಟ್ಟಿ ಹೆಂಚು, ಕಬ್ಬಿಣದ ಪಡ್ಡು ತವಾವನ್ನು ಬಳಸಿ.

* ಫ್ರಿಡ್ಜ್ ನಲ್ಲಿ ಇಟ್ಟು ವಸ್ತುಗಳನ್ನು ತಿನ್ನುವುದು, ಫ್ರೀಜರ್ ನಲ್ಲಿ ಇಟ್ಟು ಬಿಸಿ ಮಾಡಿ ತಿನ್ನುವುದು ಇದು ಎರಡು ಕೂಡ ಆರೋಗ್ಯಕ್ಕೆ ಹಾನಿಕರ ಈ ಎರಡನ್ನು ತಪ್ಪಿಸಿ. ಇದರ ಬದಲು ಮಣ್ಣಿನ ಮಡಿಕೆಗಳಲ್ಲಿ ಸೊಪ್ಪು ತರಕಾರಿಯನ್ನು ಮುಚ್ಚಿಟ್ಟರೂ ಕೂಡ ಫ್ರೆಶ್ ಆಗಿ ಇರುತ್ತವೆ
* ಮನೆಯಲ್ಲಿ ರಾಸಾಯನಿಕ ಮುಕ್ತ ಹಣ್ಣು ತರಕಾರಿಗಳನ್ನು ಬೆಳೆದು ಬಳಸಿ. ಶುಂಠಿ, ತುಳಸಿ, ಅಲೋವೆರಾ, ದೊಡ್ಡಪತ್ರೆ ಮುಂತಾದ ಔಷಧೀಯ ಗುಣಗಳಿರುವ ಗಿಡಗಳನ್ನು ಮನೆಯಲ್ಲಿಯೇ ಬೆಳೆದು, ಮನೆ ಮದ್ದುಗಳಿಗೆ ಬಳಸಿ.

* ಅಡುಗೆಗೆ ಅರಿಶಿನ ಇಂಗು ಹಾಗೂ ಬೆಲ್ಲ ಬಳಸಿ.
* ಮನೆ ಮಂದಿ ಎಲ್ಲಾ ಒಟ್ಟಿಗೆ ಕುಳಿತು ಊಟ ಮಾಡಿ. ಊಟ ಮಾಡುವಾಗ ನೆಲದ ಮೇಲೆ ಚಾಪೆ ಹಾಕಿಕೊಂಡು ಕುಳಿತು ಊಟ ಮಾಡುವುದು ಒಳ್ಳೆಯದು. ಊಟ ಆದ ಮೇಲೆ ತಾಂಬೂಲ ಸೇವಿಸಿದರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.
* ಪಾತ್ರೆಗಳನ್ನು ತೊಳೆಯಲು ಬೂದಿ ಅಥವಾ ಮಣ್ಣನ್ನು ಬಳಸಿ, ಕೆಮಿಕಲ್ ಯುಕ್ತ ಜೆಲ್ ಗಳ ಬದಲು ಸಬೀನ ಬಳಸಿದರೆ ಒಳ್ಳೆಯದು.

* ಸ್ನಾನ ಮಾಡಲು ಕಡಲೆ ಹಿಟ್ಟು ಹಾಗೂ ಸೀಗೆಕಾಯಿ ಬಳಕೆ ಮಾಡಿ
* ಪ್ರತಿದಿನವೂ ಯೋಗಾಸನ ಹಾಗೂ ಪ್ರಾಣಾಯಾಮ ಮಾಡಿ ಕನಿಷ್ಠ 20 ನಿಮಿಷಗಳಾದರು ವಾಕಿಂಗ್ ಮಾಡಿ.
* ಪ್ರತಿಯೊಬ್ಬರಿಗೂ ಸ್ನೇಹದ ಗುಂಪಿರಲಿ. ಸ್ನೇಹಿತರು ಬಂಧು ಬಾಂಧವರು ಹಾಗೂ ನೆರೆಹೊರೆಯವರೊಂದಿಗೆ ಸಂಬಂಧ ಉತ್ತಮವಾಗಿ ಇಟ್ಟುಕೊಳ್ಳಿ, ನಗುನಗುತ್ತಾ ಜೀವನ ಕಳೆಯಿರಿ.
* ದಿನದಲ್ಲಿ ಸ್ವಲ್ಪ ಹೊತ್ತಾದರೂ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಹಾಗೂ 50 ವರ್ಷ ಮೇಲ್ಪಟ್ಟ ಹಿರಿಯರೊಂದಿಗೆ ಸಮಯ ಕಳೆದರೆ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ.