ಕೆಲವರು ಜೀವನದಲ್ಲಿ ಬಹಳ ಕ’ಷ್ಟ ಪಡುತ್ತಿರುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ಒಂದು ರಾತ್ರಿಯು ಅವರ ಬದುಕನ್ನೇ ಬದಲಾಯಿಸಿಬಿಟ್ಟಿರುತ್ತದೆ. ಅರ್ಧ ರಾತ್ರಿಯ ಅವರ ಬದುಕಿನಲ್ಲಿ ಐಶ್ವರ್ಯವನ್ನು ತಂದು ಕೊಟ್ಟಿರುತ್ತದೆ. ಆದರೆ ಈ ರೀತಿ ಅದೃಷ್ಟವನ್ನು ಎಲ್ಲರೂ ಹೊಂದಿರುವುದಿಲ್ಲ ಯಾಕೆ? ಹಾಗಾದರೆ ಇದು ಹಣೆಬರಹದಲ್ಲಿ ನಿರ್ಧಾರವಾಗಿರುತ್ತದೆಯೇ? ಜಾತಕದಲ್ಲಿ ಇದಕ್ಕೆ ಸುಳಿವು ಇರುತ್ತದೆಯೇ ಎಂದು ಅನೇಕರು ಈ ಬಗ್ಗೆ ಕುತೂಹಲ ತೋರುತ್ತಾರೆ.
ಹೌದು, ಖಂಡಿತವಾಗಿಯೂ ಇದಕ್ಕೆ ಜಾತಕದಲ್ಲಿ ಈ ರೀತಿ ಗುಪ್ತನಿಧಿ ಸಿಗುವ ಯೋಗ ಇದ್ದರೆ ಮಾತ್ರ ಬದುಕಿನಲ್ಲಿ ದಿಢೀರ್ ಐಶ್ವರ್ಯ ಬರುವುದು, ಜಾಕ್ ಪಾಟ್ ಹೊಡೆಯುವುದು. ನಿಧಿ ಎಂದರೆ ಭೂಮಿಯೊಳಗೆ ಇಟ್ಟಿರುವ ನಗ ನಾಣ್ಯ ಬಂಗಾರ ಈ ರೀತಿ ಸಿಗುವುದು ಎನ್ನುವ ಒಂದೇ ಅರ್ಥವಲ್ಲ ಈಗ ಸರ್ಕಾರದ ನಿಯಮ ಬದಲಾಗಿದ್ದು ಹೀಗೆ ನಿಮ್ಮದೇ ಮನೆ ಅಥವಾ ಜಮೀನಿನಲ್ಲಿ ಸಿಕ್ಕರೂ ಸರ್ಕಾರಕ್ಕೆ ಸೂಚನೆ ಕೊಡಬೇಕು ಮತ್ತು ಅದು ಸರ್ಕಾರಕ್ಕೆ ಸೇರುತ್ತದೆ.
ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಮಾರ್ಚ್ 14ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಆಧಾರ್ ಕಾರ್ಡ್ ಬಂದ್ ಆಗುವುದು ಗ್ಯಾರಂಟಿ.!
ಆದರೆ ಇಂದು ನಾವು ಈ ಅಂಕಣದಲ್ಲಿ ಹೇಳುತ್ತಿರುವ ನಿಧಿ ಅರ್ಥ ಇದು ಮಾತ್ರವಲ್ಲದೆ ಅನಿರೀಕ್ಷಿತವಾಗಿ ಆಗುವ ಅಪಾರ ಧನಲಾಭ ಎಂಬುವುದಾಗಿದೆ. ಉದಾಹರಣೆಗೆ, ಕೆಲವರಿಗೆ ಮದುವೆ ಆದ ತಕ್ಷಣ ಅದೃಷ್ಟ ಬದಲಾಗುತ್ತದೆ ಇದನ್ನು ಹೆಂಡತಿಯ ಕಾಲ್ಗುಣ ಎನ್ನುತ್ತಾರೆ. ಉದಾಹರಣೆಗೆ ಹೆಂಡತಿ ಮನೆಯವರು ಶ್ರೀಮಂತರಾಗಿದ್ದರೆ ಖಂಡಿತವಾಗಿಯೂ ಆಕೆ ನಿಮಗೆ ಸಹಾಯ ಮಾಡಿ ನಿಮ್ಮನ್ನು ಜೀವನದಲ್ಲಿ ಅಭಿವೃದ್ಧಿ ಹೊಂದುವ ಹಾಗೆ ಮಾಡುತ್ತಾಳೆ.
ಆಗ ನಿಮ್ಮ ಬದುಕು ಬದಲಾಗುತ್ತದೆ ಅಥವಾ ನಿಮ್ಮ ತಂದೆ ನಿಮಗೆ ತಿಳಿಯದಂತೆ ಕೂಡಿಟ್ಟಿದ್ದ ದೊಡ್ಡ ಮೊತ್ತದ ಹಣವನ್ನು ದಿಢೀರ್ ಎಂದು ನಿಮ್ಮ ಕ’ಷ್ಟ ನೋಡಲಾಗದೆ ನಿಮ್ಮ ಸ್ವಂತಕ್ಕೆಂದು ಕೊಡಬಹುದು. ನೀವೇ ಯಾವುದಾದರೂ ಲಾಟರಿ ಖರೀದಿಸುತ್ತೀರಿ ನಿಮಗೆ ಆ ಬಂಪರ್ ಬಂದಿರಬಹುದು.
ಈಗ ಶೇರ್ ಮಾರ್ಕೆಟ್ ಗಳಲ್ಲಿ ಅನೇಕರು ಹೂಡಿಕೆ ಮಾಡುತ್ತಾರೆ ಆ ರೀತಿಯಾಗಿ ನಿಮ್ಮ ಹೂಡಿಕೆಗೆ ಧೀಡಿರೆಂದು ಹೆಚ್ಚು ಲಾಭ ಸಿಗಬಹುದು, ನೀವು ಕಡಿಮೆ ಬೆಲೆಗೆ ಖರೀದಿಸಿದ ಆಸ್ತಿಯೊಂದು ಅದರ ನಾಲ್ಕು ಪಟ್ಟು ಹಣಕ್ಕೆ ಕಡಿಮೆ ಅವಧಿಗೆ ಮಾರಾಟವಾಗಿ ಬಿಡಬಹುದು. ಈ ರೀತಿ ಯಾವುದೇ ಒಂದು ಕಡೆಯಿಂದ ನಿಮ್ಮ ಜೀವನದಲ್ಲಿ ಹಿಂದೆ ಎಂದು ಕಾಣದಷ್ಟು ಅಪಾರ ಧನಲಾಭ ನಿಮ್ಮ ಪಾಲಿಗೆ ಒದಗಿ ಬರಬಹುದು.
ಈ ಸುದ್ದಿ ಓದಿ:-ಈ ವರ್ಷ ಬಹಳ ಅದೃಷ್ಟ ಪಡೆದಿರುವ ರಾಶಿಗಳು ಇವು, 2025 ರ ವರೆಗೂ ಈ ರಾಶಿಯವರಿಗೆ ಹಣದ ಹೊಳಯೇ ಹರಿಯುತ್ತಿರುತ್ತದೆ, ರಾಹು ನೀಡಲಿದ್ದಾನೆ ಸುಖದ ಸುಪ್ಪತ್ತಿಗೆ.!
ಇದಕ್ಕೆ ಖಂಡಿತವಾಗಿಯೂ ಜಾತಕದಲ್ಲಿ ಸುಳಿವು ಇದೆ ಯಾರ ಜಾತಕದಲ್ಲಿ ಅಷ್ಟಮ ಸ್ಥಾನದಲ್ಲಿ ರಾಹು ಇದೆ ಅವರಿಗೆ ಖಂಡಿತವಾಗಿಯೂ ಇಂತಹದೊಂದು ಅದೃಷ್ಟ ಇರುತ್ತದೆ, ಆದರೆ ಅದಕ್ಕೆ ಅವರು ಶಾಂತಿಯನ್ನು ಕೂಡ ಮಾಡಿಸಿಕೊಳ್ಳಬೇಕು. ಅಷ್ಟಮದಲ್ಲಿ ಕುಜನಿದ್ದರೂ ಭೂಮಿ ಯೋಗ, ಅಷ್ಟಮದಲ್ಲಿ ಕೇತು ಇದ್ದರು ಈ ರೀತಿ ಗುಪ್ತ ನಿಧಿ ಯೋಗ ಇರುತ್ತದೆ.
ದೇವಸ್ಥಾನಗಳ ರಹಸ್ಯ ಸ್ಥಳಗಳಲ್ಲಿ ಅಪಾರ ನಿಧಿ ಇರುವುದು ಅದಕ್ಕೆ ನಾಗನು ಸರ್ಪಗಾವಲಾಗಿರುವುದು ಈ ರೀತಿ ಕೇಳಿದ್ದೇವೆ. ಹೀಗೆ ಜಾತಕದಲ್ಲಿ ನಾಗನ ಸೂಚಕವಾದ ರಾಹುವಿನ ಯೋಗದಿಂದ ಕೂಡ ಇಂತಹ ಅದೃಷ್ಟ ಬರುತ್ತದೆ. 4-8-11 ರ ಸ್ಥಾನ ರಾಹುವಿನಲ್ಲಿದ್ದರೆ 100% ಅವರು ದಿಢೀರ್ ಶ್ರೀಮಂತರಾಗುತ್ತಾರೆ. 5-8-11, 7-8-11 ಈ ರೀತಿ ಕಾಂಬಿನೇಷನ್ ಇದ್ದರೆ ಮಾತ್ರ ಅವರಿಗೆ ನಿಧಿ ಯೋಗ ಇರುತ್ತದೆ.
ನೀವು ಹುಟ್ಟಿರುವ ನಕ್ಷತ್ರ, ನಿಮಗೆ ನಡೆಯುತ್ತಿರುವ ದಶ ಭುಕ್ತಿ ಕೂಡ ಇದಕ್ಕೆ ಪಾತ್ರವಹಿಸುತ್ತದೆ. ಕೆಲವರು ಮೂಢನಂಬಿಕೆಯಿಂದ ಯಾರದ್ದೋ ಮಾತು ಕೇಳಿ ಆ ಸ್ಥಳಗಳಲ್ಲಿ ಪೂಜೆ ಮಾಡಿಸುವುದು, ಗುಂಡಿ ತೋಸುವುದು ಇವೆಲ್ಲಾ ಮಾಡಿ ಇಲ್ಲಸಲ್ಲದ ಸಮಸ್ಯೆ ತಲೆ ಮೇಲೆ ಎಳೆದುಕೊಳ್ಳುವುದು ಈ ರೀತಿ ಮಾಡುತ್ತಾರೆ, ಇದನ್ನೆಲ್ಲ ಮಾಡುವ ಮುನ್ನ ಒಮ್ಮೆ ತಜ್ಞ ಜ್ಯೋತಿಷ್ಯರ ಬಳಿ ಜಾತಕ ವಿಮರ್ಶ ಮಾಡಿಸಿ ನಿಮಗೆ ಯೋಗ ಇದೆ ಎಂದು ತಿಳಿದುಕೊಳ್ಳಿ.