ವೀರಮದಕರಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದಂತಹ ರಾಗಿಣಿ ಅವರು ಸದ್ಯಕ್ಕೆ ಸಾಕಷ್ಟು ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಅಂತಾನೆ ಹೇಳಬಹುದು. ಏಕೆಂದರೆ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು 15 ವರ್ಷವಾದರೂ ಕೂಡ ಇನ್ನು ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ.
ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸದ್ಯಕ್ಕೆ ರಾಗಿಣಿ ಅವರು ಬಾಲಿವುಡ್ ಹಾರರ್ ಥ್ರಿಲ್ಲರ್ ಸಿನಿಮಾ ಒಂದರಲ್ಲಿ ನಾಯಕನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇದಕ್ಕಿಂತ ಮುಂಚೆ ರಾಗಿಣಿ ಅವರು ಬಾಲಿವುಡ್ ನಟ ಶಾಹಿದ್ ಕಪೂರ್ ಜೊತೆಗೆ ‘ರಾ ರಾಜ್ಕುಮಾರ್’ ಸಿನಿಮಾದಲ್ಲಿ ಒಂದು ಹಾಡಿಗೆ ಡ್ಯಾನ್ಸ್ ಮಾಡಿದ್ದ ಅವರು, ಇದೀಗ ಪೂರ್ಣ ಪ್ರಮಾಣದಲ್ಲಿ ಬಾಲಿವುಡ್ಗೆ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರೆ.
ಹಿಂದಿ ಸಿನಿಮಾಗಳ ನಿರ್ದೇಶಕ ಆಯುರ್ ಶರ್ಮಾ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ಹಾರರ್, ಥ್ರಿಲ್ಲರ್ ಮಾದರಿಯ ಸಿನಿಮಾವಾಗಿದ್ದು, ‘ವಾಲ್ಕರ್ ಹೌಸ್’ ಎಂದು ನಾಮಕರಣ ಮಾಡಲಾಗಿದೆ ಮೊದಲ ಹಂತದ ಶೂಟಿಂಗ್ ಮಾತ್ರ ಲಂಡನ್ನಲ್ಲಿ ಮುಗಿದಿದೆ. ಸಂಪೂರ್ಣ ಶೂಟಿಂಗ್ ಆದಮೇಲೆ ಮತ್ತೊಮ್ಮೆ ಬೆಂಗಳೂರಿಗೆ ಚಿತ್ರತಂಡದ ಜೊತೆಗೆ ಬರುವೆ. ಈ ಸಿನಿಮಾದಲ್ಲಿ ನಾನು ಲಂಡನ್ನಲ್ಲಿ ವಾಸಿಸುವ ಬರಹಗಾರ್ತಿ ಪಾತ್ರ ಮಾಡುತ್ತಿದ್ದೇನೆ.
ಹಿಂದಿ ಮತ್ತು ಬೆಂಗಾಲಿ ಸಿನಿಮಾಗಳ ನಟ ಪರಂಬಾತ್ರಾ ಚಟರ್ಜಿ ನನ್ನೊಂದಿಗೆ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಇನ್ನೂ ಅನೇಕ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಎಂದು, ರಾಗಿಣಿ ದ್ವಿವೇದಿಯವರು ಇತ್ತೀಚಿಗಷ್ಟೇ ನಡೆದಂತಹ ಸಂದರ್ಶನ ಒಂದರಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಈ 2022 ನನಗೆ ಖುಷಿ ತಂದ ವರ್ಷ ಅಂತಾನೇ ಹೇಳಬಹುದು ಏಕೆಂದರೆ 2021 ರಲ್ಲಿ ನಾನು ಸಾಕಷ್ಟು ನೋವನ್ನು ಅನುಭವಿಸಿದೆ.
ಚಿತ್ರರಂಗದಲ್ಲಿ ಆಗಿರಬಹುದು ವೈಯಕ್ತಿಕ ಜೀವನದಲ್ಲಿ ಆಗಿರಬಹುದು ಸಾಕಷ್ಟು ಏಳು ಬೀಳುಗಳನ್ನು ಕಂಡೆ. ಆದರೆ ಅವೆಲ್ಲವನ್ನು ಕೂಡ ಈಗ ಮೆಟ್ಟಿ ನಿಂತು ನನ್ನ ವೃತ್ತಿ ಜೀವನಕ್ಕೆ ಹಿಂತಿರುಗಿದ್ದೇನೆ ಸಾಕಷ್ಟು ಆಫರ್ ಗಳು ಬಂದಿದೆ ಹಿಂದಿ ಸಿನಿಮಾ ಮಾತ್ರವಲ್ಲದೆ ತಮಿಳಿನಾ ಮೂರು ಸಿನಿಮಾದಲ್ಲಿ ನಟಿಸುತ್ತಿದೆ. ಜೊತೆಗೆ ಮಲಯಾಳಂ ನ ಒಂದು ಸಿನಿಮಾದಲ್ಲಿ ನಟಿಸುತ್ತಿದೆ ಹಾಗೂ ತೆಲುಗಿನ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದೇನೆ.
ಇವೆರಡರ ಜೊತೆಗೆ ಸ್ಯಾಂಡಲ್ವುಡ್ ನಲ್ಲಿ ಎರಡು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದಕ್ಕೆ ಸಹಿಯನ್ನು ಹಾಕಿದ್ದೇನೆ ಒಟ್ಟಾರೆಯಾಗಿ ಹೇಳುವುದಾದರೆ ಈ ವರ್ಷ ಏಳರಿಂದ ಎಂಟು ಸಿನಿಮಾದಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ ಎಂದು ರಾಗಿಣಿಯವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ 2021 ರಲ್ಲಿ ನಟಿ ರಾಗಿಣಿ ಅವರು ಡ್ರ-ಗ್ಸ್ ಕೇಸ್ ನಲ್ಲಿ ಸಿಲುಕಿಕೊಂಡಿದ್ದರು ಈ ಕಾರಣಕ್ಕಾಗಿ ಅವರು ಜೈಲು ವಾಸವನ್ನು ಕೂಡ ಅನುಭವಿಸಿದ್ದರು.
ಸಾಕಷ್ಟು ಜನರು ಇನ್ನು ಮುಂದೆ ರಾಗಿಣಿಯವರಿಗೆ ಇನ್ನು ಮುಂದೆ ಚಿತ್ರರಂಗದಲ್ಲಿ ಅವಕಾಶ ದೊರೆಯುವುದಿಲ್ಲ ಇಲ್ಲಿಗೆ ಇವರ ಕೆರಿಯರ್ ಮುಗಿಯಿತು ಅಂತಾನೆ ಭಾವಿಸಿದ್ದರು. ಆದರೆ ಪ್ರತಿಭೆ ಮತ್ತು ಕಲೆ ಇದ್ದರೆ ಅವಕಾಶ ಎಂಬುದು ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಇದೀಗ ನಟಿ ರಾಗಿಣಿ ಅವರೇ ನೈಜ ಉದಾಹರಣೆ ಅಂತ ಹೇಳಬಹುದು.
ಸಾಕಷ್ಟು ವಿವಾದಗಳಿದ್ದರೂ ಅವೆಲ್ಲವನ್ನು ಮೆಟ್ಟು ನಿಂತು ಈಗ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಸಾಲು ಸಾಲು ಸಿನಿಮಾದಲ್ಲಿ ನಟಿಸಿದ್ದಾರೆ ಹಾಗೂ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಆಫರ್ ಗಳು ಬರುತ್ತಿದೆ. ಒಟ್ಟಾರೆಯಾಗಿ ನಮ್ಮ ಕನ್ನಡದ ನಟಿ ಬೇರೆ ಭಾಷೆಗಳಲ್ಲಿ ಹೋಗಿ ಸಾಧಿಸಿದರೆ ಅದು ನಮ್ಮ ಚಿತ್ರರಂಗಕ್ಕೆ ಕೊಡುಗೆ ಅಂತಾನೆ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.