Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದೇಹ ತಂಪಾಗಲು, ಮೂಳೆಗಳು ಗಟ್ಟಿಯಾಗಲು, ಸುಸ್ತು, ನಿದ್ರಾಹೀನತೆ, ಕ್ಯಾಲ್ಸಿಯಂ ಕೊರತೆ ಪರಿಹಾರಕ್ಕಾಗಿ ಅದ್ಭುತ ಮನೆ ಮದ್ದು…

Posted on March 3, 2024 By Kannada Trend News No Comments on ದೇಹ ತಂಪಾಗಲು, ಮೂಳೆಗಳು ಗಟ್ಟಿಯಾಗಲು, ಸುಸ್ತು, ನಿದ್ರಾಹೀನತೆ, ಕ್ಯಾಲ್ಸಿಯಂ ಕೊರತೆ ಪರಿಹಾರಕ್ಕಾಗಿ ಅದ್ಭುತ ಮನೆ ಮದ್ದು…

 

ಕೆಲವರಿಗೆ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಇದರಿಂದ ಅವರು ಮೂತ್ರ ವಿಸರ್ಜನೆ ಮಾಡುವಾಗ ಉರಿ, ನೋವು, ಪದೇ ಪದೇ ಮೂತ್ರ ಹೋಗುವುದು, ಹೊಟ್ಟೆ ನೋವು, ಕಣ್ಣು ಉರಿ ಇಂತಹ ಸಮಸ್ಯೆಗಳು ಬರುತ್ತಿರುತ್ತವೆ ಇದರೊಂದಿಗೆ ನಿದ್ರಾಹೀನತೆ, ರಕ್ತ ಹೀನತೆ, ಮೂಳೆಗಳಲ್ಲಿ ನೋವು, ಕೈಕಾಲು ಜೋಮು ಹಿಡಿಯುವುದು, ಸುಸ್ತು, ಯಾವುದರಲ್ಲೂ ಆಸಕ್ತಿ ಇಲ್ಲದೆ ಇರುವುದು, ಕೂದಲು ಉದುರುವುದು ಇನ್ನು ಮುಂತಾದ ಸಮಸ್ಯೆಗಳು ಕಾಡುತ್ತಿರುತ್ತವೆ.

ಇವುಗಳ ಪರಿಹಾರಕ್ಕಾಗಿ ಅದ್ಭುತವಾದ ಮನೆಮದ್ದು ಒಂದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ಈ ಎಲ್ಲಾ ಸಮಸ್ಯೆಗೂ ಈ ಒಂದು ಮನೆಮದ್ದು ಅದ್ಭುತವಾಗಿ ರಾಮಬಾಣದಂತೆ ಕೆಲಸ ಮಾಡುತ್ತದೆ ದೇಹ ತಂಪಾದರೆ ಅದರ ಮೂಲಕ ಎಲ್ಲಾ ಸಮಸ್ಯೆಗಳು ಕಂಟ್ರೋಲ್ ಗೆ ಬರುತ್ತದೆ.

ಈ ಸುದ್ದಿ ಓದಿ:- ಸಿಂಹ ರಾಶಿಯವರ ಮಾರ್ಚ್ ತಿಂಗಳ ಮಾಸ ಭವಿಷ್ಯ, ಈ ತಿಂಗಳಲ್ಲಿ ನಿಮಗೆ ಬಲ ಕೊಡುವುದು ಇದೊಂದೇ ಶಕ್ತಿ.!

ಇದನ್ನು ಮಾಡಲು ಬೇಕಾಗಿರುವುದು ಒಂದೇ ಪದಾರ್ಥ ಅದು ಬಿಳಿ ಎಳ್ಳು. ಬಿಳಿ ಎಳ್ಳು ಇಲ್ಲದೆ ಇದ್ದಲ್ಲಿ ಕಪ್ಪು ಎಳ್ಳನ್ನು ಬೇಕಾದರೂ ತೆಗೆದುಕೊಳ್ಳಬಹುದು. ಆದರೆ ಬಿಳಿ ಎಳ್ಳು ತೆಗೆದುಕೊಂಡರೆ ಬಹಳ ಉತ್ತಮ. ಬಿಳಿ ಎಳ್ಳು ಉಷ್ಣರೋಧಕ ಗುಣ ಹೊಂದಿದೆ, ಇದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ ಎಂದು ಸಾಮಾನ್ಯರಿಗೂ ಗೊತ್ತು. ಆದರೆ ನಾವು ಹೇಳುವ ವಿಧಾನದಲ್ಲಿ ನೀವು ಬಳಸಿದರೆ ಇದೆ ನಿರೋಧಕವಾಗಿಯೂ ಕೂಡ ಕೆಲಸ ಮಾಡುತ್ತಿದೆ.

ಎಳ್ಳನ್ನು ಉರಿದು ತಿನ್ನುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ಅದರ ಬದಲು ನೆನಸಿ ತಿನ್ನುವುದರಿಂದ ಇದೇ ವಿರುದ್ಧ ಗುಣದಲ್ಲೂ ಕೂಡ ಕೆಲಸ ಮಾಡುತ್ತದೆ. ಇನ್ನು ನಾವು ಹೇಳುವ ವಿಧಾನದ ಮೂಲಕ ಮನೆ ಮದ್ದು ಮಾಡಿ ಕುಡಿಯುವುದರಿಂದ ಉಷ್ಣತೆ ಕಡಿಮೆ ಆಗುವುದು ಮಾತ್ರವಲ್ಲದೆ ದೇಹಕ್ಕೆ ಬೇಕಾಗಿರುವ ಅನೇಕ ಪೋಷಕಾಂಶಗಳು ಕೂಡ ಸೇರುತ್ತದೆ.

ಈ ಸುದ್ದಿ ಓದಿ:-ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!

ಎಳ್ಳನ್ನು ಒಂದು ಪವರ್ ಹೌಸ್ ಎಂದು ಕರೆಯಲಾಗುತ್ತದೆ. ಯಾಕೆಂದರೆ ಎಳ್ಳಿನಲ್ಲಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಾಗಿರುವ ಕ್ಯಾಲ್ಸಿಯಂ, ಮೆಗ್ನೀಷಿಯಂ, ಜಿಂಕ್, ಐರನ್ ಅಂಶ ಮುಂತಾದವುಗಳು ಯಥೇಚ್ಛವಾಗಿರುತ್ತವೆ. ಎಳ್ಳಿನ ಸೇವನೆ ಚರ್ಮರೋಗ ನಿವಾರಣೆ ಮಾಡುತ್ತದೆ, ಮೂಳೆಗಳನ್ನು ಗಟ್ಟಿಗೊಳಿಸುತ್ತದೆ, ಮೂಳೆಗಳ ಸವಕಳಿ ತಪ್ಪಿಸುತ್ತದೆ. ದೇಹದ ನಿಶಕ್ತಿ, ಸುಸ್ತು, ಆಯಾಸ ಕಡಿಮೆ ಮಾಡಿ ದೇಹದ ಚೈತನ್ಯವನ್ನು ಸಹಾ ಹೆಚ್ಚಿಸುತ್ತದೆ.

ಎಳ್ಳಿನಲ್ಲಿ ಹಾಲಿನಲ್ಲಿರುವ ಬಹುತೇಕ ಎಲ್ಲಾ ಪೋಷಕಾಂಶಗಳು ಕೂಡ ಇರುತ್ತವೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಎಳ್ಳಿನ ಸೇವನೆ ಮಾಡಬೇಕು. ಎಳ್ಳಿನ ಜೊತೆ ನಾವು ಬೆಲ್ಲ ಹಾಗೂ ಕೊಬ್ಬರಿಯಂತಹ ಪದಾರ್ಥಗಳ ಕಾಂಬಿನೇಷನ್ ಇನ್ನೂ ಉತ್ತಮ. ಇಂದು ನಾವು ದೇಹದ ಉಷ್ಣತೆ ಕಡಿಮೆ ಮಾಡಿ ತಂಪು ಮಾಡಲು ಮತ್ತು ನಿಶಕ್ತಿ ಕಡಿಮೆ ಮಾಡಿ ರಕ್ತಹೀನತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುವ ಶಕ್ತಿಯುಳ್ಳ ಒಂದು ಜ್ಯೂಸ್ ಬಗ್ಗೆ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:-ಇಂದು 02 ಮಾರ್ಚ್ 2024, ಅಕ್ರಮ ಸಕ್ರಮ ಸರ್ಕಾರಿ ಜಮೀನಿನಲ್ಲಿ ಮನೆ / ಬೇಸಾಯ ಮಾಡುತ್ತಿರುವವರಿಗೆ ಸರ್ಕಾರದಿಂದ ಹಕ್ಕು ಪತ್ರ ವಿತರಣೆ.!

ಇದನ್ನು ಬೆಳಿಗ್ಗೆ ಹಾಗೂ ಸಂಜೆ ಸೇವಿಸಬೇಕು ‌. ನೀವು ಬೆಳಗ್ಗೆ ಸೇವಿಸುವುದಾದರೆ ರಾತ್ರಿ ಮೂರು ಚಮಚಗಳಷ್ಟು ಎಳ್ಳನ್ನು ನೆನೆ ಹಾಕಬೇಕು, ನೆನೆಸಿದ ಎಳ್ಳನ್ನು ಒಂದು ಚಿಕ್ಕ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಗ್ರೈಂಡ್ ಮಾಡಬೇಕು. ನಾವು ಎಷ್ಟು ಚೆನ್ನಾಗಿ ಇದನ್ನು ಗ್ರೈಂಡ್ ಮಾಡುತ್ತೇವೋ ಅಷ್ಟು ಹಾಲಿನ ಬಣ್ಣ ಬರುತ್ತದೆ ಲ.

ಎಳ್ಳಿನ ಹಾಲು ಅಥವಾ ಎಳ್ಳಿನ ಜ್ಯೂಸ್ ಬರುತ್ತದೆ ಅಂತಲೇ ಹೇಳಬಹುದು. ಈಗ ಇದನ್ನು ಒಂದು ಲೋಟಕ್ಕೆ ಹಾಕಿ ನಿಮಗೆ ರುಚಿಗೆ ಸ್ವಲ್ಪ ಬೆಲ್ಲ ಬೇಕು ಎಂದರೆ ಬೆಲ್ಲವನ್ನು ಹಾಕಿ ಸೇವಿಸಿ ಕುಡಿಯುವುದಕ್ಕೂ ಕೂಡ ಬಹಳ ರುಚಿಯಾಗಿರುತ್ತದೆ. ಮಕ್ಕಳು, ವಯಸ್ಕರೂ, ವೃದ್ದರೂ, ರೋಗಿಗಳು ಎಲ್ಲರೂ ಕೂಡ ಈ ಜ್ಯೂಸ್ ಸೇವನೆ ಮಾಡಬಹುದು.

Health Tips
WhatsApp Group Join Now
Telegram Group Join Now

Post navigation

Previous Post: ಮದುವೆ ತಡವಾಗುತ್ತಿದೆಯೇ.? ಹಾಗಾದರೆ ಇಲ್ಲಿದೆ ನೋಡಿ ಪರಿಹಾರ…
Next Post: ಕನಸಿನಲ್ಲಿ ದೇವರ ವಿಗ್ರಹ ಬಂದರೆ ಏನು ಅರ್ಥ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore