Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ.! ಎಲ್ಲಾ ರಾಶಿಯವರ ಸಂಪೂರ್ಣ ಮಾಹಿತಿ.!

Posted on February 3, 2024 By Kannada Trend News No Comments on ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ.! ಎಲ್ಲಾ ರಾಶಿಯವರ ಸಂಪೂರ್ಣ ಮಾಹಿತಿ.!

 

* ಮೇಷ ರಾಶಿ :- ಮೇಷ ರಾಶಿಯ ಜನರು 19, 28, 37 ಮತ್ತು 55ನೇ ವಯಸ್ಸಿನಲ್ಲಿ ಅವರುಗಳು ಇದ್ದಕ್ಕಿದ್ದಂತೆ ಹೇರಳವಾಗಿ ಹಣವನ್ನು ಪಡೆಯುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

* ವೃಷಭ ರಾಶಿ :- ಈ ರಾಶಿಯ ಜನರು ತುಂಬಾ ಶ್ರಮ ಜೀವಿಗಳು ಆಗಿರುತ್ತಾರೆ. ತಮ್ಮ ಕಠಿಣ ಪರಿಶ್ರಮದಿಂದ ಮತ್ತು ಹೆಚ್ಚಿನ ಪ್ರಯತ್ನ ದಿಂದ ಹಣವನ್ನು ಪಡೆಯುತ್ತಾರೆ.29, 38, ಮತ್ತು 55ನೇ ವಯಸ್ಸಿನಲ್ಲಿ ಹಣವನ್ನು ಪಡೆಯುವ ಸಾಧ್ಯತೆಯೂ ಬಲವಾಗಿ ಇರುತ್ತದೆ. ಇವರು ತಮ್ಮ ಸಂಗಾತಿಯಿಂದ ಹಣವನ್ನು ಪಡೆಯುವ ಸಾಧ್ಯತೆ ಹೊಂದಿರುತ್ತಾರೆ

* ಮಿಥುನ ರಾಶಿ :- ಮಿಥುನ ರಾಶಿಯವರಿಗೆ 27, 36, 45 ಮತ್ತು 57ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಧನ ಲಾಭವಾಗುವ ಸಾಧ್ಯತೆ ಹೆಚ್ಚುರುತ್ತದೆ. ಮಿಥುನ ರಾಶಿಯವರಿಗೆ ತಂದೆಯ ಕಡೆಯಿಂದ ಆಸ್ತಿ ದೊರೆಯುತ್ತದೆ. ಮಿಥುನ ರಾಶಿಯವರು ಅವರ ಸ್ವಂತ ಪ್ರಯತ್ನದಿಂದ ಅಪಾರ ಹಣ ಗಳಿಸುತ್ತಾರೆ. ಆಂಜನೇಯನಿಗೆ ಮಂಗಳವಾರ ಮತ್ತು ಶನಿವಾರ ಸಿಂಧೂರವನ್ನು ಅರ್ಪಿಸುವುದರಿಂದ ಈ ರಾಶಿಯವರಿಗೆ ತುಂಬಾ ಶುಭಫಲವನ್ನು ಕೊಡುತ್ತದೆ.

ಈ ಸುದ್ದಿ ನೋಡಿ :- ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ಹಣ ಘೋಷಣೆ.!

* ಕರ್ಕಾಟಕ ರಾಶಿ :- ಕರ್ಕಾಟಕ ರಾಶಿಯ ಜನರು 23,27, 32, 48 ಮತ್ತು 58ನೇ ವಯಸ್ಸಿನಲ್ಲಿ ಆಕಸ್ಮಿಕ ಧನ ಲಾಭದ ಸಾಧ್ಯತೆ ಇದೆ. ಈ ರಾಶಿಯವರು ಅತ್ತೆ ಮನೆ ಕಡೆಯಿಂದ ಬೆಂಬಲ ಪಡೆಯುವ ಸಾಧ್ಯತೆ ಇದೆ. ಈ ರಾಶಿಯವರು ಲಕ್ಷ್ಮೀದೇವಿಗೆ ನಿಯಮಿತವಾಗಿ ಸುಗಂಧವನ್ನು ಅರ್ಪಿಸಬೇಕು. ಇದರಿಂದಾಗಿ ಈ ರಾಶಿಯವರಿಗೆ ಎಂದಿಗೂ ಹಣದ ಕೊರತೆ ಕಾಣುವುದಿಲ್ಲ.

* ಸಿಂಹ ರಾಶಿ :- ಸಿಂಹ ರಾಶಿಯವರಿಗೆ 28, 32, 50 ಮತ್ತು 60ನೇ ವಯಸ್ಸಿನಲ್ಲಿ ಆಕಸ್ಮಿಕ ಧನ ಲಾಭ ಆಗುವ ಸಾಧ್ಯತೆ ಇದೆ. ಇವರು ತಮ್ಮ ಸ್ವಂತ ಪರಿಶ್ರಮದಿಂದ ಹಣವನ್ನು ಗಳಿಸುತ್ತಾರೆ. ಈ ರಾಶಿಯವರು ಲಕ್ಷ್ಮೀದೇವಿಗೆ ನಿಯಮಿತವಾಗಿ ಹಸಿರು ಏಲಕ್ಕಿಯನ್ನು ಅರ್ಪಿಸಬೇಕು. ಅದರ ನಂತರ ಅದನ್ನು ಪ್ರಸಾದ ಎಂದು ಸೇವಿಸಬೇಕು. ಇದು ಹಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ತೊಡೆದು ಹಾಕುತ್ತದೆ.

* ಕನ್ಯಾ ರಾಶಿ :- ಕನ್ಯಾ ರಾಶಿಯ ಜನರು ತಮ್ಮ ವ್ಯಾಪಾರ, ನೌಕರಿ ಮತ್ತು ಜೀವನ ಸಂಗಾತಿಯ ಮೂಲಕ ನಿಯಮಿತವಾಗಿ ಹಣವನ್ನು ಪಡೆಯುವ ಯೋಗವನ್ನು ಹೊಂದಿರುತ್ತಾರೆ. ಈ ರಾಶಿಯವರು 15, 24, 35 ಮತ್ತು 42ನೇ ವಯಸ್ಸಿನಲ್ಲಿ ಅಪಾರ ಸಂಪತ್ತನ್ನು ಪಡೆಯುವ ಸಾಧ್ಯತೆ ಇದೆ. ಕನ್ಯಾ ರಾಶಿಯವರು ಬೆಳ್ಳಿಯನ್ನು ಧರಿಸಿ ನಿತ್ಯ ಶಿವನನ್ನು ಪೂಜಿಸಬೇಕು. ಅವರಿಗೆ ಜೀವನದಲ್ಲಿ ಎಂದಿಗೂ ಹಣಕಾಸಿನ ತೊಂದರೆ ಆಗುವುದಿಲ್ಲ.

ಈ ಸುದ್ದಿ ನೋಡಿ :- ಸಿಂಹ ರಾಶಿಯವರು ಜೀವನಪೂರ್ತಿ ಈ ದೇವರನ್ನು ಪೂಜಿಸಬೇಕು…||

* ತುಲಾ ರಾಶಿ :- ತುಲಾ ರಾಶಿಯ ಜನರು 15, 34, 42 ಮತ್ತು 51ನೇ ವಯಸ್ಸಿನಲ್ಲಿ ಸ್ತ್ರೀ ಕಡೆಯಿಂದ ಹಣ ಬರುವ ಯೋಗಗಳು ಇರುತ್ತವೆ. ಈ ರಾಶಿ ಅವರು ನಿಯಮಿತವಾಗಿ ಸೂರ್ಯದೇವನಿಗೆ ನೀರನ್ನು ಅರ್ಪಿಸಬೇಕು. ಇದರಿಂದಾಗಿ ನಿರಂತರವಾಗಿ ಹಣ ಇವರ ಕೈಗೆ ಸೇರುತ್ತದೆ. ಆದಾಯ ಮತ್ತು ಖರ್ಚು ಇವೆರಡನ್ನು ಈ ರಾಶಿಯವರು ಸಮತೋಲನವಾಗಿ ನೋಡಿಕೊಳ್ಳುತ್ತಾರೆ.

* ವೃಶ್ಚಿಕ ರಾಶಿ :- ಈ ರಾಶಿಯ ಜನರು ಚಿಕ್ಕಪ್ಪ ಅಥವಾ ತಂದೆ ಕಡೆಯ ಸಂಬಂಧಿಕರಿಂದ ಹಣ ಪಡೆಯುವ ವಿಶೇಷ ಯೋಗ ಹೊಂದಿರುತ್ತಾರೆ. ಅವರು ತಮ್ಮ 35, 44,53 ಮತ್ತು 63ನೇ ವಯಸ್ಸಿನಲ್ಲಿ ಹಣವನ್ನು ಪಡೆಯುವ ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತಾರೆ. ಈ ರಾಶಿಯ ಜನರು ಗಣೇಶನನ್ನು ಗರಿಕೆಯಿಂದ ನಿತ್ಯವೂ ಪೂಜಿಸಬೇಕು. ಮತ್ತು ಗಿಡಗಳಿಗೆ ನೀರು ಹಾಕಬೇಕು. ಹಣಕಾಸಿನಂತಹ ನಷ್ಟದ ಸಮಸ್ಯೆಗಳು ಬರುವುದಿಲ್ಲ ಮತ್ತು ಧನ ಪ್ರಾಪ್ತಿ ಹೆಚ್ಚಾಗಿ ಆಗುತ್ತದೆ.

* ಧನಸು ರಾಶಿ : ಈ ರಾಶಿಯ ಜನರು 36, 45.54 ಮತ್ತು 63ನೇ ವಯಸ್ಸಿನಲ್ಲಿ ಸಂಪತ್ತು ಪಡೆಯುವ ಬಲವಾದ ಯೋಗವಿದೆ. ಈ ರಾಶಿಯವರಿಗೆ ತಾಯಿ ಮತ್ತು ತಾಯಿಯ ಕಡೆಯವರ ಸಂಬಂಧದಿಂದ ಹಣವನ್ನು ಗಳಿಸುವ ಸಾಧ್ಯತೆ ಹೆಚ್ಚು ಇದೆ. ಈ ರಾಶಿಯವರು ನಿಯಮಿತವಾಗಿ ಲಕ್ಷ್ಮೀದೇವಿಗೆ ಗುಲಾಬಿ ಹೂವನ್ನು ಅರ್ಪಿಸಬೇಕು. ಈ ರಾಶಿಯವರಿಗೆ ನಿರಂತರವಾಗಿ ಧನ ಲಾಭ ಆಗುತ್ತದೆ.

ಈ ಸುದ್ದಿ ನೋಡಿ :- ಈ 5 ವೇಳೆಗಳಲ್ಲಿ ಶೃಂಗಾರ ಮಾಡಿದ್ರೆ ದಾರಿದ್ರ್ಯ ಖಂಡಿತ ಅನುಭವಿಸಬೇಕು. ದಂಪತಿಗಳು ಈ ವಿಷಯಗಳನ್ನು ತಿಳಿದುಕೊಳ್ಳಿ

* ಮಕರ ರಾಶಿ :- ಮಕರ ರಾಶಿಯ ಜನರು ತಮ್ಮ ಸ್ವಂತ ವ್ಯಾಪಾರ ನೌಕರಿ ಇತರ ವೃತ್ತಿಗಳಿಂದ ಹಣ ಪಡೆಯುತ್ತಾರೆ. ಈ ರಾಶಿಯವರಿಗೆ 28, 37,46 ಮತ್ತು ಮತ್ತು 55ನೇ ವಯಸ್ಸಿನಲ್ಲಿ ಹಣ ಪಡೆಯುವ ಸಾಧ್ಯತೆ ಇದೆ. ಈ ರಾಶಿಯ ಜನರು ಮಂಗಳವಾರದಂದು ನಿಯಮಿತವಾಗಿ ಕನಿಷ್ಠ ಒಂದು ಹೊತ್ತು ಆದರೂ ಉಪವಾಸ ಇರಬೇಕು ಮತ್ತು ಹನುಮಂತ ದೇವರನ್ನು ಪೂಜಿಸಬೇಕು.

* ಕುಂಭ ರಾಶಿ :- ಈ ಕುಂಭ ರಾಶಿಯ ಜನರು ತಮ್ಮ ಅದೃಷ್ಟ ಮತ್ತು ದೇವರ ದಯೆಯಿಂದ ಹಣವನ್ನು ಪಡೆಯುತ್ತಾರೆ. ಈ ರಾಶಿಯವರು 29,38,47 ಮತ್ತು 57ನೇ ವಯಸ್ಸಿನಲ್ಲಿ ಹಣವನ್ನು ಗಳಿಸುವ ಸಾಧ್ಯತೆ ಇರುತ್ತದೆ. ಈ ರಾಶಿಯ ಜನರು ನಿರಂತರವಾಗಿ ಹಣವನ್ನು ಪಡೆಯಲು ಬಯಸಿದರೆ ನಿಯಮಿತವಾಗಿ ದೇವಾಲಯಗಳಲ್ಲಿ ಬಾಳೆಹಣ್ಣನ್ನು ದಾನ ಮಾಡಬೇಕು.

* ಮೀನ ರಾಶಿ :- ಮೀನ ರಾಶಿಯ ಜನರು 39, 48 ಮತ್ತು 57ನೇ ವಯಸ್ಸಿನಲ್ಲಿ ಧನಾಗಮನದ ಸಾಧ್ಯತೆ ತುಂಬಾ ಪ್ರಬಲವಾಗಿದೆ. ಇವರ ಜೀವನದಲ್ಲಿ ಮಕ್ಕಳ ಆಗಮನದೊಂದಿಗೆ ಮತ್ತು ಮಕ್ಕಳ ಸಹಕಾರದೊಂದಿಗೆ ನೀವು ಹಣಕಾಸಿನ ಪ್ರಯೋಜನಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಇವರು ಮುಖ್ಯವಾಗಿ ಅಶ್ವತ ಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪವನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ ಅದು ಸಂಪತ್ತಿನ ಆಗಮನಕ್ಕೆ ಕಾರಣವಾಗುತ್ತದೆ.

 

Useful Information
WhatsApp Group Join Now
Telegram Group Join Now

Post navigation

Previous Post: ಹಣಕಾಸಿನ‌ ಸಮಸ್ಯೆ ಇದ್ದವರು ಕೇವಲ ಈ ಕೆಲಸವನ್ನು ಮಾಡಿ ಸಾಕು.!
Next Post: ಈ 10 ಔಷಧಗಳಿದ್ರೆ ಯಾವುದೇ ಕಾಯಿಲೆ ಬರೋದಿಲ್ಲ.! ಉತ್ತಮ ಆರೋಗ್ಯಕ್ಕಾಗಿ ಇದನ್ನು ಪಾಲಿಸಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore