Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ 15,000/- ಬೆಲೆಬಾಳುವ ಉಚಿತ ಟೂಲ್ ಕಿಟ್ ಪಡೆಯಿರಿ.!

Posted on February 17, 2024 By Kannada Trend News No Comments on ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ 15,000/- ಬೆಲೆಬಾಳುವ ಉಚಿತ ಟೂಲ್ ಕಿಟ್ ಪಡೆಯಿರಿ.!

 

ಪಿಎಂ ವಿಶ್ವಕರ್ಮ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ಒಂದು ಟೂಲ್ ಹಿಟ್ ಅನ್ನು ಉಪಯೋಗಿಸಿಕೊಂಡು ಕೆಲಸ ಮಾಡುವಂತಹ ಜನರಿಗೆ ಅನುಕೂಲವಾಗಬೇಕು ಅವರು ಯಾವುದೇ ರೀತಿಯ ಕಷ್ಟ ಪಡದೆ ಈ ಒಂದು ಟೂಲ್ ಕಿಟ್ ಉಪಯೋಗಿಸಿ ಅವರು ಹಣವನ್ನು ಸಂಪಾದನೆ ಮಾಡಬೇಕು ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ಅವರು ಈ ಒಂದು ಯೋಜನೆಯನ್ನು 17ನೇ ತಾರೀಕು ಸೆಪ್ಟೆಂಬರ್ 2023 ರಂದು ಜಾರಿಗೆ ತಂದರು.

ಈ ಒಂದು ಯೋಜನೆಯು ಕರಕುಶಲಿಗಳಿಗೆ ಮತ್ತು ಕುಶಲಕರ್ಮಿ ಗಳಿಗೆ ಅನುಕೂಲವಾಗುವಂತೆ ಅವರು ಹಲವಾರು ರೀತಿಯ ಕೆಲಸ ಕಾರ್ಯ ಗಳನ್ನು ಮಾಡುವುದರ ಮೂಲಕ ತಮ್ಮ ಜೀವನವನ್ನು ಅಭಿವೃದ್ಧಿಪಡಿಸಿ ಕೊಳ್ಳಬಹುದು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಪ್ರತಿಯೊಬ್ಬರೂ ಕೂಡ ಅತಿ ಹೆಚ್ಚಿನ ಹಣವನ್ನು ಕೊಡುವುದರ ಮೂಲಕ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಆದ್ದರಿಂದಲೇ ಕೆಲವೊಂದಷ್ಟು ಜನ ಅಂತಹ ಕೆಲಸಗಳನ್ನು ಮಾಡಲು ಬಿಟ್ಟಿದ್ದಾರೆ ಆದ್ದರಿಂದ ಅವರಿಗೆ ಅನುಕೂಲವಾಗುವಂತೆ ಅವರು ತಮ್ಮ ಕುಲಕಸುಬುಗಳನ್ನು ಅವರು ಕಲಿತಿರುವಂತಹ ಕೆಲಸಗಳನ್ನು ಸದುಪಯೋಗಪಡಿಸಿಕೊಂಡು ಅವರು ಉನ್ನತವಾದ ಜೀವನವನ್ನು ನಡೆಸಬೇಕು ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ಅವರು ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಈ ಸುದ್ದಿ ಓದಿ:- ಉಚಿತ ಕರೆಂಟ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.? ಯೋಜನೆಯ ಫಲಾನುಭವಿಯಾಗುವುದು ಹೇಗೆ ನೋಡಿ.!

ಹಾಗಾದರೆ ಈ ಒಂದು ಯೋಜನೆ ಯಾವುದೆಲ್ಲ ಕೆಲಸ ಮಾಡುವವರಿಗೆ ಅಂದರೆ ಕರಕುಶಲ ಕುಶಲಕರ್ಮಿಗಳಿಗೆ ಅನುಕೂಲ ವಾಗುವಂತೆ ಜಾರಿಗೆ ತಂದಿದ್ದಾರೆ ಹಾಗೂ ಈ ಯೋಜನೆಯಲ್ಲಿ ನೀವು ಟೂಲ್ ಕಿಟ್ ಅನ್ನು ಪಡೆದುಕೊಳ್ಳುವುದಕ್ಕೆ ಯಾವುದೆಲ್ಲ ದಾಖಲಾತಿ ಗಳು ಬೇಕಾಗುತ್ತದೆ ಹಾಗೂ ಯಾರೆಲ್ಲಾ ಇದನ್ನು ಪಡೆದುಕೊಳ್ಳಬಹುದು ಎಲ್ಲಿ ಹೋಗಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಯೋಜನೆಯು 18 ರೀತಿಯ ವ್ಯಾಪಾರಗಳಲ್ಲಿ ತೊಡಗಿರುವ ಕರಕುಶಲಿಗರು ಮತ್ತು ಕುಶಲಕರ್ಮಿಗಳನ್ನು ಒಳಗೊಳ್ಳುತ್ತದೆ ಅಂದರೆ ಯಾವುದೆಲ್ಲ ಕೆಲಸಗಳಲ್ಲಿ ತೊಡಗಿರುವವರಿಗೆ ಇದು ಅನುಕೂಲವಾಗುತ್ತದೆ ಎಂದು ನೋಡುವುದಾದರೆ.

* ಬಡಗಿ
* ದೋಣಿ ತಯಾರಕರು
* ಶಸ್ತ್ರಾಸ್ತ್ರ ತಯಾರಿಸುವವರು
* ಕಮ್ಮಾರರು
* ಸುತ್ತಿಗೆ ಮತ್ತು ಟೂಲ್ ಕಿಟ್ ಮಾಡುವವರು
*  ಬೀಗ ತಯಾರಿಸುವವರು
* ಅಕ್ಕಸಾಲಿಗರು
* ಕುಂಬಾರರು
* ಶಿಲ್ಪಿಗಳು, ಕಲ್ಲು ಒಡೆಯುವವರು
* ಚಮ್ಮಾರರು
* ಮೇಸ್ತ್ರಿ
* ಬುಟ್ಟಿ/ಚಾಪೆ/ಪೊರಕೆ /ಸೆಣಬು ನೇಯುವವರು
* ಸಾಂಪ್ರದಾಯಿಕ ಗೊಂಬೆ ಮತ್ತು ಆಟಿಕೆ ತಯಾರಕರು
* ಕ್ಷೌರಿಕರು
* ಹೂಮಾಲೆ ತಯಾರಕರು
* ಮಡಿವಾಳರು
* ಟೈಲರ್
* ಮೀನಿನ ಬಲೆಯ ತಯಾರಕರು

ಇಷ್ಟು ಜನರು ಕೂಡ ಈ ಒಂದು ಯೋಜನೆಯ ಅಡಿಯಲ್ಲಿ ಬರುತ್ತಾರೆ ಹಾಗಾಗಿ ಇವರೆಲ್ಲರೂ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸಿದ ಮೇಲೆ ಮೂರು ಹಂತಗಳಲ್ಲಿ ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ. ಈ ಮೂರು ಹಂತಗಳಲ್ಲಿ ನೀವು ಆಯ್ಕೆಯಾದರೆ ಮಾತ್ರ ನಿಮಗೆ 15,000 ಬೆಲೆ ಬಾಳುವ ಟೂಲ್ ಕಿಟ್ ಹಾಗೂ 3 ಲಕ್ಷದವರೆಗೆ ಸಾಲ ಸೌಲಭ್ಯ ಸಿಗುತ್ತದೆ ಹಾಗಾದರೆ ಆ ಮೂರು ಹಂತ ಯಾವುದು ಎಂದು ನೋಡುವುದಾದರೆ.

ಈ ಸುದ್ದಿ ಓದಿ:- ಲೇಬ‌ರ್ ಕಾರ್ಡ್ ಇರುವವರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಸರ್ಕಾರ‌ ಲೇಬರ್ ಕಾರ್ಡ್ ಗಳನ್ನು ಕ್ಯಾನ್ಸಲ್‌ ಮಾಡಲು ಮುಂದಾದ ಇಲಾಖೆ ಕಾರಣವೇನು ನೋಡಿ.!

* ಮೊದಲು ನೀವು ಅರ್ಜಿ ಸಲ್ಲಿಸಿದ ನಂತರ ನಿಮ್ಮ ಗ್ರಾಮ ಪಂಚಾಯಿ ತಿಯ ಅಧ್ಯಕ್ಷರು ನಿಮ್ಮ ಆ ಒಂದು ಅರ್ಜಿಯನ್ನು ಅಪ್ರೂವಲ್ ಮಾಡ ಬೇಕಾಗುತ್ತದೆ.
* ಎರಡನೆಯದಾಗಿ DM ಅವರು ಅಪ್ರೂವಲ್ ಮಾಡಬೇಕಾಗುತ್ತದೆ.
* ಮೂರನೆಯದಾಗಿ DFO ಅವರು ಅಪ್ರೂವಲ್ ಮಾಡಬೇಕಾಗುತ್ತದೆ ಈ ಮೂರು ಹಂತಗಳಲ್ಲಿ ಆಯ್ಕೆಯಾದವರು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Useful Information
WhatsApp Group Join Now
Telegram Group Join Now

Post navigation

Previous Post: ಉಚಿತ ಕರೆಂಟ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.? ಯೋಜನೆಯ ಫಲಾನುಭವಿಯಾಗುವುದು ಹೇಗೆ ನೋಡಿ.!
Next Post: ಸಿಂಹ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಶುಕ್ರ ಬಲ, ಹೇಗಿರಲಿದೆ ಗೊತ್ತಾ ಮಾರ್ಚ್ – 2024ರ ಮಾಸ ಭವಿಷ್ಯ, ಮುತ್ತಿನಂಥ 3 ಶುಭ ವಿಚಾರಗಳು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore