Home Useful Information ಬರಪೀಡಿತ ರೈತರಿಗೆ ಎರಡನೇ ಕಂತಿನ ಹಣ ಬಿಡುಗಡೆ || NDRF ಮತ್ತು SDRF ವರದಿ 22,500 ಹಣ.!

ಬರಪೀಡಿತ ರೈತರಿಗೆ ಎರಡನೇ ಕಂತಿನ ಹಣ ಬಿಡುಗಡೆ || NDRF ಮತ್ತು SDRF ವರದಿ 22,500 ಹಣ.!

0
ಬರಪೀಡಿತ ರೈತರಿಗೆ ಎರಡನೇ ಕಂತಿನ ಹಣ ಬಿಡುಗಡೆ || NDRF ಮತ್ತು SDRF ವರದಿ 22,500 ಹಣ.!

 

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ 223 ತಾಲ್ಲೂಕುಗಳು ಸೇರಿದಂತೆ ಮತ್ತೆ ಇನ್ನಿತರ ತಾಲೂಕುಗಳು ಕೂಡ ಬರಪೀಡಿತ ತಾಲೂಕುಗಳು ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ.

ಕೇಂದ್ರ ಸರ್ಕಾರದಿಂದ NDRF ತಂಡವು ಕೂಡ ಬರ ಪರಿಸ್ಥಿತಿಯನ್ನು ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ವರದಿಯನ್ನು ಸಲ್ಲಿಸಲಾಗಿದ್ದು ರಾಜ್ಯ ಸರ್ಕಾರವು ಕೂಡ ಈಗಾಗಲೇ ಬರಪೀಡಿತ ತಾಲೂಕುಗಳು ಮತ್ತು ಜಿಲ್ಲೆಗಳು ಎಂದು ಘೋಷಿಸಲಾಗಿದೆ.

ಕೇಂದ್ರದಿಂದ NDRF ತಂಡವು ರಾಜ್ಯದಲ್ಲಿ ಬರಪೀಡಿತ ತಾಲೂಕುಗಳಲ್ಲಿಯೂ ಕೂಡ ಸಂಚರಿಸಿ ಎಷ್ಟು ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಎಷ್ಟು ಬರ ಪರಿಸ್ಥಿತಿ ಎದುರಾಗಿದೆ ಎನ್ನುವ ಸಂಪೂರ್ಣವಾದ ಮಾಹಿತಿ ಯನ್ನು ಕೇಂದ್ರ ಸರ್ಕಾರಕ್ಕೆ ಈಗಾಗಲೇ ವರದಿಯನ್ನು ಸಲ್ಲಿಸಲಾಗಿದ್ದು.

ಈ ಸುದ್ದಿ ತಪ್ಪದೆ ಓದಿ:- ಭಾವಿ ಅಥವಾ ಬೋರ್ವೆಲ್ ಇದ್ದವರಿಗೆ 2 ಲಕ್ಷದ ಸ್ಪ್ರಿಂಕ್ಲರ್ ಉಚಿತ.!

ಅದಕ್ಕೆ ತಕ್ಕಂತೆ ಪ್ರತಿ ಹೆಕ್ಟೇರ್ ಜಮೀನಿಗೆ 22,500 ರೂಪಾಯಿ ಹಣವನ್ನು ಬಿಡುಗಡೆಗೊಳಿಸಬೇಕು ಎಂದು ವರದಿಯಲ್ಲಿಯೂ ಸಹ ಈಗಾಗಲೇ ತಿಳಿಸಲಾಗಿದೆ. ಇದಕ್ಕೆ ತಕ್ಕಂತೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ರೈತರ ಖಾತೆಗೆ NDRF ವರದಿಯಂತೆ 3 ಕಂತುಗಳಲ್ಲಿ ರೈತರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ಕ್ರಮವನ್ನು ತೆಗೆದುಕೊಳ್ಳಲಾಗಿದ್ದು.

ರಾಜ್ಯ ಸರ್ಕಾರದಿಂದ ಈಗಾಗಲೇ ರೈತರ ಖಾತೆಗಳಿಗೆ ಮೊದಲನೇ ಕಂತಿನ ಹಣವನ್ನಾಗಿ 2000 ರೂಪಾಯಿ ಜಮಾ ಆಗಿದೆ. ಕೇಂದ್ರ ಸರ್ಕಾರವು ಇನ್ನೂ ಕೂಡ NDRF ವರದಿಯಂತೆ ರಾಜ್ಯ ಸರ್ಕಾರಕ್ಕೆ ಇನ್ನೂ ಕೂಡ ಹಣ ಬಿಡುಗಡೆ ಮಾಡಿಲ್ಲ.

ರಾಜ್ಯದಲ್ಲಿ ಈ ಕುರಿತು ರೈತರಿಗೆ ತುಂಬಾ ಅನ್ಯಾಯ ಉಂಟಾಗುತ್ತಿದ್ದು ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಸಿಎಂ ಸಿದ್ದ ರಾಮಯ್ಯ ಅವರು ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ.

ಈ ಸುದ್ದಿ ತಪ್ಪದೆ ಓದಿ:- ಶುರುವಾಯ್ತು ಕೇವಲ 29 ರೂ ಗೆ ಭಾರತ್ ಅಕ್ಕಿ ವಿತರಣೆ.! ಯಾರೆಲ್ಲ ತಗೋಬಹುದು.? ಯಾವ ಯಾವ ಜಾಗಗಳಲ್ಲಿ ಸಿಗುತ್ತೆ.? ಸಂಪೂರ್ಣ ಮಾಹಿತಿ.!

ಹಾಗಾದರೆ ಸಿಎಂ ಸಿದ್ದರಾಮಯ್ಯ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ರೈತನಿಗೂ ಕೂಡ ಅನುಕೂಲ ವಾಗುವಂತೆ ಯಾವ ಒಂದು ಮಹತ್ತರವಾದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಅದರ ಪ್ರಯೋಜನ ಏನು ಹಾಗು ಅದನ್ನು ಹೇಗೆ ರೈತರು ಸರಿಪಡಿಸಿಕೊಳ್ಳಬೇಕು.

ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಅದೇ ರೀತಿಯಾಗಿ ಸಿಎಂ ಸಿದ್ದರಾಮಯ್ಯ ಅವರು ಯಾರೆಲ್ಲಾ ರೈತರು ಬರಪೀಡಿತದಿಂದ ಸಮಸ್ಯೆಯನ್ನು ಅನುಭವಿಸಿದ್ದಾರೋ ಅವರಿಗೆ ಯಾವ ಒಂದು ಮಹತ್ತರವಾದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಎಂದು ಈ ಕೆಳಗೆ ನೋಡುವುದಾದರೆ.

* ರಾಜ್ಯ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದ್ದು 30 ಲಕ್ಷ ರೈತರ ಖಾತೆಗೆ ಮೊದಲ ಕಂತಿನ ಹಣವನ್ನು ಈಗಾಗಲೇ ಜಮಾ ಮಾಡಿದೆ. 30 ಲಕ್ಷ ರೈತರ ಖಾತೆಗೆ ಮೊದಲನೇ ಕಂತಿನ ಹಣವನ್ನು ಜಮಾ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ರಾಜ್ಯಕ್ಕೆ ಬರಗಾಲ ಬಂದರು ಕೇಂದ್ರದಿಂದ ನಮ್ಮ ಪಾಲಿನ ನಯಪೈಸೆ ಪರಿಹಾರ ಹಣ ಇದುವರೆಗೆ ಬಂದಿಲ್ಲ.

ಈ ಸುದ್ದಿ ತಪ್ಪದೆ ಓದಿ:- ಹಣ ಬಂದೇ ಬರುತ್ತದೆ ಈ ಮಂತ್ರವನ್ನು ಪಠಿಸುತ್ತಿರಿ……….||

ಆದರೆ ರಾಜ್ಯ ಸರ್ಕಾರ 30 ಲಕ್ಷ ರೈತರ ಖಾತೆಗೆ ಮೊದಲನೇ ಕಂತಿನ ಪರಿಹಾರ ಹಣವನ್ನು ಜಮಾ ಮಾಡಲಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಬಜೆಟ್ ನಲ್ಲಿ ರಾಜ್ಯಕ್ಕೆ ಎಸಗಿರುವ ಅನ್ಯಾಯವನ್ನು ವಿರೋಧಿಸಿ ಫೆಬ್ರವರಿ 7 ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನನ್ನು ನೀಡದೆ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ.

ರಾಜ್ಯಕ್ಕೆ ಬರಗಾಲದ ಪರಿಹಾರವಾಗಿ NDRF ನಿಂದ 4663 ಕೋಟಿ ರುಪಾಯಿ ಹಣವನ್ನು ನೀಡಲು ಮನವಿಯನ್ನು ಸಲ್ಲಿಸಿ 4 ತಿಂಗಳು ಕಳೆದಿದ್ದರೂ ಕೇಂದ್ರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಈ ಎಲ್ಲ ಕಾರಣಗಳಿಗಾಗಿ ಅನಿವಾರ್ಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ನಾನು ಕೂಡ ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.

 

LEAVE A REPLY

Please enter your comment!
Please enter your name here