ನಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳುವುದು ಅಥವಾ ಹಾಳು ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ನಾವು ದೇಹದ ಬಗ್ಗೆ ಕಾಳಜಿ ಮಾಡಿದರೆ ಹಲವು ವರ್ಷಗಳವರೆಗೆ ಆರೋಗ್ಯ ನಮಗೆ ಸಾತ್ ಕೊಡುತ್ತದೆ. ಆರೋಗ್ಯ ಕಾಪಾಡಿಕೊಳ್ಳುವುದರ ಸೀಕ್ರೆಟ್ ನಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಅಡಗಿದೆ. ಯಾವ ರೀತಿ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಆರೋಗ್ಯ ಹದಗೆಡುತ್ತದೆ ಇದನ್ನು ಹೇಗೆ ಬದಲಾಯಿಸಿಕೊಳ್ಳಬೇಕು? ಎನ್ನುವುದರ ಬಗ್ಗೆ ಕೆಲ ಸಲಹೆಗಳನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ.
* ಯಾವುದೇ ನೆಪ ಇಲ್ಲದೆ ಕನಿಷ್ಠ 30 ನಿಮಿಷಗಳ ಕಾಲ ಪ್ರತಿ ನಿತ್ಯವು ವ್ಯಾಯಾಮ ಮಾಡಿ ಅಥವಾ ವಾಕಿಂಗ್ ಆದರೂ ಮಾಡಿ
* ಒಂದು ದಿನಕ್ಕೆ ಕನಿಷ್ಠ 3 ಲೀಟರ್ ನೀರು ಕುಡಿಯಿರಿ
* ರಾತ್ರಿ ಬೇಗ ಮಲಗೋದು ಹಾಗೂ ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ
* ಪೌಷ್ಟಿಕಾಂಶಗಳಯುಕ್ತ ಆಹಾರ ಪದಾರ್ಥಗಳ ಸೇವನೆ ಇರಲಿ
* ಅತಿಯಾದ ಮಸಾಲೆ ಇರುವ, ಜಿಡ್ಡಿನಾಂಶ ಅಧಿಕವಾಗಿರುವ, ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆ ಬೇಡ
* ಆಲೂಗೆಡ್ಡೆಯನ್ನು ರಾತ್ರಿ ಹೊತ್ತು ತಿನ್ನಬೇಡಿ ಇದು ಪೈಲ್ಸ್ ಗೆ ಕಾರಣವಾಗುತ್ತದೆ
* ಮಾನಸಿಕ ದೌರ್ಬಲ್ಯ ನಿವಾರಣೆಗೆ ತೆಂಗಿನಕಾಯಿ ಒಂದು ಔಷಧಿಯಾಗಿದೆ.
ಈ ಸುದ್ದಿ ಓದಿ:- LPG ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ರೂ.799 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ, ರೂ.300 ಫ್ರೀ ಸಬ್ಸಿಡಿ.!
* ಕೀಲುನೋವಿದ್ದರೆ ಬೇವಿನ ಎಲೆಯಿಂದ ಮಸಾಜ್ ಮಾಡಿ ಕ್ಲಿಯರ್ ಆಗುತ್ತದೆ
* ಹಸಿ ಈರುಳ್ಳಿ ತಿನ್ನುವುದರಿಂದ ಡೈಜೆಶನ್ ಚೆನ್ನಾಗಿ ಆಗುತ್ತದೆ
* ಬಿಸಿ ಆಹಾರ ಅಥವಾ ಪಾನೀಯಗಳನ್ನು ಪ್ಲಾಸ್ಟಿಕ್ ಪಾತ್ರೆಗಳು ಪ್ಲಾಸ್ಟಿಕ್ ಪೇಪರ್ ನಲ್ಲಿ ಹಾಕಿ ಇಡುವುದರಿಂದ ಮತ್ತು ಅದನ್ನು ಸೇರಿಸುವುದರಿಂದ ಕ್ಯಾನ್ಸರ್ ಬರುತ್ತದೆ
* ಮಲಬದ್ಧತೆ ಸಮಸ್ಯೆ ಬರಬಾರದು ಎಂದರೆ ರಾತ್ರಿ ಹೊತ್ತು ಒಂದು ಲೋಟ ನೀರಿಗೆ ಒಂದು ಚಮಚ ಕೊತ್ತಂಬರಿ ಬೀಜವನ್ನು ನೆನೆಸಿಟ್ಟು ಬೆಳಗ್ಗೆ ಎದ್ದು ಶೋಧಿಸಿ ಕುಡಿಯಬೇಕು
* ಆಹಾರದಲ್ಲಿ ಹೆಚ್ಚಾಗಿ ಸಿಹಿಯನ್ನು ಸೇವಿಸುವುದು ಹಲ್ಲಿನ ಆರೋಗ್ಯಕ್ಕೆ ಹಾನಿಕರ
* ಬೆಳಗಿನ ಉಪಹಾರವನ್ನು ಸೇವಿಸದೆ ಇದ್ದರೆ ಬಹಳ ಬೇಗ ಅಸಿಡಿಟಿ ಆಗುತ್ತದೆ.
* ತಣ್ಣೀರು ಕುಡಿದ ನಂತರ ಟೀ ಕುಡಿಯುವುದರಿಂದ ಹಲ್ಲು ನೋವು ಬರುತ್ತದೆ.
* ಪ್ರತಿನಿತ್ಯ ಆಹಾರದಲ್ಲಿ ಚಿಟಿಕೆ ಅರಿಶಿಣ ಹಾಗೂ ಶುಂಠಿಯನ್ನು ಸೇರಿಸಿ ಅಡುಗೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ
* ಪುದೀನ ಚಟ್ನಿ ಸೇವಿಸುವುದರಿಂದ ಹವಮಾನ ವೈಪರೀತ್ಯದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಭಾದಿಸುವುದಿಲ್ಲ
* ಅನ್ನವನ್ನು ಹೆಚ್ಚಾಗಿ ತಿನ್ನುವುದರಿಂದ ದೇಹದ ತೂಕ ಬೇಗ ಜಾಸ್ತಿ ಆಗುತ್ತದೆ.
ಈ ಸುದ್ದಿ ಓದಿ:- ಕಟಕ ರಾಶಿಗೆ ಅಷ್ಟಮ ಶನಿ ಅಂತ್ಯ ಯಾವಾಗ.? ಇನ್ನು ಎಷ್ಟು ವರ್ಷವಿದೆ, ಇಲ್ಲಿದೆ ನೋಡಿ ಮಾಹಿತಿ.!
* ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೇಹದ ಕಾಂತಿ ಹೆಚ್ಚಾಗುತ್ತದೆ, ರಕ್ತ ಶುದ್ಧಿಯಾಗುತ್ತದೆ
* ಬೆಲ್ಲದ ಟೀ ಕುಡಿಯುವುದರಿಂದ ಮೆದುಳು ಚುರುಕಾಗುತ್ತದೆ
* ಸ್ನಾನ ಮಾಡುವಾಗ ಬಹಳ ಬಿಸಿ ನೀರಿನಿಂದ ತಲೆ ಕೂದಲು ತೊಳೆಯಬಾರದು
* ನಿಂಬೆ ಹಣ್ಣಿನ ರಸದಿಂದ ಹಲ್ಲುಗಳನ್ನು ಉಜ್ಜಿದರೆ ಹಲ್ಲುಗಳ ಕಾಂತಿ ಹೆಚ್ಚಾಗುತ್ತದೆ
* ಗುಲಾಬಿ ಹೂವಿನ ದಳಗಳು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಗುಣವಾಗುತ್ತದೆ
* ಬಾದಾಮಿಯನ್ನು ರಾತ್ರಿ ಹೊತ್ತು ನೆನೆಸಿ ಬೆಳಗ್ಗೆ ಜೇನುತುಪ್ಪದೊಂದಿಗೆ ನೀಡುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ
* ರಾತ್ರಿ ಸಮಯ ಒಂದು ಚಮಚ ನೀರಿಗೆ ಒಂದು ಚಮಚ ಧನಿಯಾ ನೆನೆಸಿಟ್ಟು ಬೆಳಗ್ಗೆ ಹೊತ್ತು ಶೋಧಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಥೈರಾಯ್ಡ್ ಗುಣವಾಗುತ್ತದೆ
* ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿಗೆ ಒಂದು ಹೋಳು ನಿಂಬೆರಸ ಹಾಕಿಕೊಂಡು ಕುಡಿಯುವುದರಿಂದ ಬಾಡಿ ಡಿ ಟಾಕ್ಸಿನ್ ಆಗುತ್ತದೆ ಮತ್ತು ತೂಕ ಕಡಿಮೆಯಾಗುತ್ತಾರೆ
* ಪ್ರತಿದಿನವೂ ಒಂದು ಟೊಮೊಟೊ ಸೇವಿಸುವುದರಿಂದ ಕೂದಲು ಬೇಗ ಬೆಳ್ಳಗಾಗುವುದಿಲ್ಲ