Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಾವು ಜನಿಸಿರುವ ರಾಶಿ ಆಧಾರದ ಮೇಲೆ ನಾವು ಪೂರ್ವ ಜನ್ಮದಲ್ಲಿ ಯಾವ ರೀತಿ ವ್ಯಕ್ತಿಯಾಗಿದ್ದೇವೋ ಎನ್ನುವುದನ್ನು ತಿಳಿದುಕೊಳ್ಳಬಹುದು ಹೇಗೆ ಅಂತ ನೋಡಿ.!

Posted on April 23, 2024 By Kannada Trend News No Comments on ನಾವು ಜನಿಸಿರುವ ರಾಶಿ ಆಧಾರದ ಮೇಲೆ ನಾವು ಪೂರ್ವ ಜನ್ಮದಲ್ಲಿ ಯಾವ ರೀತಿ ವ್ಯಕ್ತಿಯಾಗಿದ್ದೇವೋ ಎನ್ನುವುದನ್ನು ತಿಳಿದುಕೊಳ್ಳಬಹುದು ಹೇಗೆ ಅಂತ ನೋಡಿ.!

 

ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರವಾಗಿ ಪ್ರತಿಯೊಂದು ವ್ಯಕ್ತಿಯ ಜನನವೂ ಕೂಡ ಪೂರ್ವಜನ್ಮ ಕರ್ಮ ಆಧಾರಿತವಾಗಿದೆ ಎನ್ನುವುದನ್ನು ನಂಬುತ್ತೇವೆ. ಯಾವುದೇ ವ್ಯಕ್ತಿ ಜನಿಸಿದರು ಆತನಿಗೆ ಆತ ಜನಿಸಿದ ರಾಶಿ ನಕ್ಷತ್ರ ಎನ್ನುವುದು ಇದ್ದೇ ಇರುತ್ತದೆ. ಆದರೆ ಇಂದು ಈ ಅಂಕಣದಲ್ಲಿ ಒಂದು ಕುತೂಹಲಕಾರಿ ಸಂಗತಿ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ.

ಅದೇನೆಂದರೆ, ಈ ಜನ್ಮದಲ್ಲಿ ನೀವು ಜನಿಸಿರುವ ರಾಶಿ ಆಧಾರದ ಮೇಲೆ ನಿಮ್ಮ ಕಳೆದ ಜನ್ಮದಲ್ಲಿ ನೀವು ಹೇಗಿದ್ದೀರಿ ಎನ್ನುವುದನ್ನ ತಿಳಿದುಕೊಳ್ಳಬಹುದು. ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಈ ಜನ್ಮಜನ್ಮಾಂತರದ ರಹಸ್ಯವನ್ನು ಭೇದಿಸಲಾರದು ಆದರೆ ಜ್ಯೋತಿಷ್ಯ ಶಾಸ್ತ್ರಕ್ಕೆ ಈ ಶಕ್ತಿ ಇದೆ. ಆ ಪ್ರಕಾರವಾಗಿ ಯಾವ ರಾಶಿ ವ್ಯಕ್ತಿತ್ವ ಕಳೆದ ಜನ್ಮದಲ್ಲಿ ಹೇಗಿತ್ತು ಎನ್ನುವುದರ ವಿವರ ಹೀಗಿದೆ ನೋಡಿ.

* ಮೇಷ ರಾಶಿ:- ಮೇಷ ರಾಶಿಯವರ ಕಳೆದ ಜನ್ಮದಲ್ಲಿ ಯೋಧರಂತೆ ವೀರಾವೇಶದಿಂದ ಹೋರಾಡುವ ವ್ಯಕ್ತಿತ್ವದವರಾಗಿದ್ದರು, ಬಹಳ ಧೈರ್ಯಶಾಲಿಗಳಾಗಿದ್ದರು, ಏನಾದರೂ ಮುನ್ನುಗ್ಗುವ ಛಲವಂತರು, ನಾಯಕತ್ವದ ಗುಣ ಇದ್ದ ಸ್ವಭಾವವನ್ನು ಹೊಂದಿದ್ದವರು ಆಗಿದ್ದರು ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:-ನಾಳೆ ಹನುನ ಜಯಂತಿ ಈ ರೀತಿ ಮಾಡಿ ನೀವು ಅಂದಿಕೊಂಡಿದೆಲ್ಲಾ ನೆಡೆಯುತ್ತೆ.!

* ವೃಷಭ ರಾಶಿ:- ವೃಷಭ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ಪೂರ್ವ ಜನ್ಮದಲ್ಲಿ ಪ್ರಾಮಾಣಿಕರಾಗಿರುತ್ತಾರೆ. ಸಹನಶೀಲರು ಅತ್ಯಂತ ತಾಳ್ಮೆ ಹೊಂದಿರುವ ಮನಸ್ಥಿತಿಯವರು ಆಗಿದ್ದರೂ, ಹಿಡಿದಿದ್ದನ್ನು ಬಿಡದೆ ಅಂದುಕೊಂಡಿದ್ದನು ಸಾಧಿಸುವ ಹಠವಾದಿಗಳು ಕೂಡ ಆಗಿದ್ದವರು, ನ್ಯಾಯ ನೀತಿ ಧರ್ಮವನ್ನು ನಂಬಿ ಬದುಕಿದಂತಹ ವ್ಯಕ್ತಿಗಳು ಆಗಿದ್ದವರು ಎಂದು ಶಾಸ್ತ್ರ ಹೇಳುತ್ತದೆ.

* ಮಿಥುನ ರಾಶಿ:- ಪೂರ್ವ ಜನ್ಮದಲ್ಲಿ ವ್ಯಾಪಾರಸ್ಥರಾಗಿದ್ದವರು ಮಿಥುನ ರಾಶಿಯಲ್ಲಿ ಜನಿಸಿರುತ್ತಾರೆ ಮತ್ತು ಈ ಜನುಮದಲ್ಲೂ ಕೂಡ ಇವರಿಗೆ ಬಿಸಿನೆಸ್ ಬಗ್ಗೆ ಹಾಗೂ ಹಣಕಾಸಿನ ವಹಿವಾಟಿನ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ.

* ಕರ್ಕಾಟಕ ರಾಶಿ:- ಕನ್ಯಾ ರಾಶಿಯವರು ಕಳೆದ ಜನ್ಮದಲ್ಲಿ ಬಹಳ ಕಟು ಸ್ವಭಾವದ ವ್ಯಕ್ತಿಗಳಾಗಿದ್ದು ತಮ್ಮ ನೇರನುಡಿಯ ಮೂಲಕ ಪರಿಣಾಮ ಬೀರಿದವರಾಗಿರುತ್ತಾರೆ ಆದರೆ ಈ ಜನ್ಮದಲ್ಲಿ ಅದಕ್ಕೆ ವಿರುದ್ಧವಾಗಿ ಬಹಳ ಸೌಮ್ಯ ಸ್ವಭಾವದ ವ್ಯಕ್ತಿಗಳಾಗಿ ಯಾವಾಗಲು ಯಾವುದಾದರೂ ವಿಷಯದ ಬಗ್ಗೆ ಬಹಳ ಯೋಚನೆ ಮಾಡುತ್ತಾ ಕೊರಗುತ್ತಾ ಕೂರುವ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿ ಓದಿ:-ಮೀನಾ ರಾಶಿಯವರ ಮೇ ತಿಂಗಳ ರಾಶಿ ಭವಿಷ್ಯ, ಈ ತಿಂಗಳಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆದರೆ ಈ ವಿಚಾರವಾಗಿ ಎಚ್ಚರವಾಗಿರಬೇಕು.!

* ಸಿಂಹ ರಾಶಿ:- ಜೀವನದಲ್ಲಿ ತಮ್ಮದೇ ಆದ ಆದರ್ಶ ಬೆಳೆಸಿಕೊಂಡು ಮಹತ್ವಾಕಾಂಕ್ಷೆಯ ಗುರಿಗಳನ್ನು ಇಟ್ಟುಕೊಂಡು ತಮ್ಮ ಕೋರಿಗಳನ್ನು ಸಾಧಿಸುವುದಕ್ಕಾಗಿಯೇ ಬದುಕಿದಂತಹ ಭಕ್ತಿಗಳು ಸಿಂಹ ರಾಶಿಯಲ್ಲಿ ಜನಿಸಿರುತ್ತಾರೆ ಮತ್ತು ಕಳೆದ ಜನ್ಮದಲ್ಲಿ ಕೂಡ ಸಾಧನೆ ಮಾಡಿದ ವ್ಯಕ್ತಿಗಳಾಗಿರುತ್ತಾರೆ. ಆ ಪ್ರಭಾವ ಈ ಜನ್ಮದಲ್ಲೂ ಕೂಡ ಹುಟ್ಟಿನಿಂದಲೇ ಮೈಗೂಡಿಕೊಂಡಿರುತ್ತದೆ ಎಂದು ಹೇಳಲಾಗುತ್ತದೆ.

* ಕನ್ಯಾ ರಾಶಿ:- ಕನ್ಯಾ ರಾಶಿಯವರು ಬಹಳ ಇಗೋ ಇಟ್ಟುಕೊಂಡು ಬದುಕಿದಂತಹ ವ್ಯಕ್ತಿಗಳಾಗಿರುತ್ತಾರೆ. ಆದರೆ ಈ ಜನ್ಮದಲ್ಲಿ ಇದಕ್ಕೆ ವಿರುದ್ಧ ಸ್ವಭಾವದವರಾಗಿರುತ್ತಾರೆ.

* ತುಲಾ ರಾಶಿ:- ಕಳೆದ ಜನ್ಮದಲ್ಲಿ ನ್ಯಾಯವಂತಿಕೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಂತಹ ಶ್ರೇಷ್ಠ ಸ್ಥಾನದಲ್ಲಿ ಕುಳಿತಿದ್ದವರು ಈ ಜನ್ಮದಲ್ಲಿ ತುಲಾ ರಾಶಿಯಲ್ಲಿ ಜನಿಸಿರುತ್ತಾರೆ ಎಂದು ಹೇಳಲಾಗುತ್ತದೆ. ಏಕೆಂದರೆ ಈ ಜನ್ಮದಲ್ಲಿ ಕೂಡ ಅವರು ಎಲ್ಲವನ್ನು ತೂಗುಹಾಕಿ ನಿರ್ಧಾರ ತೆಗೆದುಕೊಂಡವ ಗುಣವಂತಿಕೆ ಮತ್ತು ಬುದ್ಧಿವಂತಿಕೆ ಹೊಂದಿರುತ್ತಾರೆ.

ಈ ಸುದ್ದಿ ಓದಿ:-ನಿಮ್ಮ ಮಗುವಿಗೆ ಈ ಹೆಸರಿಟ್ಟರೆ ತುಂಬಾ ಅದೃಷ್ಟ.!

* ವೃಶ್ಚಿಕ ರಾಶಿ:- ಕಳೆದ ಜನ್ಮದಲ್ಲಿ ಬಹಳ ರಾಜಯೋಗದಲ್ಲಿ ಬದುಕಿದ್ದವರು ಈ ಜನುಮದಲ್ಲಿ ವೃಶ್ಚಿಕ ರಾಶಿಯವರಾಗಿ ಜನಿಸಿ ಬದುಕುತ್ತಿರುತ್ತಾರೆ ಎಂದು ಹೇಳಲಾಗುತ್ತದೆ

* ಧನಸ್ಸು ರಾಶಿ:- ಧನಸ್ಸು ರಾಶಿಯವರು ಕಳೆದ ಜನ್ಮದಲ್ಲಿ ಎಲ್ಲವನ್ನು ಸರಿಯಾಗಿ ವಿಮರ್ಶೆ ಮಾಡುವಂತಹ ಜ್ಞಾನವನ್ನು ಹೊಂದಿದ್ದಂತಹ ಜ್ಞಾನವಂತರಾಗಿ ಬದುಕಿದ್ದರು ಈ ಜನ್ಮದಲ್ಲಿ ಹೆಚ್ಚು ಕಡಿಮೆ ಇದೆ ರೀತಿ ಸ್ವಭಾವ ಹೊಂದಿರುತ್ತಾರೆ ಎನ್ನಲಾಗುತ್ತಿದೆ.

* ಮಕರ ರಾಶಿ:- ಸಾಹಿತ್ಯದ ಬಗ್ಗೆ ಆಸಕ್ತನಾಗಿದ್ದವರು ಕವನ ಕವಿತೆ ಬರವಣಿಗೆಗಳ ಬಗ್ಗೆ ಒಲವು ಹೊಂದಿದದ್ದವರು ಈ ಜನ್ಮದಲ್ಲಿ ಮಕರ ರಾಶಿಯವರಾಗಿ ಜನಿಸಿ ಈಗಲೂ ವೈರಾಗ್ಯ ಗುಣ ಹೊಂದಿರುತ್ತಾರೆ ಎನ್ನಲಾಗುತ್ತಿದೆ.

ಈ ಸುದ್ದಿ ಓದಿ:-ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಿಮ್ಮ ಗುಣ ಸ್ವಭಾವ ತಿಳಿದುಕೊಳ್ಳಿ.!

* ಕುಂಭ ರಾಶಿ:- ಬಹಳ ಗತ್ತಿನಲ್ಲಿ ಬದುಕಿದ ಮಾತುಗಳ ಮೂಲಕ ಪ್ರಭಾವ ಬೀರಿದಂತಹ ವ್ಯಕ್ತಿಗಳು ಕುಂಭ ರಾಶಿಯವರಾಗಿ ಜನಿಸಿರುತ್ತಾರೆ ಎಂದು ಹೇಳಲಾಗುತ್ತಿದೆ.

* ಮೀನ ರಾಶಿ:- ಬಹಳ ಚುರುಕಿನ ಸ್ವಭಾವದವರಾಗಿದ್ದು ಕಳೆದ ಜನ್ಮದಲ್ಲಿ ಕಡಿಮೆ ಆಯಸ್ಸು ಹೊಂದಿದ್ದವರಾಗಿದ್ದರು. ಆದರೆ ಈ ಜನ್ಮದಲ್ಲಿ ಬದುಕಿನ ಉದ್ದೇಶ ಪೂರೈಸಿಯೇ ತೀರುತ್ತಾರೆ ಎಂದು ಹೇಳಲಾಗುತ್ತದೆ.

Astrology
WhatsApp Group Join Now
Telegram Group Join Now

Post navigation

Previous Post: ನಾಳೆ ಹನುನ ಜಯಂತಿ ಈ ರೀತಿ ಮಾಡಿ ನೀವು ಅಂದಿಕೊಂಡಿದೆಲ್ಲಾ ನೆಡೆಯುತ್ತೆ.!
Next Post: ಜೀವನದ ದಿಕ್ಕೇ ಬದಲಿಸುವ ವಾಸ್ತು ಸಲಹೆಗಳು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore